Sunday, September 20, 2009

ಬೊಂಬೆಯಾಟವಯ್ಯ...


ಮೊದಲಿಗೆ ಸಮಸ್ತ ಭಾಂಧವರಿಗೆ ದಸರಾ ಹಬ್ಬದ ಶುಭಾಶಯಗಳು, ದಸರಾ ಬಂತು ಅಂದರೆ ಚಿಕ್ಕ ವಯಸ್ಸಿನಿಂದ ಮನಸ್ಸಲ್ಲಿ ಎನೊ ಉತ್ಸಾಹ. ಅದು ೧೦ ದಿನ ಬರುವ ರಜೆಗೆ ಒಂದು ಕಾರಣ ಇದ್ದರೆ ಬೊಂಬೆ ಹಬ್ಬಕ್ಕೆ ಇನ್ನೊಂದು. ನಮಗೆ ದಸರಾ ಅಂದರೆ ಬೊಂಬೆ ಹಬ್ಬ ಅಂತಲೇ ಬಾಯಿಗೆ ಬರುವುದು, ಆ ರೀತಿ ಎರಡೂ ಸಮನಾರ್ಥಾ ಆಗಿದೆ. ಬೊಂಬೆಗಳನ್ನು ಚಿಕ್ಕವರಿದ್ದಾಗ ಕೂರಿಸುವ ಮಜವೇ ಬೇರೆ ಇತ್ತು, ಅದರಲ್ಲಿ ನಮ್ಮ ಬೊಂಬೆಗಳು ಇಲ್ಲೇ ಕೂರಬೇಕು ಅನ್ನೊ ಹಟ, ಅವುಗಳು ಚೆನ್ನಾಗಿ ಕಾಣಲು ಸಿಂಗಾರ ಮಾಡುತ್ತಿದ್ದ ಪರಿ
ಆ ಸಂಭ್ರಮಗಳೇ ಹಬ್ಬವನ್ನು ಎದುರು ನೋಡಲು ಮಾಡುತ್ತಿದ್ದವು. ಸಿಂಗಾರಕ್ಕೆ ಬಳಸಲು ಎಲ್ಲ ಕಸಗಳು ಬಳಕೆ ಆಗುತ್ತಿದ್ದವು. ಸಿಗರೇಟಿನ ಬಂಗಾರದ ಕಾಗದ, ಚಾಕಲೇಟಿನ ಪೇಪರ್ ಹೀಗೆ ಹತ್ತು ಹಲುವಾರು.

ಪ್ರತಿ ದಿನ ಸಾಯಂಕಾಲ ನಮ್ಮ ಚಾಳಿನ(ವಠಾರ) ಎಲ್ಲಾ ಮಕ್ಕಳು ಮನೆಗೆ ಬರುತ್ತಿದ್ದರೂ, ಅವರಿಗೆ ನಮ್ಮ ಮನೆಯಲ್ಲಿ ಇಷ್ತೋಂದು ಬೊಂಬೆ ಇವೆ ಅಂತ ತೋರಿಸಿಕೊಳ್ಳುವ ಖುಷಿ ನಮಗೆ. ಹಾಗೆ ಬಂದ ಮಕ್ಕಳನ್ನು ಒಂದು ಕಡೆ ಕೂರಿಸಿ ಅವರನ್ನು ನಮ್ಮ ಹದ್ದಿನ ಕಣ್ಣಿನಿಂದ ಕಾಯುತ್ತ ಇದ್ದೇವು. ಎಲ್ಲಿ ಅವರು ಯಾವುದಾರರೂ ಬೊಂಬೆ ಮುಟ್ಟಿದರೆ ಅವರಿಗೆ ಗದರಿಸುವ ಪರಿ ನೆನಸಿಕೊಂಡರೆ ನಗು ಬರುತ್ತದೆ. ಬಂದ ಮಕ್ಕಳೆಲ್ಲ್ಲ ನಮಸ್ಕಾರ ಮಾಡಿ, ಹಾಡು ಹೇಳಿ, ಶ್ಲೋಕ ಹೇಳಿದ ಮೇಲೆ ದಿನಕ್ಕೆ ಒಂದು ಪ್ರಸಾದ ಕೊಡುತ್ತಿದೆವು.
ಅವುಗಳಲ್ಲಿ ಉಸಲಿ, ಮೈಸ್ರೂರು ಪಾಕ್, ಭರ್ಫಿ, ಉಂಡೆ, ಸಿಹಿದೋಸೆ, ಚಕ್ಕಲಿ, ಗನಪೌಡರ್, ನಿಪ್ಪಟ್ಟು, ಹೀಗೆ ದಿನಕ್ಕೆ ಒಂದು ಅಪ್ಪಚ್ಚಿ ಇರುತ್ತಿದವು. ನಮಗೋ ದಿನ ಒಂದು ತಿಂಡಿ ತಿನ್ನುವುದೇ ಒಂದು ಸಂತೋಷ.

ಎಲ್ಲ ಗೆಳೆಯರನ್ನು ಬೀಳ್ಕೋಟ್ಟು, ನಾಳೆ ನಮ್ಮ ಮನೆಗೆ ತಪ್ಪದೇ ಬರಬೇಕು ಅಂತ ಹೇಳಿ ಇನ್ನೊಬ್ಬರ ಮನೆಗೆ ದೌಡಾಯಿಸುತ್ತ ಇದ್ದೇವು. ಅಲ್ಲಿ ಎಲ್ಲರ ಮನೆಯಲ್ಲಿ ಪ್ರಸಾದ ತಿಂದು ಮನೆ ಸೇರುವಷ್ಟರಲ್ಲಿ ಕತ್ತಲು ಆಗಿರುತ್ತ ಇತ್ತು. ಇವುಗಳ ಮಧ್ಯೆ ಟಿವಿ ಹೊಸದಾಗಿ ಬಂದ ಕಾಲವದು, ನಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ನೋಡುವ ಅವಸರದಲ್ಲಿ ಹೋದ ಮನೆಗೆ ಬೇಗ ಪ್ರಸಾದ ಕೊಡಲು ಹೇಳುತ್ತ ಇದ್ದೆವು ಕೂಡ. ಕೆಲವೊಂದು ಸಾರಿ ಟಿವಿಯಿಂದಲೇ ಅನೇಕ ಮಕ್ಕಳು ಮನೆಗೆ ಬರುತ್ತ ಇದ್ದೆವು.

