Monday, June 26, 2006

ರತ್ನನ್ ಪದಗೊಳ್ .....

ರತ್ನನ್ ಪದ ಓದಿದವರಿಗೆ ಗೊತ್ತಿರೊತ್ತೆ ಅದರ್ ಗಮತ್ತು, ೧೯೩೪ರಲ್ಲಿ ಜೆ.ಪಿ.ಆರ್ ತಮ್ಮ ಪದಗಳನ್ನು ಪುಸ್ತಕದಲ್ಲಿ ಆಕಿ ಆಚೆ ತಂದಿದ್ದು ಅಷ್ಟೇಯಾ ಆಮೇಲೆ ಆ ಪದ್ಯಗಳು ಜನರ ನಾಲಿಗೆ ಮೇಲೆ ಹೆಚ್ಚು ವಾಸಸಿದ್ದು, ಆ ಪುಸ್ತಕ ಬಿಚ್ಚುವ ಮುನ್ನ ನಿಮಗೆ ಮೊದಲ್ ಸಾಲು ಕಾಣುವುದು "ಯಾರು ಇದನ್ನು ಮೆಲ್ಲಗೆ ಮನಸ್ಸಿನಲ್ಲಿ ಓದಿಕೊಬಾರದು, ಜೋರಾಗಿ ಗಟ್ಟಿಯಾಗಿ ಕಿವಿ ಮೇಲೆ ಬೀಳುವ ಹಾಗೆ ಓದಬೇಕು,
ಆಗೆ ಮಾಡಿದರೆ ಮಾತ್ರ ಆರ್ಥ ಆಗುತ್ತದೆ ಅಂತ.
ಏನು sudden ಆಗಿ ರತ್ನನ್ ಪದ್ಯ ಗ್ನಾಪಕ ಬಂತು ಅಂದ್ರೆ, ಇತ್ತಿಚಿಗೆ ಲಾಂಗ್ ಲಾಜ ದರ್ಶನ್ ನಟಿಸಿರುವ ಸುಂಟರ ಗಾಳಿ ಚಿತ್ರದಲ್ಲಿ
ಒಂದು ಪದ್ಯ ಇದೆ,ಕೇಳುತ್ತ ಕೇಳುತ್ತ ಹಿಂದೆ ನಾನು ಓದಿದ ರತ್ನನ ಪದ್ಯ ಗ್ನಾಪಕ ಬಂತು.

ಹಾಡು:- ನಂಜಿಗೆ
ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು,
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಕುಗ್ತು
ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು,
ನಂಗೂ ನಿಂಗೂ ಯೆಂಗ್ ಆಗಲೋಯ್ತು ನಂಜು.
(
ನೀನು ನನ್ನ ಹಟ್ಟಿ(ಗುಡಿಸಲು) ಬೆಳಕಿದ್ದ ಹಾಗಿದ್ದೆ ನಂಜು
ಮಾಗಿಯಲ್ಲಿ ಹುಲ್ಲಿನ ಮೇಲೆ ಮಲಗಿದ್ದ ಹಾಗೆ ಮಂಜು,
ಮಾಗಿ ಕುಗ್ಗಿತು
ಬೇಸಿಗೆ ನುಗ್ಗಿತು
ನನಗೂ ನಿನಗೂ ಹೇಗೆ ಅಗಲಿಹೋಯಿತು ನಂಜು.
)
ಸೀಗಂಗ್ಪಟ್ಟದ್ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ಣದ್ ಸುತ್ತ ನಡದಿ
ಸಂಗಂದಲ್ಲಿ
ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

(ಶ್ರೀರಂಗ ಪಟ್ತದ ಹತ್ತಿರ ಕಾವೇರಿ ಒಡೆದು
ಎರಡು ಹೋಳಾಗಿ ಪಟ್ಟಣದ ಸುತ್ತ ನಡೆದು,
ಸಂಗಮದಲ್ಲಿ ಸೇರಿಕೊಂಡು,
ಮರಳಿ ಮುಂದಕ್ಕೆ ಹೋದದು ನಮಗೆ ಜ್ಞಾನದ ಪಂಜು
ಈಗ ಅಗಲಿದರೇನು ? ಮುಂದೆ ಸೇರುತ್ತಿವಿ ನಂಜು.)

