Sunday, November 06, 2011

ವಲಸಿಗನ ೨ ಗುಣ ..

ಎರಡು ವಿಡಿಯೋ ನೋಡಿ , ವಲಸಿಗರ ಮನಸ್ಥಿತಿ ಎರಡರಲ್ಲಿ ವ್ಯಕ್ತವಾಗಿದೆ.

ಒಂದರಲ್ಲಿ ಮೆಟ್ರೋ ಕಾಯುವ ವಾಚ್ಮಾನ್ ತಾನು ಇಲ್ಲಿಗೆ ಬಂದಿರುವುದು ಸರಿ, ಇಲ್ಲಿನ ಬಾಷೆ ಕಲಿಯಬೇಕಾಗಿಲ್ಲ ಯಾಕೆಂದರೆ ಅದು ಚೆನ್ನಾಗಿಲ್ಲ ಎಂದು ಹೇಳುವ ಕೀಳು ಮನಸ್ಥಿತಿ ಕಾಣುತ್ತದೆ.


ಇನ್ನೊಂದರಲ್ಲಿ



ಇಲ್ಲಿಗೆ ಬಂದು ತನ್ನ ಬಾಳನ್ನು ಕಂಡುಕೊಂಡಿರುವ ವಲಸಿಗ ಹೇಳುವ ಮಾತಿದು.
The outsiders who come to Karnataka should have the sense of belonging to this state. They need to integrate with the state by sincerely making an attempt to learn Kannada.


ಇ ದೇಶ ಕಟ್ಟಿರುವುದೇ ಅನೇಕತೆಯಲ್ಲಿ ಏಕತೆ ಅನ್ನೋ ಮಂತ್ರ ಮೇಲೆ. ಜಗತ್ತಿನಲ್ಲಿ ಎಲ್ಲಿಗೆ ಹೋಗುತ್ತಿವಿ ಅಲ್ಲಿಯವರ ತರ ಬದುಕಬೇಕು ಎಂದು. ಆದರೆ ಇ global phenomena ಗೊತ್ತಿಲ್ಲದ ಬುದ್ದಿಹಿನರು, ಅವಿವೇಕಿಗಳು ಅನೇಕತೆಯನ್ನು ಒಡೆದು ಹಾಕಿ ಇ ದೇಶದ ಬುಡಕ್ಕೆ ಕೊಡಲಿ ಹಾಕುತ್ತ ಇರುವುದನ್ನು ನಾವು ಕಾಣುತ್ತ ಇದ್ದೇವೆ. ಅವರ ಕೆಟ್ಟ ಮನಸ್ಸುಗಳು ಬದಲಾಗಿ ೨ ನೆ ವಿಡಿಯೋದಲ್ಲಿ ತೋರಿಸಿರುವ ಹಾಗೆ ಬದಲಾದರೆ ನಮ್ಮ ದೇಶಕ್ಕೆ ನಿಜಕ್ಕೂ ಒಳಿತು.

Tuesday, November 01, 2011

ನಮ್ಮತನವನ್ನು ಬಿಟ್ಟುಕೊಡುವುದು ದೊಡ್ಡತನವಲ್ಲ ದಡ್ಡತನ



ಮೊನ್ನೆ ಉಡುಪಿ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ತಿಂಡಿ-ಊಟ ಮಾಡುವ ಆಸೆ ಆಯಿತು, ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ಪರಿಚಯವಾದ ವಿದೇಶದ ಮೊರೆನಾ-ಸರ್ಜಿಯೋ ದಂಪತಿಗಳ ಜೊತೆ ಕೂಡ ಊಟ, ಇಲ್ಲಿನ ಸಂಸ್ಕೃತಿ , ಇತಿಹಾಸದ ಬಗ್ಗೆ
ಮಾತುಕತೆಯಾಯಿತು. ಕರ್ನಾಟಕ ಮತ್ತು ಭಾರತದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡ ಆ ದಂಪತಿಗಳಿಗೆ
ನಮ್ಮ ದೇಶ ಯುರೋಪ್ ಮಾದರಿಯಲ್ಲಿ ಇದೆ ಎಂದು ತಿಳಿಸಿದಾಗ ಅವರು ಆಶ್ಚರ್ಯ ಪಟ್ಟಿದ್ದು ಉಂಟು. ದೇವರ ದರ್ಶನ
ಮುಗಿದ ನಂತರ ಒಟ್ಟಿಗೆ ನಾವು ಅಲ್ಲೇ ಹತ್ತಿರ ಇದ್ದ ವುಡಲ್ಯಾಡ್ಸ ಉಪಹಾರ ಗೃಹಕ್ಕೆ ಹೋದೆವು.

