Saturday, June 30, 2007

ಕನ್ನಡದಲ್ಲಿ ಚಿಕ್ಕೊಲೆಗಳು ..

ಕೆಲ ವರುಷಗಳ ಹಿಂದಿನ ಮಾತು, ನಮ್ಮ ಕೇಂದ್ರ ಸರ್ಕಾರದಲ್ಲಿ ಬಿಹಾರಿಬಾಬು ಒಬ್ಬರು ಮಂತ್ರಿ ಆಗಿದ್ದರು, ಆಗು ಅವರು ಮೊಬೈಲ್ ಕ್ರಾಂತಿ ಆಗುವದಿಲ್ಲ, ಅದಕ್ಕೆ ಎಲ್ಲಾ ಕಡೆ ಸ್ಥ್ರಿರ ದೂರವಾಣಿ ಹಾಕಲು ಯೋಜನೆ ಹಾಕುತ್ತೆವೆ, ಈ ನಿಟ್ಟಿನಲ್ಲಿ **** ಮಂಜೂರು ಮಾಡಿದ್ದೇವೆ ಎಂದು ಸಾರಿದ್ದರು. ಇದು ಅವರ visionary(vision-scary ಎಂದು ಓದುವುದು)ಗೆ ಒಂದು ಉದಾ.
ಹೋಗಲಿ ಬಿಡಿ.. ಅದು his story .
ಐಲು ಐಲು ಎಲ್ಲೆಲ್ಲೂ ಮೊಬೈಲು ಅನ್ನುವ ಈ ಕಾಲದಲ್ಲಿ ಸಂಚಾರಿ ದೂರವಾಣಿ ಎಲ್ಲರ ಹತ್ತಿರವೂ ಇದೆ. ಇದರಲ್ಲಿ ಕನ್ನಡದಲ್ಲಿ ಚಿಕ್ಕೋಲೆಗಳು(SMS) ಈ ನಡುವೆ ಬಹಳ ಹರಿದಾಡುತ್ತಿವೆ. ಅನೇಕ spoof ಸಂದೇಶಗಳೂ, ಹಬ್ಬ ಹರಿದಿನಗಳಿಗೆ ಶುಭಾಶಯಗಳು ಕನ್ನಡದಲ್ಲೇ ವಿನಿಮಯ ಆಗುತ್ತ ಇರುವುದು ಸಂತೋಷದ ವಿಷಯವೇ ಸರಿ. ಆದರೆ ಬೇಕು ಎಂದಾಗ ಸಿಗದೆ,ಎನು ಕಳಿಸುವುದು ಎಂದು ಪರಿದಾಡುತ್ತ ಇರಬೇಕಾದರೆ , ಗೂಗಲ್ ಮೊರೆ ಹೋಗುತ್ತೆವೆ. ಅದಕ್ಕೆ ಒಂದು ತಾಣದಲ್ಲಿ ನನಗೆ ಬಂದ, ನಾನು ನಿರ್ಮಿಸಿದ ಕೆಲವು ಚಿಕ್ಕೊಲೆಗಳನ್ನು ಇಲ್ಲಿ ಹಾಕುತ್ತ ಇದ್ದೆನೆ. ನಿಮಗೂ ಹೊಸತು ಬಂದರೆ ಇಲ್ಲಿ ಹಾಕಿ, ಇಲ್ಲಾ ಇಲ್ಲಿಂದ ತೆಗೆದುಕೊಳ್ಳಿ.
ಹರಿದಾಡೊ ಚಿಕ್ಕೊಲೆಗಳಿಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಡ ಅಲ್ಲವೇ??

ಸೂಚನೆ:- ಹೊಸ ಚಿಕ್ಕೊಲೆ ಹಾಕಬೇಕಾದರೆ ದಯವಿಟ್ಟು ೧೬೦ ಅಕ್ಷರಗಳಿಗೆ ಸೀಮಿತವಿರಲಿ

೧)
MISS YOU
hoovina suvaasane
kadiyalaaguvadilla,
suryana rashmiyannu
bachchidalaguvadilla,
nim anta geLeyarannu
yeshte doora hodaru mareyalaguvadilla


2)
MISS YOU
kaledu hoda ninnegala
nenapu kadive,
kela kshanagalu
matte mana thumbive,
aa sundara sanjegalu
mattomme baarade anisive.

3)
DOVE
nanna naguvu ninnalli
heluttide,
nanna daniyu ninna kareyuttide,
nanna kannugalu ninna aarasuttive
yekendare ni nanna atimyalendu.

4)
shubodaya
harisuvarannu preethisu
hamchikolluvarannu harisu
aptarondane hanchiko
ninna aptaryarendu gurutisu.

5)
Chamak

lei japper,
goobad,
dingri,
dabba,
totti,
guggu,
pekra,
gooslu,
kuyya,
waste nan magne
...... hige yarannu baibeda maga, avarige bejar agotte.

6)
Chamak

innamele msg madabeda
call anthu madlebeda,
sakaagide ninna sneha,
kshamisu, bejaar madidre
yelladru chennagiru



idu yav film dialogue antha helthiyya ??

7)
Friendship

snehavendare hegirabeku?
ada noDi jagave beragagabeku,
srushtisida shivane dhangaagi
namma bali bandu kelabeku
" naanu nimma snehitanaabeku".

8)
Hudgire kaaL

roopa viroopa
kuroopa yella
manavara vividha swaroopa
ninna roopakke saati ninnade
roopa, varnisalaguttilla ee kavigu paapa.

9)
Chamak

ningondu toristinni iru








nodaaytaa??
kusinaa?
naale "erdu" toristhinni.. OK

10)
beLigge

moDa kavidu
tunturu hani
biLutiralu
manakke muda niduva
tangaLiyalli nanna kiru sandeshaa
ninagaagi.


11)
Encouragement

musukirali
nasukirali
mogadondu naguvirali
sukhavirali
dukkavirali
manadondu
nambikeyirali
solirali
geluvirali
manadalli
chalavirali

12)
Sneha

apaswaragale tumbida badukalli
sumudara sangeetha sudheyannu
suridu, sotha manassu santhaisuva amruta
sinchanave ninna
"SNEHAA".