ಆಗಲೋಡೋಗ್ತೆ ರಾತ್ರಿ ಬಂತತ್ ಅಂಜಿ,
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರ್ರಾತ್ರಿ ಬಂತು
ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕೆ ಅಲ್ವ ನಂಜಿ
ಆ ನಮ್ಕೆ ಜೀವಾನ್ ಉಳಸೋ ಗಂಜಿ

(
ಹಗಲು ಓಡಿಹೋಗುತ್ತದೆ ರಾತ್ರಿ ಬಂತೆಂದು ಅಂಜಿ
ರಾತ್ರಿ ಮುಗಿದುಹೋದರೆ ಹಗಲೇ ಅಲ್ಲವೆ ನಂಜಿ
ರಾತ್ರಿ ಬಿದ್ದಿತು,ಹಗಲೇ ಬಂದಿತು
ಹೋಗುವುದು ಮರಳಿ ಬರುವದಕ್ಕೆ ಅಲ್ಲವೇ ನಂಜಿ
ಆ ನಂಬಿಕೆ ನನ್ನ ಜೀವವನ್ನು ಉಳಿಸುವ ಗಂಜಿ.
)
ಇಂತಹ ಮಹಾನ್ ಪದ್ಯಗಳನ್ನು ಬರೆದ ಮಹಾನ್ ಕವಿಗೆ ಸಿನೆಮಾದರು ಹಾಡನ್ನು ಕದ್ದಾಗ, ಗೌರವ ಧನ ಕೋಡಬೇಕು. ಹಾಗೆ ಆದರೂ ಅವರ ಪುಸ್ತಕ ಹೆಚ್ಚು ಪ್ರಕಟಣೆಗೊಂಡು ಕನ್ನಡಿಗರ ಮನೆ ಸೇರಲಿ.
ಕೊನೆಯದಾಗಿ ರತ್ಗ್ನ ನನ್ನಹಾಗ ಕನ್ನಡ ಅಭಿಮಾನಿ ..ನನ್ನ ಮೆಚ್ಚಿನ ಸಾಲುಗಳು ಇವು
... " ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲಿಸ್ ಬಿಡುಬೇಕ್ ರತ್ನ
ಅಂತ ಅವನ್ ಅಂದ್ರೆ - ದೇವ್ರ ಆದ್ರ ಎನ್
ಮಾಡ್ತಿನಿ ಅವ್ನ್ಗೆ ಖತ್ನ."

Thursday, June 22, 2006

ವಿಭಿನ್ನ ವಿರಹ ಗೀತೆ.

ನಮಸ್ಕಾರ,
ಇದೊಂದು ವಿಭಿನ್ನ ವಿರಹ ಗೀತೆ, ಇಲ್ಲಿ ೨ ಬದಿ ಇದೆ. A ಮತ್ತು B. ಎರಡು ಬದಿಯಲ್ಲಿ ಶಬ್ದಗಳು ಇವೆ( ಹೊಂದಿಸಿ ಬರೆಯರಿ ಮಾದರಿಯಲ್ಲಿ ), ನಿಮ್ಮ ಅನಕೂಲಕ್ಕೆ ತಕ್ಕ ಹಾಗೆ(ಇಷ್ಟ ಬಂದ ಹಾಗೆ) ಹೊಂದಿಸಿ ನಿಮ್ಮದೆ ಕವಿತೆ ಮಾಡಿ ಕೊ(ಲ್ಲ)ಳ್ಳಬಹುದು.
ನೂರಾರು ಕವಿತೆಗಳು ಅಡಗಿವೆ ಇದರಲ್ಲಿ, ಹೊಂದಿಸಿದ ಹಾಗೆಲ್ಲ ಹೊಸ ಹೊಸ ಕವಿತೆಗಳು.


