Thursday, December 29, 2016

ಭಾಯಿಯೋ ಬೆಹನೋ ..

ಸ್ವಾತಂತ್ರ  ಪೂರ್ವದ ಸಮಯ ,  ಎಲ್ಲ ಕಡೆ ಇದ್ದ ಹಾಗೆ ಬೆಂಗಳೂರಿನಲ್ಲೂ ಹೋರಾಟದ ಕಾವು ತೀವ್ರವಾಗಿತ್ತು ,  ಕಾದಿ  ಧಾರಣೆ  , ವಿದೇಶಿ ವಸ್ತುಗಳ ಬಹಿಷ್ಕಾರ , ಸ್ವಾವಲಂಬನೆ ಇವೆಲ್ಲ ಹುಡುಗರನ್ನು ಆಕರ್ಷಿಸಿತು. ಅನೇಕರು ಕಾಂಗ್ರೆಸ್ ಸೇರಿದ್ದರು.  ಇಂದಿನ ಮೆಜಸ್ಟಿಕ್ ಸುತ್ತ ಮುತ್ತ ಅನೇಕ ಸಭೆಗಳು ನಡೆಯುತ್ತಾ ಇದ್ದವು.
ಇದರಲ್ಲಿ ಹೆಚ್ಚಾಗಿ ಉತ್ತರ ಭಾರತದ ಜನರೇ ಭಾಷಣ ಮಾಡುತ್ತಾ ಇದ್ದರು,  ದೇಶಭಕ್ತಿ ಪಾಠ ದಕ್ಷಿಣದವರಿಗೆ ಹೆಚ್ಚು ಬೇಕು , ಇವರು ಸ್ವಾಬಿಮಾನವಿಲ್ಲದ ಬ್ರಿಟಿಷರ ಗುಲಾಮರು ಅನ್ನುವ ಮನಸ್ಥಿತಿ ನಮ್ಮ ಉತ್ತರ ಭಾರತದ ನಾಯಕರಲ್ಲಿ ಅದರಲ್ಲು  ನಮ್ಮ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿತ್ತು.   ಅವರುಗಳ ಜೊತೆ ನಮ್ಮ ನಾಯಕರು ಮಾತನಾಡುತ್ತ ಇದ್ದರು ಅನ್ನೋದು ಬೇರೆ ಮಾತು, ಅದು ಕೊಸರಾಗಿತ್ತು.

ಅಂತಹ ದಿನಗಳಲ್ಲಿ ಒಂದು ಸಾರಿ ಲಾಲಾಲಜಪತ್ ರಾಯರು ಬೆಂಗಳೂರಿಗೆ ಬಂದು ಭಾಷಣ ಮಾಡುವುದಿತ್ತು , ಅಂದಿನ ದಿನಗಳಲ್ಲಿ ಲಾಲಾಜಿ ಹೆಸರು ಬಹಳ ಪ್ರಸಿದ್ಧಿಯಲ್ಲಿ ಇತ್ತು, ಪಂಜಾಬಿನ ಕೇಸರಿ ಎಂಬ ಬಿರುದು ಬೇರೆ ಇತ್ತು.ತುಂಬಾ ಓದಿಕೊಂಡಿದ್ದ ಆವರು ಅನೇಕ ವಿಷಯಗಳ ಬಗ್ಗೆ ಮಾತಾನಾದಬಲ್ಲರಾಗಿದ್ದರು, PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಸ್ಥಾಪಿಸುತ್ವದರಲ್ಲೂ  ಕೂಡ ಇವರ ಕೊಡುಗೆ ಇದೆ.

