Thursday, November 09, 2006

ಪುರುಷೊತ್ತಮ

ಪುರುಷೊತ್ತಮ
============
ಬಾಯಲ್ಲಿ ITC ಕಿಂಗು,
ತುಟಿಗಳಿಗೆ ಒಂದು ರಂಗು.


ಕೈಯಲ್ಲಿ ಕೊಡೆ ರಮ್ಮಿನ ಗ್ಲಾಸು,
ಇದೆ ತಾನೇ ಹದಿಹರೆಯದವರ ಕನಸು.


ಜಗಿಯುತ್ತಿದ್ದರೆ ಮಾಣಿಕಚಂಧ,
ಪಸರಿಸುವುದು ಅದರ ಗಂಧ.


ಬೇಸರಕ್ಕೆ ಒಂದೆರೆಡು ಪ್ಯಾಕ್ ಆಟ,
ಮನದ ನೆಮ್ಮದಿಗೆ ಒಂದು ಪಾಠ.


ಬೆನ್ನತ್ತಿದರೆ ಕುದುರೆ ಬಾಲ,
ತೀರುವುದು ಎಲ್ಲಾ ಸಾಲ.


ಇವುಗಳ ಜೊತೆ ಇದ್ದರೆ ಒಬ್ಬಳು ಗರ್ಲಫ್ರೆಂಡು
ಸ್ವರ್ಗಕ್ಕೆ ಕಿಚ್ಚೆಬ್ಬಿಸುವನು ಆ ಗಂಡು

ಶಾಸನ ವಿಧಿಸಿದ ಎಚ್ಚರಿಕೆ
===================
೧) ಸಿಗರೇಟ್ ಸೇವನೆ ಆರೊಗ್ಯಕ್ಕೆ ಹಾನಿಕಾರ.
೨) ಗುಟ್ಕಾ ಸೇವನೆ ಕ್ಯಾನ್ಸರಗೆ ಆಹ್ವಾನ.
೩) ಕುಡಿತದಿಂದ ಸಂಸಾರ ನಾಶ.
೪) ಕುದುರೆ ದಾಸ,ಹೆಂಡತಿ ಮಕ್ಕಳ ಉಪವಾಸ

Sunday, November 05, 2006

ಗಾದೆಗಳು-೨

ಗಾದೆಗಳಲ್ಲಿ ವಿಭಿನ್ನತೆ
------------------------
ಹಿಂದೆ ಹೇಳಿದ ಹಾಗೆ ಗಾದೆ ಒಂದು ಸಂಧರ್ಬಕ್ಕೆ ಅನುಸಾರವಾಗಿ ಹುಟ್ಟು ಪಡೆದಿರುತ್ತದೆ. ಕನ್ನಡದಲ್ಲಿ ಬಂದಿರುವ ಗಾದೆಗಳ ಸಂಧರ್ಬಗಳನ್ನು
ಗಮನಿಸೋಣ.

ಕಿಲಾಡಿತನ:-
ಕೆಲವರು ಸ್ವಾಭವಿಕವಾಗಿ ಬುದ್ಧಿವಂತರಾಗಿರುತ್ತಾರೆ, ಅಂತವರ ಸಾನಿಧ್ಯದಲ್ಲಿ ಹೆಣೆದ ಗಾದೆ ಮಾತುಗಳನ್ನು ನಾವು ಕಾಣಬಹುದು.
ಉದಾ:- ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಿದರಂತೆ.
ಕೆಲವರು ಬಹಳ ಚೆನ್ನಾಗಿ ಮಾತು ಕಲಿತಿರುತ್ತಾರೆ, ಅಂತವರು ಎಲ್ಲರ ಮನಸ್ಸನ್ನು ಗೆದ್ದಿರುತ್ತಾರೆ
"ಮಾತು ಬಲ್ಲವನಿಗೆ ರೋಗವಿಲ್ಲ" ಅಂತ ಇದಕ್ಕೆಹೇಳಿರುತ್ತಾರೆ. ಕೆಲವರು ಏನು ಪ್ರಶ್ನೆ ಕೇಳಿದರೂ ಸುತ್ತಿಕೊಂಡು ಬಳಸಿ
ಅದನ್ನೆ ಉತ್ತರ ಕೊಡುತ್ತಾರೆ. "ಅಳಿಯ ಅಲ್ಲ್ಲ, ಮಗಳ ಗಂಡ" ಅನ್ನುವುದು ಇಂತವರ ಮೇಲೆ ಹೆಣೆದ ಗಾದೆ.

ಮಳ್ಳಿ ಮಳ್ಳಿ ಮಂಚಕೆ ಎಷ್ಟು ಕಾಲು ಅಂದರೆ, ಮೂರು ಮತ್ತೊಂದು ಅನ್ನುವ ಬುದ್ಧಿವಂತರ ಕುರಿತು ಹೆಣದಿರುವ ಗಾದೆ.

ಸಾಮಾಜಿಕ ಸೇವೆ:-
ನಮ್ಮ ಸಂಸ್ಕೃತಿಯಲ್ಲಿ ದಾನ-ಧರ್ಮಕ್ಕೆ ಬಲು ಮಹತ್ವವಿದೆ. ಅದಕ್ಕೆ ಅನುಸಾರವಾಗಿ ಅದನ್ನು ಗಾದೆಗಳ ಮೂಲಕ ಪ್ರಚಾರ ಮಾಡಲಾಗಿದೆ.
ಉದಾ:- ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ"
"ಹಣ್ಣು ಹಂಚಿ ತಿನ್ನು, ಹೂವು ಕೊಟ್ಟು ಮುಡಿ"

ಬೇಡದ್ದು ಸಿಕ್ಕಾಗ
------------------
ಅನೇಕ ಬಾರಿ ನಮ್ಮ ಜೀವನದಲ್ಲಿ ಬೇಡದ್ದು ಸಿಗುತ್ತದೆ, ಸಿಕ್ಕಾಗ ಅದನ್ನು ಅನುಭವಿಸೋ ಇಷ್ಟ ಆಗಲಿ , ಶಕ್ತಿ ಆಗಲಿ ಇರುವದಿಲ್ಲ. ಅಂತಹ
ಒಂದು ಸಂಧರ್ಬಕ್ಕೆ ಅನುಸಾರವಾಗಿ ಕೆಲ ಗಾದೆಗಳನ್ನು ಕಾಣಬಹುದು.
"ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ"
"ಊಟಕ್ಕೆ ಇಲ್ಲದ ಉಪ್ಪಿನಕಾಯಿ, ತಂಗಳಿಗೆ ಸಮಾನ"

ಕೈ ಸಿಕ್ಕಾಗ ಬಿಡಬೇಡ
==============
ಈ ವೇದಾಂತವು ನಮ್ಮ ಅನೇಕ ಗಾದೆಗಳಲ್ಲಿ ಕಂಡು ಬರುತ್ತದೆ.
ಉದಾ:- "ಗಾಳಿ ಬಂದಾಗ,ತೂರಿಕೋ"
"ಸಿಕ್ಕಾಗ ಸೀರುಂಡೆ".

ಆಷಾಡಭೂತಿ
========
ನಮ್ಮ ಜನರು ಹೇಳಿದ ಹಾಗೆ ನಡೆಯುವುದು ಬಲು ಅವರೂಪ, ಅಂತಹ ಊಸರವಳ್ಳಿ ಜನರ ಮೇಲೆ ಕೆಲ ಗಾದೆಗಳು ರಚಿತವಾಗಿದೆ.
"ಹೇಳೊಂದು ಒಂದು, ಮಾಡೊದು ಇನ್ನೊಂದು"
"ಮಾಡೊದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ
"ದೀಪದ ಕೆಳಗೆ ಕತ್ತಲೆ"
"ಆಚಾರ ಹೇಳೋಕ್ಕೆ ಬದನೆಕಾಯಿ ತಿನ್ನೊಕ್ಕೆ"


ವ್ಯವಸಾಯ
=======
ನಮ್ಮ ದೇಶದ ಬೆನ್ನೆಲಬು ಆಗಿರುವ ವ್ಯವಸಾಯದ ಮೇಲೆ ಗಾದೆಗಳನ್ನು ಕಾಣಬಹುದು.
" ಬಾಳೆ ಬಗೆದು ಹಾಕು, ತೆಂಗು ತೇಲಿ ಹಾಕು"
"ತಗ್ಗು ಗದ್ದೆಗೆ ಮಾರು ಬೆಳೆ, ಎತ್ತರ ಗದ್ದೆಗೆ ಒಂದೇ ಬೆಳೆ"
"ಕಬ್ಬು ಸೊಟ್ಟದಿದ್ದರೆ, ಸಕ್ಕರೆ ಸೊಟ್ಟೆ"

ನಾಗರೀಕತೆ
=======
ನಮ್ಮ ನಗರ ಬೆಳೆದ ಹಾಗೇ, ನಮ್ಮ ನಾಗರೀಕತೆ ಮಹತ್ವ ಪಡೆದಿದೆ. ಹಾಗೇ ನಮ್ಮ ಜನರಲ್ಲಿ ನಗರದ ಬಗ್ಗೆ ಗೌರವ ಮತ್ತು ಆದರ ಮೂಡಿಸಿದೆ.
ಉದಾ:- "ಕೆಟ್ಟು ಪಟ್ಟಣ ಸೇರು"

ಇದಕ್ಕೆ ಇಂಗ್ಲೆಡಿನಲ್ಲಿ "No Venture, No Gain" ಹೇಳುತ್ತಾರೆ.

ಸಂಪ್ರದಾಯ ಮತ್ತು ಕುಟುಂಬ
--------------------------------
ನಮ್ಮ ಹಿಂದಿನ ಸಮಾಜದಲ್ಲಿ ದೊಡ್ಡ ಕುಟುಂಬಗಳು ಇರುತ್ತಿದ್ದವು,ಅದರಲ್ಲೂ ಹೆಚ್ಚು ಮಕ್ಕಳಿರುವ ಸಂಸಾರದಲ್ಲಿ
ದೊಡ್ಡ ಮಗನ ಮೇಲೆ ಅವಲಂಬಿತರಾಗುತ್ತಿದ್ದರು. ಅದನ್ನು ನೋಡಿ ಕೆಳಕಂಡ ಗಾದೆ ಮಾಡಿರಬಹುದು.
"ಬಾಗಿಲಿಗೆ ಹೊಸಲಾಗಬೇಡ, ಮನೆಗೆ ಹಿರಿ ಮಗನಾಗಬೇಡ"
ಇದರಲ್ಲಿ ಗಮನಿಸಬೇಕಾದ ಅಂಶ ಅಂದರೆ, ಹೇಗೆ ಹೊಸಲನ್ನು ಎಲ್ಲಾ ಮೆಟ್ಟಿ ನಡೆಯುತ್ತಾರೊ,ಹಾಗೇ ಹಿರಿಮಗನ ಮೇಲೆ ಸಂಸಾರ ಭಾರ ಹೆಚ್ಚು.

"ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಇದೂ ಕೂಡ ಹಿಂದಿನ ಸಂಸಾರದಲ್ಲಿ ಇದ್ದ ಸಂಪ್ರದಾಯಕ್ಕೆ ಅನುರೂಪವಾಗಿದೆ.


ನಿಷಿದ್ಧ
====
ಮಾಡಬಾರದ ಸಮಯದಲ್ಲಿ ಕೆಲಸಗಳ ಬಗ್ಗೆ ಅನೇಕ ಗಾದೆಗಳು ತಿಳಿ ಹೇಳುತ್ತವೆ.
* ಎಂದೂ ಓದದ ಮಾಣಿ, ಅಮವಾಸೆ ದಿನ ಓದಿದನನಂತೆ
* ಅಮವಾಸೆ ದಿನ ಗಂಡು ಹುಟ್ಟಿದನಂತೆ
* ಮಂಗಳವಾರ ಮಗಳ ಕಳಿಸಬೇಡ,ಸೋಮವಾರ ಸೋಸೆ ಕಳಿಸಬೇಡ.


ಮಿತಿ
====
ಕೆಲವರಿಗೆ ತಮ್ಮ ಕೈನಲ್ಲಿ ಆಗದಿದ್ದರೂ ಬಾಯಿ ಮಾತಿನಲ್ಲಿ ತುಂಬಾ ಹೇಳಿಕೊಳ್ಳುತ್ತ್ತಾರೆ. ಅಂತಹ
ಜನರ ಮೇಲೆ ಆಧರಿತ ಕೆಲ ಗಾದೆಗಳನ್ನು ನಾವು ಕಾಣಬಹುದು.
* ಉತ್ತರನ ಪೌರುಷ ಒಲೆ ಮುಂದೆ
* ಅಟ್ಟಕ್ಕೆ ಹಾರದವಳು, ಆಕಾಶಕ್ಕೆ ಹಾರುತ್ತಾಳೆಯೇ ?
* ಕೈಲಾಗದವನು ಮೈ ಪರಚಿಕೊಂಡ
* ಮನೆಲಿ ಹುಲಿ ,ಬೀದಿಲಿ ಇಲಿ

ಯಾರದೋ ತಪ್ಪಿಗೆ, ಇನ್ಯಾರಿಗೋ ಶಿಕ್ಶೆ
========================
ಅನೇಕ ಬಾರಿ ಇದನ್ನು ನಾವು ನೋಡುತ್ತೆವೆ, ತಪು ಮಾಡಿಲ್ಲದೇ ಶಿಕ್ಶೆ ಅನುಭವಿಸುವರನ್ನು
ನೋಡುತ್ತೆವೆ.
* ಎತ್ತಿಗೆ ಜ್ವರ ಬಂದರೆ,ಎಮ್ಮೆಗೆ ಬರೆ ಹಾಕಿದರಂತೆ
* ಮಗಳಿಗೆ ಧಾರೆ, ಅಪ್ಪನಿಗೆ ಶೋಭನ.

ಅವಸರ
=====
ಕಲವರು ಬಹಳ ಅವಸರ ಮಾಡಿಕೊಳ್ಳುತ್ತಾರೆ,ಅವಸರದಿಂದ ಕೆಲಸ ಹಾಳು ಮಾಡಿಕೊಳ್ಳುತ್ತ್ತಾರೆ.
"ಆತುರಗಾರನಿಗೆ ಬುದ್ಧಿ ಮಟ್ಟು"
"ಅವಸರದ ಆಂಜನೇಯ,ಆರು ತಿಂಗಳಿಗೆ ಹುಟ್ಟಿದವನು"
"ಕೂಸು ಹುಟ್ಟುವ ಮುನ್ನ , ಕುಲಾವಿ ಹೊಲಸಿದರಂತೆ"

ಗಾದೆಗಳು -೧

ಗಾದೆಗಳನ್ನು ಬಳಸದೆ ಇರುವನು ಬಹಳ ಅಪರೂಪ. ಪ್ರತಿ ಭಾಷೆಯಲ್ಲಿ ಇದು ಒಂದು ಪ್ರಮುಖ ಪಾತ್ರವನ್ನು ಪಡೆದಿದೆ ಗಮನಿಸಿದರೆ
ಗಾದೆಗಳು ಒಂದು ಸಂದರ್ಭಕ್ಕೆ ಹುಟ್ಟಿ , ಬಾಯಿಂದ ಬಾಯಿಗೆ ಜನರಿಂದ ಜನರಿಗೆ ಹರಡಿ ತಮ್ಮ ಜೀವಿತವನ್ನು ಉಳಿಸಿಕೊಂಡಿದೆ,ಅದ್ದರಿಂದ ಹೇಗೆ ಸಮುದ್ರದಲ್ಲಿ ಮೊದಲ ಅಲೆ ಯಾವುದು ಎಂದು ಕಂಡು ಹಿಡಿಯಲು ಆಗದೋ, ಹಾಗೆ ಗಾದೆ ಮಾತುಗಳ ಹುಟ್ಟು ಮತ್ತು ನಿಖರತೆಯನ್ನು ತಾಳೆ ಎಳೆಯುವುದು ಆಗದ ಕೆಲಸ.

ಮೊದಲಿಗೆ ಗಾದೆ ಎಂದರೆ ಎನು ?
ಈ ಶಬ್ಧವು ಪ್ರಾಕೃತದ ಗಾಹೆ ಎಂಬ ಶಬ್ಧದಿಂದ ಹುಟ್ಟಿದೆ, ನಿಮಗೆ ಗೊತ್ತಿರಬಹುದು, ದ್ರಾವಿಡ ಭಾಷೆಗಳಲ್ಲಿ ಪ್ರಾಕೃತ ಭಾಷೆಯ ಶಭ್ದಗಳು ತುಂಬಾ.ಕನ್ನಡದಲ್ಲಿ "ನಾಣ್ ನುಡಿ" ಅಂತ ಕೂಡ ಕರೆಯುತ್ತಾರೆ.
ಅಂದರ ನಾಡ ನುಡಿ ಎಂದು ಅರ್ಥ.

ಹಾಗದರೆ ಒಂದು ಮಾತು ಗಾದೆ ಅನಿಸಲು ಇರಬೇಕಾದ ಲಕ್ಷಣಗಳೇನು ??

೧) ಜನರಾಡಿ ಪಳಗಿದ ಮಾತು, ಅಂದರ ಆ ಮಾತು ಒಬ್ಬನ ಜೀವನಕ್ಕೆ ಸಂಬಂಧಿಸದೇ, ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯವಾಗುವ ಹಾಗೆ ಇದ್ದರೆ
ಅದು ಗಾದೆ ಮಾತು ಆಗುತ್ತದೆ. ಅದ್ದರಿಂದಲೇ ಜನರಿಗೆ ಗಾದೆ ಮಾತಿನ ಮೇಲೆ ಅಷ್ಟು ನಂಬಿಕೆ. ಬರೀ ಇಂದಿನ ಪೀಳಿಗೆಗೆ ಸೀಮಿತವಾಗದೆ,ಮುಂದಿನ
ಪೀಳಿಗೆಯನ್ನು ಒಳಗೊಂಡ ಈ ಮಾತುಗಳು ಕಾಲತೀತವಾದವು. ಕನ್ನಡದಲ್ಲಿ " ವೇದ ಸುಳ್ಳಾದರೂ, ಗಾದೆ ಮಾತು ಸುಳ್ಳಾಗದು" ಎಂಬ
ಭರವಸೆಯ ಗಾದೆ ಮಾತನ್ನು ಹೇಳಿದ್ದಾರೆ.

NO VOICE IS WHOLLY LOST WHICH IS THE VOICE OF MANY MEN. ಎಂದು ಅರಿಸ್ಟಾಟಲ್ ಹೇಳಿದ್ದ, ಅಂದರ
ಶತಮಾನಗಳು ಉರುಳಿದರೂ ಗಾದೆಗಳಿಗೆ ಸಾವಿಲ್ಲ ಅಂತ.

೨) ಚಿಕ್ಕದಾಗಿ ಇರಬೇಕು ಮತ್ತು ಚೊಕ್ಕವಾಗಿ ಇರಬೇಕು
ಜನಮನರ ನಾಲಿಗೆಯಲ್ಲಿ ಉಳಿಯಬೇಕಾದರೆ ಅದು ಕಷ್ಟವಾಗಿ ಇರದೇ ಬಹಳ ಸುಲಭ ಮತ್ತು ಅರ್ಥಗರ್ಭಿತವಾಗಿರಬೇಕು.ಇದು ನಮ್ಮ ಜನ ಜೀವನದ ಒಂದು
ಮುಖವನ್ನು ಪ್ರತಿಭಿಂಬಿಸಬೇಕು. ಮತ್ತು ಆ ಸಂದರ್ಭ ಬಂದರೆ ಜನರಲ್ಲಿ ಹೌದು ಇದೇ ಸರಿಯಾದ ನುಡಿ ಅಂತ ಅನಿಸಬೇಕು,ಆಗಲೇ ಅದು ಗಾದೆ ಮಾತು ಆಗುವುದು.
"ಅಂಗೈ ಹುಣ್ಣಿಗೆ ಕನ್ನಡಿ ಬೇಕೆ" ಈ ಗಾದೆ ಮಾತು ಬಹಳ ಸುಲಭವಾಗಿದೆ ಮತ್ತು ಬಹಳ ಅರ್ಥಪೂರ್ಣವಾಗಿದೆ.

Thursday, August 31, 2006

How to Learn ABCD ...

Simplest and most effective way to Learn ABCD from kannada words ...

