Thursday, October 23, 2008

ಮಾಹಿತಿ ಕಳವು ಯಾರಿಂದ ??

ವ್ಯ್ಪಾಪಾರದಲ್ಲಿ ಪ್ರತಿಯೊಂದು ಸಂಸ್ಥೆಗೂ ಇಲ್ಲ ಜನರಿಗು ಎದುರಾಗುವ ದೊಡ್ಡ ಸವಾಲು ಎಂದರೆ ಮಾಹಿತಿ ಸುರಕ್ಷಣೆ. ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ, ಅದನ್ನು ಸುರಕ್ಶಿತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚು ಅಪಾಯ ಆಗುವುದು, ಮಾಹಿತಿಗಳು ಇತರರ ಪಾಲಾಗುವುದು ಬೇರೆ ಯಾವ ರೀತಿಯಿಂದಲೂ ಅಲ್ಲ. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದ. ಮಜಾ ಎನೆಪ್ಪಾ ಅಂದರೆ ಹ್ಯಾಕರಗಳಿಗಿಂತ ಹೆಚ್ಚು ಮಾಹಿತಿ ಕಳವು ಆಗುವುದು ಒಳಗಡೆ ಇರುವ ಜೇಡಗಳಿಂದ.



ಪ್ರತಿಯೊಂದು ಸಂಸ್ಥೆಗಳಲ್ಲೂ ಆಯಾ ಉದ್ಯೋಗಿಗಳನ್ನು ನಂಬಿಕೆಗೆ ತೆಗೆದುಕೊಂಡು, ಎನ್.ಡಿ.ಎ (non disclosure agreement) ಸಹಿ ಹಾಕಿಸಿಕೊಂಡಿರುತ್ತಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಿ.ಬಿ ಮಾಹಿತಿಗಳನ್ನು ಒಂದು ಪೆನ್ ಡ್ರೈವ್ ನಲ್ಲಿ ಕೊಂಡ್ಯಬಹುದು
ಅದನ್ನು ಯಾರು ಪರಿಕ್ಷಿಸುವದಿಲ್ಲ. ಅಷ್ಜು ಯಾಕೆ ಮೊಬೈಲನಲ್ಲಿ ಕೂಡ ಮಾಹಿತಿಯನ್ನು ತೆಗೆದುಕೊಂಡಬಹುದು.
ಅದಕ್ಕೆ ಕಾರಣ ಆಯಾ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮ ಇಲ್ಲದೇ ಇರುವುದು.

ಹುಡುಗಾಟದ ಹುಡುಗಿಯ ಬ್ಲಾಗ್ ಮತ್ತು ಹುಡುಗಾಟ..


ರೇಡಿಯೋ ಮಿರ್ಚಿಯಲ್ಲಿ ಹುಡುಗಾಟದ ಹುಡುಗಿ ವರ್ಷ ತಮ್ಮ ಬ್ಲಾಗಿನಲ್ಲಿ ರಾಜ್ ಠಾಕ್ರೆ ಬಂಧನ ಮತ್ತು ಅದರ ಪ್ರಸ್ತುತತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಓದಿ ಖುಶಿಯಾಯಿತು.

ರಾಜ್ ಮಾಡುತ್ತಿರುವುದು ಇವತ್ತು ಪ್ರತಿರಾಜ್ಯದಲ್ಲಿ ಆಗಬೇಕಾಗಿದೆ. ಯಾವಾಗ ನಮ್ಮ ಅನ್ನವನ್ನು ಬೇರೆಯವರು ಕಿತ್ತುಕೊಳ್ಳುತ್ತಾರೆ ಆಗ ಕದನ, ಹೋರಾಟ ಅನಿವಾರ್ಯ. ನಾವೆಲ್ಲರೂ ಭಾರತೀಯರು, ಅವರು ತೆಗೆದುಕೊಂಡರೆ ಎನು ಅವರು ನಮ್ಮವರಲ್ಲವೇ ಅನ್ನೋ ಬುದ್ಧಿಜೀವಿಗಳು ತಮ್ಮ ಆಸ್ತಿಯನ್ನು ಬಡವರಿಗೆ ಬರೆದುಕೊಡುತ್ತಾರ ??. ಆ ಬಡವರು ಭಾರತೀಯರೆ ತಾನೆ, ಎಲ್ಲಾ ಭಾರತೀಯರು ಅಣ್ಣ ತಮ್ಮಂದಿರೇ ಅಲ್ಲವೇ ?.

ಅಂದ ಹಾಗೆ ಹುಡುಗಾಟದ ಹುಡುಗಿ ವರ್ಶ ತಮ್ಮ ಪರಿಚಯದಲ್ಲಿ ಹುಡುಗಾಟಕ್ಕೆ ಚಿಕ್ಕವೀರ ರಾಜೇಂದ್ರ ಪುಸ್ತಕವನ್ನು ದರಾ ಬೇಂದ್ರೆ ಬರೆದಿದ್ದು ಅಂತ ಹಾಕಿದ್ದಾರೆ. ಇದು ಹುಡುಗಾಟ ಅಂತ ಭಾವಿಸೋಣ.