ಜನರಿಗೆ ಅವರ ಭಾಷಣ ಕೇಳುವ ತವಕ.  ಕಲಾಸಿಪಾಳ್ಯದ  "ರತ್ನಾವಳಿ ನಾಟಕ ಶಾಲೆ" ಇದಕ್ಕೆ  ವ್ಯವಸ್ಥಿತವಾಗಿತ್ತು.  ಆಗ ಜನರನ್ನು ಇಂದಿನ ಭಾಷಣಗಳಿಗೆ ಬಿರಿಯಾನಿ ಕೊಟ್ಟು ಕರೆ ತರುತ್ತ ಇರಲಿಲ್ಲ .  ಜನ ತಾವಾಗಿಯೇ ಸೇರಿದ್ದರು.  ಇವರಗಿಂತ ಮುಂಚೆ ಕೆಲವು ಹಿಂದಿ ನಾಯಕರು  ಜನರಿಗೆ ಅರ್ಥವಾಗದ ಹಿಂದಿಯಲ್ಲಿ ಮಾತನಾಡಿದರು, ಜನ ಕನ್ನಡ/ಇಂಗ್ಲಿಷ್ ಎಂದು ವಿನಂತಿಸಿಕೊಂಡರು, ನಾಯಕರು ಹಿಂದಿಯಲ್ಲೇ ಮುಂದುವರೆಸಿದರು. ಜನರಿಗೆ ಅರ್ಥ ಆಗದೆ ಶಾಂತಿಯಿಂದ ಲಾಲಾಜಿ ಭಾಷಣಕ್ಕೆ ಕಾದರು. ಲಾಲಾಜಿ ಬಂದು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆರಂಬಿಸಿದರು , ಮೊದಲಿಗೆ  "ಭಾಯಿಯೋ ಬೆಹನೋ"  ಎಂದಾಗ ಅಲ್ಲಿದ್ದ ಜನ ಒಕ್ಕೊರಲಿನಿಂದ  " ದಯವಿಟ್ಟು ಇಂಗ್ಲೀಷಿನಲ್ಲಿ ಮಾತನಾಡಿ" ಎಂದು ಒತ್ತಾಯ ತಂದರು.  ಇದನ್ನು ಕೆಲ ಹುಡುಗರು ಜೋರಾಗಿಯೇ ಕೂಗಿದರು,  ಆಗ ಲಾಲಾಜಿ ಅಲ್ಲೇ ಸಭೆಯಲ್ಲಿ ಇದ್ದ  ಹಿಂದಿ ನಾಯಕರನ್ನು ನೋಡಿ ಏನು ಮಾಡಲಿ ಎಂದಾಗ ,  ಅಲ್ಲಿದ್ದವರು ಇಂಗ್ಲೀಷಿನಲ್ಲಿ ಮಾತನಾಡಿ ಎಂದು ಸೂಚಿಸಿದರು. ಜನರ ಒತ್ತಾಯಕ್ಕೆ ಸಮಯೋಚಿತವಾಗಿ ಲಾಲಾಜಿ ಇಂಗ್ಲೀಷಿನಲ್ಲಿ ಭಾಷಣ ಮಾಡಿದರು. ನೆರೆದಿದ್ದ ಜನರು ಕರಾಡತನದಲ್ಲಿ ಅದನ್ನು ಸ್ವಾಗತಿಸಿದರು.

ಸ್ವಲ್ಪ ಫಾಸ್ಟ ಫಾರ್ವಡ್ ಮಾಡೋಣ.