A - Apple
B - Bitti Apple
C - Chikka Apple
D- Dodda Apple
E - Eradu Apple
F - Falaa andre Apple
G - Gatti Apple
H - Hannagiro Apple
I - Ivattu tiMdilla Apple
J- JeninaMte sihi iro Apple
K - Kaayi Apple
L - Laksha kotru sigolla intha Apple
M - Muddagiro Apple
N - Nangu beku Apple
O - Ondu Apple
P - Prethiyinda kotta Apple
Q- "Q" nalli ninthkondre maatra Apple
R - Rakthada baNNa iro Apple
S - Sakagoashtu ive Apple
T - TuMbaa beLitare Apple
U - Ulisabeda ondu Apple
V - Vaidya heLtarre tinni Apple
W - Wah Wah anno Apple
X - X-mas dina tinnabardhu Apple
Y - yake beDa ninge Apple
Z - Zebra ge ishta agolla Apple

Sunday, August 13, 2006

ಡಾ||ರಾಜ್ ಹಾಡಿರುವ ಗೌರವ ಗೀತೆಗಳು.

ಅಣ್ಣಾವ್ರ ಗೌರವ ಗೀತೆಗಳು ಬಹಳಷ್ಟು ಬಂದವೂ,
ಅದರಲ್ಲಿ ನನಗೆ ಹಿಡಿಸಿದ ಕೆಲವು ಗೀತೆಗಳು ಹೀಗಿವೆ.


ಗೀತೆ -೧ //

ohhhh ..ನನ್ನ ಗೆಳತಿ ನನ್ನ ಕಥೆ ಕೇಳು

ಓ... ಗೆಳತಿ
ಓ... ಗೆಳತಿ
ಹೋರಾಟಾ ಮನದಲ್ಲಿ



ಕೇಳೆ ಸಖಿ ನನ್ನ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು
ಪ್ರಾಣ ಸಖಿ ನನ್ನ ವ್ತಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು


ನಿನ್ನ ಹೂವ ಮೈಯ ಮೇಲೆ
ಬೆಂಕಿ ಮಳೆಯ
ಎದೆ ಕಲ್ಲು ಮಾಡಿ ಸುರಿವೆ
ನಿನ್ನ ಮೇಲೆ ನನಗೆ ತುಂಬಾ
ಆಸೆ, ಪ್ರೇಮಾ
ಪ್ರೇಮಕ್ಕಾಗಿ ನಾನು ಮೀರಲಾರೆ
ನನ್ನ ವೃತ್ತಿಧರ್ಮ

ಕೇಳೆ ಸಖಿ ನನ್ನ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು
ಪ್ರಾಣ ಸಖಿ ನನ್ನ ವ್ತಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು


ಸತಿ ಪತಿ ಎಂದು ಒಂದೇ
ಎಂದೆ ನೀನು,
ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದೆ.
ಬಾಳ ತುಂಬಾ ನಿನ್ನ ಜೊತೆಗೆ
ನಾನು ಮಿಡಿದೆ
ನಿನ್ನ ಮನ ನನ್ನ ಹಾಗೆ
ಇರದೆ
ನಿಜವ ತರದೆ.

====================================
ಗೀತೆ -೨
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೊ ಪ್ರೇಮ ಕಥೆಗೆ
ಜಗವು ದೂರ.

ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಎಕೋ ಇಂಥಾ ಸಮರ.



ನೀನೆ ಜೀವ
ನೀನೆ ಭಾವ
ಅನ್ನೊ ಮಾತಿಗೆ
ಮಾತು ನೀಡಿ
ಮನಸು ನೀಡಿ
ಹಾಡೋ ಪ್ರೀತಿಗೆ
ಸನಿಹ
ವಿರಹ
ಕಲಹ
ಹಣೆಯ ಬರಹವಿದು.


ನೋವು ನಲಿವು
ಸೋಲು ಗೆಲವು
ಉಂಟು ಪ್ರೀತಿಗೆ
ಯಾರೋ ಬಂಧು
ಯಾರೋ ಬಳಗ
ಬಾಳ ಪಯಣಕೆ
ಕನಸೋ ಭ್ರಮೆಯೋ
ಜಗವೇ ಕುರುಡಾಗಿದೆ.

Wednesday, July 26, 2006

Knock,Knock ..any KAR MPs around ??

Karnataka MPs rank as the laziest and highest paid in India, thats what a common man thinks in karnataka

They have not raised a common voice w.r.t to any hot burning issues of karnataka.
The major issues were Classical Status/Metro/ONGC/CET/Farmers Sucide/Border Dispute ..so on.

The MPs’ relaxed approach to their duties has frustrated the kannadigas. Supporting to this argument recent omission of kannada in LS hold an example.

Even worse, our MPs have a lighter work schedule than that of most professionals.
They hardly attend the sessions,during their presence they dont talk anything on state. When some state issue is raised, other states cutting the party lines unite. but we dont see that here.

See your MP attendece chart. This chart is taken from the Loksabha website.

Statistics shows that,

4 MPs have less than 30% attendence.
7
MPs have less than 50% attendence.
4 MPs have less than 60% attendence.







Tuesday, July 25, 2006

Sorry ..No Kannada


"Sorry..no Kannada", its a common statement we hear ofthen in the Malls, if u think i am narrating one such incident, then you go wrong. According to the letter written by LS secretary general P D T Achary on July 22, Kannada has been deleted from the list of 12 languages for which interpreters are available. Being a national language,which has more than 6+ Crore speakers kannada lost its status in the LS.


How does this impact.??
* The kannadigas deprived from the listening to their language.
* All 31 MPs elected from karnataka cant speak in kannada,if they do so its against code of conduct of the session.
* Major setback in gaining the classical status.
* This shows the step mother attitude of Center towards Kannada/kannadiga/karnataka. Going futher we can expect some more setbacks.
* The regional languages like Manipuri,Bodo,Nepali has a translator which hardly has 1-2 MPs. In other words they have 1:1, where as 31 MPs dont have a single translator.
Is it a conspiracy ??
Before we conclude that, we have to blame our elected MPs for being so ignorant of the issue. This shows their presence in the LS.
Suppose, if the same would have happened to TAMIL, definatley cutting across party lines, the MPs from Tamil Nadu will come together.This reminises me 2003 incident.

Definatley Parliment of India(Joint Recruitment Cell) shares the blame, they were so reluctant about the issue. They haven't appointed adequete backups for kannada,where HINDI has 10 translators and Tamil has 4. Instead of extending the contract of ex-translator(Basava Gowda),they are planning to keep that position vaccant for 4-5 months.

Are they recruting a new translator??
Answer is YES, the process has started, complete process may take minimum 3-4 months. The Advt for the same is as follows.

1. POST No. 1: Parliamentary Interpreter Grade-II* / Junior Parliamentary Interpreter** (Regional Languages) VACANCIES: 9*** (Kannada, Gujarati, Kashmiri, Konkani, Sindhi, Bodo, Santhali, Maithili and Dogri) in Lok Sabha Secretariat and 3 (UR) (1 Punjabi; 1 Gujarati and 1 Telugu) in Rajya Sabha Secretariat PAY SCALE: Rs.8000-13500 QLFNS: Master’s degree in any subject with the regional language concerned up to degree level. Desirable: Experience in Translation or interpretation work in Regional Language or Hindi****, and Degree in Hindi****. UPPER AGE LIMIT: 35 years.

Last date for submission:- August 21th 2006

Again they are recruiting only 1 traslator for kannada. The written exam and annoucement will take its own sweet time.

What we(our representing MPs) should do ??
* They should demand for extension of the old translator till they appoint a new one.
* Highlight this issue in/out of LS by speaking in kannada.
* All 31 MPS(cutting party lines) should meet the speaker Somanath Chatarjee and demand for justice. I strongly feel, karnataka MPs are not so powerful in raising their voice when it comes to Kannada/kanandiga/karnataka. Well, there are few exceptions in the recent times, Shivanna and Sadanada Gowda are name to few.

Monday, July 24, 2006

Bharatha, Hindi and EU.


"Bharatha Jananiya Thanujathe Jai Hai Karnataka Mathe" ……… is the famous poetic lines from our kannada poem written by the great rashtra kavi Ku.Vem.Pu, which emphasizes that Karnataka is the child of Bharatha and brings out the feeling of united ness among all Indians(bharathiyaru).
This feeling has been imbibed in us from our childhood and the meaning has rooted in our subconscious from a very early age …….

But one thing which keeps disturbing my mind is the simple question…..

When did we get the concept of the whole bharatha as a country?....

What is the history behind the name BHARATH…?

If this question is put forth among our elders or our teachers the common answer given by them is,

“ The name has been given to us from our ancestors and it’s a tribute to our legendary raja Bharatha who was a great ruler and has been the inspiration for the name.

This is the universal answer given by one and all…….

If we individual think in these terms and ask our self how much of it is true ,many interesting things come to our notice

IS BHARATH FROM BHARATHA…..?????

This has been the question which has run over my mind several times.

Did Bharatha give this concept of one nation ,as time passed did the same thing fade away…many such questions arise……

Flipping through the pages of history we find 3 great kings with the name Bharatha who have remarkable ruled and carved their place among all other kings .

Firstly

  • RAMA’S BROTHER BHARATHA

    He is the faithful brother who took hold of the Ayodya kingdom when Rama went for vanavasa. Though a great personality he did not have any hold over the kingdom during his rule and only place which he ruled was ayodhya .hence the concept of he ruling the entire geographical area which is hence know as Bharath is not explainable and doesnt make sence.

  • DHUSHYANTHA –SHAKUNTHALA’S SON BHARATHA

    The above given explanation holds good even here .There is no historical proof which explains that he ruled our present India. Hence this explanation also does not hold good.

  • BHAHUBALI’S BROTHER BHARATHA

    His father gave him the kingdom of ayodhya to rule .In order to have the entire kingdom for himself he waged a war against his own brother bhahubali and lost the battle .Hence it’s meaningless to tell he ruled the entire geographical bharath.

    So one things which is evident is that we weren’t ruled by one king .In the past, 56 state ( angha,vanga,kalinga,kambhoja….others) were existent .Each state had their own samskruthi ,language ,rituals …………in those lines only ,we today have 27 states .thus this shows that we did not have the concept of one entire nation, one language , one custom, one tradition….was not prevalent in the grouped states …

    Then why did we unite as a nation ?????What made us do so ??????

The answer to this is very simple .all credits goes to British. "A foes foe is my friend" is the concept which all the different provinces or states ruled by different kings adapted .the universal enemy for 100+ kings was the British people .Since each individual could not fight against the British empire all the kings joined their hands to throw British away from Bharath hence came the concept of unity just to pull the British out of our country …but there was no concept of one nation or one language.


INDIA and EUROPEAN UNION

Is it fair to compare india with Japan or China, where they lived together as one for 1000 years and spoke a common language for decades ?. The race,culture and religion is same among all. Its very unappropriate to compare with 50+ old India with them.

Best comparision would be with the Europian Union

Why ??

* Both INDIA and EU are founded on the same principle, the principle of ‘unity in diversity’: diversity of cultures, customs and beliefs - and of languages.

* Both has 21+ Official languages.

* Both has 25+ states/countries of diffrent culture and beliefs.

* The states/countries are very closely placed,where 100KM diffrentiates between 2 states.

EU is a role model for us,we can implement the same policys in our nation too.

IS HINDI OUR ONLY NATIONAL LANGUAGE….???

If we search the roots of the language Hindi we reach the Muslim kings period .The Persian rulers spoke a language called ‘dhakani’( they ruled a place called dhakan ,might have originated from this ).This language is a mix of Persian and Arabic .The kings spoke this language and the common people developed another language which was called hindvi .that hinvi is now called as Hindi and dhakani as Urdu .

Clever north Indian politicians used Hindi and its dialects of 13 similar languages (mythili,dhrogi,rajasthani,kriboli.punjabi…).claimed about 46% of the people knowing Hindi.Hence the government emphasized on Hindi and gave it the honor of being our Central Official language. This meant to say that the state government could use Hindi or English as a medium of interaction with the Central Govt.

Hence the north Indian states(Region A) opted Hindi and south Indian states opted English. Going further , central government introduced lot of programmes to popularize HINDI and allocated money from budget.
That resulted in unnecessarily imposing Hindi on the south provinces, and giving Hindi the utmost importance.

Thus came the central government rules of introducing Hindi language in the education system as a compulsory language and initiated many organized program and stated attracting people to learn Hindi in the pretext of national language.

Chapter 4 Special Directives, 351 states that.
Directive for development of the Hindi language.—It shall be the duty of the Union to promote the spread of the Hindi language, to develop it so that it may serve as a medium of expression for all the elements of the composite culture of India and to secure its enrichment by assimilating without interfering with its genius, the forms, style and expressions used in Hindustani and in the other languages of India specified in the Eighth Schedule, and by drawing, wherever necessary or desirable, for its vocabulary, primarily on Sanskrit and secondarily on other languages.


KANNADIGAS AND HINDI

So what makes kannadigas so affectionate towards Hindi

  • The enemity with the tamialians

    From centuries there has been lot of wars among the kannadigas and tamilian to have hold over the entire south India The kadabha dynasty founder mayura varma who fought against the pallavas is our idealistic hero .hence we have acquired the genes which projects our constant enemity with the tamilians.After independence Bangalore was under the control of tamilians there was constant conflict between tamilians and kannadigas .at this time Hindi existence was widespread .tamialians opposed the imposing rules with Hindi as national language by the national government .with the grudge against the tamilian we revolted their move and accepted Hindi as national language and failed to understand the reasons of tamialians

    Thus in order to win over them we crushed our self and our culture and gave importance to Hindi .

    Gandhijis Influence.

    Hindhusthan should have Hindi as the one universal language was what Gandhi told and made all Indians to learn Hindi. We took his words as blessings and started crazily learning Hindi . The only way to show our love towards our country was by learning Hindi and those who don’t learns weren’t the loyal citizens of India … was the mentality with which we started fighting with tamialians and dug our own grave .

    We started respecting Hindi more than our regional language and started developing inferiority complex against our own language. And continued watering the inferiority complex within us .Today its grown into a big tree and started hampering our own language ……..Still we are speechless dumb people failing to understand our mistake nor are we taking any steps to correct our mistakes.

    Lets think globally and act locally.

Thursday, July 13, 2006

ಹಿಂಸೈ ಅರಸನ್ ಪುಲಕೇಶಿ ೨೩ ...ಯಾಕೆ ವಿರೋಧಿಸಬೇಕು ??


ಗೆಳಯರೇ,
ಹಿಂಸೈ ಅರಸನ್ ಪುಲಕೇಶಿ ೨೩ ಈ ತಮಿಳ್ ಚಿತ್ರದ ಬಗ್ಗೆ
ನಿಮಗೆ ಕಲ್ಯಾಣ ರಾಮನ್ ಅವರ ಪತ್ರ ಬಂದಿರಬಹುದು, ಅದನ್ನು ನೋಡಿ ನಿಮಗೆ ಪಿಚ್ಚು ಅನಿಸಿ ಮತ್ತು ಅದನ್ನು ನಿಮ್ಮ ಇತರ ಗೆಳೆಯರಿಗೆ ಕಳಿಸರಬಹುದು. ಹಾಗಿದ್ದರೆ ನನ್ನ ಪ್ರೇಕ್ಷಕರು ನೀವು ಅಲ್ಲ.

ಮತ್ತೆ ಯಾರು ??
(ಅ) ಆ ಪತ್ರ ನೋಡಿ ನಿಮಗೆ ಏನು ಅನಿಸಲಿಲ್ಲವಾದರೆ..
(ಆ) ಚಿತ್ರವನ್ನು ಚಿತ್ರದ ಹಾಗೆ ನೋಡಬೇಕೆಂದು ವಾದ ಮಾಡುವಿರಾದರೆ,
(ಇ) ಯಾರೋ ಏನೊ ಮಾಡಿದರೆ ನಮಗೆ ಏನು ಅಂತ ನಿಮಗೆ ಅನಿಸಿದರೆ ...

ಮೇಲೆ ಹೇಳಿದ ಹಾಗೆ ನಿಮಗೆ ಓಂದು ರೀತಿ ಅನಿಸಿದರೆ, ನೀವೇ ನನ್ನ ಪ್ರೇಕ್ಷಕ ವೃಂದ...

ಮೊದಲು ಆ ಚಿತ್ರದ ಬಗ್ಗೆ ತಿಳಿದುಕೋಳ್ಳೊಣ,

ಹಾಸ್ಯಚಿತ್ರ ಎಂಬ ಹೆಸರಲ್ಲಿ ಈ ಚಿತ್ರವನ್ನು ತಯಾರಿಸಲಾಗಿದೆ, ಇದು ಕಾಲ್ಪನಿಕ ಕಥೆ ಅಂತ ಅವರು ಸಾರಿ ಸಾರಿ ಹೇಳಿದರೂ
ಚಿತ್ರದ ಉದ್ದಕ್ಕು ನಮ್ಮ ರಾಜರ ಮತ್ತು ನಮ್ಮ ನಾಯಕರನ್ನು ಅವಮಾನಿಸಲಾಗಿದೆ. ೧೭೭೧-೧೭೯೨ ಮಧ್ಯೆ ನಡೆಯುವ ಕಥೆಯಲ್ಲಿ ಪುಲಕೇಶಿ ಎಂಬ ರಾಜನನ್ನು ಸ್ವಂತ ಬುದ್ಧಿ ಇಲ್ಲದ, ಸ್ಥ್ರೀಲೋಲ , ಹೇಡಿ,ಕ್ರೂರಿ ಎಂದು ಚಿತ್ರಿಕರಿಸಲಾಗಿದೆ.

* ಪುಲಕೇಶಿ ಅಪ್ಪನ ಪಾತ್ರನನ್ನು ತಾಯ್ ನಾಗೇಶ ಮಾಡಿದ್ದಾರೆ, ಅವನಿಗೆ ಬಹಳ ದಿನಗಳ ಮೇಲೆ ೨ ಅವಳಿ ಮಕ್ಕಳು ಹುಟ್ಟುತ್ತವೆ, ಅದರಲ್ಲಿ ಸ್ವಂತ ಬುದ್ಧಿ ಇಲ್ಲದ ಮತ್ತು ಇರುವ ಮಕ್ಕಳು. ಸ್ವಂತ ಬುದ್ಧಿ ಇಲ್ಲದ ಪಾತ್ರವು ಕನ್ನಡಿಗರನ್ನು ಪ್ರತಿನಿಧಿಸಿದರೆ ಇನ್ನೊಂದು ಕಟ್ಟಬೊಮ್ಮನ್ ಮಾದರಿಯಲ್ಲಿ ತಮಿಳರ ತರ ಚಿತ್ರಿಕರಿಸಲಾಗಿದೆ.

*" ಸಂಗೋಳ್ಳಿ ರಾಯಣ್ಣ" ಎಂಬುವನು ಬ್ರಿಟಿಷರ ಗುಪ್ತಚರ ಅವನನ್ನು ಪುಲಕೇಶಿ ಅಣ್ಣ ಕಪಾಳಕ್ಕೆ ಹೊಡೆಯುತ್ತಾನೆ.

* Robert Claive ಮುಂತಾದ ಬ್ರಿಟಿಷ ಅಧಿಕಾರಿಗಳ ಜೊತೆ ಕನ್ನಡಿಗರನ್ನು ಗುರುತಿಸುತ್ತಾರೆ.

*ತುಘಲಕ್ ಮಾಡಿದ ಕ್ರಮಗಳನ್ನು ಪುಲಕೇಶಿಯ ಕೈಲಿ ಮಾಡಿಸುತ್ತಾರೆ
.

* ಪಲ್ಲವರ ಸೈನ್ಯ ದಂಡು ಎತ್ತಿ ಬಂದಾಗ ಅವರ ಮುಂದೆ ಟಪಾಲ್-ಗೋಚಿ ಡಾನ್ಸ ಮಾಡಿ ಪ್ರಾಣಭಿಕ್ಷೆ ಕೇಳುತ್ತಾನೆ. ಹೀಗೆ ಹಿಂದೆ ಒಂದು "ಕಂಚಿ ತಲೈಚಿತ್ತವಾನ್ "ಚಿತ್ರದಲ್ಲಿ ನಮ್ಮ ಪುಲಕೇಶಿಯನ್ನು ಭಫೂನ್ ತರ ಚಿತ್ರಿಸಲಾಗಿತ್ತು.

ಹಾಗಿದ್ದರೆ ನಮ್ಮ ಪುಲಕೇಶಿ ಹೇಗಿದ್ದ ??

