Tuesday, December 30, 2008

ಉಪಚುನಾವಣೆಯ ಫಲಿತಾಂಶ-2008

ಚುನಾವಣೆಯ ಫಲಿತಾಂಶ ಆಚೆ ಬಂದಿದೆ, 

ಕಾರವಾರ ಬಿಟ್ಟರೆ ನಾನು ಅಂದುಕೊಂಡ ಹಾಗೇಯೆ ಫಲಿತಾಂಶ ಬಂದಿದೆ. ಕಾರವಾರದಲ್ಲಿ ಕಾಂಗ್ರೆಸ್ ಗೆಲ್ಲಬಹುದಿತ್ತು,ಆದರೆ ಅದನ್ನು ಹಾಳಿ ಮಾಡಿಕೊಂಡಿದೆ. ಕೊನೆಯ ಕ್ಷಣದಲ್ಲಿ ಅಮ್ಮ-ಮಗ ಒಂದಾಗಿದ್ದು ಬಹಳ ಸಹಾಯ ಮಾಡಿದೆ. ಆದರೆ ತುರುವೆಕೆರೆ ಮಾತ್ರ ಅಚ್ಚರಿ ತಂದಿದೆ, ಕಾಂಗ್ರೆಸ್,ಜೆಡಿಎಸ್ ಮಾಡಿದ್ದ ಅಪಪ್ರಚಾರದಲ್ಲಿ ಸ್ವತ: ಜಗ್ಗೇಶ್ ಕೂಡ ಮತ್ತೆ ಅಲ್ಲಿ ನಿಲ್ಲಲ್ಲು ಬಯಸುತ್ತ ಇರಲಿಲ್ಲ. ಎಲ್ಲೊ ಒಂದು ಕಡೆ ಲಕ್ಷ್ಜೀನಾರಯಣರನ್ನು ಬಲಿ ಕೊಡ್ತಾ ಇದ್ದಾರೆ ಅನಿಸಿದ್ದು ಸಹ ನಿಜಾ. 

ಗೆದ್ದೆ ಬಿಟ್ಟಿದ್ದೀವಿ ಅಂತ ಜಗ್ಗೇಶ್ ಮೆರೆಯುತ್ತ ಇದ್ದರೂ, ಸತ್ಯಕ್ಕೆ ಗೆಲುವು ಎಂದರು, ಆದರೆ ಕೊನೆಗೆ ಗೆದ್ದಿದ್ದು ಅಲ್ಲಿ ಜೆಡಿಎಸ್.ಆ ಅಚ್ಚರಿಯನ್ನು
ಪಾಪ ಲಕ್ಷೀನಾರಯಣ ಎದೆ ಒಡೆದುಕೊಂಡಿದ್ದಾರೆ. ಈ ಮಾಧ್ಯಮಗಳು ಕೂಡ ಗೆದ್ದೆ ಬಿಟ್ಟಿದ್ದೀರ ಅಂತ ಸಂದರ್ಶನ ಮಾಡಿ,ಅದರಲ್ಲಿ ಅವರು ಎಲ್ಲರಿಗೂ  ಥ್ಯಾಂಕ್ಸ ಹೇಳಿದ್ದು ಆಗಿತ್ತು,ಆದರೆ ವಿಧಿಯ ಬರಹವೇ ಬೇರೆ.


ಮುಂದೆ ಎನಾಗಬಹುದು ??

* ಬಿಜೆಪಿಯನ್ನು ಇನ್ನು ಹಿಡಿಯುವರು ಇರುವದಿಲ್ಲ,ಆಡಿದ್ದೆ ಆಟ.
* ಪಕ್ಶೇತರರಿಗೆ ಸ್ವಲ್ಪ ಬಿಸಿ ತಲುಗಬಹುದು. ಒಂದಿಬ್ಬರ ತಲೆದಂಡ ಆಗಬಹುದು.
* ಕಾಂಗ್ರೆಸ್ನಲ್ಲಿ  ದೊಡ್ಡ ಮಟ್ಟಿಗೆ ಸರ್ಜರಿ ಆಗಬಹುದು, ಲೋಕಸಭೆ ಚುನಾವಣೆಗೆ ಹೀಗೆ ಹೋದರೆ ಗೋತಾ..
* ಜೆಡಿಎಸ್ ಆರಕ್ಕೆ ಎರುವದಿಲ್ಲ, ಮೂರಕ್ಕೆ ಇರುವದಿಲ್ಲ.
* ಸಿದ್ದುಗೆ ಗುದ್ದುಕೊಟ್ಟು ಆಚೆ ಹಾಕಬಹುದು, ಹೊಸ ಪಕ್ಷ ಮಾಡಬಹುದು ಇಲ್ಲ,ಬಿಜೆಪಿ ಸೇರಬಹುದು.