Friday, December 21, 2007

gaalipata songs lyrics...3




haaDu: jeeva kaLeva
gaayaka: Sonu Nigam
sahitya: Yogaraj Bhat



onde samane nittusiru
pisuguDuva teerada mouna
tumbi tuLuko kaNgaLali
karagutide kanasina baNNa

yedeya jOpaDiya oLage
kaaliDade kolutide olavu
manada kaarmugilina tudige
maLebillinante novu
kone irada ekantave olaveee?

onde samane nittusiru
pisuguDuva teerada mouna
tumbi tuLuko kaNgaLali
karagutide kanasina baNNa

jeeva kaLeva amrutake
olavendu hesariDa bahude?
praaNa uLiso khaayilege
preeti endenna bahude?

honganasa chaadaradalli
muLLina haasigeyali malagi
yaatanege muguLnage baralu
kaNNa hani summane oLage
avaLanne japisuvude olave?

jeeva kaLeva amrutake
olavendu hesariDa bahude?
praaNa uLiso khaayilege
preeti endenna bahude?

naalku padada geetheyali
miDitagaLa baNNisa bahude?
mooru swarada haaDinali
hrudayavanu haribiDa bahude?
ukki baruva kaNTadali
naraLutide nalumeya gaana
bikkaLisuva yedeyoLage
nagutalide maDida kavana
onTitanada guruve olave?

gaalipata songs lyrics...2

haaDu: minchaagi neenu baralu
gaayaka: Sonu Nigam
sahitya: Jayanth Kaykini


minchaagi neenu baralu
nintalliye maLegaala
becchage nee jotegairalu
kootalliye chaLigaali

virahada bEge suDalu
yedeyali bEsige kaala
innelli nanage uLigaala?

minchaagi neenu baralu
nintalliye maLegaala
becchage nee jotegairalu
kootalliye chaLigaali

naa ninna kanasige chandadaaranu
chanda baaki neeDalu bande baruvenu

naa nera hrudayada varadigaaranu
ninna kanda kshanadale maate marevenu

kshamisu nee kinnari, nudisale ninnanu
haeLi-kaeLi modale chooru paapi naanu

minchaagi neenu baralu
nintalliye maLegaala
becchage nee jotegairalu
kootalliye chaLigaali

ninna manada kavite saala paDeva naanu saalagaara
kaNNa koredu dochikoNDa nenapugaLige paaludara

nanna ee vEdane ninage naa neeDenu
haeLi-kaeLi modale chooru kaLLa naanu

minchaagi neenu baralu
nintalliye maLegaala
becchage nee jotegairalu
kootalliye chaLigaali

gaalipata songs lyrics...1

haaDu: aakasha ishTe yaakideyo
gaayakaru: Kunal Ganjawala, Tippu
sahitya: Jayanth Kaykini


aakasha ishTe yaakideyo
ee bhoomi kashTa aagideyo
hanchoNa ee preethi
bekilla raseeti

mugilanne muddaaDi
rekke bicchi haaraTave
gaaLipaTa, gaaLipaTa.. gaaLipaTa

aakasha ishTe yaakideyo
ee bhoomi kashTa aagideyo

kanasina nOTige chillare beke?
naguvannu ello maretevu yeke?
kiseyalle kadda chandrana chooru
nammannu patte maaDuvaryaru?
bore aagide ee bhooPata
haaraTave namma haTa
gaaLipaTa, gaaLipaTa, ga-ga-gaaLipaTa

kaamanabillu baaDige uNTe?
snehakku kooDa ration bante?
sambhramakilla season ticket
Erisa beku namma rebate
idu preethiya chitrapaTa
ee dostiye namma chaTa
gaaLipaTa, gaa-LipaTa.. gaaLipaTa

aakasha ishTe yaakideyo
ee bhoomi kashTa aagideyo
illEno sari illa
inneno bekalla
nakshatra lokakke lagge iTTu haaruvude
gaaLipaTa, gaaLipaTa.. gaaLipaTa

Saturday, December 08, 2007

ಸಾವಿನ ನಾಣ್ಯ- ೨ ರೂಪಾಂತರಗಳು

ಮುಖ ೧ - ರಾಜಾ

ಸಾವಿಗೆ ಹೆದರುವನೇ ನಾ
ಇಲ್ಲಾ ಅದಕ್ಕೆ ಕಾದಿರುವನೇ ನಾ
ಬಂದರೆ ನಗುತ್ತಲೆ ಬರಮಾಡಿಕೊಳ್ಳುವೆ

ಜೀವನದ ಸಂಕೋಲೆಯನ್ನು ಬಿಚ್ಚಲು
ಶಾಂತಿಯ ಸಾಗರಕ್ಕೆ ಒಯ್ಯಲು
ಬಂಧು ಬಳಗದ ಸೆಳೆತಕ್ಕೆ ಸಿಕ್ಕಿಸದೇ
ನೆಮ್ಮದಿಯಿಂದ ಕರೆದೊಯ್ಯಿ ನನ್ನನ್ನು ಎಂದು

ಬಾರಿ ಬಾರಿ ಕೂಗಿದೆ, ಕರೆದೆ ನಿನ್ನ
ನೀನು ಬರಲಿಲ್ಲ
ಬೇಗುದಿಯಿಂದ ನಿನ್ನ ಸೇರಲು ಬಂದರೆ
ನೀನು ಬಿಡಲಿಲ್ಲ,
ಕಳುಹಿಸಿದೆ ನನ್ನ
ಬಂದಿರುವೆ ಇಂದು .. ಬಾ ನಿನಗೆ ಸ್ವಾಗತ.


ಮುಖ ೨ - ರಾಣಿ

ಕರೆಯದಿದ್ದರೂ ಬಂದಿರುವೆಯಲ್ಲಾ
ಓ ಕ್ರೂರವಿದಿಯೇ.
ಪ್ರಿಯತಮೆಯಿತ್ತ ಚುಂಬನವಿನ್ನೂ ಆರಿಲ್ಲ
ನಾ ಕಟ್ಟುತ್ತಿರುವ ಅರಮನೆ ಇನ್ನೂ ಮುಗಿದಿಲ್ಲ
ಯಾಕೆ ಕಾಡುತ್ತಿರುವೆ
ಬೇಡವೆಂದರೂ ಯಾಕೆ ಬರುವೆ
ನಾನಿಲ್ಲದೆ ಹೇಗಿರುವುದು ನನ್ನ ಸಂಸಾರ
ಯಾರು ಹೋರುವುರು ಅದರ ಭಾರ
ನಿನ್ನ ಲೆಕ್ಕ ತಪ್ಪಿ ಬಂದೆಯಾ
ನಿನ್ನ ಜಪಿಸುವರ ಬಳಿ ಹೋಗು

ಪ್ರೀತಿ ಅದರ ಸ್ವಗತ

(೧)
ಕಣ್ಣಿನಲ್ಲಿ ಹುಟ್ಟಿ,
ಹೃದಯದಲ್ಲಿ ಇರುವೆ.
ಅರಳುವೆ ನಾ ಅಕ್ಕರೆಯಿಂದ,
ಬೆಳೆಯುವೆ ನಾ ನಂಬಿಕೆಯಿಂದ,
ಶಾಂತಿಗೆ ಬುನಾದಿ.
ನಾನೇ ಅನಾದಿ
ತರುವೆ ಸುಂದರ ಕನಸುಗಳ,
ಬೆಸೆಯುವೆ ನಾ ಮನಗಳ,
ನಾ ಇದ್ದರೆ ಇಲ್ಲ ಭಯ
ನನ್ನಿಂದಲೆ ನಡೆಯುವುದು ಲಯ
ನನ್ನ ಸಲುವಾಗಿ ಆದವು
ತ್ಯಾಗ ಬಲಿದಾನಗಳು
ಕಾಲುವೆಯಾಗಿ ಹರಿದವು ರಕ್ತ ಕಂಬನಿಗಳು
ಜಾತಿ-ಧರ್ಮ ನನ್ನ ಕಂಗೆಡಿಸಿಲ್ಲ,
ಬಡವ-ಬಲ್ಲಿದದ ಭೇದ ನನಗಿಲ್ಲ.
ಸ್ವಾರ್ಥ,ಅಸೂಯೆ ನನ್ನ ಕೊಂದರು,
ಮತ್ತೆ ಹುಟ್ಟುವೇ ನಾ ಯಾರೇ ಎನೇ ಅಂದರೂ
ನಾನೇ ಸತ್ಯ
ನಾನಿಲ್ಲದೇ ಲೋಕವೇ ಮಿಥ್ಯ.
ನಾನೇ ಪ್ರೀತಿ,
ನನ್ನದು ಹಲವು ರೀತಿ.

(೨)
ನಾನು ಅವನು ಆಗಿದ್ದೆವು
ಗೆಳೆಯರು.
ಬಿರುಕು ತಂದಿತು ನಮ್ಮಲ್ಲಿ
ಸ್ವಾರ್ಥ
ನನ್ನ ದ್ವೇಷಿಯಾದ ಅವ
ಅಮೃತಧಾರೆ ನಾ ಕುಡಿಸಲು ಹೋದರೆ
ಮದಿರೆಯ ನಂಜಿಗೆ ಬಿದ್ದ
ಕಮರಿದ ಕಂಗಳು,
ಬತ್ತಿ ಹೋದ ಕೆನ್ನೆ
ಮಾಸಲು ಗಡ್ಡ
ಎನೋ ಹುಡುಕುವ ಆಲೋಚನೆ
ಹೆಸರು ಕೊಟ್ಟಿದ್ದರು ಅವನಿಗೆ ದೇವದಾಸು,
ದೂರ ಹೋದ ಅವನು
ಸೇರಿದ ವಿರಹ-ಹತಾಷೆಗಳ ತೋಳಿನಲ್ಲಿ.
ನಾ ಕೂಗಿದೆ ಅವನನ್ನು ಬೆಳಕಿನೆಡೆಗೆ
ಅವನು ಕೇಳಲಿಲ್ಲ, ವೈಫಲ್ಯ ಸೆಳೆಯಿತು
ಅವನನ್ನು ಕತ್ತಲೆಡೆಗೆ.
ನಾ ಕೊಡಲು ಹೋದ ನಾಳೆಯ ಉಡುಗೊರೆಯನ್ನು
ಪಡೆಯದೆ, ಕೆದಕುತ್ತಿದ್ದ ಗತ ಜ್ಞಾಪಕಗಳ
ಕಾದಿರುವೆ ನಾ ಅವನಿಗಾಗಿ
ಹೇಳಲು ಪ್ರೀತಿ ಇರುವುದೇ ನಿನಗಾಗಿ.

Saturday, November 03, 2007

aa dingalu - Review


ಆ ದಿನಗಳು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕೆ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿ ಆರಿಸಿರುವ ಕಲಾವಿದರು ಮತ್ತು ತಂತ್ರಜ್ಞರು. ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿರುವುದು ಚೈತನ್ಯನಾ ಅಂತ ಅನೇಕ ಬಾರಿ ಆಶ್ಚರ್ಯ ಆಗುತ್ತದೆ, ಆ ಮಟ್ಟಿಗೆ ಪ್ರಬುದ್ಧತೆಯಿಂದ ಮೂಡಿ ಬಂದಿದೆ. ಕಥೆ ಮೊದಲಾರ್ಧ ಬೇಗ ಸಾಗುತ್ತದೆ,

ಆ ವೇಗವನ್ನು ಕಾಪಡಿಕೊಳ್ಳಲು ಮುಂದಿನ ಅರ್ಧದಲ್ಲಿ ಸ್ವಲ್ಪ ಮಟ್ಟಿಗೆ ಸೋತಿದೆ. ಚಿತ್ರವನ್ನು ೩೦ ನಿಮಿಷ ಕಮ್ಮಿ ಮಾಡಿದ್ದರೆ, ಇನ್ನೂ ಚೆನ್ನಾಗಿ ಮೂಡಿಬರುತ್ತದೆ. ಆದರೆ ೩೦ ನಿಮಿಷ ಕಮ್ಮಿ ಮಾಡಲು ಎನು ಕತ್ತರಿ ಹಾಕಬೇಕಿತ್ತು ಎಂದು ನನ್ಗೆ ಯೋಚಿಸುವದಕ್ಕೆ ಆಗುವದಿಲ್ಲ, ಪ್ರತಿಯೊಂದು ದೃಶ್ಯ ಚಿತ್ರಕ್ಕೆ ಹೇಳಿ ಮಾಡಿಸದ ಹಾಗೆ ಇದೆ.

ಹಾಡುಗಳು ಮತ್ತು ಹಿನ್ನಲೆ ಸಂಗೀತ ಅದ್ಭುತ ಅನ್ನಬಹುದು, ಚೆನ್ನಾಗಿ ಬಳಸಿಕೊಂಡಿದ್ದಾರೆ ಇಳಯರಾಜರನ್ನು. ವೇಣು ಅವರ ಛಾಯಗ್ರಹಣ ಬಗ್ಗೆ ಎನಾದರೂ ಹೇಳಲು ಸಾಧ್ಯವೇ ?. ೧೯೮೬ ಕಾಲದಲ್ಲಿ ಇದ್ದ ಹಾಗೆ ತೋರಿಸುವುದು ನಿಜಕ್ಕೂ ಒಂದು ಸವಾಲೇ ಸರಿ ಅದರಲ್ಲಿ ೯೫% ಗೆದ್ದಿದ್ದಾರೆ. ಆ ಕಾಲದಲ್ಲಿ ಇದ್ದ ಅಂಬಾಸಿಡರ್ ಕಾರು, ರಾಜದೂತ್, ಎನಫಿಲ್ಡ ಬೈಕ್ ಬಳಸಿರುವುದು ಸರಿ. ಆದರೆ pollution sticker ನ ತೆಗೆಯಬೇಕಿತ್ತು. ಹಾಗೆ ೨ ರೂಪಾಯಿ ನೋಟು ಕೊಡುವಾಗ ಹೊಸ ೧೦೦ ನೊಟು ಕಾಣುವುದು ಕಣ್ತಪ್ಪು ಎಂದರೂ ಸಮಗ್ರವಾಗಿ ಗೆದ್ದಿದ್ದಾರೆ.



ಕಲಾವಿದರ ನಟನೆ ಬಗ್ಗೆ ಎನು ಹೇಳುವುದು?. ಪ್ರತಿಯೊಬ್ಬರು ತಮ್ಮ ನಟನೆಯ ಚಮತ್ಕಾರ ಮಾಡಿದ್ದಾರೆ, ಅದರಲ್ಲೂ ಮುಖ್ಯವಾಗಿ ಲೋಹಿತಾಶ್ವ. ಕೊತ್ವಾಲ್ ಕಣ್ಣಮುಂದೆ ಬಂದ ಹಾಗೆ ನಟನೆ ಮಾಡಿದ್ದಾರೆ. ರೌಡಿ ಚಿತ್ರ ಅಂದರೆ ಕೇವಲ ಹಿಂಸೆ, ಅವರ ಚಿತ್ರ-ವಿಚಿತ್ರ ಪೊಷಾಕುಗಳು, ಉದ್ದುದ್ದ ಡೈಲಾಗ್, ಲೀಟರಗಟ್ಟಲೆ ರಕ್ತ ಅಂತ ತಿಳಿದಿರುವ

ನಮ್ಮ ನಿರ್ದೇಶಕರು ಈ ಚಿತ್ರವನ್ನು ಒಮ್ಮೆ ನೋಡಿ ಕಲಿಯಬೇಕು. ಶ್ರೀಧರ್ ಅವರು ತಮ್ಮ ಸಂದರ್ಶನದಲ್ಲಿ ಹೇಳಿದ ಹಾಗೆ greyish ರೂಪವನ್ನು ಸರಿಯಾಗಿ ಚಿತ್ರದಲ್ಲಿ ತೋರಿಸಿದ್ದಾರೆ.



ಮತ್ತೊಮ್ಮೆ ಈ ಚಿತ್ರವನ್ನು ನೋಡಬಹುದು.

Saturday, July 07, 2007

ಕನ್ನಡದಲ್ಲಿ ಚಿಕ್ಕೊಲೆಗಳು-೨

ಕನ್ನಡದಲ್ಲಿ ಚಿಕ್ಕೊಲೆ(SMS) ಕಳಿಸುವ ಬಗ್ಗೆ ಅನೇಕರು ನನಗೆ ಮೈಲ್ ಮಾಡಿದ್ದರು, ಇನ್ನೂ ಹಾಕಿ ಎಂದು ಕೇಳಿದ್ದರು. ಬರಿ ನಾನು ಹಾಕುವುದು ಅಲ್ಲ, ನೀವು ಕೂಡ ಹಾಕಿ ಎಂದು ಕೇಳಿಕೊಳ್ಳುತ್ತ, ನಮ್ಮ ಚಿಕ್ಕೊಲೆಗಳನ್ನು ಮುಂದುವರೆಸುತ್ತ ಇದ್ದೇವೆ.


೨೧) TEEN

figure illandre college danda,
Sugar illandre coffee danda,
Love illandre life danda,
Moon illandre Sky danda
neenu illandre Mysuru Zoo dodda danda

22) O MU( olle munjavu)

Moodadinda mumbaagilinda
moodi mugilannu kemperisi
banaadigalannu badidebbisi
bhoomige belaku chelluva aa
baanina bhanuvu ninage
OMU korali.

23) O MU( olle munjavu)
surayana udayavaayithu baaninalli
hosadondu dina udayisithu baalinalli
ee dina hosa harushavannu nimage
tarali.

24) O MU( olle munjavu)

mungarugala mele hogiranavana soosi,
ibbaniyondige chellatavadi mutthina hanigala madi
chilipiliyannu ebbisi
incharava haadihanu "NESARA".

೨೫) chamak

devarige neeru kelide
samudranne kotta
hoovu kelide thotavanne kotta
mane keLide
mahal kotta
duddu kelide, nimma kotta
heLi yavaga barali ....


26) O_Mu
uri dhagege surimaleya
marubhumige vanasiriya
kambanigala ravikantiya
birida manakke savi nudiya
kadu shapakke shuba varada
aseya asareya udayakke ee
OMU

27) Chamak

guru bRUMha.
guru VISHKY
guru voDka
Gin eshawara
guru sakshat PEG brahma
tasmayi sri BEER namaha

aa devaru nimmanna TIGHT aagi ittirali.

28) geLetana

sneha ondu kavana
noorondu bhavanegala milana
badhukina janjatadalli besatt
mugda manassige
tampereyuva "AMRUTHA SINCHANA"

Saturday, June 30, 2007

ಕನ್ನಡದಲ್ಲಿ ಚಿಕ್ಕೊಲೆಗಳು ..

ಕೆಲ ವರುಷಗಳ ಹಿಂದಿನ ಮಾತು, ನಮ್ಮ ಕೇಂದ್ರ ಸರ್ಕಾರದಲ್ಲಿ ಬಿಹಾರಿಬಾಬು ಒಬ್ಬರು ಮಂತ್ರಿ ಆಗಿದ್ದರು, ಆಗು ಅವರು ಮೊಬೈಲ್ ಕ್ರಾಂತಿ ಆಗುವದಿಲ್ಲ, ಅದಕ್ಕೆ ಎಲ್ಲಾ ಕಡೆ ಸ್ಥ್ರಿರ ದೂರವಾಣಿ ಹಾಕಲು ಯೋಜನೆ ಹಾಕುತ್ತೆವೆ, ಈ ನಿಟ್ಟಿನಲ್ಲಿ **** ಮಂಜೂರು ಮಾಡಿದ್ದೇವೆ ಎಂದು ಸಾರಿದ್ದರು. ಇದು ಅವರ visionary(vision-scary ಎಂದು ಓದುವುದು)ಗೆ ಒಂದು ಉದಾ.
ಹೋಗಲಿ ಬಿಡಿ.. ಅದು his story .
ಐಲು ಐಲು ಎಲ್ಲೆಲ್ಲೂ ಮೊಬೈಲು ಅನ್ನುವ ಈ ಕಾಲದಲ್ಲಿ ಸಂಚಾರಿ ದೂರವಾಣಿ ಎಲ್ಲರ ಹತ್ತಿರವೂ ಇದೆ. ಇದರಲ್ಲಿ ಕನ್ನಡದಲ್ಲಿ ಚಿಕ್ಕೋಲೆಗಳು(SMS) ಈ ನಡುವೆ ಬಹಳ ಹರಿದಾಡುತ್ತಿವೆ. ಅನೇಕ spoof ಸಂದೇಶಗಳೂ, ಹಬ್ಬ ಹರಿದಿನಗಳಿಗೆ ಶುಭಾಶಯಗಳು ಕನ್ನಡದಲ್ಲೇ ವಿನಿಮಯ ಆಗುತ್ತ ಇರುವುದು ಸಂತೋಷದ ವಿಷಯವೇ ಸರಿ. ಆದರೆ ಬೇಕು ಎಂದಾಗ ಸಿಗದೆ,ಎನು ಕಳಿಸುವುದು ಎಂದು ಪರಿದಾಡುತ್ತ ಇರಬೇಕಾದರೆ , ಗೂಗಲ್ ಮೊರೆ ಹೋಗುತ್ತೆವೆ. ಅದಕ್ಕೆ ಒಂದು ತಾಣದಲ್ಲಿ ನನಗೆ ಬಂದ, ನಾನು ನಿರ್ಮಿಸಿದ ಕೆಲವು ಚಿಕ್ಕೊಲೆಗಳನ್ನು ಇಲ್ಲಿ ಹಾಕುತ್ತ ಇದ್ದೆನೆ. ನಿಮಗೂ ಹೊಸತು ಬಂದರೆ ಇಲ್ಲಿ ಹಾಕಿ, ಇಲ್ಲಾ ಇಲ್ಲಿಂದ ತೆಗೆದುಕೊಳ್ಳಿ.
ಹರಿದಾಡೊ ಚಿಕ್ಕೊಲೆಗಳಿಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಡ ಅಲ್ಲವೇ??

ಸೂಚನೆ:- ಹೊಸ ಚಿಕ್ಕೊಲೆ ಹಾಕಬೇಕಾದರೆ ದಯವಿಟ್ಟು ೧೬೦ ಅಕ್ಷರಗಳಿಗೆ ಸೀಮಿತವಿರಲಿ

೧)
MISS YOU
hoovina suvaasane
kadiyalaaguvadilla,
suryana rashmiyannu
bachchidalaguvadilla,
nim anta geLeyarannu
yeshte doora hodaru mareyalaguvadilla


2)
MISS YOU
kaledu hoda ninnegala
nenapu kadive,
kela kshanagalu
matte mana thumbive,
aa sundara sanjegalu
mattomme baarade anisive.

3)
DOVE
nanna naguvu ninnalli
heluttide,
nanna daniyu ninna kareyuttide,
nanna kannugalu ninna aarasuttive
yekendare ni nanna atimyalendu.