13)
Chamak

yaake ashokasthambadalli 4ne siMha
kaaNolla ..

heLu nodonaa ....
thumba sulubaa ... innomme prayatna maDu.

gottaglilvaa.... bahala simple
adakke publicity ishta agolla, nan taraa..

14)
Chamak

maathu beLLi
sms bangara
call danda
sms bramhanda
call madonu kuri
sms madonu jaaNamari

15)
KannaDa

dwani nooraagi
mardhani beretu
mugila mutti,
chaitnyavada swati muttu keLagiLidu,
jeevakke bhava seri
swaravaagali namma cheluva
kannada naadu.

16)
Sankranti wish

uttarakke mukha maadi surya
horaduva samaya sankranti.
suggi sambrahmadalli naliva
samaya nimge mattu nimma necchina
janakke sukha shanti tarali.
sankranti shubashayagalu

17) Preethi(DOVE)

ninnoluvu nannusiru
ninna nenapu nanage hasiru
snehada thotadalli
hasiremba usirirali
nanna ee preethi yendendu
ninagirali

18) shubadina

nitya vasanta
satya digantha
atishaya allavidu
shanta prashantha
ee belugu ee sobagu
prakrutiya hoo nagu
tarali shuba munjaavu.

19) Encouragement

kanasugalella nanasagabekagilla
nanasaguva kanase kana bekilla
nanasaguvudella kanasadare
kanasige arthavilla.
hagantha kanasa kansuvada bidabekilla.


20)
Ugaadi

hosa varusha
tarali hosa harusha
bevu bellagalu
sihi-kahigalu samavaagi
anubavisuva shakti
nimage barali
UGADI HABBADA SHUBASHAYAGALU.

21)
Ugadi
hosa dina
hosa chiguru
hosa kanasu
hosa jeevana
yella hosatanavannu matte
tarali ee UGADI.
UGADI HABBADA SHUBASHAYAGALU.

(ಮುಂದುವರೆಯುತ್ತದೆ)...

Wednesday, June 27, 2007

ರಮ್ಯ ರಮಣೀಯ ರಚನಾಕೃತಿಗಳು,

ಎನಪ್ಪಾ ರಚನಾಕೃತಿ ಎಂದರೆ, ಒಂದು ರಚನಾ ಎನ್ನುವ ಹುಡುಗಿ/ಮಹಿಳೆ ಬರೆದಿರುವ ಸಾಹಿತ್ಯ ಎಂದು "ಅ" ವರ್ಗ ಹೇಳಿದರೆ, ಇನ್ನೊಂದು ವರ್ಗ ಇದು ಕಲೆಗೆ ಸಂಬಂದಿಸಿರಬೇಕು ಎಂದು ಹೇಳುತ್ತದೆ. ನಮ್ಮ ಜನ ಕನ್ನಡ ಅಂದರೆ ಕೇವಲ-ಸಾಹಿತ್ಯ-ಕಲಾ ಮಾತ್ರ ಸೀಮಿತ ಎಂದು ಯೋಚಿಸುವ ಬುದ್ಧಿ ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಹೆಸರು ಸ್ವಲ್ಪ ಪೇಚು ಮಾಡಿದರು ಇದು ತಂತ್ರಜ್ಞಾನಕ್ಕೆ ಸಂಬಂದಿಸಿರಬಹುದು ಎಂದು ಒಬ್ಬನು ಹೇಳಲಿಲ್ಲ, ಹೋಗಲಿ ಬಿಡಿ ನಾನೇನು ಬೇಜಾರು ಮಾಡಿಕೊಳ್ಳುವದಿಲ್ಲ.

ಇದನ್ನು ಆಂಗ್ಲದಲ್ಲಿ DESIGN PATTERNS ಎಂದು ಕರೆಯುತ್ತಾರೆ. ನಿಮಗೆ ತಂತ್ರಜ್ಞಾನವನ್ನು ಅಭಿವೃದ್ದಿ ಮಾಡುವ , ನಿರ್ಮಿಸುವ ಅನುಭವವಿದ್ದರೆ ಇದರ ಬಗ್ಗೆ ಕೇಳಿರುತ್ತಿರಾ ಇಲ್ಲಾ ಇದನ್ನು ಬಳಸಿರುತ್ತಿರಾ. ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಇದನ್ನು ಯಾವ ವಿಷಯದಲ್ಲೂ ಬಳಸಬಹುದು. ಒಂದು ಸಮಸ್ಯೆ ಬಗ್ಗೆ ಎಲ್ಲರಿಗೂ ಅನ್ವಯಿಸುವ ಹಾಗೆ ಸಮಧಾನ ಕೊಡುವ ಕೆಲ್ಸವನ್ನು ನಮ್ಮ ರಚನಾಕೃತಿ ಮಾಡುತ್ತದೆ. ಮೊಟ್ಟ ಮೊಲಿಗೆ ಇದನ್ನು ಪರಿಚಿಯಸಿದ್ದು GOF(Gang Of Four).



ಒಂದಾ(singleton)

ಮೊದಲಿಗೆ singleton design pattern ಬಗ್ಗೆ ಮಾತಾಡೋಣ. ಇದನ್ನು ನಾವು ಒಂದಾ ಎಂದು ಕರೆಯುತ್ತೆವೆ. ಒಂದಾ ಎಂದರೆ ಕೆಲವು ಕಡೆ ಮೂತ್ರಕ್ಕೆ ಹೋಗುವದನ್ನು ಹಾಗೆ ಕರೆಯುತ್ತಾರೆ, ಆದರೂ ಪರವಾಗಿಲ್ಲ ನಾನು ಇದೇ ಹೆಸರನ್ನು ಬಳಸುತ್ತೆನೆ, ಹೀಗೆ ಆದರೂ ಇದರ ಹೆಸರು ನಮ್ಮ ಜನರ ಮನಸ್ಸಲ್ಲಿ ನಿಲ್ಲಲಿ.

