Saturday, July 23, 2016

ಮಾಯಾಚೌಕದ ಒಂದು ಮಾಯಲೋಕ

ಸಾರ್ವಜನಿಕವಾಗಿ ಗಣಿತದ ಬಗ್ಗೆ ಎಲ್ಲರಲ್ಲೂ ಒಂದು ಭಯ ಇದೆ. ಅನೇಕರಿಗೆ ಇದು ಕಬ್ಬಿಣದ ಕಡಲೆಯೇ.
ಎಷ್ಟೋ ಜನರ ಹಣೆಬರಹವನ್ನೇ ಇದು ಬದಲಾಯಿಸಿದೆ. ಇದರಿಂದ ಅನೇಕರು ತಮ್ಮ ವಿದ್ಯಾಬ್ಯಾಸ ಮೊಟಕು ಮಾಡಿಕೊಂಡಿರುವುದು  ಅಷ್ಟೇ ನಿಜ. 
ನನಗೆ ಗೊತ್ತಿರುವ ಅನೇಕರು ಪಿಯುಸಿನಲ್ಲಿ ಆರ್ಟ್ಸ್ ತೆಗೆದುಕೊಳ್ಳಲು ಕಾರಣವೇ ಈ ವಿಲನ್ ಗಣಿತ. 10 ಸಂಕ್ಯೆ ಇರುವ ಈ ಗಣಿತ ಮಾಡುವ ಕರಾಮತ್ತುಗಳು ಒಂದೆ ಎರಡೇ. 

ಎಸ್‌ಎಸ್‌ಎಲ್‌ಸಿ ನಲ್ಲಿ ಯಾಕೆ ಇಷ್ಟು  ಜನ ಫೇಲ ಆಗುತ್ತಾರೆ ಎಂದು ಒಂದು ಯೋಚನೆ  ಮಾಡುತ್ತಾ , ಅದರಲ್ಲೂ ಸರಕಾರಿ ಶಾಲೆಯ ಮಕ್ಕಳೇ ಹೆಚ್ಚು ಫೇಲ್ ಆಗುವ ಕಾರಣ ಹುಡುಕುತ್ತಾ  ಹೋಗಿದ್ದು ಒಂದು ಸರಕಾರಿ ಶಾಲೆಗೆ , ಪ್ರತಿ ಸರಕಾರಿ ಶಾಲೆಗೆ ಅದರದೇ ಆದ ಸಮಸ್ಯೆಗಳು ಇರುತ್ತದೆ. one size fits all ಮಾದರಿ ಯಾವ ಸಮಾಧಾನವು ಇರುವಧಿಲ್ಲ,  ಸರಕಾರ ಮತ್ತು ಅನೇಕ ಸಂಘ ಸಂಸ್ಥೆಗಳ ಸಹಯೋಗದಿಂದ ಪುಸ್ತಕ, ಬಟ್ಟೆ, ಕಂಪ್ಯೂಟರ್ ಎಲ್ಲ ಬರುತ್ತದೆ. ಮುಟ್ಟಿದರೆ ಇಲ್ಲ ಬಳಸಿದರೆ ಎಲ್ಲಿ ಹಾಳಾಗಿ ಹೋಗುತ್ತದೋ ಎಂಬ ಭಯದಲ್ಲಿ ಕಾಪಾಟಿನಲ್ಲಿ ಭದ್ರವಾಗಿ ಉಳಿಯುತ್ತದೆ,  ಹೇಗೆ ಕೊಟ್ಟಿದ್ದರೋ ಹಾಗೆ ಇರಬೇಕು ಎಂಬ ಅಲಿಕಿತ ನಿಯಮದ ಪರಿಪಾಲನೆ ಆ ಶಾಲೆಯ ಮುಕ್ಯಉಪಾಧ್ಯಾಯರಿಗೆ  ಇರುವಾಗ ,  ಪ್ರತಿ ವರುಷ ಆಡಿಟ್ ನಡೆದಾಗ ಅದನ್ನು ತೋರಿಸುವ , ಹಾಳಗಿದಲ್ಲಿ 108 ಜನರಿಗೆ ಉತ್ತರ ಕೊಟ್ಟು ತಮ್ಮ ಪಗಾರದಿಂದ ಕರ್ಚನ್ನು ತುಂಬಿಸುವ  ವ್ಯವಸ್ತೆಯಿಂದ ಶಾಲೆಗಳು ಮ್ಯೂಸಿಯಂ ಆಗಿ ಕುಳಿತಿವೆ. 