ನಮಗೆ ಹೆಸರಿಗೆ ಸ್ವಾತಂತ್ರ ಸಿಕ್ಕಿದೆ, ಭಾರತವಾಗಿದೆ,  ಭಾಷಣಗಳ ತಾಣ ಕಲಾಸಿಪಾಳ್ಯ ಹೋಗಿ ಬಸವನಗುಡಿ , ಪ್ಯಾಲೇಸ್ ಮೈದಾನ ಆಗಿದೆ.  ಆದರೆ ನಮ್ಮನ್ನು ಉದ್ದೇಶಿಸಿ ಇಂದೂ ಕೂಡ ರಾಷ್ಟ್ರೀಯ ನಾಯಕರು ಭಾಷಣ ಮಾಡುತ್ತಾ ಇದ್ದಾರೆ,   ಮೂರು ನಾಲ್ಕು ಪೀಳಿಗೆ ಆಗಿದ್ದರು  ಉತ್ತರ ಭಾರತದ ನಾಯಕರಲ್ಲಿ ಏನು ಬದಲಾವಣೆ ಆಗಿಲ್ಲ , ಇವರಿಗೆ ಏನು ಗೊತ್ತಿಲ್ಲ ನಾವೇ ಹೇಳಿಕೊಡಬೇಕು ಧೋರಣೆ.
ನಮಗೋ ಉತ್ತರದ ನಾಯಕರೆ  ದೇವರುಗಳು , ಆವರು ಹೇಳದೆ ಒಂದು ಹುಲ್ಲು ಅಲಗಾಡುವದಿಲ್ಲ ಅನ್ನೋ ಕೀಳರಿಮೆ ಹಾಗಿಯೇ ಕೂತಿದೆ.
ನಮ್ಮನ್ನು ಉದ್ದೇಶಿಸಿ ಈಗಲೂ ಉತ್ತರದ ನಾಯಕರು  ಮೊದಲಿಗೆ  "ಭಾಯಿಯೋ ಬೆಹನೋ"  ( @ 1:22 ) ಎಂದೆ ಸಂಭೋಧಿಸುತ್ತಾರೆ , ಆದರೆ ಹಿಂದಿ ಹೇರಿಕೆಯನ್ನು ಒಪ್ಪದ , ಕನ್ನಡ/ಇಂಗ್ಲಿಶ್ ಬೇಕು ಎನ್ನುವ ಸ್ವಾಭಿಮಾನದ   ಕನ್ನಡಿಗರು ಮಾತ್ರ ಮಿಸ್ಸಿಂಗ್ ಅಷ್ಟೇ.

ಸಿಕ್ಕರೆ ಹುಡುಕಿಕೊಡಿ.

Saturday, July 23, 2016

ಮಾಯಾಚೌಕದ ಒಂದು ಮಾಯಲೋಕ

ಸಾರ್ವಜನಿಕವಾಗಿ ಗಣಿತದ ಬಗ್ಗೆ ಎಲ್ಲರಲ್ಲೂ ಒಂದು ಭಯ ಇದೆ. ಅನೇಕರಿಗೆ ಇದು ಕಬ್ಬಿಣದ ಕಡಲೆಯೇ.
ಎಷ್ಟೋ ಜನರ ಹಣೆಬರಹವನ್ನೇ ಇದು ಬದಲಾಯಿಸಿದೆ. ಇದರಿಂದ ಅನೇಕರು ತಮ್ಮ ವಿದ್ಯಾಬ್ಯಾಸ ಮೊಟಕು ಮಾಡಿಕೊಂಡಿರುವುದು  ಅಷ್ಟೇ ನಿಜ. 
ನನಗೆ ಗೊತ್ತಿರುವ ಅನೇಕರು ಪಿಯುಸಿನಲ್ಲಿ ಆರ್ಟ್ಸ್ ತೆಗೆದುಕೊಳ್ಳಲು ಕಾರಣವೇ ಈ ವಿಲನ್ ಗಣಿತ. 10 ಸಂಕ್ಯೆ ಇರುವ ಈ ಗಣಿತ ಮಾಡುವ ಕರಾಮತ್ತುಗಳು ಒಂದೆ ಎರಡೇ. 