4)
shubodaya
harisuvarannu preethisu
hamchikolluvarannu harisu
aptarondane hanchiko
ninna aptaryarendu gurutisu.

5)
Chamak

lei japper,
goobad,
dingri,
dabba,
totti,
guggu,
pekra,
gooslu,
kuyya,
waste nan magne
...... hige yarannu baibeda maga, avarige bejar agotte.

6)
Chamak

innamele msg madabeda
call anthu madlebeda,
sakaagide ninna sneha,
kshamisu, bejaar madidre
yelladru chennagiru



idu yav film dialogue antha helthiyya ??

7)
Friendship

snehavendare hegirabeku?
ada noDi jagave beragagabeku,
srushtisida shivane dhangaagi
namma bali bandu kelabeku
" naanu nimma snehitanaabeku".

8)
Hudgire kaaL

roopa viroopa
kuroopa yella
manavara vividha swaroopa
ninna roopakke saati ninnade
roopa, varnisalaguttilla ee kavigu paapa.

9)
Chamak

ningondu toristinni iru








nodaaytaa??
kusinaa?
naale "erdu" toristhinni.. OK

10)
beLigge

moDa kavidu
tunturu hani
biLutiralu
manakke muda niduva
tangaLiyalli nanna kiru sandeshaa
ninagaagi.


11)
Encouragement

musukirali
nasukirali
mogadondu naguvirali
sukhavirali
dukkavirali
manadondu
nambikeyirali
solirali
geluvirali
manadalli
chalavirali

12)
Sneha

apaswaragale tumbida badukalli
sumudara sangeetha sudheyannu
suridu, sotha manassu santhaisuva amruta
sinchanave ninna
"SNEHAA".

13)
Chamak

yaake ashokasthambadalli 4ne siMha
kaaNolla ..

heLu nodonaa ....
thumba sulubaa ... innomme prayatna maDu.

gottaglilvaa.... bahala simple
adakke publicity ishta agolla, nan taraa..

14)
Chamak

maathu beLLi
sms bangara
call danda
sms bramhanda
call madonu kuri
sms madonu jaaNamari

15)
KannaDa

dwani nooraagi
mardhani beretu
mugila mutti,
chaitnyavada swati muttu keLagiLidu,
jeevakke bhava seri
swaravaagali namma cheluva
kannada naadu.

16)
Sankranti wish

uttarakke mukha maadi surya
horaduva samaya sankranti.
suggi sambrahmadalli naliva
samaya nimge mattu nimma necchina
janakke sukha shanti tarali.
sankranti shubashayagalu

17) Preethi(DOVE)

ninnoluvu nannusiru
ninna nenapu nanage hasiru
snehada thotadalli
hasiremba usirirali
nanna ee preethi yendendu
ninagirali

18) shubadina

nitya vasanta
satya digantha
atishaya allavidu
shanta prashantha
ee belugu ee sobagu
prakrutiya hoo nagu
tarali shuba munjaavu.

19) Encouragement

kanasugalella nanasagabekagilla
nanasaguva kanase kana bekilla
nanasaguvudella kanasadare
kanasige arthavilla.
hagantha kanasa kansuvada bidabekilla.


20)
Ugaadi

hosa varusha
tarali hosa harusha
bevu bellagalu
sihi-kahigalu samavaagi
anubavisuva shakti
nimage barali
UGADI HABBADA SHUBASHAYAGALU.

21)
Ugadi
hosa dina
hosa chiguru
hosa kanasu
hosa jeevana
yella hosatanavannu matte
tarali ee UGADI.
UGADI HABBADA SHUBASHAYAGALU.

(ಮುಂದುವರೆಯುತ್ತದೆ)...

Wednesday, June 27, 2007

ರಮ್ಯ ರಮಣೀಯ ರಚನಾಕೃತಿಗಳು,

ಎನಪ್ಪಾ ರಚನಾಕೃತಿ ಎಂದರೆ, ಒಂದು ರಚನಾ ಎನ್ನುವ ಹುಡುಗಿ/ಮಹಿಳೆ ಬರೆದಿರುವ ಸಾಹಿತ್ಯ ಎಂದು "ಅ" ವರ್ಗ ಹೇಳಿದರೆ, ಇನ್ನೊಂದು ವರ್ಗ ಇದು ಕಲೆಗೆ ಸಂಬಂದಿಸಿರಬೇಕು ಎಂದು ಹೇಳುತ್ತದೆ. ನಮ್ಮ ಜನ ಕನ್ನಡ ಅಂದರೆ ಕೇವಲ-ಸಾಹಿತ್ಯ-ಕಲಾ ಮಾತ್ರ ಸೀಮಿತ ಎಂದು ಯೋಚಿಸುವ ಬುದ್ಧಿ ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಹೆಸರು ಸ್ವಲ್ಪ ಪೇಚು ಮಾಡಿದರು ಇದು ತಂತ್ರಜ್ಞಾನಕ್ಕೆ ಸಂಬಂದಿಸಿರಬಹುದು ಎಂದು ಒಬ್ಬನು ಹೇಳಲಿಲ್ಲ, ಹೋಗಲಿ ಬಿಡಿ ನಾನೇನು ಬೇಜಾರು ಮಾಡಿಕೊಳ್ಳುವದಿಲ್ಲ.

ಇದನ್ನು ಆಂಗ್ಲದಲ್ಲಿ DESIGN PATTERNS ಎಂದು ಕರೆಯುತ್ತಾರೆ. ನಿಮಗೆ ತಂತ್ರಜ್ಞಾನವನ್ನು ಅಭಿವೃದ್ದಿ ಮಾಡುವ , ನಿರ್ಮಿಸುವ ಅನುಭವವಿದ್ದರೆ ಇದರ ಬಗ್ಗೆ ಕೇಳಿರುತ್ತಿರಾ ಇಲ್ಲಾ ಇದನ್ನು ಬಳಸಿರುತ್ತಿರಾ. ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಇದನ್ನು ಯಾವ ವಿಷಯದಲ್ಲೂ ಬಳಸಬಹುದು. ಒಂದು ಸಮಸ್ಯೆ ಬಗ್ಗೆ ಎಲ್ಲರಿಗೂ ಅನ್ವಯಿಸುವ ಹಾಗೆ ಸಮಧಾನ ಕೊಡುವ ಕೆಲ್ಸವನ್ನು ನಮ್ಮ ರಚನಾಕೃತಿ ಮಾಡುತ್ತದೆ. ಮೊಟ್ಟ ಮೊಲಿಗೆ ಇದನ್ನು ಪರಿಚಿಯಸಿದ್ದು GOF(Gang Of Four).



ಒಂದಾ(singleton)

ಮೊದಲಿಗೆ singleton design pattern ಬಗ್ಗೆ ಮಾತಾಡೋಣ. ಇದನ್ನು ನಾವು ಒಂದಾ ಎಂದು ಕರೆಯುತ್ತೆವೆ. ಒಂದಾ ಎಂದರೆ ಕೆಲವು ಕಡೆ ಮೂತ್ರಕ್ಕೆ ಹೋಗುವದನ್ನು ಹಾಗೆ ಕರೆಯುತ್ತಾರೆ, ಆದರೂ ಪರವಾಗಿಲ್ಲ ನಾನು ಇದೇ ಹೆಸರನ್ನು ಬಳಸುತ್ತೆನೆ, ಹೀಗೆ ಆದರೂ ಇದರ ಹೆಸರು ನಮ್ಮ ಜನರ ಮನಸ್ಸಲ್ಲಿ ನಿಲ್ಲಲಿ.

ಸಮಸ್ಯೆ:- ಒಂದು ಅಪ್ಲಿಕೇಷನ್ ಮಾಡುವಾಗ ಒಂದು ವಸ್ತುವು ಒಂದಕ್ಕಿಂತ ಹೆಚ್ಚು ಇರಬಾರದು.
ಎಲ್ಲಿ ಬಳಕೆ ಆಗುತ್ತದೆ:- ಒಂದು ಕಂಪ್ಯೂಟರಗೆ ಒಂದೇ ಒಂದು ಮೌಸ್ ಇರಬೇಕು. ಭಾರತದಲ್ಲಿ ರಾಷ್ಟ್ರಪತಿ ಒಬ್ಬರೇ ಇರಬೇಕು, ಇಂತಹಾ ನೈಜವಾದ ಪ್ರಕರಣಗಳು ನಮಗೆ ಸಿಗುತ್ತವೆ. ಇದಕ್ಕೆ ಸಂಬಂದಿಸಿದ ಹಾಗೆ ಒಂದು ಪರಿಹಾರವನ್ನು ಕೊಡಬೇಕಾದರೆ ಈ ಒಂದಾ ಸಹಾಯಕ್ಕೆ ಬರುತ್ತದೆ.

ಪರಿಹಾರ:- ಗ್ರಾಹಕ -> ಒಂದಾ --------
|-- > ಒಂದೇ ರೂಪ ಕೊಡುತ್ತದೆ.
ಝಾ ರೂಪ <-

ಝ ರೂಪವನ್ನು ಎಲ್ಲರೂ ಹಂಚಿಕೊಂಡಿರುತ್ತಾರೆ, ಅದ್ದರಿಂದ ಪ್ರತಿ ಸಾರಿ ರಾಷ್ಟ್ರಪತಿಯ ವಸ್ತುವೇ ಬರಬೇಕು. ಆ ಕೆಲ್ಸವನ್ನು ಇದು ಮಾಡುತ್ತದೆ.

Wednesday, June 13, 2007

ಕನ್ನಡ ಭಾಷೆಗೆ ಮಡಿವಂತಿಕೆ ಬೇಕೆ ??

ನನಗೆ ಹೊಸಬರ ಜೊತೆ ಮಾತನಾಡುವಾಗ ಇಲ್ಲಾ ಚಲನಚಿತ್ರದ ವಿಷಯಕ್ಕೆ ಬಂದಾಗ ಕೇಳಿಬರುವ ಒಂದು ಮಾತು ಅಂದರೆ ನಮ್ಮಲ್ಲಿ ಹಿಂದಿನ ಹಾಗೆ ಚಿತ್ರಗಳು ಬರುತ್ತಿಲ್ಲ, ಈಗ ಕಾಲ ಕೆಟ್ಟುಹೋಗಿದೆ. ಬರಿ ಡಬಲ್ ಮೀನಿಂಗ್ ಮಾತ್ರ ಕಾಣಸಿಗುತ್ತಿದೆ ಎಂದು. ಆದರೆ ಇದನ್ನು ಮಾತನಾಡುವರು ಇಂದಿನ ಪೀಳಿಗೆ ಆಗಿರುವುದು ನನಗೆ ಹೆಚ್ಚು ಆಶ್ಚರ್ಯ ತಂದ ವಿಷಯ. ಈ ಮಾತು ಆ ಕಾಲದವರ ಬಾಯಿಯಲ್ಲಿ ಬಂದಿದ್ದರೆ , ಸರಿ ಅನ್ನಬಹುದಿತ್ತು. ಸರಿ ಹೋಗಲಿ, ಆ ಕಾಲದ ಯಾವ ಚಿತ್ರಗಳು ಇಷ್ಟವಾದವು ಅಂದರೆ ಒಂದೆರೆಡು ಪುಟ್ಟಣ್ಣ, ಇಲ್ಲಾ ಡಾ||ರಾಜ್ ಚಿತ್ರ ಹೇಳುತ್ತಾರೆ. ಗಮನಿಸಬೇಕಾದ ಅಂಶ ಅಂದರೆ ಅವರು ಹೇಳಿದ ಮೊದಲ ಚಿತ್ರಕ್ಕೂ ಕೊನೆಯ ಚಿತ್ರಕ್ಕೂ ಇರುವ ಅವಧಿ ಸರಿ ಸುಮಾರು ೩೦ ವರುಷಗಳು. ಈ ೩ ದಶಕಗಳಲ್ಲಿ ಇವರಿಗೆ ಇಷ್ಟವಾಗಿರುವುದು ಬರೀ ಬೆರಳಣಿಕೆಯ ಚಿತ್ರಗಳು ಮಾತ್ರ, ಅಂದರೆ ಕೇವಲ ೧% ಚಿತ್ರಗಳನ್ನು ಮೆಚ್ಚಿರುವ ಇವರಿಗೆ ಆ ಕಾಲದಲ್ಲಿ ಚೆನ್ನಾಗಿತ್ತು ಎಂದು ಹೇಳುವ ಮಾತು ಎಷ್ಟರ ಮಟ್ಟಿಗೆ ಸರಿ ಅನಿಸುತ್ತದೆ ನೀವೇ ಹೇಳಿ. ಸುಮ್ಮನೆ ಇಂದಿನ ಚಿತ್ರಗಳನ್ನು ನೋಡದೆ ಇರಲು ಇವರು ಕೊಡುವ ಕಾರಣ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದು ಲಾಸ್ಟ ಚಿತ್ರ ನೋಡಿದ್ದು ಅಂದರೆ ದಶಕಗಳ ಹಿಂದಿನ ಒಂದು ಡಬ್ಬಾ ಚಿತ್ರವನ್ನು ಹೇಳುತ್ತಾರೆ. ಆವರ ಪ್ರಕಾರ ಅದೇ ತರಹ ಎಲ್ಲಾ ಚಿತ್ರಗಳು ಇವೆ , ಇಂದೂ ಕೂಡ ಅದೇ ನಡೆಯುತ್ತ ಇದೆ ಎಂದು.
ಇನ್ನ ಮುಂದೆ ಹೋಗಿ ೧೯೮೮-೯೩ ಸಮಯದಲ್ಲಿ ಬರುತ್ತಿದ್ದ ಕಾಶೀನಾಥ ಚಿತ್ರಗಳನ್ನು ಉದಾಹರಣೆ ಕೊಡುತ್ತಾರೆ.
ಇಷ್ಟೆಲ್ಲಾ ಕೇಳಿದ ಮೇಲೆ ಅನಿಸುವುದು ಎನೆಂದರೆ ಸಮಸ್ಯೆ ಇರುವುದು ಇಂದಿನ ಚಿತ್ರದಲ್ಲಿ ಅಲ್ಲ, ಇವರ ಕೀಳೆರಿಮೆಯಲ್ಲಿ ಮತ್ತು ಇವರ ಅಜ್ಞಾನದಲ್ಲಿ.
ಇವರಿಗೆ ಕನ್ನಡ ಚಿತ್ರಗಳನ್ನು ನಾನು ನೋಡುತ್ತೆನೆ ಎಂದು ಬೇರೆಭಾಷಿಕರ ಮುಂದೆ ಹೇಳಿಕೊಳ್ಳುವುದು, ಪಬ್ಲಿಕ್‍ನಲ್ಲಿ ಕಾಚಾ ಹಾಕಿಕೊಂಡು ನಿಂತ ಹಾಗೆ ಆಗುತ್ತದೆ. ತಮ್ಮ ಈ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಇವರು ಕಾರಣ ಕೊಡುವುದು quality ಇಲ್ಲಾ ಕಣಮ್ಮ, ಸಾಧುಕೋಕಿಲ ಕಾಮೆಡಿ ನೋಡಿದರೆ ಅಸಹ್ಯ ಆಗುತ್ತದೆ, ಇದೇ ಜನ ತಮಿಳಿನಲ್ಲಿ ಗೌಂಡಾಮಣಿ, ಸೆಂಥಿಲ್ ಇಲ್ಲಾ ಹಿಂದಿಯಲ್ಲಿ ಜಾನಿಲೀವರ್ ಮಾಡುವ ಅಪಹಾಸ್ಯವನ್ನು ನೋಡಿ ನಗುತ್ತಾರೆ. ಇದು ಇವರ hyppocrism ತೋರಿಸುತ್ತದೆ.
ಈ ವರ್ಗದ ಜನರಿಗೆ ನಾನು ಹೇಳುವುದು ಒಂದೇ, ನೋಡದೆ ಮಾತಾನಾಡುವುದು ಉಚ್ಚೆಯನ್ನು ಪಂಚಾಮೃತಾ ಎಂದು ಕರೆದ ಹಾಗೆ. ತಿಳಿದುಕೊಂಡು ಮಾತನಾಡಿ, ನಿಮ್ಮ ಅಜ್ಞಾನವನ್ನೂ ಭಾಷೆಯ ಕುಂಠಿತಕ್ಕೆ ಬಳಸಿ ಮಾರಕ ಮಾಡಬೇಡಿ ಎಂದು.

ಮುಂದುವರೆಯುತ್ತ, ನನಗೆ ಇನ್ನೊಂದು ವರ್ಗದ ಜೊತೆ ಸ್ವಲ್ಪ ಟಕ್ಕರ್ ಆಗುತ್ತದೆ, ಆ ವರ್ಗ ಸ್ವಲ್ಪ ಸಂಸ್ಕೃತ ಪ್ರಿಯರು ಮತ್ತು ತುಂಬಾ ಮಡಿವಂತರೂ. ಅವರ ದೃಷ್ಟಿಯಲ್ಲಿ ಜಗ್ಗೇಶ್ ಮಾತು ಎಂದರೆ ಮೈ ಮೇಲೆ ಜೋಡ್ಯ್ಗಾ(ಜಿರಳೆ) ಬಿಟ್ಟು ಕೊಂಡ ಹಾಗೆ.
ಇಂತಾ ಮಾತುಗಳು ಭಾಷೆಯನ್ನು ಹಾಳು ಮಾಡುತ್ತಿವೆ, ಇನ್ನೂ ಮುಂದೆ ಹೀಗೆ ಬಿಟ್ಟರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎಂದು ಸಂಸ್ಕೃತಿಯನ್ನು ಉಡಿದಾರಕ್ಕೆ ಸಿಕ್ಕಿಸಿಕೊಂಡ ಹಾಗೆ ಮಾತನಾಡುತ್ತಾರೆ. ಯಾಕೆ ಇಷ್ಟು ಕೋಪ, ಸ್ವಲ್ಪ ಸಮಾದಾನ ಮಾಡಿಕೊಳ್ಳಿ ಅಂದರೆ , ಎನ್ರಿ ಸಮಧಾನ ಮಾಡಿಕೊಳ್ಳೊದು, ಮುಂದೆ ನಮ್ಮ ಮಕ್ಕಳು "ಡಗಾರ್""ಫಿಗರ್" "ಬೊಂಬಾಟ್", "ಸಖತ್" ಎಂದರೆ ನಾವು ಕೇಳುತ್ತ ಇರಬೇಕಾ, ೭ ಜ್ನಾನಪೀಠ ಪಡೆದ ನಮ್ಮ ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಬೊಬ್ಬಿಡುತ್ತಾರೆ.
ಅದರೆ ನನಗೆ ಹೀಗೆ ಅವರು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅನಿಸುವುದು, ಕಲಿತರೆ ಎನು ತಪ್ಪು ಎಂದು. ನನಗೆ ಸರಿಯಾಗಿ ನೆನಪಿದೆ, ೧೯೯೮-೯೯ ಸಮಯದಲ್ಲಿ ಕನ್ನಡ ಸ್ಲಾಗ್ಸ ಮೇಲ್ ಒಂದು ಹರಿದಾಡುತ್ತ ಇತ್ತು. ಇದು ನನಗೆ ಬಂದಾಗ ಇದಕ್ಕೆ ನಾನು ಮತ್ತು ನನ್ನ ಸ್ನೇಹಿತರು ೩ ತಿಂಗಳಲ್ಲಿ ನಾನು ಮಾತನಾಡುವ ಅನೇಕ ಶಬ್ಧಗಳನ್ನು ಹಾಕಿದೆವು. ಇದರಲ್ಲಿ ಒಂದು ಊರಿಗೆ ಸೀಮಿತವಾದ ಪದಗಳು ಇದ್ದವು. ಅವೆಲ್ಲವನ್ನೂ ಒಂದಡೇ ಸೇರಿಸಿ ಆಗಿನ ಕಾಲದಲ್ಲಿ ಹಾಕಬಹುದಿತ್ತ "ಧಾರವಾಡ.ಕಾಂ" ಗೆ ಹಾಕಿದೆ. ಯಾಕೆ ಈ ಕೆಲ್ಸಕ್ಕೆ ಕೈ ಹಾಕಿದ ಎಂದರೆ, ನಾವು ಜಗತ್ತಿಗೆ ಕೆಲ ಶಬ್ದಗಳನ್ನು ಕೊಡಬಹುದಾದರೆ ಅವು ಇವು ಮಾತ್ರ. ಇವು ನಮ್ಮ ಸ್ವಂತ ಪದಗಳು, ಮತ್ತು ಇದರಲ್ಲಿ ನಮ್ಮ ಸೊಗಡು ಇದೆ. ಬಾಕಿ ಪದಗಳನ್ನು ನಾವು ಇಂಗ್ಲೀಷ್ ಅಥವಾ ಸಂಸ್ಕೃತದದಿಂದ ಪಡೆದಿದ್ದೆ ಆಗಿದೆ. "ಬಸ್ಸು, ಕಾರು, ಲಾರಿ ..ಟೇಬಲು ... ಈ ಪದಗಳನ್ನು ನಾವು ಮುಂದೆ ವೆಬಸ್ಟರಗೆ ಹಾಕಿಕೊಳ್ಲಿ ಎಂದರೆ ಜನ ನಗುತ್ತಾರೆ ಅಷ್ಟೆ. ಅದೇ "ಸಖತ್", ಬೊಂಬಾಟ್" ಇವು ಒಂದು ದಿನ ಸೇರುವ ಛಾನ್ಸಗಳು ಇವೆ. ಅದಕ್ಕೂ ಹೆಚ್ಚು ಅಂದರೆ ಆಡುವ ಮಾತು ಮತ್ತು ಬರೆಯುವುದು ಒಂದಕ್ಕೆ ಒಂದು ಭಿನ್ನ ನಮ್ಮ ಭಾಷೆಯಲ್ಲಿ. ನನ್ನ ಈ ಊಹೆ ತಪ್ಪಾಗಲಿಲ್ಲ, ಇಂದು ನೋಡಿ ಬೆಂಗಳೂರಿನ
ಅಲಿಖಿತ ಭಾಷೆಯಾಗಿ ಈ ಪದಪುಂಜಗಳು ಬಳಕೆಯಲ್ಲಿವೆ. ಇದಕ್ಕೆ ಆದರೂ ನಾವು ಜಗ್ಗೇಶ & Co ಅಭಾರಿಯಾಗಿರಬೇಕು.

