Thursday, November 09, 2006

ಪುರುಷೊತ್ತಮ

ಪುರುಷೊತ್ತಮ
============
ಬಾಯಲ್ಲಿ ITC ಕಿಂಗು,
ತುಟಿಗಳಿಗೆ ಒಂದು ರಂಗು.


ಕೈಯಲ್ಲಿ ಕೊಡೆ ರಮ್ಮಿನ ಗ್ಲಾಸು,
ಇದೆ ತಾನೇ ಹದಿಹರೆಯದವರ ಕನಸು.


ಜಗಿಯುತ್ತಿದ್ದರೆ ಮಾಣಿಕಚಂಧ,
ಪಸರಿಸುವುದು ಅದರ ಗಂಧ.


ಬೇಸರಕ್ಕೆ ಒಂದೆರೆಡು ಪ್ಯಾಕ್ ಆಟ,
ಮನದ ನೆಮ್ಮದಿಗೆ ಒಂದು ಪಾಠ.


ಬೆನ್ನತ್ತಿದರೆ ಕುದುರೆ ಬಾಲ,
ತೀರುವುದು ಎಲ್ಲಾ ಸಾಲ.


ಇವುಗಳ ಜೊತೆ ಇದ್ದರೆ ಒಬ್ಬಳು ಗರ್ಲಫ್ರೆಂಡು
ಸ್ವರ್ಗಕ್ಕೆ ಕಿಚ್ಚೆಬ್ಬಿಸುವನು ಆ ಗಂಡು

ಶಾಸನ ವಿಧಿಸಿದ ಎಚ್ಚರಿಕೆ
===================
೧) ಸಿಗರೇಟ್ ಸೇವನೆ ಆರೊಗ್ಯಕ್ಕೆ ಹಾನಿಕಾರ.
೨) ಗುಟ್ಕಾ ಸೇವನೆ ಕ್ಯಾನ್ಸರಗೆ ಆಹ್ವಾನ.
೩) ಕುಡಿತದಿಂದ ಸಂಸಾರ ನಾಶ.
೪) ಕುದುರೆ ದಾಸ,ಹೆಂಡತಿ ಮಕ್ಕಳ ಉಪವಾಸ

Sunday, November 05, 2006

ಗಾದೆಗಳು-೨

ಗಾದೆಗಳಲ್ಲಿ ವಿಭಿನ್ನತೆ
------------------------
ಹಿಂದೆ ಹೇಳಿದ ಹಾಗೆ ಗಾದೆ ಒಂದು ಸಂಧರ್ಬಕ್ಕೆ ಅನುಸಾರವಾಗಿ ಹುಟ್ಟು ಪಡೆದಿರುತ್ತದೆ. ಕನ್ನಡದಲ್ಲಿ ಬಂದಿರುವ ಗಾದೆಗಳ ಸಂಧರ್ಬಗಳನ್ನು
ಗಮನಿಸೋಣ.

ಕಿಲಾಡಿತನ:-
ಕೆಲವರು ಸ್ವಾಭವಿಕವಾಗಿ ಬುದ್ಧಿವಂತರಾಗಿರುತ್ತಾರೆ, ಅಂತವರ ಸಾನಿಧ್ಯದಲ್ಲಿ ಹೆಣೆದ ಗಾದೆ ಮಾತುಗಳನ್ನು ನಾವು ಕಾಣಬಹುದು.
ಉದಾ:- ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಿದರಂತೆ.
ಕೆಲವರು ಬಹಳ ಚೆನ್ನಾಗಿ ಮಾತು ಕಲಿತಿರುತ್ತಾರೆ, ಅಂತವರು ಎಲ್ಲರ ಮನಸ್ಸನ್ನು ಗೆದ್ದಿರುತ್ತಾರೆ
"ಮಾತು ಬಲ್ಲವನಿಗೆ ರೋಗವಿಲ್ಲ" ಅಂತ ಇದಕ್ಕೆಹೇಳಿರುತ್ತಾರೆ. ಕೆಲವರು ಏನು ಪ್ರಶ್ನೆ ಕೇಳಿದರೂ ಸುತ್ತಿಕೊಂಡು ಬಳಸಿ
ಅದನ್ನೆ ಉತ್ತರ ಕೊಡುತ್ತಾರೆ. "ಅಳಿಯ ಅಲ್ಲ್ಲ, ಮಗಳ ಗಂಡ" ಅನ್ನುವುದು ಇಂತವರ ಮೇಲೆ ಹೆಣೆದ ಗಾದೆ.