ಎಸ್‌ಎಸ್‌ಎಲ್‌ಸಿ ನಲ್ಲಿ ಯಾಕೆ ಇಷ್ಟು  ಜನ ಫೇಲ ಆಗುತ್ತಾರೆ ಎಂದು ಒಂದು ಯೋಚನೆ  ಮಾಡುತ್ತಾ , ಅದರಲ್ಲೂ ಸರಕಾರಿ ಶಾಲೆಯ ಮಕ್ಕಳೇ ಹೆಚ್ಚು ಫೇಲ್ ಆಗುವ ಕಾರಣ ಹುಡುಕುತ್ತಾ  ಹೋಗಿದ್ದು ಒಂದು ಸರಕಾರಿ ಶಾಲೆಗೆ , ಪ್ರತಿ ಸರಕಾರಿ ಶಾಲೆಗೆ ಅದರದೇ ಆದ ಸಮಸ್ಯೆಗಳು ಇರುತ್ತದೆ. one size fits all ಮಾದರಿ ಯಾವ ಸಮಾಧಾನವು ಇರುವಧಿಲ್ಲ,  ಸರಕಾರ ಮತ್ತು ಅನೇಕ ಸಂಘ ಸಂಸ್ಥೆಗಳ ಸಹಯೋಗದಿಂದ ಪುಸ್ತಕ, ಬಟ್ಟೆ, ಕಂಪ್ಯೂಟರ್ ಎಲ್ಲ ಬರುತ್ತದೆ. ಮುಟ್ಟಿದರೆ ಇಲ್ಲ ಬಳಸಿದರೆ ಎಲ್ಲಿ ಹಾಳಾಗಿ ಹೋಗುತ್ತದೋ ಎಂಬ ಭಯದಲ್ಲಿ ಕಾಪಾಟಿನಲ್ಲಿ ಭದ್ರವಾಗಿ ಉಳಿಯುತ್ತದೆ,  ಹೇಗೆ ಕೊಟ್ಟಿದ್ದರೋ ಹಾಗೆ ಇರಬೇಕು ಎಂಬ ಅಲಿಕಿತ ನಿಯಮದ ಪರಿಪಾಲನೆ ಆ ಶಾಲೆಯ ಮುಕ್ಯಉಪಾಧ್ಯಾಯರಿಗೆ  ಇರುವಾಗ ,  ಪ್ರತಿ ವರುಷ ಆಡಿಟ್ ನಡೆದಾಗ ಅದನ್ನು ತೋರಿಸುವ , ಹಾಳಗಿದಲ್ಲಿ 108 ಜನರಿಗೆ ಉತ್ತರ ಕೊಟ್ಟು ತಮ್ಮ ಪಗಾರದಿಂದ ಕರ್ಚನ್ನು ತುಂಬಿಸುವ  ವ್ಯವಸ್ತೆಯಿಂದ ಶಾಲೆಗಳು ಮ್ಯೂಸಿಯಂ ಆಗಿ ಕುಳಿತಿವೆ. 

ಕೊಟ್ಟವರು ಕೂಡ ಅನೇಕ ಬಾರಿ ಪಾಪ ಪ್ರಜ್ಞೆ ಇಲ್ಲ ಸಮಾಜ ಸೇವೆ ಮಾಡೂತ್ತ ಇದ್ಧೀವಿ ಅನ್ನೋ ಪ್ರಜ್ಞೆಯಲ್ಲಿ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಇನ್ನೂ ಕೆಲವು ಬಾರಿ ನಮಗೆ ಬೇಡವ ಸರಿ ಸರಕಾರಿ ಶಾಲೆಗೆ ಕೊಡಿ ಅನ್ನೋ ಸಂಸ್ತೆಗಳು ಒಂದು ರೀತಿ ಸರಕಾರಿ ಶಾಲೆಗಳನ್ನು ಈ-ಗಾರ್ಬೆಜ್  ಬಿನ್ ಮಾಡಿಕೊಂಡಿವೆ. 

ಗಣಿತದ ವಿಷಯದಿಂದ ಶುರುವಾದ ಹುಡುಕಾಟ ವ್ಯವಸ್ಥೆಯನ್ನು ತೋರಿಸಿತು. ಹತ್ತನೇ ಮಕ್ಕಳು ಯಾಕೆ ಲೆಕ್ಕದಲ್ಲಿ ಹೀಗೆ ಎಂದು ನೋಡಿದಾಗ ಕಂಡು ಬಂದಿದ್ಧು ಅನೇಕರಿಗೆ ಗಣಿತದ ಆ ಆ ಇ ಈ ಗೊತ್ತಿಲ್ಲ , ಸಂಕ್ಯೆ ಬರೆಯಲು ಹೆಣಗುವ ಇಲ್ಲ  ಕೂಡುವಿಕೆ , ಕಳೆಯುವಿಕೆಯಲ್ಲೇ ಕಳೆದು ಹೋಗುತ್ತಾರೆ , ಇನ್ನೂ ಪೈತಗೋರಾಸ್ ದೂರದ ಮಾತು. 