ಸಮಸ್ಯೆ:- ಒಂದು ಅಪ್ಲಿಕೇಷನ್ ಮಾಡುವಾಗ ಒಂದು ವಸ್ತುವು ಒಂದಕ್ಕಿಂತ ಹೆಚ್ಚು ಇರಬಾರದು.
ಎಲ್ಲಿ ಬಳಕೆ ಆಗುತ್ತದೆ:- ಒಂದು ಕಂಪ್ಯೂಟರಗೆ ಒಂದೇ ಒಂದು ಮೌಸ್ ಇರಬೇಕು. ಭಾರತದಲ್ಲಿ ರಾಷ್ಟ್ರಪತಿ ಒಬ್ಬರೇ ಇರಬೇಕು, ಇಂತಹಾ ನೈಜವಾದ ಪ್ರಕರಣಗಳು ನಮಗೆ ಸಿಗುತ್ತವೆ. ಇದಕ್ಕೆ ಸಂಬಂದಿಸಿದ ಹಾಗೆ ಒಂದು ಪರಿಹಾರವನ್ನು ಕೊಡಬೇಕಾದರೆ ಈ ಒಂದಾ ಸಹಾಯಕ್ಕೆ ಬರುತ್ತದೆ.

ಪರಿಹಾರ:- ಗ್ರಾಹಕ -> ಒಂದಾ --------
|-- > ಒಂದೇ ರೂಪ ಕೊಡುತ್ತದೆ.
ಝಾ ರೂಪ <-

ಝ ರೂಪವನ್ನು ಎಲ್ಲರೂ ಹಂಚಿಕೊಂಡಿರುತ್ತಾರೆ, ಅದ್ದರಿಂದ ಪ್ರತಿ ಸಾರಿ ರಾಷ್ಟ್ರಪತಿಯ ವಸ್ತುವೇ ಬರಬೇಕು. ಆ ಕೆಲ್ಸವನ್ನು ಇದು ಮಾಡುತ್ತದೆ.

Wednesday, June 13, 2007

ಕನ್ನಡ ಭಾಷೆಗೆ ಮಡಿವಂತಿಕೆ ಬೇಕೆ ??

ನನಗೆ ಹೊಸಬರ ಜೊತೆ ಮಾತನಾಡುವಾಗ ಇಲ್ಲಾ ಚಲನಚಿತ್ರದ ವಿಷಯಕ್ಕೆ ಬಂದಾಗ ಕೇಳಿಬರುವ ಒಂದು ಮಾತು ಅಂದರೆ ನಮ್ಮಲ್ಲಿ ಹಿಂದಿನ ಹಾಗೆ ಚಿತ್ರಗಳು ಬರುತ್ತಿಲ್ಲ, ಈಗ ಕಾಲ ಕೆಟ್ಟುಹೋಗಿದೆ. ಬರಿ ಡಬಲ್ ಮೀನಿಂಗ್ ಮಾತ್ರ ಕಾಣಸಿಗುತ್ತಿದೆ ಎಂದು. ಆದರೆ ಇದನ್ನು ಮಾತನಾಡುವರು ಇಂದಿನ ಪೀಳಿಗೆ ಆಗಿರುವುದು ನನಗೆ ಹೆಚ್ಚು ಆಶ್ಚರ್ಯ ತಂದ ವಿಷಯ. ಈ ಮಾತು ಆ ಕಾಲದವರ ಬಾಯಿಯಲ್ಲಿ ಬಂದಿದ್ದರೆ , ಸರಿ ಅನ್ನಬಹುದಿತ್ತು. ಸರಿ ಹೋಗಲಿ, ಆ ಕಾಲದ ಯಾವ ಚಿತ್ರಗಳು ಇಷ್ಟವಾದವು ಅಂದರೆ ಒಂದೆರೆಡು ಪುಟ್ಟಣ್ಣ, ಇಲ್ಲಾ ಡಾ||ರಾಜ್ ಚಿತ್ರ ಹೇಳುತ್ತಾರೆ. ಗಮನಿಸಬೇಕಾದ ಅಂಶ ಅಂದರೆ ಅವರು ಹೇಳಿದ ಮೊದಲ ಚಿತ್ರಕ್ಕೂ ಕೊನೆಯ ಚಿತ್ರಕ್ಕೂ ಇರುವ ಅವಧಿ ಸರಿ ಸುಮಾರು ೩೦ ವರುಷಗಳು. ಈ ೩ ದಶಕಗಳಲ್ಲಿ ಇವರಿಗೆ ಇಷ್ಟವಾಗಿರುವುದು ಬರೀ ಬೆರಳಣಿಕೆಯ ಚಿತ್ರಗಳು ಮಾತ್ರ, ಅಂದರೆ ಕೇವಲ ೧% ಚಿತ್ರಗಳನ್ನು ಮೆಚ್ಚಿರುವ ಇವರಿಗೆ ಆ ಕಾಲದಲ್ಲಿ ಚೆನ್ನಾಗಿತ್ತು ಎಂದು ಹೇಳುವ ಮಾತು ಎಷ್ಟರ ಮಟ್ಟಿಗೆ ಸರಿ ಅನಿಸುತ್ತದೆ ನೀವೇ ಹೇಳಿ. ಸುಮ್ಮನೆ ಇಂದಿನ ಚಿತ್ರಗಳನ್ನು ನೋಡದೆ ಇರಲು ಇವರು ಕೊಡುವ ಕಾರಣ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದು ಲಾಸ್ಟ ಚಿತ್ರ ನೋಡಿದ್ದು ಅಂದರೆ ದಶಕಗಳ ಹಿಂದಿನ ಒಂದು ಡಬ್ಬಾ ಚಿತ್ರವನ್ನು ಹೇಳುತ್ತಾರೆ. ಆವರ ಪ್ರಕಾರ ಅದೇ ತರಹ ಎಲ್ಲಾ ಚಿತ್ರಗಳು ಇವೆ , ಇಂದೂ ಕೂಡ ಅದೇ ನಡೆಯುತ್ತ ಇದೆ ಎಂದು.
ಇನ್ನ ಮುಂದೆ ಹೋಗಿ ೧೯೮೮-೯೩ ಸಮಯದಲ್ಲಿ ಬರುತ್ತಿದ್ದ ಕಾಶೀನಾಥ ಚಿತ್ರಗಳನ್ನು ಉದಾಹರಣೆ ಕೊಡುತ್ತಾರೆ.
ಇಷ್ಟೆಲ್ಲಾ ಕೇಳಿದ ಮೇಲೆ ಅನಿಸುವುದು ಎನೆಂದರೆ ಸಮಸ್ಯೆ ಇರುವುದು ಇಂದಿನ ಚಿತ್ರದಲ್ಲಿ ಅಲ್ಲ, ಇವರ ಕೀಳೆರಿಮೆಯಲ್ಲಿ ಮತ್ತು ಇವರ ಅಜ್ಞಾನದಲ್ಲಿ.
ಇವರಿಗೆ ಕನ್ನಡ ಚಿತ್ರಗಳನ್ನು ನಾನು ನೋಡುತ್ತೆನೆ ಎಂದು ಬೇರೆಭಾಷಿಕರ ಮುಂದೆ ಹೇಳಿಕೊಳ್ಳುವುದು, ಪಬ್ಲಿಕ್‍ನಲ್ಲಿ ಕಾಚಾ ಹಾಕಿಕೊಂಡು ನಿಂತ ಹಾಗೆ ಆಗುತ್ತದೆ. ತಮ್ಮ ಈ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಇವರು ಕಾರಣ ಕೊಡುವುದು quality ಇಲ್ಲಾ ಕಣಮ್ಮ, ಸಾಧುಕೋಕಿಲ ಕಾಮೆಡಿ ನೋಡಿದರೆ ಅಸಹ್ಯ ಆಗುತ್ತದೆ, ಇದೇ ಜನ ತಮಿಳಿನಲ್ಲಿ ಗೌಂಡಾಮಣಿ, ಸೆಂಥಿಲ್ ಇಲ್ಲಾ ಹಿಂದಿಯಲ್ಲಿ ಜಾನಿಲೀವರ್ ಮಾಡುವ ಅಪಹಾಸ್ಯವನ್ನು ನೋಡಿ ನಗುತ್ತಾರೆ. ಇದು ಇವರ hyppocrism ತೋರಿಸುತ್ತದೆ.
ಈ ವರ್ಗದ ಜನರಿಗೆ ನಾನು ಹೇಳುವುದು ಒಂದೇ, ನೋಡದೆ ಮಾತಾನಾಡುವುದು ಉಚ್ಚೆಯನ್ನು ಪಂಚಾಮೃತಾ ಎಂದು ಕರೆದ ಹಾಗೆ. ತಿಳಿದುಕೊಂಡು ಮಾತನಾಡಿ, ನಿಮ್ಮ ಅಜ್ಞಾನವನ್ನೂ ಭಾಷೆಯ ಕುಂಠಿತಕ್ಕೆ ಬಳಸಿ ಮಾರಕ ಮಾಡಬೇಡಿ ಎಂದು.