ಇದರಲ್ಲಿ ಒಂದು ದಿನ( ಸಪ್ತಮಿ) ಸರಸ್ವತಿ ಪೂಜೆ, ನಾವು ನಮ್ಮ ಪುಸ್ತಕಗಳನ್ನು ಇಡಬೇಕು. ಇದನ್ನು ತುಂಬಾ ಚೆನ್ನಾಗಿ ಮಾಡುತ್ತ ಇದ್ದೆವು, ಓದಿ ಕೊಳ್ಳಿ ಎಂದು ಹೇಳಿದರೆ ಪುಸ್ತಕ ಇಲ್ಲ ಅನ್ನೊ ನೆಪ, ನಮಗೆ ಒಳಗೊಳಗೆ ಖುಷಿ, ಆ ಪುಸ್ತಕಗಳು ೩ ದಿನ ಲಾಕ್ ಆಗಿರುತ್ತ ಇದ್ದವು. ೩ ದಿನ ನಮಗೆ ನೋ ಪಾಠ, ಬರೀ ಆಟ.

ಕಾಲಕ್ರಮೇಣ ದೊಡ್ಡವರಾದ ಹಾಗೆ ಇದರ ಬಗ್ಗೆ ಆಸಕ್ತಿ ಹೋಯಿತು, ಚಿಕ್ಕ ವಯಸ್ಸಲ್ಲಿ ಇದ್ದ ಉತ್ಸಾಹ ಕಮರಿತ್ತು. ತಿಂಡಿಗಳು-ಬೊಂಬೆಗಳು ಎರಡೂ ಆಸಕ್ತಿ ಹುಟ್ಟಿಸದಂತ ವಯಸ್ಸು. ಆದರೂ ಶಾಸ್ತ್ರಕ್ಕೆ ಬೊಂಬೆ ಕೂರಿಸುತ್ತ ಇದ್ದೆವು. ಹಳೆ ಬೊಂಬೆಗಳನ್ನು ಮತ್ತೆ ತೆಗೆದು ವರೆಸಿ ಕೂರಿಸುವಾಗ ಮನಸ್ಸಲಿ ಒಂಥಾರ ಸಂತೋಷ, ಮನಸ್ಸು ಒಮ್ಮೆಯೇ ಗತಕಾಲಕ್ಕೆ ಜಾರಿರುತ್ತ ಇತ್ತು.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಆ ಉತ್ಸಾಹ ಕಾಣುತ್ತ ಇಲ್ಲ, ಶಾಸ್ತ್ರಕ್ಕೆ ಸರಸ್ವತಿ ಪೂಜೆ ದಿನ ಒಂದೆರೆಡು ಪಟ್ಟದ ಬೊಂಬೆಗಳನ್ನು ಕೂರಿಸಿ ಶಾಸ್ತ್ರ ಮುಗಿಸುವ ಸಂಪ್ರಾದಾಯ ಬಂದಿದೆ. ಮನೆಯಲ್ಲಿ ಮಕ್ಕಳು ಹೆಚ್ಚಾದ ಹಾಗೆ ಅವು ನಮ್ಮ ಕಾಲದಲ್ಲಿ ನಾವು ಅನುಭವಿಸಿದ ಸಂತೋಷ ಅನುಭವಿಸಲು ಎಂದು ಮತ್ತೆ ಆ ರೀತಿಯಲ್ಲೇ ಆ ಮಟ್ಟದಲ್ಲೇ ಬೊಂಬೆ ಕೂರಿಸಲು ಶುರು ಮಾಡಿದೆವು. ಸಾಲದಕ್ಕೆ ನಮ್ಮ ಎರಿಯಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಕೂಡ ಪಾಲ್ಗ್ಲೊಂಡೆವು. ಇದರ ಉದ್ದೇಶ ನಮ್ಮಲ್ಲಿ ಒಂದು
ಸ್ಪರ್ಧೆ ಮೂಡಿ, ನಾವು ಇನ್ನಾ ಚೆನ್ನಾಗಿ ಮಾಡಬೇಕು ಅನ್ನೊ ಹುಮ್ಮಸಿಗೆ.

ಮಕ್ಕಳಿಗೆ ಇದು ನಮ್ಮ ಹಬ್ಬ ಅನಿಸೋ ಹಾಗೆ ಮಾಡಲು ಮಕ್ಕಳನ್ನೇ ಎಲ್ಲರ ಮಕ್ಕಳಿಗೆ ಕಳಿಸಿ ಎಲ್ಲ ಮಕ್ಕಳನ್ನು ಕರೆಯುವುದು,
ಮಕ್ಕಳಿಂದ ಬೊಂಬೆ ಬಾಗಿನ ಕೊಡಿಸುವುದು. ಮಕ್ಕಳೆಲ್ಲಾ ಸೇರಿದಾಗ ಅವುಗಳ
ಅದಕ್ಕೆ ಎನು ಇಡಬೇಕು ಅಂತ ಯೋಚಿಸುತ್ತ ಇದ್ದಾಗ ಅನಿಸಿದ್ದು ಈ ಬಾರಿ ಕೆಲವು ತೀಮ್ ಇಟ್ಟುಕೊಂಡು ಮಾಡೊಣ. ಪ್ರತಿ ತೀಮ್ ಬಗ್ಗೆ ಮಕ್ಕಳಲ್ಲಿ ಹೇಳಿ, ಕೊನೆ ದಿನ ರಸಪ್ರಶ್ನೆ ಎರ್ಪಡಿಸೋಣ ಅಂತ. ಇದರಿಂದ ಬಂದ ಮಕ್ಕಳಿಗೆ ಸ್ವಲ್ಪ ಮಜಾ ಮಾದರಿಯಲ್ಲಿ ಇರಲಿ ಅಂತ.