====A========= =====ಆB======
ಕಣ್ಣಿರಿನ ಕೊಳದಲ್ಲಿ ======ಪ್ರೀತಿಯ ನಿಟ್ಟುಸಿರು
ತಣ್ಣಗಿನ ವಿರಹದಲ್ಲಿ ===== ಈಡೇರದ ಬಯಕೆ
ಓಂಟಿತನದ ಬೇಗೆಯಲ್ಲಿ=== ಮೌನದ ನರಳಿಕೆ
ಆಸೆಯ ಮಸಣದಲ್ಲಿ =====ಶೀತಲ ದಳ್ಳುರಿ

Wednesday, June 14, 2006

ಜಾತಕದಲ್ಲಿ ಏನಿದೆ ??

ನನಗೆ ಬಹಳಷ್ಟು ಬಾರಿ ಈ ಪ್ರಶ್ನೆ ಮೂಡಿ ಬಂದಿದೆ, ಆದರೆ ಉತ್ತರ ಮಾತ್ರ ದೊರಕಿಲ್ಲ. ನನ್ನ ಜಾತಕವನ್ನು ನಾನೇ ಬರೆಯಲು ಪ್ರಯತ್ನಿಸಿದೆ, ಆದರೆ ದಾರಿ ತಪ್ಪಿ ಕೈಬಿಟ್ಟೆ. ಯಾವುದೇ ಶುಭ ಸಮಾರಂಭಗಳನ್ನು ಮಾಡುವಾಗ ಜಾತಕ ದೂಳಿನಿಂದ ಎದ್ದು ಬರುತ್ತದೆ. ಅದರಲ್ಲಿ ನಮ್ಮ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಅಂತ ಹಿರಿಯರ ಅಂಬೋಣ.

ಮುಖ್ಯವಾಗಿ ಜಾತಕದ ಕಥೆ ಹೆಚ್ಚು ಕೇಳಿಬರುವುದು ಮದುವೆಯ ಪ್ರಸ್ತಾಪ ಬಂದಾಗ, ಹುಡುಗಿಯ ಮತ್ತು ಹುಡುಗನ ಜಾತಕವನ್ನು ತಾಳೆ ಮಾಡಿ, ಗುಣಾಕಾರ ಭಾಗಕಾರ ಮಾಡಿ ಒಂದು ಸಂಖ್ಯೆ ಕೊಡುತ್ತಾರೆ, ಒಂದು ಸಂಭಂದ ಆಗಬೇಕಾದರೆ ೩೨ ಗುಣಗಳಲ್ಲಿ ಕನಿಷ್ಠ ೧೮ ಗುಣಗಳು ಕೂಡಿಬರಬೇಕು ಎಂದು ಹೇಳುತ್ತಾರೆ. ಹೆಚ್ಚು ಗುಣಗಳು ಬಂದಷ್ಟೂ ಹೆಚ್ಚು ವರಸಾಮ್ಯವಿರುತ್ತದೆ.

ಒಂದು ಜಾತಕ ಆಗುವುದು ಅನೇಕ ವಿಷಯದ ಮೇಲೆ, ಅಂದರೆ ಹುಟ್ಟಿದ ದಿನ, ದಿನಾಂಕ, ಸಮಯ, ಅಕ್ಷಾಂಶ,ರೇಖಾಂಶ ಮತ್ತು ನಕ್ಷತ್ರದ ಮೇಲೆ ಅವಲಂಭಿತವಾಗಿರುತ್ತದೆ. ಕೆಲವರು ಹುಟ್ಟಿದ ತಪ್ಪೊ ಎನೊ ಅವರೊಂದಿಗೆ ಕೆಲ ಪಾಪಗಳನ್ನು ಹೊತ್ತುಕೊಳ್ಳುತ್ತಾರೆ, ಅಂದರೆ ಈ ನಕ್ಷತ್ರದಲ್ಲಿ ಹುಟ್ಟಿದರೆ ಹೀಗೆ ಅಂತ. ಅದಕ್ಕೆ ತಕ್ಕ ಹಾಗೆ ಮಾಡಬೇಕು, ಮಾಡದಿದ್ದರೆ ಅವಘಡ ತಪ್ಪಿದ್ದಲ್ಲ ಅಂತ. ನಮ್ಮ ಜನರು ಯಾಕೆ ಸುಮ್ಮನೆ RIsk ಅಂತ ಅದನ್ನು ಪಾಲಿಸುತ್ತ ಬಂದಿದ್ದಾರೆ.