ಇನ್ನೂ ಮುಂದೆ ಹೋಗಿ ಮಡಿವಂತಿಕೆ ತೋರುವ ನಮ್ಮ ಜನ ಕನ್ನಡದಲ್ಲಿ ಕೇವಲ ಒಳ್ಳೆಯ ಕೃತಿಗಳು(ಪ್ರಫುಲ್ಲ ಸಾಹಿತ್ಯ) ಬರಬೇಕು, ಸೆಕ್ಸಗೆ ಸಂಬಂದಿಸಿದ (ಅಶ್ಲೀಲ) ಬರಬಾರದು. ಇದರಿಂದ ಭಾಷೆ ಮಲೀನ ಆಗುತ್ತದೆ ಎಂದು ವಾದಿಸುತ್ತಾರೆ. ಅಲ್ಲಾ ಸ್ವಾಮಿ, ಕವನ-ಕಥೆ-ಕಾದಂಬರಿ ಬಿಟ್ಟು ನಾವು ಇನ್ನೇನು ಯೋಚಿಸಲು ಸಾಧ್ಯವೇ ಇಲ್ಲವೇ. ಈ ಕಥೆ-ಕಾದಂಬರಿ ಎಲ್ಲಾ ದುಡ್ದಿದ್ದು , ಒಳ್ಳೆಯ ಕೆಲ್ಸ ಇದ್ದು ಅದರ ಜೊತೆಗೆ ಸಮಯ ಇರುವ ವರ್ಗಕ್ಕೆ. ಆದರೆ ಸಾಮನ್ಯ ಜನಕ್ಕೆ ಬಡವನಿಗೆ ಅವನ ಕೆಲಸಕ್ಕೆ ಸಹಾಯ ಮಾಡುವ ಇಲ್ಲಾ ಅವನಿಗೆ ಬೇಕಾದ ಒಂದು ವಿಷಯದಲ್ಲಿ ಸಾಹಿತ್ಯ ಇರಬೇಕು ಎಂದು ಆಸೆ ಇರುತ್ತದೆ. ಉದಾ:- ಸೈಕಲ್ ಬಿಡಿಭಾಗಗಳನ್ನು ಬಿಚ್ಚಿ , ಮತ್ತೆ ಜೋಡಿಸುವುದು ಹೇಗೆ. ವಾಚ್ ಬಿಡಿ ಪಾರ್ಟುಗಳ ಬಗ್ಗೆ ಲೇಖನ. ಇಲ್ಲಾ ನಾವು ಬಳಸುವ ಪ್ರತಿಯೋಂದು ವಸ್ತುವಿನ "user guide". ಹಾಗೇಯೆ ಪ್ರತಿ ಜೀವಿಯು necessary evil ಆಗಿರುವ ಲೈಂಗಿಕ ಶಿಕ್ಷಣ ನಮ್ಮ ಭಾಷೆಯಲ್ಲಿ ಮಾತ್ರ ಬರಬೇಕು. ಬೇಡ ಅಂದರೂ ಈ ವಿಷಯದಲ್ಲಿ ಪ್ರತಿ ಪ್ರಜೆಗೂ ಬೇಕು, ನಮ್ಮ ಭಾಷೆಯಲ್ಲಿ ಕೊಡದಿದ್ದರೆ, ಒಂದು ವರ್ಗ ಬೇರೆ ಭಾಷೆಗೆ ಮೊರೆಹೋಗುತ್ತದೆ , ಇನ್ನೊಂದು ವರ್ಗ assume ಮಾಡಿಕೊಂಡು ಇಲ್ಲಾ quality ಇಲ್ಲದ ಅಗ್ಗದ ಸಾಹಿತ್ಯಕ್ಕೆ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಬೇಕಾ ??

ಒಂದು ಭಾಷೆ ಅನ್ನುವುದು ಮದುವೆಯ ಊಟ ಹಾಗೇ ಇರಬೇಕು, ಅದರಲ್ಲಿ ನಮ್ಮ ಜನರು ಹೇಳುವ ಕೆಟ್ಟದ್ದು-ಒಳ್ಳೆದು ಎಲ್ಲಾ ಇರಬೇಕು. ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಹಾಗೆಂದ ಮಾತ್ರಕ್ಕೆ ಊಟವೇ ಉಪ್ಪಿನಕಾಯಿ ಆಗಬಾರದು.

ಕೊಸರು:- ಕನ್ನಡದಲ್ಲಿ ಕೆಟ್ಟ ಮಾತು ಇರಬಾರದೆಂದು ಅನೇಕರು ನನ್ಗೆ ಹೇಳಿದ್ದಾರೆ, ಯಾಕೆ ಎಂದು ನನಗೆ ಅರ್ಥ ಆಗಿಲ್ಲ. ಒಂದು ಅಭಿವ್ಯಕ್ತಿಯನ್ನು ಬಿಂಬಿಸುವ ಎಲ್ಲಾ ಪದಗಳು ನಮ್ಮ ಭಾಷೆಯಲ್ಲಿ ಇರಬೇಕು. ದೇವರ ಭಾಷೆಯಾದ ಸಂಸ್ಕೄತದಲ್ಲಿ ಕೂಡ ಬೈಗಳ ಇದ್ದವು ಎಂದು ಎಲ್ಲೊ ಓದಿದ ನೆನಪು.

Saturday, June 09, 2007

ನೈತಿಕತೆಯನ್ನು ಮರೆತಿರುವ ನಮ್ಮ ಕಂಗ್ಲೀಷ್ ಶಾಲೆಗಳು.


ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೇ. ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ
ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ
ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು
ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ,
ದುಡ್ದು ಕೊಟ್ಟರೆ stayfreee ಕೂಡ ಹಾಕಿಕೊಳ್ಳುವದಕ್ಕೆ ಹಿಂಜರಿಯದ ಒಂದು ವರ್ಗ ಕೂಡ ಇದೆ, ಇವರನ್ನು stayfree ವರ್ಗ ಎಂದೇ ಕರೆಯೋಣ. ರಾಜಕರಣೀಗಳು,
ಸಾಹಿತಿಗಳು ಮತ್ತು ಪತ್ರಕರ್ತರ ಇರುವ ಈ ದಂಡು, ವ್ಯವಸ್ತಿತವಾಗಿ ವಿಷಯವನ್ನು ಮೇಲ್ವರ್ಗ-ಕೀಳ್ವರ್ಗ, ಐ.ಟಿ-ಬಿ.ಟಿಯ ಒಂದು ಟಚ್ ಕೊಟ್ತ್ತು
ಮುಖ್ಯ ವಂಚನೆಯನ್ನು ಮರೆಮಾಚುವ ಕೆಲ್ಸಕ್ಕೆ ಸಂಪೂರ್ಣ ಸಾಥ್ ಕೊಡುತ್ತವೆ.
ಮುಖ್ಯ ವಂಚನೆ ಎಂದರೇನು ??
ಈ ಶಾಲೆಗಳು ಸರಕಾರಕ್ಕೇ ಅನೇಕ ವರ್ಶಗಳಿಂದ ಕನ್ನಡ ಮಾಧ್ಯಮಗಳಲ್ಲಿ ಭೊಧನೆ ಮಾಡುತ್ತವೆ ಎಂದು ಮೋಸ ಮಾಡಿ,
ಇಲ್ಲಿ ಅಮಾಯಕ ಜನರಿಗೆ ನಮ್ಮ ಹತ್ತಿರ ಮಾನ್ಯತೆ ಇದೆ, ನಾವು ಪಾಠ ಮಾಡುವದೆಲ್ಲಾ ಸರಕಾರ ಪಠ್ಯಕ್ರಮ ಎಂದು ಬೂಸಿ ಬಿಟ್ಟು,
ಈ ಫೀಸು, ಆ ಫೀಸು, ಬಿಲ್ಡಂಗ್ ಡೊನೆಷನ್ ಎಂದು ಲೂಟಿ ಮಾಡುತ್ತ ಇರುವುದು ನಮ್ಮ stayfree ವರ್ಗಕ್ಕೆ ತಿಳಿದದೇ ಇರುವುದು ಮತ್ತು
ತಿಳಿದರೂ ಗೊತ್ತಿಲ್ಲದೇ ಇರುವುದು ಜಾಣಕುರುಡೇ ಸರಿ.
ತಮ್ಮ ಅಕ್ರಮಗಳು ಯಾವಾಗ ಬೆಳಕಿಗೆ ಬಂದವೋ ಆಗ ವಿಷಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತ ಬಂದಿದೆ, ಕಾಲಹರಣ ಮಾಡಲು
ಕೋರ್ಟಿಗೆ ಹೋಗಿ ಅವರ ಕೈನಲ್ಲೂ ಚಿಮಾರಿ ಹಾಕಿಸಿಕೊಂಡಿರುವ ಈ ಶಾಲೆಗಳು , ತಮ್ಮ ಕ್ರಮಕ್ಕೆ ಪೋಷಕರೇ ಕಾರಣ ಎಂದು ಗೂಬೆಯನ್ನು
ಅವರ ಮೇಲೆ ಕೂರಿಸುವ ಮತ್ತು ಅವರ ಕೈನಲ್ಲಿ ಪ್ರತಿಭಟನೆ ಮಾಡಿಸುವ ಚಿಲ್ಲರೆ ರಾಜಕರಣ ಮಾಡುತ್ತಿವೆ. ಇವರು ಕಳ್ಳ ಕೆಲಸವನ್ನು ಮಾಡಲು ಹೋರಟಾಗ
ಯಾವ ಪೋಷಕರು ಒತ್ತಾಯ ಮಾಡಿದ್ದರು ಎಂದು ಹೇಳಲಿ ನೋಡೊಣ. ಜನರನ್ನು ಲೂಟಿ ಮಾಡಿ ಡೊನೆಷನ್ ತೆಗೆದುಕೊಳ್ಳುವದನ್ನು ಯಾವ ಪೊಷಕರು
ಹೇಳಿಕೊಟ್ಟರೋ ನಾ ಕಾಣೆ. ಅದೇ ಪೋಷಕರು ನಾಳೇ ಡೊನೆಷನ್ ಇಲ್ಲದೇ ನಡೆಸುತ್ತಾರ ಎನ್ನುವುದು ಯಕ್ಷಪ್ರಶ್ನೆ.
ಒಂದು ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವುದು ಯಾಕೆ, ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ, ಒಂದು ಒಳ್ಳೆಯ
ಮಾನವೀಯ ಮೌಲ್ಯಗಳನ್ನು ಅಭ್ಯಸಿಸುತ್ತಾರೆ ಎನ್ನುವ ಒಂದು ನಂಬಿಕೆ ಮೇಲೆ. ಆದರೆ ಇಲ್ಲಿ ನೋಡಿ ವೈಚಿತ್ರ್ಯ, ಶಾಲೆಯ ಆಡಳಿತವನ್ನು ನೋಡಿ ಮಕ್ಕಳು
ಕಲಿಯುವುದೇ ಬೇರೆ
೧) ಸರಕಾರಕ್ಕೆ ಸುಲಭವಾಗಿ ವಂಚನೆ ಮಾಡಬಹುದು
೨) ದುಡ್ದಿದ್ದರೆ ಸಾಕು, stayfree ವರ್ಗ ನಮ್ಮ ತೆಕ್ಕೆಯಲ್ಲಿ ..
೩) ಯಾವುದಕ್ಕೋ ಪರವಾನಿಗೆ ಪಡೆದು , ಇನ್ಯಾವುದೋ ಕೆಲ್ಸ ಮಾಡುವುದು.
ಉಧಾ:- ನಾಳೆ ಶಿವಕಾಶಿಯಲ್ಲಿ ಪಟಾಕಿ ಮಾಡಲು ಪರವಾನಿಗೆ ಪಡೆದು, ಬಾಂಬ್ ಮಾಡಲು ಹೋರಟರೆ ಅದನ್ನು ನಾವು ಸಮರ್ಥನೆ ಮಾಡಬೇಕೆ ??
ಆವಗಲೂ ಕೂಡ ಈ ನಮ್ಮ stayfree ವರ್ಗ ಪಾಪ ತುಂಬಾ ಮಕ್ಕಳ ಭವಿಷ್ಯವಿದೆ ಎಂದು ಸಾಮಾಜಿಕ ಕಳಕಳಿ ತೋರುವುದೇ ??. ಇದು ಬಡವರ ಮೇಲೆ ಮಾಡುತ್ತಿರುವ
ಧಬ್ಬಾಳಿಕೆ ಎಂದು ಬೊಬ್ಬೆ ಹೊಡೆಯುವುದೇ? .
ಅಷ್ತು ಮಕ್ಕಳ ಬಗ್ಗೆ ಕಳಕಳಿ ಇರುವ stayfree ವರ್ಗ ಓದುವ ವಯಸ್ಸಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರ ಬಗ್ಗೆ ದನಿ ಎತ್ತಲ್ಲಿ. ಅವರನ್ನು ಪಾಪಕೂಪದಿಂದ ಬಿಡುಗಡೆಗೊಳಿಸಿ
ಶಾಲೆಗೆ ಸೇರಿಸಲಿ , ಅದನ್ನು ಬಿಟ್ಟು ದುಡ್ದಿಗೆ ಜೋತು ಬಿದ್ದು ನಂದೆಲ್ಲಿ ಇಡಲಿ ನಾರಾಯಣ ಮೂರ್ತಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದು. ಅಕ್ರಮವನ್ನು ಸಕ್ರಮ ಮಾಡಲು
ಹೋಗುವುದು ಅವರಿಗೆ ಸರಿ ಕಾಣುವದಿಲ್ಲ. ಸ್ವಲ್ಪ ಸಾಮಾಜಿಕ ಖಳ-ಖಳಿ ತೋರುವ ಬದಲು, ಸಾಮಾಜಿಕ ಬದ್ಧತೆ ತೋರಿಸಲಿ ಸಾಕು.

Sunday, June 03, 2007

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..


ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ ಗಮನಿಸ ಬೇಕಾದ
ಅಂಶಗಳು ಬಹಳ ಇವೆ. ಇದನ್ನು ನಿರ್ದೇಶಕ ನರೇಂದ್ರ ಬಾಬು ಚೆನ್ನಾಗಿ ಕೊಟ್ಟಿದ್ದಾರೆ ಅಂದರೆ ತಪ್ಪಾಗಲಾರದು.

ಇಂದು ನಾವು ಸರ್ವಸಾಮನ್ಯವಾಗಿ ಹೇಳುತ್ತಿರುವ ಪರಭಾಷಿಕರ ಆಕ್ರಮಣ ಮತ್ತು ಅವರು ಮಾಡುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ
ಬೇರೆ ಬೇರೆಯಾಗಿ ತೋರಿಸಿದ್ದಾರೆ.

೧) ೪೦ ವರುಷಗಳಿಂದಲೂ ಇಲ್ಲೇ ಇದ್ದು, ಕನ್ನಡ ಬಾರದ ತಮಿಳಿಗ, ತಮಿಳಿಗ ತಾನು ಮುಖ್ಯವಾಹಿನಿಗೆ ಸೇರದೇ ಇರಲು ಇಲ್ಲಿನ
ಜನಗಳೇ ಕಾರಣ, ನನ್ನ ಜೊತೆ ಕನ್ನಡದಲ್ಲಿ ವ್ಯವಹರಿಸದೇ , ಕನ್ನಡವಿಲ್ಲದೇ ವ್ಯಾಪರ ಮಾಡಲು ಆಗುವದಿಲ್ಲ ಎಂದು ತಿಳಿ ಹೇಳದೇ
ನನ್ನ ಭಾಷೆಯಲ್ಲೇ ವ್ಯವಹರಿಸಿ, ತನಗೆ ಕನ್ನಡದ ಅವಶ್ಯಕತೆ ಇದೆ ಅಂದರೂ ಜನ ಆಸ್ಪದ ಕೊಡದಿರುವ ವಿಷಯ ಇಂದಿನ ಸಮಾಜದಲ್ಲಿ
ಬಹಳ ಪ್ರಸ್ತುತವಾಗಿ ಕಾಣುತ್ತದೆ. ಹಾಗೇಯೆ ಮುಖ್ಯವಾಹಿನಿಗೆ ಸೇರುವ ಅವರ ಚಿಕ್ಕ ಪುಟ್ಟ ಪ್ರಯತ್ನಗಳಿಗೆ ನಾವು ಸಹಾಯ ಮಾಡದೇ
"ಅಣ್ಣಾ..ಕನ್ನಡ ಕೊಲ್ಲಬೇಡ" ನಾವೇ ನಿನ್ನ ಭಾಷೆಯಲ್ಲಿ ಮಾತನಾಡುತ್ತೆವೆ ಎಂದು ಹೇಳುವ ನಮ್ಮ ಕನ್ನಡಿಗರ ಉದಾರತೆಯ ಮುಖವನ್ನು ತೋರಿಸಿಕೊಡುತ್ತದೆ.
ಇದಕ್ಕೆ ಲಕ್ಷೀ(ಪ್ರೇಮ್) ಪಾತ್ರ ಸರಿಯಾಗಿ ಉತ್ತರ ಕೊಟ್ಟು ಅವರು ಇಲ್ಲಿಯವರೇ, ಇದೇ ಮನೋಭಾವ ಪ್ರತಿಯೊಬ್ಬ ವಲಸಿಗನ ಮನದಲ್ಲಿ ಮೂಡಬೇಕು ಎಂಬ
ಸಂದೇಶ ಕೊಡುತ್ತದೆ. ಹಾಗೇಯೆ ನಮ್ಮ ಉದಾರತೆಯ ದುಷ್ಪರಿಣಾಮದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

೨) ಕರ್ನಾಟಕದಲ್ಲಿ ಭೂ- ಮಾಫಿಯಾಕ್ಕೆ ಆಂದ್ರದಿಂದ ಬಂದು ಇಲ್ಲಿ ತಮ್ಮ ಧನ-ಬಾಹು ಬಲಗಳಿಂದ ನಮ್ಮ ಅಮಾಯಕರನ್ನು ಬೆದರಿಸಿ,
ತಮ್ಮ ದೌರ್ಜನ್ಯವನ್ನು ಮೆರೆಯುತ್ತಿರುವ ಜನಕ್ಕೆ ನಾವು ತಲೆ ಬಾಗಿದರೆ,ಅವರು ನಮ್ಮನ್ನು ಒಂದು ದಿನ ಬೀದಿಗೆ ನಿಲ್ಲುಸುತ್ತಾರೆ ಎಂದು
ಮಾರ್ಮಿಕವಾಗಿ ಹೇಳುತ್ತಾರೆ. ಆಂಧ್ರದ ಈ ಭೂ-ಮಾಫಿಯ ಜನ ತಾವು ಕೆಳಮಟ್ಟಕ್ಕೆ ಆದರೂ ಇಳಿಯಲು ಹಿಂಜರಿಯುವದಿಲ್ಲ,ಆದರೆ
ಗೌರವಕ್ಕೆ ಮಣೆ ಹಾಕುವ ನಾವು ಕನ್ನಡಿಗರ ಪಾತ್ರವನ್ನು ಮಂಗಳೂರಿನ ಲಕ್ಶ್ಮೀ ಗೆಳಯನ ಮೂಲಕ ಆವರಣ ಮಾಡಿದ್ದಾರೆ. ಇವರಿಗೆ ಒಳ್ಳೆಯ ಮಾತಿನಲ್ಲಿ
ಹೇಳಿದರೆ, ಕನ್ನಡ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಬಿಡು ಎಂಬ ಕೆಟ್ಟ ದೃಷ್ತಿಯಲ್ಲಿ ಹೇಳಲು ಹಿಂಜರಿದ ಆ ಜನಕ್ಕೆ ಒದ್ದ್ದೇ ಬುದ್ಧಿ ಹೇಳಬೇಕು ಎಂಬುದು
ನಿರ್ದೇಶಕರ ಅಂಬೋಣ. ಬಲವಂತವಾಗಿ ಮತ್ತು ಅವ್ಯವತವಾಗಿ ತೆಲುಗನ್ನು ನಮ್ಮ ಮೇಲೆ ಹೇರುವುದು ಕೂಡ ಇದೇ ಜನ ಎಂದು ಬಿಡಿಸಿ ಹೇಳಿದ್ದಾರೆ.

೩) ಕನ್ನಡ ಕೆಲಸ ಅಂದರೆ ಕೇವಲ ರಾಜ್ಯೋತವ ಆಚರಿಸಿ, ಅಮ್ಮ-ಕನ್ನಡಮ್ಮ ಎಂದು ಹಾಡುವುದು ಮಾತ್ರವಲ್ಲ ಕನ್ನಡಿಗರು ಉದ್ಯಮಶೀಲರಾಗಬೇಕು
ಎಂದು ಮಧ್ಯಂತರ ಭಾಗದಲ್ಲಿ ಸಂದೇಶ ಸಾರಿದ್ದಾರೆ. ಉದ್ಯಮಶೀಲರಾಗಿ ಪರರಾಜ್ಯದವರ ಕೈನಲ್ಲಿ ಇರುವ ವ್ಯವಹಾರವನ್ನು ಚತುರತೆ ಇಂದ ಪಡೆಯಬೇಕೆಂಬ
ವಿಷಯವು ನಿರ್ದೇಶಕರ ಬಗ್ಗೆ ಒಳ್ಳೆಯ ಮೆಚ್ಚುಗೆ ಮೂಡುತ್ತದೆ.

Sunday, May 13, 2007

ನಿರೀಕ್ಷೆ ..(ಕವಿತೆ)


ಪೀಠಿಕೆ:- ಕೆಲ ದಿನಗಳ ಹಿಂದೆ ನನ್ನ ಹಳೇ ಗೆಳೆಯರು,ನಾನು ೨೦೦೪ ಇಸವಿಯಲ್ಲಿ ಬರೆದ ಕವಿತೆವನ್ನು ಜ್ಞಾಪಿಸಿಕೊಂಡು,ಕಳುಹಿಸಿ ಕೊಡಿ ಎಂದು ಹೇಳಿದರು. ನನಗೆ ಕಿಂಚಿತ್ತೂ ಕ್ಲೂ ಇರಲಿಲ್ಲ, ಯಾವುದರ ಬಗ್ಗೆ ಹೇಳುತ್ತ ಇದ್ದಾರೆ ಅಂತ. ಕೊನೆಗೂ ಅದನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿ, ಆ ದಿನಗಳಲ್ಲಿ ನಾನು ಕವಿತೆ ಹಾಕುತ್ತಿದ್ದ ತಾಣದಿಂದ,ಹೆಕ್ಕಿ ಇಲ್ಲಿ ಹಾಕುತ್ತ ಇರುವೆ. ಇದು ಶಬರಿಯ ಹಾಗೇ ಕಾಯುತ್ತಿರುವ ನನ್ನ ಗೆಳತಿಗೆ ....



ಮರಳಿ ಬರುವೆನೆಂದು ಹೇಳಿ ಹೊದೆಯೆಲ್ಲ ನಲ್ಲ,

ಬಾರಿ ಬಾರಿ ಬೀಸಿ, ರೋಸಿ ಹೋಯಿತು ಗಾಳಿ,

ನೀನು ಇಲ್ಲ, ನಿನ್ನ ನೆರಳು ಇಲ್ಲ.


ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ,

ಬಾಗಿಲಿಗೆ ಬಂದು, ಗೋಡೆಗೆ ಒರಗಿ ನಿಂತು,

ಹಾದು ಹೋಗುತ್ತಿದ್ದ ಜನಗಳ ನಡುವೆ ಹುಡುಕುತ್ತಿದ್ದೆ,

ನಿನ್ನ ಮುಖ ಎಲ್ಲಿ.