೧) ಅವನ ಸೈನ್ಯ ಕಂಡರೆ ಸಾಕು ಹೆದರಿಕೊಳ್ಳುತಿದ್ದರು, ೩೦೦೦೦ ಆನೆಗಳು ಅವನ ಸೈನ್ಯದಲ್ಲಿ ಇದ್ದ ಕಾರಣವೇ ಉತ್ತರದ ಕನೋಜಿನ ಚಕ್ರವರ್ತಿ ಹರ್ಷವರ್ಧನ ಇವನಿಗೆ ಶರಣಾಗಿದ್ದು.
೨) ಇವನ ಪರಾಕ್ರಮ ೬-೭ನೇ ಶತಮಾನದಲ್ಲಿ ಭಾರತದ ಉದ್ದ ಅಗಲಕ್ಕೂ ಹಬ್ಬಿತ್ತು. ಇವನ ಪರಾಕ್ರಮ ನೋಡಿ ಸಿಲೋನಿನ ರಾಜ ಇವನ ಸಾಮಂತನಾಗಿದ್ದ. ಉತ್ತರ ಭಾರತದ ಗುಜರಾತಿನಲ್ಲಿ ಇವರ ರಾಜ್ಯದ ಒಂದು ಶಾಖೆ ಇತ್ತು.
೩) ಇವನ ನೌಕ ಸೈನ್ಯ ಆಗಿನ ಕಾಲದಲ್ಲಿ ಬಹಳ ಪ್ರಸಿದ್ದಿ ಪಡೆದಿತ್ತು, ಅದ್ದರಿಂದ ಆಗಿನ ಪರ್ಶಿಯಾ ದೇಶದ ರಾಜ ಇವನ ರಾಜ್ಯಕ್ಕೆ ರಾಯಭಾರಿ ಕಳಿಸಿದ್ದ.
೪) ಸ್ತ್ರೀ ಸಮಾನತೆಯನ್ನು ಮೊದಲು ಭೋದಿಸಿ ಅದನ್ನು ಆಚರಿಸಿದ ಪುಣ್ಯವಂತ ಇವನು, ಇವನ ಸೊಸೆ ಇವರಿಂದ ರಾಜಕೀಯ-ಆಡಳಿತ ಬಗ್ಗೆ ಶಿಕ್ಶಣ ಪಡೆದು ಒಂದು ಶಾಖೆಯನ್ನು ನೋಡಿಕೊಳ್ಳುತ್ತಿದ್ದಳು.


ಇಂತಹ ಮಹಾನ್ ಚಕ್ರವರ್ತಿ ಬಗ್ಗೆ ಹೀಗೆ ಕೀಳಾಗಿ ತೆಗೆಯಲು ಅವರಿಗೆ ಎಷ್ಟು ಕೊಬ್ಬು ಇರಬೇಕು ಹೇಳಿ ...ಅದರ ನಿರ್ಮಾಪಕರಿಗೆ ನಾವು ಕೇಳುವುದು ..

೧) ನಿಮಗೆ ಧೈರ್ಯ ಇದ್ದರೆ ಶಿವಾಜಿ ಇಲ್ಲ ಪಾಂಡ್ಯ ಅಂತ ಹೆಸರಿಡಬೇಕಿತ್ತು.
೨) ನಮಗೆ ಚರಿತ್ರೆ ಬಗ್ಗೆ ಗೊತ್ತಿಲ್ಲ, ಪುಲಕೇಶಿ ಇದ್ದ ಅನ್ನೊಂದು ಗೊತ್ತಿಲ್ಲ ಅನ್ನುವ ಅದರ ನಿರ್ಮಾಪಕನಿಗೆ ನಾಚಿಕೆ ಆಗಬೇಕು. ಹಾಗಿದ್ದರೆ ಪಲ್ಲವ,ಹೈದರಾಲಿ,ಟಿಪ್ಪು ಎಲ್ಲಿಂದ ಬಂದರೂ ??. ಪಲ್ಲವರ ಮುಂದೆ ಹಾಗೆ ಕಾಲಿಗೆ ಬೀಳುವುದು ಇವರಿಗೆ ಹಾಸ್ಯವಿರಬಹುದು ನಮಗೆ ಅಲ್ಲ.


ಇಷ್ಟು ಆಗಿ ನಿಮ್ಮ ಉತ್ತರಕ್ಕ್ಕೆ ನೀವು ಭದ್ದರಾಗಿದ್ದರೆ ..

(ಅ) ನಿಮಗೆ ಖಂಡಿತ ಹೇಡಿತನ ನಿಮ್ಮ ಮೈ-ಮನದಲ್ಲಿ ಆವರಿಸಿದೆ. ಇಲ್ಲವಾದರೆ ನಿಮಗೆ ಕನ್ನಡ ಚರಿತ್ರೆ ಬಗ್ಗೆ ಜ್ಞಾನ ಕಡಿಮೆ ಎಂದು ತೋರಿಸುತ್ತದೆ.

(ಆ) ಸ್ವಾಮಿ, ಅಭಿವ್ಯಕ್ತಿ ಸ್ವಾತಂತ್ರ ನಾವು ಸ್ವಾಗತಿಸುತ್ತೆವೆ, ಆದರೆ ಹಾಗೇ ಅಂತ ಬೇರೆಯವರ sentiments ಜೊತೆ ಆಟವಾಡುವುದು ತಪ್ಪು. ಪ್ರತಿಯೊಂದು ರಾಜ್ಯದ ಅಭಿವೃದ್ದಿ ಮತ್ತು ಸಂಸ್ಕೃತಿಗೆ ಹಿಂದಿನ ಚರಿತ್ರೆಯವರ ಕೊಡುಗೆ ಇದೆ. ನಮ್ಮ ಕೆಲಸಗಳಿಗೆ ನಾವು ಸ್ಪೂರ್ತಿ ತೆಗೆದುಕೊಳ್ಳುವುದು ನಮ್ಮ ಹಿಂದಿನ ರಾಜರಿಂದ. ಅದರಲ್ಲೂ ಶೌರ್ಯ,ಪರಾಕ್ರಮಗಳಿಂದ ೧೦೦೦ ವರುಷ ನಮ್ಮ ನಾಡನ್ನು ಆಳಿ, ತಮ್ಮ ಪರಾಕ್ರಮವನ್ನು ಭಾರತದ ಉದ್ದ-ಅಗಲಕ್ಕೂ ಹಬ್ಬಿಸಿದ ನಮ್ಮ ರಾಜರು ಗೋವಿಂದ-೩, ನೃಪತುಂಗ,ಪುಲಕೇಶಿ,ಮಯೂರ ಮತ್ತು ಕೃಷ್ಣದೇವರಾಯ ನಮಗೆ ಸ್ಪೂರ್ತಿ ಆಗದೆ ಬೇರಯವರಿಗೆ ಆಗುತ್ತಾರೆಯೇ ??
ಇವರನ್ನು ಅವಮಾನಿಸಿದರೆ ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ ಹಾಗೇ ಅಲ್ಲವೇ ??. ನಿಮಗೆ ಏನು ಅನಿಸದಿದ್ದರೆ ಅದು ನಿಮ್ಮ ಷಂಡತನದ ಪರಮಾವಧಿ.

ಇದನ್ನು ಸಮರ್ಥಿಸುವರಿಗೆ ನಾನು ಕೇಳುವ ಪ್ರಶ್ನೆ, ನಿಮ್ಮ ಕುಟುಂಬ ಬಗ್ಗೆ ಇಲ್ಲ ನಿಮ್ಮ ತಾಯಿ ಬಗ್ಗೆ ಕೀಳಾಗಿ ಇಲ್ಲದ-ಸಲ್ಲದ ವಿಚಾರಗಳನ್ನು ಹಾಸ್ಯ ಎಂದು ಹೇಳಿದರೆ ಒಪ್ಪಿಕೊಳ್ಳುತ್ತಿರಾ ?

(ಇ) ನಾಳೆ ನಾವು ಹಾಗೇ ಮಾಡಿದರೆ ಅವರು ಸುಮ್ಮನೆ ಇರುತ್ತಾರೆಯೇ??, ಅವರಿಗೆ ಇರುವ ಕಳಕಳಿ ನಮಗೆ ಯಾಕೆ ಇಲ್ಲಾ ?
ನಮ್ಮ ಮೌನವನ್ನು ಅವರು weakness ಅಂದುಕೊಂಡು ನಮ್ಮ ಮೇಲೆ ಸವಾರಿ ಮಾಡಲು ಹೊರಡುವದನ್ನು ತಪ್ಪಿಸಲು ನಾವು ಹೋರಾಡದಿದ್ದರೆ ಹೇಗೆ !!!

ನಮ್ಮ ಸ್ವಾಭಿಮಾನವನ್ನು ಕೆಣಕುವ, ಕನ್ನಡಿಗರು ಗಾಂಡುಗಳು ಅಂತ ಬಿಂಭಿಸುವ ಇಂತ ಚಿತ್ರವನ್ನು ವಿರೋಧಿಸದೇ ಪೂಜಿಸಬೇಕೆ ??

ಕೊಸರು:- ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ಮಂಡಳಿ ಕರ್ನಾಟಕದ್ಯಾಂತ ನಿಷೇಧಿಸಿದೆ. ಇದು ಒಳ್ಳೆಯ ಸುದ್ದಿ

Tuesday, July 04, 2006

ಕನ್ನಡದ ಬಗ್ಗೆ ಕೀಳರಿಮೆ ಇರುವವರಿಗೆ SHAME SHAME ....

ಮೊನ್ನೆ ಗೆಳೆಯರ ಜೊತೆ ಕಾಫಿ-ಡೇಯಲ್ಲಿ ಕುಳಿತಿದ್ದೆ, ಹಿಂದಿ ಮತ್ತು ಆಂಗ್ಲ ಹಾಡುಗಳಿಗೆ ತಲೆ ಕುಣಿಸುತ್ತ ಹುಡುಗ-ಹುಡುಗಿ ಭೇದವಿಲ್ಲದೆ ಹುಕ್ಕಾ ಮತ್ತು ದಂ ಎಳೆಯುತ್ತಿದ್ದ ಯುವ ಜನಾಂಗವೇ ಅಲ್ಲಿ ನೆಲಸಿತ್ತು. ನಮಗೆ ಬೇಕಾದ ಹಾಡುಗಳನ್ನು ಜ್ಯೂಕ್ ಬಾಕ್ಸ ಇರುವದರಿಂದ ಆ ಹುಡುಗರು ಪಕ್ಕದಲ್ಲಿ ಇರುವ ಹುಡುಗಿಗೆ, ಹಳದಿ ಬಣ್ಣ ಹಾಕಿದ ಆಂಟಿಗೆ ತಮ್ಮ ಹಾಡುಗಳನ್ನು Dedicate ಮಾಡುತ್ತ ಇದ್ದರು, ಆದರೆ ಒಂದೇ ಒಂದು ಕನ್ನಡ ಹಾಡು ಹಾಕಿ ಅಲ್ಲಿನ hep ಜನಾಂಗದ ಮುಂದೆ ಹಳ್ಳಿ ಗಮಾರನಾಗುವ ಗೋಜಿಗೆ ಯಾರು ಹೋಗಲಿಲ್ಲ. ನಮಗೆ ಅನಿಸಿತು ಅಲ್ಲಿ ಮೂಲೆ ಮೂಲೆಯಲ್ಲಿ ಕೆಲ ಕನ್ನಡ ಮಾತನಾಡುವ ಯುವಕ-ಯುವತಿಯರಿಗೆ ಕನ್ನಡ ಹಾಕಲು ಹಿಂಜರಿಕೆ ಇರಬಹುದು, ಹಾಕಿದರೆ ಸ್ವಲ್ಪ ಧೈರ್ಯ ಬರುತ್ತದೆ ಅಂತ ನಾವೇ ೪-೫ ಹಾಡುಗಳನ್ನು ೧೦ ನಿಮಿಷಗಳ ಅಂತರದಲ್ಲಿ ಹಾಕುತ್ತ ಬಂದೆವು. ನಮ್ಮ ಊಹೆಯ ಪ್ರಕಾರ ಆಂಗ್ಲ ಮಾತನಾಡುವ ಹುಡುಗರು
ಮುನಿಸಿಕೊಳ್ಳಬಹುದು ಹಾಗೇ ನಮ್ಮ ಕನ್ನಡ ಹುಡುಗರು ಹಾಡುಗಳನ್ನು enjoi ಮಾಡಬಹುದು ಅಂತ ನಮ್ಮ ಅನಿಸಿಕೆ ಪೊಳ್ಳಾಯಿತು.
ಅದಕ್ಕಿಂತ ನಮಗೆ ಆಶ್ಛರ್ಯವೆನಿಸಿದ್ದು, U2 ಕನ್ನಡ ವಾಹಿನಿಯಲ್ಲಿ VJ ಆಗಿರುವ ಒಂದು ಹುಡುಗಿ ಕನ್ನಡ ಹಾಡು ಬಂದಾಗ ಮುಖ ಸಿಂಡರಿಸಿದ್ದು ನೋಡಿ ನನಗೆ ಬಹಳ ಆಶ್ಚರ್ಯವೆನಿಸಿತು, ಕಾರ್ಯಕ್ರಮದಲ್ಲಿ ಇದು ಮಾಡಿ,ಅದು ಮಾಡಿ ಎಂದು ಬೋಧಿಸುವ ಹುಡುಗಿಯ ಬಣ್ಣ ಬಯಲಾಯಿತು.

ಯಾಕೆ ಇಷ್ಟು ಕೀಳರಿಮೆ ?? ನಮ್ಮ ಮಾತೃಭಾಷೆಯ ಬಗ್ಗೆ ಯಾಕೆ ಹೀಗೆ ತಿರಸ್ಕಾರ ತೊರುತ್ತ ಇದ್ದೆವೆ ? ಪ್ರಶ್ನೆಗಳು ನನ್ನನ್ನು ಕಾಡುತ್ತ ಇತ್ತು. ಆ ನಿಟ್ಟಿನಲ್ಲಿ ಒಂದು ಪುಸ್ತಕ ಒದುವಾಗ ಒಂದು ಸುಂದರ ಶ್ಲೋಕ ನೆನಪಿಗೆ ಬಂತು.

"ಮಾತೃಭಾಷಂ ಪರಿತ್ಯಜ್ಯ
ಯೋsನ್ಯಭಾಷಮುಪಾಸತೇ
ತತ್ರ ಯಾನ್ತಿ ಹಿ ತೇ ದೇಶಾ:
ಯತ್ರ ಸೂರ್ಯೋ ನಾ ಭಾಸತೇ

ಇದು ಸಂಸೃತ ಶ್ಲೋಕ, ಇದರ ಅರ್ಥವಿಷ್ಟೆ
" ಯಾರು ತನ್ನ ತಾಯಿ ಭಾಷೆಯನ್ನು ಮರೆತು ಬೇರೆ ಭಾಷೆಯ ಗುಲಾಮನಾಗುತ್ತಾನೊ ಅವನು ಸೂರ್ಯನಿಲ್ಲದ ಅಂಧಕಾರ ಲೋಕಕ್ಕೆ ಹೋಗುತ್ತಾನೆ".

ನಮ್ಮ ಯುವಜನಾಂಗ ಭಾಷೆ ಕೇವಲ ಒಂದು ವ್ಯವಹಾರಿಕ ಸಂಪರ್ಕ ಅಂತ ಕೇವಲ ಮಾತನಾಡುವದರ ಬದಲು ಅದರ ಮೇಲೆ ಒಂದು ಸಮುದಾಯ ನಿಂತಿದೆ ಎಂಬುದನ್ನು ಮನಗಾಣಬೇಕು.

ಸುಮ್ಮನೆ ನಮ್ಮ ಸಂಸ್ಕೃತಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣ ಎಂದು ದೂರುವದನ್ನು ಬಿಟ್ಟು ಅವರ ಭಾಷಭಿಮಾನದ ಒಂದು ಅಂಶ ನಮ್ಮ ಯುವ ಜನತೆ ಕಲಿತರೆ ನಮ್ಮ ಭಾಷೆ ಇನ್ನೂ ಶ್ರೀಮಂತವಾಗುತ್ತದೆ. ಸುಮ್ಮನೆ prada,armani ಹಾಕಿಕೊಂಡ ಮಾತ್ರಕ್ಕೆ ನಾವು ಅವರು ಆಗುವದಿಲ್ಲ,

ಮೊದಲ ಮಹಾಯುದ್ದದಲ್ಲಿ ಜರ್ಮನಿ ಫ್ರಾನ್ಸ್ ವಶಪಡಿಸಿಕೊಂಡಾಗ ಜರ್ಮನ್ ಭಾಷೆಯನ್ನು ಆಗಿನ ಕೈಸರ್ ಎಲ್ಲಾ ಕಡೆ ಜರ್ಮನ್ ಭಾಷೆಯನ್ನು ತುರುಕಿದರು, ಕಲಾ ಪ್ರೇಮಿಯಾಗಿದ್ದ ಕೈಸರನ ಹೆಂಡತಿ Auguste Viktoria ಒಮ್ಮೆ ಒಂದು ಕಲಾಶಾಲೆಗೆ ಬೇಟಿಕೊಟ್ಟಳು ಅಲ್ಲಿ ಒಂದು ಹುಡುಗ ಸುಂದರವಾಗಿ ಒಂದು ಚಿತ್ರ ಬಿಡಿಸಿದ್ದ, ಅದನ್ನು ನೋಡಿ ಸಂತೋಷಗೊಂಡು ನಿನಗೆ ಎನು ಬೇಕು ಅಂದರೆ ಆ ಹುಡುಗ ತನ್ನ ಭಾಷೆಯನ್ನು ಮರಳಿ ಪಡೆದ. ಇಂತಹ ಸ್ಪೂರ್ತಿ ಕಥೆಗಳನ್ನು ನಮ್ಮ ಯುವಜನಾಂಗ ಎಕೆ ಮಾದರಿಯಾಗಿ ತೆಗೆದುಕೊಳ್ಳುವದಿಲ್ಲ?

ನಾಚಿಕೆ ಆಗಬೇಕು ಕನ್ನಡ ಬಂದಾಗ ಕೀಳರಿಮೆಯಿಂದ ತಲೆ ತಗ್ಗಿಸುವರಿಗೆ, ಸ್ವಂತ ಮಾತೃಭಾಷೆಯನ್ನು ಪ್ರೇಮಿಸದ ಯಾರು
ಎನೂ ಆಗಲು ಸಾಧ್ಯವಿಲ್ಲ. ಅಂತ ಮಾನಗೇಡಿಗಳಿಗೆ shame shame ...

Monday, June 26, 2006

ರತ್ನನ್ ಪದಗೊಳ್ .....

ರತ್ನನ್ ಪದ ಓದಿದವರಿಗೆ ಗೊತ್ತಿರೊತ್ತೆ ಅದರ್ ಗಮತ್ತು, ೧೯೩೪ರಲ್ಲಿ ಜೆ.ಪಿ.ಆರ್ ತಮ್ಮ ಪದಗಳನ್ನು ಪುಸ್ತಕದಲ್ಲಿ ಆಕಿ ಆಚೆ ತಂದಿದ್ದು ಅಷ್ಟೇಯಾ ಆಮೇಲೆ ಆ ಪದ್ಯಗಳು ಜನರ ನಾಲಿಗೆ ಮೇಲೆ ಹೆಚ್ಚು ವಾಸಸಿದ್ದು, ಆ ಪುಸ್ತಕ ಬಿಚ್ಚುವ ಮುನ್ನ ನಿಮಗೆ ಮೊದಲ್ ಸಾಲು ಕಾಣುವುದು "ಯಾರು ಇದನ್ನು ಮೆಲ್ಲಗೆ ಮನಸ್ಸಿನಲ್ಲಿ ಓದಿಕೊಬಾರದು, ಜೋರಾಗಿ ಗಟ್ಟಿಯಾಗಿ ಕಿವಿ ಮೇಲೆ ಬೀಳುವ ಹಾಗೆ ಓದಬೇಕು,
ಆಗೆ ಮಾಡಿದರೆ ಮಾತ್ರ ಆರ್ಥ ಆಗುತ್ತದೆ ಅಂತ.
ಏನು sudden ಆಗಿ ರತ್ನನ್ ಪದ್ಯ ಗ್ನಾಪಕ ಬಂತು ಅಂದ್ರೆ, ಇತ್ತಿಚಿಗೆ ಲಾಂಗ್ ಲಾಜ ದರ್ಶನ್ ನಟಿಸಿರುವ ಸುಂಟರ ಗಾಳಿ ಚಿತ್ರದಲ್ಲಿ
ಒಂದು ಪದ್ಯ ಇದೆ,ಕೇಳುತ್ತ ಕೇಳುತ್ತ ಹಿಂದೆ ನಾನು ಓದಿದ ರತ್ನನ ಪದ್ಯ ಗ್ನಾಪಕ ಬಂತು.