ಈ ಸಾರಿ ಹೇಗೆ ಕೂರಿಸಬೇಕು ಅಂತ ಮಾತನಾಡುತ್ತ ಇದ್ದಾಗ ಅನಿಸಿದ್ದು, ೩೫ ವರುಷಗಳ ಹಳೇ ಬೊಂಬೆಗಳನ್ನೇ ಮತ್ತೆ ಇಡುವ ಬದಲು ಹೊಸ ಬೊಂಬೆಗಳನ್ನು ಇಡೋಣ ಅಂತ. ಯಾಕೆ ಎಂದರೆ ಅನೇಕ ಬೊಂಬೆಗಳು ಮುರಿದು ಭಗ್ನವಾಗಿದ್ದವು, ಇಲ್ಲ ಬಣ್ಣ ಕಳೆದುಕೊಂಡು ಸವಕಲು ಆಗಿತ್ತು. ಅದಕ್ಕೆ ಅಂತಲೇ ಶಾಪಿಂಗ್ ಮಾಡುವ ನಿರ್ಧಾರಕ್ಕೆ ಬಂದು, ಯಾವ ಯಾವ ಬೊಂಬೆಗಳನ್ನು ತರಬೇಕು ಎಂದು ಪಟ್ಟಿ ಮಾಡಿಕೊಂಡೆವು.


ಆದರೆ ಈ ಬೊಂಬೆಗಳು ಎಲ್ಲಿ ಸಿಗುತ್ತವೆ ಅನ್ನೋದೆ ದೊಡ್ಡ ಜಿಜ್ಞಾಸೆ ಆಗಿತ್ತು, ಮಲ್ಲೇಶ್ವರಂ ಮತ್ತು ಬಸವನಗುಡಿ ಇಲ್ಲಿ ಸಿಗುತ್ತವೆ ಅಂತ ಹೋದೆವು. ಅಲ್ಲಿ ಹೊಸ ಬೊಂಬೆಗಳ ಸಾಗರವೇ ಇದ್ದವು. ನಾನು ಬೊಂಬೆಗಳ ಬೆಲೆ ಕೇಳಿ ಹಾಹಾರಿ ಹೋದೆ. ಚಿಕ್ಕ ಪುಟ್ಟ ಬೊಂಬೆಗಳೇ ೧೫೦ ರೂಪಾಯಿ. ೧ ಸಾವಿರ ರೂಪಾಯಲ್ಲಿ ಎಲ್ಲಾ ಬೊಂಬೆ ತೆಗೆದುಕೊಂಡು ಬರೋಣ ಅನ್ನೋ ನಮ್ಮ ಕಲ್ಪನೆಗೆ
ತಣ್ಣಿರು ಎರಚಿದ ಹಾಗೆ ಆಯಿತು. ಅದು ನನ್ನ ಒಬ್ಬನ ಪಾಡು ಆಗಿರಲ್ಲಿಲ್ಲ , ಬಂದವರಿಗೆಲ್ಲಾ inflation ತಾಪ ತಟ್ಟಿತ್ತು. ವಿಧಿ ಇಲ್ಲದೇ
ಬಂದವರೆಲ್ಲಾ ತೆಗೆದುಕೊಂಡು ಹೋದರು. ನಾವೇನೋ ಒಂದು ಹನುಮಂತನ ಬಾಲ ಪಟ್ಟಿ ಮಾಡಿಕೊಂಡಿದ್ದೆವು, ಅದರಲ್ಲಿ ಅರ್ಧ
ಇಲ್ಲ ಈಗ ಮಾಡುತ್ತ ಇಲ್ಲ ಅನ್ನೊ ಉತ್ತರ ಬಂದರೆ, ಇನ್ನ ಕೆಲವು sold out ಆಗಿವೆ ಅನ್ನೊ ಉತ್ತರ ಬಂದವು.
ಉಳಿದವುಗಳಲ್ಲಿ ಬೇಕಾದವುಗಳನ್ನು ಆರಿಸಿಕೊಂಡು ಬರುವಷ್ಟರಲ್ಲಿ ಅಂದುಕೊಂಡ ಖರ್ಚಿಗಿಂತ ಹತ್ತು ಪಟ್ಟು ಆಗಿದ್ದವು.
ಅಂಗಡಿಯವನಿಗೆ ಯಾಕೆ ಈ ಪಾಟಿ ರೇಟು ಅಂತ ಕೇಳಿದಾಗ ಅಯ್ಯೋ ದೊಡ್ಡ ಕಥೆ ಅಂದ ..
ಹಿಂದೆ ಮಣ್ಣಿನ ಬೊಂಬೆ ಮಾಡುತ್ತ ಇರುವರು ಸಿಕ್ಕುತ್ತ ಇದ್ದರು, ಈಗ ಕೈಗೆ ಸಿಗುತ್ತ ಇಲ್ಲ, ಹಾಗೋ ಹೀಗೊ ಹಿಡಿದರು ಅವರನ್ನು
೫ ಲಕ್ಷ ಅಡ್ವಾನ್ಸ ಕೇಳುತ್ತಾರೆ, ಒಂದು ವಾರ ಕೆಲ್ಸ ಮಾಡಿ ಆಮೇಲೆ ಪರಾರಿ ಆಗುತ್ತಾರೆ. ಸಿಗುತ್ತಿರುವ ಬೊಂಬೆಗಳೆಲ್ಲಾ ತಮಿಳುನಾಡಿನವು ಅಂದ. ಅದೇನೊ ಆ ಅಂಗಡಿಯಲ್ಲಿ ವ್ಯಾಪರಕ್ಕೆ ಬಂದವರು ೯೫% ತಮಿಳರೇ ಇದ್ದರು.

