Tuesday, December 29, 2009

ರಾಯರು ಹೋದರು ದೇವರ ಮನೆಗೆ



೨೦೦೯ ಇಸ್ವಿ ತಾನು ಹೋಗುವ ಜೊತೆ ನಮ್ಮ ಮೆಚ್ಚಿನ ಅಶ್ವತ್ ಮತ್ತು ಡಾ.ವಿಷ್ಣುವರ್ಧನ್ ಅವರನ್ನು ತನ್ನೊಡನೆ ಸೆಳೆದುಕೊಂಡಿದೆ.
ಇಬ್ಬರೂ ಕನ್ನಡದಲ್ಲಿ ಬಹಳ ಹೆಸರು ಮಾಡಿದವರು. ಅವರಿಗೆ ನಮ್ಮ ಹೃದಯ ಪೂರ್ವಕ ಶೃದ್ದಾಂಜಲಿ.

ಡಾ.ವಿಷ್ಣುವರ್ಧನ್ ಅವರ ಸಾವು ನಿಜಕ್ಕೂ ಬಹಳ ದೊಡ್ಡ ಶಾಕ್, ಅವರ ಸಾವನ್ನು ಅವರ ಚಿತ್ರದ ಮೂಲಕ ಹೀಗೆ ಹೇಳಬಹುದು ಅಲ್ವೇ??

ಮರೆಯಾದ ಕನ್ನಡದ ಯಜಮಾನ
ಮರೆಯಾದ ಮಾಣಿಕ್ಯ
ಇನ್ನೂ ವಿಷ್ನು ನೆನಪೇ ನಮಗೆ ಮುತ್ತಿನಹಾರ
ಜೀವನ ಬಂಧನದಿಂದ ಮುಕ್ತಿ
ಘರ್ಜನೆ ನಿಲ್ಲಿಸಿದ ಸಿಂಹ
ಅಗಲಿದ ಆಪ್ತಮಿತ್ರ
ಸೇರಿದರು ದೇವರ ಗುಡಿ
ರಾಯರು ಹೋದರು ದೇವರ ಮನೆಗೆ
ಇನ್ನಿಲ್ಲ ಅಪ್ಪಾಜಿ
ಕಥನಾಯಕ ಅಸ್ತಂಗತ
ಮತ್ತೆ ಹಾಡದು ಕೋಗಿಲೆ
ಆರಿದ ಜೀವನ ಜ್ಯೋತಿ

ಇಬ್ಬರೂ ನಮ್ಮೊಂದಿಗೆ ತಮ್ಮ ಚಿತ್ರ ಮತ್ತು ಗಾಯನ ಮೂಲಕ ಸದಾ ಬದುಕಿದ್ದಾರೆ.