ಕೊಟ್ಟವರು ಕೂಡ ಅನೇಕ ಬಾರಿ ಪಾಪ ಪ್ರಜ್ಞೆ ಇಲ್ಲ ಸಮಾಜ ಸೇವೆ ಮಾಡೂತ್ತ ಇದ್ಧೀವಿ ಅನ್ನೋ ಪ್ರಜ್ಞೆಯಲ್ಲಿ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಇನ್ನೂ ಕೆಲವು ಬಾರಿ ನಮಗೆ ಬೇಡವ ಸರಿ ಸರಕಾರಿ ಶಾಲೆಗೆ ಕೊಡಿ ಅನ್ನೋ ಸಂಸ್ತೆಗಳು ಒಂದು ರೀತಿ ಸರಕಾರಿ ಶಾಲೆಗಳನ್ನು ಈ-ಗಾರ್ಬೆಜ್  ಬಿನ್ ಮಾಡಿಕೊಂಡಿವೆ. 

ಗಣಿತದ ವಿಷಯದಿಂದ ಶುರುವಾದ ಹುಡುಕಾಟ ವ್ಯವಸ್ಥೆಯನ್ನು ತೋರಿಸಿತು. ಹತ್ತನೇ ಮಕ್ಕಳು ಯಾಕೆ ಲೆಕ್ಕದಲ್ಲಿ ಹೀಗೆ ಎಂದು ನೋಡಿದಾಗ ಕಂಡು ಬಂದಿದ್ಧು ಅನೇಕರಿಗೆ ಗಣಿತದ ಆ ಆ ಇ ಈ ಗೊತ್ತಿಲ್ಲ , ಸಂಕ್ಯೆ ಬರೆಯಲು ಹೆಣಗುವ ಇಲ್ಲ  ಕೂಡುವಿಕೆ , ಕಳೆಯುವಿಕೆಯಲ್ಲೇ ಕಳೆದು ಹೋಗುತ್ತಾರೆ , ಇನ್ನೂ ಪೈತಗೋರಾಸ್ ದೂರದ ಮಾತು. 

ಪಾಯನೇ ಸರಿ ಇಲ್ಲ ಎಂದು 8ನೇ ತರಗತಿಗೆ ಹೋದರೆ ಅಲ್ಲಿ ಬೇರೆಯದೇ ಸ್ಥಿತಿ. ಓಧಿದರೆ ಅರ್ಥ ಆಗೋಲ್ಲ ಅಂತ ಮಕ್ಕಳ ಕೊರಗು. ಅದಕ್ಕೆ ಗಮನ ಕೊಡಬೇಕು ಹಾಗೆ ಹೀಗೆ ಅಂತ ಪ್ರವಚನ ಕೊಟ್ಟು  ಅಂಕ ಗಣಿತದ ಒಂದು ಪಾಠ ಕೈಗೆತ್ತಿಕೊಂಡು  ಹೇಳಿಕೊಡೋಣ ಎಂದು ಹೊರಟರೆ ನಾನು ಹುಡುಗರ ತರಹವೇ ಆದೆ.  ಆ ಕನ್ನಡ ಮಾಧ್ಯಮದ 8 ತರಗತಿಯ ಪುಸ್ತಕ ತೆಗೆದು ಕೊಂಡರೆ ಬೇಕಾಗುವುದು ಮೊದಲು ಒಂದು ಪದಕೋಶ , ಸಂಸ್ಕೃತ ಓದುತ್ತಾ ಇರುವ ಹಾಗೆ ಫೀಲ್ ಆಗುತ್ತದೆ. 
 ಯಾಕೆಂದರೆ ಅದರಲ್ಲಿ ಬರುವ ಪದಗಳೊ ದೇವರಿಗೆ ಪ್ರಿಯ ( ಅದಕ್ಕೆ ಸಂಸ್ಕೃತವನ್ನು ಗೀರ್ವಾಣ ಬಾಶ  ಅನ್ನೋದು).    