ಮುಂದಿನ ಸಂಚಿಕೆಯಲ್ಲಿ ಬೊಂಬೆಗಳನ್ನು ಕೂರಿಸುವ ವಿಧಾನ ಮತ್ತು ಸಲಹೆಗಳನ್ನು ಕೊಡುವೆ... ನಿರೀಕ್ಷಿಸಿ.


Wednesday, September 16, 2009

World Wide survey by UN

Worldwide survey was conducted by the UN. The only question asked was:

"
Would you please give your honest opinion about solutions to the food shortage in the rest of the world?"

The survey was a huge failure, In Africa they didn't know what
'food' meant, In India they didn't know what 'honest' meant, In Europe they didn't know what 'shortage' meant, In China they didn't know what 'opinion' meant, In the Middle East they didn't know what 'solution' meant, In South America they didn't know what 'please' meant, And in the USA they didn't know what 'the rest of the world' meant!

Saturday, September 12, 2009

ಪ್ರೇಮಕಹಾನಿ - Prem Kahani Film Review



ಒಂದು ಚಿತ್ರ ತುಂಬಾ ಹೈಪ್ ಮಾಡಿಕೊಂಡರೆ ಒಂದು ರೀತಿ ಕಷ್ತ, ಜನರಲ್ಲಿ ದಿನಕಳೆದಂತೆ ಹೆಚ್ಚು
ನಿರೀಕ್ಷೆ ಬೆಳೆಯುತ್ತದೆ, ಇದಕ್ಕೆ ಪ್ರೇಮಕಹಾನಿ ಹೊರತಲ್ಲ. ೨ ತಿಂಗಳಿಂದ ಇವತ್ತು ನಾಳೆ ಅನ್ನೋ ರೀತಿಯಲ್ಲಿ
ಬಂದು ಹೊಗುತ್ತಲೆ ಇತ್ತು. ರಾಜ್ ಜೊತೆ ತೆರೆ ಕಾಣುತ್ತದೆ, clash of titans ಆಗೊತ್ತೆ ಅಂತ ನಿರೀಕ್ಷೆ ಇತ್ತು, ಆದ್ರೆ ರಾಜ್ ಕ್ಲಿಕ್ ಆಗಿ ಅದು ಇದಕ್ಕೆ ಹೊಡೆತ ಬೀಳಬಹುದು ಅಂತ ಭಯದಲ್ಲಿ ಮತ್ತೆ ಮುಂದೂಡಲಾಯಿತು.
ಯಾವಾಗ ರಾಜ್ ಸೋತು ಸುಣ್ಣ ಆಯಿತೂ , ಎಲ್ಲರ ಗಮನ ನೆಟ್ಟಿದ್ದು ಪ್ರೇಮಕಹಾನಿ ಮೇಲೆ, ಇದೇ
ಕನ್ನಡ ಚಿತ್ರರಂಗಕ್ಕೆ ಸಂಜೀವಿನಿ ಅನ್ನೊ ಮಾತುಗಳು, ನೋಡಿದವರೆಲ್ಲಾ ವಾಹ್ ವಾಹ್ ಅಂತ ಇದ್ದಾರೆ ,ಅದ್ದರಿಂದ ಇದು ಇನ್ನೊಂದು ತಾಜಮಹಲ್ ಆಗುತ್ತದೆ ಅನ್ನೊ ಮಾತುಗಳು ಕೇಳಿ ಬರತೊಡಗಿದವು.


ಇಂತಹ ಹೈಪ ಆದ ಚಿತ್ರಗಳನ್ನು ಮೊದಲ ದಿನವೇ ನೋಡಬೇಕು, ಇಲ್ಲವಾದರೆ ಪತ್ರಿಕೆಗಳ ರಿವ್ಯೂನಲ್ಲಿ ಅನೇಕ ಅಂಶಗಳು ಕಳೆದು ಹೋಗಿತ್ತವೆ.

ನಗೆ ಹನಿ + ಕಣ್ಣೀರ ಹನಿ = ಪ್ರೇಮ ಕಹಾನಿ, ಈ ಒಂದು ನಿಯಮದಲ್ಲೇ ಇಡಿ ಚಿತ್ರದ ಕಥೆ ಅಡಗಿದೆ ಅಂದರೆ ನಂಬಲೇ ಬೇಕು. ಇದರಲ್ಲಿ + ಅನ್ನೊಂದು ಮಧ್ಯಂತರ ಅಷ್ಟೆ. ಚಂದ್ರು ತಾವು ತಾಜಮಹಲ್ ನಲ್ಲಿ ಮಾಡಿದ ಜಾದೂವನ್ನು ಇದರಲ್ಲೂ ಮಾಡಲೇಬೇಕು ಅನ್ನೊ ಅವಸರದಲ್ಲಿ ಸ್ವಲ್ಪ ಕುರುಡು ನಂಬಿಕೆಗೆ ಮಾರು ಹೋಗಿದ್ದಾರೆ. ಅದರಲ್ಲಿ ಮಾಡಿದ ಹಂದರವನ್ನೇ ಇದರಲ್ಲಿ ಮಾಡಲು ಹೋಗಿದ್ದಾರೆ, ಒಂದು ಲೆಕ್ಕದಲ್ಲಿ ಗೆದ್ದೆತ್ತಿನ ಬಾಲಕ್ಕೆ ಜೋತು ಬಿದ್ದಿದ್ದಾರೆ.

