Monday, April 07, 2008

ಯುಗಾದಿಯ ಶುಭಾಶಯಗಳು ...

ಸರ್ವಜಿತು ಸಂವತ್ಸರದ ಈ ಹೊಸ ವರುಷ ಎಲ್ಲರಿಗೂ ಹೊಸ ಹರುಷವನ್ನು ತರಲಿ

ರಜನಿ cant ಅನ್ನೊ ಕಿಕ್ ಮಾಸ್ಟರಿಗೆ ಒಂದು ಪತ್ರ



ಎಪ್ಪಾ ಎಪ್ಪಾ ಎನ್ ಅಣ್ಣಾ ನಿನ್ನ ಅಕ್ಷನ್, ಲೊಟ್ಟೊ ಶೂ ಹಾಕಿಕೊಂಡು ನೀನು ಒದ್ದರೆ, ಕ್ವಾಲಿಸ ಗಾಡಿಯ ಮುಂದುಗಡೆಯಿಂದ ಒಬ್ಬ ಒಳಗೆ ಹೊಗ್ತಾನೆ ಇನ್ನೊಬ್ಬ ಆಚೆ ಬರ್ತಾನೆ, ಅದ್ರೂ ಅದೇನು ಹೆಚ್ಚಲ್ಲ ಬಿಡು
ನಮ್ಮ ಲೇಡಿ ರಾಂಬೊ ಮಾಲಶ್ರೀ ಈ ಸೀನನ ಬಸ್ಸಿನಲ್ಲೇ ಮಾಡಿದ್ದಾಳೆ. ಬಾಯಿನಲ್ಲಿ ಬೂಮರ್ ಚಿಯಿಂಗಗಮ್ ತಿನ್ನೊಕ್ಕೆ ಯೋಗಾಸನ ಯಾಕೆ ಮಾಡ್ತಿಯೋ ನಾ ಕಾಣೆ. ನಮ್ಮ ಟೆನ್ನಿಸ್ ಕಷ್ಟ ಇಲ್ಲದೇ ಹೇಗೆ ತಿನ್ನಬಹ್ಜುದು
ಅಂತ ನಿನಗೆ ಹೇಳಿಕೊಡ್ತಾನೆ ಬಿಡು. ಒಳ್ಳೆ ಜನರನ್ನು ಕಳ್ಳೆಪುರಿ ಎಸೆಯೋದೆ ಸ್ಟೈಲ್ ಅನ್ನೋದು ಆದ್ರೆ ನಮ್ಮ ಜಾಕಿಚಾನ್ ಥ್ದ್ರಿಲರ್ ನ ಎನು ಕರೆಯೋದು ??

ಹೊಗ್ಲಿ ವಿಷ್ಯಕ್ಕೆ ಬರೋಣ ...

ಹೌದು ಅಣ್ಣಾ ನಿನ್ನ ಕರಿ ಮೂತಿ ಮುಖಕ್ಕೆ ೧೦ ಇಂಚು ಮೇಕಪ್ ಹಾಕಿದ್ದರೂ, ಸ್ಟೈಲ್ ಕಿಂಗ್ ಅಂತ ಹೆಸರು ಕೊಟ್ಟು ಅತಿಯಾದ ಮರ್ಯಾದೆ ಕೊಟ್ರಲ್ಲ ನಮ್ಮ ಜನರ ಬುದ್ದಿಗೆ
ನಿಜಕ್ಕೂ ಒದಿಬೇಕು ಬಿಡು. ಕನ್ನಡ ಚಿತ್ರಗಳು ಚಿತ್ರಮಂದಿರ ಇಲ್ಲದೆ ಸಾಯ್ತಾ ಇದ್ದರೂ ನಮ್ಮ ಕನ್ನಡ ಹುಡುಗ ಅಂತ ನಿನ್ನ ಚಿತ್ರಗಳಿಗೆ ಬಿಟ್ಟು ಕೊಟ್ಟಿ ಲಾಬಿ ಮಾಡಿಕೊಟ್ಟರಲ್ಲ
ನಮ್ಮ ಚಿತ್ರಮಂದಿಗೆ ಇನ್ನು ಬುದ್ದಿ ಬಂದಿರೊಲ್ಲ ಬಿಡು. ಕರ್ನಾಟಕದಲ್ಲಿ ನನ್ನ ಚಿತ್ರ ಬಂದರೂ ಒಂದೇ, ಬಿಟ್ರೂ ಒಂದೇ ಅಂತ ನಿನ್ನ ಮನಸ್ಸಿಗೆ ಅನಿಸಿದ ಹಾಗೆ ನಿಜಾವಾಗಿ ಹೇಳಿದ್ದಿಯಾ, ನಿಜಕ್ಕೂ ಇದಕ್ಕೆ ಒಂದು ಚಪ್ಪಾಳೆ ಹೋಡಿಬೇಕು ಬಿಡು.

