Saturday, August 22, 2009

ಮಂತ್ರಗಳಿಂದ ಅಭಿವೃದ್ದಿ ಸಾಧ್ಯ- ಸಂಸ್ಕೃತ ವಿವಿ ಬೇಕೇ ಬೇಕು!!!




ಗಣಕಯಂತ್ರದ OOAD ನಲ್ಲಿ IS A ಮತ್ತು HAS A ಅಂತ ಎರಡು ಪ್ರಭೇದಗಳು ಇವೆ, ಬಹಳ ಮಟ್ಟಿಗೆ ಒಂದು ವಿನ್ಯಾಸದಲ್ಲಿ ಇದೇ ತಳಹದಿ. software desgin ಮಾಡುವನು ಇವೆರಡರ ನಡುವಿನ ವ್ಯತ್ಯಾಸ ತಿಳಿದಿರಬೇಕು, ಇಲ್ಲವಾದರೆ ಅದು OOAD ಅಗೊಲ್ಲ, ಮೊನೊಲಿತಿಕ್ ಆಗುತ್ತದೆ. ನಮ್ಮ ಪುಣ್ಯ ಕನ್ನಡದ ಚಿಂತಕರು, ಸಂಸ್ಕೃತ ವಿವಿ ಸಮರ್ಥಕರು software design ಮಾಡುತ್ತ ಇಲ್ಲ, ಯಾಕೆಂದರೆ ಅವರಿಗೆ IS A ಮತ್ತು HAS A ವ್ಯತ್ಯಾಸ ತಿಳಿದ ಹಾಗೆ ಇಲ್ಲ.

ಕನ್ನಡ IS A ಸಂಸ್ಕೃತ ಅನ್ನೊ ವಾದ ಅಷ್ಟೆ ಅಲ್ಲ ಅದನ್ನು ಎಲ್ಲಾ ಭಾಷೆಗಳಿಗೂ ಹೋಲಿಸಿ ಎಲ್ಲದಕ್ಕೂ ಅಮ್ಮ ಇದೇ ಆಗಿದೆ, ಅಮ್ಮನನ್ನು ಕಡೆಗಣಿಸುವುದು ಪಾಪ ಅನ್ನೊ ಫರ್ಮಾನು ಹೊರಡಿಸುತ್ತಾರೆ. ಈ ವಾದವನ್ನೇ ಸರಿ ಒಪ್ಪಿಕೊಳ್ಳೊಣ,ಆದರೆ
ಬದುಕಿ ಬಾಳುತ್ತಿರುವ ಭಾಷೆಗಳಿಗೆ ನೀರೆರೆಯುವ ಬದಲು, ಮೃತಭಾಷೆಗೆ ನೀರೆರೆದು ದೇವರ ಕಾಲಕ್ಕೆ ಕರೆದುಕೊಂಡು ಹೋಗುತ್ತೆವೆ ಅನ್ನೊ ಕನವರಿಕೆ ಇದೇ ನೋಡಿ ಅದಕ್ಕೆ ಎನು ಹೇಳುವುದು ಗೊತ್ತಾಗುತ್ತಿಲ್ಲ.


ಸಂಸ್ಕೃತ ವಿವಿ ಬೇಕು ಅಂತ ಬಂದಿರುವ ಇಲ್ಲಿವರೆಗೂ ಲೇಖನಗಳು ವಸ್ತುಸ್ಥಿತಿಯನ್ನು ಸಂಪೂರ್ಣ ಅಲ್ಲಗಳೆದಿವೆ, ಹಿಂದಿನ ಪ್ರಯೋಗವನ್ನು ಕಡೆಗಣಿಸಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿವೆ. ಎಲ್ಲಕ್ಕಿಂತ ಮುಖ್ಯವಾಗಿ mission immpossible ಆಗುತ್ತದೆ ಅನ್ನೊ ಭ್ರಮೆಯನ್ನು ಡಂಗುರ ಮಾಡುತ್ತಿವೆ.

ಭಾಷೆಗಳು ಬೆಳೆಯುವುದು ಕೇವಲ ಒಂದು ಭಾಷೆಯಿಂದ ಅಲ್ಲ, ಕನ್ನಡ ಬೆಳವಣಿಗೆ ಆಗಿದ್ದು ಅನೇಕ ಭಾಷೆಗಳ ನೆರವಿನಿಂದ.
ಒಂದು ಹಂತದವರೆಗೂ ಅದು ಸಂಸ್ಕೃತದ ಜೀವಸತ್ವದಲ್ಲಿ ಬೆಳೆಯಿತು, ಅದು ಒಂದು ಕಾಲ ಆದಮೇಲೆ ಜಡವಾಯಿತು. ಆಗ ಕನ್ನಡ
ಬೇರೆ ಭಾಷೆಗಳ ಜೊತೆ ಕೊಟ್ಟು-ತೆಗೆದುಕೊಂಡು ಮುಂದುವರೆಯಿತು. ಅದು ಮಾಡಿರಲಿಲ್ಲ ಅಂದರೆ ಕನ್ನಡವೂ ಸಂಸೃತದ ಹಾಗೆ ಪೋಟೊಗೆ ಹಾರ ಹಾಕಿಸಿಕೊಳ್ಳುತ್ತ ಇತ್ತು.

ನನಗೂ ಬಹಳ ಹಿಂದೆ ಇದರ ಬಗ್ಗೆ ಜಿಜ್ಞಾಸೆಯಾಗಿ ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತದ ಮದ್ಯೆ ಇರುವ ಸಂಬಂಧ ಮತ್ತು ವ್ಯತ್ಯಾಸ ಬಗ್ಗೆ ಪಟ್ಟಿ ಮಾಡಿದ್ದೆ. ಒಂದು ಭಾಷೆ ಭವಿಷ್ಯತನಲ್ಲಿ ಉಳಿಯಬೇಕಾದರೆ ಅದು ಮುಂದಿನ ಕಾಲಕ್ಕೆ ಬೇಕಾದ ಅಣಿಯಾಗಿರಬೇಕು ಅನ್ನುವುದು ನನ್ನ ಭಾವನೆ.

ಶ್ರೀನಿವಾಸ ಮೂರ್ತಿ ವಿ.ಕ ನಲ್ಲಿ ಹೇಳಿರುವುದು ನೋಡಿ(ಮೇಲಿನ ಚಿತ್ರ ನೋಡಿ) , ಕನ್ನಡ,ತೆಲುಗು, ಮಲೆಯಾಳಂ ಬೆಳೆದಿರುವುದು ಸಂಸ್ಕೃತದಿಂದ , ಅದೇ ತಮಿಳು ಅದನ್ನು ದೂರ ಮಾಡಿ ಬರಡಾಯಿತು, ಬೇಕಿದ್ದರೆ ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪಟ್ಟಿ ನೋಡಿ ಅಂತಾರೆ. ಅಂದರೆ ಜ್ಞಾನಪೀಠ ಪಡೆಯಲು ಸಂಕ್ರುತದ ನೆರವು ಇಲ್ಲದೇ ಸಾಧ್ಯವಿಲ್ಲ, ಕನ್ನಡ ಆ ಮಟ್ಟಿಗೆ ಆಗಿದೆ ಅಂದರೆ ಅದು ಕವಿಗಳ ಪಾತ್ರ ಅಲ್ಲ ಎಲ್ಲ ಸಂಸ್ಕ್ರುತಮಯಂ

ಇ ಸಾಲು ಓದಿದ ಮೇಲೆ ಅವರ ಲೇಖನ ಮುಂದುವರೆಸಲು ನನಗೆ ಮನಸ್ಸಾಗಲಿಲ್ಲ. ಶ್ರೀಯುತರು ಜ್ಞಾನಪೀಠವನ್ನೇ ಎಲ್ಲ ಭಾಷೆಯ ಅಭಿವೃದ್ಧಿಗೆ ಅಳೆತೆಗೋಲು ಅಂತ ಮಾಡಿಕೊಂಡ ಹಾಗೆ ಇದೆ. ಅದಕ್ಕೆ ನಮ್ಮ ಕರುನಾಡಿನಲ್ಲಿ ಮಾತಿಗೆ ಮುಂಚೆ ೭ ಜ್ಞಾನಪೀಠಗಳ ಬಗ್ಗೆ ಪ್ರಸ್ತಾವ ಆಗುತ್ತದೆ, ಇನ್ನು ರಾಜ್ಯೋತ್ಸವ ಬಂದರೆ ಸಾಕು ಅವರ flex ಕಾಣಬಹುದು.

ಇದೇ ಕಾರೊಲಾರಿ ಇಟ್ಟುಕೊಂಡರೆ ನಮ್ಮ ಕನ್ನಡ ಭಾಷೆ ಇಂಗ್ಲೀಷಿಗಿಂತ ದೊಡ್ಡದು ಯಾಕೆ ಅಂದರೆ ನಮಗೆ ೭ ಜ್ಞಾನಪೀಠ ಬಂದಿದೆ, ಅದೇ ಇಂಗ್ಲೀಷಿಗೆ ಸೊನ್ನೆ ...lol

ಆ ಪ್ರಶಸ್ತಿ ಒಂದು ಖಾಸಗಿ ಕಂಪನಿ ಕೊಡುವ ಪ್ರಶಸ್ತಿ, ಅದು ಕೇವಲ ಸಾಹಿತ್ಯಕ್ಕೆ ಸಂಭಂದಿಸಿದ್ದು. ಭಾಷೆ ಅಂದರೆ ಕೇವಲ ಜುಟ್ಟಿನ ಮಲ್ಲಿಗೆ ಹೂವಿನ ಸಾಹಿತ್ಯ ಮಾತ್ರ ಅಲ್ಲ ಅಂತ ಶ್ರೀಯುತರು ಮನಗಾಣಬೇಕು. ಭವಿಷ್ಯತನಲ್ಲಿ ಅದರಲ್ಲೂ ಅಂತರ್ಜಾಲ ತಾಣದಲ್ಲಿ ತಮಿಳ್ ಯಾವ ರೀತಿ ಮುಂದುವರೆದಿದೆ ಅನ್ನೊ ಕಲ್ಪನೆ ಕೂಡ ಇಲ್ಲದೆ ಸಂಸ್ಕ್ರುತವನ್ನು ಸಮರ್ಥಿಸುವ ನೆಪದಲ್ಲಿ ಅದು ಬರಡಾಗಿದೆ ಅಂತ ಹೇಳಿದ್ದಾರೆ.

