Monday, February 01, 2010

ಟೊಳ್ಳು ರಾಷ್ಟೀಯತೆ , ಕನಪ್ಯೂಸ್ಡ ಪ್ರಾದೇಶಿಕತೆ

ಮುಂಬಾಯಿನಲ್ಲಿ ಮಾತ್ರ ಬೇರೆಯವರು ಎನು ಕಿಸಿಬಾರದು, ಅದೇ ಬೇರೆ ನೆಲದಲ್ಲಿ ಮರಾಠಿ ಪುಂಡಾಟಿಕೆ ಮಾಡಬಹುದು
ಇಂತಹ ದ್ವಂದ್ವ ನೀತಿಯನ್ನು ಮಾಡುತ್ತಿರುವ ಮರಾಠಿ ರಾಜಕೀಯ ಪಕ್ಷಗಳು ಮೊದಲು ಜಾಗೃತಿ ತಂದುಕೊಳ್ಳಬೇಕು.
ಹೇಗೆ ತಮ್ಮತನ ಆವ್ರಿಗೆ ದೊಡ್ದದೋ ಹಾಗೆ ಬೇರೆಯವರಿಗು ಅದು ದೊಡ್ಡದು ಅಂತ ಮನಗಾಣಬೇಕು. ಸ್ಥಳೀಯರಿಗೆ ಉದ್ಯೋಗ,
ಮುಖ್ಯವಾಹಿನಿಗೆ ಎಲ್ಲರೂ ಸೇರಬೇಕು ಅನ್ನೊ ಅವರ ನೀತಿ ಒಪ್ಪೋಣ, ಆದರೆ ತಮ್ಮ ವಿಚಾರಧಾರೆಯನ್ನು ತಮ್ಮ ನೆಲಕ್ಕೆ ಸ್ತೀಮಿತ ಗೊಳಿಸಿದರೆ ಉತ್ತಮ. ಅದನ್ನು ಬಿಟ್ಟು ಬೇರೆ ನೆಲದಲ್ಲಿ ತಮ್ಮ ವಾದವಿಟ್ಟರೆ ಅದು ಪುಂಡಾಟಿಕೆ ಅಲ್ಲದೆ ಬೇರೆನೂ ಅಲ್ಲ.

ಅಬು ಆಜ್ಮಿ ಮತ್ತು ಆರ್ ಆರ್ ಪಾಟೀಲಗೆ ಎನಿದೆ ವ್ಯತ್ಯಾಸ ??, ಇ ಪ್ರಶ್ನೆಗೆ ಶಿವಸೇನೆ ಹಿಡಿದು
ಕನ್ನಡಿಗರು ಕ್ರೂರಿಗಳು, ಪಾಕಿಸ್ತಾನಕ್ಕಿಂತ ಕೆಟ್ಟವರು , ಕೈ ಕತ್ತರಿಸಿ, ಕಾಲು ತೆಗೆಯಿರಿ, ಬೆಂಕಿ ಹಚ್ಚಿ ಇಂತಹ ಮಾತುಗಳನ್ನು
ನಮ್ಮ ನೆಲಕ್ಕೆ ಬಂದು ಆಡಿ ಎನು ಆಗಿಲ್ಲದಂತೆ ಹೋಗುವ ಅಲ್ಲಿನ ಮಂತ್ರಿ ಮಹೋದಯರು ಈ ನಡುವೆ ಅಲ್ಲಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಹರಿಸಲು ಬೆಳಗಾವಿಯ ನೆಪ ಮಾಡಿದ್ದಾರೆ.

ನಮ್ಮ ಸರ್ಕಾರಕ್ಕೆ ಇದು ಪ್ರಚೋದಕ ಭಾಷಣ ಅನಿಸುವುದೇ ಇಲ್ಲ ... ಇದು ಪ್ರತಿ ವರುಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ತರಹ ಅಂತ ಸುಮ್ಮನಾಗಿದ್ದಾರೆ.