ನಿನ್ನ ಶಿವಾಜಿ ಚಿತ್ರ ಬರೊಕ್ಕೆ ಮುಂಚೆ ನಿನ್ನ ಚಿತ್ರಗಳ ತುಣುಕಗಳನ್ನು ಹಾಕಿ ನಿನ್ನ ಬಗ್ಗೆ ಅತಿಯಾಗಿ ಹೋಗಳಿದ್ದೇನು, ಸಿಗರೇಟು ಬಾಯಿಗೆ ಇಟ್ಕೊಳ್ಳೊದೆ ಒಂದು ದೊಡ್ಡ ಸಾಧನೆ ಅನ್ನೋ ರೀತಿಯಲ್ಲಿ ನಿನ್ನ ಕಾಗೆ ಹಾರಿಸಿದ್ದೇನು. ಅದೇ ಜನ ಕನ್ನಡ ಹೋರಾಟಗಾರರನ್ನು ನಿನ್ನ ಚಿತ್ರ ವಿರೋಧಿಸಿದರು ಅಂತ ದೇಶದ್ರೊಹಿಗಳ ತರ ಕಾಮೆಂಟ್ ಮಾಡಿ, ಜನರ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು ನೋಡಿ ಅಂತಹ ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು ಅನ್ನೋ ವಾಹಿನಿಗಳು
ಕನ್ನಡದಲ್ಲಿ ಗಾಳಿಪಟ ಚಿತ್ರವನ್ನು ಧೂಳಿಪಟ ಎಂದು ಮೊದಲ ಪುಟದಲ್ಲಿ ಬೈದು, ನಿನ್ನ ಶಿವಾಜಿ ಚಿತ್ರವನ್ನು ಅತ್ರುತ್ತಮ ಚಿತ್ರ ಅಂತ ಹೇಳಿದರಲ್ಲಿ ನಮ್ಮ ಕನ್ನಡಿಗರ ಹೆಮ್ಮೆಯ ಅನ್ನೋ ಪತ್ರಿಕೆಗಳನ್ನು ನೋಡುತ್ತ, ಓದುತ್ತ ಅವರು ಹೇಳಿದ್ದೆ ನಿಜ ಅಂತ ನಂಬೋ ನಮ್ಮ ಕನ್ನಡಿಗರ ಬುದ್ದಿಗೆ ಒದಿಬೇಕು ಬಿಡಿ.

ಕನ್ನಡದ ಹೆಮ್ಮೆ ಅನ್ನೋ ಈ ಮಾಧ್ಯಮದ ಜನ, ನಿನ್ನ ಮೇಲಿನ ಪ್ರೀತಿಗೆ ನೀನು ಓದಿರಿ ಅಂತ ಹೇಳಿದ್ದು ಸುದ್ದಿ ಮಾಡದೇ, ಅದನ್ನು ಮುಚ್ಚಿ ಹಾಕೋ ಕೆಲ್ಸಕ್ಕೆ ಕೈ ಹಾಕಿದರು. ಎಲ್ಲೊ ಖಾಲಿ ಜಾಗದಲ್ಲಿ ಯಾವನೋ ಉಚ್ಚೆ ಮಾಡಿದ ಅಂದ್ರೆ ಅದರ ಬಗ್ಗೆ ವ್ಯಾಖ್ಯಾನ ಮಾಡೊ ಇವರಿಗೆ ಇದು ದೊಡ್ಡ ಸುದ್ದಿ ಅನಿಸಲೇ ಇಲ್ಲ. ಅದೇ ಸಾಸ್ಕೆನ್ ವಿಷಯದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರು, ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ಮನೆ ಇದ್ದಾರೆ ಅಂತ ಪುಂಖಾನುಪುಂಖ ಪ್ರಶ್ನೆ ಹಾಕಿದವರಿಗೆ ನೀನು ಒದಿ ಅಂತ ಹೇಳಿದ್ದು ಸುದ್ದಿ ಅಲ್ಲ, ಆಗ ತಮ್ಮ ವೀರ ಸ್ವಾಭಿಮಾನವನ್ನು ಪಕ್ಕಕ್ಕೆ ಇಟ್ಟು ಈ ವಿಷಯಕ್ಕೆ ಬೇರೆ ಆಯಾಮ ಕೊಡೊ ಕೆಲ್ಸ ಮಾಡಿದ್ರಲ್ಲ..... ಈ ಜನಗಳಿಗೆ ಒದಿಯೋ ಕೆಲ್ಸ ನೀನು ಮಾಡಿ ಸ್ವಲ್ಪ ಪುಣ್ಯ ಕಟ್ಟಿ ಕೊಳ್ಳಣ್ಣ...

ನಿನ್ನೆ ಯಾಕೆ ಕೇಳ್ಲಾ ಇದ್ದೀನಿ , ನೀನು ಒಮ್ಮೆ ಒದ್ದರೆ ನೂರು ಟೈಮ್ ಒದ್ದ ಹಾಗೆ ಅಲ್ವಾ ?