ಗಣಕೀಕರಣ ಮಾಡಬಹುದು ಅದಕ್ಕೆ ಸಂಸ್ಕ್ರುತವೇ ಸರಿಯಾದ (most scientific language) ಹೀಗೆ ಒಂದು ಸಾಲನ್ನು ನಮ್ಮ ವಿಚಾರವಂತರೂ ಗೊತ್ತಿಲ್ಲದೆ ,ಅರಿವಿಲ್ಲದೇ ಯಾಕೆ ಬರೆಯುತ್ತಾರೋ ನಾ ಕಾಣೆ. ಅಷ್ಟಕ್ಕೂ ಇದರ ಅರ್ಥ ಅವರಿಗಿದೇಯಾ , ಇದನ್ನು ಹೇಳುವಾಗ ಅವರು ಭಾಷೆ ಬಗ್ಗೆ ಹೇಳುತ್ತ ಇದ್ದರಾ ಇಲ್ಲ ಲಿಪಿ ಬಗ್ಗೆ ಹೇಳುತ್ತ ಇದ್ದಾರ ಗೊತ್ತಿಲ್ಲ. ಲಿಪಿ ಬಗ್ಗೆ ಇದ್ದರೆ, ನಮ್ಮದು ದೇವನಾಗಿರಿ ಲಿಪಿ ಅಲ್ಲ. ಇನ್ನು ಇದು ಕನ್ನಡಕ್ಕೆ ಯಾವ ರೀತಿ ಲಾಭವೋ ಅದನ್ನು ಯಾಕೆ ಉದಾಹರಿಸುತ್ತಾರೋ ನನಗೆ ಅರ್ಥ ಆಗುತ್ತಿಲ್ಲ.

ಸಾಮನ್ಯ ಜನ ನಾವು ಒಂದು ವಿಷ್ಯವನ್ನು ಅಂತರ್ಜಾಲ ತಾಣದಲ್ಲಿ ಅವರ ಭಾಷೆಯಲ್ಲಿ ತಿಳಿದುಕೊಳ್ಳಬೇಕು ಎಂದರೆ ಮೊದಲು ಮೊರೆ ಹೋಗುವುದು ವಿಕೀಪೀಡಿಯಾಗೆ. ಅದರಲ್ಲಿ ಕನ್ನಡ ೬೭೦೦ ಲೇಖನ ಇದ್ದರೆ, ತಮಿಳ್ ೧೯೧೦೦ ಲೇಖನ ಹೊಂದಿದೆ. ಅಂದರೆ ಸುಮಾರು ೩ ಪಟ್ಟು ನಮಗಿಂತ ಮುಂದೆ ಇದ್ದಾರೆ + ಆ ಭಾಷೆಯ ಜನರು ನಮಗಿಂತ ೧೩೦೦೦ ವಿಷ್ಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳಬಹುದು. ಇನ್ನು ಪದಬಂಡಾರ ಬಗ್ಗೆ ಬರುವದಾದರೆ ತಮಿಳನಲ್ಲಿ ೯೮,೦೦೦ ಪದಗಳು ಇವೆ, ಇನ್ನು ಕನ್ನಡದಲ್ಲಿ ೨೭೦೦ ಚಿಲ್ಲರೆ ಪದಗಳು ವಿಕ್ಷನರಿಯಲ್ಲಿ ಸಿಗುತ್ತವೆ. ಅದರಲ್ಲೂ ಕನ್ನಡ ಪದಗಳು ಅಸಂಖ್ಯ ಧಾತುಗಳಿಂದ ಹುಟ್ಟಿದವೂ ಅಲ್ಲ, ಸಂಪೂರ್ಣ ಕನ್ನಡ ಪದಗಳೇ, ಅಂದರೆ ಸಂಸ್ಕ್ರುತದ ಕೊಡುಗೆ ಯಾವ ಮಟ್ಟಕ್ಕೆ ಇದೆ ಅಂತ ತಿಳಿಯತ್ತಲ್ಲವೇ ?

ಕನ್ನಡ ಪದಗಳನ್ನು ಹುಟ್ಟಿಸುವುದು ಹೇಗೆ ಅದಕ್ಕೆ ಸಂಸ್ಕುತದ ಬಾಲಕ್ಕೆ ಜೋತು ಬೀಳಬೇಕೆ ಅನ್ನೊದರ ಬಗ್ಗೆ ಭಾಷವಿಜ್ಞಾನಿ ಡಾ.ಶಂಕರಭಟ್ಟರು ತಮ್ಮ ಪುಸ್ತಕದಲ್ಲಿ ತೋರಿಸಿದ್ದಾರೆ. ಆದ್ದರಿಂದ ಕನ್ನಡಕ್ಕೆ ಸಂಸ್ಕ್ರುತ ಬೇಕೆ ಬೇಕು ಅನ್ನೊ ಕಾನೂನು ಇಲ್ಲ, ಹಾಗೆ ಇಲ್ಲದೇ ಬೆಳೆದಿರುವ ತಮಿಳ್ ನಮ್ಮ ಮುಂದೆ ಇಲ್ಲವೇ ??

* unicode costorium ಗೆ ನಮ್ಮ ಸರ್ಕಾರ ಸದಸ್ಯರಾಗಿಲ್ಲ, ನನಗೆ ಅನಿಸೊ ಹಾಗೆ ಅದು ಎನು ಅಂತ ಕೂಡ ನಮ್ಮ ಚಿಂತಕರಿಗೆ ಗೊತ್ತಿಲ್ಲ. ಅದೇ ತಮಿಳುನಾಡು ಸರಕಾರ ಆಗಿದೆ.

* ೧೨ ವರುಷಗಳಿಂದ , ೨ ವರುಷಕ್ಕೆ ಒಮ್ಮೆ ಅಂತರ್ಜಾಲದಲ್ಲಿ ತಮಿಳ್ ಅನ್ನುವ ಬಗ್ಗೆ ವಿಶ್ವಮಟ್ತದ ಸಭೆ ನಡೆಯುತ್ತದೆ, ಅದರಲ್ಲಿ ಅಂತರ್ಜಾಲ ತಾಣದಲ್ಲಿ ಇರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ ಚರ್ಚೆ ಆಗುತ್ತದೆ. ಅಂದರೆ ಮೇಲೆ ನಾನು ಹೇಳಿದ ವಿಷ್ಯಗಳು ಯಾಕೆ ತಮಿಳ್ ಭಾಷೆ ನಮಗಿಂತ ಮುಂದೆ ಇದೆ ಅನ್ನುವದಕ್ಕೆ ಸಾಕ್ಷಿ.

ಇದರಲ್ಲಿ ತಂತ್ರಜ್ಞಾನ ಮಾಡುವರು, ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳಿಂದ ವಿಶ್ವಮಟ್ಟದ ಅವಿಷ್ಕಾರಗಳಿಗೆ ಪೇಪರ್ ಕರೆಯಲಾಗುತ್ತದೆ, ಆಯ್ಕೆಯಾದ ವಿಷ್ಯಗಳನ್ನು ಆ ಸಭೆಯಲ್ಲಿ ಮಂಡಿಸಲಾಗುತ್ತದೆ.

E-Government,Education Technology,Database driven applications,
Mobile and hand-held technologies,Tamil Optical Character Recognition,
Machine Translation, Spell Checking and Speech Recognition,
Tamil in Indic language cluster and multi-lingual environments,Tamil Character Encoding Standards,Multilingual Domain Names

ಹೀಗೆ ನಾವು ಮುನ್ನೆಡೆಯಲು ಮತ್ತು ನಮ್ಮ ದೈನಂದಿನದಲ್ಲಿ ಮತ್ತು ಹೊಸ ತಂತ್ರಜ್ಞಾನದಲ್ಲಿ ತಮಿಳ್ ತರುವುದು ಹೇಗೆ ಅಂತ ಮೇಲೆ ಹೇಳಿರುವ ಪ್ರಮುಖ ವಿಷಯಗಳ ಅಡಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಇದಕ್ಕೆ ವಿಶ್ವದಿಂದ ಎಲ್ಲಾ ಪಂಡಿತರು ಬರುತ್ತಾರೆ.
ಮೇಲೆ ಹೇಳಿರುವುದು ಬರಿ tip in iceberg ಅಷ್ತೆ, ಡಿಜಿಟಲ್, open source ಅಷ್ಟು ಯಾಕೆ ತಮಿಳ್ ವರ್ಚುಯಲ್ ವಿಶ್ವವಿದ್ಯಾಲಯ ಕೂಡ ಮಾಡಿಕೊಂಡು ನಮಗಿಂತ ಬಹಳ ಮುಂದೆ ಇದ್ದಾರೆ.

ಚಿಂತೆ ಬೇಡ, ಸಂಸ್ಕ್ರುತದ ಪುಸ್ತಕದಲ್ಲಿ ಇದಕ್ಕೆ ಒಂದು ಮಂತ್ರ ಇದೆ, ಅದನ್ನು ಓದಿದರೆ ಇವೆಲ್ಲ ೫ ನಿಮಿಷದ ಕೆಲ್ಸ ಅಂತ ನಂಬಿರುವ
ನಾವು ಇನ್ನು ಮಂತ್ರದಿಂದ ಅಭಿವೃದ್ದಿಯ ಮಾವಿನಕಾಯಿ ಉದುರಿಸುವದರಲ್ಲೇ ಇದ್ದೇವೆ.

ಆ ಮಂತ್ರ ತಿಳಿಯಲು, ಉತ್ತುಂಗಕ್ಕೆ ಹೋಗಲು ನಮಗೆ ಸಂಸ್ಕುತ ವಿಶ್ಯವಿದ್ಯಾಲಯ ಬೇಕೆ ಬೇಕು.

ಬ್ಲಾಗ್,ಕಾಮೆಂಟ್ ಮತ್ತು ಸುತ್ತಮುತ್ತ

ಕಳೆದ ಎರಡು ವಾರಗಳಿಂದ ಬ್ಲಾಗ್ ಬಗ್ಗೆ ಮತ್ತು ಅದಕ್ಕೆ ಅಂಟಿಕೊಂಡಿರುವ ವೈರಸ್ ಬಗ್ಗೆ ಪುಂಖಾನುಪುಂಖ ಲೇಖನಗಳನ್ನು ನೋಡುತ್ತ ಇದ್ದೇವೆ. ಹೆಚ್ಚಾಗಿ ಇದು ಎಲ್ಲೊ ಅನಾನಿಮಸ್ ಅನ್ನೊ ವೈರಸ್ ಇಂದ ಬಳಲಿದ ಹತಾಶ ಜನರ ಕಥೆ ಇದ್ದ ಹಾಗೆ ಇದೆ. ಬ್ಲಾಗಿಂಗನಲ್ಲಿ ಇದು ಸಾಮನ್ಯ ಅಂಶ, ಆದರೆ ಇದಕ್ಕೆ ಹೆದರಿ ಬ್ಲಾಗ್ ನಿಲ್ಲಿಸುತ್ತ ಇದ್ದೇವೆ ಅಂತ ಹೇಳುವ ವರಾತ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

ಬಹಳ ಆಶ್ಚರ್ಯವೆಂದರೆ ಇದನ್ನು ದೂರಿರೂವ ಅನೇಕರ ಬ್ಲಾಗಿನಲ್ಲಿ controversy ಲೇಖನಗಳು ನನಗೆ ಹೆಚ್ಚು ಕಂಡು ಬರಲಿಲ್ಲ, ಕಥೆ-ಕವಿತೆ-ಅಡಿಗೆ-ಊಟ ಇದರ ಬಗ್ಗೆ ಚರ್ಚೆ ಇರುವವು,ಅವುಗಳಿಗೆ ಈ ವೈರಸ್ ಕಾಡಿದೆ ಅಂದರೆ ನಿಜಕ್ಕು ಭಯ ಆಗುತ್ತದೆ.