ಅತ್ತು,ಅತ್ತು ಕಣ್ಣಾಳಿಗಳು ಕೆಂಪಾಗಿ,

ಬಿರುಸಾಗಿ ಹೊಯ್ದ ಮಳೆಗಳಲ್ಲಿ, ಅಡಗಿಸಿತ್ತೆ ನಾ ಕಂಬನಿಗಳ,
ಬರಲಿಲ್ಲ ಕೊನೆಗೂ ನೀನು ಕರಗಿ.


ನಿನ್ನ ಮುಖವನ್ನು ಒಮ್ಮೆ ನೋಡಲು,

ನಿನ್ನ ಧ್ವನಿಯ ಒಮ್ಮೆ ಆಲಿಸಲು,

ಕಾದು ಕುಳಿತಿರುವೆ ನಾ,

ನೋಡುತ್ತಾ ಮುಳುಗುತ್ತಿರುವ ಹಗಲು.

Sunday, May 06, 2007

ಅದು ಹೇಗೆ ಗಾಂಚಲಿ ಆಗುತ್ತದೆ..... !!!

ರೇಖಾ ಬಗ್ಗೆ ಬರೆದು ನಾನು ಅವಳು ಕನ್ನಡದಲ್ಲಿ ಮಾತನಾಡಲಿಲ್ಲ ಅಂತ ಅದನ್ನು ಗಾಂಚಲಿ ಅಂದು ಬರೆದಿದ್ದೇನೋ ಸರಿ, ಆದರೆ ಸ್ವಲ್ಪ ಯೋಚಿಸಿದಾಗ ಕನ್ನಡ ಮುಕುಟ ಮಣಿಗಳು ಎಂದು ನಾವು ಕರೆಯುವ ಅನೇಕ ಕನ್ನಡ ಕವಿಗಳ ಮಾತುಗಳಲ್ಲಿ ೫೦% ಆಂಗ್ಲ ಇರುತ್ತಿದ್ದವು. ಅದರಲ್ಲೂ ಆ ಕವಿವೃಂದ ಬೇಟಿ ಮಾಡಿದರೆ ಅವರ ಮಾತುಗಳೆಲ್ಲಾ ಹೆಚ್ಚಾಗಿ ಆಂಗ್ಲದಲ್ಲಿ ಇದ್ದವು. ಅಷ್ಟಕ್ಕೆ ಏಕೆ, ಅವರ ಮನೆಯಲ್ಲಿ ತಮ್ಮ ಮಕ್ಕಳ ಜೊತೆ, ಇಲ್ಲ್ಲಾ ಇನ್ನೊಬ್ಬ ಕವಿಗಳ ಜೊತೆ ವ್ಯವಹರಿಸೊಕ್ಕೆ ಬರೀ ಇಂಗ್ಲೀಷ್ ಬಳಸಿದ್ದು ಸುಳ್ಳು ಅಲ್ಲ. ಹಾಗೇ ಅಂತ ಅವರಿಗೂ ಗಾಂಚಲಿ ಅಂತ ಕರೆಯಬಹುದೇ ???.

ಎಲ್.ಎಸ್.ಶೇಷಗಿರಿರಾಯರು ಇದನ್ನು ಚೆನ್ನಾಗಿ ಹೇಳಿದ್ದಾರೆ, ಅವರಿಗೆ ಹೃದಾಯಘಾತವಾದಾಗ , ಹೇಗಿದ್ದಿರಿ ಅಂದಾಗ
ಚೆನ್ನಾಗಿದ್ದೇನೆ ಅಂತ ಕನ್ನಡದಲ್ಲಿ ಅನ್ನುವ ಬದಲು ಆಂಗ್ಲದಲ್ಲಿ ಉತ್ತರಿಸಿದರು. ಇದು ಯಾಕೆ ಅಂದರೂ ಅಂತ ಅವರಿಗೂ ಗೊತ್ತಿಲ್ಲ,ಅವರ ಸುಪ್ತ ಆಂಗ್ಲಕರಣವಾಗಿರಬಹುದು. ಇದನ್ನೇ ಮುಂದುವರೆಸುತ್ತ ರೇಖ ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ವಾದಿಸಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವಿದೆ.

೧) ಮನದಾಳವನ್ನು ಕನ್ನಡದಲ್ಲಿ ಹೇಳಲು ಆಗುವದಿಲ್ಲ ಎಂದು ನಮ್ಮ ಹಿರಿಯರು ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ತೋರಿಸಿಕೊಟ್ಟರೆ ಅದು ಸಮಾಜದ ಮೇಲೆ ಬಹಳ ದುಷ್ಪರೀಣಾಮ ಬೀರುತ್ತದೆ. ಅಷ್ಟು ಕನ್ನಡ ಸೇವೆ ಮಾಡಿ, ಅಷ್ಟು ತಿಳಿದುಕೊಂಡ ಜ್ಞಾನಿಗಳೇ ಇಂಗ್ಲೀಷ್ ಬಳಸಿರಬೇಕಾದರೆ ನಾವು ಮಾಡಿದರೆ ತಪ್ಪೇನು ಎಂದು ಉದಾಸೀನ ನಮ್ಮ ಸಮಾಜದಲ್ಲಿ ಮೂಡುತ್ತದೆ.

೨) ಪ್ರತಿ ಜನರಿಗೆ ತಾನು ಹೇಳುವ ವಿಚಾರ ಬೇರೆಯವರಿಗೆ ಅರ್ಥ ಆಗಬೇಕು ಎಂಬ ಚಟ ಇರುತ್ತದೆ, ಇದಕ್ಕೆ ಎನು ಬೇಕಾದರೂ ಮಾಡಬೇಕೆಂಬ ಛಲ ಮೂಡಿ, ತಾವು ಹೇಳುವ ವಿಷಯವನ್ನು ಆಂಗ್ಲದಲ್ಲಿ ಹೇಳಲು ಹೋಗುತ್ತಾರೆ. ಇದಕ್ಕೆ ನಮ್ಮ ಹಿಂದಿನ ಕವಿಗಳು ಕೊಡುವ ನೆವ ಅಂದರೆ, ಆಂಗ್ಲ ಭಾಷೆ "Langauge of Phrases", ಬಹಳ ಚೆನ್ನಾಗಿ ಹೇಳಬಹುದು, ಕನ್ನಡದಲ್ಲಿ ಅದು ಸಾಧ್ಯವಿಲ್ಲ ಎಂದು. ಅದ್ದರಿಂದ ಗಮನಿಸಿ ನೋಡಿ ಆ ಶತಮಾನದವರೂ ಇವತ್ತಿಗೂ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಹೇಳಿದ್ದರೂ ಕೂಡ ಅದನ್ನೇ flowery English ನಲ್ಲಿ ಹೇಳಿ ನಾನು ಹೇಳಿದ್ದರ ಅರ್ಥ ಇದು ಎಂದು ಮನವರಿಕೆ ಮಾಡಿಕೊಡುತ್ತಾರೆ.

೩) ಇನ್ನೂ ಕೆಲವರು ತಾನು ಬುದ್ಧಿವಂತ, ಓದಿದವನು ಎಂದು ಬೇರೆಯವರಿಗೆ ತಿಳಿಯಲು ಇಂಗ್ಲೀಷ್ ಬಳಸುತ್ತಾರೆ. ಕನ್ನಡದಲ್ಲಿ ಹೇಳಿದ್ದರೆ ತನ್ನನ್ನು ಹಳ್ಳಿಗುಗ್ಗು ಎಂದು ಎಲ್ಲಿ ಅಂದು ಕೊಳ್ಳುತ್ತಾರೆ ಎಂಬ ಭಯ ಮೂಡಿ ಕಷ್ಟ ಪಟ್ಟಿ ಆದರೂ ಬಳಸುತ್ತಾರೆ. ನಮ್ಮ ದೌರ್ಭಾಗ್ಯವೆಂದರೆ ಇವರೇ ಹೆಚ್ಚು ಇರುವುದು, ಇವರಿಗೆ ಮೇಲೆ ಹೇಳಿದವರು ದಾರಿ ತಪ್ಪಿಸಿದರೆ, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಗುತ್ತದೆ. ಇದನ್ನೇ ರೇಖಾ ಮಾಡಿದ್ದು, ಅವಳನ್ನು ಅನುಸರಿಸುವ ಯುವ ಪಡೆಗೆ ತಪ್ಪು ವಿಷಯ ರವಾನಿಸದ ಹಾಗೆ ಆಗುತ್ತದೆ.
ಅದಕ್ಕೆ ನಾನು ಅದನ್ನು ಗಾಂಚಲಿ ಅಂತ ಹೇಳಿದ್ದು,

ಕನ್ನಡವೆಂದರೆ ಕೇವಲ ಪದ್ಯ-ಗದ್ಯ ಬರೆದು ಜ್ಞಾನಪೀಠ ಪಡೆಯುವ ಭಾಷೆ ಅಲ್ಲ, ನಮ್ಮ ದೈನಿಂದಿನದ ಭಾಷೆ. ಇದರಲ್ಲಿ ಆಗದೇ ಇರುವುದು ಎನು ಇಲ್ಲಾ ಅಂತ ನಮ್ಮ ಸಮಾಜದ ಮಹನೀಯರು ತೋರಿಸಿಕೊಡಬೇಕು.

Friday, May 04, 2007

ಜಿಂಕೆ ಮರಿಗೆ ಬಲೇ ಗಾಂಚಲಿ ..




ಸರಿ ಸುಮಾರು ವರುಷಗಳ ಹಿಂದೆ ಹುಚ್ಚ ಬಂದಾಗ ಅದರಲ್ಲಿ ಮುಗ್ದ ಹೆಣ್ಣು ಮಗಳ ಪಾತ್ರ ಮಾಡಿ ಬೆಳಕಿಗೆ ಬಂದ ಹುಡುಗಿಯೇ
ರೇಖಾ ವೇದವ್ಯಾಸ. ಬರುವಾಗಲೇ ಮಾಡೆಲ್ ಎಂಬ ಹಣೆಪಟ್ಟಿಯನ್ನು ಹಂಚಿಕೊಂಡು ಬಂದ ಹುಡುಗಿ ಎಂಟ್ರಿ ಕೊಟ್ಟಿದ್ದು ಗೌರಮ್ಮ ಆಗಿ.
ಅಭಿನಯದಲ್ಲಿ ಆರಕ್ಕೆ ಎರದೆ ಇದ್ದುದರ ಪರಿಣಾಮವೇ ಮತ್ತೆ ಹೆಚ್ಚು ಅವಕಾಶಗಳು ಬರಲಿಲ್ಲ. ಆಗ ಲೋ ಬಜೆಟ್ ಚಿತ್ರಗಳನ್ನು ಮಾಡುತ್ತಿದ
ಉಷಾಕಿರಣ್ ಮೂವಿಸ್ ಚಿತ್ರ ಸಿಕ್ಕಿದ್ಧು ಇವಳ ಲಕ್ ಖುಲಾಯಿಸಿದ್ದು ನಮ್ಮ ದೌರ್ಭಾಗ್ಯವೇ ಸರಿ. ಮತ್ತೆ ಇವಳು ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಾಗ
ಅವಳ ಜೊತೆ ಬಹುಭಾಷ ಕಲಾವಿದೆ ಎಂಬ ಕೊಬ್ಬು ಬಂತು. ಇಂದ್ರಜಿತ್ ಇವಳನ್ನು ತನ್ನ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ತೋರಿಸಿದರು
ಇವಳು ಹೆಚ್ಚು ಪ್ರಚಾರ ಪಡೆಯಲಿಲ್ಲ. ಅಲ್ಲಿಗೆ ಅವಳ ತೆಲುಗು ಚಿತ್ರರಂಗದ ಕೆರಿಯರ್ ಕೂಡ ಮುಗಿದಿತ್ತು,ಆದರೂ ಇವರ ಕೊಬ್ಬು ಮಾತ್ರ ಇಳಿದಿರಲಿಲ್ಲ.
ಮತ್ತೆ ಇವಳಿಗೆ ಆಸರೆ ಆಗಿದ್ದು ಲೊ ಬಜೆಟ್ ನಿರ್ಮಾಪಕರು, ಕನ್ನಡದಲ್ಲಿ ಚೆಲ್ಲಾಟ ಚಿತ್ರದಲ್ಲಿ ಮತ್ತೆ ಇವಳ ಇನ್ನೋಂದು ಇನಿಂಗ್ಸ ಪ್ರಾರಂಭ ಆಯಿತು,
ಕನ್ನಡ ನಾಯಕ-ನಾಯಕಿಯರಿಗೆ ಬೇಡಿಕೆ ಇರುವ ಇಂದಿನ ದಿನಗಳಲ್ಲಿ ಇವಳಿಗೂ ಸ್ವಲ್ಪ ಅವಕಾಶ ಸಿಕ್ಕರೆ ಅವಳ ಭಾಗ್ಯವೆಂದು ತಿಳಿಯದೇ,
ಕನ್ನಡದಲ್ಲಿ ನನಗೆ ಮಾತನಾಡಲು ಆಗುವದಿಲ್ಲ,ಕಷ್ಟ. ಮನದಾಳದ ಮಾತುಗಳನ್ನು ಹೇಳಲು ಇಂಗ್ಲೀಷ್ ಬಳಸುತ್ತೇನೆ ಅಂತ ತೇಮ್ಸ್ ನೀರು ಕುಡಿದು ಬಂದ
ಹಾಗೆ ಆಡುವ ಈ ನಾರಿಮಣಿ ಕನ್ನಡ ಚಿತ್ರ ಮಾಡಲು ಮನಸ್ಸು ಮಾಡಿದ್ದು ನಮ್ಮ ಕನ್ನಡಿಗರ ಸೌಭಾಗ್ಯವೇ ಸರಿ ಅನ್ನಬೇಕು. ಇವಳು ಇತ್ತಿಚಿಗೆ
ಸಾಯಿ ಪ್ರಕಾಶ್ ಅವರ ಹುಟ್ಟಿದರೆ ... ಎಂಬ ಕರುಳಿನ ಕೈ ಹಾಕುವ ಚಿತ್ರದಲ್ಲಿ ಪಾತ್ರ ಕೊಟ್ಟರೆ, ಆ ಶೂಟಿಂಗನಲ್ಲಿ ಹಾಗೇ ಹೇಳಬೇಕೆ ??.
ಇವಳ ಇಂಗ್ಲೀಷ್ ಜ್ಞಾನ ನೋಡಿ ಆ ಪಾತ್ರ ಕೊಟ್ಟಿದ್ದು ಅಲ್ಲ, ಪಾಪ ರಾಧಿಕ ಐ.ಟಿ ಭಯಕ್ಕೆ ನಾಪತ್ತೆ ಆದ್ದುದರಿಂದ ಇವಳ ಬಗುಲಿಗೆ ಅವಕಾಶ ಬಂದಿದೆ ಅಷ್ಟೆಯಾ.
ಅಷ್ಟಕ್ಕೂ ಆವತ್ತಿನ ಶೂಟಿಂಗನಲ್ಲಿ ಎಸ್ಪಿ,ಲಕ್ಷ್ಮೀ ಇದ್ದರು, ಅವರೆಲ್ಲಾ ಬಿಸಿಲಿನಲ್ಲೂ ಕೂಡ ಕನ್ನಡ ಮಾತನಾಡಿದರೆ, ಈ ಪುಣ್ಯಾತ್ತಗಿತ್ತಿ ಬಾಯ್ ನ ಕರೆಸಿ ಕೊಡೆ ಹಿಡಿಸಿಕೊಂಡು
ಬಾಯಿಗೆ ಬಂದದ್ದು ಉಸರಿದಳು. ಮೊದಲೇ ಕಲಾವಿದರಿಗೆ ಭಾಷೆ ಇಲ್ಲಾ ಅನ್ನುವರ ಮಧ್ಯೆ ಇಂಥಾವರನ್ನು ಯಾವ ರೀತಿಯಲ್ಲಿ ಕನ್ನಡತಿ ಎನ್ನಬೇಕು ಎನ್ನುವುದು
ನಮ್ಮ ಮುಂದೆ ಇರುವ ಯಕ್ಷಪ್ರಶ್ನೆ.
ಈ ಎಮ್ಮಾ ಇಷ್ಟು ಆಂಗ್ಲ ಪ್ರೇಮ ತೋರಿಸಿದರ ಕರಾಮತ್ ನೋಡಿದರೆ ಹಾಲಿವುಡಗೆ ಸ್ಕೆಚ್ ಹಾಕಿದ ಹಾಗೆ ಅಂತ ನನಗೆ ಅನಿಸಿದ್ದು ಸರಿ ಅಂತ ಗೂಗಲ್ ದೇವತೆ
ಕೂಡ ಹೇಳಿದಳು. ಹಿಂದೆ ವ್ಯಾಲೆಂಟೆನ್ -ಡೇಗೆ ಒಂದು ಭಾರತೀಯ ಉಪಹಾರ ಕೇಂದ್ರಕ್ಕೆ ಬೇಟಿಕೊಟ್ಟಾಗ ಅಲ್ಲಿ ಅವಳು ತನ್ನ ಹಣೆಬರಹವನ್ನು ಪರೀಕ್ಷಿಸಲು ಹೋರಟಿದ್ದ್ಯು
ಸುಳ್ಳಲ್ಲ.ಅದರೆ ಅದೇನು ಹೆಗ್ಗಳಿಕೆ ಕೂಡ ಅಲ್ಲ, ಅಷ್ಟು ಮನದಾಳ ಹಂಚಿಕೊಳ್ಳಬೇಕೆಂದರೆ ಅಲ್ಲಿಗೆ ಹೋಗಲಿ, ನಮಗೆ ಒಂದು ಪೀಡೆ ತಪ್ಪುತ್ತದೆ ಅಂತ ಗಾಂಧಿನಗರದ ಜನ
ಪಿಸುಗುಟ್ಟಿದ್ಧು ರಟ್ಟಾಗಿದೆ. ಇವಳೂ ಇಲ್ಲಾ ಅಂದರೆ ಕನ್ನಡ ಮಾತನಾಡಲು ಪ್ರಯತ್ನ ಪಡುವ ಮಾನ್ಯ ಇಲ್ಲವೇ ಇವಳ ಜಾಗ ತುಂಬಲು ??

ಕೊಸರು:-ತಮಾಷೆಗಾಗಿ ಬಂದ ಜಿಂಕೆಮರಿ ತುಂಟಾಟ,ಹುಡುಗಾಟ ಮಾಡಿ ಮುಂದಿನ ಚಿತ್ರ ಪೇಚಾಟಕ್ಕೆ ರೆಡಿ ಆಗಿದ್ದಾಳೆ.

Tuesday, April 24, 2007

FM Radio in Bangalore: Case study.

VERY BEAUTIFUL THOUGHTS ON FM RADIO, I RECEIVED THIS AS AN EMAIL FWD. I DONNO THE AUTHOR TO THANK HIM FOR SHARING MY IDEAS.
(COURTESY:- MAIL FWD )

“Radio” concept has taken a rebirth during the present times and has yet again become a media for mass entertainment. This media has adopted itself as a part and parcel of Bangalore city life. In the beginning, even though numerous FM channels got some market in the city, Kannada, being the language of the city, was not on their priority list, which in turn created unhappiness among the citizens.
As an answer to the query on the Kannada priority issue, FM channels tried to convince that the market and in turn the requests for soothing Kannada songs were not there. During this process, all the FM channels started to relay more of Hindi and non-Kannada songs and market for Kannada songs was projected as non-existent
At the same time, a new Sun Network based FM channel “S FM” tasted a great success in gaining the mind share of the Bangalore masses with Kannada songs. Working along the same lines “Big FM” yet another FM channel got a good part of the market. As a result, Radiocity, A Bangalore based FM radio station, which was relaying Kannada songs on “one hour a day” basis, Radio-Mirchi which was sprinkling few Kannada songs in between Hindi songs, realized the existence of kannada market
The verdict passed for releasing Kaveri water to TamilNadu and kannadigas protesting against the verdict resulted in Tamlinadu based SFM to relay non-Kannada songs. Because of this reason, S FM crashed from the no 1 position.
Considering all these facts about the increasing demand for Kannada songs and on the competitive end, to get to the first position to utilize the market to its limits, Radio Mirchi has started to relay 90% of their songs and commercials in Kannada and has been very well accepted by the citizens. Thus, Radio Mirchi and Big-FM with prioritization of Kannada have both become competitive entities to reach the first position.
The realization of market potential by Radio Mirchi and utilizing the same is to be well appreciated.
It can be seen that along the need to listen old melodious Kannada songs, recent musical hits provided by the movies like “Jote Joteyali” , “Mungaru male”, “Arasu”, “Aishwarya” ,“Duniya ”,”Pallakki”, “JOGI”, “Nenapirali”, “AKASH” etc have boosted the demand for kannada songs to a very high limit.
In summary, catering to the market needs will result in the service provider getting a lionshare in the market.
Radio Mirchi’s turn around is a case to prove this.
As a bottom line it can be said that for a mass entertainment media, the CUSTOMER NEEDS runs the business, and not the ideas that aims to change the customer to the needs of the VESTED INTEREST.

Sunday, April 22, 2007

ರೇಡಿಯೊ ಮಿರ್ಚಿ ..ಹೆಚ್ಚು ಕನ್ನಡ ಹಾಡು.



ಕೆಲ ತಿಂಗಳ ಹಿಂದೆ ನನ್ನ ಗೆಳೆಯ ಕರೆ ಮಾಡಿದಾಗ ಮೊದಲು ಹೇಳಿದ್ದು, ಇವತ್ತು ರೇಡಿಯೋ ಮಿರ್ಚಿ ಕೇಳಿದೆಯಾ ? , ಸಂಪೂರ್ಣ ಕನ್ನಡ ಹಾಕುತ್ತ ಇದ್ದಾರೆ ಅಂತ. ಇದು ಅವರ ಕನ್ನಡ ಅಭಿಮಾನವಂತು ಅಲ್ಲ, ಇದಕ್ಕೆ ಕಾರಣ ಹುಡುಕುತ್ತ ಹೋದರೆ ಸಿಗುವುದು ಕ.ರ.ವೇ ಹೋರಾಟದ ಫಲವೆಂದು. ನನ್ನ ಪುಣ್ಯಕ್ಕೆ ಯೂಟೂಬ್ ನಲ್ಲಿ ಇದರ ಒಂದು ತುಣುಕು ಸಿಕ್ಕಿತು. ಕನ್ನಡ ಹಾಡುಗಳನ್ನು ಹೆಚ್ಚು ಹಾಕಿದರೆ ಹೆಚ್ಚು ಮಾರುಕಟ್ಟೆ ಪಡೆಯಬಹುದು ಮತ್ತು ನಿಮ್ಮ ವಾಹಿನಿ ಉಳಿದವುಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಮನದಟ್ಟು ಮಾಡಿದರ ಪರಿಣಾಮವೇ ಇ ಬದಲಾವಣೆ.
ನೋಡಿ ಇವರು ಈಗ ಕನ್ನಡ ಹಾಡುಗಳನ್ನು ಹಾಕುತ್ತ ಇದ್ದೇವೆ ಎಂದು ಜಾಹೀರಾತು ಕೋಡುತ್ತ ಇದ್ದಾರೆ,ಅದ್ದರಿಂದ ನಂಬರ್ ಒಂದು ಆಗಿದ್ದಾರೆ.