ನೀವು ತಾಜಮಹಲ್ ಮತ್ತು ಪ್ರೇಮಕಹಾನಿ ನೋಡಿದರೆ ಕೆಲವು ಸಾಮನ್ಯ ಅಂಶ ಕಾಣುತ್ತದೆ

೧) ನಾಯಕ ಬಡವ, ನಾಯಕಿ ಶ್ರೀಮಂತೆ ಅವರಿಬ್ಬರ ಮಧ್ಯೆ ಪ್ರೇಮಾಂಕುರ.

೨) ನಾಯಕ ಮನೆಯಲ್ಲಿ ಕಿತ್ತು ತಿನ್ನೋ ಬಡತನ, ಆದ್ರೆ ನಾಯಕ ಮಾತ್ರ ಶೋಕಿ ಹುಡುಗ.

೩) ಸಿನೆಮಾ ಮುಗಿಯುವುದು ನಾಯಕನ ಸಾವಿನಲ್ಲಿ.

೪) ಅದೇ ನಟ ನಟಿಯರು

ನಾಯಕ ಮಂಜ , KR Market ನಲ್ಲಿ ಮೂಟೆ ಹೋರುತ್ತ, ಸಿಂಗಾಪುರ ಅನ್ನೋ ಸ್ಲಂನಲ್ಲಿ ವಾಸ ಮಾಡುತ್ತ ಇರುತ್ತಾನೆ. ದಿನ ಬೆಳಿಗ್ಗೆ ೫ ರಿಂದ ೧೧ ಗಂಟೆ ತನಕ ಕೆಲ್ಸ ಆಮೇಲೆ ಅವನ ಪೋಕರಿ ಗೆಳೆಯರ ಜೊತೆ ಊರುರು ಸುತ್ತವ ಕೆಲ್ಸ. ಇವನ ಗೆಳಯರಿಗೆ ಬ್ಲೇಡ್ ಅನ್ನುವ ನಾಯಕ, ಇವನ ಗಾಡಿಯಲ್ಲಿ ಅವನಿಗೆ ಡವ್ ಹುಡುಕುವ ಕಾಯಕಕ್ಕೆ ಇಡಿ ದಿನ ಮೀಸಲು ಇಟ್ಟಿರುತ್ತಾರೆ. ಎಲ್ಲಾ ಹೆಣ್ಣುಮಕ್ಕಳ ಕಾಲೇಜಿನ ಮುಂದೆ ಜೊಲ್ಲು ಸುರಿಸಿಕೊಂಡು, ನಗುವುದು ಚೀ ತೂ ಅನಿಸಿಕೊಳ್ಳುವುದು, ಇಲ್ಲ ಪೋಲಿಸರ ಕೈಗೆ ಸಿಕ್ಕಿ ಒದೆ ತಿನ್ನುವುದು ಕಾಯಕ ಆಗಿರುತ್ತದೆ. ಅವರ ನಾಯಕನಿಗೆ ಎಲ್ಲರೂ ಕಿವಿಗೆ ಹೂವಾ ಇಡುತ್ತ ಸಿಗರೇಟ್ ಮತ್ತು ಪಾನ್ ಪರಾಗ್
ತೆಗೆಸಿಕೊಳ್ಳುವುದು, ರಾತ್ರಿ ಎಣ್ಣೆ ಕುಡಿದು ಟೈಟ್ ಆಗುವುದು ಇದೆ ಇವರ ನಿತ್ಯ ಕಾಯಕ ಆಗಿರುತ್ತದೆ.

ಇತ್ತ ಒಂದು ತುಂಬು ಸಂಸಾರ, ಅದರ ಅದಿಪತ್ಯ ರಂಗಾಯಣ ರಘುವಿನದು. ಬ್ಯಾಂಕಿನಲ್ಲಿ ಉತ್ತಮ ಕೆಲ್ಸ, ಮನೆ ತುಂಬ ಮಕ್ಕಳು , ಆವರ ಜೊತೆ ಗೆಳೆಯನಾಗಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತ ಇರುತ್ತಾನೆ. ಆ ಮನೆಯಲ್ಲಿ ಅನ್ಯೋನತೆ ಮತ್ತು ಸಹಬಾಳ್ವೆ ಎದ್ದು ಕಾಣುವ ಹಾಗೆ ನಿಗಾ ವಹಿಸಿರುತ್ತಾನೆ.
ಆ ಮೂರು ಮಕ್ಕಳಲ್ಲಿ ಒಬ್ಬಳೆ ಶೀಲಾ ( ಇವಳು ತೆಲುಗು ಪಿಲ್ಲ, ಮುಖ ನೋಡಿದರೆ ಜಗ್ಘೇಶ್ ಜೋತೆಗೆ ನಟಿಸಿದ್ದ ಉಧಯಬಾನು ಜ್ಞಾಪಕಕ್ಕೆ ಬರುತ್ತಾಳೆ).

