Friday, December 26, 2008

ಬುದ್ದಿಜೀವಿಗಳ ಜೋಕುಗಳು..

೧)

ತಾವು ನಯಾ ಪೈಸೆ ಕೆಲ್ಸ ಮಾಡದೇ ಕನ್ನಡ ಚಿಂತಕರು ಎಂದು  ಕರೆದುಕೊಳ್ಳುವ ಬುದ್ದೀಜೀವಿಗಳ, ಸಾಹಿತಿಗಳ, ಜ್ಞ್ನಾನಪೀಠಿಗಳ ಗುಂಪು ನಮ್ಮಲ್ಲಿ ಸಾಕಷ್ಟಿವೆ,  ಕನ್ನಡಕ್ಕೆ ಹೋರಾಡುವ  ಸಂಘಟನೆಯ ಸೈನಾನಿಗಳನ್ನು ಆಡಿಕೊಳ್ಳುವುದು, ಕಾಲೆಳೆಯುವುದೇ ಇವರ ಕೆಲ್ಸ...  ಇವರು ಒಮ್ಮೆ  ಒಂದು ಕೊಳದಿಂದ ಮೀನನ್ನು ಎತ್ತಿ ನೆಲಕ್ಕೆ ಹಾಕುತ್ತ ಇರುತ್ತಾರೆ
ಇದನ್ನು ಕನ್ನಡ ಸಾಮನ್ಯ ಜನ,  ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳ್ತಾರೆ ??
ಅಯ್ಯೋ ಬುದ್ದು..ನಾನು ಮೀನನ್ನು ನೀರಿನಲ್ಲಿ ಮುಳುಗಿ ಸಾಯುವದರಿಂದ ತಪ್ಪಿಸುತ್ತ ಇದ್ದೇನೆ ಎನ್ನುತ್ತಾರೆ.  ಇವರಿಗೆ ಕನ್ನಡ ಉಳಿಸಿ ಎಂದರೆ ಎನೂ ಮಾಡುತ್ತಾರೆ ??

೨)

ಒಮ್ಮೆ ಈ ಬುದ್ದಿಜೀವಿಗಳು ಒಬ್ಬನನ್ನು ಹಿಡಿದುಕೊಂಡಿರುತ್ತಾರೆ, ಅವನು ಬಿಡ್ರಪ್ಪೊ ಬಿಡಿ ಅಂತ ಬೊಂಬಡಾ ಹೋಡಿಯುತ್ತ ಇರುತ್ತಾನೆ. ಅದನ್ನು ನೋಡಿದ ಕನ್ನಡ ಸಾಮನ್ಯ ಜನ,  ಸ್ವಾಮಿ ಎನು ಮಾಡುತ್ತ ಇದ್ದೀರಾ ಅಂತ ಕೇಳುತ್ತಾರೆ..
ಅದಕ್ಕೆ ಅವರು, ನೋಡಪ್ಪ ಇವನಿಗೆ ಒಂದು ಕೋಟ್ ಹೊಲೆದಿದ್ದೇವೆ,ಆದರೆ ಅದು ಇವನ ಅಳತೆಗೆ ಸರಿ ಹೋಗುತ್ತ ಇಲ್ಲ. ಅದಕ್ಕೆ ಇವನ ದೇಹವನ್ನು ಕತ್ತರಿಸುತ್ತ ಇದ್ದೇವೆ ಅನ್ನುತ್ತಾರೆ...
ಇವರಿಗೆ ಕನ್ನಡ ಬಗ್ಗೆ ಚಿಂತನೆ ಮಾಡಿ ಎಂದರೆ .... ಇವರು ಕಂಡಿರುವ ಚೌಕಾಸಿ ಕನಸಿಗೆ ಹೊಂದಿಸಲು ಕನ್ನಡವನ್ನು ಬಲಿಕೊಡುತ್ತರೆ ಅಷ್ಟೆ.

೩)
ಒಮ್ಮೆ ನಮ್ಮ ಜ್ಞಾನಪೀಠಿ ಎನೋ ದೀಪದ ಕೆಳಕ್ಕೆ ಹುಡುಕುತ್ತ  ಇರುತ್ತಾರೆ,  ಅವರಿಗೆ ಸಹಾಯ ಮಾಡೊಣ ಅಂತ ನಮ್ಮ ಕನ್ನಡ ಹೈದ ಹೋಗಿ..
ಸ್ವಾಮಿ ಎನು ಹುಡುಕುತ್ತ ಇದ್ದೀರಾ ಅಂತ ಕೇಳುತ್ತಾನೆ..
ಅದಕ್ಕೆ ಜ್ಞಾನಪೀಠಿ " ನನ್ನ ಕೀ(ಚಾವಿ) ಕಳೆದು ಹೋಗಿದೆ, ಹುಡುಕುತ್ತ ಇದ್ದೇನೆ" ಅನ್ನುತ್ತಾನೆ.
ಹೈದ ಅದಕ್ಕೆ "ಎಲ್ಲಿ ಕಳೆದುಕೊಂಡಿರಿ ಅಂತ ಕೇಳುತ್ತಾನೆ..
ಜ್ಞಾನಪೀಠಿ .. ಒ..ನಮ್ಮ ಮನೆ ಹತ್ತಿರ ಕಳೆದುಕೊಂಡೆ ಎನ್ನುತ್ತಾನೆ.
ಹೈದ  ಅದಕ್ಕೆ ಯಾಕೆ ಇಲ್ಲಿ ಹುಡುಕುತ್ತ ಇದ್ದೀರಾ ಮತ್ತೆ ಅಂತ ಪ್ರಶ್ನೆ ಮಾಡಿದಾಗ
ಜ್ಞಾನಪೀಠಿ :- ಇಲ್ಲಿ ಬೆಳಕು ಇತ್ತು ಅದಕ್ಕೆ ಎನ್ನುತ್ತಾರೆ.

ಕನ್ನಡ ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಇವರು ಹುಡುಕುವ ಕೆಲ್ಸಗಳು ಕೂಡ ಅಷ್ಟೆ.