ಮಳ್ಳಿ ಮಳ್ಳಿ ಮಂಚಕೆ ಎಷ್ಟು ಕಾಲು ಅಂದರೆ, ಮೂರು ಮತ್ತೊಂದು ಅನ್ನುವ ಬುದ್ಧಿವಂತರ ಕುರಿತು ಹೆಣದಿರುವ ಗಾದೆ.

ಸಾಮಾಜಿಕ ಸೇವೆ:-
ನಮ್ಮ ಸಂಸ್ಕೃತಿಯಲ್ಲಿ ದಾನ-ಧರ್ಮಕ್ಕೆ ಬಲು ಮಹತ್ವವಿದೆ. ಅದಕ್ಕೆ ಅನುಸಾರವಾಗಿ ಅದನ್ನು ಗಾದೆಗಳ ಮೂಲಕ ಪ್ರಚಾರ ಮಾಡಲಾಗಿದೆ.
ಉದಾ:- ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ"
"ಹಣ್ಣು ಹಂಚಿ ತಿನ್ನು, ಹೂವು ಕೊಟ್ಟು ಮುಡಿ"

ಬೇಡದ್ದು ಸಿಕ್ಕಾಗ
------------------
ಅನೇಕ ಬಾರಿ ನಮ್ಮ ಜೀವನದಲ್ಲಿ ಬೇಡದ್ದು ಸಿಗುತ್ತದೆ, ಸಿಕ್ಕಾಗ ಅದನ್ನು ಅನುಭವಿಸೋ ಇಷ್ಟ ಆಗಲಿ , ಶಕ್ತಿ ಆಗಲಿ ಇರುವದಿಲ್ಲ. ಅಂತಹ
ಒಂದು ಸಂಧರ್ಬಕ್ಕೆ ಅನುಸಾರವಾಗಿ ಕೆಲ ಗಾದೆಗಳನ್ನು ಕಾಣಬಹುದು.
"ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ"
"ಊಟಕ್ಕೆ ಇಲ್ಲದ ಉಪ್ಪಿನಕಾಯಿ, ತಂಗಳಿಗೆ ಸಮಾನ"

ಕೈ ಸಿಕ್ಕಾಗ ಬಿಡಬೇಡ
==============
ಈ ವೇದಾಂತವು ನಮ್ಮ ಅನೇಕ ಗಾದೆಗಳಲ್ಲಿ ಕಂಡು ಬರುತ್ತದೆ.
ಉದಾ:- "ಗಾಳಿ ಬಂದಾಗ,ತೂರಿಕೋ"
"ಸಿಕ್ಕಾಗ ಸೀರುಂಡೆ".

ಆಷಾಡಭೂತಿ
========
ನಮ್ಮ ಜನರು ಹೇಳಿದ ಹಾಗೆ ನಡೆಯುವುದು ಬಲು ಅವರೂಪ, ಅಂತಹ ಊಸರವಳ್ಳಿ ಜನರ ಮೇಲೆ ಕೆಲ ಗಾದೆಗಳು ರಚಿತವಾಗಿದೆ.
"ಹೇಳೊಂದು ಒಂದು, ಮಾಡೊದು ಇನ್ನೊಂದು"
"ಮಾಡೊದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ
"ದೀಪದ ಕೆಳಗೆ ಕತ್ತಲೆ"
"ಆಚಾರ ಹೇಳೋಕ್ಕೆ ಬದನೆಕಾಯಿ ತಿನ್ನೊಕ್ಕೆ"