ಮುಂದುವರೆಯುತ್ತ, ನನಗೆ ಇನ್ನೊಂದು ವರ್ಗದ ಜೊತೆ ಸ್ವಲ್ಪ ಟಕ್ಕರ್ ಆಗುತ್ತದೆ, ಆ ವರ್ಗ ಸ್ವಲ್ಪ ಸಂಸ್ಕೃತ ಪ್ರಿಯರು ಮತ್ತು ತುಂಬಾ ಮಡಿವಂತರೂ. ಅವರ ದೃಷ್ಟಿಯಲ್ಲಿ ಜಗ್ಗೇಶ್ ಮಾತು ಎಂದರೆ ಮೈ ಮೇಲೆ ಜೋಡ್ಯ್ಗಾ(ಜಿರಳೆ) ಬಿಟ್ಟು ಕೊಂಡ ಹಾಗೆ.
ಇಂತಾ ಮಾತುಗಳು ಭಾಷೆಯನ್ನು ಹಾಳು ಮಾಡುತ್ತಿವೆ, ಇನ್ನೂ ಮುಂದೆ ಹೀಗೆ ಬಿಟ್ಟರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎಂದು ಸಂಸ್ಕೃತಿಯನ್ನು ಉಡಿದಾರಕ್ಕೆ ಸಿಕ್ಕಿಸಿಕೊಂಡ ಹಾಗೆ ಮಾತನಾಡುತ್ತಾರೆ. ಯಾಕೆ ಇಷ್ಟು ಕೋಪ, ಸ್ವಲ್ಪ ಸಮಾದಾನ ಮಾಡಿಕೊಳ್ಳಿ ಅಂದರೆ , ಎನ್ರಿ ಸಮಧಾನ ಮಾಡಿಕೊಳ್ಳೊದು, ಮುಂದೆ ನಮ್ಮ ಮಕ್ಕಳು "ಡಗಾರ್""ಫಿಗರ್" "ಬೊಂಬಾಟ್", "ಸಖತ್" ಎಂದರೆ ನಾವು ಕೇಳುತ್ತ ಇರಬೇಕಾ, ೭ ಜ್ನಾನಪೀಠ ಪಡೆದ ನಮ್ಮ ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಬೊಬ್ಬಿಡುತ್ತಾರೆ.
ಅದರೆ ನನಗೆ ಹೀಗೆ ಅವರು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅನಿಸುವುದು, ಕಲಿತರೆ ಎನು ತಪ್ಪು ಎಂದು. ನನಗೆ ಸರಿಯಾಗಿ ನೆನಪಿದೆ, ೧೯೯೮-೯೯ ಸಮಯದಲ್ಲಿ ಕನ್ನಡ ಸ್ಲಾಗ್ಸ ಮೇಲ್ ಒಂದು ಹರಿದಾಡುತ್ತ ಇತ್ತು. ಇದು ನನಗೆ ಬಂದಾಗ ಇದಕ್ಕೆ ನಾನು ಮತ್ತು ನನ್ನ ಸ್ನೇಹಿತರು ೩ ತಿಂಗಳಲ್ಲಿ ನಾನು ಮಾತನಾಡುವ ಅನೇಕ ಶಬ್ಧಗಳನ್ನು ಹಾಕಿದೆವು. ಇದರಲ್ಲಿ ಒಂದು ಊರಿಗೆ ಸೀಮಿತವಾದ ಪದಗಳು ಇದ್ದವು. ಅವೆಲ್ಲವನ್ನೂ ಒಂದಡೇ ಸೇರಿಸಿ ಆಗಿನ ಕಾಲದಲ್ಲಿ ಹಾಕಬಹುದಿತ್ತ "ಧಾರವಾಡ.ಕಾಂ" ಗೆ ಹಾಕಿದೆ. ಯಾಕೆ ಈ ಕೆಲ್ಸಕ್ಕೆ ಕೈ ಹಾಕಿದ ಎಂದರೆ, ನಾವು ಜಗತ್ತಿಗೆ ಕೆಲ ಶಬ್ದಗಳನ್ನು ಕೊಡಬಹುದಾದರೆ ಅವು ಇವು ಮಾತ್ರ. ಇವು ನಮ್ಮ ಸ್ವಂತ ಪದಗಳು, ಮತ್ತು ಇದರಲ್ಲಿ ನಮ್ಮ ಸೊಗಡು ಇದೆ. ಬಾಕಿ ಪದಗಳನ್ನು ನಾವು ಇಂಗ್ಲೀಷ್ ಅಥವಾ ಸಂಸ್ಕೃತದದಿಂದ ಪಡೆದಿದ್ದೆ ಆಗಿದೆ. "ಬಸ್ಸು, ಕಾರು, ಲಾರಿ ..ಟೇಬಲು ... ಈ ಪದಗಳನ್ನು ನಾವು ಮುಂದೆ ವೆಬಸ್ಟರಗೆ ಹಾಕಿಕೊಳ್ಲಿ ಎಂದರೆ ಜನ ನಗುತ್ತಾರೆ ಅಷ್ಟೆ. ಅದೇ "ಸಖತ್", ಬೊಂಬಾಟ್" ಇವು ಒಂದು ದಿನ ಸೇರುವ ಛಾನ್ಸಗಳು ಇವೆ. ಅದಕ್ಕೂ ಹೆಚ್ಚು ಅಂದರೆ ಆಡುವ ಮಾತು ಮತ್ತು ಬರೆಯುವುದು ಒಂದಕ್ಕೆ ಒಂದು ಭಿನ್ನ ನಮ್ಮ ಭಾಷೆಯಲ್ಲಿ. ನನ್ನ ಈ ಊಹೆ ತಪ್ಪಾಗಲಿಲ್ಲ, ಇಂದು ನೋಡಿ ಬೆಂಗಳೂರಿನ
ಅಲಿಖಿತ ಭಾಷೆಯಾಗಿ ಈ ಪದಪುಂಜಗಳು ಬಳಕೆಯಲ್ಲಿವೆ. ಇದಕ್ಕೆ ಆದರೂ ನಾವು ಜಗ್ಗೇಶ & Co ಅಭಾರಿಯಾಗಿರಬೇಕು.

