Monday, September 15, 2008

ಅಂತೂ ಇಂತೂ ಹಬ್ಬ ಮುಗೀತು

ಮುಂದುವರೆಯುತ್ತ ..
ಸ್ಯಾಂಕಿ ಟ್ಯಾಂಕ್ ಇಲ್ಲಾ ಅಲಸೂರು ಕಡೆಯಿಂದ ನೀವು ಹಾದು ಹೋಗುವದಾದರೆ ಒಳ್ಳೆ ಮನರಂಜನೆ ಸಿಗುತ್ತದೆ ನಿಮಗೆ.  ಗಣೇಶನನ್ನು ಬಾವಿಗೆ ತಳ್ಳೋ
ಆನಂದವನ್ನು ಬಿತ್ತರಿಸುವ ಮುಖಗಳು ಮತ್ತು ಅವರ ಪುಂಡಾಟ ನೋಡುವದಕ್ಕೆ ಎರಡು ಕಣ್ಣು ಸಾಲದು. ಹೀಗೆ ದೇವರನ್ನು ಕರೆದುಕೊಂಡು ಹೋಗುವ ಜನ
ಸ್ವಲ್ಪ ವಿನಯ ಕಲಿತರೆ ಇನ್ನೂ ಚೆನ್ನಾಗಿರುತ್ತದೆ, ಅದ್ರೆ ಈ ಪುಂಡು ಪೋಕರಿ ಹುಡುಗರಿಗೆ ಅವೆಲ್ಲಾ ಎನು ಬೇಕಿದೆ ?.
ದಾರಿ ಮಧ್ಯೆ ಎಣ್ಣೆ ಅಂಗಡಿ ಕಂಡರೆ ಒಂದು ರೌಂಡ್ ಹಾಕಿಕೊಂಡು ಬಂದು ಫುಲ್ ಮೀಟರಿಂದ ಆಹಾ ಎಷ್ಟು ಚೆನ್ನಾಗಿ ಡ್ಯಾನ್ಸ ಮಾಡ್ತಾರೆ ಗೊತ್ತ. ದಾರಿ ಮಧ್ಯೆ ಹೋಗೊವಾಗ ಅದು ಸಿಗ್ನಲನಲ್ಲಿ ಸುತ್ತ ಮುತ್ತ ಹುಡುಗಿಯರು ಇಲ್ಲಾ ಹೆಂಗಸರು ಕಂಡರೆ ಸಾಕು ಆ ಗಣೇಶನ ಹೂವುಗಳನ್ನೇ ಎರಚುತ್ತಾರೆ. ಬನ್ನಿ ಡ್ಯಾನ್ಸ ಮಾಡೋಣ ಅಂತ ಅಹ್ವಾನಿಸುತ್ತಾರೆ. ಇನ್ನ ಕೆಲವರು ಮೈಕ್ ಜೀವನದಲ್ಲಿ ಮೊದಲ ಸಾರಿ ಹಿಡಿದ ಹಾಗೆ, ಗಣೇಶನಿಗೆ ಜೈ, ಶಿವನಿಗೆ ಜೈ
ಕನ್ನಡಾಂಬೆಗೆ ಜೈ , ಡಾ.ರಾಜ್ ಕುಮಾರಗೆ ಜೈ ಅಂತ ತಮಗೆ ಹೊಳೆಯುವ ಹೆಸರನಲ್ಲಾ ಕರೆಯುತ್ತಾರೆ. ಇವರು ಮೈಕಿನಲ್ಲಿ ಮಾತಡಬೇಕು ಎಂದು ಮಾತನಾಡುತ್ತಾರೆ, ದಾರಿ ಮಧ್ಯೆ ಅದೇ ಮೈಕಿನಲ್ಲಿ ನಿಮಗೆ " ಲೊ..ಮಗ ಮುಚ್ಕೊಂಡು ಈ ಕಡೆ ಬಾ", "ನಿನ್..ಅ** ಆ ಕಡೆ ಹೋಗೊ", "ಲ* ಬಾ*" ಅನ್ನೊ ಸಂಸ್ಕ್ರುತದ ಶಬ್ದಗಳು ಬೀಳುತ್ತಲೆ ಇರುತ್ತವೆ. ಇನ್ನೂ ವಿಸರ್ಜನೆ ಸಮಯದಲ್ಲಿ ಇವರು "ಎಲ್ಲಾ ಒಟ್ಟಿಗೆ ವಿಸರ್ಜನೆ ಮಾಡಿ","ನಾವು ಹೇಳೊ ತನಕ ಯಾರು ಅವರದು ವಿಸರ್ಜನೆ ಮಾಡಬಾರದು". "ಒಬ್ಬಬರೆ ನೀರು ಒಳಗಡೆ ಮಾಡಬೇಕು",
ಇವರು ಎಲ್ಲಿದ್ದರೂ ..ಬರಬೇಕು ಅಂತ ವಿನಂತಿಗಳ ಕೇಳೋಕ್ಕೆ ಎರಡು ಕಿವಿ ಸಾಲದು. ಪುಣ್ಯ ಹಬ್ಬ ಮುಗಿತು ಅಂತ ಖುಷಿ.