Thursday, February 22, 2007

ಕೃತ್ರಿಮ ಬುದ್ದಿವಂತಿಕೆಯ ಕೇಂದ್ರ ಬೆಂಗಳೂರು....

ನಿಮಗೆ ಗೊತ್ತೆ ನಮ್ಮ ಬೆಂಗಳೂರಿನಲ್ಲಿ ಕೃತ್ರಿಮ ಬುದ್ದಿವಂತಿಕೆಯ ಒಂದು ಕೇಂದ್ರವಿದೆ,ಅದೂ ಕೂಡ ರಾಜಭವನಕ್ಕೆ
ಬಹಳ ಹತ್ತಿರವಿದೆ. ಇದನ್ನು ದಾವೂದ್ ಇಲ್ಲಾ ಮುತ್ತಪ್ಪ ರೈ ನಡೆಸುತ್ತಿಲ್ಲ, ನಮ್ಮ ಕೇಂದ್ರ ಸರ್ಕಾರದ ಒಂದು ಅಂಗ ಇದು.
ಇದನ್ನು Center for Artificial Intelligence & Robotics (CAIR), Bangalore; ಎಂದು ಕರೆಯುತ್ತಾರೆ.
ಇದಕ್ಕೆ ಯಾವ ಪುಣ್ಯಾತ್ಮ ಕನ್ನಡದಲ್ಲಿ ಹೆಸರು ಇಟ್ಟರೊ ದೇವರಿಗೆ ಗೊತ್ತು. ಕೃತಕ ಎನ್ನುವ ಬದಲು ಕೃತ್ರಿಮ ಎಂದು ಅನರ್ಥ ಮಾಡಿದ್ದಾರೆ ಪುಣ್ಯಾತ್ಮರು.
ಇದಕ್ಕೆ ಸಮೀಪಕ್ಕೆ ವಾರಕ್ಕೆ ಒಮ್ಮೆ ಧರಣಿ ಮಾಡುವ ನಮ್ಮ ಉಟ್ಟು ಹೋರಾಟಗಾರ ವಾಟಳ್ ಇಲ್ಲಾ ಮಾತಿಗೆ ಮುಂಚೆ ಇದು ಸರಿ ಇಲ್ಲಾ,ಅದು ಸರಿ ಇಲ್ಲಾ ಅಂತ ಮಾತಡುವ ಡಾ.ಯು.ಆರ್.ಎ ಗೆ ಕೂಡ ಇದು ಕಾಣದೇ ಇರುವುದು ಜಾಣ ಕುರುಡೇ ಸರಿ.

1 comment:

ಭಾಸ್ಕರ ಮೈಸೂರು said...

Praveen....
Sariyagi barediddiri.URA jothe innobbaru jnanapeeti? Karnadaranne bittu bitiddira? Byrappanavarantha mahaan sahithiyanne vimarshisi thamma jnana bhandaaravannu pradarishisiruba mahanu bhavaru.. idella nOdakke purusottu illa annisutte