ಇನ್ನೂ ಮುಂದೆ ಹೋಗಿ ಮಡಿವಂತಿಕೆ ತೋರುವ ನಮ್ಮ ಜನ ಕನ್ನಡದಲ್ಲಿ ಕೇವಲ ಒಳ್ಳೆಯ ಕೃತಿಗಳು(ಪ್ರಫುಲ್ಲ ಸಾಹಿತ್ಯ) ಬರಬೇಕು, ಸೆಕ್ಸಗೆ ಸಂಬಂದಿಸಿದ (ಅಶ್ಲೀಲ) ಬರಬಾರದು. ಇದರಿಂದ ಭಾಷೆ ಮಲೀನ ಆಗುತ್ತದೆ ಎಂದು ವಾದಿಸುತ್ತಾರೆ. ಅಲ್ಲಾ ಸ್ವಾಮಿ, ಕವನ-ಕಥೆ-ಕಾದಂಬರಿ ಬಿಟ್ಟು ನಾವು ಇನ್ನೇನು ಯೋಚಿಸಲು ಸಾಧ್ಯವೇ ಇಲ್ಲವೇ. ಈ ಕಥೆ-ಕಾದಂಬರಿ ಎಲ್ಲಾ ದುಡ್ದಿದ್ದು , ಒಳ್ಳೆಯ ಕೆಲ್ಸ ಇದ್ದು ಅದರ ಜೊತೆಗೆ ಸಮಯ ಇರುವ ವರ್ಗಕ್ಕೆ. ಆದರೆ ಸಾಮನ್ಯ ಜನಕ್ಕೆ ಬಡವನಿಗೆ ಅವನ ಕೆಲಸಕ್ಕೆ ಸಹಾಯ ಮಾಡುವ ಇಲ್ಲಾ ಅವನಿಗೆ ಬೇಕಾದ ಒಂದು ವಿಷಯದಲ್ಲಿ ಸಾಹಿತ್ಯ ಇರಬೇಕು ಎಂದು ಆಸೆ ಇರುತ್ತದೆ. ಉದಾ:- ಸೈಕಲ್ ಬಿಡಿಭಾಗಗಳನ್ನು ಬಿಚ್ಚಿ , ಮತ್ತೆ ಜೋಡಿಸುವುದು ಹೇಗೆ. ವಾಚ್ ಬಿಡಿ ಪಾರ್ಟುಗಳ ಬಗ್ಗೆ ಲೇಖನ. ಇಲ್ಲಾ ನಾವು ಬಳಸುವ ಪ್ರತಿಯೋಂದು ವಸ್ತುವಿನ "user guide". ಹಾಗೇಯೆ ಪ್ರತಿ ಜೀವಿಯು necessary evil ಆಗಿರುವ ಲೈಂಗಿಕ ಶಿಕ್ಷಣ ನಮ್ಮ ಭಾಷೆಯಲ್ಲಿ ಮಾತ್ರ ಬರಬೇಕು. ಬೇಡ ಅಂದರೂ ಈ ವಿಷಯದಲ್ಲಿ ಪ್ರತಿ ಪ್ರಜೆಗೂ ಬೇಕು, ನಮ್ಮ ಭಾಷೆಯಲ್ಲಿ ಕೊಡದಿದ್ದರೆ, ಒಂದು ವರ್ಗ ಬೇರೆ ಭಾಷೆಗೆ ಮೊರೆಹೋಗುತ್ತದೆ , ಇನ್ನೊಂದು ವರ್ಗ assume ಮಾಡಿಕೊಂಡು ಇಲ್ಲಾ quality ಇಲ್ಲದ ಅಗ್ಗದ ಸಾಹಿತ್ಯಕ್ಕೆ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಬೇಕಾ ??

