Tuesday, July 13, 2010

ಒಂದೇ ಸುದ್ದಿ, ಹತ್ತು ಬೇರೆ ವರದಿ.


೨೦೦೪ ರಲ್ಲಿ ಅತಿ ಹೆಚ್ಚು ಸೆನ್ಸೆಷನ್ ಮಾಡಿದ್ದು ಶುಭಾ-ಗಿರೀಶ್ ಕ್ರೈಂ ಸ್ಟೋರಿ, ಆ ದಿನಗಳಲ್ಲಿ ಬರುತ್ತಿದ್ದ ರವಿ ಬೆಳೆರೆಗೆ ನಡೆಸಿಕೊಡುತ್ತಿದ್ದ ಕ್ರೈಂ ಸ್ತೋರಿಯಲ್ಲಿ ಬಂದು ದೊಡ್ಡ ಸಂಚಲನ ಮೂಡಿತ್ತು. ಮುಖ್ಯವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜನರ ಬಾಯಲ್ಲಿ ಇದೇ ಸುದ್ದಿ. ನನ್ನ ಅನೇಕ ಕನ್ನಡೇತರರು ಅರ್ಥ ಆಗದೇ ಇದ್ದರೂ ಆ ಕಾರ್ಯಕ್ರಮವನ್ನು ನೋಡಿದ್ದರು.
ಆ ಹುಡುಗಿಗೆ ಎನು ಬಂದಿತ್ತು ಕೇಡು, ಎಷ್ಟು ಮುದ್ದಾಗಿದ್ದ, ಒಳ್ಳೆ ಜಿರಳೆ ತರ ( ಹಾಯ್ ಬೆಂಗಳೂರು ನಲ್ಲಿ ಹಾಗೆ ಬಂದಿದ್ದ ನೆನಪು) ಇದ್ದಾನೆ ಅವಳ ಬಿಎಫ್ ಎಂದು ಕಾಮೆಂಟ್ ಮಾಡಿದ್ದರು.

ಮುಂದಿನ ದಿನಗಳಲ್ಲಿ ಅವಳು ಜಾಮೀನು ಪಡೆದು ಬಿಡುಗಡೆ ಹಕ್ಕಿಯಾದಳು ಆಮೇಲೆ ಅಮೇರಿಕಾಗೆ ಹೋದಳು, ಹುಡುಗ ಅಪ್ಪ ಪುತ್ರ ಶೋಕದಲ್ಲಿ ಸತ್ತರು ಅಂತ ಕೇಳಿ, ಈ ದೇಶದ ಕಥೆ ಇಷ್ಟೆ ಕಣಮ್ಮೋ , ಚಿಂತೆ ಮಾಡಿ ಲಾಭ ಇಲ್ಲಮ್ಮೋ ಅಂತ ಹಾಡಿದ್ದೆವು.

ನಿನ್ನೆ ಆ ಕೇಸ್ ಸತ್ತಿಲ್ಲ ಇನ್ನು ಜೀವಂತ ಇದೆ, ಅವಳಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿದು ಸಂತೋಷ ಆಯಿತು, ಆದರೆ ಆ ಸುದ್ದಿಯನ್ನು ಓದಲು ಬೇರೆ ಬೇರೆ ಮಾಧ್ಯಮಕ್ಕೆ ಮೊರೆ ಹೊಕ್ಕರೆ ಒಂದೊಂದರಲ್ಲಿ ಒಂದೊಂದು ಸುದ್ದಿ. ನಗಬೇಕೊ ಅಳಬೇಕೊ ತಿಳಿಯದು.

ಕನ್ನಡ ಪತ್ರಿಕೆಗಳು ಹುಡುಗ ಕೆಲ್ಸ ಮಾಡುತ್ತಿದ್ದ ಕಂಪೆನಿ ಬಗ್ಗೆ ಬಾಯಿಗೆ ಬಂದ ಹಾಗೆ ಬರೆದಿದ್ದರೆ, ಇನ್ನು ಬೆಂಗಳೂರು ಮಿರರ್ ಟ್ಯಾಬ್ ಸುಳ್ಳು ಸರಮಾಲೆಯನ್ನೇ ಸಾರಿಸಿದೆ.