ವ್ಯವಸಾಯ
=======
ನಮ್ಮ ದೇಶದ ಬೆನ್ನೆಲಬು ಆಗಿರುವ ವ್ಯವಸಾಯದ ಮೇಲೆ ಗಾದೆಗಳನ್ನು ಕಾಣಬಹುದು.
" ಬಾಳೆ ಬಗೆದು ಹಾಕು, ತೆಂಗು ತೇಲಿ ಹಾಕು"
"ತಗ್ಗು ಗದ್ದೆಗೆ ಮಾರು ಬೆಳೆ, ಎತ್ತರ ಗದ್ದೆಗೆ ಒಂದೇ ಬೆಳೆ"
"ಕಬ್ಬು ಸೊಟ್ಟದಿದ್ದರೆ, ಸಕ್ಕರೆ ಸೊಟ್ಟೆ"

ನಾಗರೀಕತೆ
=======
ನಮ್ಮ ನಗರ ಬೆಳೆದ ಹಾಗೇ, ನಮ್ಮ ನಾಗರೀಕತೆ ಮಹತ್ವ ಪಡೆದಿದೆ. ಹಾಗೇ ನಮ್ಮ ಜನರಲ್ಲಿ ನಗರದ ಬಗ್ಗೆ ಗೌರವ ಮತ್ತು ಆದರ ಮೂಡಿಸಿದೆ.
ಉದಾ:- "ಕೆಟ್ಟು ಪಟ್ಟಣ ಸೇರು"

ಇದಕ್ಕೆ ಇಂಗ್ಲೆಡಿನಲ್ಲಿ "No Venture, No Gain" ಹೇಳುತ್ತಾರೆ.

ಸಂಪ್ರದಾಯ ಮತ್ತು ಕುಟುಂಬ
--------------------------------
ನಮ್ಮ ಹಿಂದಿನ ಸಮಾಜದಲ್ಲಿ ದೊಡ್ಡ ಕುಟುಂಬಗಳು ಇರುತ್ತಿದ್ದವು,ಅದರಲ್ಲೂ ಹೆಚ್ಚು ಮಕ್ಕಳಿರುವ ಸಂಸಾರದಲ್ಲಿ
ದೊಡ್ಡ ಮಗನ ಮೇಲೆ ಅವಲಂಬಿತರಾಗುತ್ತಿದ್ದರು. ಅದನ್ನು ನೋಡಿ ಕೆಳಕಂಡ ಗಾದೆ ಮಾಡಿರಬಹುದು.
"ಬಾಗಿಲಿಗೆ ಹೊಸಲಾಗಬೇಡ, ಮನೆಗೆ ಹಿರಿ ಮಗನಾಗಬೇಡ"
ಇದರಲ್ಲಿ ಗಮನಿಸಬೇಕಾದ ಅಂಶ ಅಂದರೆ, ಹೇಗೆ ಹೊಸಲನ್ನು ಎಲ್ಲಾ ಮೆಟ್ಟಿ ನಡೆಯುತ್ತಾರೊ,ಹಾಗೇ ಹಿರಿಮಗನ ಮೇಲೆ ಸಂಸಾರ ಭಾರ ಹೆಚ್ಚು.

"ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಇದೂ ಕೂಡ ಹಿಂದಿನ ಸಂಸಾರದಲ್ಲಿ ಇದ್ದ ಸಂಪ್ರದಾಯಕ್ಕೆ ಅನುರೂಪವಾಗಿದೆ.


ನಿಷಿದ್ಧ
====
ಮಾಡಬಾರದ ಸಮಯದಲ್ಲಿ ಕೆಲಸಗಳ ಬಗ್ಗೆ ಅನೇಕ ಗಾದೆಗಳು ತಿಳಿ ಹೇಳುತ್ತವೆ.
* ಎಂದೂ ಓದದ ಮಾಣಿ, ಅಮವಾಸೆ ದಿನ ಓದಿದನನಂತೆ
* ಅಮವಾಸೆ ದಿನ ಗಂಡು ಹುಟ್ಟಿದನಂತೆ
* ಮಂಗಳವಾರ ಮಗಳ ಕಳಿಸಬೇಡ,ಸೋಮವಾರ ಸೋಸೆ ಕಳಿಸಬೇಡ.