ಒಂದು ಭಾಷೆ ಅನ್ನುವುದು ಮದುವೆಯ ಊಟ ಹಾಗೇ ಇರಬೇಕು, ಅದರಲ್ಲಿ ನಮ್ಮ ಜನರು ಹೇಳುವ ಕೆಟ್ಟದ್ದು-ಒಳ್ಳೆದು ಎಲ್ಲಾ ಇರಬೇಕು. ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಹಾಗೆಂದ ಮಾತ್ರಕ್ಕೆ ಊಟವೇ ಉಪ್ಪಿನಕಾಯಿ ಆಗಬಾರದು.

ಕೊಸರು:- ಕನ್ನಡದಲ್ಲಿ ಕೆಟ್ಟ ಮಾತು ಇರಬಾರದೆಂದು ಅನೇಕರು ನನ್ಗೆ ಹೇಳಿದ್ದಾರೆ, ಯಾಕೆ ಎಂದು ನನಗೆ ಅರ್ಥ ಆಗಿಲ್ಲ. ಒಂದು ಅಭಿವ್ಯಕ್ತಿಯನ್ನು ಬಿಂಬಿಸುವ ಎಲ್ಲಾ ಪದಗಳು ನಮ್ಮ ಭಾಷೆಯಲ್ಲಿ ಇರಬೇಕು. ದೇವರ ಭಾಷೆಯಾದ ಸಂಸ್ಕೄತದಲ್ಲಿ ಕೂಡ ಬೈಗಳ ಇದ್ದವು ಎಂದು ಎಲ್ಲೊ ಓದಿದ ನೆನಪು.

Saturday, June 09, 2007

ನೈತಿಕತೆಯನ್ನು ಮರೆತಿರುವ ನಮ್ಮ ಕಂಗ್ಲೀಷ್ ಶಾಲೆಗಳು.


ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೇ. ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ
ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ
ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು
ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ,
ದುಡ್ದು ಕೊಟ್ಟರೆ stayfreee ಕೂಡ ಹಾಕಿಕೊಳ್ಳುವದಕ್ಕೆ ಹಿಂಜರಿಯದ ಒಂದು ವರ್ಗ ಕೂಡ ಇದೆ, ಇವರನ್ನು stayfree ವರ್ಗ ಎಂದೇ ಕರೆಯೋಣ. ರಾಜಕರಣೀಗಳು,
ಸಾಹಿತಿಗಳು ಮತ್ತು ಪತ್ರಕರ್ತರ ಇರುವ ಈ ದಂಡು, ವ್ಯವಸ್ತಿತವಾಗಿ ವಿಷಯವನ್ನು ಮೇಲ್ವರ್ಗ-ಕೀಳ್ವರ್ಗ, ಐ.ಟಿ-ಬಿ.ಟಿಯ ಒಂದು ಟಚ್ ಕೊಟ್ತ್ತು
ಮುಖ್ಯ ವಂಚನೆಯನ್ನು ಮರೆಮಾಚುವ ಕೆಲ್ಸಕ್ಕೆ ಸಂಪೂರ್ಣ ಸಾಥ್ ಕೊಡುತ್ತವೆ.
ಮುಖ್ಯ ವಂಚನೆ ಎಂದರೇನು ??
ಈ ಶಾಲೆಗಳು ಸರಕಾರಕ್ಕೇ ಅನೇಕ ವರ್ಶಗಳಿಂದ ಕನ್ನಡ ಮಾಧ್ಯಮಗಳಲ್ಲಿ ಭೊಧನೆ ಮಾಡುತ್ತವೆ ಎಂದು ಮೋಸ ಮಾಡಿ,
ಇಲ್ಲಿ ಅಮಾಯಕ ಜನರಿಗೆ ನಮ್ಮ ಹತ್ತಿರ ಮಾನ್ಯತೆ ಇದೆ, ನಾವು ಪಾಠ ಮಾಡುವದೆಲ್ಲಾ ಸರಕಾರ ಪಠ್ಯಕ್ರಮ ಎಂದು ಬೂಸಿ ಬಿಟ್ಟು,
ಈ ಫೀಸು, ಆ ಫೀಸು, ಬಿಲ್ಡಂಗ್ ಡೊನೆಷನ್ ಎಂದು ಲೂಟಿ ಮಾಡುತ್ತ ಇರುವುದು ನಮ್ಮ stayfree ವರ್ಗಕ್ಕೆ ತಿಳಿದದೇ ಇರುವುದು ಮತ್ತು
ತಿಳಿದರೂ ಗೊತ್ತಿಲ್ಲದೇ ಇರುವುದು ಜಾಣಕುರುಡೇ ಸರಿ.
ತಮ್ಮ ಅಕ್ರಮಗಳು ಯಾವಾಗ ಬೆಳಕಿಗೆ ಬಂದವೋ ಆಗ ವಿಷಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತ ಬಂದಿದೆ, ಕಾಲಹರಣ ಮಾಡಲು
ಕೋರ್ಟಿಗೆ ಹೋಗಿ ಅವರ ಕೈನಲ್ಲೂ ಚಿಮಾರಿ ಹಾಕಿಸಿಕೊಂಡಿರುವ ಈ ಶಾಲೆಗಳು , ತಮ್ಮ ಕ್ರಮಕ್ಕೆ ಪೋಷಕರೇ ಕಾರಣ ಎಂದು ಗೂಬೆಯನ್ನು
ಅವರ ಮೇಲೆ ಕೂರಿಸುವ ಮತ್ತು ಅವರ ಕೈನಲ್ಲಿ ಪ್ರತಿಭಟನೆ ಮಾಡಿಸುವ ಚಿಲ್ಲರೆ ರಾಜಕರಣ ಮಾಡುತ್ತಿವೆ. ಇವರು ಕಳ್ಳ ಕೆಲಸವನ್ನು ಮಾಡಲು ಹೋರಟಾಗ
ಯಾವ ಪೋಷಕರು ಒತ್ತಾಯ ಮಾಡಿದ್ದರು ಎಂದು ಹೇಳಲಿ ನೋಡೊಣ. ಜನರನ್ನು ಲೂಟಿ ಮಾಡಿ ಡೊನೆಷನ್ ತೆಗೆದುಕೊಳ್ಳುವದನ್ನು ಯಾವ ಪೊಷಕರು
ಹೇಳಿಕೊಟ್ಟರೋ ನಾ ಕಾಣೆ. ಅದೇ ಪೋಷಕರು ನಾಳೇ ಡೊನೆಷನ್ ಇಲ್ಲದೇ ನಡೆಸುತ್ತಾರ ಎನ್ನುವುದು ಯಕ್ಷಪ್ರಶ್ನೆ.
ಒಂದು ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವುದು ಯಾಕೆ, ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ, ಒಂದು ಒಳ್ಳೆಯ
ಮಾನವೀಯ ಮೌಲ್ಯಗಳನ್ನು ಅಭ್ಯಸಿಸುತ್ತಾರೆ ಎನ್ನುವ ಒಂದು ನಂಬಿಕೆ ಮೇಲೆ. ಆದರೆ ಇಲ್ಲಿ ನೋಡಿ ವೈಚಿತ್ರ್ಯ, ಶಾಲೆಯ ಆಡಳಿತವನ್ನು ನೋಡಿ ಮಕ್ಕಳು
ಕಲಿಯುವುದೇ ಬೇರೆ
೧) ಸರಕಾರಕ್ಕೆ ಸುಲಭವಾಗಿ ವಂಚನೆ ಮಾಡಬಹುದು
೨) ದುಡ್ದಿದ್ದರೆ ಸಾಕು, stayfree ವರ್ಗ ನಮ್ಮ ತೆಕ್ಕೆಯಲ್ಲಿ ..
೩) ಯಾವುದಕ್ಕೋ ಪರವಾನಿಗೆ ಪಡೆದು , ಇನ್ಯಾವುದೋ ಕೆಲ್ಸ ಮಾಡುವುದು.
ಉಧಾ:- ನಾಳೆ ಶಿವಕಾಶಿಯಲ್ಲಿ ಪಟಾಕಿ ಮಾಡಲು ಪರವಾನಿಗೆ ಪಡೆದು, ಬಾಂಬ್ ಮಾಡಲು ಹೋರಟರೆ ಅದನ್ನು ನಾವು ಸಮರ್ಥನೆ ಮಾಡಬೇಕೆ ??
ಆವಗಲೂ ಕೂಡ ಈ ನಮ್ಮ stayfree ವರ್ಗ ಪಾಪ ತುಂಬಾ ಮಕ್ಕಳ ಭವಿಷ್ಯವಿದೆ ಎಂದು ಸಾಮಾಜಿಕ ಕಳಕಳಿ ತೋರುವುದೇ ??. ಇದು ಬಡವರ ಮೇಲೆ ಮಾಡುತ್ತಿರುವ
ಧಬ್ಬಾಳಿಕೆ ಎಂದು ಬೊಬ್ಬೆ ಹೊಡೆಯುವುದೇ? .
ಅಷ್ತು ಮಕ್ಕಳ ಬಗ್ಗೆ ಕಳಕಳಿ ಇರುವ stayfree ವರ್ಗ ಓದುವ ವಯಸ್ಸಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರ ಬಗ್ಗೆ ದನಿ ಎತ್ತಲ್ಲಿ. ಅವರನ್ನು ಪಾಪಕೂಪದಿಂದ ಬಿಡುಗಡೆಗೊಳಿಸಿ
ಶಾಲೆಗೆ ಸೇರಿಸಲಿ , ಅದನ್ನು ಬಿಟ್ಟು ದುಡ್ದಿಗೆ ಜೋತು ಬಿದ್ದು ನಂದೆಲ್ಲಿ ಇಡಲಿ ನಾರಾಯಣ ಮೂರ್ತಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದು. ಅಕ್ರಮವನ್ನು ಸಕ್ರಮ ಮಾಡಲು
ಹೋಗುವುದು ಅವರಿಗೆ ಸರಿ ಕಾಣುವದಿಲ್ಲ. ಸ್ವಲ್ಪ ಸಾಮಾಜಿಕ ಖಳ-ಖಳಿ ತೋರುವ ಬದಲು, ಸಾಮಾಜಿಕ ಬದ್ಧತೆ ತೋರಿಸಲಿ ಸಾಕು.

Sunday, June 03, 2007

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..


ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ ಗಮನಿಸ ಬೇಕಾದ
ಅಂಶಗಳು ಬಹಳ ಇವೆ. ಇದನ್ನು ನಿರ್ದೇಶಕ ನರೇಂದ್ರ ಬಾಬು ಚೆನ್ನಾಗಿ ಕೊಟ್ಟಿದ್ದಾರೆ ಅಂದರೆ ತಪ್ಪಾಗಲಾರದು.

ಇಂದು ನಾವು ಸರ್ವಸಾಮನ್ಯವಾಗಿ ಹೇಳುತ್ತಿರುವ ಪರಭಾಷಿಕರ ಆಕ್ರಮಣ ಮತ್ತು ಅವರು ಮಾಡುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ
ಬೇರೆ ಬೇರೆಯಾಗಿ ತೋರಿಸಿದ್ದಾರೆ.