ನಮ್ಮ ನೆಲದಲ್ಲಿ ಕನ್ನಡಿಗರು ಗೆದ್ದು ಆಯ್ಕೆ ಆದರೆ ಅದು ಪುಂಡಾಟಿಕೆ , ದೌರ್ಜನ್ಯವಂತೆ.
ದಶಕಗಳಿಂದ ಎಂ.ಇ.ಎಸ್ ಅನ್ನುವರ ಕೈಗೆ ಸಿಕ್ಕ ಆ ಪ್ರದೇಶಗಳು ಎಷ್ಟು ಹಾಳಾಗಿವೆ ಅಂದರೆ ಹೇಳಲಾಗದು, ಇವರು ಹೇಳುತ್ತಿರುವ
ಮತ್ತು ಸೇರಲು ಬಯಸುತ್ತಿರುವ ಪ್ರದೇಶ ಎನು ಅಮೇರಿಕಾ ಅಲ್ಲ. ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿರುವ ಪ್ರದೇಶಕ್ಕೆ ನಮ್ಮನ್ನು ಸೇರಿಸಿ ನಾವು ಉದ್ದಾರ ಆಗುತ್ತೇವೆ ಅಂತ ತಾರಮಯ್ಯ ಕಥೆ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಅವರ ಆಳ್ವೆಕೆಯಲ್ಲಿ ಅವರು ಕನ್ನಡಿಗರ ಮೇಲೆ ಮಾಡಿದ ದೌರ್ಜನ್ಯಕ್ಕೆ ಲೆಕ್ಕ ಉಂಟೆ. ಇವತ್ತು ಅಧಿಕಾರ ಇಲ್ಲದೆ ಪಾಪರ್ ಆಗಿರುವ ಇವರು
ರಾಜಕೀಯ ಮಾಡುತ್ತ ಇದ್ದಾರೆ.

ನಮ್ಮ ಘನ ಸರ್ಕಾರಕ್ಕೆ ಮರಾಠಿಗರ ಮೇಲೆ ದೌರ್ಜನ್ಯ ಮಾಡಬೇಡಿ ಅಂತ ಪತ್ರ ಬರುತ್ತದೆ. ಆ ಪತ್ರದಲ್ಲಿ ಖಾನಪೂರ ಅನ್ನೋ ಊರು ಮಹರಾಷ್ತ್ರಕ್ಕೆ ಸೇರಿದೆ ಅಂತ ಹೇಳುತ್ತದೆ. ಇದೇನು ಗೂಗಲ್ ಇಲ್ಲ ಅಮೇರಿಕಾ
ಮಾಡಿದ ಪ್ರಮಾದ ಅಲ್ಲ. ಉಪರಾಷ್ಟ್ರಪತಿ ಕಚೇರಿಯಿಂದ ಬರುವ ಪತ್ರ. ಅದೇ ಅರುಣಾಚಲ ಪ್ರದೇಶದ ಒಂದು ಭಾಗ ಚೀನಗೆ ಸೇರಿದೆ ಅಂದ ವರದಿ ಮಾಡಿದರೆ ಇಲ್ಲಿ ನಮ್ಮ ಕನ್ನಡ ನೆಲದಲ್ಲಿ ಸರ್ಕಾರ ಹೇಳಿಕೆ ಕೊಡುತ್ತದೆ. ವಿದ್ಯಾರ್ಥಿ ಪರಿಷತ್ತು ರಸ್ತಾ ರೋಕೊ ಮಾಡುತ್ತದೆ. ಹಿಂದು ಬುದ್ದಿಜೀವಿಗಳು ಪುಂಖಾನುಪುಂಖವಾಗಿ ಬರೆಯುತ್ತಾರೆ. ಇದನ್ನು ತಪ್ಪು ಮಾಡಿದ ಅಮೇರಿಕಾ ಸಂಸ್ಥೆಗಳು ಮೂಸಿ ನೋಡುವದಿಲ್ಲ. ಆ ವಿಷ್ಯ ಅವರಿಗೂ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಯಾವಗ ನಮ್ಮ ನೆಲದ ಭಾಗ ಬೇರೆ ರಾಜ್ಯಕ್ಕೆ ಸೇರಿದೆ ಅಂದರೆ ಎಲ್ಲ ಗಪ್ ಚುಪ್,
ನೋ ಕಾಮೆಂಟ್ಸ. ಬೇಕಿದ್ದರೆ ಈ ಸೋಗಲಾಡಿ ರಾಷ್ತ್ರೀಯ ಜಾಗೃತಿ ದೈನಿಕಗಳು ಇದರಲ್ಲಿ ತಪ್ಪೇನಿದೆ ಎಲ್ಲಾ ಭಾರತದಲ್ಲಿ ಇದೇ ಅಲ್ವಾ ಅಂತ ಮಾತನಾಡುತ್ತಾರೆ.