ಮೊದಲಿಗೆ thatskannada ನೊಡೋಣ

ಹುಡುಗನ ಹೆಸರು ಗಿರೀಶ್, , ದೊಡ್ಡ ಸಾಫ್ಟ್ ವೇರ್ ಕಂಪೆನಿ ಇಂಟೆಲ್ ನಲ್ಲಿ ಉದ್ಯೋಗ , ಹುಡುಗಿ ಹೆಸರು ಶುಭಾ, ಅವಳು ಡಿಸಿಪಿ ಪರಶಿವಮೂರ್ತಿ ಮಗಳು.

"S Parashivamurthy ಅವರು DCP (central) , ಶುಭಾ ತಂದೆ ಅಲ್ಲ. ಆಗ ಈ ಕೇಸ್ ಬಗ್ಗೆ ಅವರು ಹೇಳಿದ್ದು ಎನು ಅಂತ ಗೊತ್ತ ?/

Parashivamurthy said: “We will ask her to postpone the trip till the case is solved. She is in a state of shock, and we are not suspecting her. Since she is the lone eyewitness to the murder and we need her co-operation to solve it.’’


ಕನ್ನಡಿಗರ ಹೆಮ್ಮೆ ವಿಜಯ ಕರ್ನಾಟಕಕ್ಕೆ ಬಂದರೆ
ಅದರ ಪ್ರಕಾರ ಗಿರೀಶ್ ಐಬಿಎಂ ನಲ್ಲಿ ಕೆಲಸ ಮಾಡುವ ಉದ್ಯೋಗಿ,

ಅದೇ ಹೊಸದಿಗಂತದ ಹಳೇ ಕಥೆ..
ರಿಂಗ್‍ರೋಡ್ ರಸ್ತೆಯಲ್ಲಿ ಇರುವ ಇನ್ಫೋಸಿಸ್ ಉದ್ಯೋಗಿ ಮೃತ ಗಿರೀಶ್

ಅದೇ ಕಥೆಯನ್ನು ಸಂಜೆವಾಣಿ ಕೂಡ ಹೇಳಿದೆ. ಒಂದರಲ್ಲಿ ದ್ವಿಚಕ್ರ ವಾಹನ ಎಂತಿದ್ದರೆ, ಇನ್ನೊಂದರಲ್ಲಿ ಕಾರ್ ಎಂತಿದೆ.

Bangalore Mirror ge ಬಂದ್ರೆ
ಅತಿ ಹೆಚ್ಚು ತಪ್ಪುಗಳು ಕಾಣಸಿಗುತ್ತದೆ.

"Shubha, however, was in love with her college friend from MMS College of Law in Jayanagar, Arun Verma. "

>> ಅದು ಬಿ ಎಂ ಎಸ್ ಕಾಲೇಜು.

November 30, 2003
Girish, 23, engaged to Shubha, 21, at Banashankari

>> ಆಗ ಗಿರೀಶನಿಗೆ ವಯಸ್ಸು ೨೭, ೨೩ ಅಲ್ಲ.

" Girish visited Shubha at her place and she persuaded him to go out with her for a drive and dinner. Girish took her to his Intel office and even introduced her to his colleagues after which they went to Thank God Its Friday (TGIF) on Old Madras Road for dinner. After dinner Shubha convinced him to go to the flight landing point, to which place Arun and Venkatesh followed them.
ಆದರೆ ಪೋಲಿಸ್ ಮತ್ತು ಎಲ್ಲಾ ಮಾಧ್ಯಮಗಳ ಪ್ರಕಾರ ..

On December 3, police said, Shubha forced Girish to take her out for dinner and made him stop his bike near the flight landing point on the Ring Road. At the same time, Arun and Venkatesh too, were waiting for them on the other side of the road.



ನಿಜಕ್ಕೂ ಸುದ್ದಿ ಇದರಲ್ಲಿ ಸರಿ ಇದೆ ಎನ್ನಬಹುದು.

It is the case of 27-year-old B.V. Girish, an Intel staffer, who was murdered by two assailants on December 3, Shubha was then 21. Daughter of lawyer Shankaranarayana, she was studying final year at BMS College of Law

ಮಜಾ ಅಂದರೆ, ಈ ಪ್ರಕರಣವನ್ನು ಕೇಳಿದ ಹುಡುಗರು ಒಂದೆ ಹಾಡು ಹಾಡುತ್ತ ಇದ್ದರು ..
"ಹುಡಿರ್ ಎಂದ್ರೆ ಡೇಜಂರಪ್ಪೋ ಹುಶಾರಾಗಿರಪ್ಪೋ , ಬೆಣ್ಣೆ ಮಾತು ನಂಬಿದ್ರೆ ಬೆಪ್ಪರಾಗ್ತಿರಪ್ಪೋ .."