ಹಾಡು:- ನಂಜಿಗೆ
ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು,
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಕುಗ್ತು
ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು,
ನಂಗೂ ನಿಂಗೂ ಯೆಂಗ್ ಆಗಲೋಯ್ತು ನಂಜು.
(
ನೀನು ನನ್ನ ಹಟ್ಟಿ(ಗುಡಿಸಲು) ಬೆಳಕಿದ್ದ ಹಾಗಿದ್ದೆ ನಂಜು
ಮಾಗಿಯಲ್ಲಿ ಹುಲ್ಲಿನ ಮೇಲೆ ಮಲಗಿದ್ದ ಹಾಗೆ ಮಂಜು,
ಮಾಗಿ ಕುಗ್ಗಿತು
ಬೇಸಿಗೆ ನುಗ್ಗಿತು
ನನಗೂ ನಿನಗೂ ಹೇಗೆ ಅಗಲಿಹೋಯಿತು ನಂಜು.
)
ಸೀಗಂಗ್ಪಟ್ಟದ್ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ಣದ್ ಸುತ್ತ ನಡದಿ
ಸಂಗಂದಲ್ಲಿ
ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

(ಶ್ರೀರಂಗ ಪಟ್ತದ ಹತ್ತಿರ ಕಾವೇರಿ ಒಡೆದು
ಎರಡು ಹೋಳಾಗಿ ಪಟ್ಟಣದ ಸುತ್ತ ನಡೆದು,
ಸಂಗಮದಲ್ಲಿ ಸೇರಿಕೊಂಡು,
ಮರಳಿ ಮುಂದಕ್ಕೆ ಹೋದದು ನಮಗೆ ಜ್ಞಾನದ ಪಂಜು
ಈಗ ಅಗಲಿದರೇನು ? ಮುಂದೆ ಸೇರುತ್ತಿವಿ ನಂಜು.)

ಆಗಲೋಡೋಗ್ತೆ ರಾತ್ರಿ ಬಂತತ್ ಅಂಜಿ,
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರ್ರಾತ್ರಿ ಬಂತು
ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕೆ ಅಲ್ವ ನಂಜಿ
ಆ ನಮ್ಕೆ ಜೀವಾನ್ ಉಳಸೋ ಗಂಜಿ

(
ಹಗಲು ಓಡಿಹೋಗುತ್ತದೆ ರಾತ್ರಿ ಬಂತೆಂದು ಅಂಜಿ
ರಾತ್ರಿ ಮುಗಿದುಹೋದರೆ ಹಗಲೇ ಅಲ್ಲವೆ ನಂಜಿ
ರಾತ್ರಿ ಬಿದ್ದಿತು,ಹಗಲೇ ಬಂದಿತು
ಹೋಗುವುದು ಮರಳಿ ಬರುವದಕ್ಕೆ ಅಲ್ಲವೇ ನಂಜಿ
ಆ ನಂಬಿಕೆ ನನ್ನ ಜೀವವನ್ನು ಉಳಿಸುವ ಗಂಜಿ.
)
ಇಂತಹ ಮಹಾನ್ ಪದ್ಯಗಳನ್ನು ಬರೆದ ಮಹಾನ್ ಕವಿಗೆ ಸಿನೆಮಾದರು ಹಾಡನ್ನು ಕದ್ದಾಗ, ಗೌರವ ಧನ ಕೋಡಬೇಕು. ಹಾಗೆ ಆದರೂ ಅವರ ಪುಸ್ತಕ ಹೆಚ್ಚು ಪ್ರಕಟಣೆಗೊಂಡು ಕನ್ನಡಿಗರ ಮನೆ ಸೇರಲಿ.
ಕೊನೆಯದಾಗಿ ರತ್ಗ್ನ ನನ್ನಹಾಗ ಕನ್ನಡ ಅಭಿಮಾನಿ ..ನನ್ನ ಮೆಚ್ಚಿನ ಸಾಲುಗಳು ಇವು
... " ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲಿಸ್ ಬಿಡುಬೇಕ್ ರತ್ನ
ಅಂತ ಅವನ್ ಅಂದ್ರೆ - ದೇವ್ರ ಆದ್ರ ಎನ್
ಮಾಡ್ತಿನಿ ಅವ್ನ್ಗೆ ಖತ್ನ."

Thursday, June 22, 2006

ವಿಭಿನ್ನ ವಿರಹ ಗೀತೆ.

ನಮಸ್ಕಾರ,
ಇದೊಂದು ವಿಭಿನ್ನ ವಿರಹ ಗೀತೆ, ಇಲ್ಲಿ ೨ ಬದಿ ಇದೆ. A ಮತ್ತು B. ಎರಡು ಬದಿಯಲ್ಲಿ ಶಬ್ದಗಳು ಇವೆ( ಹೊಂದಿಸಿ ಬರೆಯರಿ ಮಾದರಿಯಲ್ಲಿ ), ನಿಮ್ಮ ಅನಕೂಲಕ್ಕೆ ತಕ್ಕ ಹಾಗೆ(ಇಷ್ಟ ಬಂದ ಹಾಗೆ) ಹೊಂದಿಸಿ ನಿಮ್ಮದೆ ಕವಿತೆ ಮಾಡಿ ಕೊ(ಲ್ಲ)ಳ್ಳಬಹುದು.
ನೂರಾರು ಕವಿತೆಗಳು ಅಡಗಿವೆ ಇದರಲ್ಲಿ, ಹೊಂದಿಸಿದ ಹಾಗೆಲ್ಲ ಹೊಸ ಹೊಸ ಕವಿತೆಗಳು.


====A========= =====ಆB======
ಕಣ್ಣಿರಿನ ಕೊಳದಲ್ಲಿ ======ಪ್ರೀತಿಯ ನಿಟ್ಟುಸಿರು
ತಣ್ಣಗಿನ ವಿರಹದಲ್ಲಿ ===== ಈಡೇರದ ಬಯಕೆ
ಓಂಟಿತನದ ಬೇಗೆಯಲ್ಲಿ=== ಮೌನದ ನರಳಿಕೆ
ಆಸೆಯ ಮಸಣದಲ್ಲಿ =====ಶೀತಲ ದಳ್ಳುರಿ

Wednesday, June 14, 2006

ಜಾತಕದಲ್ಲಿ ಏನಿದೆ ??

ನನಗೆ ಬಹಳಷ್ಟು ಬಾರಿ ಈ ಪ್ರಶ್ನೆ ಮೂಡಿ ಬಂದಿದೆ, ಆದರೆ ಉತ್ತರ ಮಾತ್ರ ದೊರಕಿಲ್ಲ. ನನ್ನ ಜಾತಕವನ್ನು ನಾನೇ ಬರೆಯಲು ಪ್ರಯತ್ನಿಸಿದೆ, ಆದರೆ ದಾರಿ ತಪ್ಪಿ ಕೈಬಿಟ್ಟೆ. ಯಾವುದೇ ಶುಭ ಸಮಾರಂಭಗಳನ್ನು ಮಾಡುವಾಗ ಜಾತಕ ದೂಳಿನಿಂದ ಎದ್ದು ಬರುತ್ತದೆ. ಅದರಲ್ಲಿ ನಮ್ಮ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಅಂತ ಹಿರಿಯರ ಅಂಬೋಣ.

ಮುಖ್ಯವಾಗಿ ಜಾತಕದ ಕಥೆ ಹೆಚ್ಚು ಕೇಳಿಬರುವುದು ಮದುವೆಯ ಪ್ರಸ್ತಾಪ ಬಂದಾಗ, ಹುಡುಗಿಯ ಮತ್ತು ಹುಡುಗನ ಜಾತಕವನ್ನು ತಾಳೆ ಮಾಡಿ, ಗುಣಾಕಾರ ಭಾಗಕಾರ ಮಾಡಿ ಒಂದು ಸಂಖ್ಯೆ ಕೊಡುತ್ತಾರೆ, ಒಂದು ಸಂಭಂದ ಆಗಬೇಕಾದರೆ ೩೨ ಗುಣಗಳಲ್ಲಿ ಕನಿಷ್ಠ ೧೮ ಗುಣಗಳು ಕೂಡಿಬರಬೇಕು ಎಂದು ಹೇಳುತ್ತಾರೆ. ಹೆಚ್ಚು ಗುಣಗಳು ಬಂದಷ್ಟೂ ಹೆಚ್ಚು ವರಸಾಮ್ಯವಿರುತ್ತದೆ.

ಒಂದು ಜಾತಕ ಆಗುವುದು ಅನೇಕ ವಿಷಯದ ಮೇಲೆ, ಅಂದರೆ ಹುಟ್ಟಿದ ದಿನ, ದಿನಾಂಕ, ಸಮಯ, ಅಕ್ಷಾಂಶ,ರೇಖಾಂಶ ಮತ್ತು ನಕ್ಷತ್ರದ ಮೇಲೆ ಅವಲಂಭಿತವಾಗಿರುತ್ತದೆ. ಕೆಲವರು ಹುಟ್ಟಿದ ತಪ್ಪೊ ಎನೊ ಅವರೊಂದಿಗೆ ಕೆಲ ಪಾಪಗಳನ್ನು ಹೊತ್ತುಕೊಳ್ಳುತ್ತಾರೆ, ಅಂದರೆ ಈ ನಕ್ಷತ್ರದಲ್ಲಿ ಹುಟ್ಟಿದರೆ ಹೀಗೆ ಅಂತ. ಅದಕ್ಕೆ ತಕ್ಕ ಹಾಗೆ ಮಾಡಬೇಕು, ಮಾಡದಿದ್ದರೆ ಅವಘಡ ತಪ್ಪಿದ್ದಲ್ಲ ಅಂತ. ನಮ್ಮ ಜನರು ಯಾಕೆ ಸುಮ್ಮನೆ RIsk ಅಂತ ಅದನ್ನು ಪಾಲಿಸುತ್ತ ಬಂದಿದ್ದಾರೆ.

ಹಾಗಿದ್ದರೆ ಒಂದು ಸಂಭಂದ ಜಾತಕದ ಮೇಲೆ ನಿಂತಿರುತ್ತದೆಯೇ??

ಖಂಡಿತ ಇಲ್ಲಾ, ಮದುವೆಯ ಸಂಭಂದ ಹಾಗೆ ನಿಂತಿದ್ದರೆ, ಇಂದು ೩೨ ಗುಣಗಳು ಕೂಡಿದವರು ಡೈವರ್ಸ್‍ಗೆ ಅರ್ಜಿ ಹಾಕುತ್ತ ಇರಲಿಲ್ಲ, ಹಾಗೇಯೆ ೧೫ ಗುಣಗಳು ಕೂಡಿದವರು ನೆಮ್ಮದಿಯಿಂದ ಬಾಳುತ್ತ ಇರಲಿಲ್ಲ. ಒಂದು ತತ್ವ ಒಂದು ಸಮುದಾಯಕ್ಕೆ ಸೀಮಿತವಾದರೆ ಅದಕ್ಕೆ ಅರ್ಥವಿಲ್ಲ, ಜಗತ್ತಿನ್ನ ೯೫% ಜನರು ಇದನ್ನು ಪಾಲಿಸುವದಿಲ್ಲ, ಆ ಜನರು ಇಂದು ನೆಮ್ಮದಿಯಿಂದ ಸಂಸಾರ ಮಾಡುತ್ತ ಇಲ್ಲವೇ ??.

ಹಾಗೇಯೂ ಮದುವೆಯ ಸಂಭಂದ ಹಣೆಬರಹ ಜಾತಕದ ಮೇಲೆ ನಿಂತಿದ್ದರೆ, ನಿಜವಾಗಿಯೂ ಜಾತಕ ನೋಡಬೇಕಾಗಿರುವುದು
ಹುಡುಗಿ ಮತ್ತು ಹುಡುಗನ ಅಮ್ಮನ ಜಾತಕವನ್ನು. ಯಾಕೆಂದರೆ ಮುಕ್ಕಾಲು ಜಗಳ ಮತ್ತು ಮನಸ್ಥಾಪ ಬರುವುದು ಇವರ ಮಧ್ಯೆ ತಾನೇ ??.

ಹಾಗಿದ್ದರೆ ಮದುವೆ ಯಾವುದರ ಮೇಲೆ ನಿಂತಿದೆ, ಏನು ತೋರಿಸಬೇಕು.

ಹುಡುಗ ಮತ್ತು ಹುಡುಗಿ ತಮ್ಮ ಸಂಪೂರ್ಣ(Master Health Checkup) ಆರೋಗ್ಯ ತಪಾಸಣೆ ಮಾಡಿಸಿ ಅದರ ಒಂದು ವರದಿಯನ್ನು ಪಡೆಯಬೇಕು. ಹುಡುಗನ ಆರೋಗ್ಯದ ವರದಿಯನ್ನು ಹುಡುಗಿಯು ತನ್ನ family doctor ಹತ್ತಿರ ತೋರಿಸಲಿ, ಹಾಗೇಯೆ ಹುಡುಗ ಕೂಡ. ಆಗ ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇಯೆ ಎನು ತಪ್ಪು ಮಾಡಿರದ ಮುಂದಿನ ಪೀಳಿಗೆಗೆ ಅವರ ರೋಗಗಳನ್ನು ಅನುವಂಶಿಯತೆ ಮೂಲಕ ಕೊಡುವದನ್ನು ತಡೆಯಬಹುದು.
ಇದನ್ನು ನಮ್ಮ ಸರ್ಕಾರ ಖಡ್ಡಾಯಗೊಳಿಸಬೇಕು, ಅರ್ಥವಿಲ್ಲದ ಜಾತಕ ನೋಡುವದನ್ನು ಬಿಟ್ಟು ಕ್ರಿಯಾತ್ಮಕ ಕೆಲಸವನ್ನು ನಾವು ಮಾಡೋಣ. ಎನಂತಿರೀ ????

Thursday, May 25, 2006

Councelling(ಮಾರ್ಗದರ್ಶನ) ಅವಶ್ಯಕತೆ .....




ಪಿ.ಯು.ಸಿ ಫಲಿತಾಂಶದ ನಂತರ ಬೆಂಗಳೂರಿನಲ್ಲೇ ಸುಮಾರು ೧೦-೧೨ ಆತ್ಮಹತ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಜಕ್ಕೂ ಮನಸ್ಸಿಗೆ ಆ ಸುದ್ದಿಗಳನ್ನು ಕೇಳಿ ಪಿಚ್ಚು ಅನಿಸುತ್ತದೆ. ಯಾಕೆ ಬದುಕಿ ಬಾಳಬೇಕಾದ ಹೂವುಗಳು ಹೀಗೆ ಮಾಡಿಕೊಂಡವು ಅಂತ ಬೇಸರವಾಗುತ್ತದೆ. ಪಿ.ಯು.ಸಿ ಹೋಯಿತು ಅಂದರೆ ಜೀವನ ಮುಳುಗಿ ಹೋಗಿಲ್ಲ, ಇಂದು ಅನೇಕ ವೃತ್ತಿಗಳನ್ನು ತೆಗೆದುಕೊಳ್ಳಬಹುದು. ಅದರಲ್ಲಿ INTERIOR DESIGNING ಪ್ರಮುಖವಾದುದು.

ಇದಕ್ಕೆ ಪೂರಕವಾಗಿ ಪದವಿ ಮುಗಿಸಿ ಕೆಲಸವನ್ನು ಅರಿಸುವ ಜನರು, ಕೆಲಸ ಸಿಗಲಿಲ್ಲ ಅಂತ ಗೊತ್ತಾದರೆ ಬೇಗ ಮನೋವೈಫಲ್ಯಕ್ಕೆ ಈಡಾಗಿ ಆತ್ಮಹತ್ಯಗೆ ಶರಣಾಗುತ್ತಾರೆ. ಅನೇಕ ಕಡೆ ನಿಮಗೆ ಕೇಳಿರಬಹುದು ನಮ್ಮವರಿಗೆ ಕೆಲಸ ಸಿಗುತ್ತಿಲ್ಲ ಅಂತ, ಆದರೆ ಒಬ್ಬರು ಯಾಕೆ ಸಿಗುತ್ತ್ತಿಲ್ಲ, ಚಿಕ್ಕ ಊರುಗಳಿಂದ ಬಂದವರಿಗೆ ಎನು ತರಬೇತಿ ಕೋಡಬೇಕು ಎಂಬುದರ ಬಗ್ಗೆ
ಯೋಚಿಸದೆ ಇದ್ದಾಗ, ಎಲೆ ಮರೆಕಾಯಿಯಾಗಿ ಇದಕ್ಕ್ಕೆ ಕೆಲಸ ಮಾಡುತ್ತಿರುವ ಬನವಾಸಿ-ಬಳಗಕ್ಕೆ ಅಭಿನಂದನೆ ಸಲ್ಲಿಸಬೇಕು.

ಬೆಂಗಳೂರಿಗೆ ಬಂದು ಉದ್ಯೋಗವನ್ನು ಅರಸುವ ಕನ್ನಡಿಗರಿಗೆ ವೃತ್ತಿ ಮಾರ್ಗದರ್ಶನ ಮಾಡಿ, ನಮ್ಮ ಜನರಿಗೆ ಕೆಲಸ ಸಿಗಲು ಬನವಾಸಿ ಬಳಗ ದುಡಿಯುತ್ತಲೆ ಇದೆ. ಇಲ್ಲಿಯವರೆಗೆ 7 ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿ ಸುಮಾರು ೧೦೦+ ಜನರಿಗೆ ಕೊಡಿಸಲು ನೆರವಾಗಿದೆ. ಈ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ೫೦೦+ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಇದರಲಿ ಬಿ.ಇ, ಬಿ.ಕಾಂ, ಬಿ.ಎಸ್ಸಿ ಪದವಿಯನ್ನು ಪಡೆದ ಅನೇಕ ಪದವಿಧರರು ಇದ್ದಾರೆ. ಕರ್ನಾಟಕದ ಪ್ರತಿ ಜಿಲ್ಲೆಗೂ ಈ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗುವುದು ಅವರ ಆಸೆ, ಇದಕೆ ಪೂರಕವಾಗಿ ಒಂದು ಕಾರ್ಯಕ್ರಮ ಮೈಸೂರಿನಲ್ಲಿ ನಡೆದಿದೆ.

೮ನೇ ವೃತ್ತಿ ಮಾರ್ಗದರ್ಶನದ ಆಹ್ವಾನಪತ್ರವನ್ನು ನಾನು ಇಲ್ಲಿ ಲಗತ್ತಿಸಿದ್ದೇನೆ. ಇದರ ಜೊತೆಗೆ ಇಂದಿನ ಪಿ.ಯು.ಸಿಯಲ್ಲಿ ನೊಂದವರಿಗೆ councelling ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರೆ ಒಳ್ಳೆಯದು.

(ಚಿತ್ರಗಳು ಕೃಪೆ:- ಬನವಾಸಿ ಬಳಗ)

ಗೋ...........................ಲ್


"go ಜರ್ಮನಿ" ಇದು ಜಗತ್ತಿನ ಎಲ್ಲಾ ಫುಟ್ಬಾಲ್ ಪ್ರಿಯರ ವಾಕ್ಯ, ಭಾರತದಲ್ಲಿ ಫುಟ್ಬಾಲ್ ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ವಿಶ್ವ ಕಪ್ ಬಂದರೆ ಸಾಕು
ನಮ್ಮ ಮನ-ಮನೆಗಳಲ್ಲಿ ಫುಟ್ಬಾಲ್ ಹಾಸುಹೊಕುತ್ತದೆ. ಮನೆಯಲ್ಲಿ ಒಬ್ಬರು ಒಂದು ತಂಡವನ್ನು ಬೆಂಬಲಿಸಿದರೆ ಇನ್ನೊಬ್ಬರು ಇನ್ನೊಂದು ತಂಡವನ್ನು ಬೆಂಬಲಿಸಿ ಮನೆಯೇ ಒಂದು ಮೈದಾನ ಆಗುತ್ತದೆ.
ನನಗೆ ವಿಶ್ವಕಪ್ ಫುಟ್ಬಾಲ್ ಬಹಳ ಹಿಂದಿನ ಪರಿಚಯ, ನಾನು ನೋಡಲು ಶುರು ಮಾಡಿದ್ದು ೧೯೮೬ ವಿಶ್ವಕಪ್‍ನಿಂದ. ಆಗ ನಮ್ಮ ಮನೆಯಲ್ಲೇ ಎರಡು ಬಣ ಆಗಿತ್ತು,ಒಂದು ಬಣ ಅರ್ಜೇಂಟಿನಾಗೆ ಬೆಂಬಲ ನೀಡಿದರೆ ಇನ್ನೊಂದು ಪಶ್ಚೀಮ ಜರ್ಮನಿಗೆ ಬೆಂಬಲ ಕೊಟ್ಟರು.
ಆ ವಿಶ್ವಕಪ್ ನನಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸಿತು. ಮರಾಡೋನ ಆಟ ನೋಡಿ ನಾವು ಎಷ್ಟು ಪ್ರಭಾವಿತರಾಗಿದ್ದಿವಿ ಅಂದರೆ ಅಂದು ಕ್ರಿಕೆಟ್ ಆಟದ ಚೆಂಡಿನಲ್ಲಿ ನಾವು ಫುಟ್ಬಾಲ್ ಆಡಿದ್ದೆ ಆಡಿದ್ದು.
ಇನ್ನೂ ಫುಟ್ಬಾಲ್ ಇತಿಹಾಸದಲ್ಲಿ ಎಂದು ಮರೆಯಲಾಗದ ಪಂದ್ಯವೆಂದರೆ ಕ್ವಾಟರಫೈನಲ್ಸ್‍ನ ಅರ್ಜೇಂಟಿನಾ ಮತ್ತು ಇಂಗ್ಲೆಡ್ ಪಂದ್ಯ. ಆ ಪಂದ್ಯದಲ್ಲಿ ಮರಾಡೊನ ಗೋಲ್ ಯಾರು ತಾನೇ ಮರೆಯಲೂ ಸಾಧ್ಯ.
೨-೧ ಅಂತರದಲ್ಲಿ ಪಂದ್ಯವನ್ನು ಗೆದ್ದ ಅರ್ಜೇಂಟಿನಾ ತಾನೂ ವಿಶ್ವಚಾಂಪಿಯನ್ ಎಂದೂ ಸಾಬೀತು ಪಡಿಸಿತ್ತು.
ಅಲ್ಲಿಂದ ನನ್ನ ಬೆಂಬಲ ಅರ್ಜೇಂಟಿನಾಗೆ ಮೀಸಲಾಗಿತ್ತು.