ಲಂಗದಾವಣಿಯಲ್ಲಿ ಕಾಲೇಜಿಗೆ ಹೋದಾಗ ಬ್ಲೇಡ ಕಣ್ಣಿಗೆ ಬೀಳುತ್ತಾಳೆ, ಅಲ್ಲೇ ಲವ್ ಆಗಿ ಇವಳೇ ನನ್ನ ಹೆಂಡ್ರು ಅಂತ ಅಂದುಕೊಳ್ಳುವದಕ್ಕೂ , ಅದಕ್ಕೆ ಹುಡುಗರು ಕಾಗೆ ಹಾರಿಸುವದಕ್ಕೂ ಸರಿ ಹೋಗುತ್ತದೆ. ಆ ಗುಂಪಿನಲ್ಲಿ
ಅವಳಿಗೆ ಮಂಜ ಕಣ್ಣಿಗೆ ಬಿದ್ದು ಅವನ ಪೊರ್ಕಿ ಸ್ಟೈಲ್ ಇಷ್ಟ ಆಗುತ್ತದೆ. ಮುಂದೆ ಒಂದು ದಿನ ಅವನು ಒಂದು ಮಗುವನ್ನು ಕಾಪಡಿದ್ದು ಕಂಡು,ಅವನಿಗೆ ಮನಸ್ಸು ಕೊಡುತ್ತಾಳೆ. ಇಲ್ಲಿ ಬ್ಲೇಡ ದಿನ ಮಂಜನ್ನ ಆ ಹುಡುಗಿ ನೋಡ್ತಾ ಇದ್ದರೆ ತನ್ನನ್ನೇ ನೋಡ್ತಾ ಇದ್ದಾಳೆ, ತನ್ನ ಬಗ್ಗೆ ಮಾತಾಡುತ್ತ ಇದ್ದಾಳೆ ಅಂತ ಮಂಡಿಗೆ ತಿನ್ನುತ್ತ ಇರುತ್ತಾನೆ, ಆದ್ರೆ ಒಂದು ದಿನ ಆ ಹುಡುಗಿ ಬಂದು ಮಂಜನಿಗೆ ILU ಹೇಳಿದಾಗ , ಬ್ಲೇಡನ ಆಶಾಗೋಪುರ ಬೀಳುತ್ತದೆ, ಅದಕ್ಕೆ ದೊಡ್ಡ ಗಲಾಟೆ ಆಗಿ ಮಂಜ ಅವರ ಗುಂಪಿನಿಂದ ಆಚೆ ಬರುತ್ತಾನೆ.

ಪ್ರೀತಿಯಲ್ಲಿ ಹೃದಯ ಶ್ರೀಮಂತಿಕೆ ಬೇಕು, ಪ್ರಾಣ ಕೊಡೊ ಗಂಡ ಬೇಕು ಅನ್ನುವ ಇವಳಿಗೆ ಮಂಜನೆ ಅನರೂಪ ವರ ಅನಿಸಿರುತ್ತಾನೆ. ದಿನ ಅವನು ೨ ಪ್ಯಾಕ್ ಸಿಗರೇಟ್, ೨೦ ಗುಟ್ಕಾ , ೨ ಬೀರು ಕುಡಿಯುವ ವಿಷಯ ಗೊತ್ತಿದ್ದರು, ಅವನ ದುಶ್ಚಟಗಳನ್ನು ಮುಂದು ಒಂದು ದಿನ ಬಿಡಿಸಬಹುದು ಅಂತ ನಂಬಿ ಅವನ ಜೊತೆ ಸುತ್ತತ್ತ ಇರುತ್ತಾಳೆ. ಪ್ರೀತಿಸಿದ ಮೇಲೆ ಚಳಿ ಎನು ಮಳೆ ಎನು, ಅವನ ಸಲುವಾಗಿ ನೂರಾರು ಸುಳ್ಳ್ಯ್ ಹೇಳುತ್ತ , ಸರ ಮಾರಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತ ಇರುತ್ತಾಳೆ. ಇಲ್ಲಿ ಮಂಜನ ಪಾಲಿಗೆ ಇದು ಕನಸೇ, ಅಷ್ಟು ಸುಂದರಿ ಹುಡುಗಿ ಎಲ್ಲಾ ಬಿಟ್ಟು ತನ್ನ ಹಿಂದೆ ಬಿದ್ದಿರುವಾಗ ಇದು ನನ್ನ ಪಾಲಿನ ಪುಣ್ಯ ಅಂತ
ಅವಳನ್ನೇ ಜೀವನ ಅಂತ ನಂಬಿರುತ್ತಾನೆ.

ಮುಂದೆ ಒಂದು ದಿನ ರಂಗಾಯಣ ರಘು ಇವಳ ಮಧುವೆಯನ್ನು ಬೇರೊಬ್ಬರ ಜೊತೆ ಬಲವಂತವಾಗಿ ನಡೆಸುತ್ತಾರೆ, ಆದ್ರೆ ಮೊದಲ ರಾತ್ರಿ ದಿನ ಅವಳು ಎಲ್ಲಾ ಕಥೆಯನ್ನು ಹೇಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಮರುದಿನ ಅವನು ಅವಳನ್ನು ಅವಳ ಪ್ರೇಮಿ ಜೊತೆ ಸೇರಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಇವರ ನಿಜವಾದ ಪ್ರೇಮಕಹಾನಿ. ಪ್ರೀತಿಸಿದವರಿಗೆ ೧೦೯ ಕಷ್ಟ ಅನ್ನೋ ಹಾಗೆ
ಇವರ ಬಳಿ ವಾಸಿಸೊಕ್ಕೆ ಮನೆ ಇರೊಲ್ಲ, ಕೆಲ್ಸ ಇರೊಲ್ಲ ಮತ್ತೆ ಸಂಸಾರ ನಡೆಸೊಕ್ಕೆ ವ್ಯವ್ಸಸ್ಥೆ ಇರುವದಿಲ್ಲ.
ಕೊನೆಗೆ ಯಾರೊಬ್ಬರ ಸಹಾಯದಿಂದ ಆಟೋ ಓಡಿಸುವ ಕೆಲ್ಸಕ್ಕೆ ಮುಂದಾಗುತ್ತಾನೆ ಮಂಜ. ದಿನಕ್ಕೆ ೧೫೦ ರೂಪಾಯಿ ಬಾಡಿಗೆ ಕೊಡಬೇಕು ಅನ್ನೊ ಕರಾರಲ್ಲಿ ಜೀವನ ಶುರು ಮಾಡುತ್ತಾರೆ.