ಅಂಕಗಣಿತ - ಅಂದರೆ ಅಂಕಿಗಳೊಡನೆ ಆಟ ಆಗ ಬೇಕು ಅಲ್ಲವೇ ಅಂಕಿ ಹೋಗಿ ಸಂಕ್ಯೆ ಬಂತು. ಮಾಯಾ ಚೌಕ ಮಾಡುವುದು ಹೇಗೆ ಎಂಬ ಒಂದು ಪಾಠ ಇದೆ, ಅದರಲ್ಲಿ ಹೇಗೆ ಅದನ್ನು ಮಾಡಬೇಕು ಎಂದು ಕನ್ನಡದಲ್ಲೇ ಕೊಟ್ಟಿದ್ದಾರೆ ಆದರೆ ಅದನ್ನು ಹೇಳಿಕೊಡಲು  ಮತ್ತೊಮ್ಮೆ , ಮಗದೊಮ್ಮೆ ಓದಬೇಕು,  
ಓದುತ್ತಾ ಇದ್ದರೆ  ಕರ್ಣ , ದುರ್ಯೋಧನರು ಹಾಸು ಹೋಗುತ್ತಾರೆ.  ಕೆಲವೊಂದು ವಿಷಯ ಹೇಳಿಕೊಡುವಾಗ ಚಿತ್ರದ ರೂಪದಲ್ಲಿ ಹೇಳಿಕೊಟ್ಟರೆ ಮಕ್ಕಳಿಗೆ ಮುಟ್ಟುತ್ತದೆ ,  ಆ ಪ್ರಯತ್ನ ಮಾಡಿದೆ ಆದರೆ ಹೇಳಿಕೊಡುವಾಗ ಚಿತ್ರದಲ್ಲಿ ಯಾವುದು ಚೌಕ, ಕಂಬ , ಕರ್ಣ , ದುರ್ಯೋಧನ ಎಂದು ತೋರಿಸಿದರೆ ಮಕ್ಕಳಿಗೆ ಹೆಚ್ಚು ನಾಟುತ್ತದೆ. 

ಈ ಪಾಠವನ್ನು ಆ ವಿಷಯದವಾರು ಕಂಡಿತ ಮಾಡಿಲ್ಲ ಎಂದು ಪ್ರತಿ ಪುಟದಲ್ಲೂ ಗೊತ್ತಾಗುತ್ತದೆ, ಯಾರೋ  ಇಂಗ್ಲೀಷ್ -ಕನ್ನಡ ಅನುವಾದಕರ ಕೆಲ್ಸ ಎದ್ದು ಕಾಣುತ್ತದೆ. ಬೇರೆ ಭಾಷೆಯ ಪಾಠವನ್ನು ಯಥಾವತ್ತು ಬಟ್ಟಿ ಇಳಿಸಿದ್ದಾರೆ , ಸೆಲ್ ಹೋಗಿ ಕೋಶ ಆಗಿದೆ,  ಹೆಸರಿಗೆ ಮಾಯಾ ಚೌಕ , ಆದರೆ ಅದರಲ್ಲಿ ಇರುವುದೆಲ್ಲ ಬಾರಿ ಕೋಶಗಳೆ.   ಇನ್ನೂ ನಿಯಮಗಳಿಗೆ ಬಂದರೆ 

ನಿಯಮ 1 ) ಕರ್ಣದ  ಎಡ ಭಾಗದಿಂದ ಬಲಭಾಗದ್ವರೆಗೆ  ಒಂದು ಕಾಲಿ ಕೋಶವಿದ್ದಲ್ಲಿ  ಅದನ್ನು ಮುಂದಿನ  ಸಂಕ್ಯೆಯಿಂದ ತುಂಬಿರಿ , ಇಲ್ಲಿ ಕರ್ಣದ ಗುಂಟ 4 ರ ನಂತರ ಒಂದು ಕಾಲಿ ಕೋಶ ಇದೆ , ಅದನ್ನು ತುಂಬಿರಿ . 

ಇದನ್ನು ಓಧಿ  ಏನು ಅರ್ಥವಾಗದೆ ಪಕ್ಕದಲ್ಲಿ ಇದ್ದ ಚಿತ್ರವನ್ನೂ ನೋಡಿ ಒ.. ಹೀಗಾ ಎಂದು ಅರ್ಥ ಮಾಡಿಕೊಂಡೆ. 

ಇನ್ನೂ 2 ನಿಯಮಕ್ಕೆ ಬಂದರೆ ಅದು ಇನ್ನೂ ಗೋಜಲು ಗೋಜಲು ಆಗಿದೆ ..

ಕರ್ಣದಲ್ಲಿ  ಕಾಲಿ ಕೋಷವಿಲ್ಲದಲ್ಲಿ ಮತ್ತು ಮುಂದೆ ಕಂಬಸಾಲುಗಳಲ್ಲಿದ್ದಲ್ಲಿ  ಮೂಂದಿನ ಕಂಬಸಾಲಿನ ಕೆಳಭಾಗದ ಕೋಶವನ್ನು ಮುಂದಿನ ಸಂಕ್ಯೆಯಿಂದ  ತುಂಬಿರಿ . ನಿಯಮ 1 ನ್ನು ಅನುಸರಿಸಿ ( ಇಲ್ಲಿ ಕರ್ಣ ಗುಂಟ  1 ನಂತರ ಯಾವುದೇ ಕೋಶವಿಲ್ಲ , ಆದುದರಿಂದ ಮುಂದಿನ ಕಂಬ ಸಾಲನ್ನು  ಅತ್ಯಂತ ಕೆಳಗಿನ ಕೋಷಕ್ಕೆ ಹೋಗಿ 2 ನ್ನು ತುಂಬುತ್ತೇವೆ) 