( ಕೃಪೆ :- ಉದಯ ಟಿ.ವಿ ಮತ್ತು ಯೂಟುಬ್)

ಕನ್ನಡದಲ್ಲಿ ಕಾಮವಿಲ್ಲ(,) ಬರೀ ಫುಲ್‍ಸ್ಟಾಪ್(.)

ನಮ್ಮ ಕನ್ನಡ ಬಗ್ಗೆ ಗೊತ್ತೊ ಗೊತ್ತಿಲ್ಲದೇ ಒಂದು ಮಡಿವಂತಿಕೆಯನ್ನು ಮಾಡಿಕೊಂಡಿದ್ದೇವೆ, ಅಂದರೆ ಅದರ ಫಲವಾಗಿಯೇ
ನಮ್ಮ ಕನ್ನಡ ಕೇವಲ ಪ್ರಫುಲ್ಲ ಸಾಹಿತ್ಯಕ್ಕೆ ಸೀಮಿತ, ಪದ್ಯ-ಕಥೆ-ಕಾದಂಬರಿಗೆ ಬಿಟ್ಟರೆ ಬೇರೆ ಎನು ಬರೆಯಲು ಆಗುವದಿಲ್ಲ ಎಂಬ ಒಂದು ಬಂಧನದಲ್ಲಿ ಸಿಲುಕಿದ್ದೆವೆ. ಅದಕ್ಕೆ ನೋಡಿ ಕನ್ನಡ ಬಗ್ಗೆ ಹೇಳಿ ಅಂದರೆ ನಾವು ಮೊದಲು ಹೇಳುವುದು ನಮಗೆ ೭ ಜ್ಞಾನಪೀಠ ಬಂದಿವೆ, ಇಲ್ಲಾ ನಮ್ಮ ಕನ್ನಡ ರಾಜ್ಯೊತ್ಸವದ flex ಬ್ಯಾನರ್‍ಗಳಲ್ಲಿ ಆ ೭ ಜನರ ಭಾವಚಿತ್ರ ಹಾಕಿ ಸಂತೋಷ ಪಡುವುದೇ ನಮ್ಮ ಮಹತರ ಸಾಧನೆ ಎಂದು ಬೀಗುತ್ತೆವೆ.
ನನಗೆ ಪ್ರಶ್ನೆ ಬರುವುದು ನಮ್ಮ ಕಾಮಗಳನ್ನು ( ಕಾಮ ಅಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧವಲ್ಲ, ಮನುಷ್ಯನ ಪ್ರತಿಯೊಂದು ಆಸೆಯನ್ನು ನಾನು ಕಾಮವೆಂದು ಪರಿಗಣಿಸಿ, ಮುಂದೆ ಹಾಗೆ ಉಲ್ಲೇಖಿಸುತ್ತೆನೆ) ನಮ್ಮ ಕನ್ನಡದಲ್ಲಿ ತರಲು ನಾವು ಯಾಕೆ ಇಷ್ಟು ಮಡಿವಂತಿಕೆ ಮಾಡುತ್ತ ಇದ್ದೆವೆ ಅಂತ?.

ಈ ನಡುವೆ ಹೆಚ್ಚು ಪ್ರಚಲಿತ ವಿದ್ಯಮಾನವೆಂದರೆ ನಮ್ಮ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆ ಇಲ್ಲಾ ಬೇಡವೆ ಎನ್ನುವುದು. ಇದು ಇನ್ನೂ ನಮ್ಮಲ್ಲಿ ಪ್ರಶ್ನೆಯಾಗಿ ಉಳಿದಿರುವುದು ನಿಜಕ್ಕೂ ಶೋಚನೀಯ. ನಮ್ಮ ಸಂಸ್ಕೃತಿಗೆ ಇದು ಮಾರಕ ಎಂದು ವಾದಿಸುವ ಜನ ನಿಜಕ್ಕೂ ಆಷಾಡಭೂತಿ ತೋರುತ್ತಿದ್ದಾರೆ. ನಮ್ಮ ಹಳೆ ದೇವಸ್ಥಾನಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಗಳನ್ನು ನಾವು ಒಮ್ಮೆ ನೋಡಿದರೆ ನಮಗೆ ಆ ಕಾಲದಲ್ಲಿ ಇದ್ದ ಉದಾರತೆ ಮತ್ತು ಜನರ ತಿಳುವಳಿಕೆ ಬಗ್ಗೆ ತಿಳಿಯುತ್ತದೆ. ಒಬ್ಬ ಶಿಲ್ಪಿ ಒಂದು ಕಾಮಸೂತ್ರದ ಹತ್ತು ಹಲವು ಭಂಗಿಗಳನ್ನು ಮನನ ಮಾಡಿ ಕಲ್ಲಿಗೆ ಆ ರೂಪವನ್ನು ಕೋಡಬೇಕಿದ್ದರೆ ಅದು ಖಂಡಿತ ಅವನ ಒಬ್ಬನ ಜ್ಞಾನವಲ್ಲ, ಅದು ಅಂದಿನ ಸಮಾಜದ ವಿದ್ಯಮಾನ.

ತೆಲುಗುವಿನಲ್ಲಿ ಒಂದು ಗಾದೆ ಇದೆ, "ಬಚ್ಚಿಟ್ಟರೆ ಹಳಸಿ ಹೋಗುತ್ತದೆ" ಅಂತ, ಇದು ನಮ್ಮ ಇಂದಿನ ಸಮಾಜಕ್ಕೆ ನೈಜ ಕನ್ನಡಿ ಆಗಿದೆ. ನಾವು ನಮ್ಮ ಯುವ ಪೀಳಿಗೆ ಬಗ್ಗೆ ವಿಷಯವನ್ನು ಹಂಚಿಕೊಳ್ಳುದೇ ಇದ್ದರೆ ಅವರು ಆ ವಿಷಯಗಳನ್ನು ತಿಳಿದುಕೊಳ್ಳುವದಿಲ್ಲ ಅನ್ನುವ ಮೂಡನಂಬಿಕೆಗೆ ಎನು ಹೇಳಬೇಕು ?. ಇದರಿಂದ ನಮ್ಮ ಸಂಸ್ಕ್ರುತಿಯನ್ನು ರಕ್ಷಣೆ ಮಾಡುತ್ತ ಇದ್ದೇವೆ ಎಂದು ಪ್ರತಿಪಾದಿಸುವ ಜನ ಒಮ್ಮೆ ಇತರ ವಿಷಯಗಳ ಬಗ್ಗೆ ಗಮನ ಹರಿಸಬೇಕು.
ಅಂತರ್ಜಾಲದಲ್ಲಿ ದಿನಾ ದಿನಾ ಹೊಚ್ಚ ಹೊಸ update ಕೊಡುವ ಡೆಬೊನೆರ್ ಬ್ಲಾಗ/xboards.us ಒಂದು ಸಾಕು ನಮ್ಮ ಯುವಜನಾಂಗಕ್ಕೆ. ಇಂಥಾ ಬ್ಮಾಗ ಮತ್ತು websites ಇರುವ ತನಕ ನಮ್ಮ ಜನರಿಗೆ ಕಳಪೆ ಸರಕು ಸಿಗುವದರಲ್ಲಿ ಮೋಸವಿಲ್ಲ.
ಇದು ಬರೀ ಪಟ್ಟಕ್ಕೆ ಸೀಮಿತ ಎಂದು ನೀವು ಭಾವಿಸಿದ್ದರೆ, ಅದು ನಮ್ಮ ಜನರ ignorance ಪರಮಾವಧಿ. ಚಿಕ್ಕ ಚಿಕ್ಕ ಊರಿನಲ್ಲಿ
cyber cafe ನಲ್ಲಿ ಕುಳಿತ ಪ್ರೇಮಿಗಳು ONLINE TUTION ತೆಗೆದುಕೊಳ್ಳುವುದು ಇಂತಹ ಕಳಪೆ ವೆಬೆಸೈಟ್‍ಗಳಿಂದ.

ಅನೇಕ ಕನ್ನಡ ಪತ್ರಿಕೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಂದು ಕಾಲಂ ಇರುತ್ತದೆ, ಅದರಲ್ಲಿ ಒಬ್ಬರು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನನ್ನ ಗಮನಕ್ಕೆ ಬಂದ ಮತ್ತು ಹೆಚ್ಚು ಅವಾಂತರಗಳನ್ನು ಮಾಡಿಕೊಂಡು ಪ್ರಶ್ನೆ ಕೇಳುವುವರು ಹೆಚ್ಚು ಚಿಕ್ಕ ಊರಿನವರು. ಇವರಿಗೆ ಲೈಂಗಿಕ ಶಿಕ್ಷಣ ಕೋಡದಿರುವುದೇ ಹೆಚ್ಚು ಅವಘಡಗಳನ್ನು ಮಾಡಿಕೊಂಡು ತಮ್ಮ ಪ್ರಶ್ನೆಗಳನ್ನು ಯಾರ ಹತ್ತಿರ ಹಂಚಿಕೊಳ್ಳಲಾಗದೇ ಪತ್ರಿಕೆಗಳ ಮೊರೆ ಹೋಗುತ್ತಾರೆ. ಇಲ್ಲಿ ನನಗೆ ಅನಿಸುವುದು ನಮ್ಮ ಮನುಷ್ಯನ ಕಾಮಗಳನ್ನು ನಾವು ನಮ್ಮ ಭಾಷೆಯಲ್ಲಿ ಹೇಳದೇ ಇರುವುದೇ ನಮ್ಮ ಜನರಿಗೆ ಮಾಡುತ್ತಿರುವ ಒಂದು ಮೋಸ. ನಾನು ಸರಸಗಾಟಾಗಿ ನಮ್ಮ
ಭಾಷೆಯಲ್ಲಿ ಲೈಂಗಿಕ ವಿಷಯಗಳನ್ನು ಹೇಳುವ ಪುಸ್ತಕ ಇಲ್ಲಾ ಅಂತ ಅಲ್ಲ. ಆದರೆ ಅವುಗಳ ಗುಣಮಟ್ಟವಿಲ್ಲ ಎನ್ನುವುದು ಮತ್ತೆ ಹೆಚ್ಚು ವೈವಿಧ್ಯತೆ ಇಲ್ಲದೇ ಇರುವುದು ಕೊರಗು.

ಇದು ನಮ್ಮ ಮಡಿವಂತಿಕೆಯ ಫಲವಾದರೆ ಮುಂದೆ ನಮಗೆ ಕಾಣಸಿಗುವುದು ಇನ್ನೊಂದು ರೋಗ ಅದು, ನಮ್ಮ ಭಾಷೆಯಲ್ಲಿ ಕೆಲವು ವಿಷಯಗಳ ಹೇಳಲು ಸಾಧ್ಯವಿಲ್ಲ ಎಂದು ನಮ್ಮಲ್ಲಿ ನಾವೇ ಹಾಕಿಕೊಂಡ ಒಂದು ಬಂಧನ. ಮುಖ್ಯವಾಗಿ ಒಂದು ಜ್ಞಾನಹೀ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಆಂಗ್ಲಕ್ಕೆ ಮೊರೆ ಹೋಗಬೇಕು ಎಂದು ನಾವು ಸಮಾಜದಲ್ಲಿ ಬಿತ್ತಿ ನಮ್ಮ ಜನತೆಗೆ ಒಂದು ದೃಷ್ಟಿಯಲ್ಲಿ ಬೇರೆ ಭಾಷೆ ನಮಗಿಂತ ದೊಡ್ಡದು ಎಂಬ ತಪ್ಪು ಗ್ರಹಿಕೆಯನ್ನು ಹಂಚುತ್ತಿದ್ದೆವೆ.
ನಮ್ಮ ಕನ್ನಡ ಜನ ಬಯಸುವ ಎಲ್ಲಾ ಕಾಮಗಳು ಅಂದರೆ ಅವನು ಮೊಬೈಲ್ ತಂತ್ರಜ್ಞಾನ ಹಿಡಿದು ಲೈಂಗಿಕ ಎಲ್ಲಾ ವಿಷಯಗಳು ನಮ್ಮ ಭಾಷೆಯಲ್ಲೇ ಸಿಕ್ಕರೆ ನಮಗೆ ಇರುವ ಅನೇಕ ತಪ್ಪು ಗ್ರಹಿಕೆಗಳನ್ನು ದೂರ ಮಾಡುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು.ಎಲ್ಲಾ ಇಲ್ಲ ಅಂತ ಅಲ್ಲ, ಅವು ಇದ್ದರು ಜನರಿಗೆ ಮುಟ್ಟಿಲ್ಲ, ವನಸುಮಗಳಾಗಿ ಯಾರದೊ ಒಬ್ಬರ ಸ್ವತ್ತುಗಳಾಗಿವೆ. ನಾವು ಜುಟ್ಟಿಗೆ ಮಲ್ಲಿಗೆ ಹೂವಿನ ಸಾಹಿತ್ಯಕ್ಕೆ FULLSTOP ಹಾಕಿ, ಹೊಟ್ಟೆಗೆ ಹಿಟ್ಟು ತರುವ ಸಾಹಿತ್ಯಕ್ಕೆ ಕಾಮ(,) ಹಾಕಬೇಕು.






Thursday, April 19, 2007

ಕನ್ನಡ ಗ್ರಾಹಕ ಬಿಟ್ಟಿ ಅಲ್ಲ .....

ಗೆಳೆಯರೆ,

ಅನೇಕ ಬಾರಿ ನಿಮ್ಮ ಬಳಸುವ ಕ್ರೆಡಿಟ್ ಕಾರ್ಡ್ ಇಲ್ಲಾ ಸಂಚಾರಿ ದೂರವಾಣಿ ತೊಂದರೆ ಆದರೆ ಮೊಡಲು ನೀವು ಸಂಪರ್ಕಿಸುವುದು ಅದರ ಗ್ರಾಹಕ ಸೇವೆಗೆ. ಗಮನಿಸಿ ನೋಡಿದರೆ ಎಲ್ಲಾ ಗ್ರಾಹಕ ಸೇವೆಗಳು ಸ್ವಾಭಾವಿಕವಾಗಿ ಹಿಂದಿ/ಇಂಗ್ಲೀಷ್ ನಲ್ಲಿ ಇರುತ್ತದೆ. ನಮ್ಮ ಅನೇಕ ಕನ್ನಡಿಗರು ಇಲ್ಲಿ ಕನ್ನಡ ಬಳಸುವುದೇ ಇಲ್ಲ, ಯಾಕೆ ಅಂತ ಕೇಳಿದರೆ ಅವರು ಇಂಗ್ಲೀಷ್ ನಲ್ಲಿ ಶುರು ಹಚ್ಚಿಕೊಂಡರು ಅಂತ ನೆವ ಕೊಡುತ್ತಾರೆ, ಇಲ್ಲಾ ನಾನು ಓದಿರುವ ನಾಗರಿಕ ಸುಮ್ಮನೆ ಯಾಕೆ ಅವರ ದೃಷ್ಟಿಯಲ್ಲಿ ಕೆಳಕ್ಕೆ ಹೋಗುವುದು ಎಂದು ಭಾವಿಸುತ್ತ್ತಾರೆ . ಇದಕ್ಕೆ ನೋಡಿ ನಮ್ಮ ಅನೇಕ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ.

ನಮ್ಮ ಅಂತರ್ಜಾಲದ ಅನೇಕ ಗೆಳೆಯರು ಇದರ ವಿರುದ್ಧ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದಾರೆ,ಆದರೆ ಇಂದು ಗ್ರಾಹಕ ಸೇವೆಗಳು ತುಂಬಾ ಇವೆ. ಸರಿ ಮಾಡಿದ್ದು ಒಂದಾದರೆ ಮಾಡಬೇಕಾಗಿರುವುದು ಸಾವಿರ. ಇತ್ತಿಚಿಗೆ ದೊಡ್ಡ ಮಟ್ಟದಲ್ಲಿ
ಸುದ್ದಿಗೆ ಬಂದ ವಿಷಯವೆಂದರೆ ಬ್ಯಾಂಕಿನ ಗ್ರಾಹಕ ಸೇವೆಯಲ್ಲಿ ಕನ್ನಡ ನಿರ್ಲಕ್ಷತನ. ಯಾವುದೇ ಬ್ಯಾಂಕಿಗೆ ಕರೆ ಮಾಡಿ ನೋಡಿ
ನಿಮಗೆ ಕನ್ನಡದಲ್ಲಿ ಮಾತನಾಡುವ ಬ್ಯಾಂಕಿಗ್ ಆಫಿಸರ್ ಸಿಗುವುದೇ ಇಲ್ಲ, ಸಿಕ್ಕ ಮೇಲೆ ನಾವೇ ಕರೆ ಮಾಡುತ್ತೆವೆ ಅಂತ ಬೊಗಳೆ ಬಿಡುವ ಈ ಬ್ಯಾಂಕ್‍ಗಳು ನಿಮಗೆ ಕರೆ ಮಾಡಿದರೆ ಕೇಳಿ ನೋಡಿ.
ಇದು ಒಂದು ಬ್ಯಾಂಕಿನ ಸಮಸ್ಯೆ ಅಲ್ಲ, ಎಲ್ಲಾ ಬ್ಯಾಂಕುಗಳ ಕಾಲಸೆಂಟರ್ ಇರುವುದು ಚನ್ನೈನಲ್ಲಿ, ಅಲ್ಲಿಯ ಜನರನ್ನು ಕೆಲಸಕ್ಕೆ
ತೆಗೆದುಕೊಂಡಿರುವ ಆ ಬ್ಯಾಂಕಿನವರು, ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಾದರು ಮಾತನಾಡಿ ಸಹಾಯ ಮಾಡುತ್ತೆವೆ ಅನ್ನುತ್ತಾರೆ. ಇದನ್ನು ಪ್ರತಿಭಟಿಸಿ ಅನೇಕ ಮಿತ್ರರು ಅವರ ಮುಖ್ಯಸ್ಥರಿಗೆ ಪತ್ರ ಬರೆದರೆ ಅವರಿಂದು ಬರುವ ಉತ್ತರ ಸುಮ್ಮನೆ ಕಣ್ಣು ಒರೆಸುವ ತಂತ್ರ, ನಾವು ಈ ವಿಷಯವನ್ನು ತತ್ಸಂಬದ ಅಧಿಕಾರಿಗಳಿಗೆ ರವಾನಿಸಿದ್ದೆವೆ,ಇಲ್ಲಾ ನಿಮ್ಮ ಸಂಖ್ಯೆ ಕೊಡಿ ಕರೆ ಮಾಡುತ್ತೆವೆ ಎನ್ನುತಾರೆ. ಅವರ ಕಛೇರಿಯಿಂದ ನೂರಾರು ಕರೆ ಬರುತ್ತದೆ,ಪ್ರತಿಯೊಬ್ಬರಿಗು ಕಥೆ ಹೇಳಬೇಕು, ಎನು ಕ್ರಮ ಕೈಗೊಳ್ಳುವಿರಿ, ಎನು ಗಡವು ಎಂದು ಕೇಳಿದರೆ ಉತ್ತರವಿಲ್ಲ. ನನಗೂ ಸಹ ಇಂತಹ ಮುಜುಗರ ಆಯಿತು, ಆದರೆ ಅವರ ಅಧಿಕಾರಿಗಳನ್ನು ಚೆನ್ನಾಗಿ ತರಾಟೆ ತೆಗೆದುಕೊಂಡು,ಸುಮ್ಮನೆ ಆಶ್ವಾಸನೆಗಳಿಗೆ ನಾನು ಬಗ್ಗುವದಿಲ್ಲ. ಎನು ಕ್ರಮ ಕೈಗೊಳ್ಳುವಿರಿ ಎಂದು ಮೈಲ್ ಕಳಿಸಿ, ಇಲ್ಲವಾದರೆ ಇದನ್ನು ನಿಮ್ಮ ಮುಖ್ಯ ಅಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ಹೇಳಿದಾಗ ಸ್ವಲ್ಪ ತಣ್ಣಗಾಗಿ ಹೇಳಿದ್ದು ಕೇಳುತ್ತಾರೆ. ಸ್ವಲ್ಪ ದಿನಗಳ ಹಿಂದೆ ಇದೇ ಅಧಿಕಾರಿಗಳು ಕನ್ನಡ ಸೇವೆ ನಾವೇನು ಕೊಡಬೇಕಾಗಿಲ್ಲ ಅಂತ ಹೇಳುತ್ತ ಇದ್ದರು. ಪುಣ್ಯಕ್ಕೆ ಯಾರೋ ಮಿತ್ರರು ಇದನ್ನು ಆರ್.ಬಿ.ಐ ಗಮನಕ್ಕೆ ತಂದು, ಅವರು ಇವರಿಗೆ ನಿರ್ದೇಶಿಸಿದ ಮೇಲೆ ಇವರಿಗೆ ತಮ್ಮ ಹೊಣೆ ಗೊತ್ತಾಗಿದೆ. ನನ್ನ ಸಹಾಯಕ್ಕೆ ಬಂದಿದ್ದು ಕೂಡ ಇದೇ ...

ನಮ್ಮ ಭಾಷೆಯಲ್ಲಿ ನಾವು ಮಾತನಾಡಲು ಅವರು ಸೌಕರ್ಯ ಕೊಡಬೇಕು,ಇದು ನಮ್ಮ ಹಕ್ಕು ಮತ್ತು ಅವರ ಹೊಣೆ.
ಅವರ ಕಾಲ್ ಸೆಂಟರ್ ಇಲ್ಲಿರಲಿ ಇಲ್ಲಾ ಜಪಾನ್ ನಲ್ಲಿ ಇರಲಿ, ಅದು ನಮಗೆ ಅನವಶ್ಯ. ಕರ್ನಾಟಕದಲ್ಲಿ ಅವರು ಕಾರ್ಯ ನಿರ್ವಹಿಸುತ್ತ ಇದ್ದರೆ ಅವರು ಕನ್ನಡ ಗ್ರಾಹಕ ಸೇವೆ ಕೋಡಲೆ ಬೇಕು.ಕೊಡದೆ ಇದ್ದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಇಲ್ಲಾ "DENIAL OF SERVICE" ಅಂತ ಜನರ ಗಮನಕ್ಕೆ ತನ್ನಿ.

ನನಗೆ ಸಹಾಯ ಮಾಡಿದ ಪತ್ರದ ಸಾರಂಶ ಇಲ್ಲಿದೆ.