ನನಗೂ ಅನೇಕರು ಇದನ್ನೇ ಹೇಳಿದ್ದಾರೆ, ಬ್ಲಾಗ್ ಮಾಡುವುದು ದೊಡ್ಡದಲ್ಲ, ಅದಕ್ಕೆ ಬರುವ ಕಾಮೆಂಟಗಳನ್ನು
ಉತ್ತರಿಸುವುದು ಕಷ್ತ. ಇದು ಒಂದು ಹಂತಕ್ಕೆ ನಿಜ, ಕಾಮೆಂಟುಗಳು ಚರ್ಚೆಗೆ ಮತ್ತು ಮಾಡಿದ ಪೋಸ್ತೀಗೆ ಪೂರಕ ಇದ್ದರೆ ಅದು ತಪ್ಪಲ್ಲ, ಆದರೆ ಅನವಶ್ಯವಾಗಿ ಬೇಡದ ವಿಷಯಗಳ ಬಗ್ಗೆ ಬರೆಯುವುದು, ಜಾತಿ ಎಳೆದು ತರುವುದು ಆದರೆ ನಿಜಕ್ಕೂ ಅಸಹ್ಯ.

ಹಾಗಾದರೆ ಕಾಮೆಂಟ್ ಬೇಡವೇ ??

ನನ್ನ ಅನುಭವದಲ್ಲಿ ಎರಡರ ರುಚಿ ಉಂಡಿರುವೆ, ಮುಖ್ಯವಾಗಿ ನಮ್ಮ ಬ್ಲಾಗಿನಲ್ಲಿ ನಮ್ಮ ಲೇಖ್ಝನ ಪ್ರಕಟಗೊಂಡರೆ ನಮ್ಮ ಕೈನಲ್ಲಿ ಸೂತ್ರ ಇರುತ್ತದೆ, ನಮಗೆ ಬೇಕಾದ ಹಾಗೆ ಕಾಮೆಂಟ ಹಾಕುವ ಜನರನ್ನು ನಾವು ನಿಭಾಯಿಸಬಹುದು, ಬೇಕಾದರೆ ಅನಾನಿಮಸ್ ಸಂಪೂರ್ಣ ನಿಲ್ಲಿಸಬಹುದು ಇಲ್ಲ ಖಡ್ಡಾಯವಾಗಿ ಗೂಗಲ್ ಐಡಿ ಕೊಡುವ ಹಾಗೆ ಮಾಡಬಹುದು. ಇದರ ಮೇಲೂ ಮಾಡರೇಶನಗೆ ಅವಕಾಶ ಇರುತ್ತದೆ.

ಅದೇ ಬೇರೆ ತಾಣದಲ್ಲಿ ಪ್ರಕಟಗೊಂಡು ಅಲ್ಲಿ ಬರುವ ಕಾಮೆಂಟುಗಳನ್ನು ನಿಭಾಯಿಸುವದಕ್ಕೆ ದಿನಗಟ್ತಲೇ ಬೇಕು. ಮುಖ್ಯವಾಗಿ ಮಾಡರೇಷನ್ ಇಲ್ಲದಿದ್ದಲ್ಲಿ ಚರ್ಚೆಯನ್ನು ಎಕಬದಿಗೆ ತರುವ ಕೆಲ್ಸ ಬರೆದವರು ಮಾಡುತ್ತ ಇರಬೇಕು. ವಿಷಾಯಂತರ ಮಾಡುವುದು ಅದರಲ್ಲೂ , ಕೊಳಕು ಮಾತುಗಳನ್ನು ತೆಗೆಯುವ ಕೆಲ್ಸ ಇದೆ ಅಲ್ವ, ಆ ಕೆಲ್ಸಕ್ಕೆ ಲೇಖನ ಬರೆದಕ್ಕಿಂತಲೂ ಹೆಚ್ಚು ಸಮಯ ವ್ಯಯ ಮಾಡಬೇಕು, ಒಮ್ಮೆ ಇದಕ್ಕೆ ಇಳಿದರೆ ಚಕ್ರವ್ಯೂಹ ಇದ್ದ ಹಾಗೆ. ಉತ್ತರ ಕೊಡದಿದ್ದರೆ ಅಯ್ಯೋ ಓಡಿಹೋದ ಅನ್ನೊ ಟೀಕೆಗಳು.
ರಾತ್ರಿ ಎಲ್ಲಾ ರಾಮಾಯಣ ಕೇಳಿ ಮತ್ತೆ ರಾಮ ಯಾರು ಅಂತ ಪ್ರಶ್ನೆ ಕೇಳಿ ನಿಮ್ಮ ತಾಳ್ಮೆ ಪರೀಕ್ಷಿಸುವ
ಜನರು ಬೆಂಗಳೂರಿನ ರಸ್ತೆಯಲ್ಲಿ ಸಡನ್ ಆಗಿ ವಾಹನದ ಹಾಗೆ ಬಂದು ಮರೆಯಾಗುತ್ತಾರೆ.


ಅನೇಕ ತಾಣಗಳು ಬೇಕಂತಲೇ ತಮ್ಮ ವೆಬಸೈಟಿಗೆ ಹಿಟ್ ಹೆಚ್ಚಿಸಲು ನಕಲಿ ಕಾಮೆಂಟ್ ಹಾಕುತ್ತವೆ, ಯಾವುದಾದರೂ ಪ್ರಚಲಿತ ಲೇಖನ ಪ್ರಕಟಗೊಂಡ ಹತ್ತು ನಿಮಿಷದಲ್ಲಿ ಅದರ ಪರ,ವಿರುದ್ಧ ಅನೇಕ ಕಾಮೆಂಟ್ ಪ್ರತ್ಯಕ್ಷ ಆಗಿ ಆ ವರ್ಗದ ಜನರನ್ನು ಬೇಡವೆಂದರೂ ಸೆಳೆಯುತ್ತದೆ. ಈ ಪರ-ವಿರುದ್ಧ ಯುದ್ದದಲ್ಲಿ ಲಾಭ ಆಗುವುದು ವೆಬಸೈಟಿಗೆ ಮಾತ್ರ. ಇದೊಂದು ರೀತಿ TRP ಹೆಚ್ಚಿಸುವ ಕ್ರಿಯೆ. ಇದನ್ನು ವಿಷ್ಲೇಶಿಸುವರು ಮುಂದೆ ಇಂತಹ ವಿಷಯಗಳನ್ನೇ ಸುದ್ದಿಯನ್ನಾಗಿ ಮಾಡಿಹಾಕುತ್ತಾರೆ. ಅದರಲ್ಲಿ ಚರ್ಚೆ
ಎಷ್ಟು ಮಟ್ಟಿಗೆ ನಡೆಯತ್ತೊ ಇಲ್ಲವೋ, ಅದರಲ್ಲಿ ಬರೆದಿರುವ ಕಾಮೆಂಟುಗಳು ನಗೆ ತರಿಸುತ್ತವೆ ಇಲ್ಲ ಜನರಲ್ಲಿ ವಿಕೃತ ಸಂತೋಷ ಉಂಟು ಮಾಡುತ್ತವೆ. ಇದನ್ನೆ ಓದುವ ದೊಡ್ಡ ವರ್ಗ ಬೇರೆ ಇರುವುದು ನಿಜಕ್ಕೂ ಬೇಸರದ ಸಂಗತಿ.

ಇದಕ್ಕೆ ಅಪವಾದವಾಗಿ ಚುರುಮುರಿಯಲ್ಲಿ, ಸಂಪದದಲ್ಲಿ ಬರುವ ಕಾಮೆಂಟುಗಳು ಒಳ್ಳೆ ಚರ್ಚೆಯನ್ನು ಹುಟ್ಟುಹಾಕುತ್ತವೆ ಮತ್ತು
ಅನೇಕ ವಿಷಯಗಳನ್ನು ತೆರೆದಿಡುತ್ತವೆ. ಸಂಪದನಲ್ಲಿ ಸದಸ್ಯರೂ ಮಾತ್ರ ಕಾಮೆಂಟ್ ಮಾಡಬಹುದು, ಈ ರೀತಿ ಒಂದು ಹತೋಟಿ ಇರುತ್ತದೆ.

ಬ್ಲಾಗ್ ಒಂದು ಗಾಜಿನ ಮನೆ ಮತ್ತು ಇದು ಮುಕ್ತ

ಇನ್ನು ಅನೇಕ ಲೇಖನಗಳಲ್ಲಿ ಈ ರೀತಿ ಅನಾನಿಮಸ್ ಸಮಸ್ಯೆ ಯಾಕೆ ಬರುತ್ತದೆ ಎಂದರೆ, ಅವರು ಬರೆದಿರುವ ಭಾಷೆ,ಪದ ಬಳಕೆ
ಮಾಡಿರುವ ಅಪವಾದ ಮತ್ತು ಒಂದು ಪಕ್ಷೀಯ ಧೋರಣೆ ಇದು ಅನೇಕ ಸಾರಸತ್ವ ವರ್ಗಕ್ಕೆ ಜಗಳ ತರುತ್ತದೆ. ತಮ್ಮದೇ ಸರಿಯಾದ ಚಿಂತನೆ ಅಂತ ಎಡ-ಬಲ ಮಾಡಿಕೊಂಡು ವಾದಿಸುವ ಅನೇಕ ಚಿಂತನೆಗಳು ಕೊನೆಗೆ ಕೊನೆ ಕಾಣುವುದು personal attack ನಲ್ಲಿ. ಬೇರೆಯವರ ಮೇಲೆ ಹಿಗ್ಗಾಮುಗ್ಗ ಬ್ಲಾಗಿನಲ್ಲಿ ಆರೋಪ ಮಾಡುವ ಜನರು ತಾವು ಗಾಜಿನ ಮನೆಯಲ್ಲಿ ಇದ್ದೀವಿ ಅಂತ
ಮರೆಯಬಾರದು. ಅದ್ದರಿಂದ ಆ ವಿಷಯದಲ್ಲಿ ಚರ್ಚೆ ಬಂದರೆ ನಿಂತು ಉತ್ತರ ಕೊಡಬೇಕು.