೧೯೯೦ರ ಇಟಾಲಿಯಾ ಸಮಯದಲ್ಲಿ ಮೊದಲ ಪಂದ್ಯದಲ್ಲಿ ಕ್ಯಾಮರೂನ್ ಎದುರು ಸೋತು ಸುಣ್ಣವಾದಾಗ ಬೇಸರ ಹೊಂದಿದ ಅನೇಕರಲ್ಲಿ ನಾನು ಒಬ್ಬ.ಆ ಸಮಯದಲ್ಲಿ ಇಟಲಿ ಆಟ ನೋಡಿ ನನ್ನ ಬೆಂಬಲ ತಂಡಗಳಲ್ಲಿ ಇಟಲಿಯನ್ನು ಸೇರಿಸಿಕೊಂಡಿದ್ದೆ.
ಆದರೆ ವಿಶ್ವಕಪ್‍ನಲ್ಲಿ ಡಾರ್ಕಹಾರ್ಸ್ ತರ ಬಂದ ಕ್ಯಾಮರೂನ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ರೊಜರ್ ಮಿಲ್ಲಾ ಆಟವನ್ನು ಯಾರು ತಾನೇ ಮರೆಯಲು ಸಾದ್ಯ?,
ಕೊಲಂಬಿಯ ಗೋಲ್ಕೀಪರ್ ಮಾಡಿದ ನಗೆಪಾಟಿಲಿನಲ್ಲಿ ಗೆದ್ದ ರೊಜರ್ ಮಿಲ್ಲ ತಮ್ಮ ತಂಡವನ್ನು ಕೊನೆಯ ೮ರ ಸುತ್ತಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ೧೯೮೬ ಗೋಲ್ಡನ್ ಬುಟ್ ವಿಜೇತ ಗ್ಯಾರಿ ಲಿನ್ಕರ್ ಮತ್ತು ಗಜ್ಜಾ(gasgoni)ಸಹಾಯದಿಂದ ಕ್ಯಾಮರೂನ್ ಪಂದ್ಯ
ಸೋತರು ನಮ್ಮ ಮನದಲ್ಲಿ ಸದಾ ನೆಲಸಿದರು.

ಮುಂದಿನ ವಿಶ್ವಕಪ್‍ಗಳಲ್ಲಿ ನಾನು ಬೆಂಬಲಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಲಿಲ್ಲ,ಬ್ಯಾಟಿಸ್ಟುಟಾ,ಆರ್ಟೆಗೋ ಮುಂತಾದ ಆಟಗಾರರನ್ನು ಹೊಂದಿದ್ದು ಅರ್ಜೇಂಟಿನಾ ಅಂದುಕೊಂಡ ಹಾಗೆ ಆಡಲಿಲ್ಲ.
ಬ್ರೆಜಿಲ್ ಮೈಲುಗೆ ಪ್ರಭಲವಾಗಿ ಇತರರ ಆಟ ಕೇವಲ ನೀರಸವಾಗಿ ಕಂಡಿತು. ಈ ಬಾರಿ ನನ್ನ ಮೆಚ್ಚಿನ ತಂಡಗಳು ಉತ್ತಮ ಪ್ರದರ್ಶನ ನೀಡುತ್ತವೆ ಎಂದು ನಾನು ನಂಬಿದ್ದೇನೆ.
ಆದರೆ ಒಂದು ಆಟಗಾರನ ಮೇಲೆ ಅವಲಂಬಿತರಾಗಿರುವ ತಂಡಗಳು ಪೆಟ್ಟು ಅನುಭವಿಸುವುದು ಸರ್ವೆಸಾಮಾನ್ಯ. ಆದರೆ ಬ್ರೆಜಿಲ್ ತಂಡ ನೋಡಿದರೆ ಒಬ್ಬರನ್ನು ಇನ್ನೊಬ್ಬರು ಅಷ್ಟೆ ಪ್ರಭಾವಶಾಲಿಯವರು ಬದಲಾಯಿಸುತ್ತಾರೆ.
ಕ್ರೆಸ್ಪೊ,ಐಮಾರ್,ಡೆಲೆಸ್ಯಾನ್ಡ್ರೊ ಮುಂತಾದ ಅನುಭವಿ ಆಟಗಾರರು ಇದ್ದರೂ ಅರ್ಜೇಂಟಿನಾ ಬ್ರೆಜಿಲ್ ಎದುರೂ ಸಪ್ಪೆ ಆಗುತ್ತದೆ.

ಪ್ರತಿ ವಿಶ್ವಕಪ್‍ನಲ್ಲಿ ಹೆಚ್ಚು ಗೋಲ್ ಬಾರಿಸಿದವರಿಗೆ ಚಿನ್ನದ ಬೂಟ್ ಕೊಡುತ್ತಾರೆ, ೮೬ರಲ್ಲಿ ಗ್ಯಾರಿ ಲಿನ್ಕರ್ ಗೆದ್ದರೆ, ೯೦ ಶಿಲಾಚಿ,೯೪ ರಲ್ಲಿ ಸ್ಟೊಟಿಚಿಕೊವ್ ಮತ್ತು ಸಾಲೆನೆಕೊ , ೯೮ರಲ್ಲಿ ಡೆವಾನ್ ಸೂಕರ್,೦೨ರಲ್ಲಿ ರೊನಾಲ್ಡೊ ಗೆದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಆಟಗಾರರು ಒಬ್ಬರೇ ತಮ್ಮ ತಂಡದ ಯಶಸ್ಸಿಗೆ ಕಾರಣರಾದರು.

ಈ ಸಲದ ವಿಶ್ವಕಪ್‍ನಲ್ಲಿ ಯಾರು ಆ ಸ್ಥಾನವನ್ನು ಹೊಂದುತ್ತಾರೆ ಎಂದು ನಾನು ಕಾದು ಕುಳಿತಿರುವೆ. ಇನ್ನೂ ನೀವು ??

Tuesday, May 23, 2006

ಭಾರತವನ್ನು ಆಳಿದ ಕನ್ನಡ ಅರಸರು .....


ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ನಮಗೆ ಕಾಣುವುದು ನಮ್ಮ ಕನ್ನಡ ದೇಶದ ಅರಸು ಮನೆತನಗಳು ಇಂದಿನ ಭಾರತದ ಮೂಲೆ ಮೂಲೆಗೆ ಹೋಗಿ ಅಲ್ಲಿ ಆಳಿ ಬಾಳಿದವರು ಅಂತ. ಇಂತಹ ವಲಸೆಗೆ ಅನೇಕ ಕಾರಣಗಳು ನಮಗೆ ಕಂಡು ಬರುತ್ತದೆ, ಪುಲಕೇಶಿಯ-೨ ಕಾಲದಲಿ ಚಾಲುಕ್ಯರ ಒಂದು ಶಾಖೆಯನು ಇಂದಿನ ಗುಜರಾತಿನಲ್ಲಿ ಇಟ್ಟಿದ್ದರು,ಅಂದರೆ ರಾಜ್ಯ ವರ್ಧನೆಯಾಗಿ ಇದು ಆದರೆ, ಕರ್ನಾಟ ಸೇನರದು ಬೇರೆ, ಇವರು ಇಂದಿನ ಬೆಂಗಾಲ ಮತ್ತು ಹಿಮಾಚಲ ಪ್ರದೇಶಗಳನ್ನು ಆಳಿದರು. ಇವರು ತಮ್ಮ ನೆರೆಹೊರೆಯವರ ಆಕ್ರಮಣಕ್ಕೆ ಬೇಸರ ಹೊಂದಿ ಬೆಂಗಾಳಕ್ಕೆ ಹೋದರು. ಅಲ್ಲಿ ನೆಲಸಿ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅಲ್ಲಿನ ವಂಗ ಪ್ರಜೆಗಳಲ್ಲಿ ತಂದರು.
ಕಾಲಕ್ರಮೇಣ ನಮ್ಮ ಭಾಷೆಯನ್ನು ಬೆಂಗಾಲಿ ಜೊತೆ ಸೇರಿಸಿಕೊಂಡು ಮಾತನಾಡಲು ಆರಂಭಿಸಿದರು.ಮುಂದೆ ಹಿಮಾಚಲಕ್ಕೆ ಹೋದಾಗ ಅಲ್ಲಿನ ಹುಡುಗಿಯರನ್ನು ಮದುವೆಯಾಗಿ ಹಿಂದಿಯನ್ನು ತಮ್ಮ ಭಾಷೆಯಾಗಿ ಬಳಸಿಕೊಂಡರು, ಅಲ್ಲಿಗೆ ಕನ್ನಡದ ಜೊತೆ ಇದ್ದ ನಿಕಟ ಸಂಪರ್ಕ ಮುರಿದು ಬಿತ್ತು.
ಈ ಸೇನ ವಂಶದವರು ಚಿಕ್ಕಮಂಗಳೂರು ಜಿಲ್ಲೆಯ ಮತ್ತು ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲೂಕಿನ ಪ್ರದೇಶಗಳನ್ನು ಕ್ರಿ.ಶ ೭ ಶತಮಾನದಿಂದ ೧೧ ಶತಮಾನದವರೆಗೆ ಆಳಿದರೆಂದು ಹೇಳುತ್ತಾರೆ.ಇವರು ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದರು ಮತ್ತು ಖಚರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಅಂತ ಅನೇಕರ ಅಭಿಪ್ರಾಯ. ೧೧ನೇ ಶತಮಾನದಲ್ಲಿ ಸಾಮಂತಸೇನನು ಅಂತರಿಕ ಆಕ್ರಮಣಗಳನ್ನು ಹಿಮ್ಮೆಟ್ಟುವಲ್ಲಿ ವಿಫಲನಾಗಿ ಬೇಸತ್ತು ಬೆಂಗಾಲಕ್ಕೆ ಬಂದ ಅಂದು ಹೇಳುತ್ತಾರೆ. ಮುಂದೆ ಇವರ ವಂಶದ ಹೇಮಂತಸೇನ ಬಿಜೋಯಸೇನ,ಬಲ್ಲಾಳಸೇನ ಮುಂತಾದವರು ತಮ್ಮ ರಾಜ್ಯವನ್ನು ವಿಸ್ತರಿಸಿದರು.ಗಮನಿಸಿದರೆ, ಬಲ್ಲಾಳ ಎನ್ನುವ ಪದ ಹೋಯ್ಸಳರ ಬಲ್ಲಾಳ ಬಣದಿಂದ ಬಂದಿರಬಹುದು ಎಂದು ಅನಿಸುತ್ತದೆ. ಇ ಬಲ್ಲಾಳಸೇನನು ಬೆಂಗಾಲ್ ಮತ್ತು ಆಸ್ಸಾಂ ಆಳಿದನೆಂದು ಹೇಳಲಾಗಿದೆ.ಮುಂದೆ ಬೆಂಗಾಲ್‍ಗೆ ಮುಸ್ಲಿಂ ಆಕ್ರಮಣ ಹೆಚ್ಚಾದಾಗ ಹಿಮಾಚಲಪ್ರದೇಶ ಕಡೆ ವಲಸೆಹೋದರು. ಅಲ್ಲಿ ಸೇನಾವಂಶದ ಸಂಸ್ಥಾಪಕ ಬೀರಸೇನನು.
ಹೀಗೆ ನಮ್ಮ ಕನ್ನಡಿಗರಿಗೆ ನಮ್ಮನ್ನು ಆಳಿದವರು ಗೊತ್ತೆ ವಿನಹ ನಾವು ಯಾರನ್ನು ಆಳಿದಿವಿ ಎಂದು ತಿಳಿದಿಲ್ಲ.ಅದಕ್ಕೆ ನೋಡಿ ಕನ್ನಡದ ಎಷ್ಟು ಪದಗಳು ಗುಜರಾಥಿ ಮತ್ತು ಬೆಂಗಾಲಿಯಲ್ಲಿ ಕಂಡು ಬರುತ್ತವೆ.
ಕನ್ನಡದಿಂದ ಗುಜರಾಥಿಗೆ:- ಮೋಜು,ಕಾಥಿ,ಮಾಳೊ ..
ಕನ್ನಡದಿಂದ ಬೆಂಗಾಲಿಗೆ:- ವಾಶಲ ನಮ್ಮ ವಾಗಿಲ್ ಎಂಬ ಪದದಿಂದ ಹುಟ್ಟಿರುವುದು.
ಬೆಂ -- ಕನ್ನಡ
ನಿರಾಲ- ನೆರಳು
ಖಟವ - ಕಟ್ಟಿಗೆ
ಕಟಾಲ್ - ಕಡಲು
ತೋಡ - ತೋಡೆ
ಕಲ್ಲ - ಕಳ್ಳ
ಹೀಗೆ ಸಾಲು ಸಾಲು ಪದಗಳನ್ನು ಕೊಡಬಹುದು. ಅಲ್ಲಿನ ಭಾಷೆಯ ಮೇಲೆ ನಮ್ಮ ಪದಗಳ ಛಾಯೆ ಕಾಣಸಿಗುತ್ತದೆ.
ಅಷ್ಟೆ ಅಲ್ಲ, ಅಲ್ಲಿನ ದುರ್ಗಾಪೂಜೆಯನ್ನು ಹೇಳಿಕೊಟ್ಟವರು ನಮ್ಮ ಕನ್ನಡಿಗರೇ.

(ಕೃಪೆ :- ಹಿಮಾಲಯವನ್ನಾಳಿದ ಕನ್ನಡ ಸೇನರು)

Tuesday, May 09, 2006

ಅ.ನ.ಕೃ ಒಂದು ನೆನಪು.


ಹಿಂದೆ ಅ.ನ.ಕೃ ಬಗ್ಗೆ ನಾನು ಹಿಂದೆ ತಿಳಿದಿದ್ದು ಒಬ್ಬ ಸಾಹಿತಿಯಾಗಿ, ಅವರು ಸಂಧ್ಯಾರಾಗ,ಗಾಜಿನ ಮನೆ,ಗೌರಿ ಮುಂತಾದ ಕೃತಿಗಳನ್ನು ಬರೆದವರೆಂದು. ಅಷ್ಟರ ಮಟ್ಟಿಗೆ ನನ್ನ ಜ್ಞಾನ ಸೀಮಿತವಾಗಿತ್ತು. ಆದರೆ ಕನ್ನಡ ಹೋರಾಟದ ಬಗ್ಗೆ ನನಗೆ ಹೆಚ್ಚು ಆಸಕ್ತಿ ಮೂಡಿ, ಹೆಚ್ಚು ಅಧ್ಯಯನ ಮಾಡಿದಾಗ, ಹೆಚ್ಚು ಹೆಚ್ಚು ಕಂಡ ಹೆಸರು ಅ.ನ.ಕೃ.
ಅಲ್ಲಿಂದ ಅವರ ಬಗ್ಗೆ ನನ್ನ ಕೂತುಹಲ ಹೆಚ್ಚಾಯಿತು, ಕನ್ನಡಕ್ಕೆ ಮನೆಯಲ್ಲಿ ಕುಳಿತು Dialogue ಹೊಡೆಯುತ್ತಿದ್ದ ಆ ಕಾಲದಲ್ಲಿ, ಬೀದಿಗೆ ಇಳಿದು, ಜನರನ್ನು ಸಂಘಟಿಸಿ ತಮ್ಮ ವಾಜ್ಞ್ಮೆಯಿಂದ ಇತರರಿಗೆ ಕನ್ನಡ ಚಳುವಳಿಯ ಮಹತ್ವವನ್ನು ಅರಿವು ಮಾಡಿಕೊಟ್ಟ ಮಹನೀಯರು ನಮ್ಮ ಅ.ನ.ಕೃ.

ಅ.ನ.ಕೃ ಬಗ್ಗೆ ನಮ್ಮ ಬರಹ ಶೇಷಾದ್ರಿ ವಾಸುವಿನ ಅಂತರಜಾಲ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು, ಅಲ್ಲಿ ಅವರ ಬಗ್ಗೆ ಅವರ ಒಡನಾಡಿಗಳು ಆಡಿದ ಮಾತು ಮತ್ತು ಅನಿಸಿಕೆಗಳನ್ನು ಹಾಕಿದ್ದಾರೆ. ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಅದನ್ನು ಒಮ್ಮೆ ಓದಲೇ ಬೇಕು. ಸಮಗ್ರ ಮಾಹಿತಿಯನ್ನು ಓದಗಿಸಿದ ಬರಹ ವಾಸುವಿನ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.

ಅ.ನ.ಕೃ ಬಗ್ಗೆ ನಾನು ಓದಿದ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೆನೆ.

ಅ.ನ.ಕೃ ಅವರ ನೇರನುಡಿ:- ನಮಗೆ ತಿಳಿದ ಹಾಗೆ ಅ.ನ.ಕೃ ಅವರ ಭಾಷಣಗಳಿಗೆ , ಅವರು ಮಂಡಿಸುತ್ತಿದ್ದ ಕನ್ನಡ ಪರವಾದ ವಿಚಾರಗಳಿಗೆ ಮಾರು ಹೋದ ಶೋತೃಗಳು ಬಹಳ ವಿರಳ ಅನ್ನಬಹುದು. ತಮ್ಮ ಮನಸ್ಸಿಗೆ ಸರಿಹೋಗದ ವಸ್ತುನಿಷ್ಠವಾದ ಸಂಗತಿ ಯಾವುದೇ ಇದ್ದರೂ ಅದನ್ನು ಅವರು ದಯಾದಾಕ್ಷಿಣ್ಯವಿಲ್ಲದೇ ಖಂಡಿಸುತ್ತಿದ್ದರು. ಅದ್ದರಿಂದಲೇ ಅವರನ್ನು ಜನರಲ್ಲದೇ, ರಾಜಕೀಯ ನಾಯಕರು ಗೌರವಿಸುತ್ತಿದ್ದರು.

ಒಮ್ಮೆ ಧರ್ಮರಾಯನ ಗುಡಿಯ ಸಮೀಪ ಸಂಯುಕ್ತರಂಗದ ಸಭೆ, ಆ ಸಭೆಯಲ್ಲಿ ಸಮಾಜವಾದಿ ನಾಯಕರಾಗಿದ್ದ ಎಸ್.ಗೋಪಾಲಗೌಡ(ಶಾಂತವೇರಿ ಗೋಪಾಲಗೌಡ) ಭಾಗವಹಿಸಿದ್ದರು. ಅದೇ ತಾನೇ ವಿಧಾನಸಭೆಯಲ್ಲಿ ಅಂದಿನ ರಾಜ್ಯಪಾಲರ ಭಾಷಣವನ್ನು ಕಾಲಿನಿಂದ ತುಳಿದು ಪ್ರತಿಭಟನೆ ಮಾಡಿದ್ದರು. ಅ.ನ.ಕೃ ಅಂದು ಆ ಸಭೆಯಲ್ಲಿ ಎಲ್ಲರ ಎದುರು ಗೋಪಾಲಗೌಡರ ವರ್ತನೆಯನ್ನು ಟೀಕಿಸಿದರು. ಅದನ್ನು ಕೇಳಿ ಗೌಡರ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿ ಗೊಂದಲ ಆರಂಭವಾದಗ ಖುದ್ದು ಗೋಪಾಲಗೌಡರೇ ಅ.ನ.ಕೃ ನನ್ನ ಗುರುಗಳು, ಅವರು ಹೇಳಿದ ಮೇಲೆ ಮುಗಿಯಿತು, ನಾನು ನನ್ನ ಕ್ರಮಕ್ಕೆ ಕ್ಷಮೆ ಕೇಳುತ್ತೆನೆ ಎಂದರು. ಇಂದು ನಮಗೆ ಆ ನೇರನುಡಿಯ ಸಾಹಿತಿಗಳು ಸಿಗುವದಿಲ್ಲ, ರಾಜಕೀಯ ನಾಯಕರ ಉಘೇ ಉಘೇ ಮಾಡಿದರೆ ತಮಗೆ ಆಗುವ ಅನಕೂಲ ಎನು ಎಂದು ಚಿಂತಿಸುವ ಸಾಹಿತಿಗಳು ಇರುವ ಕಾರಣಕ್ಕೆ ನಮಗೆ ಅ.ನ.ಕೃ ಆದರ್ಶಪ್ರಿಯರಾಗುತ್ತಾರೆ.

