Wednesday, November 05, 2008

ಹಿತ್ತಲ ಗಿಡ ಮದ್ದಲ್ಲ....


Shoba De: Taking the democracy argument further, in a country like India, who decides which person has the right to be in whichever part of the country?

Raj Thackery: India is like Europe. This means there is one currency and numerous languages and cultures. And this is a 'Europe' made up of various cultures.


ಇದು ರಾಜ್ ಠಾಕ್ರೆ ಉವಾಚ, ಈ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ಈ ವಯ್ಯನಿಗೆ ಅಂತು ಬುದ್ದಿ ಬಂತಲ್ಲ ಅಂತ ಸಮಧಾನ ಆಗಿದೆ. ಈ ಪ್ರತಿಪಾದನೆಯನ್ನು ಬಹಳ ಹಿಂದೆಯೆ ಮಾಡಿದ್ದೆವು, ಈಗ ಅದನ್ನು ಠಾಕ್ರೆ ಅದನ್ನು ಕೊಂಡಿದ್ದಾರೆ ಅಷ್ಟೆ.


ಆದರೆ ಮುಂದೆ ನಿರಾಸೆ ಮಾಡುತ್ತಾರೆ.
SD: Hindi has been declared the national language, that's why.
RT: Where is it a national language?

SD: Officially it is the national language. RT: That is what I am saying. Let's check its history. Hindi is a state language. It was declared the national language in a Congress session. We can speak on this with proof later. It is the national language. I respect it.

ಆದರೂ ಅವರ ಶೋಭಾ ಡೇ ಅವರ ಸಂದರ್ಶನದಲ್ಲಿ ಬಹಳ ಮಟ್ಟಿಗೆ ಇಬ್ಬರೂ ತಮ್ಮ ಅಜ್ಞಾನ ಮೆರೆದಿದ್ದಾರೆ ಬಿಡಿ,ಮೊದಲಿಗೆ ಭಾರತ ಅಂದರೆ ರಾಜ್ಯಗಳ ಒಕ್ಕೂಟ ಎಂದು ನಮ್ಮ ಸಂವಿಧಾನವೇ ಸಾರಿದೆ. ಇದನ್ನು ಶೋಭಾ ಡೇ ಅವರೆ ಹೌದಾ ಎಂದು ಪ್ರಶ್ನಿಸುತ್ತಾರೆ.
ಮುಂದೆ, ಹಿಂದಿ ನಮ್ಮ ರಾಷ್ಟ್ರಭಾಷೆ ಅದಕ್ಕೆ ಎಲ್ಲರೂ ಅದನ್ನು ಮಾತನಾಡುತ್ತಾರೆ ಎಂದು ಶೋಭಾ ಡೇ ಹೇಳುವುದು ಕೇಳಿದರೆ ನಗು ಬರುತ್ತದೆ, ಅದನ್ನು ಈ ರಾಜ ಮೊದಲಿಗೆ ಒಪ್ಪಿಕೊಳ್ಳದಿದ್ದರೂ ಕೊನೆಗೆ ನಾನು ಗೌರವಿಸುತ್ತೆನೆ ಅದನ್ನು ರಾಷ್ಟ್ರಭಾಷೆ ಎಂದು ಅಂತ ಹೇಳಿ ತಮ್ಮ ಅರೆಬರೆ confusions ಸಾಬೀತು ಪಡಿಸಿದ್ದಾರೆ...

ಇದನ್ನು ಮೆಚ್ಚಿ ಹಾಡಿ, ಇಂತಹ ನಾಯಕರು ನಮ್ಮ ಕರ್ನಾಟಕಕ್ಕೆ ಬೇಕು ಅಂತ ಮಾಧ್ಯಮದವರು ಒಣ ಪ್ರತಾಪ ತೋರುತ್ತಾರೆ.
ಮೊದಲು ಈ ಮಾಧ್ಯಮದವರು ಈ ರಾಜನಿಗೆ ಸ್ವಲ್ಪ ನಮ್ಮ ಕನ್ನಡಿಗರು ಹಿಂದಿ ಬಗ್ಗೆ ಬರೆದಿರುವ ಜಾಗೃತಿ ಲೇಖನಗಳನ್ನು ತರ್ಜುಮೆ ಮಾಡಿ ಕೊಟ್ಟು ಓದಿಸಲಿ.

ಒಕ್ಕೂಟ-ರಾಷ್ಟ್ರಭಾಷೆ ಬಗ್ಗೆ ಬಹಳ ಚೆನ್ನಾಗಿ ತಿಳಿದುಕೊಂಡಿರುವ ಅನೇಕ ವರುಷಗಳಿಂದ ಈ ತತ್ವಗಳನ್ನು ಪ್ರತಿಪಾದನೆ ಮಾಡುತ್ತಿರುವ ನಾರಾಯಣಗೌಡ್ರು ನಮ್ಮ ಮಾಧ್ಯಮದವರಿಗೆ ಕಾಣಸಿಗದಿರುವುದು ಹಿತ್ತಲ ಗಿಡ ಮದ್ದಲ್ಲ ಅನ್ನುವ ಅವರ ಧೋರಣೆಗೆ ಸಾಕ್ಷಿ.

Saturday, November 01, 2008

ಲೇಖಕರ ಕನ್ನಡ ಕೀಳರಿಮೆಯನ್ನು ಕಿತ್ತು ಹಾಕಲು ಅನಕೃ ಬೇಕಾಗಿಲ್ಲ ...