ಇವರ ಜೀವನ ಒಂದು ಹಾಡಿನಲ್ಲಿ ೫ ವರುಷ ಓಡುತ್ತದೆ, ಒಂದು ಗಂಡು ಮಗು ಕೂಡ ಆಗುತ್ತದೆ , ಆದ್ರೆ ಅಲ್ಲಿಂದ ಚಿತ್ರದ ಓಟ ಕಮ್ಮಿ ಆಗುತ್ತದೆ.
ಪ್ರೀತಿಸುವುದು ಹೆಚ್ಚಲ್ಲ, ಸಂಸಾರ ಮಾಡುವುದು ಮತ್ತು ವಾಸ್ತವಕ್ಕೆ ಪ್ರೀತಿ ಉತ್ತರವಲ್ಲ, ಒಂದು ಹಂತದಲ್ಲಿ
ಯಾಕದ್ರು ಈ ಕ್ರಮ ಕೈಗೊಂಡೆವು ಅನ್ನೊ ಬೇಸರಿಕೆ ಕಾಡುವುದು ಸಹಜ, ಅದೇ ಇಬ್ಬರ ಬಾಳಲ್ಲಿ ಆಗುತ್ತ ಇರುತ್ತದೆ. ಎಷ್ಟು ಕಷ್ತ ಪಟ್ಟರೂ ಸಂಸಾರವನ್ನು ತೂಗಲಾರದೇ ಇರುವ ನಾಯಕ, ದುಡ್ಡಿಲ್ಲದೇ ಬಾಡಿಗೆ ಕಟ್ಟಲಾಗದೇ ಬೈಸಿಕೊಳ್ಖುವ ನಾಯಕಿ. ಎಲ್ಲಾ ಮಕ್ಕಳ ಹಾಗೆ ನನಗೂ ಎಲ್ಲ ಸವಲತ್ತು ಬೇಕು ಅನ್ನುವ
ಮಗು ಇವರ ಮಧ್ಯೆ ಕಥೆ ಗಿರಕಿ ಹೊಡೆಯುತ್ತ ಇರುತ್ತದೆ. ಇವರು ಪಡುವ ಪಾಡು, ಬಡವರನ್ನು ಸಮಾಜ ನೋಡುವ ರೀತಿ. ಅತಿಯಾದ ಸ್ಭಾಭಿಮಾನ ಇವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡುತ್ತದೆ. ಕೊನೆಗೆ
ಇವನ ಕೆಲ್ಸ ಹೋಗಿ, ಹೆಂಡತಿ ಕೆಲ್ಸಕ್ಕೆ ಸೇರಿಕೊಂಡು ದುಡಿಯುವ ಹಾಗೆ ಆಗುತ್ತದೆ. ಇವನಿಗೆ ಮನೆಯಲ್ಲಿ ಸಮಯ ಕಳೆಯುವುದೇ ಕಷ್ತ ಆಗಿ, ದಿನೇ ದಿನೇ ಕೊರಗುತ್ತ ಇರುತ್ತಾನೆ. ಆದ್ರೆ ಭವಿಷ್ಯತ್ ಬಗ್ಗೆ ಯೋಚನೆ ಮಾಡುತ್ತ ಕಷ್ತ ಪಡುತ್ತ ನಾಯಕಿ ಎಲ್ಲ ಕಷ್ಟವನ್ನು ನುಂಗಿ ಜೀವನ ಮಾಡುತ್ತ ಇರುತ್ತಾಳೆ.

ಹೀಗಿರುವಾಗ ಅವನ ಹಿಂದಿನ ಗೆಳೆಯ ಬ್ಲೇಡ್ ಸಿಕ್ಕಿ ಇವನಿಗೆ ಮಂಗಳಾರತಿ ಮಾಡುತ್ತಾನೆ
ಒವರ್ ಟೂ ಬ್ಲೇಡ್ ..

" ಲೇ ಮಂಜ ನೀನಾ ಇದು, ಸಿಗರೇಟ್ ಸೇದಿಕೊಂಡು ರಿಂಗ್ ಬಿಡುತ್ತಾ ಹೀರೋ ತರ ಇದ್ದೇಯಲ್ಲೊ ಇವತ್ತು ಮೋಟು ಬೀಡಿ ಸೇದೊ ಲೆವಲ್ಲಿಗೆ ಬಂದಿದ್ದೀಯಾ. ಅಲ್ಲ ಆ ದೇವತೆ ಅಂತ ಹುಡುಗಿ ನಿನಗೆ ಎಲ್ಲಾ ತ್ಯಾಗ ಮಾಡಿದಳು, ನೀನು ಎನು ಕೊಟ್ಟೆ. ಅವಳನ್ನು ಡಿಟಿಪಿ ಕೆಲ್ಸಕ್ಕೆ ಹಾಕಿ ಅವಳ ದುಡ್ಡಿನಲ್ಲಿ ಮಜಾ ಮಾಡ್ತಾ ಇದ್ದೀಯಾ. ಬೆನ್ನ ಹಿಂದೆ ಬಂದ ಹೆಣ್ಣನ್ನು ಕಣ್ಣಿಗೆ ಕಣ್ಣು ಹಾಗೆ ಕಾಪಾಡೊನೆ ಗಂಡಸು, ನೀನು ಅಲ್ಲ
ಬದಕಿದ್ದು ನೀನು ಅವಳನ್ನು ಮಗನನ್ನು ಬದುಕೊಕ್ಕೆ ಬಿಡೊಲ್ಲ, ಸಾಯಿ ಆಗ ಅವಳು ತನ್ನ ಅಪ್ಪನ ಮನೆಗೆ ಹೋಗುತ್ತಾಳೆ "

ಅಂತ ದಿವ್ಯ ಐಡಿಯಾ ಕೊಡುತ್ತಾನೆ. ಅದನ್ನೇ ನಾಯಕ ಅಕ್ಷರಷ ಮಾಡುತ್ತಾನೆ.