ಪಾಯನೇ ಸರಿ ಇಲ್ಲ ಎಂದು 8ನೇ ತರಗತಿಗೆ ಹೋದರೆ ಅಲ್ಲಿ ಬೇರೆಯದೇ ಸ್ಥಿತಿ. ಓಧಿದರೆ ಅರ್ಥ ಆಗೋಲ್ಲ ಅಂತ ಮಕ್ಕಳ ಕೊರಗು. ಅದಕ್ಕೆ ಗಮನ ಕೊಡಬೇಕು ಹಾಗೆ ಹೀಗೆ ಅಂತ ಪ್ರವಚನ ಕೊಟ್ಟು  ಅಂಕ ಗಣಿತದ ಒಂದು ಪಾಠ ಕೈಗೆತ್ತಿಕೊಂಡು  ಹೇಳಿಕೊಡೋಣ ಎಂದು ಹೊರಟರೆ ನಾನು ಹುಡುಗರ ತರಹವೇ ಆದೆ.  ಆ ಕನ್ನಡ ಮಾಧ್ಯಮದ 8 ತರಗತಿಯ ಪುಸ್ತಕ ತೆಗೆದು ಕೊಂಡರೆ ಬೇಕಾಗುವುದು ಮೊದಲು ಒಂದು ಪದಕೋಶ , ಸಂಸ್ಕೃತ ಓದುತ್ತಾ ಇರುವ ಹಾಗೆ ಫೀಲ್ ಆಗುತ್ತದೆ. 
 ಯಾಕೆಂದರೆ ಅದರಲ್ಲಿ ಬರುವ ಪದಗಳೊ ದೇವರಿಗೆ ಪ್ರಿಯ ( ಅದಕ್ಕೆ ಸಂಸ್ಕೃತವನ್ನು ಗೀರ್ವಾಣ ಬಾಶ  ಅನ್ನೋದು).    

ಅಂಕಗಣಿತ - ಅಂದರೆ ಅಂಕಿಗಳೊಡನೆ ಆಟ ಆಗ ಬೇಕು ಅಲ್ಲವೇ ಅಂಕಿ ಹೋಗಿ ಸಂಕ್ಯೆ ಬಂತು. ಮಾಯಾ ಚೌಕ ಮಾಡುವುದು ಹೇಗೆ ಎಂಬ ಒಂದು ಪಾಠ ಇದೆ, ಅದರಲ್ಲಿ ಹೇಗೆ ಅದನ್ನು ಮಾಡಬೇಕು ಎಂದು ಕನ್ನಡದಲ್ಲೇ ಕೊಟ್ಟಿದ್ದಾರೆ ಆದರೆ ಅದನ್ನು ಹೇಳಿಕೊಡಲು  ಮತ್ತೊಮ್ಮೆ , ಮಗದೊಮ್ಮೆ ಓದಬೇಕು,  
ಓದುತ್ತಾ ಇದ್ದರೆ  ಕರ್ಣ , ದುರ್ಯೋಧನರು ಹಾಸು ಹೋಗುತ್ತಾರೆ.  ಕೆಲವೊಂದು ವಿಷಯ ಹೇಳಿಕೊಡುವಾಗ ಚಿತ್ರದ ರೂಪದಲ್ಲಿ ಹೇಳಿಕೊಟ್ಟರೆ ಮಕ್ಕಳಿಗೆ ಮುಟ್ಟುತ್ತದೆ ,  ಆ ಪ್ರಯತ್ನ ಮಾಡಿದೆ ಆದರೆ ಹೇಳಿಕೊಡುವಾಗ ಚಿತ್ರದಲ್ಲಿ ಯಾವುದು ಚೌಕ, ಕಂಬ , ಕರ್ಣ , ದುರ್ಯೋಧನ ಎಂದು ತೋರಿಸಿದರೆ ಮಕ್ಕಳಿಗೆ ಹೆಚ್ಚು ನಾಟುತ್ತದೆ. 