 ಮತ್ತೊಮೆ ಏನು ಅರ್ಥವಾಗದೆ ಚಿತ್ರ ನೋಡಿ ಕನ್ನಡ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಧೆ.  ಮುಂದಿನ ನಿಯಮಯಕ್ಕೆ ಹೋಗುವ ಧೈರ್ಯ ಬರಲಿಲ್ಲ. ಓದಿಕೊಂಡು ಬರುವೆ ಎಂದು ಹೇಳಿ ಜಾಗ ಕಿತ್ತೆ.  

ದಾರಿಯಲ್ಲಿ ಇದನ್ನು ಹೇಗೆ ಸರಳಗೊಳಿಸಬಹುದು ಎಂಬುದೇ ಯೋಚನೆ , ಮಕ್ಕಳಿಗೆ ಇದು ಆಗಲೆ ಪಾಠ ಆಗಿದೆ, ಇದನ್ನು ಹೇಳಿಕೊಟ್ಟಿರುವ ಶಿಕ್ಷಕರು ಪುಸ್ತಕದಲ್ಲಿ ಹೇಗಿದೆಯೋ ಹಾಗೆ ಆದನು ಓದಿರುತ್ತಾರೆ , ಮಕ್ಕಳಿಗೆ ಅರ್ಥ ಆಗಿದೆಯೋ ಇಲ್ವೋ ಅಂತ ತಲೆ ಕೆಡಿಸಿಕೊಳ್ಳುವದಿಲ್ಲ , ಮಕ್ಕಳು ಹಾಗೆ ಅರ್ಥ ಆಗಿಲ್ಲ ಇನ್ನೊಮ್ಮೆ ಹೇಳಿ ಅಂತ ಕೇಳೋಲ್ಲ , ಪಾಠ ಮುಗಿದರೆ ಸಾಕು, ಬೆಲ್ ಹೊಡೆದರೆ ಸಾಕು  ಅನ್ನೋ ಅವಸರ.,

ಮನೆಗೆ ಬಂದ ಮೇಲೆ ಯು-ಟ್ಯೂಬನಲ್ಲಿ ಏನಾದರೂ ಸಿಗಬಹುದಾ ಅಂತ ಹುಡುಕಿದೆ. ಇದು ಸಿಕ್ಕಿತು ,ಆದರೆ ಇದು ಒಂದು ಟ್ರಿಕ್ , 4 x 4ಗೆ 

ನನಗೆ ತೋಚಿದ್ದು , 
* ಚಿತ್ರಗಳನ್ನು ಹೆಚ್ಚು ಬಳಸಬೇಕು 
* ಯಾವ ಚೌಕದ ಬಗ್ಗೆ ಹೇಳುತ್ತಾ ಇದ್ದಾರೆ , ಯಾವ ಕರ್ಣದ ಬಗ್ಗೆ ತಿಳಿಸುತ್ತಾ ಇದ್ದರೆ ಎಂದು ಬಣ್ಣದ ಮೂಲಕ ಹೇಳಬಹುದು.
* ಚೌಕಕ್ಕೆ ಬಣ್ಣಗಳನ್ನು ಬಳಸಿದರೆ ಹೆಚ್ಚು ಅರ್ಥ ಆಗಬಹುದು.
*  ಕರ್ಣ , ಗುಂಟ , ಕಂಬಸಾಲು ಏನು ಎಂದು ವಿವಿದ ಗೆರೆ  ಮೂಲಕ ತೊರಿಸಿದರೆ ಮಕ್ಕಳಿಗೆ ಸತತ ಮನನ ಆಗುತ್ತದೆ.
*  ಬಾಣಗಳ ಮೂಲಕ ತೋರಿಸಿದರೆ ಇನ್ನೂ ಹೆಚ್ಚು ಅನಕೂಲ. 


ಎಲ್ಲಕ್ಕಿಂತ ಆಗಬೇಕಾಗಿರುವುದು ಸರಳಿಕರಣ,  ಮಕ್ಕಳಿಗೆ ಹೆಚ್ಚು ಚಿತ್ರ ಕಮ್ಮಿ ಸಂಸ್ಕೃತ ಕನ್ನಡದ ಅನುವಾದ ಇರಬೇಕು. ಚಿತ್ರವನ್ನೂ ನೋಡಿ ಮಕ್ಕಳು ತಮಗೆ ಬೇಕಾದ ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.   ಎನಂತೀರಾ ?