ಹಾಗಿದ್ದರೆ ಒಂದು ಸಂಭಂದ ಜಾತಕದ ಮೇಲೆ ನಿಂತಿರುತ್ತದೆಯೇ??

ಖಂಡಿತ ಇಲ್ಲಾ, ಮದುವೆಯ ಸಂಭಂದ ಹಾಗೆ ನಿಂತಿದ್ದರೆ, ಇಂದು ೩೨ ಗುಣಗಳು ಕೂಡಿದವರು ಡೈವರ್ಸ್‍ಗೆ ಅರ್ಜಿ ಹಾಕುತ್ತ ಇರಲಿಲ್ಲ, ಹಾಗೇಯೆ ೧೫ ಗುಣಗಳು ಕೂಡಿದವರು ನೆಮ್ಮದಿಯಿಂದ ಬಾಳುತ್ತ ಇರಲಿಲ್ಲ. ಒಂದು ತತ್ವ ಒಂದು ಸಮುದಾಯಕ್ಕೆ ಸೀಮಿತವಾದರೆ ಅದಕ್ಕೆ ಅರ್ಥವಿಲ್ಲ, ಜಗತ್ತಿನ್ನ ೯೫% ಜನರು ಇದನ್ನು ಪಾಲಿಸುವದಿಲ್ಲ, ಆ ಜನರು ಇಂದು ನೆಮ್ಮದಿಯಿಂದ ಸಂಸಾರ ಮಾಡುತ್ತ ಇಲ್ಲವೇ ??.

ಹಾಗೇಯೂ ಮದುವೆಯ ಸಂಭಂದ ಹಣೆಬರಹ ಜಾತಕದ ಮೇಲೆ ನಿಂತಿದ್ದರೆ, ನಿಜವಾಗಿಯೂ ಜಾತಕ ನೋಡಬೇಕಾಗಿರುವುದು
ಹುಡುಗಿ ಮತ್ತು ಹುಡುಗನ ಅಮ್ಮನ ಜಾತಕವನ್ನು. ಯಾಕೆಂದರೆ ಮುಕ್ಕಾಲು ಜಗಳ ಮತ್ತು ಮನಸ್ಥಾಪ ಬರುವುದು ಇವರ ಮಧ್ಯೆ ತಾನೇ ??.

ಹಾಗಿದ್ದರೆ ಮದುವೆ ಯಾವುದರ ಮೇಲೆ ನಿಂತಿದೆ, ಏನು ತೋರಿಸಬೇಕು.

ಹುಡುಗ ಮತ್ತು ಹುಡುಗಿ ತಮ್ಮ ಸಂಪೂರ್ಣ(Master Health Checkup) ಆರೋಗ್ಯ ತಪಾಸಣೆ ಮಾಡಿಸಿ ಅದರ ಒಂದು ವರದಿಯನ್ನು ಪಡೆಯಬೇಕು. ಹುಡುಗನ ಆರೋಗ್ಯದ ವರದಿಯನ್ನು ಹುಡುಗಿಯು ತನ್ನ family doctor ಹತ್ತಿರ ತೋರಿಸಲಿ, ಹಾಗೇಯೆ ಹುಡುಗ ಕೂಡ. ಆಗ ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇಯೆ ಎನು ತಪ್ಪು ಮಾಡಿರದ ಮುಂದಿನ ಪೀಳಿಗೆಗೆ ಅವರ ರೋಗಗಳನ್ನು ಅನುವಂಶಿಯತೆ ಮೂಲಕ ಕೊಡುವದನ್ನು ತಡೆಯಬಹುದು.
ಇದನ್ನು ನಮ್ಮ ಸರ್ಕಾರ ಖಡ್ಡಾಯಗೊಳಿಸಬೇಕು, ಅರ್ಥವಿಲ್ಲದ ಜಾತಕ ನೋಡುವದನ್ನು ಬಿಟ್ಟು ಕ್ರಿಯಾತ್ಮಕ ಕೆಲಸವನ್ನು ನಾವು ಮಾಡೋಣ. ಎನಂತಿರೀ ????