ಈ ಪಾಠವನ್ನು ಆ ವಿಷಯದವಾರು ಕಂಡಿತ ಮಾಡಿಲ್ಲ ಎಂದು ಪ್ರತಿ ಪುಟದಲ್ಲೂ ಗೊತ್ತಾಗುತ್ತದೆ, ಯಾರೋ  ಇಂಗ್ಲೀಷ್ -ಕನ್ನಡ ಅನುವಾದಕರ ಕೆಲ್ಸ ಎದ್ದು ಕಾಣುತ್ತದೆ. ಬೇರೆ ಭಾಷೆಯ ಪಾಠವನ್ನು ಯಥಾವತ್ತು ಬಟ್ಟಿ ಇಳಿಸಿದ್ದಾರೆ , ಸೆಲ್ ಹೋಗಿ ಕೋಶ ಆಗಿದೆ,  ಹೆಸರಿಗೆ ಮಾಯಾ ಚೌಕ , ಆದರೆ ಅದರಲ್ಲಿ ಇರುವುದೆಲ್ಲ ಬಾರಿ ಕೋಶಗಳೆ.   ಇನ್ನೂ ನಿಯಮಗಳಿಗೆ ಬಂದರೆ 

ನಿಯಮ 1 ) ಕರ್ಣದ  ಎಡ ಭಾಗದಿಂದ ಬಲಭಾಗದ್ವರೆಗೆ  ಒಂದು ಕಾಲಿ ಕೋಶವಿದ್ದಲ್ಲಿ  ಅದನ್ನು ಮುಂದಿನ  ಸಂಕ್ಯೆಯಿಂದ ತುಂಬಿರಿ , ಇಲ್ಲಿ ಕರ್ಣದ ಗುಂಟ 4 ರ ನಂತರ ಒಂದು ಕಾಲಿ ಕೋಶ ಇದೆ , ಅದನ್ನು ತುಂಬಿರಿ . 

ಇದನ್ನು ಓಧಿ  ಏನು ಅರ್ಥವಾಗದೆ ಪಕ್ಕದಲ್ಲಿ ಇದ್ದ ಚಿತ್ರವನ್ನೂ ನೋಡಿ ಒ.. ಹೀಗಾ ಎಂದು ಅರ್ಥ ಮಾಡಿಕೊಂಡೆ. 

ಇನ್ನೂ 2 ನಿಯಮಕ್ಕೆ ಬಂದರೆ ಅದು ಇನ್ನೂ ಗೋಜಲು ಗೋಜಲು ಆಗಿದೆ ..

ಕರ್ಣದಲ್ಲಿ  ಕಾಲಿ ಕೋಷವಿಲ್ಲದಲ್ಲಿ ಮತ್ತು ಮುಂದೆ ಕಂಬಸಾಲುಗಳಲ್ಲಿದ್ದಲ್ಲಿ  ಮೂಂದಿನ ಕಂಬಸಾಲಿನ ಕೆಳಭಾಗದ ಕೋಶವನ್ನು ಮುಂದಿನ ಸಂಕ್ಯೆಯಿಂದ  ತುಂಬಿರಿ . ನಿಯಮ 1 ನ್ನು ಅನುಸರಿಸಿ ( ಇಲ್ಲಿ ಕರ್ಣ ಗುಂಟ  1 ನಂತರ ಯಾವುದೇ ಕೋಶವಿಲ್ಲ , ಆದುದರಿಂದ ಮುಂದಿನ ಕಂಬ ಸಾಲನ್ನು  ಅತ್ಯಂತ ಕೆಳಗಿನ ಕೋಷಕ್ಕೆ ಹೋಗಿ 2 ನ್ನು ತುಂಬುತ್ತೇವೆ) 

 ಮತ್ತೊಮೆ ಏನು ಅರ್ಥವಾಗದೆ ಚಿತ್ರ ನೋಡಿ ಕನ್ನಡ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಧೆ.  ಮುಂದಿನ ನಿಯಮಯಕ್ಕೆ ಹೋಗುವ ಧೈರ್ಯ ಬರಲಿಲ್ಲ. ಓದಿಕೊಂಡು ಬರುವೆ ಎಂದು ಹೇಳಿ ಜಾಗ ಕಿತ್ತೆ.  