ಅ.ನ.ಕೃ ಅವರ ಮಾತಿನ ಶೈಲಿ:- ಬಲ್ಲವನೇ ಬಲ್ಲ ಬೆಲ್ಲದ ರುಚಿಯನ್ನು ಅನ್ನುವ ಹಾಗೆ ಅವರ ಭಾಷಣವನ್ನು ಕೇಳಿದ ಜನರನ್ನು ಮಾತನಾಡಿಸಿ ನೋಡಿ ಇನ್ನೂ ಅವರ ಮಾತುಗಳನ್ನು ನೆನೆಯುತ್ತಾರೆ. ಎಂದರೆ ಎಷ್ಟರ ಮಟ್ಟಿಗೆ ಅವರ ಮಾತುಗಳು ನಮ್ಮ ಜನರ ಮೇಲೆ ಪ್ರಭಾವ ಬೀರಿದ್ದವು ಅಂತ ತಿಳಿಯುತ್ತದೆ.
ಒಮ್ಮೆ ಐ.ಟಿ.ಐ ಕಾರ್ಖಾನೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಅ.ನ.ಕೃ, ಅಂದು ಅಲ್ಲಿ ನೆರೆದಿದ್ದ ಕನ್ನಡೇತರರನ್ನು ಉದ್ದೇಶಿಸಿ ಮಾಡಿದ ಭಾಷಣ ನಿಜಕ್ಕೂ ಒಂದು ಮರೆಯಲಾಗದ ಘಟನೆ. ಅವರು ತಮ್ಮ ಭಾಷಣದಲ್ಲಿ ಕನ್ನಡ ಚಳುವಳಿ, ಕನ್ನಡ ಇತಿಹಾಸ ಮತ್ತು ಸಂಘಟನೆಯ ಅವಶ್ಯಕತೆಯನ್ನು ಮನಮುಟ್ಟುವ ಹಾಗೆ ವಿವರಿಸಿದರು.
ಮೂರನೆಯ ದಿನ ಆ ಭಾಷಣವನ್ನು ಕೇಳಿದ್ದ ಕನ್ನಡೇತರ ಕಾರ್ಮಿಕರು ತಾವು ಕನ್ನಡ ಚಳುವಳಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆವು, ಅ.ನ.ಕೃ ನಮ್ಮ ಕಣ್ಣು ತೆರೆಸಿದರು ಅಂತ ಹೇಳಿದನ್ನು ಐ.ಟಿ.ಐನ ಶ್ರೀ ಚಂದ್ರಶೇಖರ್ ಮರೆಯುವದಿಲ್ಲ.


ನಮಗೆ ಇಂದು ಸುಮ್ಮನೆ ತಣ್ಣನೇ ಕೋಣೆಯಲ್ಲಿ ಪ್ರಚಾರಕ್ಕೆ ಕೊಡುವ ಹೇಳಿಕೆಗಳ ಸಾಹಿತಿಗಳು ಬೇಕಿಲ್ಲ, ಇಲ್ಲಾ ಸುಮ್ಮನೆ ಒಬ್ಬಂಟಿಯಾಗಿ ಕತ್ತೆ/ಚಪ್ಪಲಿ ಮೆರವಣಿಗೆ ಮಾಡಿ ಕನ್ನಡ ಚಳುವಳಿಯ cheap ಮಾಡಿರುವ ನಾಯಕರುಗಳ ಮಧ್ಯೆ ಬೀದಿಗೆ ಇಳಿದು ಹೋರಾಟ ಮಾಡುವ, ಕನ್ನಡಿಗರನ್ನು ಸಂಘಟಿಸುವ, ನಿಸ್ವಾರ್ಥ ಅ.ನ.ಕೃ ಅಂತ ಕನ್ನಡ ಸೇನಾನಿ ಬೇಕಾಗಿದ್ದಾರೆ.

ಇಂತ ಮಹಾನ್ ಚೇತನ ಹುಟ್ಟಿದ ಮನೆ ಇಂದು ಬೂಟ್ ಮಾರುವ ಅಂಗಡಿಯಾಗಿದೆ, ಇದೇ ನಮ್ಮ ಮರ್ಯಾದೆ. ಈ ನಿಟ್ಟಿನಲ್ಲಿ
ನಮ್ಮ ಘನ ಸರ್ಕಾರ ಕ್ರಮ ಕೈಗೊಂಡು ಅದನ್ನು ಒಂದು ಸ್ಮಾರಕ ಮಾಡಿ ನಮ್ಮ ರಾಜ್ಯಕ್ಕೆ ಒಪ್ಪಿಸಿದರೆ ಅದೇ ಅವರಿಗೆ ತೋರಿಸುವ ದೊಡ್ಡ ವಂದನೆ.

ಕೊಸರು:- ಕನ್ನಡ ಚಳುವಳಿಯಿಂದ ದೂರ ಸರಿದಿದ್ದರೂ ರಾಜಾಜಿ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದಾಗ
ಡಿ.ವಿ.ಜಿ,ಜಿ.ಪಿ.ರಾಜರತ್ನಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಕೇವಲ ನಮ್ಮ ಅ.ನ.ಕೃ.

Monday, May 08, 2006

ಕನ್ನಡ ಸಂಸ್ಕೃತ ಜನ್ಯ ಭಾಷೆಯೇ ????

ಎಪ್ಪ್ಪಾ ಎಪ್ಪಾ ಈ ವಿಷಯದ ಬಗ್ಗೆ ಅನೇಕ ಕಡೆ ಬರಿದಿದ್ದೆನೆ, ಆದರೂ ನಮ್ಮ ಜನ ಇಂದಿಗೂ ಕನ್ನಡ ಸಂಸ್ಕೃತ ಜನ್ಯ ಭಾಷೆ, ಭಾರತದ ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ತಾಯಿ ಅಂತ ಹೇಳುತ್ತಾರೆ. ಈ ಕಾರಣಕ್ಕೆ ಅನೇಕ ಬಾರಿ ಕನ್ನಡ ಸಂಸ್ಕೃತದ ಎದುರು ಸೋತಿದೆ.

ಕನ್ನಡಕ್ಕೆ ಅಷ್ಟೆ ಅಲ್ಲ, ದ್ರಾವಿಡ ಭಾಷೆಗಳೆಲ್ಲವೂ ತಮ್ಮದೇ ಆದ ವೈಶಿಷ್ಟ ಹೊಂದಿವೆ. ಕನ್ನಡದ ಅಸಾಧರಣ ಲಕ್ಷಣಗಳನ್ನು ಹಿಂದೆ ಕೇಶಿರಾಜ ಹೇಳಿದ್ದ.

ಕನ್ನಡ ಯಾಕೆ ಸಂಸ್ಕೃತ ಜನ್ಯವಲ್ಲ ಎಂದು ತಿಳಿದುಕೊಳ್ಳೊಣ.

೧) ಕನ್ನಡದಲ್ಲಿ ನಿರ್ಜೀವ ಮತ್ತು ಬುದ್ಧಿಹೀನ ವಿಷಯಗಳ ಪದಗಳು ನಪುಸಂಕವೇ ಆಗಿವೆ. ಸಂಸ್ಕೃತದಲ್ಲಿ ಹಾಗಿಲ್ಲ.

೨) ವಿಶೇಷಣಗಳಿಗೆ ವಿಭಕ್ತಿಪ್ರತ್ಯಯಗಳು ಅನ್ವಯವಾಗುವದಿಲ್ಲ.

೩) ಕರ್ಮಣಿ ಪ್ರಯೋಗ ಕನ್ನಡದಲ್ಲಿ ಕಾಣುವದಿಲ್ಲ.

(Ref :- Dr.Coldwel)

೪) ಶಬ್ಧಾಂತ್ಯ ಸ್ವರ :- ದ್ರಾವಿಡ ಭಾಷೆಗಳ ಶಬ್ಧಗಳು ವ್ಯಂಜನಾಂತವಾಗುವುದು ಕಡಿಮೆ.
ಅಂದರೆ ಅಂಗ್ಲ ಭಾಷೆಯಲ್ಲಿ ಕ್ಯಾಪ್ ಇದ್ದರೆ ಕನ್ನಡದಲ್ಲಿ ಅದು ಕ್ಯಾಪು ಅಂತ ಆಗಿರುತ್ತದೆ.
ಅಹಂ ಸಂಸ್ಕೃತದಲ್ಲಿ ವ್ಯಂಜನಾಂತವಾದರೆ, ನಾನು ಅಂತ ಕನ್ನಡದಲ್ಲಿ ಸ್ವರಾಂತ್ಯವಾಗುತ್ತದೆ.

೫) Vocalic Harmony:- ಇದಕ್ಕೆ ಸ್ವರಾನುರೂಪತೆ ಎಂದು ಕರೆಯುತ್ತಾರೆ. ವ್ಯಾಕರಣ ನಿಯಮಗಳ ಪ್ರಕಾರ
"ನಿಲ್ಲು" ಎಂಬ ಧಾತುವಿನ ವರ್ತಮಾನ ರೂಪ "ನಿಲ್ಲುತ್ತೇನೆ" ಎಂದಾಗುತ್ತದೆ. ಆದರೆ ಸ್ವರಾನುರೂಪತೆ ಇಂದ ಅದು
"ನಿಲ್ತಿನಿ" ಅಂತ ಬದಲಾಯಿಸುತ್ತದೆ. ಇದು ಸಂಸ್ಕೃತದಲ್ಲಿ ಇಲ್ಲಾ.

೬) ನಮ್ಮ ಭಾಷೆಯಲ್ಲಿ ಲಿಂಗ-ವಿವಕ್ಶೆಯು ಅಸ್ಪಷ್ಟವಾಗದೇ ಕ್ರಮಭದ್ದವಾಗಿದೆ, ಅದೇ ಅರ್ಯ ಭಾಷೆಗಳಲ್ಲಿ ಒಂದು ವಸ್ತುವಿನ ಬುದ್ಧಿಶಕ್ತಿ ಇದ್ದುದೇ or ಇಲ್ಲವೇ ಎಂಬುವುದರ ಮೇಲೆ ಅವಲಂಬಿಸಿದೆ.

೭) ನಮ್ಮ ಭಾಷೆಯಲ್ಲಿ ದ್ವಿ-ವಚನವಿಲ್ಲ.

ಸಂಸ್ಕೃತದಲ್ಲಿ ಗಜ: ಗಜೌ ಗಜಾ: ಆದರೆ
ಕನ್ನಡದಲ್ಲಿ ಗಜಂ ಗಜರ್ ಆಗುತ್ತದೆ.

ಸಂಸ್ಕೃತದಲ್ಲಿ ಎಕವಚನ ಮತ್ತು ಬಹುವಚನಕ್ಕೆ ಬೇರೆ ವಿಭಕ್ತಿ ಪ್ರತ್ಯಯ ಇರುತ್ತದೆ, ಹಾಗೇ ನಮ್ಮ ಭಾಷೆಯಲ್ಲಿ ಇಲ್ಲ.

೮) ಸಂಖ್ಯಾವಾಚಕಗಳು:- ನೋಡಿ ನಮ್ಮ ಸಂಖ್ಯಾವಾಚಕಗಳಿಗೂ ಮತ್ತು ಸಂಸ್ಕೃತದ ಸಂಖ್ಯಾವಾಚಕಗಳಿಗೆ ಸಂಬಂಧವೇ ಇಲ್ಲಾ. ನಾವು ಹತ್ತು ಅಂದರೆ ಅವರು ದಶ ಅನ್ನುತ್ತಾರೆ. ಅದೇ ಹಿಂದಿ ಭಾಷೆಯನ್ನು ತೆಗೆದುಕೊಂಡರೆ ನಿಮಗೆ ಅದರಲ್ಲಿ ಸಂಸ್ಕೃತದ ಛಾಯೆ ಕಾಣುತ್ತದೆ. ಸಂಸ್ಕೃತದ "ದಶ", ಹಿಂದಿಯಲ್ಲಿ ದಸ್ ಆಗುತ್ತದೆ.

೯) ಸರ್ವನಾಮಗಳಲ್ಲಿ ನಮ್ಮ ಭಾಷೆಯಲ್ಲಿ inclusive and Exclusive ಎಂಬ ಎರಡು ಬಗೆಯ ಸರ್ವನಾಮಗಳು ಕಂಡು ಬರುತ್ತವೆ. ಇದು ಸಂಸ್ಕೃತದಲ್ಲಿ ಇಲ್ಲಾ.

೧೦) ಗುಣವಾಚನಕ್ಕೆ ಲಿಂಗಭೇದವಿಲ್ಲ :- ಸಂಸ್ಕೃತದಲ್ಲಿ ಗುಣವಾಚನ ಲಿಂಗ ಅನುಸಾರಿಯಾಗಿ ಕೆಲಸ ಮಾಡುತ್ತದೆ.

ಉದಾ:- "ಪಾವನ" ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಪಾವನ ಭಗವಾನ್
ಸ್ಥ್ರೀಲಿಂಗ:- ಪಾವನೀ ಭಗವತೀ
ನಪುಂಸಕ:- ಪಾವನ: ಅನಿಲ:
ಹಾಗೆಯೇ "ಶುದ್ಧ" ಗುಣವಾಚನವು.

ಅದೇ ನಮ್ಮ ಭಾಷೆಯಲ್ಲಿ ವಿಭಕ್ತಿಪ್ರತ್ಯಯ ಹಚ್ಚುವ ಗೋಜಿಲ್ಲ.
ಉದಾ:- "ಸುಂದರ " ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಸುಂದರ ರಾಮ

ಸ್ಥ್ರೀಲಿಂಗ:-ಸುಂದರ ಸೀತೆ
ನಪುಂಸಕ:-ಸುಂದರ ಮೃಗ


೧೧) ಕ್ರಿಯಾಪದಗಳು:- ನಮ್ಮ ಕ್ರಿಯಾಪದಗಳು ಧಾತುಗಳೂ ನಾಮಪದಗಳೂ ಎರಡು ಆಗಿವೆ. ಮತ್ತು ನಮ್ಮಲ್ಲಿ ಎರಡು ನಿಷೇಧ ರೂಪಗಳಿವೆ "ಅಲ್ಲ" ಮತ್ತು "ಇಲ್ಲ". ಒಂದರ ಗುಣವನ್ನು ಇನ್ನೊಂದು ನಿರಾಕರಿಸುತ್ತದೆ.
ಅವನು ರಾಮನಲ್ಲ :- ಇದರಲ್ಲಿ ಅವನು ಬೇರೆ ಯಾರೋ, ಅಸ್ತಿತ್ವದ ಪ್ರಶ್ನೆ ಮಾಡುತ್ತದೆ.
ಅವನು ಸುಂದರನಲ್ಲ:- ಇದರಲ್ಲಿ ಗುಣಗಳನ್ನು ನಿರಾಕರಿಸುತ್ತದೆ.

೧೨) ನಮ್ಮ ಭಾಷೆಯಲ್ಲಿ ರಕ್ತ ಸಂಬಂಧವು ಚೆನ್ನಾಗಿ ಬಿಡಿಸಲಾಗಿದೆ.
ಉದಾ:- ಸೋದರ ಅನ್ನುವುದು ಸಂಸ್ಕೃತದಲ್ಲಿ ಒಂದೇ, ಆದರೆ ದೊಡ್ಡವರೇ ಇಲ್ಲಾ ಚಿಕ್ಕವರೇ ಎಂದು ಹೇಳಲು ಆಗುವದಿಲ್ಲ.
ನಮ್ಮ ಭಾಷೆಯಲ್ಲಿ "ಅಣ್ಣ" ಮತ್ತು "ತಮ್ಮ" ಅಂತ specific ಆಗಿ ಇದೆ.

೧೩) ಲಿಪಿ:- ಯಾವ ವಿಧದಲ್ಲೂ ನಮಗೂ ದೇವನಾಗಿರಿ ಲಿಪಿಗೂ ತಾಳೆ ಹಾಕಲು ಆಗುವದಿಲ್ಲ.

೧೪) ನಮ್ಮ ಭಾಷೆಗಳಲ್ಲಿ "ಟವರ್ಗ" ಹೆಚ್ಚೆಂದು ಪಂಡಿತರ ಅಭಿಮತ ಇದು ಸಂಸ್ಕೃತದಲ್ಲಿ ಕಾಣ ಸಿಗುವದಿಲ್ಲ.

೧೫) ನಮ್ಮ ಭಾಷೆಯ ಉಚ್ಚಾರಣೆ ಪ್ರಥಮ ವರ್ಣದ ಮೇಲೆ ಇದೆ, ಅದೇ ಸಂಸ್ಕೃತದ ಭಾಷೆಗಳಲ್ಲಿ ಅದು ತೃತೀಯ ವರ್ಣದ ಮೇಲೆ ಇದೆ.
ಕನ್ನಡ:- ಪುಸ್ತಕ
ಮರಾಠಿ:- ಪುಸ್ತSಕ್

(Ref:- RU Dharwadkar)


ಇನ್ನೂ ಭಾಷ ಬೆಳವಣಿಗೆಗೆ ಬಂದರೆ ಭಾಷ ತಜ್ಞರ ಅಭಿಮತದಲ್ಲಿ ಯಾವ ಭಾಷೆಗೆ ತೆಗೆದುಕೊಂಡು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದೋ ಆ ಭಾಷೆ ಬೆಳೆಯುತ್ತದೆ. ಇಂದು ಆಂಗ್ಲ ಭಾಷೆಯನ್ನು ತೆಗೆದುಕೊಂಡರೆ ಅದು ಎಲ್ಲಾ ಭಾಷೆಯಿಂದ ಪದಗಳನ್ನು ಎರವಲು ಪಡೆದಿದೆ. ಭಾಷ ಬೆಳವಣಿಗೆಯಲ್ಲಿ ಇದು ಸರ್ವೇ ಸಾಮನ್ಯ. ಕನ್ನಡದ ಗಿಡಕ್ಕೆ ಸಂಸ್ಕೃತ ಜೀವಸತ್ವ(vitamin) ಇಲ್ಲಾ ಗೊಬ್ಬರ ಆಗಿದೆ. ಕನ್ನಡ ಬೆಳೆಯಲು ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಉಪಸರ್ಗದಿಂದ(ಪ್ರ,ವೀ) ಆರಂಭವಾಗುವ ಅನೇಕ ಶಬ್ದಗಳು ಕನ್ನಡಕ್ಕೆ ಸಂಸ್ಕೃತದಿಂದ ಬಂದಿವೆ, ಆ ಪದಗಳನ್ನು ಬರೆಯಲು ಕೆಲವು ಅಕ್ಷರಗಳು ಬಂದಿವೆ. ಇದರಿಂದಲೇ ಕನ್ನಡ ದೄಷಿಕ ಮತ್ತು ಶ್ರವಣದಲ್ಲಿ ಎಕರೂಪತೆ ಸಾಧಿಸಿದೆ. ತಮಿಳ್ ಕೂಡ ಪದಗಳ ಎರವಲು ಪಡೆದಿದೆ, ಆದರೆ ಅದನ್ನು ಬರೆಯಲು ಅಕ್ಷರವನ್ನು ಪಡೆಯದೆ ಅವರ ಭಾಷೆ ಇಂದೂ ಗೊಂದಲ ಗೂಡಾಗಿದೆ.


ಹಾಗೇ ಅಲ್ಲ ಕನ್ನಡವೂ ಸಂಸ್ಕೃತಕ್ಕೆ ಅನೇಕ ಪದಗಳನ್ನು ನೀಡಿದೆ. ಅದ್ದರಿಂದ ಇದು ಕೊಟ್ಟು-ತೆಗೆದುಕೊಳ್ಳುವ ಒಂದು ಸಂಸ್ಕೃತಿ ಅಷ್ಟೆ.

