Saturday, October 24, 2009

ಲೋಕದಲ್ಲಿ ಯಾರು ಸಾಯುವದಿಲ್ಲ

ನೆನಪುಗಳು ಎಂದೂ ಸಾಯುವದಿಲ್ಲ, ನಮ್ಮ ಹಿರಿಯರ ನೆನಪು, ಕಂಡ ವ್ಯಕ್ತಿಗಳ ಮಾತು, ನಡುವಳಿಕೆ ಎಲ್ಲವೂ ಹೀಗೆ. ಅವು ಸಾಯುವದಿಲ್ಲ. ನೋಡಿ ಆ ಬಾವಲಿಯಂತೆ ನೇತಾಡಿಕೊಂಡಿರುತ್ತದೆ. ಸಂಧರ್ಬ ನೋಡಿ ನಮ್ಮ ಮನಸ್ಸಿಗೆ ಕೊಂಬೆಗೆ ಹಾರಿಕೊಳ್ಳುತ್ತವೆ. ಲೋಕದಲ್ಲಿ ಯಾವುದಕ್ಕೂ ಸಾವಿಲ್ಲ. ರಾಲೋ,ಎಂ ಹಿರಿಯಣ್ಣ, ಡಾ.ರಾಧಾಕೃಷ್ನನ್, ಗೌರಜ್ಜಿ ಎಲ್ಲಾ ಹೀಗೆ ನನಗೆ ಅಂಟಿಕೊಂಡಿರುತ್ತಾರೆ. ಅರಿಸ್ಟಾಟಲ್, ವೃದ್ಧ ಲಿಯರ್ ಮಹರಾಜ ಇಂತ ಹಳಬರು ಕೂಡ ಹೀಗೆ ನಿರ್ಧಯಿಗಳಾಗಿ ನಮಗೆ ಅಂಟಿಕೊಳ್ಳುತ್ತಾರೆ. ಅದ್ದರಿಂದ ನನಗೆ ಅನಿಸೊತ್ತೆ ಲೋಕದಲ್ಲಿ ಯಾರು ಸಾಯುವದಿಲ್ಲ, ಇಲ್ಲೆ ನೇತಾಡುತ್ತಿತ್ತು ಯಾರಿಗಾದರೂ ಅಂಟಿಕೊಳ್ಳುತ್ತಾರೆ.


ಇದು ಶತಮಾನದ ಕನ್ನಡಿಗ ಎ ಎನ್ ಮೂರ್ತಿರಾಪ್ ಆರ ಮಿತ್ರರಿಗೆ ಹೇಳಿದ ಮಾತುಗಳು ಇವತ್ತು ನೇತಾಡುತ್ತಿತ್ತ ಬಾವಲಿ ತರ ಜ್ಞಾಪಕ ಬಂತು. ಎಷ್ಟು ನಿಜವಾದ ಮಾತುಗಳು ಇವು ,ಲೋಕದಲ್ಲಿ ಯಾರಿಗೂ ಸಾವಿಲ್ಲ ಎಲ್ಲೋ ಒಂದು ವಸ್ತು, ಅಣುವಿನಲ್ಲಿ ಅವರ ಛಾಯೆ ಇದ್ದೆ ಇರುತ್ತದೆ. ಆ ವಸ್ತು ನೋಡಿದಾಗ ಅವರ ಜ್ಞಾಪಕ ಚಕ್ಕನೆ ಆವರಿಸುತ್ತದೆ.

ನಾನು ಎಷ್ಟೋ ಸಾರಿ ಇದನ್ನು ಅಂದುಕೊಂಡಿದ್ದೇನೆ, ಎಷ್ಟೊ ಬಾರಿ ಕೆಲವರನ್ನು ಮರೆತಿದ್ದೇನೆ ಅಂತ ಭಾವಿಸಿದ್ದೇನೆ, ಅವರನ್ನು ನನ್ನ ಜೀವನದಲ್ಲಿ ಬಂದಿದ್ದರ ಅಂತ ಯೋಚಿಸಿದ್ದೇನೆ. ಯಾವುದು ಒಂದು ದಿನ, ಆ ಕ್ಷಣ ಅವರು ಜ್ಞಾಪಕಕ್ಕೆ ಬಂದೂ ಅಣಿಕಿಸುತ್ತ ಇರುತ್ತಾರೆ.
ಇನ್ನು ನಮ್ಮ ಜೀವನದಲ್ಲಿ ಆಪ್ತರ ಬಗ್ಗೆ ಎನು ಹೇಳೋದು ??. ಮೂರ್ತಿ ರಾಯರ ಮಾತು ಸರಿ ಅನಿಸುತ್ತಲೆ ಇರುತ್ತದೆ.