ಬ್ಲಾಗ್ ಮಾಡುವುದು ನಿಮ್ಮ ಸಲುವಾಗಿ ಆಗಿದ್ದರೆ ನಿಮ್ಮದೇ ಒಂದು ತಾಣ ಮಾಡಿಕೊಂಡು, ನಿಮ್ಮ ಅಭಿಮಾನಿ ವರ್ಗಕ್ಕೆ ಮಾತ್ರ ಅನುಮತಿ ಕೊಟ್ಟು ಓದಿಸಿ, ಮುಕ್ತ ಇಂಟರನೆಟ್ಟಿನಲ್ಲಿ ಹಾಕಿದರೆ ಅದನ್ನು ಓದುವ ಹಕ್ಕು ಎಲ್ಲರಿಗೂ ಇರುತ್ತದೆ, ಕೇವಲ ಒಂದು ಪೋಸ್ಟ ಹಾಕಿ ನನ್ನ ಕೆಲ್ಸ ಮುಗೀತು ಅಂತ ಕೂರುವದಕ್ಕೆ ಆಗುವದಿಲ್ಲ.


ಇದು ಹಿಂದಿನ ಕಾಲ ಅಲ್ಲ

ಪೇಪರ್ ಇಂದ ಅನೇಕ ಪತ್ರಕರ್ತರು ಬ್ಲಾಗಿಗೆ ಹಾರಿದ್ದಾರೆ, ಈ ಕಾಮೆಂಟಗಳ ತೊಂದರೆಯಲ್ಲಿ ಸಿಕ್ಕಿರುವುದು ಇವರೇ. ಇದಕ್ಕೆ ಉತ್ತರ ಬಹಳ ಸುಲಭ, ಮುಕ್ಕಾಲು ಜನ ಪೇಪರಿನಲ್ಲಿ ಪ್ರಕಟ ಆಗುವ ತಮ್ಮ ಅಂಕಣಗಳನ್ನು ಬ್ಲಾಗಿಗೆ ಹಾಕುತ್ತ ಇದ್ದಾರೆ ಜೊತೆಗೆ ಬೇರೆ ಲೇಖನಗಳನ್ನು ಸೇರಿಸುತ್ತಾರೆ. ಪೇಪರಿನಲ್ಲಿ ಬರೆದ ಲೇಖನಗಳಿಗೆ ಒಬ್ಬ ಸಾಮಾನ್ಯ ಓದುಗ ಉತ್ತರ ಬರೆಯಬೇಕು ಇಲ್ಲ ಅದು ಚರ್ಚೆಗೆ ಒಳಗಾಗಬೇಕು ಅಂತ ಮಾಡಬೇಕಿದ್ದರೆ ಪತ್ರ ಬರೆದು, ಅದನ್ನು ಪೋಸ್ತಿನಲ್ಲಿ ಹಾಕಿ ಮುಂದು ಒಂದು ದಿನ ಅದು ಕಬು ಗೆ ಹೋಗಿಲ್ಲವೆಂದರೆ ಉತ್ತರ ಸಿಗಬಹುದಿತ್ತು. ಆದರೆ ಇಗ ಅದು ೫ ನಿಮಿಷದ ಕೆಲ್ಸ, ಜನ ತಮ್ಮ ಅಭಿಪ್ರಾಯಗಳನ್ನು ಬಹಳ ಸುಲಭವಾಗಿ ವ್ಯಕ್ತ ಪಡಿಸಬಹುದು. ಅವುಗಳಿಗೆ ಉತ್ತರ ಕೊಡುವ ಸಮಯ ಹೊಂದಿಸುವುದೇ ಅನೇಕರ ಸಮಸ್ಯೆ ಅಂತ ನನ್ನ ಅಭಿಪ್ರಾಯ. ಮುಕ್ತ ಇಂಟರಿನೆಟ್ಟಿನಲ್ಲಿ ಜನ ಲೇಖಕರ ವಿಚಾರಧಾರೆಯನ್ನೆ ಪ್ರಶ್ನೆ ಮಾಡಬಹುದು, ಇದು ಅನೇಕರಿಗೆ ಅಪಥ್ಯ. ಅದಕ್ಕೆ
ಅಯ್ಯೊ ಇದರ ಸಹವಾಸವೇ ಬೇಡಪ್ಪ ಅಂತ ದೂರ ಸರಿಯುತ್ತಾರೆ.


ಉಘೇ ಉಘೇ ಕಮ್ಮಿ ಆಗಿ ಚರ್ಚೆಯ ಆಸ್ಪದ ಇರಬೇಕು

ಆದರೆ ಅನೇಕ ಬ್ಲಾಗಿನಲ್ಲಿ ಬರುವ ಲೇಖನಗಳು ತಾವು ಬರೆದಿರುವುದೇ ಸತ್ಯ ಅನ್ನೊ ದೋರಣೆಯಲ್ಲಿ, ಚರ್ಚೆಗೆ ಅವಕಾಶ ಕೊಡದ ರೀತಿಯಲ್ಲಿ ಬರುತ್ತದೆ. ಮುಕ್ಕಾಲು ಭಾಗ ಕಾಮೆಂಟುಗಳನ್ನು ನೋಡಿದರೆ ಅವರದೇ ಒಂದು ಸಿಂಡಿಕೇಟ್ ಉಘೇ ಉಘೇ ಮಾಡುತ್ತ ಇರುತ್ತದೆ, ಎಲ್ಲೊ ಒಂದು ಕಡೆ ನಿನಗೆ ನಾನು ಹೊಗಳುತ್ತೆನೆ ನನಗೆ ನೀನು ಹೊಗಳು ಅನ್ನೊ ಮಾದರಿಯಲ್ಲಿ. ಒಟ್ಟಿನಲ್ಲಿ ಎಕಪಕ್ಷೀಯವಾಗಿ ಅವರ ವಿಚಾರಧಾರೆಗಳನ್ನು ಹರಿಸುತ್ತವೆ. ಅಲ್ಲಿ ಕಾಮೆಂಟನ್ನು ಹೊಗಳಿ ಬರೆದರೆ ಮಾತ್ರ ಪ್ರಕಟಿಸುತ್ತಾರೆ, ಅದೇ ಚರ್ಚಾರೂಪದಲ್ಲಿ ಹಾಕಿದರೆ ತಲೆಯು ಕೆಡಿಸಿಕೊಳ್ಳುವದಿಲ್ಲ

ಉತ್ತಮ ಕಾಮೆಂಟುಗಳಿಂದ ಕಲಿಯಬಹುದು

ಅನೇಕ ನನಗೆ ಬಂದ ಕಾಮೆಂಟುಗಳು ನನ್ನ ವಿರೋಧಿ ಆಗೇ ಇದ್ದವೇ,ಅನೇಕ ಕಡೆ ನನಗೆ ನಾನು ಮಾಡಿದ ತಪ್ಪನ್ನು ಸರಿ ಪಡಿಸಿದ್ದಾರೆ ಅನಾನಿಮಸ್ ಓದುಗರು, ಇನ್ನ ಅನೇಕ ಬಾರಿ we agree to disagree ಅನ್ನೊ ಒಪ್ಪಂದಕ್ಕೆ ಬಂದಿದ್ದೇವೆ. ಇನ್ನು ನಾವು ಬರೆದ ಪೋಸ್ತಿಗೆ ಉತ್ತರವಾಗಿ ಅನೇಕರು ಬ್ಲಾಗ್ ಹಾಕಿ ತಮ್ಮ ಅಭಿಪ್ರಾಯ ಹಾಕಿರುವುದು ನಾವು ನೋಡಿರುತ್ತೆವೆ.ಅದ್ದರಿಂದ ಸರಸಗಾಟಾಗಿ ವ್ಯವಸ್ಥೆಯನ್ನು ತೆಗಳುವದನ್ನು ಬಿಟ್ಟು ಅದನ್ನು ಬಳಸುವ ಬಗ್ಗೆ ನಮ್ಮ ಬ್ಲಾಗಿಗರು ಗಮನ ಹರಿಸಬೇಕು.

Friday, August 21, 2009

ಕರ್ನಾಟಕದ ಮತ್ತೊಂದು ಮರುಚುನಾವಣೆ-ವಿಶ್ಲೇಷಣೆ

ಕರ್ನಾಟಕದ ಮರುಚುನಾವಣೆ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ತಂದಿದೆ, ಜೆಡಿಎಸ್ ಬಿಟ್ಟರೆ ಎಲ್ಲಾ ಮತ್ತೊಮ್ಮೆ ಆತ್ಮಾವಲೋಕನ ಮತ್ತು ಚಿಂತನಾ ಸಭೆ ನಡೆಸಿ ಎಲ್ಲಿ ಎಡೆವಿದೆವೂ ಅಂತ ಪರಮರ್ಶೆ ಮಾಡಬೇಕಾಗಿದೆ. ಫಲಿತಾಂಶವನ್ನು ರಾಜಕರಣಿ ನೋಡಿದರೆ ಯೋಗಿರಾಜ್ ಭಟ್ಟರ ಡೈಲಾಗ್ ಹೋಡಿಬಹುದು, ಕನ್ನಡ ಜನರನ್ನು ಅರ್ಥ ಮಾಡಿಕೊಳ್ಳುವುದು ಕಷ್ತ. ಲೋಕಸಭೆಯಲ್ಲಿ ಕೊಟ್ಟ ಟ್ರೆಂಡಿಗೂ ಈ ಚುನಾವಣೆಯಲ್ಲಿ ಕೊಟ್ಟ ಟ್ರೆಂಡಿಗೂ ಅಜಗಜಾಂತರ ವ್ಯತ್ಯಾಸ ತಂದಿದೆ.

ಕ್ರಿಕೆಟ್ಟಿನಲ್ಲಿ ಧೋನಿ,ಗಂಭೀರ್,ಯುವರಾಜ್ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ ಅಂತ ಹೋಗಿ ಅವರೆಲ್ಲಾ ಡಕ್ ಹೊಡೆದು,ಇಶಾಂತ್ ಶರ್ಮ ಸೆಂಚುರಿ ಬಾರಿಸಿದರೆ ಆಗುವ ಶಾಕ್ ರಾಷ್ಟ್ರೀಯ ಪಕ್ಷಗಳಿಗೆ ಆಗಿದೆ. ತಾವೂ ಗೆದ್ದೆ ಗೆಲ್ಲುತ್ತೆವೆ ಅಂತ ಬೀಗಿದ ಕಡೆ ಸೋತು, ಸೋತರೂ ಓಕೆ ಅನ್ನೊ ಕಡೆ ಗೆದ್ದಿರುವುದು ಎಲ್ಲೊ ಅವರಿಗೆ ಖುಷಿ ಪಡಬೇಕೊ ಇಲ್ಲ ಬೇಜಾರು ಮಾಡ್ಕೊಬೇಕೊ ಅಂತ ತಿಳಿಯದಾಗಿದೆ.

ಎಕೋ ಹೀಗಾಯ್ತೋ ನಾನು ಕಾಣೆನೂ ...