೧) ೪೦ ವರುಷಗಳಿಂದಲೂ ಇಲ್ಲೇ ಇದ್ದು, ಕನ್ನಡ ಬಾರದ ತಮಿಳಿಗ, ತಮಿಳಿಗ ತಾನು ಮುಖ್ಯವಾಹಿನಿಗೆ ಸೇರದೇ ಇರಲು ಇಲ್ಲಿನ
ಜನಗಳೇ ಕಾರಣ, ನನ್ನ ಜೊತೆ ಕನ್ನಡದಲ್ಲಿ ವ್ಯವಹರಿಸದೇ , ಕನ್ನಡವಿಲ್ಲದೇ ವ್ಯಾಪರ ಮಾಡಲು ಆಗುವದಿಲ್ಲ ಎಂದು ತಿಳಿ ಹೇಳದೇ
ನನ್ನ ಭಾಷೆಯಲ್ಲೇ ವ್ಯವಹರಿಸಿ, ತನಗೆ ಕನ್ನಡದ ಅವಶ್ಯಕತೆ ಇದೆ ಅಂದರೂ ಜನ ಆಸ್ಪದ ಕೊಡದಿರುವ ವಿಷಯ ಇಂದಿನ ಸಮಾಜದಲ್ಲಿ
ಬಹಳ ಪ್ರಸ್ತುತವಾಗಿ ಕಾಣುತ್ತದೆ. ಹಾಗೇಯೆ ಮುಖ್ಯವಾಹಿನಿಗೆ ಸೇರುವ ಅವರ ಚಿಕ್ಕ ಪುಟ್ಟ ಪ್ರಯತ್ನಗಳಿಗೆ ನಾವು ಸಹಾಯ ಮಾಡದೇ
"ಅಣ್ಣಾ..ಕನ್ನಡ ಕೊಲ್ಲಬೇಡ" ನಾವೇ ನಿನ್ನ ಭಾಷೆಯಲ್ಲಿ ಮಾತನಾಡುತ್ತೆವೆ ಎಂದು ಹೇಳುವ ನಮ್ಮ ಕನ್ನಡಿಗರ ಉದಾರತೆಯ ಮುಖವನ್ನು ತೋರಿಸಿಕೊಡುತ್ತದೆ.
ಇದಕ್ಕೆ ಲಕ್ಷೀ(ಪ್ರೇಮ್) ಪಾತ್ರ ಸರಿಯಾಗಿ ಉತ್ತರ ಕೊಟ್ಟು ಅವರು ಇಲ್ಲಿಯವರೇ, ಇದೇ ಮನೋಭಾವ ಪ್ರತಿಯೊಬ್ಬ ವಲಸಿಗನ ಮನದಲ್ಲಿ ಮೂಡಬೇಕು ಎಂಬ
ಸಂದೇಶ ಕೊಡುತ್ತದೆ. ಹಾಗೇಯೆ ನಮ್ಮ ಉದಾರತೆಯ ದುಷ್ಪರಿಣಾಮದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

೨) ಕರ್ನಾಟಕದಲ್ಲಿ ಭೂ- ಮಾಫಿಯಾಕ್ಕೆ ಆಂದ್ರದಿಂದ ಬಂದು ಇಲ್ಲಿ ತಮ್ಮ ಧನ-ಬಾಹು ಬಲಗಳಿಂದ ನಮ್ಮ ಅಮಾಯಕರನ್ನು ಬೆದರಿಸಿ,
ತಮ್ಮ ದೌರ್ಜನ್ಯವನ್ನು ಮೆರೆಯುತ್ತಿರುವ ಜನಕ್ಕೆ ನಾವು ತಲೆ ಬಾಗಿದರೆ,ಅವರು ನಮ್ಮನ್ನು ಒಂದು ದಿನ ಬೀದಿಗೆ ನಿಲ್ಲುಸುತ್ತಾರೆ ಎಂದು
ಮಾರ್ಮಿಕವಾಗಿ ಹೇಳುತ್ತಾರೆ. ಆಂಧ್ರದ ಈ ಭೂ-ಮಾಫಿಯ ಜನ ತಾವು ಕೆಳಮಟ್ಟಕ್ಕೆ ಆದರೂ ಇಳಿಯಲು ಹಿಂಜರಿಯುವದಿಲ್ಲ,ಆದರೆ
ಗೌರವಕ್ಕೆ ಮಣೆ ಹಾಕುವ ನಾವು ಕನ್ನಡಿಗರ ಪಾತ್ರವನ್ನು ಮಂಗಳೂರಿನ ಲಕ್ಶ್ಮೀ ಗೆಳಯನ ಮೂಲಕ ಆವರಣ ಮಾಡಿದ್ದಾರೆ. ಇವರಿಗೆ ಒಳ್ಳೆಯ ಮಾತಿನಲ್ಲಿ
ಹೇಳಿದರೆ, ಕನ್ನಡ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಬಿಡು ಎಂಬ ಕೆಟ್ಟ ದೃಷ್ತಿಯಲ್ಲಿ ಹೇಳಲು ಹಿಂಜರಿದ ಆ ಜನಕ್ಕೆ ಒದ್ದ್ದೇ ಬುದ್ಧಿ ಹೇಳಬೇಕು ಎಂಬುದು
ನಿರ್ದೇಶಕರ ಅಂಬೋಣ. ಬಲವಂತವಾಗಿ ಮತ್ತು ಅವ್ಯವತವಾಗಿ ತೆಲುಗನ್ನು ನಮ್ಮ ಮೇಲೆ ಹೇರುವುದು ಕೂಡ ಇದೇ ಜನ ಎಂದು ಬಿಡಿಸಿ ಹೇಳಿದ್ದಾರೆ.

೩) ಕನ್ನಡ ಕೆಲಸ ಅಂದರೆ ಕೇವಲ ರಾಜ್ಯೋತವ ಆಚರಿಸಿ, ಅಮ್ಮ-ಕನ್ನಡಮ್ಮ ಎಂದು ಹಾಡುವುದು ಮಾತ್ರವಲ್ಲ ಕನ್ನಡಿಗರು ಉದ್ಯಮಶೀಲರಾಗಬೇಕು
ಎಂದು ಮಧ್ಯಂತರ ಭಾಗದಲ್ಲಿ ಸಂದೇಶ ಸಾರಿದ್ದಾರೆ. ಉದ್ಯಮಶೀಲರಾಗಿ ಪರರಾಜ್ಯದವರ ಕೈನಲ್ಲಿ ಇರುವ ವ್ಯವಹಾರವನ್ನು ಚತುರತೆ ಇಂದ ಪಡೆಯಬೇಕೆಂಬ
ವಿಷಯವು ನಿರ್ದೇಶಕರ ಬಗ್ಗೆ ಒಳ್ಳೆಯ ಮೆಚ್ಚುಗೆ ಮೂಡುತ್ತದೆ.