Monday, October 31, 2011

ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳು

ಒಂದು ವರುಷದ ಕೆಲ್ಸಗಳನ್ನು ಮೆಲುಕು ಹಾಕಿದರೆ ಮತ್ತು ಮುಂದಿನ ವರುಶಕ್ಕೆ ಮಾಡಬೇಕಾದ ಕೆಲ್ಸಗಳನ್ನು ನೆನಸಿಕೊಂಡರೆ ಕೆಳಗಂಡ ವಿಶಯಗಳು ಅನಿಸುತ್ತದೆ.

೧. ಗ್ರಾಹಕ ಸೇವೆಯಲ್ಲಿ ಎಲ್ಲೇ ಹೋದರು ಕನ್ನಡ ಕೇಳಬೇಕು. ಕೊಡದಿದ್ದರೆ ಜಾಗೃತ ಗ್ರಾಹಕರಿಗಗೆ ಒಂದು ಮಿಂಚೆ ಕಳಿಸಿ
ಪ್ರಕರಣ ಮತ್ತು ಯಾರಿಗೆ ಹಕ್ಕೊತ್ತಾಯ ಮಾಡಬೇಕೆಂದು ಕೇಳಬೇಕು.

ಇವತ್ತಿನ ರಾಜ್ಯೋತ್ಸವ ಸಂದೇಶದಲ್ಲಿ ಎಲ್ಲಾ ಕನ್ನಡ ಅನ್ನದ ಭಾಶೆ ಅಗಬೇಕು ಎಂದು ಹೇಳುವವರೇ,,, ಅದರೆ ಯಾರು ಗ್ರಾಹಕ ಸೇವೆಯ ಆಯಾಮ ಮತ್ತು ಅದರಿಂದ ಕನ್ನಡ ಅನ್ನದ ಭಾಷೆ ಆಗುವ ಒಂದು ಪರಿ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸ. ಕನ್ನಡದಲ್ಲಿ ಸೇವೆ ಕೇಳಿದಾಗ, ಕನ್ನಡ ಬರುವರನ್ನು ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೆ , ಉದ್ಯೋಗಕ್ಕೆ ಕನ್ನಡವೂ ಒಂದು ಮಾನದಂಡ ಆಗುತ್ತದೆ. ಬ್ರಿಟಿಷ್ ಎರವೇಸನಲ್ಲಿ ಕನ್ನಡದಲ್ಲಿ ಘೋಷಣೆ ಮಾಡುವ ಗಗನಸಖಿ ಹೇಳಿದ್ದು ನನಗೆ ಕನ್ನಡ ಬರುತ್ತದೆ ಎಂಬುವದಕ್ಕೆ ಈ ಕೆಲಸ ಸಿಕ್ಕಿದೆ ಎಂದು.

೨. ಕನ್ನಡ ವಿಶಯದ ಯಾವುದೇ ಹೊಸ ವಿಷಯಕ್ಕೆ ನಾವು ಮನವನ್ನು ಮುಕ್ತವಾಗಿ ತೆರೆದಿಟ್ಟುಕೊಳ್ಲಬೇಕು. ಹಿಂದಿನ ಕಾಲದ ಮಡಿವಂತಿಕೆ ಮತ್ತು ಹೀಗೆ ಇರಬೇಕೆಂಬ ಒಭಿರಾಯ ಕಾಲದ ನಿಯಮಗಳನ್ನು ಕಾಲಕ್ಕೆ ತಕ್ಕ ಹಾಗೆ ನವೀಕರಣಗೊಳಿಸಬೇಕು.

೩. ಕನ್ನಡಿಗರ ಮನರಂಜನೆ ಕನ್ನಡದಲ್ಲೇ ಆಗಬೇಕು, ಎಲ್ಲಾ ರೀತಿ ಅದು ಮಕ್ಕಳ ಡೋರಾ ಆಗಿರಬಹುದು , ಟಾಪ್ ಶಾಟ್ಸ ಇಲ್ಲಾ ಹೌ ಐ ಮೆಟ್ ಯುವರ್ ಮದರ್ ಸೀರಿಯಲ್ ಇರಬಹುದು, ೨೦೧೨, ಅವತಾರ್ ಚಿತ್ರಗಳು ಇರಬಹುದು. ಇವು ಕನ್ನಡಲ್ಲೇ ಸಿಗಬೇಕು.
ಇದು ಕನ್ನಡ ಗ್ರಾಹಕ ಹಕ್ಕೊತ್ತಾಯ.