ಜಾತಿ ಲೆಕ್ಕಾಚಾರ, ಅಭಿವೃದ್ದಿ ಮಂತ್ರ, ಮಠಾಧೀಪತಿಗಳ ಆಶೀರ್ವಾದ, ಲೋಕಸಬಾ ಚುನಾವಣೆ ಫಲಿತಾಂಶ, ಪಕ್ಷ ಹೊಂದಾಣಿಕೆ ಹೀಗೆ ಹತ್ತು ಹಲವಾರು ಅಂಶಗಳನ್ನು ಇಟ್ಟುಕೊಂಡೆ ಎಲ್ಲಾ ಪಕ್ಷಗಳು ಕಸರತ್ತು ಮಾಡಿದ್ದು, ಆದರೆ ಎಲ್ಲೊ ಒಂದು ಕಡೆ ಲೋಕಸಭಾ ಚುನಾವಣೆಯ ಫಲಿತಾಂಶ, ಹಿಂದಿನ ಅಂಕಿ ಅಂಶ ಅತಿಯಾಗಿ ಆತ್ಮವಿಶ್ವಾಸ ಬೆಳಸಿದ್ದವು. ಅದನ್ನು ಮತದಾರ ಸಾರಸಗಟಾಗಿ ಮುರಿದಿದ್ದಾನೆ. ಇವತ್ತಿನ ವಿದ್ಯಮಾನದಲ್ಲಿ ಪಕ್ಷಹೊಂದಾಣಿಕೆ ಬಹಳ ದೊಡ್ಡ ಅಂಶ ಆಗಿ ನಿಂತಿದೆ, ಬರೀ ಒಳ್ಳೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಸಾಲದು, ನಿಮ್ಮ ಎದುರಾಳಿಯ ಮತಗಳನ್ನು ಕಸಿಯುವ ಇನ್ನೊಬ್ಬನನ್ನು ಬೇರೆ ಪಕ್ಷದಿಂದ ಗೆಲ್ಲಿಸಬೇಕು, ಎಕೆಂದರೆ ನಾವು ನೋಡಿದ ಹಾಗೆ ಎಲ್ಲೂ ತ್ರಿಕೋನ ಸ್ಪರ್ಧೆ ಆಗಿಲ್ಲ. ಈ ನಿಟ್ಟಿನಲ್ಲಿ ಅದರಲ್ಲೂ ಮೀಸಲು ಕ್ಷೇತ್ರದಲ್ಲಿ ಬಿ.ಎಸ್.ಪಿ ಬಹಳ ಚೆನ್ನಾಗಿ ಕೆಲ್ಸ ಮಾಡಿದೆ. ಮತಗಳನ್ನು ಒಡೆದು ಗೆಲುವಿನ ಅಂತರವನ್ನು ಎರುಪೇರು ಮಾಡುವ ಸಾಮರ್ಥ್ಯ ಬಹಳ ಚೆನ್ನಾಗಿ ಗಳಿಸಿದೆ. ಒಂದು ರೀತಿಯಲ್ಲಿ ನೇರ ಹಣಾಹಣಿಯಲ್ಲಿ ಕೊನೆಯ ನಿರ್ಣಾಯಕ ಅಂಶ ಬಿ.ಎಸ್.ಪಿಯದೇ ಅಂದರೆ ತಪ್ಪಾಗಲಾರದು.

ಚಿತ್ತಾಪುರದಲ್ಲಿ ನೋಡಿ, ಕಾಂಗ್ರೆಸ್+ ಜೆಡಿಎಸ್ ಮತ ಬಿಜೆಪಿಯನ್ನು ಸೋಲಿಸುತ್ತ ಇತ್ತು. ಆದರೇ ಅತಿವಿಶ್ವಾಸದಿಂದ ಕಾಂಗ್ರೆಸ್ ಸೋಲು ಅನುಭವಿಸಿದೆ. ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ನ ಸೋಲಿಸಿದ್ದು ಮತ್ತು ಗೆಲುವಿನ ಅಂತರ ಎರುಪೇರು ಮಾಡಿದ್ದು ಸುಭಾಷ್ ಭರಣಿ. ಆ ಮತಗಳು ಕಾಂಗ್ರೆಸಿನದ್ದೆ ಹೆಚ್ಚು.



ಇನ್ನ ಗೊವಿಂದರಾಜನಗರಕ್ಕೆ ಬಂದರೆ, ಸೋಮಣ್ಣಗೆ ಅನೇಕ ವಿಷಯಗಳಲ್ಲಿ ಹೊಡೆತ ಬಿತ್ತು. ತಿರುವಳ್ಳುವವರ್ ಪ್ರತಿಮೆ, ಕನ್ನಡಿಗರನ್ನು ಜೈಲಿಗೆ ಹಾಕಿದ್ದು, ಒಕ್ಕಲಿಗರ ಓಟು ಒಟ್ಟಾಗಿ ಕೆಲಸ ಮಾಡಿದ್ದು, ಕೊನೆ ಕ್ಷಣ ತನಕ ಶಿಷ್ಯಂದಿರ ಮನ ಓಲಿಕೆ, ಒಳಗೊಳಗೆ ನಡೆದ ಪಕ್ಷದ ಮಸಲತ್ತು, ಮುಜರಾಯಿ ಇಲಾಖೆಯ ಶಾಪ, ಮುಖ್ಯವಾಗಿ ಜೆಡಿಎಸ್ ಅದರಲ್ಲೂ ಗೌಡರ ತಂತ್ರ..

ಕಾಂಗ್ರೆಸ್ ಕಥೆ

ಕಾಂಗ್ರೆಸ್ ಪ್ರತಿ ಬಾರಿ ಎಲ್ಲಾ ನಾಯಕರನ್ನು ಜೊತೆ ಮಾಡಿಕೊಂಡು ಚುನಾವಣೆ ಎದುರಿಸುತ್ತೆವೆ ಅಂತ ಹೇಳುವುದು, ಹೀನಾಯ ಸೋಲು ಅನುಭವಿಸುವುದು , ನಾವು ನೈತಿಕೆ ಹೊಣೆ ಹೋರುತ್ತೆವೆ ಅಂತ ಹೇಳುವ ಮಾತು ತುಂಬಾ ಸರ್ವಸಾಮನ್ಯ ಆಗಿದೆ. ಕಾಂಗ್ರೆಸ್ ಒಳ್ಳೆ READ MADRID ಪುಟಬಾಲ್ ತಂಡ ಇದ್ದ ಹಾಗೆ, ಅದರಲ್ಲಿ ಇರುವ ಫಟಾನುಘಟಿ ನಾಯಕರು ಬೇರೆ ಎಲ್ಲೂ ಸಿಗುವದಿಲ್ಲ, ಅವರಿಗೆ ಇರುವ ಅನುಭವ, ಶಿಷ್ಯವೃಂದದ ಅನಕೂಲದ ಲಾಭ ಪಡೆಯುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ.

ಅಪರೇಷನ್ ಕಮಲ


ಬಿಜೆಪಿಗೆ ಇದು ಮಿಶ್ರ ಫಲಿತಾಂಶ, ಅನೇಕ ಕಡೆ ಬಿಜೆಪಿ ಖ್ತಾತೆ ತೆರೆದಿದೆ, ಜನರಿಗೆ ಒಮ್ಮೆ ಇವರಿಗೂ ಕೊಟ್ಟು ನೋಡೊಣ ಅನ್ನೊ ಮನಸ್ಸು ಬಂದಿದೆ,ಅದರಲ್ಲೂ ಹಿಂದುಳಿದ ಮಿಸಲು ಕ್ಷೇತ್ರದಲ್ಲಿ ಗೆದ್ದಿರುವುದು ಸಂತೋಷದ ವಿಷಯ ಅವರಿಗೆ, ಮುಂದೆ ಇದಕ್ಕೆ ಹೆಚ್ಚು ಒತ್ತು ಕೊಟ್ಟರೆ ಕೇವಲ ಮುಂದುವರೆದ ವರ್ಗಗಳ ಪಕ್ಷ ಅನ್ನೋ ಹಣೆಪಟ್ಟಿ ಬದಲಾಯಿಸಬಹುದು.

ಹಾಗೆ ಬಿಜೆಪಿ ತನ್ನ ಆಪರ‍ೇಷನ್ ಕಮಲದ ಬಗ್ಗೆ ಮತ್ತೊಮ್ಮೆ ಗಮನ ಕೊಡಬೇಕು, ಪ್ರಭಾವಶಾಲಿ, ತನ್ನ ಕೆಲ್ಸ ಮತ್ತು ವರ್ಚಸ್ಸಿನಿಂದ ಗೆದ್ದವರನ್ನು ಕರೆ ತರಬೇಕು, ಪಕ್ಷದ ಗುರುತಿನಲ್ಲಿ ಗೆದ್ದವರನ್ನು ತಂದು ಮತ್ತೊಮ್ಮೆ ನಿಲ್ಲಿಸಿ ಸೋತಿರುವುದು ಇದು ಮೂರನೇ ಬಾರಿ, ಎಲ್ಲಾ ಕಡೆ ಲಾಭ ಆಗಿರುವುದು ಜೆಡಿಎಸಗೆ ಅಷ್ಟೆ.

THE WINNER IS ...



ಇವೆಲ್ಲಾ ಗಮನಿಸಿದರೆ ಈ ಮರುಚುನಾವಣೆ ಜೆಡಿಎಸ್ ಗೆ ನಿಚ್ಚಳ ಗೆಲುವು ಅನ್ನಬಹುದು, ಯಾಕೆ ಅಂತ ಕೇಳುತ್ತಿರಾ ?

೧) ರಾಮನಗರದಲ್ಲಿ ಮತ್ತೆ ಪ್ರಾಬಲ್ಯ ಮರೆದರೂ, ಸಾಮನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೆವೆ ಅಂತ ಸಾಬೀತು ಮಾಡಿದರು.

೨) ಚೆನ್ನಪಟ್ಟಣದಲ್ಲೂ ಕೂಡ ಗೆದ್ದ್ದಿದ್ದು .

೩) ಗೋವಿಂದರಾಜನಗರದಲ್ಲಿ ಜೆಡಿಎಸ್ ಸಹಾಯದಿಂದಲೇ ಕಾಂಗ್ರೆಸ್ ಗೆದ್ದಿದೆ.

೪) ಚಿತ್ತಾಪುರದಲ್ಲಿ ಜೆಡಿಎಸ್ ಇಂದಲೇ ಕಾಂಗ್ರೆಸ್ ಸೋತಿದೆ.

೫) ಕೊಳ್ಳೆಗಾಲದಲ್ಲಿ ಸಿದ್ದು ಬಣಕ್ಕೆ ಸೋಲು

೩-೪ ನಲ್ಲಿ ಹೇಳಿದ ಹಾಗೆ ಜೆಡಿಎಸ್ ತನ್ನ ಅವಶ್ಯಕತೆ ಬಗ್ಗೆ ಕಾಂಗ್ರೆಸ್ ಬಹಳ ಚೆನ್ನಾಗಿ ಮನವರಿಕೆ ಮಾಡಿದೆ.