ಕೊನೆಗೂ ನಿನ್ನ ಬಣ್ಣದ ಬುದ್ಧಿ ತೋರಿಸಿಬಿಟ್ಟೆ ಗುರು...ನಿನ್ನ ಮಾತುಗಳನ್ನು ಮುಚ್ಚಿ ಹಾಕಿಕೋಳ್ಳೊದ್ರಲ್ಲೂ ನಿನ್ನ ಜಾಣತನ ಮೆರಸಿದೆ ಬಿಡು. ನೀನು ಅಂಬಿ,ವಿಷ್ಣು,ಕಾರ್ನಾಡ ಅಂತ ಮಹಾನ್ ಜನ ಹೇಳಿದರೆ ಮಾತ್ರ ಸಾರಿ ಕೇಳ್ನಿನಿ,ಅದೂ ಅವರ ಮನಸಾಕ್ಷಿಗೆ ಸರಿ ಅನಿಸಿದರೆ ಮಾತ್ರ ಅಂತ ಹೇಳಿದೆ.
ನಿನಗೆ ಗೊತ್ತು ಕಣಣ್ಣಾ ಈ ವೀರಾಧಿವೀರರು ಬೆಚ್ಚಗೆ ಮಡಿಕೇರಿ ಚಳಿಯಲ್ಲಿ ೯೦ ಹಾಕ್ಕೊಂಡು, ಕಾರ್ಡ್ಸ ಆಡ್ಕೋಂಡು ಇದ್ರು, ರಸ್ತೆ ಸರಿ ಇಲ್ಲಾ ಅದಕ್ಕೆ ಬರೊಕ್ಕೆ ಆಗಲಿಲ್ಲ ಅಂತ ಕಿವಿ ಮೇಲೆ ಹೂ ಇಟ್ಟ ಜನ ನಿನ್ನ ಬಗ್ಗೆ ಮಾತಾಡೋ ಹಕ್ಕು ಆದ್ರು ಇದೆಯಾ ಅಂತ ಚೆನ್ನಾಗಿ ಗೊತ್ತಿದ್ದು ಕೊಂಡೆ ನೀನು ಅವರ ಹೆಸರ ಹೇಳಿದ್ದು. ಥ್ಯಾಂಕ್ಸ ಕಣಪ್ಪಾ ನೀನು sarcastic ಆಗಿ ಹೇಳಿದ್ಧು ಆ ಜನ ನಿಜ ಅಂದು ಕೊಳ್ಳೋ ಮೊದಲು , ಇನ್ನೊಮ್ಮೆ ನಾನು ಎಪ್ರಿಲ್ ಫೂಲ್ ಮಾಡ್ತ ಇದ್ದೆ ಅಂತ ಹೇಳಿಬಿಡು.
ಇನ್ನಾ ಇದೇನು ಬಾಬ ಬುಡನಗಿರಿ ವಿಶ್ಯ ಕೆಟ್ಟು ಹೊಯ್ತೆ, ನಮ್ಮ ಜ್ಞಾನಪೀಠಿಗಳು ಕಾಮೆಂಟ್ ಮಾಡೊಕ್ಕೆ. ಈ ಜನರಿಗೆ ನಮ್ಮ ಜನರ ಕಾಲು ಎಳೆಯೊಕ್ಕೆ ಸರಿ ಟೈಮು ಇರೊಲ್ಲ, ಅದೇ ನಿನ್ನ ಚಿತ್ರ ಪ್ರದರ್ಶನ ವಿರುದ್ದ ಮಾಡೊ ಹೋರಾಟಗಳನ್ನು ವಾಮೋಚರವಾಗಿ ಬೈಯ್ಯುತ್ತಾರೆ ಈ ಜನ. ಇವರು ನೀನು ಹೇಳಿದ್ದು ತಪ್ಪು ಅಂತ ಯಾಕೆ ಹೇಳ್ಟಾರೆ ನೋಡು ?
.
ನಿಮ್ಮ ತಮಿಳು ರಾಷ್ಟ್ರದಲ್ಲಿ ನೀರಿಗೆ , ಗಡಿ ಕಳ್ಳತನಕ್ಕೆ ಹೋರಾಟ ಮಾಡೊ ಎಲ್ಲರೂ ದೇಶ ಭಕ್ತರೂ. ಅದೇ ನಾವು ಇದು ಅನ್ಯಾಯ ಅಂತ ಹೇಳಿದರು ವಿಷಕ್ರಿಮಿಗಳು ಅಲ್ವಾ ?.
ಕೇಂದ್ರದಲ್ಲೂ ನೀವೆ, ರಾಜ್ಯದಲ್ಲೂ ನೀವೆ, ನಿಮ್ಮಿಂದಲೇ ನಾವು, ನೀವು ಇದ್ರೂ-ಹೋದ್ರು ನಷ್ಟ ಆಗೋದು ನಮಗೆ ಅನ್ನೋ ನಿಮ್ಮ ಕಂತ್ರಿ ಬುದ್ಧಿಗೆ ಯಾವಾ ಬಾಬ ಬಂದು ಒದಿಬೇಕು ಸಿವಾ ???