ದಾರಿಯಲ್ಲಿ ಇದನ್ನು ಹೇಗೆ ಸರಳಗೊಳಿಸಬಹುದು ಎಂಬುದೇ ಯೋಚನೆ , ಮಕ್ಕಳಿಗೆ ಇದು ಆಗಲೆ ಪಾಠ ಆಗಿದೆ, ಇದನ್ನು ಹೇಳಿಕೊಟ್ಟಿರುವ ಶಿಕ್ಷಕರು ಪುಸ್ತಕದಲ್ಲಿ ಹೇಗಿದೆಯೋ ಹಾಗೆ ಆದನು ಓದಿರುತ್ತಾರೆ , ಮಕ್ಕಳಿಗೆ ಅರ್ಥ ಆಗಿದೆಯೋ ಇಲ್ವೋ ಅಂತ ತಲೆ ಕೆಡಿಸಿಕೊಳ್ಳುವದಿಲ್ಲ , ಮಕ್ಕಳು ಹಾಗೆ ಅರ್ಥ ಆಗಿಲ್ಲ ಇನ್ನೊಮ್ಮೆ ಹೇಳಿ ಅಂತ ಕೇಳೋಲ್ಲ , ಪಾಠ ಮುಗಿದರೆ ಸಾಕು, ಬೆಲ್ ಹೊಡೆದರೆ ಸಾಕು  ಅನ್ನೋ ಅವಸರ.,

ಮನೆಗೆ ಬಂದ ಮೇಲೆ ಯು-ಟ್ಯೂಬನಲ್ಲಿ ಏನಾದರೂ ಸಿಗಬಹುದಾ ಅಂತ ಹುಡುಕಿದೆ. ಇದು ಸಿಕ್ಕಿತು ,ಆದರೆ ಇದು ಒಂದು ಟ್ರಿಕ್ , 4 x 4ಗೆ 

ನನಗೆ ತೋಚಿದ್ದು , 
* ಚಿತ್ರಗಳನ್ನು ಹೆಚ್ಚು ಬಳಸಬೇಕು 
* ಯಾವ ಚೌಕದ ಬಗ್ಗೆ ಹೇಳುತ್ತಾ ಇದ್ದಾರೆ , ಯಾವ ಕರ್ಣದ ಬಗ್ಗೆ ತಿಳಿಸುತ್ತಾ ಇದ್ದರೆ ಎಂದು ಬಣ್ಣದ ಮೂಲಕ ಹೇಳಬಹುದು.
* ಚೌಕಕ್ಕೆ ಬಣ್ಣಗಳನ್ನು ಬಳಸಿದರೆ ಹೆಚ್ಚು ಅರ್ಥ ಆಗಬಹುದು.
*  ಕರ್ಣ , ಗುಂಟ , ಕಂಬಸಾಲು ಏನು ಎಂದು ವಿವಿದ ಗೆರೆ  ಮೂಲಕ ತೊರಿಸಿದರೆ ಮಕ್ಕಳಿಗೆ ಸತತ ಮನನ ಆಗುತ್ತದೆ.
*  ಬಾಣಗಳ ಮೂಲಕ ತೋರಿಸಿದರೆ ಇನ್ನೂ ಹೆಚ್ಚು ಅನಕೂಲ. 


ಎಲ್ಲಕ್ಕಿಂತ ಆಗಬೇಕಾಗಿರುವುದು ಸರಳಿಕರಣ,  ಮಕ್ಕಳಿಗೆ ಹೆಚ್ಚು ಚಿತ್ರ ಕಮ್ಮಿ ಸಂಸ್ಕೃತ ಕನ್ನಡದ ಅನುವಾದ ಇರಬೇಕು. ಚಿತ್ರವನ್ನೂ ನೋಡಿ ಮಕ್ಕಳು ತಮಗೆ ಬೇಕಾದ ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.   ಎನಂತೀರಾ ?






Sunday, January 03, 2016

ಆ ಸುಂದರ ದೊಡ್ಡ ಕನಸೇ... ತಾಯಿ ಭುವನೇಶ್ವರಿ


ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??

ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.

ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.