Sunday, August 09, 2009

ತಪ್ಪನ್ನು ಮತ್ತೆ ಮಾಡುವುದು ದೊಡ್ಡ ತಪ್ಪು..


ಇವತ್ತಿನ ವಿಜಯ ಕರ್ನಾಟಕದಲ್ಲಿ ೨ ದಶಕಗಳ ಹಿಂದೆಯೇ ಆಗಿತ್ತು, ಅಂದರೆ ಗುಂಡುರಾವ್,ಜನತ ಪಕ್ಷ ಇದ್ದಾಗ ಆಗಿದ್ದು
ಇವತ್ತು ಭಾಜಪ ಇದ್ದಾಗ ಆಗಿದೆ ಅದರಲ್ಲಿ ತಪ್ಪೇನು ಅನ್ನೋ ರೀತಿಯಲ್ಲಿ ಇದೆ. ಇದು ಒಂದು ಕಡೆ ಆ ರೀತಿ ಅರ್ಥ ಕೊಟ್ಟರೆ ಇನ್ನೊಂದು ಕಡೆ ನಾವೇನು ಮೊದಲ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ, ಇರುವದನ್ನೇ ಮಾಡುತ್ತ ಇದ್ದೇವೆ, ಅಲ್ಲಿ ಇದ್ದರೆ ಸರಿ ಇಲ್ಲಿ ಮಾಡಿದರೆ ತಪ್ಪೇ ಅನ್ನೊ ದಾಟಿಯಲ್ಲಿ ಇದೆ.

ದಿನ ಪ್ರಮುಖ ಎಲ್ಲ ಸುದ್ದಿಗಳನ್ನು ಪಕ್ಕಕ್ಕೆ ಇಟ್ಟು ಕೇವಲ ಮೂರ್ತಿ ಪೂಜೆ ಮಾಡುತ್ತ ಇರುವ ನಮ್ಮ ಮಾಧ್ಯಮಗಳು ಸಾರಿ ಸಾರಿ ಹೇಳುತ್ತ ಇದ್ದೀದ್ದು , ಹೇಳಿಸುತ್ತ ಇದ್ದಿದ್ದು ಒಂದೆ ?

* ಹೊಸ ಸಾಮರಸ್ಯಕ್ಕೆ ಇದು ಬುನಾದಿ.

* ಪ್ರತಿಮೆಗಳಿಂದ ನಮ್ಮ ಅಂತರ್ ರಾಜ್ಯ ಸಮಸ್ಯೆ ಬಗೆಹರಿಯೊತ್ತೆ.

* ನಾವು ಇದನ್ನು ವಿರೋಧಿಸಿ ಸಣ್ಣವರಾಗಬಾರದು.

* ತಮಿಳು ಕವಿ, ಒಬ್ಬ ದಾರ್ಶನಿಕೆ, ಅವರು ರಾಷ್ತ್ರಕ್ಕೆ ಸೇರಿದವರು.

* ಒಳ್ಳೆ ಕೆಲ್ಸ ಇದು, ಇದರಲ್ಲಿ ಬೇರೆ ಸಮಸ್ಯೆಗಳನ್ನು ತಳುಕು ಹಾಕಬಾರದು.

* ರಾಜ್ಯಗಳ ಭಾಂದವ್ಯಕ್ಕೆ ಇದು ಮುನ್ನುಡಿ ಹಾಡುತ್ತದೆ.

* ಇದು ಜನಾಭಿಪ್ರಾಯ ಮತ್ತು ಜನ ಮನ್ನಣೆ.

* ಸರ್ವಜ್ಞನ ಪ್ರತಿಮೆ ಮಾಡುತ್ತ ಇಲ್ಲವೇ, ಮತ್ತ್ನೇನು ಸಮಸ್ಯೆ.

* ಸರ್ವಜ್ಞನ ಪ್ರತಿಮೆ ಅತಿ ಒಳ್ಳೆಯ ಸ್ಥಳದಲ್ಲಿ ನಡೆಯುತ್ತಿದೆ.

* ಇದನ್ನು ವಿರೋಧಿಸುವವರು ಭಯೋತ್ಪಾದಕರು.

ಹೀಗೆ ಇದನ್ನು ವಿರೋಧಿಸುವ ಜನರಿಗೆ ಪುಂಖಾನುಪುಂಖವಾಗಿ ಬುದ್ಧಿವಾದ ಹೇಳಲಾಯಿತು. ಪ್ರತಿ ಬಾರಿ ಸಮರ್ಥನೆ ಎಲ್ಲಿಂದ ಎಲ್ಲಿಗೋ ಸಾಗುತ್ತಿತ್ತು. ಸಮಾನ ಗೌರವ ಮತ್ತು ಈಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಇಡೊಣ, ಚರಿತ್ರೆ ಇಂದ ಪಾಠ ಕಲಿಯೋಣ ಅನ್ನೊ ಕನ್ನಡ ಸಂಘಟನೆಗಳ ಮಾತುಗಳು ಎಲ್ಲರ ಕಿವಿಗೆ ಬೀಳಲೆ ಇಲ್ಲ.

ಒಳ್ಳೆ ಗಿಳಿಪಾಠ ಹೇಳಿದ ಹಾಗೆ ಇದು ಅಂತರ್ ರಾಜ್ಯದ ಬ್ಭಾಂದವ್ಯಕ್ಕೆ ಸಾಕ್ಷಿ, ತಿರುವಳ್ಳುವರ್ ಪ್ರತಿಮೆ ಆದರೆ ಮಾತ್ರ್ ನಮ್ಮ ರಾಜ್ಯಗಳ ಮಧ್ಯೆ ಉತ್ತಮ ಸಾಮರಸ್ಯ ಬರುತ್ತದೆ ಎಂದು ಪ್ರಾಯೋಜಿತ ಲೇಖನಗಳನ್ನು ಎಲ್ಲ ಪತ್ರಿಕೆ-ಮಾಧ್ಯಮಗಳು ಮಾಡಿದವು.
ಇದು ಉತ್ತಮ ಹೆಜ್ಜೆ, ಅಟಲ್ ಸರಕಾರದಲ್ಲಿ ಪಾಕಿಸ್ತಾನಕ್ಕೆ ರೈಲು ಬಿಟ್ಟಿಲ್ವಾ ಅಂತ ಉಧಾಹರ್ಣೆ ಬೇರೆ ಕೊಟ್ಟಿದ್ದರು. ಇವತ್ತು ಅದೇ ಜನ ಹಿಂದೆ ದಶಕಗಳ ಹಿಂದೆ ಪ್ರತಿಮೆ ಆಗಿತ್ತು ಅಂತ ಹೇಳಿವೆ.

ಈ ಮಾಧ್ಯಮ ಗೆಳೆಯರಿಗೆ ಕೇಳುವುದು ಇಷ್ಟೆ.

೨ ದಶಕಗಳ ಕೆಳಗೆ ನಾವು ಶರತ್ತು ಇಲ್ಲದೇ, ಪ್ರತಿಮೆಗಳನ್ನು ಬಿಟ್ಟಿದ್ದೆವು. ಸಾಮರಸ್ಯ ತೋರಿಸಿದ್ದೆವು. ನೀವು ಹೇಳುವ ಹಾಗೆ ಸಣ್ಣತನವನ್ನು ಪಕ್ಕಕ್ಕೆ ಇರಿಸಿ ಮುನ್ನುಡಿ ಹಾಡಿದ್ದೆವು, ಆದರೆ ೨೦ ವರುಷಗಳಲ್ಲಿ ಎನಾಗಿದೆ ಸ್ವಾಮಿ ?

* ಕಾವೇರಿಗೆ ಗಲಾಟೆ.
* ನಮ್ಮ ನದಿ ನೀರ ಪಾಲನ್ನು ಬಲವಂತವಾಗಿ ಪಡೆದಿರುವುದು.
* ವಿದ್ಯುತ್ ಹಂಚಿಕೆ ಅನುಪಾತದಲ್ಲಿ ಮೋಸ.
* ರೈಲು ಮತ್ತು ರಸ್ತೆ ಸಂಚಾರದಲ್ಲಿ ನಮ್ಮ ಪಾಲಿನ್ನು ಕಸಿದಿರುವುದು.
* ಶಾಸ್ತ್ರೀಯ ಭಾಷೆಗೆ ಅಡ್ಡಿ.
* ನಮ್ಮ ಜಲಾಶಯಗಳ ವಿರುದ್ಧ್ಜ ದೂರು.
* ಅಕ್ರಮವಾಗಿ ಹೊಗೆನೆಕಲ ನಲ್ಲಿ ಜಲಾಶಯ ನಿರ್ಮಾಣ.
* ಡಾ.ರಾಜ್ ಅಪಹರಣ
* ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಒತ್ತಾಯ
* ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ.
* ಕನ್ನಡ ಚಿತ್ರಗಳನ್ನು ಮತ್ತು ಕನ್ನಡ ವಾಹಿನಿಗಳನ್ನು ಪ್ರಸಾರ ಮಾಡದಿರುವುದು

ಸಾಕೇ ಇನ್ನೂ ಬೇಕೆ ??.. The biggest mistake of all, attempting for new same old mistake.






Saturday, August 08, 2009

ಶೀರ್ಷಿಕೆ ಇಲ್ಲದ ಕವಿತೆ




ನಾನು ಯಾರು ?

ನಲ್ಲ ಕಾತುರದಲ್ಲಿ, ಆತುರಲ್ಲಿ ಬಾಗಿಲನ್ನು ತಟ್ಟಿದ
ಯಾರದು ಎಂದು ಒಳಗಿನಿಂದ ಮಧುರ ದನಿ
ನಾನು ಎಂದ ನಲ್ಲ.
ಹೋಗಾಚೆ, ಈ ಮನೆಯಲ್ಲಿ ನನಗೆ ನಿನಗೆ ಅಂತ ಇಲ್ಲ
ದು:ಖತಪ್ತನಾಗಿ ಊರುರು ಅಲೆದಾ,ಸುತ್ತಿದ, ಬಳಲಿದ
ಕೊನೆಗೆ ಮತ್ತೆ ಬಂದು ಬಾಗಿಲು ತಟ್ಟಿದ
ಯಾರದು ??
ನಿನ್ನ ಪ್ರೀತಿ ಎಂದ, ಬಾಗಿಲು ತೆರೆಯಿತು.



ಕ್ಷಮೆ

ಸದಾ ನನ್ನ ತಪ್ಪನ್ನೇ ಕೆದಕುತ್ತ ಇರುವೆಯಲ್ಲ,
ನೀನು ಕ್ಷಮಿಸಿದ್ದೀಯಾ, ಮರೆತಿದ್ದೀಯಾ ಅಂತ ಅಂದುಕೊಂಡಿರುವೆ
ಎಂದ ಗಂಡ

ಹೌದು, ಆದರೆ ನೀನು ಕ್ಷಮಿಸಿದ್ದೀನಿ, ಮರೆತಿದ್ದೀನಿ
ಎಂಬುದನ್ನು ಮರೆಯಬಾರದು
ಎಂದು ಹೇಳಿದಳು ಹೆಂಡತಿ.