ನಾನು ದೋಸೆ ಹುಟ್ಟಿದ್ದು ಇಲ್ಲೇ, ಕರ್ನಾಟಕದ ಎಲ್ಲಾ ಕಡೆ ಉಡುಪಿ ಹೋಟೆಲ್ ಇರುವುದು, ಅದು ಇದು ಅಂತ ಹೇಳಿದ್ದೆ.
ಮ್ಯಾನೆಜರ್ ಬಂದು ಎನು ಬೇಕು ಎಂದಾಗ ಗೋಳಿ ಬಜ್ಜೆ, ಮಂಗಳೂರು ಬನ್ ಮತ್ತು ನೀರು ದೋಸೆ ಎಂದೆ. ಅದಕ್ಕೆ ಅವನು ಇಲ್ಲ ಸರ್ ನಮ್ಮಲ್ಲಿ ಇದು ಯಾವುದು ಸಿಗುವದಿಲ್ಲ, ದಯವಿಟ್ಟು ಮೆನು ನೋಡಿ ಎಂದ. ಅಲ್ಲಿ ನೋಡಿದರೆ ಬರೇ ಉತ್ತರ ಭಾರತದ ಖಾನವಳಿ ಮೆನು ಇದ್ದ ಹಾಗೆ ಇದೆ. ಆ ದಂಪತಿಗಳು ಇಲ್ಲಿ ಎನನ್ನು recommend ಮಾಡುತ್ತೀರಾ ಎಂದು ಕೇಳಿದರೆ ಮತ್ತೆ ಉತ್ತರ ಭಾರತದ ತಿಂಡಿ ತಿನಿಸುಗಳೇ ಕೇಳಿ ಬಂದವು. ನಿಜಕ್ಕೂ ಇದು ಬಹಳ ಆಶ್ಚರ್ಯವಾಯಿತು. ಇದೇ ಕಥೆ ಅದೇ ಊರಿನಲ್ಲಿ ಇರುವ ಡಯಾನದು ಕೂಡ.
ಇವೆರೆಡು ಉತ್ತಮ ಹೋಟೆಲುಗಳು, ಅಲ್ಲಿ ಕುಳಿತುಕೊಳ್ಳಲು ಮತ್ತು ಒಳವಾತವರಣ ಚೆನ್ನಾಗಿದೆ. ಆದರೆ ಉಡುಪಿಯ ಪ್ರಸಿದ್ಧ ಖಾದ್ಯಗಳನ್ನು ಅಲ್ಲಿ ಮಾರುವುದು ಅವರಿಗೆ ಕೀಳರಿಮೆ ಅನಿಸಿದೆ ಯಾಕೋ.

ಆ ಊರಿಗೆ ಬರುವುದು ಹೆಚ್ಚಾಗಿ ಪ್ರವಾಸಿಗರು, ಅವರಿಗೆ ಅವರ ಊರಿನಲ್ಲಿ ಸಿಗದ ನಮ್ಮ ಖಾದ್ಯಗಳನ್ನು ಉಣಬಡಿಸುವುದು ಬಿಟ್ಟು
ನಾನು, ಪಾನು ಎಂದು ಕೊಂಡು ಉತ್ತರ ಭಾರತದ ಖಾದ್ಯಗಳನ್ನೇ ನಮ್ಮ ಖಾದ್ಯಗಳು ಅನ್ನುವ ಹಾಗೆ ಉಣಬಡಿಸಿದರೆ ನಷ್ಟ ಅಲ್ಲಿನ ಜನಕ್ಕೆ. ಇದು ನನಗೆ ಕೀಳರಿಮೆಯ ಪ್ರತೀಕ ಅನಿಸಿತು, ಅಲ್ಲಿನ ಸ್ಪೆಷಲ್ ಖಾದ್ಯಗಳನ್ನು hype ಮಾಡಿ ಗ್ರಾಹಕರಿಗೆ ಕೊಡುವ ಬದಲು ಎಂಜಲನ್ನು ಮಾರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಖ್ಯವಾಗಿ ಅದನ್ನು ತಿನ್ನಬೇಕೆಂಬ ಬಯಕೆಯಲ್ಲಿ ಇದ್ದ ಸರ್ಜಿಯೋ-ಮೊರೆನಾ ದಂಪತಿಗಳಿಗೆ ಆಕಾಶದಷ್ಟು ಆಸೆ ತೋರಿಸಿ ನಿರಾಸೆ ಮೂಡಿಸಿದ್ದು ಪಿಚ್ಚೆನಿಸಿತು.