~ICh.1 Mlen41~ cnT ChI(,U~q OFFICE OF THE BANKING OMBUDSMAN
( en ..•iGen) (KARNATAKA)
~~~Cf) ~ Reserve Bank of India Building~m'T1i~, 10/3/8, ~TT ~ 2nd Floor, 10/3/8, Nrupathunga Road,~ -560 001. -Bangalcre-· 560-001.---
tcffi : } 080-22244047
Fax :
22275020 ~ : } 22275629 .
Telephone: Extn. 441, 442, 443, 445 & 446 E-Mail:
bobangalore@rbLorg.in
OBO(BG)No -~ 41 ~ 01/04/001/2006-07 January 16, 2007
The Manager-Customer CareCitibankCardme ers Services
P.O x 4830 A a Salai P.Ohennai-600002
Dear Sir,
Transaction in Reaional Lanauaaes bv Private Sector/Foreian Banks ___ elease_Fefeeto~vourJettecl'io_00_3~9Q5-8_63LGDI\L8_0.6L2006 ,_
dated_~9yerTlbe.r:....a(jd r_es_s~_dto Shri C. K Raman, Bangalore on the captioned subject. In this connection, we invite a reference to Reserve Bank of India instructions vide Circulars DBOD.No.
Leg.BC.10/466(IV)-87 dated March 23,1987 and DBOD.No.Leg.BC.52/09.07.005/200506 to Private Sector/Foreign Banks. We advise you to implement the recommendations
made therein for the convenience of the customers and avoid restrictive practices. This is issued with the approval of the Hon'ble Banking Ombudsman.
Yours faithfully,
(Reeny Ajith)Secretary
EndtOBO(BG)No 3 L, U 01/04/001/2006-07 of dateCopy forwarded for information to Shri Vishwanath H.S, Philips Electronics India Ltd., #1, Murphy Road, Halasuru, Bangalore,-560008 with reference to his e-mail datedNovember 28,2006.
(~Secretary)



Thursday, March 22, 2007

ಬೇಡ ನಂಟಿಗೆ ಹೆಸರು ..ಯಾಕೆ ಸುಮ್ಮನೆ ..

ಮುಂಗಾರು ಮಳೆಯಲ್ಲ್ಲಿ ನೆನೆಯುವಾಗ ಎಲ್ಲೊ "ಅರುಳುತಿರು ಜೀವದ ಗೆಳೆಯ" ಹಾಡು ಹೆಚ್ಚು ಕೇಳಿರಲಿಲ್ಲ. ಮೊನ್ನೆ ಬೇರೆ ವಿಧಿಯಿಲ್ಲದೆ ಕೇಳುತ್ತಿದ್ದೆ, ಒಮ್ಮೆ ಕೇಳಿದ ಒಡನೆ ಅನಿಸಿದ್ದು, ತಥ್ ಇಂಥಾ ಒಳ್ಳಯ ಹಾಡನ್ನು ಮಿಸ ಮಾಡಿಕೊಂಡೆ ಅಂತ ನನ್ನನ್ನು ನಾನೇ ಬೈದುಕೊಂಡೆ. ಇ ಹಾಡು ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ನನ್ನ ಮನದಾಳವನ್ನು ಮುಟ್ಟಿತು.
ನಾನು ಅನೇಕ ಬಾರಿ ಅಂದು ಕೊಂಡಿದ್ದೆ, ಯಾಕೆ ನಾವು ಪ್ರತಿಯೊಂದು ಸಂಭಂದಕ್ಕೆ ಹೆಸರು ಕೊಡುತ್ತೆವೆ, ಒಂದು ಪರಿಧಿಯಲ್ಲಿ ಹಾಕಿ ಯಾಕೆ ತೂಗುತ್ತೆವೆ??. ನಂಟಿಗೆ ಹೆಸರು ಬೇಕೆ ಅಂತ ಮನದಾಳ ಮಾತುಗಳನ್ನು ಒಂದು ಕಾವ್ಯವಾಗಿ ಬರೆದರೆ ಇಷ್ಟು ಚೆನ್ನಾಗಿ ಯಾರು ಬರೆಯಲಾರರು ಅಂತ ಜಯಂತ್ ಕಾಯ್ಕಿಣಿ ಅವರು ತೋರಿಸಿಕೊಟ್ಟಿದ್ದಾರೆ.
ಚಿಕ್ಕ ಮಗುವಿಗೆ ಬೆಳೆದ ಹಾಗೆ ಇವನು x, ಇವನು y ಅಂತ ಹೇಳಿ ಒಂದು ಚೌಕಟ್ಟಿನಲ್ಲಿ ತೂಗುತ್ತವೆ. ಅದರಲ್ಲೂ ಬೆಳೆದ ಹೆಣ್ಣು ಮಕ್ಕಳಿಗೆ ವಯಸ್ಸಿನ ಹುಡುಗರೆಲ್ಲಾ ಅಣ್ಣ-ತಮ್ಮ ಅಂತ force ಮಾಡಿ ಒಂದು ಸೀಮಿತ ಪರಿಧಿಯಲ್ಲಿ ಸಂಭಂದಗಳನ್ನು
ಬಂಧಿಸುಡುತ್ತೆವೆ.

ಅನೇಕ ಬಾರಿ ಕಾಮವಿಲ್ಲದ ಪ್ರೀತಿ ಇರಲಾರದು ಎಂದು ನಾವು ಇಲ್ಲಿ ತನಕ ಹೇಳಿಕೊಂಡು ಬಂದಿದ್ದೇವೆ, ಯಾಕೆ ಅಂದರೆ ಅದಕ್ಕೆ ಒಂದು ಹೆಸರಿಲ್ಲ. ಹೆಸರಿಲ್ಲದ ಒಂದು ನಂಟು ನಮ್ಮ ಸಮಾಜದಲ್ಲಿ ಹಾದರಕ್ಕೆ ಸಮಾನ ಅಂತ ತಪ್ಪು ತಿಳುವಳಿಕೆ ಇದೆ.
ಗಂಡು-ಹೆಣ್ಣಿನ ಸಂಬಂಧಗಳು ಒಂದೇ ಪರಿಧಿಯಲ್ಲಿ ನೋಡುವ ನಮ್ಮ ಸಮಾಜದ ಸೀಮಿತ ಬೆಳವಣಿಗೆ ನಮ್ಮ ದೌರ್ಭಾಗ್ಯ.

ಹಿಂದಿನ ನೆನಪುಗಳನ್ನು ಮರಿಯಲು ಆಗುವದಿಲ್ಲ,ಅದು ಬೇಡವೆಂದರೂ ಮನಸ್ಸಿನ ಮೂಲೆಯಲ್ಲಿ ಬಾವುಲಿಯಾಗಿ ನೇತನಾಡುತ್ತ ಇರುತ್ತದೆ. ಸಂಧರ್ಭಕ್ಕೆ ಅನುಸಾರವಾಗಿ ಅದು ಹಾರಿ ಮನಸ್ಸನ್ನು ಹಿಡಿಯುತ್ತದೆ. ಇದನ್ನು ತುಂಬಾ ಚೆನ್ನಾಗಿ ಎ.ಎನ್.ಮೂರ್ತಿ ರಾಯರು ಚೆನ್ನಾಗಿ ಹೇಳಿದ್ದಾರೆ. ನಾವು ಒಬ್ಬರನ್ನು ಮರೆತುತ್ತೆವೆ ಅನ್ನುವುದೇ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ.
ಅಭಿಮಾನಕ್ಕಿಂತ ಅಪಮಾನವೇ ನಮಗೆ ಹೆಚ್ಚು ಜ್ಞಾಪಕದಲ್ಲಿ ಇರುತ್ತದೆ ಎಂದು ಹಿಂದೆ ರವಿ ಬೆಳೆಗರೆಯವರ ಒಂದು ಲೇಖನದಲ್ಲಿ ಓದಿದ ನೆನೆಪು. ಹೀಗೆ ಮರೆಯಲು ಆಗದ ಸಂಭಂದ ಅದರ ನೆನೆಪುಗಳಿಗೆ ಒಂದು ಹೆಸರು ಇರುವದಿಲ್ಲ ಮತ್ತು ಅದು ತಪ್ಪು ಎನ್ನುವ ಪ್ರಜ್ಞೆಯೇ ನಮ್ಮ ಸಮಾಜವನ್ನು ಕಾಡುತ್ತಿರುವುದು.

ಹಿಂದೆ ಲೈಲಾ-ಮಜನು ತರ ಪ್ರೀತಿಸಿದ್ದ ಪ್ರೇಮಿಗಳು ಬಹಳ ದಿನಗಳ ನಂತರ ಒಬ್ಬರನ್ನು ಸಂಧಿಸಿದರೆ ಕಣ್ಣು ಕೊಟ್ಟು ನೋಡದೆ
ತಪ್ಪಿಸಿಕೊಂಡು ಓಡಾಡುವ ಪ್ರಮೇಯ ಬರುವುದೇ ನಮ್ಮ ಜನರಲ್ಲಿ ಇರುವ ಒಂದು ತಪ್ಪು ತಿಳುವಳಿಕೆಯ ಪಾಪ ಪ್ರಜ್ಞೆಯಿಂದ.

ಮತ್ತೆ ಹಾಡಿಗೆ ಬರುತ್ತ, ಪ್ರೇಮ-ಪ್ರೀತಿ ಎನ್ನುವ ಹೆಸರುಗಳನ್ನು ಬಿಟ್ಟು,ನಂಟಿಗೆ ಒಂದು ಹೆಸರನ್ನು ಕೊಡುವುದು ಬಿಟ್ಟು ಹಾಗೆ ಇರೋಣ ಎನ್ನುವುದು ವಿವಿಧ ಉದಾಹರಣೆಗಳಿಂದ ಬಿಂಬಿತವಾಗುತ್ತದೆ. ಇದು ಬಹಳ ಸುಂದರವಾಗಿ ಮೂಡಿ ಬಂದಿರುವುದು ನಮ್ಮ ಭಾಗ್ಯವೇ ಸರಿ.


ಬಾಡದಿರು ಸ್ನ್ಹೇಹದ ಹೂವೇ ಪ್ರೇಮದ ಬಂಧನದಲ್ಲಿ
ಮನಸ್ಸಲ್ಲೇ ಇರಲಿ ಭಾವನೆ.
ಮಿಡಿಯುತರಲಿ ಮೌನವೇನೆ ..ಹೀಗೆ ಸುಮ್ಮನೆ.

ಬಾಳ ದಾರಿಯಲ್ಲಿ ಬೇರೆಯಾದರೂ ಚಂದಿರ ಬರುವುನು ನಮ್ಮ ಜೊತೆ
ಕಾಣುವೆನು ಅವನಲ್ಲಿ ನಿನ್ನನ್ನ ..

Tuesday, March 20, 2007

ಭಾಷಾಭಿವೃದ್ದಿ...ಒಂದು ಚಿಂತನೆ.-೨

ಗೆಳೆಯರೆ ಇದರ ಬಗ್ಗೆ ನಾನು ಹೆಚ್ಚು ಯೋಚನೆ ಮಾಡಿದ ಹಾಗೆ ಹೊಳೆದ ಇನ್ನೊಂದು ವಿಷಯವೆಂದರೆ ಇದು ಜಗತ್ತಿನ ಎಲ್ಲಾ ಕಡೆ ಕಂಡು ಬರುವ ಸಾಮನ್ಯ ಪ್ರಕ್ರಿಯೆ. ಮುಖ್ಯವಾಗಿ "ಹ-ಕಾರ" ಬದಲಾಗಿ "ಅ-ಕಾರ" ಬಳಸುವಿಕೆ ಮುಂದುವರೆದ US of A /UK ನಲ್ಲಿ ಕೂಡ ಕಂಡು ಬರುತ್ತದೆ. ಅಲ್ಲಿ ಕೂಡ ಹ-ಕಾರ ಬದಲಾಗಿ "ಅ-ಕಾರ" ಬಳಸುವುದನ್ನು ಕಾಣಬಹುದು.
Arri == Harry
Aaton = Hatton
Appy = Happy
Arriflex = Harryflex
ave= have..
ಹೀಗೆ ಸಾಲು ಸಾಲು ಪದ ಬಳಕೆಗಳನ್ನು ನೀವು ಕಾಣಬಹುದು. ಇದನ್ನು ಇನ್ನೊಂದು ಭಾಗದ ಜನ ಚೆನ್ನಾಗಿ ಆಡಿಕೊಂಡಿರುವುದು ಸರ್ವೆ ಸಾಮನ್ಯ. ಹಿಂದೆ ಬ್ರಿಟನ್‍ನಲ್ಲಿ ಇದನ್ನು ಆಡಿಕೊಂಡು ಒಂದು ಟಿ.ವಿ ಕಾರ್ಯಕ್ರಮ ಬರುತ್ತಿತ್ತು, ಅದರ ಹೆಸರೆ Some mothers do ave them. ಇದು ಒಂದು ಹಾಸ್ಯ ಕಾರ್ಯಕ್ರಮ,ಇದರಲ್ಲಿ ಭಾಷ ಬಳಕೆಯನ್ನು ಲೇವಡಿ ಮಾಡುವುದೇ ಹಾಸ್ಯವಾಗಿತ್ತು. ಅಷ್ಟು ಅಲ್ಲದೇ ಕೆಲವು ಸಲ ಕೆಣಕಲು ಬರೆಯುವ ಲೇಖನಗಳಲ್ಲಿ ಇದರ ಬಳಕೆ ಕಂಡು ಬರುತ್ತದೆ.
ಹಿಂದೆ ಒಂದು ಸಲ " Appy Arry" ಅಂತ ಒಂದು ಕಾಲಚೆಂಡು ಆಟಗಾರನ ಬಗ್ಗೆ ಅವನ ಕೆಟ್ಟ ಆಟ ಟೀಕಿಸಲು ಬಳಸಿದ್ದು ಹಳೆಯ ಸುದ್ದಿ. ಇದನ್ನು ಗಮನಿಸಿ ನೋಡಿದರೆ ನಮ್ಮ ಕನ್ನಡ ಲೇಖನಗಳಲ್ಲೂ "ಹೋರಾಟ" ಮತ್ತು "ಓರಾಟ" ಅಂತ ಲೇವಡಿ ಮಾಡುವುದು ಕಂಡು ಬರುತ್ತದೆ.

ಹಾಗಿದ್ದರೆ ಇದಕ್ಕೆ ಎನು ಕಾರಣ ??

ಜಗತ್ತಿನಲ್ಲಿ ಭಾಷ ಬಳಕೆ ಎರಡು ಪ್ರಭೇದಗಳಾಗಿ ಮಾರ್ಪಟ್ಟಿದೆ, ಕೆಳವರ್ಗ ಮತ್ತು
ಮೇಲ್ವರ್ಗ ಜನರ ಭಾಷೆ. ಮೇಲ್ವರ್ಗದವರಿಗೆ ತಾವು ಮಾತನಾಡಿದ್ದೆ ಸರಿ, ಬೇರೆ ಜನರು ತಪ್ಪು ಮಾಡುತ್ತ ಇದ್ದಾರೆ,ಅದನ್ನು ಆಡಿಕೊಳ್ಳುವುದು ಸಾಮನ್ಯವಾಗಿದೆ. ಇದನ್ನು ಹೆಚ್ಚಾಗಿ ಬ್ರಿಟನ್ ಜನರಲ್ಲಿ ಕಾಣಬಹುದು, ಅವರು ತಮ್ಮ ಭಾಷೆಯಲ್ಲಿ ಒಂದು ಪ್ರಭೇದವನ್ನು ಸಹಿಸರು, ಅವರ ಪ್ರಕಾರ ಪ್ರಭೇಧಗಳೆಲ್ಲಾ ಹಾದರದಿಂದ ಹುಟ್ಟಿದವು ಅಂತ ತಾತ್ಸರ. " NOON and MOON"
ಇದನು ನಾವು ನೂನ್ ಮತ್ತು ಮೂನ್ ಎಂದು ಉಚ್ಚರಿಸಿದರೆ, BBC ಇದನ್ನು ನ್ಯೂನ್ ಮತ್ತು ಮ್ಯುನ್ ಎಂದು ಉಚ್ಚರಿಸುತ್ತಾರೆ.

ಅದ್ದರಿಂದ ನಾವು ಅವರ ಗುಲಾಮಿತನವನ್ನು ಬಿಟ್ಟು "ಅ-ಕಾರ" ದಿಂದ ಬಳಸುವ ಬಯಲು ಸೀಮೆ ಜನರ ಪದಗಳನ್ನು
ಸ್ವಾಗತಿಸಬೇಕು.

Tuesday, February 27, 2007

ಭಾಷಾಭಿವೃದ್ದಿ...ಒಂದು ಚಿಂತನೆ.

ಜಗತ್ತಿನಲ್ಲಿ ಭಾಷೆಯಲ್ಲಿ ಮುಖ್ಯ ಅಂಶ ಕಾಣುವದೆನೆಂದರೆ ಕಾಲಕ್ರಮೇಣ ಅದರಲ್ಲಿ ಬದಲಾವಣೆ,ಇದು ನಿರಂತರ ಮತ್ತು ಸ್ವಾಭಾವಿಕ. ಭಾಷೆಯಲ್ಲಿ ಮೂಲ ರೂಪ ಅನೇಕ ಬಾರಿ ಬದಲಾವಣೆಗೊಂಡು ಇನ್ನೊಂದು ರೂಪವನ್ನು ತಾಳಿದೆ,ಇದ್ದ ರೂಪ ಹೋಗುವುದು,ಇನ್ನೊಂದು ಹೊಸ ರೂಪ ಬರುವುದು ನಿತ್ಯ ನಡೆಯುವ ಘಟನೆಗಳು.

ಇಂಥ ಬದಲಾವಣೆಯನ್ನು ತಪ್ಪು-ಸರಿ ಎಂದು ಅಳೆಯಲು ಹೋಗಬಾರದು,ರೂಪಾಂತರಕ್ಕೆ ಅನೇಕ ಕಾರಣಗಳಿರುತ್ತದೆ,ರೂಪಾಂತರ ರಾತ್ರೊ-ರಾತ್ರಿ ಆಗುವ ಒಂದು ಪ್ರಕ್ರಿಯೆ ಅಲ್ಲ. ಅನೇಕ ವರುಷ,ಕೆಲವು ಸಾರಿ ಶತಮಾನಗಳೇ ಬೇಕಾಗಬಹುದು. ಮಹಾತ್ಮನವರು ಹೋಗಿ ಮಹಾತ್ಮವರು ಆಗಿದೆ, ಇದನ್ನು ಸದೃಶಕಾರಲೋಪ ಎನ್ನುತ್ತಾರೆ, ಹಾಗೆ ಕಾಗದ ಹೋಗಿ ಕಾದಗ ಆಗಿದೆ. ಇದನ್ನು ವರ್ಣಪಲ್ಲಟ ಎನ್ನುತ್ತಾರೆ. ಗಮನಿಸಿನೋಡಿ ಅಕ್ಷರಗಳು ಹಿಂದೆ ಮುಂದೆ ಆಗುತ್ತದೆ. ಅನೇಕ ಬಾರಿ ಪ್ರತಿ ಮನುಷ್ಯನಿಗೂ ತಾನು ಆಡುವ ಭಾಷೆಯಲ್ಲಿ ವರ್ಣಪಲ್ಲಟ ಮಾಡುವುದು ಸರ್ವೆಸಾಮನ್ಯ. ಅವಸರವಾಗಿ ಮಾತನಾಡುವಾಗ ಇದು ಹೆಚ್ಚು ಆಗುತ್ತದೆ, ಬಹುಶ ವರ್ಣಪಲ್ಲಟವೇ ಉಳಿದಿರಬಹುದು.

ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಈ ರೀತಿ ಬದಲಾವಣೆ ಆದಾಗ ಮೂಲರೂಪ ಹಾಗು ಬದಲಾದ ರೂಪ ಎರಡನ್ನು ಬಳಸಿಕೊಳ್ಳಬಹುದು. ಹಿಂದೆ ಹೇಳಿದ ಹಾಗೆ ರೂಪಾಂತರಕ್ಕೆ ದ್ವನಿಯೇ ಮುಖ್ಯ ಅಂಶವೆಂದರೆ ತಪ್ಪಾಗಲಾರದು. ಭೌಗೋಳಿಕವಾಗಿ ಭಾಷೆ ಕೂಡ ಅನೇಕ ಪ್ರಭೇದಗಳನ್ನು ಪಡೆದಿದೆ ಅದರಲ್ಲಿ ""ಪ್‍ವು" "ಅ" ಆಗಿ ಪರಿವರ್ತನೆಯಾಗಿರುವುದು. ಅರಸೀಕೆರೆ,ಹಾಸನ,ಮೈಸೂರಿನ ಕೆಳಭಾಗದ ಜನರಲ್ಲಿ ಇದು ಹೆಚ್ಚು ಕಾಣುತ್ತದೆ. ಇದು ತಪ್ಪಲ್ಲ,ಇದು ಸ್ವಾಭಾವಿಕ. ಅದನ್ನು ಹೀಯಾಳಿಸಬಾರದು,ಆ ಪದಗಳನ್ನು ನಮ್ಮ ಪದ ಭಂಡಾರದಲ್ಲಿ ಇಟ್ಟುಕೊಳ್ಳಬೇಕು. ಸಂದರ್ಭಕ್ಕೆ ತಕ್ಕ ಹಾಗೆ ಇವುಗಳನ್ನು ಬಳಸಿಕೊಳ್ಳುವುದು ನಮಗೆ ಬಿಟ್ಟಿದ್ದು. ಉದಾ:- ಕಾಲು ಎಂದರೆ ೨ ಅರ್ಥವಿದೆ,ಒಂದು ವಾಕ್ಯದಲ್ಲಿ ಬಳಸುವ ಬಳಕೆಯಿಂದ ಅದರ ಅರ್ಥ ಬದಲಾಗುತ್ತದೆ. ಹಿಂದೆ ಪಾಲುವಿನ ಮೂಲರೂಪಕ್ಕೆ ಬೇರೆ ಅರ್ಥ ಕೂಡ ಬಂದಿದೆ,ಆದರೆ ೨ ಅರ್ಥಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು.