ಶ್ರೀಮಂತಿಕೆ

ಹಗಲು ರಾತ್ರಿ ದುಡಿಯುವೆ, ಬೆವರು ಹರಿಸುವೆ
ಒಂದು ದಿನ ನಾವು ಶ್ರೀಮಂತರಾಗುತ್ತೆವೆ ಚಿನ್ನ ಎಂದ ಗಂಡ,

ನಾವು ಶ್ರೀಮಂತರೇ, ನಿನಗೆ ನಾನು, ನನಗೆ ನೀನು, ನಮಗೆ ಪ್ರೀತಿ ಇದೆ
ಮುಂದೊಂದು ದಿನ ಅದರ ಜೊತೆ ದುಡ್ಡು ಬರಬಹುದು ಅಷ್ತೆ ಎಂದಳು ಹೆಂಡತಿ

Thursday, August 06, 2009

SWINE FLU-Interesting facts...


371-D ಮತ್ತು ಹೈದರಬಾದ್ ಕರ್ನಾಟಕ


371-2 ಹೆಚ್ಚು ಲಾಭವಿಲ್ಲ, ಅದ್ದರಿಂದ ೩೭೧-ಡಿ ಗೆ ಬದಲಾವಣೆ ತಂದು, ಅದರ ಮುಖಾಂತರ ಹೆಚ್ಚಿನ ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಸರಕಾರಿ ನೌಕರಿಗಳಲ್ಲಿ ಮಿಸಲಾತಿ ಹೆಚ್ಚಿನದು ಸಿಗಬೇಕು, ಇದು ತೆಲಂಗಾಣ ಮಾದರಿಯಲ್ಲಿ ಇರಬೇಕು, ವಿಧರ್ಬ ಮಾದರಿಯಲ್ಲಿ ಅಲ್ಲ ಅನ್ನುವ ಮುಖ್ಯಮಂತ್ರಿ ಯಡಿಯುರಪ್ಪ ಅವರ ಮಾತುಗಳು ಸರಿಯಾಗಿದೆ.
ನಿನ್ನೆ ದೆಹಲಿಯಲ್ಲಿ ನಮ್ಮ ಎಲ್ಲ ಸರಕಾರದ ಜನ ಮತ್ತು ಸಂಸದರು ಬೇಟಿ ಮಾಡಿ, ಚರ್ಚೆ ಮಾಡಿದ್ದು ಬಹಳ ಉತ್ತಮ ಬೆಳವಣಿಗೆ, ಪಕ್ಷ ಭೇದ ಮರೆತು ಹೀಗೆ ಕೆಲ್ಸ ಮಾಡಿದ್ದಲ್ಲಿ ನಮಗೆ ಬರಬೇಕಾದ ಸವಲತ್ತು ಬರುತ್ತದೆ ಮತ್ತು ಮಲತಾಯಿ ಧೋರಣೆ ತಪ್ಪುತ್ತದೆ.
ಅತ್ತ ಮಗುವಿಗೆ ಅಲ್ಲವೇ ಅಮ್ಮ ಹಾಲುಣಿಸುವುದು ...


ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡ ...

ಬೆಳಿಗ್ಗೆ ಎದ್ದ ಕೂಡಲೇ ವಿಕ ಓದದೇ, ಕಾಫಿ ಕುಡಿಯದೇ ದಿನ ಆರಂಭಿಸುವದಿಲ್ಲ. ಇವತ್ತು ಮುಖಪುಟದಲ್ಲಿ ಮತ್ತೊಂದು ಪ್ರಾಯೋಜಿತ ಲೇಖನ ಮತ್ತು ಬಾಕ್ಸ ಐ.ಟಂನಲ್ಲಿ ಬುದ್ದಿವಾದ ಬೇರೆ ಹೇಳಿದ್ದಾರೆ, ಇದನ್ನು ನೋಡಿ ನಗು ಬಂತು

* ಲೇಖನವನ್ನು ಹೊಗಳೀಯೇ ಬರೆಯಬೇಕು ಅಂತ ಹೊರ‍ಟಿದ್ದ ಹಾಗಿದ್ದ ಕಾರಣ, ಪೂರ್ವದಲ್ಲಿ ಇರುವ ಬೇವಿನ ಮರ, ಮೇಲೆ ಇರುವ ನೀಲಾಕಾಶ, ಉತ್ತರದಲ್ಲಿ ಇರುವ ಕನ್ನಡ ಶಾಲೆ, ಆಲ್ಲಿಂದ ಕೇಳಿ ಬರುವ ಕನ್ನಡ ಮಾತುಗಳು, ಅದಕ್ಕೆ ದನಿಗೂಡಿಸುವ ಹಕ್ಕಿಗಳ ಕಲರವ ಎಲ್ಲವೂ ಕಂಡಿದೆ. ಅಪರೂಪದ ಈ ತಾಣ ಪಡೆಯಲು ನಾವು ಪುಣ್ತ್ಯ ಮಾಡಿರಬೇಕು ಬಿಡಿ, ಪಾಪ ಯಾಕೋ ದಕ್ಷಿಣದಲ್ಲಿ ಸಮುದ್ರದ ಅಲೆ,ಉಕ್ಕಿ ಹರಿಯುವ ಭೋರ್ಗೆರತ ವಿಮರ್ಶಕರಿಗೆ ಬೀಳದೆ ಇದ್ದಿದ್ದು ಆಶ್ಚರ್ಯವೇ ಸರಿ.

ಅಬ್ಬಾ ಕನ್ನಡಿಗನಿಗೆ ಅದರಲ್ಲು ಸರ್ವಜ್ಞನಿಗೆ ಎನು ಬೇಕು ಕೇಳಿ. ಇದನ್ನು ಓದಿ ಅನೇಕ ಕನ್ನಡಿಗರಿಗೆ ಇದ್ದ ಆತಂಕ ಮರೆಯಾಯಿತು ಬಿಡಿ. ಇನ್ನು ಒಂದು ವಾರ ಪೋಲಿಸರ ಸರ್ಪಗಾವಲು ಇದಕ್ಕೆ ಬೇರೆ,

ಇದು ಎಲ್ಲೊ ದೇವಿಶೆಟ್ಟಿ ಮಹೇಶ್ ಬರೆಯುವ ಚಿತ್ರ ವಿಮರ್ಶೆ ಇದ್ದ ಹಾಗೆ ಇದೆ ಅನಿಸೊದು ಸಹಜವೇ, ಅದರಲ್ಲು ಇದೇ ರೀತಿ
ಶಿವಾಜಿ ಚಿತ್ರದ ಪ್ರಯೋಜಿತ ಲೇಖನ ನೆನಪಿಗೆ ನಿಮಗೆ ಬಂದರೆ ಅದು ನಿಮ್ಮ ಅತೀ ಜ್ಞಾಪಕದ ರೋಗ ಅಷ್ಟೆ.

ಇದನ್ನು ಮುಖಪುಟದಲ್ಲಿ ಹಾತೊರೆದು ಪ್ರತ್ಯಕ್ಷ ವರದಿ ಎಂದು ಪ್ರಕಟಿಸಿರುವ ಕನ್ನಡಿಗರ ಹೆಮ್ಮೆಯ ಪತ್ರಿಕೆಗೆ, ಮತ್ತೊಂದು ರಾಜ್ಯಗಳ ಭಾಂದವ್ಯ ಬೆಸೆಯುವ ,ರಚನಾತ್ಮಕ ಕಾರ್ಯ ಕಾಣಲಿಲ್ಲ ಅನಿಸೊತ್ತೆ. ಕೊನೆಗೆ ಪುಟದವರೆಗೂ ಹುಡುಕಿದೆ, ಆದರೆ ಎಲ್ಲೂ ಅದರ ಬಗ್ಗೆ ಚಕಾರ ಇಲ್ಲ...






* ನಮ್ಮ ಭಾಂದವ್ಯ ಬೆಸಯಲು ಹೊರಟ ತಮಿಳುನಾಡು ಸರಕಾರ ನಮ್ಮ ೩ ಜಲಾಶಯಗಳ ವಿರುದ್ಧ ತಕರಾರು ಅರ್ಜಿ ಸಲ್ಲಿಸಿತ್ತು, ಅದು ಹಿಯರಿಂಗ ಬಂದಿದೆ, ಯಾಕೆ ಅಂದರೆ ತಮಿಳರಿಗೆ ಅದಷ್ಟು ಬೇಗ ಇದನ್ನು ಪರಿಹರಿಸಬೇಕು , ತಮಿಳರಿಗೆ ಆದ ಅನ್ಯಾಯವನ್ನು
ಸರಿ ಮಾಡಬೇಕು ಅಂತ ಕಾಳಜಿ ಇದೆ. ಇದು ನಮ್ಮ ಕನ್ನಡದ ಒಂದು ಪತ್ರಿಕೆಯಲ್ಲಿ ಪ್ರಕಟಿಸದೇ ಕನ್ನಡಿಗರನ್ನು
ಕತ್ತಲೆಯಲ್ಲಿ ಇಟ್ಟು , ನಮ್ಮ ಕನ್ನಡ ಹೋರಾಟಗಾರರಿಗೆ ಬುದ್ಧಿ ಹೇಳಲು ಹೋರಟಿದ್ದಾರೆ.



* ೯೫% ಪ್ರತಿಶತ ಜನರ ಬೆಂಬಲ ಇದೆ, ಇದು ಜನಮನ್ನಣೆ ಅನ್ನೊ ಮಾತುಗಳನ್ನು ಓದುತ್ತ ಇದ್ದೇವೆ, ಹಾಗಿದ್ದಲ್ಲಿ ಯಾಕೆ ಬೇಕು ಈ ಪ್ರಾಯೋಜಿತ ಲೇಖನಗಳು ಮತ್ತು ಮಹನೀಯರ ಉಕ್ತಿಗಳು. ಅಷ್ಟಕ್ಕು ೫% ವಿರೋಧಿಸುತ್ತ ಇರುವರ ಬಗ್ಗೆ ಯಾಕೆ ಬುದ್ಧಿವಾದ ಹೇಳಬೇಕು ಇಲ್ಲ ಅವರ ಬಗ್ಗೆ ತಲೆ ಕೆಡಿಸಿಕೊಳ್ಲಬೇಕು ಅಂತ ಅರ್ಥ ಆಗುತ್ತಿಲ್ಲ.

ಇದಕ್ಕೆ ಹೇಳುವುದು ಪ್ರತ್ಯಕ್ಶವಾಗಿ ಕಂಡರೂ ಪ್ರಮಾಣಿಸಿ ನೊಡಬೇಕು ಅಂತ ..