ಕನ್ನಡ ರಾಜ್ಯೋತ್ಸವ ಬಂದಾಗೆಲ್ಲಾ ಒಂದು ರೀತಿಯ ಲೇಖನ ನಮಗೆ ಕಾಣಸಿಗುತ್ತದೆ, ಅದು ಎಷ್ಟೆ ವರುಷದ ಹಿಂದೆ ಬರೆದಿದ್ದರೂ ಅದನ್ನೇ ಪುನರಾವರ್ತನೆ ಮಾಡಿದರೂ
ಇಂದಿನ ಪರಿಸ್ಥಿತಿಗೆ ಅನ್ವಯ ಅನ್ನುವ ಹಾಗೆ ಬರೆದಿರುತ್ತಾರೆ. ಅದಕ್ಕೆ ಹೊರತಾಗಿಲ್ಲ ಇವತ್ತು (nov 1) ಪ್ರಜಾವಾಣಿಯಲ್ಲಿ ಬಂದಿರುವ ಸುಧಾ ಹೆಗಡೆ ಅವರ ಲೇಖನ.
ಅವರಿಗೂ ಪಾಪ ಸಮಸ್ಯೆಗಳೇ ಕಾಣುತ್ತಿದೆ, ಒಟ್ಟಿನಲ್ಲಿ ನಮ್ಮನ್ನು ತುಳಿಯುತ್ತ ಇದ್ದಾರೆ, ನಮಗೆ ಎನು ಮಾಡುವದಕ್ಕೆ ಆಗುವದಿಲ್ಲ, ನಾವು ಹೀಗೆ ಅನ್ನುವ ಒಂದು ರೀತಿಯ ಪಲಾಯನ ವಾದವನ್ನು ಅವರು ಮಾರಾಟ ಮಾಡಿದ್ದಾರೆ. ಅವರೂ ಸಮಸ್ಯೆಗಳಿಗೆ ಮಾಡಬೇಕಾದ ಪರಿಹಾರ ಬಗ್ಗೆ ಮೌನ ವಹಿಸಿದ್ದಾರೆ ಮತ್ತು ಅವರಿಗೆ ಒಂದು ದಶಕಗಳಿಂದ ಕನ್ನಡ ಸಂಘಟನೆಗಳು ಮಾಡಿರುವ ಹೋರಾಟ ಕಣ್ಣಿಗೆ ಬೀಳದೆ ಇರುವುದು ಜಾಣಕುರುಡೇ ಸರಿ. ನಯಾ ಪೈಸೆ ಕೆಲಸ ಆಗಿಲ್ಲ, ಎಲ್ಲರೂ ಸುಮ್ಮನೆ ಇದ್ದಾರೆ ಅನ್ನುವ ಅವರ ವಾದವನ್ನು ಕೊಂಡುಕೊಳ್ಳಲು ಆಗುವದಿಲ್ಲ.

ಇದಕ್ಕೆ ಇವರು ಕೊಡುವ ಒಂದು ಉದಾಹರಣೆ ನಿಜಕ್ಕೂ ಹಾಸ್ಯಸ್ಪದವಾಗಿದೆ, ಒಂದು ಕಿರಾಣಿ ಅಂಗಡಿಗೆ ಹೋಗಿ ಗೋದಿಹಿಟ್ಟು ಕೇಳಿದಕ್ಕೆ ಆ ಹುಡುಗ ಕಕ್ಕಾಬಿಕ್ಕೆ ಆಗಿ ನೋಡಿದನಂತೆ, ಕನ್ನಡ ಮಾತನಾಡಿದಕ್ಕೆ ಇವರನ್ನು ಪೆದ್ದು ತರ ನೋಡಿದನಂತೆ, ಇದರಿಂದ ಕನ್ನಡಿಗರಿಗೆ ಅವಮಾನ ಆಗಿ
ಮುಂದೆ ಅವನು ಅಟ್ಟಾ ಅನ್ನುತ್ತಾನಂತೆ. ಇದು ಇವರ ಕೀಳರಿಮೆಯನ್ನು ತೋರಿಸುತ್ತದೆ. ಅದರಲ್ಲೂ ಗ್ರಾಹಕ ಸೇವೆಯಲ್ಲಿ ಕನ್ನಡ ಸರಿಯಾಗಿ ಅನುಷ್ಥಾನ ಆಗಬೇಕಾಗಿರುವು ಜನ ಸಾಮನ್ಯರಲ್ಲಿ ಆಗುವ ಜಾಗೃತಿಯಿಂದ. ಕನ್ನಡದಲ್ಲಿ ಕೇಳಿದೆ ಅಂತ ಪೆದ್ದು ಆಗಿ ನೋಡಿದ ಅನ್ನುವ ಕೀಳರಿಮೆಯಿಂದ ಅಲ್ಲ. ಇದಕ್ಕೆ ಮ.ರಾಮಮೂರ್ತಿ ಇಲ್ಲಾ ಅನಕೃ ಅವರ ಹೋರಾಟ ಬೇಕಿಲ್ಲ, ಕೀಳರಿಮೆಯನ್ನು
ತೆಗೆಯಲು ಲೇಖಕರು ಪ್ರಯತ್ನ ಪಟ್ಟರೆ ಸಾಕು.