ಅನೇಕ ಬಾರಿ ಕಾಲಕ್ರಮೇಣ ಶಬ್ಧಗಳು ಕೂಡ expire ಆಗುತ್ತವೆ ಅಂದರೆ ತಪ್ಪಾಗಲಾರದು, ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಪದಗಳು ಆಗಿನ ಸಮಾಜದ ವಸ್ತುಗಳ ಹೆಸರುಗಳು ಇಂದು ಕೇಳಸಿಗದು,ಕೇಳಿದರೂ ಅದರ ಅರ್ಥವನ್ನು ಮನದಲ್ಲಿ ಚಿತ್ರಣ ಬರದು, ಮುಂದೆ ಇದರ ಹೊಸ ಪದಗಳು ಹಳೆಯ ಪದಗಳನ್ನು ಹಿಂದೆ ಹಾಕುತ್ತವೆ. ಭಾಷೆಯ ಬದಲಾವಣೆಯನ್ನು TIME and SPACE ಗಳಲ್ಲಿ ಅಳೆಯಬಹುದು, ಅಂದರೆ ಭಾಷೆಯ ಬದಲಾವಣೆಗೆ ಕಾಲ ಮತ್ತು ದೇಶಗಳೆ ಕಾರಣ.ಒಂದು ಸಂಸಾರ ಹೇಗೆ ಬೇರೆಯಾಗಿ ಬೇರೆ ಬೇರೆಯಾಗಿ ವಾಸಿಸಿ ಅವರದೇ ಹೊಸ ಸಂಸಾರದ ಕಟ್ಟ್ಟಳೆಯನ್ನು ತರುತ್ತಾರೊ,ಹಳೆ ಪದ್ಧತಿಗಳನ್ನು ಹೊಸ ಪದ್ದತಿಗಳನ್ನಾಗಿ ಮಾಡಿಕೊಳ್ಳುತ್ತಾರೋ ಹಾಗೆ ಭಾಷೆಯಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣಬಹುದು. ಇದನ್ನು ತಮಿಳ್ ಭಾಷೆಯಲ್ಲಿ ಚೆನ್ನಾಗಿ ಕಾಣಬಹುದು, ದಕ್ಷಿಣ ಆಫ್ರಿಕಾಗೆ ಹೋದ ತಮಿಳರ ಭಾಷೆ,ಶ್ರೀಲಂಕಾದಲ್ಲಿ ನೆಲಸಿರುವ ಜನರ ಭಾಷೆ, ಮತ್ತು ನಮ್ಮ ತಮಿಳುನಾಡಿನ ಜನರ ಭಾಷೆಯನ್ನು ನೋಡಿದರೆ, ೩ ಬೇರೆ ಭಾಷೆಯಾಗಿ ಕಾಣತ್ತದೆ. ಇಲ್ಲಿ ಕಾಲ-ಮತ್ತು-ದೇಶಗಳ ಅಂತರವೇ ಮುಖ್ಯ ಕಾರಣ. ಒಂದು ಪ್ರದೇಶಕ್ಕೆ ಹೋಗಿ ನೆಲಸಿರುವವರ ಮೇಲೆ ಅಲ್ಲಿನ ಬಾಹ್ಯ ಅಂಶಗಳು ಬಹಳ ಪ್ರಭಾವ ಮಾಡುತ್ತದೆ.ಇದಕ್ಕೆ ನಾನು ಹೇಳಿದ್ದ ಮೈಸೂರಿನ ಕೆಳ ಇರುವರಿಗೆ "ಅ" ಮತ್ತು "ಹ" ಕಾರ ಉಚ್ಚಾರಣೆಯ ಬಗ್ಗೆ ಬೇಧವಿದೆ. ಇದು ಇಂದಿನ ಬದಲಾವಣೆಯಲ್ಲ, ಶತನಾನಗಳಷ್ಟು ಹಳೇಯದು ಎಂದು ಪಂಡಿತರ ಅಂಬೋಣ. ೧೯೪೦ ದಶಕದಲ್ಲೇ ನಮ್ಮ ಕೈಲಾಸಂ ಇದರ ಬಗ್ಗೆ ಜೋಕ್ ಮಾಡಿದ್ದಾರೆ.


ಈ ಅಂಶ ಅಲ್ಲಿಂದ ಆಚೆ ಹೋಗದಿರಲು ಪ್ರಕೃತಿಯು ಒಂದು ಕಾರಣವಿರಬಹುದು. ಈ ಬದಲಾವಣೆ ಅಲ್ಲಿಂದ ಆಚೆ ಹೋಗದಿರಲು ಸುತ್ತ ಇರುವ ಬೆಟ್ಟ-ಗುಡ್ಡ ಕಾರಣವಿರಬಹುದು. ಇದು ಕೂಡ ನಮ್ಮ ಒಂದು ಭಾಷೆಯೇ ಎಂದು ನಾವು ಮರೆಯಬಾರದು. ಒಂದು ಉಪಭಾಷೆ ಪ್ರಾದೇಶಿಕ,ಸಾಮಾಜಿಕಗಳಿಂದ ಒಡೆಯುತ್ತದೆ, ಹಿಂದೆ ದ್ರಾವಿಡ ಭಾಷೆಯಲ್ಲಿ ದಕ್ಶಿಣ,ಮಧ್ಯ ಮತ್ತು ಉತ್ತರ ದ್ರಾವಿಡ ಭಾಷೆಗಳಾಗಿದ್ದವು. ದಕ್ಶಿಣ ದ್ರಾವಿಡ ಕನ್ನಡ,ತಮಿಳ್,ತೆಲುಗು ಆದವು ಮತ್ತೆ ವ್ಯತ್ಯಾಸಗಳು ಬಂದು ಕನ್ನಡ ಕೊಡವ ಮತ್ತು ಬಡಗ ಆಯಿತು. ಭಾಷೆಯು ಒಂದು ಸಂಸಾರವಿದ್ದ ಹಾಗೆ ಇಂದಿನ ಕಾಲದ ಹಾಗೆ nuclear ಕುಟುಂಬಗಳನ್ನು ನಾವು ಕಾಣಬಹುದು. ಭಿನ್ನತೆ ಇರುತ್ತದೆ ಆದರ ಭಿನ್ನತೆಯಲ್ಲಿ ಎಕತೆ ಇರುತ್ತದೆ.

ಇದರ ಮುಂದುವರೆದ ಭಾಗ .....

Monday, February 26, 2007

ಗರತಿಯ ಹಾಡುಗಳು

ಹಿಂದೆ ನಮ್ಮ ಜನ ತಮ್ಮ ಮನರಂಜನೆಗೆ ಅನೇಕ ವಿಧಾನವನ್ನು ಕಂಡು ಕೊಂಡಿದ್ದರು, ಸುಖ-ದು:ಖದ ಸಂದರ್ಭದಲ್ಲಿ ಜನರು ಸೇರಿ
ತಮ್ಮ ರಸಭಾವವನ್ನು ಹಾಡಿನ ಮೂಲಕ ಹಾಡಿ ಕುಣಿಯುತ್ತಿದ್ದರು. ಇದನ್ನು ಹಿಂದೆ ಆಟ-ಪಾಟ ಅನ್ನುತ್ತಿದ್ದರು,ಇದರಲ್ಲಿ ಕುಯಿಲು,ಕುಡಿತ
ಕೋಲಾಟ,ಬೇಟೆ,ಮಧುವೆ,ಸಾವು,ವೀರರ ಬಗ್ಗೆ,ಯುದ್ದ,ದೇವರು,ದೈವಭಕ್ತಿ ಹೀಗೆ ಅನೇಕ ವಿಷಯಗಳ ಬಗ್ಗೆ ಹಾಡು ಕಟ್ಟುತ್ತಿದ್ದರು. ಹೆಂಗಸರು
ಮತ್ತು ಕೆಲಸಗಾರರು ಕೆಲಸದ ತಮ್ಮ ಬಳಲಿಕೆಯನ್ನು ದೂರ ಮಾಡಲು ಇ ಹಾಡುಗಳನ್ನು ಹಾಡುತ್ತಿದ್ದರು.
ಕುಟ್ಟುವಾಗ,ಬೀಸುವಾಗ,ಮಗುವನ್ನು ಆಡಿಸುವಾಗ ಮೈ ಮರೆತು ಹಾಡುಗಳನ್ನು ಹಾಡಿ ಮುಂದಿನ ಪೀಳಿಗೆಗೆ ಅದನ್ನು
ಉಳಿಸುತ್ತಿದ್ದರು. ಇವುಗಳನ್ನೇ ಗರತಿಯ ಹಾಡು ಎಂದು ಕರೆಯುತ್ತಾರೆ.
ಈ ಗರತಿಯ ಹಾಡುಗಳು ತ್ರಿಪದಿ ಛಂದದಲ್ಲಿ ಇರುತ್ತದೆ,ಇವುಗಳು ಬಹಳ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ
ಇರುವುದೇ ಜನರು ಇದಕ್ಕೆ ಮರಳಾಗಿರುವ ಸಾಕ್ಷಿಗೆ ಕಾರಣ.ಇದರಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ
ಇದರಲ್ಲಿ ಹೆಚ್ಚು ಸಂಸ್ಕೃತ ಶಭ್ದಗಳು ಇರದೇ ಇರುವುದು. ನೈಜ ಮತ್ತು ನೈಸರ್ಗಿಕವಾಗಿ ವಾಕ್ಯ ರಚನೆಯಲ್ಲಿ ಗಾಂಭಿರ್ಯತೆಯನ್ನು
ಒಳಗೊಂಡಿರುವುದು ಇದರ ನೈಪುಣ್ಯಕ್ಕೆ ಸಾಕ್ಷಿ.
ನಮ್ಮ ಕನ್ನಡ ನಾಡಿನ ಬಡತನದಲ್ಲಿ ಸಿಕ್ಕ ಅಕ್ಕ-ತಂಗಿಯರು,ಅಜ್ಜಿ-ಅಮ್ಮಂದಿರು ಹೃದಯ್ ಶ್ರೀಮಂತಿಕೆಯನ್ನು ಬಿಂಬಿಸುವ
ಗರತಿಯ ಹಾಡುಗಳು ನಮಗೆ ಹೆಮ್ಮೆಯನ್ನು ಉಂಟು ಮಾಡುತ್ತದೆ. ಗಮನಿಸಿ ನೋಡಿದರೆ ಇದು ನಮ್ಮ ಹೆಣ್ಣುಮಕ್ಕಳ ಮನಸ್ಸಿನ
ಒಳಗನ್ನಡಿ, ಇದರಲ್ಲಿ ಪ್ರೇಮದ ವಿವಿಧ ಆಯಾಮವಿದೆ, ಮಮತೆಯ ಮಾದುರ್ಯವಿದೆ. ಗರತಿಯು ಇಂದಿನ ಸಮಾಜದ ಹೆಣ್ಣಿಗೆ
ಎಷ್ಟರ ಮಟ್ಟಿಗೆ ಅನುರೂಪಳೋ ಗೊತ್ತಿಲ್ಲ,ಆದರೆ ಅವಳಿಗೆ ತನ್ನ ಸಂಸಾರದ ಬಗ್ಗೆ ಎಲ್ಲಿಲ್ಲದ ಒಲವು, ಗಂಡನೆಂದರೆ ದೈವ, ಉಳಿದ
ಗಂಡನ ಮನೆಯವರಿಗೆ ಇವಳೇ ತಾಯಿ. ತಾನು ಕಷ್ಟ ಪಟ್ಟರು ಚಿಂತೆ ಇಲ್ಲ,ತನ್ನ ಸಂಸಾರ ಚೆನ್ನಗಿರಬೇಕು ಎನ್ನುವ
ಉದಾರ ಭಾವನೆ.

ಹಾಲುಂಡ ತವರೀಗಿ ಏನೆಂದು ಹಾಡಲಿ
ಹೊಳೆದಂಡಿಲಿರುವ ಕರಕೀಯ ಕುಡಿಯಂಗ
ಹಬ್ಬಲೇ ಅವರ ರಸಬಳ್ಳಿ.


ಇದರಲ್ಲಿ ಗರತಿ ತನ್ನ ತವರು ಮನೆಯ ಬಗ್ಗೆ ಕೃತಜ್ಞಾಭಾವದಿಂದ ನೆನಸಿಕೊಳ್ಳುವ ಹಾಡಿದು. ಇದರ ಹಾಗೇ
ಅಪ್ಪ-ಅಮ್ಮನ ಬಗ್ಗೆ ಕೂಡ ಒಂದು ಹಾಡಿದೆ.

ತಂದೀನ ನೆನದರ ತಂಗಳೂ ಬಿಸಿಯಾಯ್ತ
ಗಂಗಾದೇವಿ ನನ್ನ ಹೆಡೆದವ್ವ ನೆನದರ
ಮಾಸೀದ ತಲೆಯೂ ಮಡಿಯಾಯ್ತು.

ಸತಿ-ಪತಿಗಳ ಮದ್ಯೆ ಕೂಡ ಅನೇಕ ಹಾಡುಗಳು ಬಂದಿವೆ, ಸಂಸಾರದಲ್ಲಿ, ನಗು,ಟೀಕೆ,ಮುನಿಸು,ವಿರಹ,ತಲ್ಲಣ
ಕೋಪಗಳು ನಮ್ಮ ಗರತಿಯ ಹಾಡಿನಲ್ಲಿ ಹಾದು ಬರುತ್ತವೆ.
ಹೆಂಡತಿ ಇಲ್ಲದೇ ಗಂಡನ ಪಾಡು
" ಅಡಗೀ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗಿ ಬಾಯಿಗೆ ರುಚಿಯಿಲ್ಲ ಹಡೆದವ್ವಾ
ಮಡದಿ ತವರೀಗೆ ಹೋಗ್ಯಾಳ."

ಗಂಡ ಇಲ್ಲದ ಹೆಂಡತಿಯ ಪಾಡು
"ಯಾಲಕ್ಕಿ ಸುರಿದು ಯಾವಡಗೀ ಮಾಡಲಿ
ಊರಿಗೊಹಗ್ಯಾರ ರಾಯರು ಬಾರದೆ
ಯಾವಡಗೀ ಮಾಡಿ ಫಲವೇನ.
ಜಗಳದ ಬಗ್ಗೆ ಒಂದು ಸುಂದರ ಹಾಡಿದ.

"ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಲಿಂಗದ ನೀರು ಹರಿದಹಂಗ ಹಿರಿ ಹೋಳಿಯ
ಗಂಗವ್ವ ಕೂಡಿ ನಲಿದಹಾಂಗ.

ಮಕ್ಕಳ ಮೇಲೆ ಒಂದು ಪ್ರಸಿದ್ದ ಗರತಿಯ ಹಾಡಿದೆ.
"ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳಹೋರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ.
ಇದೆಲ್ಲ್ಲಾ ನೆನಪಾಗಿದ್ದು ಬಹಳ ಹಿಂದೆ ನಮಗೆ ಕನ್ನಡದಲ್ಲಿ ಒಂದು ಗರತಿಯ ಹಾಡುಗಳು ಅಂತ
ಪದ್ಯವಿತ್ತು,ಮೊನ್ನೆ ಹೀಗೆ ಮಾತನಾಡುವಾಗ ಈ ವಿಷಯ ಬಂದು ನನಗೆ ಗೊತ್ತಿದ್ದ
ಒಂದೆರೆಡು ವಿಷಯಗಳನ್ನು ಇಲ್ಲಿ ಹಂಚಿಕೊಂಡಿರುವೆ,ನಿಮಗೆ ಹೆಚ್ಚಿನ ಮಾಹಿತಿ ಇದ್ದರೆ
ಹಂಚಿಕೊಳ್ಳಿ.

Sunday, February 25, 2007

ಹನಿ ಕವಿತೆಗಳು-honey ಸಲುವಾಗಿ ಬರೆದ ಕವಿತೆಗಳು ...

ಬೆಸ್ತು
=====

ಮೀನ ಕಂಡು
ಸಾಗರದಲ್ಲಿ ಬೆಸ್ತ ಬಿದ್ದ
ಮೀನಾಕ್ಶಿ ಕಂಡು ಪ್ರೇಮಸಾಗರದಲ್ಲಿ
ಇವನು ಬೆಸ್ತು ಬಿದ್ದ.


ಬೇಲಿ
====
ಕಟ್ಟಿಸಿದ ಅವನು ಸುಂದರ ಮನೆ
california bayಲಿ
ಚುಕ್ಕೆ ಇಟ್ಟಂತೆ ಹಾಕಿಸಿದ ಸುತ್ತ
ಮುಳ್ಳಿನ ಬೇಲಿ.

ಹೂ
=====
ಮಲ್ಲಿಗೆ ಎಂದರೆ
ಹಿಂದಿನವರು ಅನ್ನುತ್ತಿದರು
ಸುಂದರ ಹೂ
ಇಂದಿನವರು ಕೇಳುತ್ತಾರೆ
who ??

ಆಭರಣ
=========
ನಲ್ಲೆ, ಮೈ ತುಂಬಾ ಆಭರಣ
ಇದೆಂಥಾ ಶ್ರಂಖಲೆ ?
ನಿರಾಭರಣವಾಗಿದ್ದರು ನೀನೆ
ನನ್ನ ಶಕುಂತಲೆ.


ನಶ್ಯಶಾಸ್ತ್ರ
=============
ಪಕ್ಶಿ-ಹೂಗಳ ಬಗ್ಗೆ ಹೇಳುತ್ತದೆ
ಜೀವಶಾಸ್ತ್ರ,ಸಸ್ಯಶಾಸ್ತ್ರ.
ಆಕ್ಷಿ-ಸೀನುಗಳ ಬಗ್ಗೆ ಹೇಳುತ್ತದೆ
ನಶ್ಯಶಾಸ್ತ್ರ.


ರಣ-ರಂಗ
==========
ವಿಧ್ಯಾರ್ಥಿಗಳಿಗೆ ಪರೀಕ್ಷೆಯೆ
ಒಂದು ದೊಡ್ಡ ರಣ.
ಎಕೆಂದರೆ ಅಲ್ಲಿ ಕೇಳುತ್ತಾರೆ
ವ್ಯಾಕ-ರಣ.


ಹೇಳಿ ಹೊಗು ಕಾರಣ
=================
ನಾಳೆಗಳ ಆಗಮನದಲ್ಲಿ ಪ್ರೀತಿಯ ಕೊಂದು
"ಮರೆತುಬಿಡು ನನ್ನ" ಎಂದು
ಹೇಳಿ ಹೋದವಳೆ.
ನೀ ಮುಡಿದ ಹೂವು ಹೊಮ್ಮುತ್ತಿರುವುದು
ಹಳೆ ನೆನಪುಗಳ
ಹೇಗೆ ನಾನು ಮರೆಯಲೆ ??

Thursday, February 22, 2007

ಕೃತ್ರಿಮ ಬುದ್ದಿವಂತಿಕೆಯ ಕೇಂದ್ರ ಬೆಂಗಳೂರು....

ನಿಮಗೆ ಗೊತ್ತೆ ನಮ್ಮ ಬೆಂಗಳೂರಿನಲ್ಲಿ ಕೃತ್ರಿಮ ಬುದ್ದಿವಂತಿಕೆಯ ಒಂದು ಕೇಂದ್ರವಿದೆ,ಅದೂ ಕೂಡ ರಾಜಭವನಕ್ಕೆ
ಬಹಳ ಹತ್ತಿರವಿದೆ. ಇದನ್ನು ದಾವೂದ್ ಇಲ್ಲಾ ಮುತ್ತಪ್ಪ ರೈ ನಡೆಸುತ್ತಿಲ್ಲ, ನಮ್ಮ ಕೇಂದ್ರ ಸರ್ಕಾರದ ಒಂದು ಅಂಗ ಇದು.
ಇದನ್ನು Center for Artificial Intelligence & Robotics (CAIR), Bangalore; ಎಂದು ಕರೆಯುತ್ತಾರೆ.
ಇದಕ್ಕೆ ಯಾವ ಪುಣ್ಯಾತ್ಮ ಕನ್ನಡದಲ್ಲಿ ಹೆಸರು ಇಟ್ಟರೊ ದೇವರಿಗೆ ಗೊತ್ತು. ಕೃತಕ ಎನ್ನುವ ಬದಲು ಕೃತ್ರಿಮ ಎಂದು ಅನರ್ಥ ಮಾಡಿದ್ದಾರೆ ಪುಣ್ಯಾತ್ಮರು.
ಇದಕ್ಕೆ ಸಮೀಪಕ್ಕೆ ವಾರಕ್ಕೆ ಒಮ್ಮೆ ಧರಣಿ ಮಾಡುವ ನಮ್ಮ ಉಟ್ಟು ಹೋರಾಟಗಾರ ವಾಟಳ್ ಇಲ್ಲಾ ಮಾತಿಗೆ ಮುಂಚೆ ಇದು ಸರಿ ಇಲ್ಲಾ,ಅದು ಸರಿ ಇಲ್ಲಾ ಅಂತ ಮಾತಡುವ ಡಾ.ಯು.ಆರ್.ಎ ಗೆ ಕೂಡ ಇದು ಕಾಣದೇ ಇರುವುದು ಜಾಣ ಕುರುಡೇ ಸರಿ.

Wednesday, February 21, 2007

Media Manipulation from VIJAY TIMES


The recent article in Vijay times(dated 20th Feb 2007) which discussed IT protests,unfortunatley they mislead the audiences by saying only people of one community were present in the protests.

This is a clear manipulation from the responsible media like Vijay Times, the hidden agenda for this to separate a community based on the caste.

In the Sunday protest, representatives from all parts of Karnataka were present, irrespective of their caste, creed, ethnicity. The only common thing which binded them was "KAVERI". But VT thinks other way round, it can go any extent to get the cheap publicity.

This newspaper owe following answers to Internet community.
1) What is the basis of generalization ?
2) Where did they get the data from the regarding the ethnicity of the protestors?

3) Why the think gowdas only exist in B-M-M region ?
4) Where are the statistics collected ?
5) Why they indulge in Divide and Rule, is it a last resort to attract the audiences?
6) Why is an attempt being made to make this simple event a communal
issue?
7) What is the mileage the media is gaining by this?

We can excuse the reporter as a newbie for his immaturity, but was editor sleeping ??

We have blogged ....care to answer ??

Sunday, January 14, 2007

sarojini mahishi report ಒಂದು ನೋಟ

ಕನ್ನಡಿಗರಿಗೆ ಉದ್ಯೋಗ ಕ್ಷೇತ್ರದಲ್ಲಿ ದಶಕಗಳಿಂದ ಅನ್ಯಾಯವಾಗುತ್ತಿದೆ,ಇದನ್ನು ಕಂಡು ಕಾಣದ ಹಾಗೆ ಕನ್ನಡಿಗ ಇದ್ದ.