ಅದ್ದರಿಂದ ಇಲ್ಲಿ ತಾಯಿ-ಮಗು ಸಂಬಂಧ ಬರುವದಿಲ್ಲ, ಇದು ಪಕ್ಕದ ಮನೆಯ aunty ಸಂಭಂದ ಬರುತ್ತದೆ. ಪಕ್ಕದ ಮನೆಯ aunty ಸಹಾಯ ಪಡೆದ ಕ್ಷಣ ನಾವು ಅವರಿಂದ ಜನ್ಯ(ಹುಟ್ಟಿದವರು) ಆಗುವದಿಲ್ಲ.ಆ ಸಂಬಂಧ ಬಂದಾಗ ಅನೇಕ ವಂಶವಾಹಿನಿಯ ಗುಣಗಳು ಕಾಣಿಸಬೇಕು, ಮೇಲೆ ಹೇಳಿದ ಹಾಗೆ ಅದು ಕನ್ನಡದಲ್ಲಿ ಸ್ವಲ್ಪವೂ ಕಾಣುವದಿಲ್ಲ, ಅದೇ ನೋಡಿ ಹಿಂದ್ವಿಯ ಬೆಳವಣಿಗೆಯನ್ನು ಅಲ್ಲಿ ಆ ತಾಯಿ-ಮಗುವಿನ ಸಂಬಂಧ ಎದ್ದು ಕಾಣುತ್ತದೆ.


ಕೊಸರು:- ಸುಮ್ಮನೇ ಇಲ್ಲದಿರುದನ್ನು ಹೇಳಿ ನಮ್ಮ ಭಾಷೆಯ ಬಗ್ಗೆ ಕೀಳೆರಿಮೆ ಬೆಳಸಿಕೊಳ್ಳಬೇಡಿ.

Thursday, May 04, 2006

ಚಿನ್ನದ ಆಸೆಯೋ-ಅಕ್ಷಯ ತದಿಗೆಯೋ

ಕಳೆದ ೨ ವರ್ಷಗಳಲ್ಲಿ ನಮ್ಮ ಕನ್ನಡಿಗರಲ್ಲಿ ಹೊಸ ಹುಚ್ಚು ಶುರುವಾಗಿದೆ, ಅಕ್ಷಯ ತದಿಗೆಯ ದಿನ ಚಿನ್ನ ಕೊಂಡರೆ ಅದು ದ್ವಿಗುಣ ಆಗುವುದು ಅಂತ. ಚಿನ್ನದ ಮೊಟ್ಟೆ ಬಗ್ಗೆ ಕಥೆಗಳಲ್ಲಿ ಕೇಳಿದ್ದಿವೆ ಆದರೆ ಚಿನ್ನ ಕೂಡ ಮೊಟ್ಟೆ ಇಡುತ್ತದೆಯೇ ಅಂತ ನಮಗೆ ಹೊಸ ವಿಷಯ. ಇದರ ಹಿಂದಿನ ರಹಸ್ಯವನ್ನು ಭೇದಿಸಲು ಹೊರಟ ನಾವು ನಿಂತಿದ್ದು ಒಂದು ಆಭರಣಗಳ ಅಂಗಡಿ ಮುಂದೆ.

ಧನುರ್ಮಾಸ ಕಳೆದು ಮದುವೆಗಳು ಶುರು ಆದ ಹಾಗೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಹೋಯಿತು,ಅದು ಮಾರ್ಚ-ಎಪ್ರಿಲ್ ತಿಂಗಳಲ್ಲಿ ಅದು ಎಂದು ಕಂಡು ಕಾಣದ ಬೆಲೆಗೆ ಹೋಯಿತು. ಇದಕ್ಕೆ ಮುಖ್ಯ ಕಾರಣ. ಚಿನ್ನ ಆಭರಣಕರು ಹೆಚ್ಚು ಹೆಚ್ಚು ಚಿನ್ನವನ್ನು ಕೊಂಡ ಪರಿಣಾಮ. ನಿಮಗೆ ಗೊತ್ತೊ ಇಲ್ಲವೋ ಮಾರ್ಕೆಟ್ ಬೆಲೆಯಲ್ಲಿ ಯಾವ ಅಂಗಡಿಯವನು ಚಿನ್ನ ತೆಗೆದುಕೊಂಡಿರುವದಿಲ್ಲ, ಬೆಲೆ ತುಂಬಾ ಕಮ್ಮಿ ಇದ್ದಾಗ ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿರುತ್ತಾರೆ. ಅಂದರೆ ಮಾರ್ಕೆಟನಲ್ಲಿ ಚಿನ್ನಕ್ಕೆ ೯೦೦/ಗ್ರಾಂ ಗೆ ಇದ್ದರೆ ಅವರಿಗೆ ಒಂದು ಗ್ರಾಮ್ ಮೇಲೆ ೮೦೦ ಲಾಭ ಇರುತ್ತದೆ.

ಇನ್ನೂ ಈ ಅಕ್ಷಯ-ತದಿಗೆ ವಿಷಯಕ್ಕೆ ಬರೋಣ, ಇದು ಆಭರಣಕಾರರು ಕಂಡು ಕೊಂಡ ಹೊಸ ಉಪಾಯ. ಹಿಂದಿನಿಂದ ನಮ್ಮ ದೇಶದಲ್ಲಿ ಧರ್ಮಕ್ಕೆ ಅದನ್ನು ಗುರುತಿಸಿದರೆ ಅದಕ್ಕೆ ಸಿಕ್ಕುವ ಬೆಲೆಯೇ ಬೇರೆ ಮತ್ತು ಅದನ್ನು ಪ್ರಶ್ನಿಸುವ ಸಮಾಜ ನಮ್ಮಲ್ಲಿ ಹೆಚ್ಚು ಇಲ್ಲಾ. ಅದೇ ಕಾರಣಕ್ಕೆ ಚಿನ್ನದ ಆಭರಣಕಾರರು ಈ ಹೊಸದಿನವನ್ನು ಕಂಡು ಹಿಡಿದಿದ್ದು. ೨ ವರ್ಷಗಳಿಂದ ಸುಮ್ಮನೆ hype ಮಾಡಿ ನಮ್ಮ ಹೆಂಗಸರನ್ನು ನಂಬಿಸಿ, ಜನ ಮರಳೊ ಜಾತ್ರೆ ಮರಳೊ ಅನ್ನುವ ಹಾಗೆ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು.
ನಮ್ಮ ಜನರಿಗೆ ಅಮವಾಸ್ಯೆ ದಿನ ಕೊಂಡ ಚಿನ್ನದ ಬೆಲೆಗೂ ಮತ್ತು ಅಕ್ಷಯ ತದಿಗೆ ಕೊಂಡ ಚಿನ್ನಕ್ಕೆ ಬೆಲೆ ಬೇರೆ ಇರುವದಿಲ್ಲ ಅನ್ನುವ ಸಾಮನ್ಯಜ್ಞಾನ ಇಲ್ಲಾ.

ನೋಡಿ , ಎಪ್ರಿಲ್ ಕೊನೆಯ ವಾರದವರೆಗೂ ಚಿನ್ನದ ಬೆಲೆಯನ್ನು ಎರಿಸಿ, ಒಂದೆರೆಡು ದಿನಗಳ ಮುಂಚೆ ಬೆಲೆಯನ್ನು ಸ್ವಲ್ಪ ಕಮ್ಮಿ ಮಾಡಿ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು. ನಮ್ಮ ಜನ ಚಿನ್ನ ಒಳ್ಳೆ ಬಿಟ್ಟಿ ಕೊಡುತ್ತ ಇದ್ದಾರೆ ಅನ್ನುವ ಹಾಗೆ ಮುಗ್ಗಿಬಿದ್ದರು.
ಕನ್ನಡಿಗರಿಗೆ ಸ್ವಂತಿಕೆ ಅನ್ನುವುದು ಇಲ್ಲಾ ಅಂತ ಮತ್ತೊಮ್ಮೆ ಈ ಪ್ರಕರಣ ಸಾಬೀತು ಪಡಿಸಿತು.

ಕೊಸರು:- ಆ ದಿನ ಚಿನ್ನಕೊಂಡು ದ್ವಿಗುಣ ಮಾಡಿಕೊಂಡವರು ದಯವಿಟ್ಟು ನನಗೆ ಸ್ವಲ್ಪ ತಿಳಿಸಿ.

Tuesday, May 02, 2006

ನಾವೇಕೆ ಹೀಗೆ ???


ಕರ್ನಾಟಕ ಕಂಡ ಸಾರ್ವಭೋಮರಲ್ಲಿ ರಾಷ್ಟ್ರಕೂಟರು,ಚಾಲುಕ್ಯರು,ಹೋಯ್ಸಳರು,ವಿಜಯನಗರ ಮತ್ತು ಕದಂಬರು ಅನೇಕರು ನಮ್ಮ ರಾಜ್ಯಗಳನ್ನು ೧೦೦೦-೧೫೦೦ ವರ್ಷಗಳು ಆಳಿದರು. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಪೂರ್ವಜರೇ ನಮ್ಮ ಪೂರ್ವಜರು, ಇವರಲ್ಲಿನ ಹರಿದ ರಕ್ತವೇ ನಮ್ಮಲ್ಲಿ ಇಂದು ಹರಿಯುತ್ತಿರುವುದು, ಆದರೆ ಅವರಲ್ಲಿದ್ದ ಕಿಚ್ಚು, ಸ್ವಾಭಿಮಾನ ಮರೆಯಾಗಿ ಷಂಡತನ ಮತ್ತು ಕೀಳರಿಮೆ ಆವರಿಸಿದೆ.

ನಮ್ಮ ರಾಜರ ಮತ್ತು ಪೂರ್ವಿಕರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರದ ಕಾರಣವೇ ನಮಗೆ ಅನಿಸಿರುವುದು ನಾವು ಯಾವುದೋ ಹೇಡಿಗಳ ರಕ್ತಕ್ಕೆ ಹುಟ್ಟಿದೆವು, ನಮ್ಮಲ್ಲಿ ಅಥಿರಥ-ಮಹಾರಥರು ಇಲ್ಲಾ ಅಂತ. ನಿಮಗೆ ಗೊತ್ತಾ ಬೇರೆ ಭಾಷಿಕರನ್ನು ಕೇಳಿ ನೋಡಿ ಅವರ ಮಹಾನ್ ಅರಸುಗಳ ಬಗ್ಗೆ ಅಶೋಕ,ಚಂದ್ರಗುಪ್ತ ಎಂದು ಹೇಳುತ್ತಾರೆ, ಆದರೆ ಅವರು ಆಡುತ್ತ ಇದ್ದ ಭಾಷೆಯೇ ಬೇರೆ ಇಂದಿನವರು ಆಡುವ ಭಾಷೆಯೆ ಬೇರೆ. ಆದರೆ ನಮ್ಮ ರಾಜರು ಆಡುತ್ತಿದ್ದ ಭಾಷೆಯನ್ನೆ ನಾವು ಇಂದು ಕೂಡ ಆಡುತ್ತ ಇದ್ದೇವೆ. ಆ ಮಹಾನ್ ಚೇತನಗಳು ನಡೆದಾಡಿದ ನೆಲವನ್ನೇ ನಾವು ಇಂದು ತುಳಿಯುತ್ತಿರುವುದು. ನಮ್ಮ ಸ್ವಂತ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲಾಗದೇ ನಾವು ಇತರರ ಜೊತೆ ಇಲ್ಲಾ ರಾಷ್ಟ್ರೀಯತೆಯ ಹೆಸರಲ್ಲಿ ಹಿಂದೂಸ್ಥಾನಿ ಎಂದು ಗುರುತಿಸಿಕೊಳ್ಳುವುದು
ನಿಜಕ್ಕೂ ಕೀಳೆರಿಮೆಯ ಸಂಗತಿ.

ಆನಾದಿ ಕಾಲದಿಂದಲೂ ಮೆರೆದ, ಇತಿಹಾಸದಲ್ಲಿ ಹೆಸರು ಮಾಡಿದ ಈ ಪ್ರದೇಶವೇ ನಮ್ಮ ಜನುಮಭೂಮಿ. ಈ ಹಿಂದೂಸ್ಥಾನ ಅನ್ನುವುದು ಮೊಗಲರು ಬಂದಾಗ ಹುಟ್ಟಿದ ಪದ, ಆದರೆ ನಿಮಗೆ ಗೊತ್ತಾ ಮಹಭಾರತದ ಸಮಯದಲ್ಲಿ ನಮ್ಮ ಕರ್ನಾಟಕದ ಹೆಸರಿದೆ.
"ಕರ್ಣಾಟಕ ಮಹಿಷಕಾ ವಿಕಲ್ಪ ಮೂಷಕಸ್ತದಾ ಝೀಲ್ಲಿಕಾ:"
-ಭೀಷ್ಮಪರ್ವ

ಅಂದರೆ ನಮ್ಮ ಈ ನಾಡು ೫೦ ವರುಷಗಳ ಕೆಳಗೆ ಒಂದಾಗಿದ್ದು ಅಲ್ಲ. ಹರಪ್ಪ-ಮೊಹೆಂಜದಾರೋನಲ್ಲಿ ನಮ್ಮ ನಾಡನ್ನು ಪ್ರತಿಬಿಂಬಿಸುವ ಚಿತ್ರಗಳು ಇವೆ. ನಾಗರೀಕತೆಯ ತೊಟ್ಟಿಲಿನ ಸಮಯದಲ್ಲೂ ನಮ್ಮ ನಾಡು ಇತ್ತು ಎಂದು ತಿಳಿಯುತ್ತದೆ.
ಇಷ್ಟು ಹಳೆಯ ಪ್ರಾಚೀನ ಸಂಸ್ಕೃತಿ ಇರುವ ನಾವು ಇಂದು ಷಂಡರ ಹಾಗೆ ಇತರರ ಜೊತೆ ಗುರುತಿಸಿಕೊಳ್ಳುವ ಔಚಿತ್ಯವೇನು ??
ಅವರ ಭಾಷೆಯನ್ನು ಕಲಿತು, ಅವರ ಹಾವ-ಭಾವಗಳನ್ನು ಅನುಕರೀಣಿಸುವ ಕರ್ಮವೇನು ??

ನಮ್ಮ ರಾಜರು ಯಾರು ಚಿನ್ನದ ಚಮಚದ ಜೊತೆ ಹುಟ್ಟಿದವರಲ್ಲ, ಪ್ರತಿ ವಂಶವನ್ನು ಕಟ್ಟಿದವರ ಹಿಂದೆ ಒಂದು ದೊಡ್ಡ ಕಥೆ ಇದೆ. ಶೌರ್ಯ ಮತ್ತು ಸಾಧನೆಯ ಸಂಕೇತವಿದೆ. ಬೆವರು, ರಕ್ತ ಸುರಿಸಿ ರಾಜ್ಯವನ್ನು ಕಟ್ಟಿದರು, ಉತ್ತರದವರ ಜೊತೆ ಮತ್ತು ತಮಿಳರ ಜೊತೆ ಕಾದಾಡಿ ತಿಪ್ಪೆಗಳನ್ನು ಉಪ್ಪರಿಗೆಯಾಗಿ, ಸೆರೆಮನೆಯನ್ನು ಅರಮನೆಯಾಗಿ ಬದಲಾಯಿಸಿದ ಮಹಾನ್ ಪುರುಷರು ಕೇವಲ ನಮ್ಮ ಪೂರ್ವಜರು ಮಾತ್ರ.

೧೦೦೦-೧೫೦೦ ವರ್ಷಗಳು ಅವ್ಯಾಹತವಾಗಿ ನಮ್ಮ ಕನ್ನಡ ವಂಶದವರ ಕೈಯಲ್ಲಿ ಆಳಿದ ಪುಣ್ಯಭೂಮಿ ನಮ್ಮದು. ಕರ್ನಾಟಕವೆಂದರೇ ಇಂದಿನ ಭೌಗೋಳಿಕ ನಾಡೇ ? ಈ ಪ್ರದೇಶವನ್ನು ನಮ್ಮವರೂ ಆಳಿದರೆ ಎಂದು ನಮ್ಮಲ್ಲಿ ಪ್ರಶ್ನೆ ಮೂಡಬಹುದು.

"ಕಾವೇರಿಯಿಂದಮಾ ಗೋದಾವರಿ ವರಮಿರ್ಥ ನಾಡದ ಕನ್ನಡದೊಳ್ ಭಾವಿಸಿದ
ಜನಪದಂ ವಸುಧಾ ವಳಯ ವೀಲಿನ ವಿಶದ ವಿಷಯ ವಿಶೇಷಂ"
-ಕವಿರಾಜ ಮಾರ್ಗ

ಇದು ೯ನೇ ಶತಮಾನದ ಶ್ರೀವಿಜಯನ "ಕವಿರಾಜಮಾರ್ಗ"ದ ಸಾಲುಗಳು. ಅಂದಿನ ರಾಜಧಿರಾಜ ಕನ್ನಡವೀರ ನೃಪತುಂಗನ ಕಾಲದಲ್ಲಿ ಕರ್ನಾಟಕದ ವಿಸ್ತಿರ್ಣ ಮತ್ತು ಅಲ್ಲಿನ ಜನರ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದಾನೆ ನೋಡಿ. ಗಮನಿಸಬೇಕಾದ ಅಂಶವೆಂದರೆ ಅಂದಿನ ಭಾಷೆ ನಾವು ಇಂದು ಆಡುತಿದ್ದ ಭಾಷೆ ಅಲ್ಲವೇ ??

ಸುಲಭವಾಗಿ ನಮಗೆ ಇದು ಅರ್ಥವಾಗುತ್ತದೆ, " ಉತ್ತರದ ಗೋದಾವರಿಯಿಂದ , ದಕ್ಷಿಣದ ಕಾವೇರಿವರೆಗೆ ಆ ರಾಜನ ಸಂಸ್ಥಾನ ಹಬ್ಬಿತ್ತು. ಅಲ್ಲಿನ ಕನ್ನಡ ಜನರು ವಿವೇಕಿಗಳು,ಧೈರ್ಯಶಾಲಿಗಳು ಮತ್ತು ಇಲ್ಲಿನ ಸಮಾಜ ಈಡಿ ಜಗತ್ತಿನಲ್ಲಿ ವಿಶೇಷ".
ಅಲ್ಲಿನವರೆಗೂ ನಮ್ಮ ರಾಜ್ಯ ಹಬ್ಬಿತ್ತು ಅಂತ ಅಲ್ಲಿ ಸಿಕ್ಕ ಕಲ್ಲಿನ ಅವಶೇಷಗಳೇ ಪುರಾವೆ. ಅಷ್ಟೆ ಅಲ್ಲ ಇಂದಿನ ಮಹರಾಷ್ಟ ರಾಜ್ಯದ ಅನೇಕ ಊರಿನ ಹೆಸರುಗಳು ಕನ್ನಡದಲ್ಲಿ ಇರುವುದೇ ಇದಕ್ಕೆ ನಿದರ್ಶನ.
"ಕೆಂದೂರು,ಕಣಕವಲ್ಲಿ,ಗಾಣಗಪುರ,ಶಿರೋಳ, ಕಲ್ಲಮಠ,ಪೊಯನಾಡು,ಕಳಸ" ಇದಲ್ಲದೇ "ಕೃಷ್ಣಂಭಟ್ಟ, ಅಣ್ಣಂಭಟ್ಟ ಊರುಗಳ ಹೆಸರಲ್ಲಿ "ಮಂ"ಕಾರವು ಕನ್ನಡ ಪ್ರತ್ಯಯವಾಗಿದೆ.


ಯಾಕೆ ನಮಗೆ ನಮ್ಮ ಪುಲಕೇಶಿ,ತೈಲಪ,ಮಯೂರವರ್ಮ,ಗೊವಿಂದ-೩,ವಿಕ್ರಮಾದಿತ್ಯ ಆದರ್ಶರಾಗುವದಿಲ್ಲ, ಅವರ ಕಥೆ ಕೇಳುತ್ತಿದ್ದರೆ ನಮಗೆ ರೋಮಾಂಚನ ಏಕೆ ಆಗುವದಿಲ್ಲ, ಇವರು ನಮ್ಮ ಪೂರ್ವಜರು ಎಂದು ಎದೆ ತಟ್ಟಿ ಹೇಳಲು ಸಂಕೋಚವೇಕೆ.ಗಾಂಡುಗಳಾಗಿ ಬದುಕಿದ್ದು ಸಾಕು, ಗಂಡುಗಲಿಯಾಗಿ ಎಂದು ಇವರು ನಮಗೆ ನೀತಿಪಾಠ ಹೇಳುತ್ತಿಲ್ಲವೇ ?