ಅಲ್ಲಿ ಇದು ಗೊತ್ತಿರದ ನಾಯಕಿ, ಮೊದಲ ಸಂಬಳದಲ್ಲಿ ನಾಯಕನಿಗೆ ಸಿಗರೇಟು,ಬೀರ್ ಎಲ್ಲಾ ತಂದು ಅವನಿಗೆ ಸರಪ್ರೈಸ್ ಕೊಡೊಣ ಅಂತ ಹೋದಾಗ ಕಾಣುವುದು ನಾಯಕ ಬಿದಿರು ಮೋಟರ್ ಹತ್ತಿರುವುದು. ಇದನ್ನು ಕಂಡು ಆವಳಿಗೆ ದು:ಖ ಬರೊಲ್ಲ, ಅಸಹ್ಯ ಆಗೊತ್ತೆ , ಆಗ ಅವಳ ಬಾಯಿಂದ ಬರುವುದೇ ಹೈಲಟ್ ಆಫ್ ದಿ ಫಿಲ್ಮ್ ..

"ಚೀ,,ನೀನು ಒಬ್ಬ ಗಂಡಸಾ, ನಿನ್ನ ನಂಬಿಕೊಂಡು ಎಲ್ಲಾ ಬಿಟ್ಟು ಬಂದನಲ್ಲೊ , ಆದ್ರೆ ನೀನು ಹೇಡಿ ತರ ಸತ್ತಿದ್ದೀಯಾ. ನಾಚಿಕೆ ಆಗೊತ್ತೆ ನನಗೆ, ನಿನಗೆ ಒಂದು ಕಣ್ಣಿರು ಹಾಕಿದರು ಅದೂ ವೇಸ್ಟೇ. ಪ್ರೇಮಿಗಳೆಲ್ಲಾ
ಸತ್ತು ಲೈಲಾ ಮಜನು,ಶಹಜಹಾನ ಆಗಬೇಕಾಗಿಲ್ಲ, ಬದುಕಿದ್ದು ಎನಾದರು ಸಾಧಿಸಬೇಕು. ನನ್ನ ಮಗನನ್ನು
ನಿನ್ನ ತರ ಮಾಡೊಲ್ಲ. ಅವನನ್ನು ಐನಸ್ಟೈನ್ ಮಾಡುತ್ತೆನೆ ಅಂತ ಶಪಥ ಮಾಡಿ ನಿನಗೆ ಒಂದು ಹಿಡಿ ಮಣ್ಣು ಹಾಕೊಲ್ಲ ಅಂತ ಹೋಗುತ್ತಾಳೆ.

ಹೀಗೆ ಒಂದು ಪಕ್ಕಾ ಲವ್ ಸ್ಟೋರಿ ಕೊನೆಯಾಗುತ್ತದೆ.




ಪ್ರಮುಖ ಅಂಶಗಳು.

೧) ಚಿತ್ರಿಕರಣ
೨) ಮೊದಲಾರ್ಧ
೩) ಶೀಲಾ ನಟನೆ
೪) ಹಾಡುಗಳು ಮತ್ತು ಹಿನ್ನಲೆ ಸಂಗೀತಾ
೫) ಚಿಕ್ಕ ಚಿಕ್ಕ ವಿಷಯಕ್ಕೂ ಚಂದ್ರು ಗಮನ ಕೊಟ್ಟಿರುವುದು.
೬) ಕ್ಲೈಮ್ಯಾಕ್ಸ
೭) ಸಮಾಜಿಕ ಸಂದೇಶ

-ve ಅಂಶಗಳು

೧) ದ್ವೀತಿಯಾರ್ಧ ಕಥೆ ಸಾಗುವ ವೇಗ
೨) ಸಾಕಪ್ಪ ಅನಿಸೋ ತೊಂದರೆಗಳು, ಪ್ರೇಕ್ಷಕ ಬರುವುದು ಚಿತ್ರಕ್ಕೆ ಮನರಂಜನೆಗೆ, ತನ್ನ ಎಲ್ಲ ದು:ಖವನ್ನು ಕ್ಷಣ ಮಾತ್ರಕ್ಕೆ ಆದರೂ ಮರೆಯೊಕ್ಕೆ. ಅದ್ರೆ ಕಣ್ಣಿರು ಬರೆಯುವ ಸೀನುಗಳು ನೋಡುವದಕ್ಕೆ ಹಿಂಸೆ ಅನಿಸುತ್ತದೆ ಮತ್ತು ಅಂತ ಚಿತ್ರಗಳು ಗೆಲ್ಲೊಲ್ಲ.
೩) ಪೊರಿಕಿ ಹುಡಗನನ್ನು ಒಂದೆರೆಡು ವಿಷಯಕ್ಕೆ ಲವ್ ಮಾಡುವ ಹುಡುಗಿ ನಿಜಕ್ಕೂ ನಿಜ ಅನಿಸುವದಿಲ್ಲ.
೪) ಕೆಲವು ಕಡೆ ಅಜಯ್ ಸಪ್ಪೆ ನಟನೆ
೫) ಆಟೋ ಚಾಲಕರ ಬಗ್ಗೆ ಒಳ್ಳೆ ಮಾತು ತುರುಕಿದ ಹಾಗೆ ಇದೆ.

ಒಟ್ಟಿನಲ್ಲಿ ಪ್ರೀತಿಯೇ ಬೇರೆ, ವಾಸ್ತವವೇ ಬೇರೆ, ಪ್ರೀತಿಸೊರು ತಾವು ಕಷ್ತ ಪಡೊದು ಸರಿ, ಆದ್ರೆ ತಮ್ಮ ಮಕ್ಕಳನ್ನು ಯಾಕೆ ಅದಕ್ಕೆ ಬಲಿಪಶು ಮಾಡಬೇಕು ಅನ್ನೊ ಸಂದೇಶದ ಜೊತೆ ಕೊನೆಗಾಣೋತೆ.