ಕಾಲಕ್ರಮೇಣ ಕನ್ನಡಿಗರು ಸಂಘಟನೆಯಾಗಿ ಇದನ್ನು ಪ್ರಶ್ನಿಸಲು ಆರಂಭಿಸಿದರು. ಮೊದಲು ನೇರವಾಗಿ
ಅನ್ಯಾಯ ಮಾಡುತ್ತಿದ್ದ ಪರಭಾಷಿಕ ಹಿಂದಿನ ಬಾಗಿಲನ್ನು ಹಿಡಿದು ತನ್ನವರಿಗೆ ಕೆಲ್ಸ ಕೊಡಿಸುವ ಕಾರ್ಯ ಮುಂದುವರೆಸುತ್ತಲೆ ಬಂದ.
ಈಗಲೂ ಕೂಡ ಇದು ಸಾಗಿದೆ. ವಲಸೆಯು ಮುಂದುವರೆಯುತ್ತಲೆ ಇದೆ, ಇದರ ದುಷ್ಪರಿಣಾಮ ನಮ್ಮ ನೆಲದಲ್ಲಿ
ಅರ್ಹತೆ,ಓದು ಇರುವ ಕನ್ನಡಿಗ ನಿರುದ್ಯೋಗಿಯಾಗಿದ್ದಾನೆ.
೧೯೮೦ ದಶಕದಲ್ಲಿ ಗೋಕಾಕ್ ಚಳುವಳಿಯ ಯಶಸ್ಸಿನಲ್ಲಿ ಕನ್ನಡಿಗ ತನ್ನ ಉದ್ಯೋಗದ ಹಕ್ಕನ್ನು ಪಡೆಯಲು
ಹೋರಾಟ ನಡೆಸಿದ. ಅದರ ಫಲವೇ ಸರೋಜಿನಿ ಮಹಿಷಿ ವರದಿ.

* ಇದನ್ನು ಯಾರು ನೇಮಿಸಿದರು ಮತ್ತು ಇದರ ಉದ್ದೇಶಗಳೇನು ?

ಇದನ್ನು ನಮ್ಮ ಕರ್ನಾಟಕದ ಸರ್ಕಾರ ರಚಿಸಿತು. ಕನ್ನಡಿನಿಗೆ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಸಿಂಹಪಾಲು ಮತ್ತು
ಅವನಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಈ ಸಮಿತಿ ಶಿಫಾರಸು ಮಾಡಿತು.

* ಸಮಿತಿಯಲ್ಲಿ ಯಾರಿದ್ದರು.

ಸಮಿತಿಯ ಅಧ್ಯಕ್ಷರು :- ಸರೋಜಿನಿ ಮಹಿಷಿ
ಅವರ ಜೊತೆಗೆ
* ಸಿದ್ಧಯ್ಯ ಪುರಾಣಿಕ
* ಹನುಮಾನ್
* ಸತ್ಯ
* ಪ್ರಭಾಕರ ರೆಡ್ದಿ
* ನಾರಯಣ ಕುಮಾರ್

ಇದ್ದರು.

* ಈ ಸಮಿತಿ ಎನು ಮಾಡಿತು ?

ಇದು ೩ ವರ್ಷಗಳ ಕಾಲ ಕರ್ನಾಟಕದ್ಯಾಂತ ಪ್ರವಾಸ ಮಾಡಿ ವಿವಿಧ ಉದ್ಯಮ ಕ್ಷೇತ್ರದಲ್ಲಿ
ಕನ್ನಡಿಗರ ವಿವರವನ್ನು ಪಡೆದು ಒಂದು ಶಿಫಾರಸು ಮಾಡಿ ಸರ್ಕಾರಕ್ಕೆ ಸಲ್ಲಿಸಿತು.

* ಮುಖ್ಯ ಶಿಫಾರಸ್ಸು ಎನು ?
-೧- ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿರುವಾಗ ಉದ್ಯೋಗಾವಕಾಶದಲ್ಲಿ ಅವರಿಗೆ ಮೊದಲ ಆಧ್ಯತೆ
ಮತ್ತು ಹೆಚ್ಚಿನ ಭಾಗ ಅವರಿಗೆ ದೊರಕಬೇಕು.

-೨- ಕೇಂದ್ರ ಸರಕಾರೀ ವಲಯದ ಉದ್ಯಮದಲ್ಲಿ ಕನ್ನಡಿಗರಿಗೆ ಸಲ್ಲತಕ್ಕ ಉದ್ಯೋಗ ಪ್ರಮಾಣ ಹೀಗೆ ಇರಬೇಕು.

॑ ಗ್ರೂಪ್ ಡಿ - ೧೦೦ %

॑ ವೇತನ ೧೨೫೦ ಇರುವ ತನಕ - ೮೦%

॑ ನೇರ ನೇಮಕಾತಿಯಲ್ಲಿ - ೬೫%

-೩- ರಾಜ್ಯ ಸರ್ಕಾರದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳವರು ದೊರಯದೆ ಇರುವಾಗ
ಅಂತ ಕೆಲ್ಸವನ್ನು ಬಿಟ್ಟು ಉಳಿದ ಎಲ್ಲಾ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಬೇಕು.


-೪- ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ಕಡಿಮೆ ದರದಲ್ಲಿ ನೆಲ,ಜಲ, ವಿದ್ಯುತ್ ಮುಂತಾದ
ಸೌಲಭ್ಯಗಳನ್ನು ಪಡೆದಿರುವದರಿಂದ , ಅವರ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ನೇಮಿಸುವಂತೆ ಕಡ್ಡಾಯ ಮಾಡಬೇಕು.

-೫- ಉದ್ಯಮಗಳಲ್ಲಿ ಟೈಪಿಸ್ಟ ಮತ್ತು ಅಪ್ರಟಿಂಸ್ ಕೆಲ್ಸಗಳನ್ನು ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದಿಂದ ತೆಗೆದುಕೊಳ್ಳಬೇಕು.

-೬- ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸುವ ಮೊದಲು ಅಭ್ಯರ್ಥಿಗಳು ೧೫ ವರುಷ ರಾಜ್ಯದಲ್ಲಿ
ವಾಸ ಮಾಡಿದ್ದಾರೆ ಎಂಬುದನ್ನು ಈ ಕೆಲ ದಾಖಲೆಗಳನ್ನು ಪರಿಶೀಲಿಸಬೇಕು.
॑॑ ಶಾಲೆಯ ಸರ್ಟಿಫೀಕೆಟ್
॑॑ ಪಡಿತರ ಚೀಟಿ
॑॑ ಮತದಾರರ ಪಟ್ಟೆ
॑॑ ಜನ್ಮದಾಖಲೆ

-೭- ೧೦೦ಕ್ಕಿಂತ ಕೆಲಸಕ್ಕೆ ಹೆಚ್ಚು ಇರುವ ಸಂಸ್ಥೆಗಳಲ್ಲಿ ರಾಜ್ಯದ ಪ್ರತಿನಿಧಿ ಇರಬೇಕೆಂದು ಆ ಉದ್ಯಮಗಳಲ್ಲಿ
ಒತ್ತಡವನ್ನು ತರಬೇಕು.

--೮- ಉದ್ಯಮಗಳಲ್ಲಿ ನೌಕರ ಮಕ್ಕಳಿಗೆ ಆದ್ಯತೆ ಕೋಡುವದನ್ನು ಮೊದಲು ನಿಲ್ಲಿಸಬೇಕು.

-೯- ಸರಕಾರದಲ್ಲಿರುವ ಪ್ರಮುಖ ಸ್ಥಾನಗಳಲ್ಲಿ ನೇಮಿಸುವಾಗ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ
ಕಳಕಳಿ ಇರುವರನ್ನು ನೇಮಿಸಬೇಕು.

--೧೦-- ಲೋಕಸೇವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯನ್ನು ಕಡ್ಡಾಯ ಮಾಡಬೇಕು.
ಕನ್ನಡ ಪತ್ರಿಕೆಯಲ್ಲಿ ಅನುತೀರ್ಣರಾದವರು ಅನರ್ಹರು ಎಂದು ನಿಯಮಗಳನ್ನು ತಿದ್ದುಪಡಿ ಮಾಡಬೇಕು.



ಒಟ್ಟು ಎಷ್ಟು ಶಿಫಾರಸ್ಸು ಇದ್ದವು.??
ಒಟ್ಟು ೫೮ ಶಿಫಾರಸ್ಸು ಇದ್ದವು, ಅವುಗಳಲ್ಲಿ ೫೪ ಸರ್ಕಾರವೇ ಮಾಡಬಹುದಿತ್ತು, ಆದರೂ ನಮ್ಮ ಘನ ಸರ್ಕಾರ ಇನ್ನೂ ಮಾಡಿಲ್ಲ.

ಸರ್ಕಾರ ಬದಲಾಯಿತು ಆದರೆ ಇದನ್ನು ಅನುಷ್ಟಾನ ಮಾಡುವ ದಮ್ ಒಂದು ಸರ್ಕಾರಕ್ಕು ಬರಲಿಲ್ಲ.



Wednesday, January 10, 2007

Honey Jothe Moon nodokke hoguva munna ....

ಮಧುಚಂದ್ರಕ್ಕೆ ಹೋಗುವ ಮುನ್ನ ..


ಮಧುಚಂದ್ರವು ಭೂಮಿಯಲ್ಲಿ ಬರೆದಿರುತ್ತದೆ, ಅದನ್ನು ಸ್ವರ್ಗವನ್ನು ಮಾಡುವ ಕೆಲಸ ದಂಪತಿಗಳ ಮೇಲೆ ಇರುತ್ತದೆ. ಮದುವೆಯು ಜೀವನದಲ್ಲಿ ಎಷ್ಟು ಮಹತ್ವವನ್ನು ಪಡೆದಿರುತ್ತದೋ
ಹಾಗೇಯೆ ಮಧುಚಂದ್ರವು ಕೂಡ. ಮಧುಚಂದ್ರಕ್ಕೆ ಎಲ್ಲಿ ಹೋಗುವುದು ಎಂದು ನಾನು ಅನೇಕ ಬಾರಿ ಯೋಚಿಸಿ,ತಲೆಕೆಡಿಸಿಕೊಂಡು ಇದ್ದಾಗ ಮದುವೆಯ ತಾರೀಖು ದಿನೇದಿನ ಹತ್ತಿರ
ಬರುತ್ತಿತ್ತು.
ಮನಸ್ಸಲ್ಲಿ ಕಾಡುತ್ತಿದ್ದ ಒಂದೇ ಪ್ರಶ್ನೆ ಮಧುಚಂದ್ರಕ್ಕೆ ಹೇಗೆ ಸ್ಥಳವನ್ನು ಆರಿಸಬೇಕು??

* ಮೊದಲು ಹುಡುಗ-ಹುಡುಗಿ ತಮ್ಮ ಅಭಿರುಚಿಯ ಸ್ಥಳಗಳನ್ನು ಪಟ್ಟಿ ಮಾಡಿಕೊಳ್ಳಬೇಕು ಕೆಲವರಿಗೆ ಸಮುದ್ರದ ಬೀಚ್ ಇಷ್ತವಾದರೆ , ಕೆಲವರಿಗೆ ಚಳಿ ಇರುವ
ಪ್ರದೇಶ ಇಷ್ಟ. ಅನೇಕ ಕಾರಣಗಳಿಂದ ಎತ್ತರದ ಪ್ರದೇಶವನ್ನು ಸಾಮನ್ಯವಾಗಿ ಜನರು ಆಯ್ಕೆ ಮಾಡತ್ತ್ತಾರೆ.

ಇಬ್ಬರಿಗೂ ಒಂದು ಸ್ಥಳವನು ಆರಿಸಲು ಆಗಲಿಲ್ಲವಾದರೆ , ಎರಡು ಪ್ರದೇಶಗಳು ಇರುವ ಹಾಗೆ ಪ್ರವಾಸವನ್ನು ಸರಿಹೊಂದಿಸಿಕೊಳ್ಳಬೇಕು.

* ಸಾಮನ್ಯವಾಗಿ ಪ್ರತಿ ಸ್ಥಳಗಳಿಗೂ ಅದಕ್ಕೆ ಅನುಗುಣವಾದ ಒಂದು ಸೀಜನ್ ಇರುತ್ತದೆ, ಅದನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳವನ್ನು
ಆಯ್ಕ್ಲೆ ಮಾಡಿಕೊಳ್ಳುವುದು ಸೂಕ್ತ.

* ಮಧುಚಂದ್ರಕ್ಕೆ ಎಷ್ಟು ದಿನ ನಿಗದಿ ಆಗಿದೆ ಎನ್ನುವುದು ಮುಖ್ಯ, ದಿನಗಳು ಕಮ್ಮಿ ಇದ್ದರೆ ಹತ್ತಿರದ ಪ್ರದೇಶಕ್ಕೆ ಹೋಗುವುದು ಒಳಿತು. ಇಲ್ಲವಾದಲ್ಲಿ
ಹೆಚ್ಚು ಸಮಯ ಪ್ರಯಾಣದಲ್ಲಿ ಹೋಗುತ್ತದೆ.

* ೧ ವಾರ ಉತ್ತದ ಬೆಟ್, ಒಂದು ವಾರದಲ್ಲಿ ಹೆಚ್ಚೆಂದರೆ ೩ ಸ್ಥಳಗಳು ಮಾತ್ರ ಇರಬೇಕು.
ಇಲ್ಲವಾದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಸುಸ್ಥು ಆಗುತ್ತದೆ.

* ನೆನಪಲ್ಲಿ ಇಡಬೇಕಾದ ಅಂಶವೆಂದರೆ ಮಧುಚಂದ್ರ ಸ್ಥಳ ವೀಕ್ಷಣೆಯ ಪ್ರವಾಸವಲ್ಲ. ಹೆಚ್ಚು ಸಮಯವನ್ನು ಶಾಂತಿ ಮತ್ತು ರೊಮ್ಯಂಟಿಕ್ ಪ್ರದೇಶಗಳಲ್ಲಿ
ಕಳೆದರೆ ಸೂಕ್ತ.

* ವಿದೇಶಕ್ಕೆ ಹೋಗುವದಾದರೆ ವೀಸಾ ಮತ್ತು ecnr ಮಾಡಿಸಿಕೊಳ್ಳಿ, ಕೆಲವು ದೇಶಗಳಲ್ಲಿ VISA ON ARRIVAL ಕೋಡುತ್ತಾರೆ, ಅಂತಹ ದೇಶಗಳಲ್ಲಿ
ENNR ಇರಬೇಕು. ಹಿಂದೆ passport ಕೊಡುವಾಗ ಒಂದು ತರಲೆ ಕೆಲಸ ಮಾಡಿದ್ದರು ಅದೇ ಇದು. ಇದನ್ನು ತೆಗೆಸಲು ಒಂದು ದಿನವನ್ನು ವ್ಯಯ ಮಾಡಬೇಕು.
ಬೆಳಿಗ್ಗೆ ಕೊಟ್ಟರೆ ಸಾಯಂಕಾಲ ಆಗುವ ಕೆಲಸ , ಇದಕ್ಕೆ DEGREE MARKS card ಇದ್ದರೆ ಸಾಕು. ಇದಕ್ಕೆ ತಗಲುವ ವೆಚ್ಚ ರೂ ೩೦೦/- .
ಹೊಸದಾಗಿ ರಹದಾರಿ ಪತ್ರವನ್ನು ಪಡೆದವರು ಇದನ್ನು ಮಾಡಿಸುವ ಆಗತ್ಯವಿಲ್ಲ.

* ಹೋಗುವ ಪ್ರದೇಶಕ್ಕೆ ತಕ್ಕ ಹಾಗೆ ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳಿ, ಉದಾ:- ಬೀಚ್ ಅಥಾವ ಬಿಸಿಲು ಇರುವ ಸ್ಥಳಗಳಲ್ಲಿ ಬೇಟಿ ಕೊಡುವದಾದರೆ
SUNGLASSES,CREAM and CAP etc ಇಟ್ಟು ಕೊಳ್ಳುವುದು ಸರಿ.
ಎನು ಬೇಕು ಬೇಡ ಎಂದು ಒಂದು checklist ಮಾಡಿಕೊಳ್ಳಿ,ಅದರ ಮೇಲೆ ನಿಮ್ಮ ಸರಂಜಾಮು ಸಿದ್ಧ ಪಡಿಸಿಕೊಳ್ಳಿ.

* ವಿದೇಶಕ್ಕೆ ಹೋಗುವವರು Med Insurance ಮಾಡಿಸಿಕೊಳ್ಳಿ, ಹಾಗೆಯೇ ಒಂದು Medical Kit ಮಾಡಿಕೊಳ್ಲಿ. ಅದರಲ್ಲಿ
ಸಾಮನ್ಯವಾಗಿ ಬರುವ ಕಾಯಿಲೆಗೆ ಮಾತ್ರೆಗಳನ್ನು ಇಟ್ಟುಕೊಳ್ಳಿ ಜೊತೆಗೆ ನೀವು ಕೆಲವು ಮಾತ್ರಗಳನ್ನು ತೆಗೆದುಕೊಳ್ಳುತಿದ್ದರೆ ಅದರ
Dr Prescription ಇಟ್ಟು ಕೊಳ್ಳಿ.
ಗಮನಿಸಿ:- ಪರಸ್ಥಳಗಳ್ಳಿ ಕಾಯಿಲೆ ತಪ್ಪಿದರೆ ಮತ್ತು ಮಾತ್ರೆಗಳಿಂದ ಗುಣವಾಗದಿದ್ದರೆ, ಅಲ್ಲಿ ವೈದ್ಯರನು ಕಾಣಿ. ಹದ್ದುಮೀರಿದರೆ
ಮನೆಗೆ ಹಿಂದಿರುಗುವು ಒಳಿತು.

* Important Phone numbers ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡು ಅದರ ಒಂದೊಂದು ಪ್ರತಿಗಳನ್ನು ಗಂಡ ಹೆಂಡತಿ ಬಳಿ ಇದ್ದರೆ , ತುರ್ತು ಸಮಯದಲ್ಲಿ
ಬಹಳ ಸಹಾಯ ಮಾಡುತ್ತದೆ.


* ಪ್ರಯಾಣವನ್ನು ಒಳ್ಳೆಯ Travel Agent ಮುಂಖಾತರ ಮಾಡಿ. ನೀವೆ bagpacker ಆಗಿ ಹೋಗಿ ಅಲ್ಲಿ ಹುಡುಕುತ್ತಿನಿ ಅನ್ನುವ್ದುದು ಮೂರ್ಖತನ.
ಮನೆಯಿಂದ ಹೋರಡುವದರಿಂದ ಹಿಡಿದು ವಾಪಸ್ ಬರುವ ತನಕ ಎಲ್ಲಾ ನಿರ್ಧಾರ ಆಗಿರಬೇಕು.

* Travel Iternary, ತಂಗುವ ಹೋಟೆಲ್ ಅದರ ವಿಳಾಸ ಮತ್ತು ದೂರವಾಣಿ ಸಂಖ್ಯಯನ್ನು ಮನೆಯವರಿಗೆ ಕೊಟ್ಟು ಹೋಗಿ.

* Itenary ಒಮ್ಮೆ ಅವಲೋಕನ ಮಾಡಿ, ಇದಕ್ಕೆ www.goadvisor.com" ಗೆ ಹೋಗಿ ಅದರಲ್ಲಿ ಎಲ್ಲಾ
ಸ್ಥಳಗಳ ಬಗ್ಗೆ ಮಾಹಿತಿ ಪಡೆಯಿರಿ.

* ನಿಮ್ಮ ಪ್ಲಾನ್ ಸ್ವಲ್ಪ್ ಡೈನಮಿಕ್ ಆಗಿ ಇರಲಿ, ಒಂದು ಸ್ಥಳ ಇಷ್ಟವಾದಲ್ಲಿ/ವಾಗದಿದ್ದಲ್ಲಿ ಅನುಗುಣವಾಗಿ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು.

* ಪರದೇಶಕ್ಕೆ ಹೋಗುವವರು ಅದರಲ್ಲೂ ಸಸ್ಯಹಾರಿಗಳು ತಮ್ಮ ಜೊತೆ ತಿಂಡಿ ಮತ್ತು ready to eat, ತೆಗೆದುಕೊಂಡು ಹೋಗುವುದು ಒಳಿತು.
ಹಾಗೆಯೇ ಹೋಗುವ ಪ್ರದೇಶದಲ್ಲಿ "Indian Restaurent" ಉಂಟಾ ಅಂತ ಮೊದಲೇ ತಿಳಿದುಕೊಳ್ಲಿ.

* ನಿಮ್ಮನ್ನು ಕರೆದುಕೊಂಡು ಹೋಗುವ driver/guide ದೂರವಾಣಿ ಸಂಖ್ಯೆ ಸಿಗುವ ಹಾಗೆ ಇಟ್ಟುಕೊಳ್ಳಿ, ಸಾಮನ್ಯವಾಗಿ ಇದು ಬೇಕಾದಿತು.

* ಮಧುರ ನೆನಪುಗಳನ್ನು ಮೆಲಕು ಹಾಕಲು, ಜೊತೆಗೆ digi cam/cam corder ತೆಗೆದುಕೊಂಡು ಹೋಗುವುದು ಸರ್ವೇ ಸಾಮನ್ಯ, ಜೊತೆಗೆ
ಅದರ charger/duracell batteries ಮರೆಯದೇ ತೆಗೆದುಕೊಂಡು ಹೋಗಿ.

* ಹೋಗುವ ಮುಂಚೆ ಹಳೆಯ ಫೋಟೊ ತೆಗೆದುಬಿಡಿ, ಇಲ್ಲವಾದಲ್ಲಿ ಸರಿಯಾದ ಸಮಯಕ್ಕೆ ಕೈ ಕೋಡುತ್ತದೆ.

* ಪರದೇಶಕ್ಕೆ ಹೋಗುವವರು FOREX ಮಾಡಿಸಿಕೊಂಡು ಹೋಗಿ. $$(ಡಾಲರ್) ಅಥಾವ ಯೂರೋ ಎಲ್ಲಾ ಕಡೆ ತೆಗೆದುಕೊಳ್ಳುತ್ತಾರೆ ಅದ್ದರಿಂದ
ಅವುಗಳನ್ನು ತೆಗೆದುಕೊಂಡು ಹೋಗುವುದು ಒಳಿತು.

* Adventure ಆಟ ಆದುವಾಗ ಮತ್ತು ನೀರಿಗೆ ಇಳಿಯುವಾಗ ಸುರಕ್ಷತೆ ಮುಖ್ಯ, ಸಂಗಾತಿಯನ್ನು impress ಮಾಡುವದಕ್ಕೆ
ಹುಚ್ಚು ಸಾಹಸ ಮಾಡಬೇಡಿ.

* ಪರಸ್ಥಳಗಳಲ್ಲಿ ಸರಸ ಸಲ್ಲಾಪ ಹದ್ದು ಮೀರದಿರಲಿ, ನಿಮ್ಮ ಸರಸ ಸಲ್ಲ್ಲಾಪ ಇನ್ನೊಬ್ಬರಿಗೆ ಇರುಸು-ಮುರುಸು ಆಗದಿರಲಿ.

ಒಟ್ಟಿನಲ್ಲಿ ಮಧುಚಂದ್ರ ಒಂದು ಸುಂದರ ಅನುಭೂತಿ, ಸಂಗಾತಿಯನ್ನು ಅರಿಯಲು, ಅರಿತುಕೊಂಡು ಮುಂದೆ ನಡೆಯಲು ಒಂದು ಸುಂದರ ಕಲ್ಪನೆ.
ಅದರ ಫಲಾನುಭವ ಪಡೆಯಲಿ.