೪. ಪರಭಾಷ ಹೇರಿಕೆಯನ್ನು ಹಿಮ್ಮೆಡಬೇಕು. ಅದನ್ನು ಪರಭಾಷ ದ್ವೇಷದಿಂದ ಅಲ್ಲ, ನಮ್ಮ ತನವನ್ನು ಉಳಿಸಿಕೊಳ್ಳುವ ಮನಸ್ಸಿನಿಂದ. ನಮ್ಮ ಭಾಷೆಯನ್ನು ಪ್ರೀತಿಸುತ್ತಿನಿ ಎಂದರೆ ಇತರ ಭಾಷೆಯನ್ನು ದ್ವೇಶಿಸುತ್ತಿನಿ ಎಂದು ಅಲ್ಲ ಅಲ್ವಾ ?.

೫. ಕನ್ನಡ ಎಂದರೆ ಕೇವಲ ಸಾಹಿತ್ಯವಲ್ಲ, ಅದು ಜೀವನಕ್ಕಿಂತ ದೊಡ್ಡದು, ಅನೇಕ ಆಯಮಗಳು ಇರುತ್ತದೆ. ಆದರೆ ಮೊದಲಿಂದ ನಾವು ಕನ್ನಡ ಅಂದರೆ ಸಾಹಿತ್ಯ, ಕನ್ನಡ ಗರಿಮೆ ಎನು ಎಂದರೆ ಇಷ್ಟು ಜ್ಞಾನಪೀಠ, ಇಷ್ತು ಪಂಪ ಪ್ರಶಸ್ತಿ, ಇಷ್ತು ಸರಸ್ವತಿ ಸಮ್ಮಾನ್ ಎಂದು ಒಂದಡೆ ಹೇಳಿಕೊಂಡು , ಕನ್ನಡಿಗರು ಎಂದರೆ ೧೦-೧೫ ಕವಿ ಹೆಸರನ್ನು ಹೇಳಿ ಮುಗಿಸುತ್ತೆವೆ. ಇದನ್ನು ಮೊದಲು ಬಿಡಬೇಕು.

೬. ಹೊಸ ಹೊಸ ಅವಿಶ್ಕಾರದಲ್ಲಿ ಹೊಸ ಹೊಸ ರೀತಿಯಲ್ಲಿ ಅಂತರ್ಜಾಲವನ್ನು ನೊಡುತ್ತ ಇದ್ದೆವೆ ಎಲ್ಲಾಡೆ ಕನ್ನಡ ಭಾಷೆಯಲ್ಲಿ ( ಕನ್ನಡ ಲಿಪಿಯೇ ಆಗಬೇಕಾಗಿಲ್ಲ) ವ್ಯವಹರಿಸುವ ಹಾಗೆ ಆಗಬೇಕು.

೭. ವಿಕ್ಷನರಿ ಇಂತಹ ಕಡೆ ಕನ್ನಡವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು. ಇದಕ್ಕೆ ಬೇಕಾದ ಬಾಟ್ ಮತ್ತು ಅಟೋಮೇಶನ್ ಕಡೆ ಹೆಚ್ಚು ಜನರನ್ನು ಸೆಳೆಯುವ ಹಾಗೆ ಮಾಡವುದು.

೮. ಹೆಚ್ಚು ಹೆಚ್ಚು ಕನ್ನಡ ಪರಿಸರವನ್ನು ಪಸರಿಸುವುದು, ನಮ್ಮ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವ ಮಾಡುವ ಹಾಗೆ, ತಿಂಗಳಲ್ಲಿ
ಒಮ್ಮೆ ಸೇರುವ ಹಾಗೆ ಚಿಕ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೯. ಕನ್ನಡಿಗರ ಓಟಬ್ಯಾಂಕ್ ಆಗಬೇಕು, ನಾವು ಜಾತಿ, ಧರ್ಮದಿಂದ ನೋಡದೇ ಕನ್ನಡದಲ್ಲಿ ರಾಜಕೀಯ ಮಾಡದ ಎಲ್ಲಾ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವ ಹಾಗೆ ಆಗಬೇಕು.

೧೦. ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ನಾವು ಮುಂದಾಗಬೇಕು.

ಇಲ್ಲಿವರೆಗೂ ನಾವು ಹೆಕ್ಕಿರುವುದು ಒಂದು ಮುತ್ತಾದರೆ ಮಿಕ್ಕಿದೆ ಸಾಗರ ಎಂಬುದನ್ನು ಮರೆಯುವುದು ಬೇಡ.