ಅದನ್ನು ಅಯನಾವರಂನಲ್ಲಿ ಯಾಕೆ ಬೇಡ? ಅಂತ ಅವಿ ಬಹಳ ಚೆನ್ನಾಗಿ ಹೇಳಿದ್ದಾರೆ...

ಓದುವಾದಗಳೇಕೆ | ಗಾದೆಯ ಮಾತೇಕೆ

ವೇದ-ಪುರಾಣ ನಿನಗೇಕೆ - ಲಿಂಗದ

ಹಾದಿಯನರಿದವಗೆ ಸರ್ವಜ್ಞ

ಭಾಷ ಅಲ್ಪ ಸಂಖ್ಯಾತರ ಒಲೈಕೆ- ಹೊಸ ಮಂತ್ರ

ಇತ್ತಿಚಿಗೆ ನಡೆಯುತ್ತಿರುವ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ,ಅದರಲ್ಲೂ ಬೇರೆ ಭಾಷಿಕರನ್ನು ಮುಖ್ಯವಾಹಿನಿಗೆ ಸೇರಲು ಬಿಡದೆ ಅವರನ್ನು ಹಾಗೆ ಇರುವ ಹಾಗೆ ಮಾಡಿ, ಅವರನ್ನು ವೋಟಬ್ಯಾಂಕಾಗಿ ಪರಿವರ್ತಿಸುವ ಕೆಲ್ಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ.ಇದು ಒಂದು ಕಡೆ ಮತ ರಾಜಕಾರಣ ಅನಿಸಿದರೆ ಇನ್ನೊಂದು ಕಡೆ ಕನ್ನಡ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಕ್ರಿಯೆ.


ತಮಿಳು ಸಮಾವೇಶ

ಮಾರ್ಚ್ 29ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಮಿಳು ಸಮಾವೇಶದಲ್ಲಿ ಕೂಡ ನಡೆದಿದ್ದು ಅದೇ,
ಸುಮಾರು ೨೫ ಲಕ್ಷ ಕೊಟ್ಟಿದ್ದಾರೆ ತಮಿಳು ಸಂಘಕ್ಕೆ ಅಂತ. ಇದರಲ್ಲಿ ಕೇವಲ ಬಿಜೆಪಿಗೆ ಮಾತ್ರ ಆಹ್ವಾನವಿತ್ತು, ಕಾರಣ ಆಡಳಿತ ಸರಕರವನ್ನು ಕರೆದಿದ್ದೆವು ಅಂತ. ಶಂಕರ ಮೂರ್ತಿ, ಜೂ.ಯಡಿಯೂರಪ್ಪ, ಹಾಲಪ್ಪ, ಕುಮಾರಸ್ವಾಮಿ ಆಗಿ ಎಲ್ಲರು ಪಾಲ್ಗೋಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ತಮಿಳು ಸಂಘ ೭೦ ಲಕ್ಷ ವೆಚ್ಚದಲ್ಲಿ ತಮಿಳು ಭವನ ಕಟ್ಟಿಸುತ್ತ ಇದೆ, ಇದಕ್ಕೂ ಕೂಡ ನಮ್ಮ ಕನ್ನಡ ಸರಕಾರವೆ ಹಣ ಕೊಟ್ಟಿರುತ್ತದೆ. ಇದನ್ನು ಕಾರ್ಯಕ್ರಮದ ವ್ಯವಸ್ಥಾಪಕರೇ ಹೇಳುವ ಹಾಗೆ ಸಮಾಜದ ಸಂಘಟನೆ ಅಂತ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ತಮಿಳು ಜನರನ್ನು ತಮ್ಮಡೆ ಸೆಳೆದುಕೊಳ್ಳಲು ಚಿಕ್ಕ ಕಾಣಿಕೆ ಕೊಟ್ಟಿದ್ದಾರೆ ಅಂತ ಬಂಗಾರಪ್ಪ ಆದಿ ಎಲ್ಲರೂ ಹೇಳಿದ್ದು.

ಮರಾಠಿ ಮೇಳ

ಅದೇ ಸಮಯದಲ್ಲಿ ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದರು.ಕನ್ನಡಿಗರು ವಿರೊಧಿಸುತ್ತ ಇದ್ದ ವಿಷಯವನ್ನು ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಕೈಗೆತ್ತಿ ಕೊಂಡು, ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದು ಕೂಡ ಅಲ್ಲಿ ನೆಲಸಿರುವ ಮರಾಠಿ ಜನರನ್ನು ಸೆಳೆಯಲು ಅಂತ ಹೇಳಬೇಕಾಗಿಲ್ಲ. ಮರಾಠಿ ಮತಗಳು ಬೇಕು ಎಂದರೆ, ಕನ್ನಡಿಗರೇ ನಮ್ಮ ಕಾಲಿಗೆ ಬೀಳುತ್ತಾರೆ, ನಮ್ಮನ್ನು ಬೆಂಬಲಿಸುತ್ತಾರೆ ಅಂತ ಮನವರಿಕೆ ಮಾಡಿಕೊಂಡ
ಆಟಕ್ಕುಂಟು ಲೆಕ್ಕಕಿಲ್ಲ ಅನ್ನೊ ಹಾಗೆ ಆಗಿದ್ದ ಎಂ.ಇ.ಎಸ್ ಇದರಿಂದ ಚೇತರಿಕೆ ಕಂಡಿತು.

ಪಾಡುತ ತೀಯಗ

ಮತ್ತೆ ಎಪ್ರಿಲ್ ಮೊದಲ ವಾರದಲ್ಲಿ ಇದೇ ಬಿಜೆಪಿ ಪಕ್ಷ ತೆಲುಗು ಭಾಷಿಕರ ಸಮಾವೇಶವನ್ನು ಮಾಡಿ ತೆಲುಗು ಮತಗಳನ್ನು ತನ್ನಡೆ ಸೆಳೆಯಲು ಪ್ರಯತ್ನಿಸಿತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸ್ನೇಹ ಮಿಲನ ಅಂತ ಮಾಡಿತ್ತು. ಕಟ್ಟಾ, ವೆಂಕಯ್ಯ ನಾಯ್ಡು ಎಲ್ಲರೂ ಪಾಲ್ಗೊಂಡಿದ್ದರು ಇದರಲ್ಲಿ. ಕಾರ್ಯಕ್ರಮ ಸಂಪೂರ್ಣ ತೆಲುಗುನಲ್ಲಿ ನಡೆಯಿತು.

ūṭaluvakai

ತಮಿಳುನಾಡು ಶಾಸ್ತ್ರೀಯ ಭಾಷೆ ವಿಚಾರದಲ್ಲಿಯಾಗಲಿ, ಕಾವೇರಿ ವಿಚಾರದಲ್ಲಿಯಾಗಲಿ, ಹೊಗೇನಕಲ್ ವಿಚಾರದಲ್ಲಿಯಾಗಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಎಸಗಿದರೂ ಸಹ ನಮ್ಮ ಬಿಜೆಪಿ ರಾಜ್ಯ ಸರಕಾರ ಇವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಮತ್ತದೇ ಬೆಂಗಳೂರಿನಲ್ಲಿ ತಮಿಳರನ್ನು ಒಲೈಸಲು ಮಾಡಿರುವ ಕೆಲ್ಸ ಇದು.

ಕಳೆದ ೬ ತಿಂಗಳಲ್ಲಿ ಇವೆಲ್ಲಾ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ ನನಗೆ ಅನಿಸುವುದು ಒಂದೇ

೧) ಪರ ಭಾಷಿಕರನ್ನು ಒಲೈಸುವಿಕೆ

೨) ಇವೆಲ್ಲಾ ಕಾರ್ಯಕ್ರಮಗಳ ಮುಂದೆ ಒಂದು ಚುನಾವಣೆ ಇರುತ್ತದೆ.

೩) ಕನ್ನಡಿಗರ ಪ್ರತಿರೋಧವನ್ನು ಲೆಕ್ಕಿಸದೇ, ಕನ್ನಡ ವಿರೋಧಿ ಕೆಲ್ಸ ಮಾಡುವುದು.

೪) ತಮ್ಮ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಗಳಲ್ಲಿ ಪ್ರಾಯೋಜಿತ ಲೇಖನಗಳನ್ನು ಬರೆಸುವುದು.
ಕನ್ನಡದ ಚಿಂತಕರು, ಸಾಹಿತಿಗಳು, ರಾಷ್ಟ್ರಕವಿಗಳು, ಯಿಗದ ಕವಿಗಳು ಇದನ್ನು ಸಮರ್ಥಿಸಿಕೊಳ್ಳುತ್ತ ಕನ್ನಡಿಗರಿಗೆ ಅನ್ಯಾಯ ಮಾಡುವುದು.

೫) ಕನ್ನಡ ಸಂಘಟನೆಗಳ ವಿರುದ್ಧ ಪರಭಾಷಿಕರನ್ನು ಸಂಘಟಿಸಿ ಅವರ ಬೆಂಬಲಕ್ಕೆ ನಿಂತಿರುವುದು.

ದೇಶ ಮೊದಲು, ಭಾಷೆ ಅಂತ ಹೇಳುವುದು ರಾಷ್ಟೀಯತೆ ವಿರುದ್ಧ ಅಂತ ನಂಬಿರುವ ಪಕ್ಷದಿಂದ
ಮುಂದಿನ ದಿನಗಳಲ್ಲಿ ಇನ್ನೇನು ಕನ್ನಡಿಗ ನೋಡಬೇಕೋ ನಾ ಕಾಣೆ.ಅದಕ್ಕಿಂತ ಭಯ ಆಗುವುದು ನಮ್ಮ ಕನ್ನಡ ಚಿಂತಕರ, ಪತ್ರಕರ್ತರ,ಅವತಾರ ಪುರುಷಗಳ ಸಮರ್ಥನೆ.

Monday, August 03, 2009

ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!!


ಇದು ನನಗೆ ಬಂದ ಮಿಂಚೆ, ಇದನ್ನು ನಾವು ಕನ್ನಡ ಮಾಧ್ಯಮಗಳlli ನೋಡಲು ಆಗುವದಿಲ್ಲ. ಯಾಕೆಂದರೆ ಪ್ರಾಯೋಜಿತ ಲೇಕನಗಳನ್ನು ಬರೆಸಿ ಹಾಕುವ ಆ ಮಂದಿಗೆ ಇ ತರಹದ ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿ , ಜನರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ, ಆದ್ದರಿಂದ ಇದನ್ನು ಪ್ರತಿಯೊಬ್ಬ ಕನ್ನಡ ಬ್ಲಾಗಿಗ ಪ್ರಕಟಿಸಬೇಕು.

೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:


೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.
ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು:
ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು,

ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು,

ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು.

ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿ
ಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.

ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.

ಈ ಕುರಿತಾಗಿ ಇಂದು ಪ್ರಜಾವಾಣಿ - ವಾಚಕರ ವಾಣಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ನೋಡಿ.... ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ.

ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.
ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ. ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ ??

ಕಲ್ಯಾಣ ರಾಮನ್