ಮಿತಿ
====
ಕೆಲವರಿಗೆ ತಮ್ಮ ಕೈನಲ್ಲಿ ಆಗದಿದ್ದರೂ ಬಾಯಿ ಮಾತಿನಲ್ಲಿ ತುಂಬಾ ಹೇಳಿಕೊಳ್ಳುತ್ತ್ತಾರೆ. ಅಂತಹ
ಜನರ ಮೇಲೆ ಆಧರಿತ ಕೆಲ ಗಾದೆಗಳನ್ನು ನಾವು ಕಾಣಬಹುದು.
* ಉತ್ತರನ ಪೌರುಷ ಒಲೆ ಮುಂದೆ
* ಅಟ್ಟಕ್ಕೆ ಹಾರದವಳು, ಆಕಾಶಕ್ಕೆ ಹಾರುತ್ತಾಳೆಯೇ ?
* ಕೈಲಾಗದವನು ಮೈ ಪರಚಿಕೊಂಡ
* ಮನೆಲಿ ಹುಲಿ ,ಬೀದಿಲಿ ಇಲಿ

ಯಾರದೋ ತಪ್ಪಿಗೆ, ಇನ್ಯಾರಿಗೋ ಶಿಕ್ಶೆ
========================
ಅನೇಕ ಬಾರಿ ಇದನ್ನು ನಾವು ನೋಡುತ್ತೆವೆ, ತಪು ಮಾಡಿಲ್ಲದೇ ಶಿಕ್ಶೆ ಅನುಭವಿಸುವರನ್ನು
ನೋಡುತ್ತೆವೆ.
* ಎತ್ತಿಗೆ ಜ್ವರ ಬಂದರೆ,ಎಮ್ಮೆಗೆ ಬರೆ ಹಾಕಿದರಂತೆ
* ಮಗಳಿಗೆ ಧಾರೆ, ಅಪ್ಪನಿಗೆ ಶೋಭನ.

ಅವಸರ
=====
ಕಲವರು ಬಹಳ ಅವಸರ ಮಾಡಿಕೊಳ್ಳುತ್ತಾರೆ,ಅವಸರದಿಂದ ಕೆಲಸ ಹಾಳು ಮಾಡಿಕೊಳ್ಳುತ್ತ್ತಾರೆ.
"ಆತುರಗಾರನಿಗೆ ಬುದ್ಧಿ ಮಟ್ಟು"
"ಅವಸರದ ಆಂಜನೇಯ,ಆರು ತಿಂಗಳಿಗೆ ಹುಟ್ಟಿದವನು"
"ಕೂಸು ಹುಟ್ಟುವ ಮುನ್ನ , ಕುಲಾವಿ ಹೊಲಸಿದರಂತೆ"

ಗಾದೆಗಳು -೧

ಗಾದೆಗಳನ್ನು ಬಳಸದೆ ಇರುವನು ಬಹಳ ಅಪರೂಪ. ಪ್ರತಿ ಭಾಷೆಯಲ್ಲಿ ಇದು ಒಂದು ಪ್ರಮುಖ ಪಾತ್ರವನ್ನು ಪಡೆದಿದೆ ಗಮನಿಸಿದರೆ
ಗಾದೆಗಳು ಒಂದು ಸಂದರ್ಭಕ್ಕೆ ಹುಟ್ಟಿ , ಬಾಯಿಂದ ಬಾಯಿಗೆ ಜನರಿಂದ ಜನರಿಗೆ ಹರಡಿ ತಮ್ಮ ಜೀವಿತವನ್ನು ಉಳಿಸಿಕೊಂಡಿದೆ,ಅದ್ದರಿಂದ ಹೇಗೆ ಸಮುದ್ರದಲ್ಲಿ ಮೊದಲ ಅಲೆ ಯಾವುದು ಎಂದು ಕಂಡು ಹಿಡಿಯಲು ಆಗದೋ, ಹಾಗೆ ಗಾದೆ ಮಾತುಗಳ ಹುಟ್ಟು ಮತ್ತು ನಿಖರತೆಯನ್ನು ತಾಳೆ ಎಳೆಯುವುದು ಆಗದ ಕೆಲಸ.

ಮೊದಲಿಗೆ ಗಾದೆ ಎಂದರೆ ಎನು ?
ಈ ಶಬ್ಧವು ಪ್ರಾಕೃತದ ಗಾಹೆ ಎಂಬ ಶಬ್ಧದಿಂದ ಹುಟ್ಟಿದೆ, ನಿಮಗೆ ಗೊತ್ತಿರಬಹುದು, ದ್ರಾವಿಡ ಭಾಷೆಗಳಲ್ಲಿ ಪ್ರಾಕೃತ ಭಾಷೆಯ ಶಭ್ದಗಳು ತುಂಬಾ.ಕನ್ನಡದಲ್ಲಿ "ನಾಣ್ ನುಡಿ" ಅಂತ ಕೂಡ ಕರೆಯುತ್ತಾರೆ.
ಅಂದರ ನಾಡ ನುಡಿ ಎಂದು ಅರ್ಥ.

ಹಾಗದರೆ ಒಂದು ಮಾತು ಗಾದೆ ಅನಿಸಲು ಇರಬೇಕಾದ ಲಕ್ಷಣಗಳೇನು ??

೧) ಜನರಾಡಿ ಪಳಗಿದ ಮಾತು, ಅಂದರ ಆ ಮಾತು ಒಬ್ಬನ ಜೀವನಕ್ಕೆ ಸಂಬಂಧಿಸದೇ, ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯವಾಗುವ ಹಾಗೆ ಇದ್ದರೆ
ಅದು ಗಾದೆ ಮಾತು ಆಗುತ್ತದೆ. ಅದ್ದರಿಂದಲೇ ಜನರಿಗೆ ಗಾದೆ ಮಾತಿನ ಮೇಲೆ ಅಷ್ಟು ನಂಬಿಕೆ. ಬರೀ ಇಂದಿನ ಪೀಳಿಗೆಗೆ ಸೀಮಿತವಾಗದೆ,ಮುಂದಿನ
ಪೀಳಿಗೆಯನ್ನು ಒಳಗೊಂಡ ಈ ಮಾತುಗಳು ಕಾಲತೀತವಾದವು. ಕನ್ನಡದಲ್ಲಿ " ವೇದ ಸುಳ್ಳಾದರೂ, ಗಾದೆ ಮಾತು ಸುಳ್ಳಾಗದು" ಎಂಬ
ಭರವಸೆಯ ಗಾದೆ ಮಾತನ್ನು ಹೇಳಿದ್ದಾರೆ.

NO VOICE IS WHOLLY LOST WHICH IS THE VOICE OF MANY MEN. ಎಂದು ಅರಿಸ್ಟಾಟಲ್ ಹೇಳಿದ್ದ, ಅಂದರ
ಶತಮಾನಗಳು ಉರುಳಿದರೂ ಗಾದೆಗಳಿಗೆ ಸಾವಿಲ್ಲ ಅಂತ.

೨) ಚಿಕ್ಕದಾಗಿ ಇರಬೇಕು ಮತ್ತು ಚೊಕ್ಕವಾಗಿ ಇರಬೇಕು
ಜನಮನರ ನಾಲಿಗೆಯಲ್ಲಿ ಉಳಿಯಬೇಕಾದರೆ ಅದು ಕಷ್ಟವಾಗಿ ಇರದೇ ಬಹಳ ಸುಲಭ ಮತ್ತು ಅರ್ಥಗರ್ಭಿತವಾಗಿರಬೇಕು.ಇದು ನಮ್ಮ ಜನ ಜೀವನದ ಒಂದು
ಮುಖವನ್ನು ಪ್ರತಿಭಿಂಬಿಸಬೇಕು. ಮತ್ತು ಆ ಸಂದರ್ಭ ಬಂದರೆ ಜನರಲ್ಲಿ ಹೌದು ಇದೇ ಸರಿಯಾದ ನುಡಿ ಅಂತ ಅನಿಸಬೇಕು,ಆಗಲೇ ಅದು ಗಾದೆ ಮಾತು ಆಗುವುದು.
"ಅಂಗೈ ಹುಣ್ಣಿಗೆ ಕನ್ನಡಿ ಬೇಕೆ" ಈ ಗಾದೆ ಮಾತು ಬಹಳ ಸುಲಭವಾಗಿದೆ ಮತ್ತು ಬಹಳ ಅರ್ಥಪೂರ್ಣವಾಗಿದೆ.