ಕೊಸರು:- ಮಕ್ಕಳಿಗೆ ನಮ್ಮ ಇಂದಿನ ಪಾಲಕರು ಹೆಚ್ಚಾಗಿ ನಮ್ಮ ರಾಜರ ಕಥೆಗಳನ್ನು ಹೇಳುವದಿಲ್ಲ, ಯಾಕೆ ಅಂದರೆ ಅವರಿಗೆ ಗೊತ್ತಿರುವದಿಲ್ಲ. ಅಮರಚಿತ್ರಕಥಾ ಮುಂತಾದ ಮಕ್ಕಳ ಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ ಚಕಾರವಿಲ್ಲ. ರಾಜರು ಅಂದರೆ ಅಶೋಕ,ಚಂದ್ರಗುಪ್ತ,ಶಿವಾಜಿ ಕಥೆಗಳು ಕಾಣುತ್ತದೆ. ಅದ್ದರಿಂದ ನಮ್ಮ ರಾಜರ ಕಥೆಗಳ ಅಮರಚಿತ್ರಕಥೆಯನ್ನು ಪ್ರಕಟಿಸಬೇಕು.
ಇಲ್ಲಾ ನನ್ನಂತ ಸಾವಿರಾರು ಜನರಿಗೆ ಕನ್ನಡ ಕಿಚ್ಚನ್ನು ಹತ್ತಿಸಿದ ಕನ್ನಡ ಕುಲಪುರೋಹಿತ ದಿ ಶ್ರೀ ಆಲೂರು ವೆಂಕಟರಾಯರು ಮತ್ತೆ ಹುಟ್ಟಿ ಬರಬೇಕು.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.

Thursday, April 27, 2006

ಬಿಸಿ-ಬಿಸಿ ಬೇಳೆ ಬಾತೊ - JXTA ತಂತ್ರಜ್ಞಾನವೋ

ಎನ್ರೀ, ಗೊಕುಲಾಷ್ಟಮಿಗೂ ಮತ್ತು ಇಮಾಮ್ ಸಾಬಿಗು ಎತ್ತಣದ ಸಂಬಂಧದ ಹಾಗೆ ಇದೆ ನಿಮ್ಮ ಬ್ಲಾಗ್ ಎಂದು ಮೂಗು ಮುರಿಯಬಹುದು. ನಾನು ಮೊದಲು ಹಾಗೆ ಅಂದು ಕೊಂಡೆ ಸ್ವಾಮಿ.

JXTA Java SE 2.3.7 release ಅನ್ನು "ಬಿಸಿಬೇಳೆ ಬಾತ್" ಎಂಬ ನಾಮದಲ್ಲಿ ಕರೆಯುತ್ತಾರೆ,ನಮ್ಮ ಬಾಳೆ ಎಲೆಯಲ್ಲಿ ಇರುವ ತಿಂಡಿ, ಯಾವಾಗ ಸಿಮೋಲ್ಲಂಘನ ಮಾಡಿತು ??.

ಇದು ಬಿಸಿಯಾದ ತಂತ್ರಜ್ಞಾನವಾದ್ದರಿಂದ ಇದಕ್ಕೆ ಬಿಸಿಬೇಳೆಬಾತ್ ಎಂದು ನಾಮಕರಣ ಮಾಡಿರಬಹುದು, ಇಲ್ಲಾ ಇದರ ರುಚಿಗೆ ಮಾರು ಹೋಗಿರುವ ನನ್ನಂತ ಅಭಿಮಾನಿ ಇದಕ್ಕೆ ಹೆಸರು ಸೂಚಿಸರಬಹುದು.

ಮುಂದೆ ಯಾವುದರ ಕೆಲ್ಸ ಮಾಡುತ್ತ ಇದ್ದೀಯಾ ಅಂತ ನಮ್ಮವರು ಕೇಳಿದರೆ "ಬಿಸಿಬೇಳೆ ಬಾತ್" ಅಂತ ಉತ್ತರ ಸಿಕ್ಕುತ್ತದೆ, ನಮ್ಮ ಹಿರಿಯರು ಸಾಫ್ಟವೇರ್‍ನಿಂದ ಯಾವಗ ಬಾಣಸಿಗನಾದ ಎಂಬ ಪ್ರಶ್ನೆಗೆ ಬಂದರೆ ಎನು ಮಾಡುವುದು ಎಂಬುದರ ಬಗ್ಗೆ ಹೆಸರು ಇಟ್ಟವರು ಯೋಚಿಸಿಲ್ಲ !!

buzyಯಾಗಿ ಇರುವ ನಿಮ್ಮ ಸಮಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಬಿಸಿ-ಬಿಸಿಯಾಗು ಬೇಳೆ ಬಾತ್ ತಿಂದು ಬನ್ನಿ, ಹೇಗೆ ಮಾಡುವುದು ಅಂತ ನಿಮ್ಮ ಪ್ರಶ್ನೆಯಾದರೆ, ಇಗೋ ಇಲ್ಲಿದೆ ಲಿಂಕ್.

Wednesday, April 26, 2006

ಹೋರಾಟವೇ ಹೀಗೆ .....


ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದುಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ.

ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತೀರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮೂಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಬಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ‍ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದುಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದಮೆ,ಜೈಲುವಾಸ ಅಷ್ತ್ಟೆನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.




ಹೋರಾಟವೇ ಹೀಗೆ ...
ಬದುಕಿನ ಕತ್ತಲೆ ಓಡಿಸಿ,
ನ್ಯಾಯದ ಜ್ಯೋತಿಯ ಬೆಳಗಿಸಿ,
ಅನುಭವಿಸುವರು ಸೆರೆವಾಸ.
ಇವರ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಉಪವಾಸ೧


ಹೋರಾಟವೇ ಹೀಗೆ ...
ಮನೆ ಮಕ್ಕಳನ್ನು ಮರೆತು,
ದುಃಖ ದುಮ್ಮಾನದಲ್ಲಿ ಬೆರೆತು,
ತುಳಿಯುವರು ಕಲ್ಲುಮುಳ್ಳಿನ ಹಾದಿ.
ಎಲ್ಲಾ ಹೋರಾಟಗಳಿಗೂ ತ್ಯಾಗವೇ ಬುನಾದಿ೨

ಹೋರಾಟವೇ ಹೀಗೆ ...
ತಣ್ಣನೆ ಕೋಣೆಯಲ್ಲಿ ಕುಳಿತು,
ಬುದ್ಧಿಜೀವಿಗಳು ಆಡುವರು ಮಾತು,
ತೋಡಿ ಚುಚ್ಚು ಮಾತಿನ ಗುಂಡಿ,
ತಪ್ಪಿಸುವರು ಹೋರಾಟದ ಬಂಡಿ೩

ಹೋರಾಟವೇ ಹೀಗೆ ...
ಲಾಠಿ ಎಟುಗಳ ಲೆಕ್ಕಿಸದೆ,
ಹರಿಯುವ ನೆತ್ತರಿಗೆ ದೃತಿಗೆಡದೆ,
ಯಾರೊದೊ ಹಿತಕ್ಕೆ ಸವಿಸುತ್ತ ಬಾಳು,
ಅನುಭವಿಸುವರು ದಿನವೂ ಗೋಳು ೪

ಹೋರಾಟವೇ ಹೀಗೆ ...
ಇವರ ನೋವ ಕೇಳುವರಿಲ್ಲ,
ಇವರ ಬೆವರಾ ಒರೆಸುವರಿಲ್ಲ,
ಆದರೂ ಕಟ್ಟುವರು ಕನಸಿನ ಅರಮನೆ,
ಇವರ ನೊವುಗಳಿಗೆ ಇಲ್ಲಾ ಕೊನೆ೫

ಭಾರತ,ಹಿಂದಿ ಮತ್ತು ನಾವು.

"ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಅಂತ ನಮ್ಮ ರಾಷ್ಟ್ರಕವಿ ಕುವೆಂಪು ಕವಿವಾಣಿ ಹೇಳಿರುವಂತೆ, ಕರ್ನಾಟಕ ಭಾರತ ಒಂದು ಅಂಗ ಎಂದು ಪ್ರತಿಪಾದಿಸುವ ರಾಷ್ಟ್ರೈಕತೆಯನ್ನು ಸಾರುವ ಸಾಲುಗಳು. ಇದನ್ನು ನಾವು ನಮ್ಮ ಪ್ರಾರ್ಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಅದರ ಆರ್ಥ ನಮ್ಮ ಮನದಲ್ಲಿ ಅಚ್ಚಾಗಿದೆ.
ಆದರೆ ನನಗೆ ಆಗಾಗ ಅನಿಸುತ್ತಿತ್ತು ಒಂದೇ ವಿಷಯ, ಭಾರತ ಕಲ್ಪನೆ ಯಾವಾಗ ಆಯಿತು, ಅದಕ್ಕೆ ಆ ಹೆಸರು ಬರಲು ಕಾರಣವೇನು?
ಈ ಪ್ರಶ್ನೆ ನಾನು ಹಿರಿಯರ ಮುಂದೆ ಇಲ್ಲಾ ಗುರುಗಳ ಮುಂದೆ ಇಟ್ಟಾಗ ನನಗೆ ಸಿಕ್ಕ ಉತ್ತರ " ಆ ಕಲ್ಪನೆ ಶತಮಾನಗಳಿಂದ
ಇದೆ, ಭರತನಿಂದ ಭಾರತ ಅಂತ ಹೆಸರು ಬಂದಿತು" ಅನ್ನುವ ಉತ್ತರ ಅನೇಕ ಕಡೆಗಳಿಂದ ಕೇಳಿಬಂದಿತು.
ಇದು ಎಷ್ಟರ ಮಟ್ಟಿಗೆ ಸರಿ ಅಂತ ಆತ್ಮಾವಲೋಕನ ಮಾಡಿದಾಗ ನಮಗೆ ಕಂಡು ಬರುವ ಕುತೂಹಲ ಅಂಶಗಳು ಕೆಲವು.

ಭರತನಿಂದ ಭಾರತವೇ ??
ಇದು ನನಗೆ ಅನೇಕ ಬಾರಿ ಕಾಡಿದ ಪ್ರಶ್ನೆ, ಈ ಒಂದು ದೇಶದ ಕಲ್ಪನೆಯನ್ನು ಭರತನು ನಮಗೆ ಕೊಟ್ಟಿದ್ದನೆ, ಕಾಲಕ್ರಮೇಣ ಅದು ಮರೆಯಾಯಿತೆ ಅಂತ ಪ್ರಶ್ನೆಗಳು ಉಧ್ಭವಿಸುತ್ತಲೆ ಇದೆ. ನಮ್ಮ ಇತಿಹಾಸದಲ್ಲಿ ನಮ್ಮನ್ನು ಆಳಿದ(!!!) ೩ ಜನ ಭರತರು ನಮ್ಮ ಕಣ್ಣಿಗೆ ಬೀಳುತ್ತಾರೆ.

೧) ರಾಮನ ತಮ್ಮ ಭರತ:-
ಇವನು ರಾಮ ವನವಾಸಕ್ಕೆ ಹೋದಾಗ, ರಾಜ್ಯಭಾರ ಮಾಡಿದ. ರಾಮನ ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ಆಡಳಿತ ನಡೆಸಿದ. ಇವನ ಆಳ್ವಿಕೆಯಲ್ಲಿ ಒಂದು ಹಿಡಿತ ಇರಲಿಲ್ಲ, ಅಯೋಧ್ಯೆ ಬಿಟ್ಟು ಇವನ ರಾಜ್ಯ ಮುಂದೆ ಹೋಗಲಿಲ್ಲ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

೨) ದುಶ್ಯಂತೆ-ಶಕುಂತಲೆಯ ಮಗ ಭರತ:-
ಇವನು ಅಷ್ಟೆ, ಭೌಗೋಳಿಕ ಭಾರತವನ್ನು ಆಳಿದ ಉದಾಹರಣೆ ಎಲ್ಲಿಯೂ ಸಿಗುವದಿಲ್ಲ,
ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

೩) ಬಾಹುಬಲಿ ಸಹೋದರ ಭರತ:- ಇವನಿಗೆ ಇವನ ತಂದೆ ಅಯೊಧ್ಯೆ ಕೊಟ್ಟರು, ಇವನು ಚಕ್ರವರ್ತಿ ಆಗಬೇಕೆಂಬ ಇಚ್ಚೆಯಲ್ಲಿ ಇವನ ತಮ್ಮ ಬಾಹುಬಲಿ ಜೊತೆ ಯುದ್ದ ಮಾಡಿ ಸೋತ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

ಹಾಗಿದ್ದರೆ ನಮ್ಮನ್ನು ಒಬ್ಬರು ಆಳಿಲ್ಲ ಅಂತ ಸ್ವಪ್ಟವಾಗುತ್ತದೆ, ಇದನ್ನು ಪ್ರತಿಪಾದಿಸುವದಕ್ಕೆ ಹಿಂದೆ 56 ರಾಜ್ಯಗಳು(ಅಂಗ,ವಂಗ,ಕಳಿಂಗ,ಕಾಂಭೊಜ ..ಇತ್ಯಾದಿ) ಇದ್ದವು, ಪ್ರತಿ ರಾಜ್ಯಗಳಲ್ಲೂ ಅದರದೇ ಸಂಸ್ಕೃತಿ,ಭಾಷೆ,ಪದ್ಧತಿಗಳು ಇದ್ದವು.
ಅದೇ ನಿಟ್ಟಿನಲ್ಲಿ ಇಂದು ೨೮ ರಾಜ್ಯಗಳಾಗಿ ಇವೆ. ಅಂದರೆ ಒಂದು ದೇಶ,ಒಂದು ಭಾಷೆ, ಒಂದು ಸಂಸ್ಕೃತಿಯನ್ನು ನಮ್ಮ ಸಂಯುಕ್ತ ರಾಜ್ಯಗಳ ಈ ಒಕ್ಕೂಟ ಎಂದು ಹೊಂದಿರಲಿಲ್ಲ ಎಂಬುದು ಸ್ವ್ಪಷ್ಟವಾಗುತ್ತದೆ.

ಹಾಗಿದ್ದರೆ ನಾವು ಎಕೀಕರಣಗೊಳ್ಳಲು ಕಾರಣವೇನು??
ಉತ್ತರ ಬಹಳ ಸುಲಭ, ನಮ್ಮನ್ನು ಆಳಿದ ಬ್ರಿಟಿಷರಿಗೆ ಆ ಕೀರ್ತಿ ಹೋಗುತ್ತದೆ. ನನ್ನ ಶತ್ರುವಿನ ಶತ್ರು ನನ್ನ ಮಿತ್ರ ಅನ್ನುವ ಹಾಗೆ ಈ ೧೦೦+ ರಾಜ್ಯಗಳ ದೊರೆಗಳಿಗೂ ಮತ್ತು ಅಲ್ಲಿನ ಪ್ರಜೆಗಳಿಗೂ ಬ್ರಿಟಿಷರೂ ಸಾಮನ್ಯ ಶತ್ರು ಆಗಿದ್ದರೂ. ಒಬ್ಬರೆ ಎದುರಿಸಲು ಆಗದ ಕಾರಣ ನಮ್ಮಲ್ಲಿ ಒಂದು ಮೂಡುವ ಕಲ್ಪನೆ ಬಂದಿತು.ಅದು ಕೂಡ ಬ್ರಿಟಿಷರನ್ನು ಒಡಿಸಿ ಸ್ವಾತಂತ್ರ್ಯವನ್ನು ಪಡೆಯಲು ಮಾತ್ರ. ಒಂದು ಭಾಷೆ,ಒಂದು ಸಂಸ್ಕೃತಿಯ ಕಲ್ಪನೆ ಕೂಡ ಇರಲಿಲ್ಲ.
ನಮ್ಮನ್ನು ಬ್ರಿಟಿಷರು ಆಳದೆ ಇದ್ದಿದ್ದರೆ ಭಾರತ ಇಂದು ಯುರೋಪ್ ತರ ಒಂದು ಖಂಡವಾಗಿ ಇರುತ್ತಿತ್ತು.

ಸಂವಿಧಾನ ಹೇಳುವದು ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ನಮ್ಮ ದೇಶವನ್ನು ಚೀನಾ,ಜಪಾನ್ ಜೊತೆ ಹೊಲಿಸಿಕೊಂಡು ಒಂದು ಭಾಷೆ,ಒಂದು ಸಂಸ್ಕುತಿಯನ್ನು ಹೇರುವುದು ನಿಜಕ್ಕೂ ಅಪರಾಧ. ಇದನ್ನು ಯುರೋಪ್ ಜೊತೆ ಹೊಲಿಸುವುದು ನಿಜವಾದ ಮಾರ್ಗ. ಅಲ್ಲಿ ಕೂಡ ೧೦೦km ವ್ಪಾಪ್ತಿಯಲ್ಲಿ ಬೇರೆ ದೇಶ ಸಿಗುತ್ತದೆ, ಅಲ್ಲಿ ಬೇರೆ ಭಾಷೆ, ಬೇರೆ ಸಂಸ್ಕುತಿ ಕಾಣಬರುತ್ತದೆ.

ಕೇವಲ ಹಿಂದಿ ನಮ್ಮ ರಾಷ್ತ್ರಭಾಷೆಯೇ ??
ಇಂದಿನ ಹಿಂದಿಯ ಮೂಲ ಹುಡುಕುತ್ತ ಹೊರಟರೆ ಮುಸ್ಲಿಂ ರಾಜರ ಕಾಲಕ್ಕೆ ತಲಪುತ್ತೆವೆ. ಅಂದು ಆಳಿದ ಪರ್ಸಿಯನ್ ದೊರೆಗಳು ಆಡುತಿದ್ದ ಭಾಷೆಯ ಹೆಸರು "ದಖನಿ"(ಅವರು ಆಳಿದ್ದ ದಖನ್ ಪ್ರಸ್ಥಭೂಮಿಯಿಂದ ಆ ಹೆಸರು ಬಂದಿರಬಹುದು). ಇದು ಪರ್ಸಿಯನ್ ಮತ್ತು ಅರೇಬಿಕ್ ಮಿಶ್ರಣ. ರಾಜರು ಆ ಭಾಷೆ ಬಳಸಿದರೆ ಅವರ ಪ್ರಜೆಗಳು ರಾಜರ ಜೊತೆ ಮಾತಾಡಲು ಒಂದು ಭಾಷೆ ಹುಟ್ಟಿತು ಆದೇ ಹಿಂದ್ವಿ. ಅಂದಿನ ಹಿಂದ್ವಿಯೇ ಇಂದಿನ ಹಿಂದಿ, ಮತ್ತು ಅಂದಿನ ದಖನಿಯೇ ಇಂದಿನ ಉರ್ದು.
ಉತ್ತರ ಭಾರತದ ಬುದ್ದಿವಂತ ರಾಜಕರಣೀಗಳು ಅಲ್ಲಿ ಇದ್ದ ಅನೇಕ ಭಾಷೆಗಳನ್ನು ಹಿಂದಿ ಪ್ರಭೇದಕ್ಕೆ ಸೇರಿಸಿದರು, ಅಲ್ಲಿಗೆ 13 ವಿವಿಧ ಭಾಷೆಗಳು(ಮೈತಿಲಿ,ಡೊಗ್ರಿ,ರಾಜಸ್ಥಾನಿ,ಕ್ರಿಬೊಲಿ,ಬ್ರಜ್,ಪಂಜಾಬಿ) ಹಿಂದಿಯೆಂದೆ ಅನಿಸಿಕೊಂಡವು ಮತ್ತು ಭಾರತ ೪೬% ಜನ ಹಿಂದಿ ಬಲ್ಲವರು ಅಂತ ಆಗಿನ ಕೇಂದ್ರ ಸರ್ಕಾರ ಹಕ್ಕು ಸ್ಥಾಪಿಸಿತು. ಮತ್ತು ಅದಕ್ಕೆ "ರಾಜಭಾಷ(official language)" ಸ್ಥಾನಮಾನ ಸಿಕ್ಕಿತು. ಅಂದರೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರಗಳು ಸಂಪರ್ಕ ಮತ್ತು ವ್ಯವಹಾರ ಮಾಡಲು ಹಿಂದಿ ಅಥಾವ ಆಂಗ್ಲ ಭಾಷೆಯನ್ನು ಬಳಿಸಬಹುದು. ಈ ನಿಟ್ಟಿನಲ್ಲಿ ಹಿಂದಿಯನ್ನು ಉತ್ತರ ಭಾರತದ ರಾಜ್ಯಗಳು ಆರಿಸಿಕೊಂಡವು, ಆಂಗ್ಲವನ್ನು ದಕ್ಷಿಣ ಭಾರತ ರಾಜ್ಯಗಳು ಆರಿಸಿದವು. ಇದಕ್ಕೆ ಪ್ರತಿಯಾಗಿ "ಹಿಂದಿಗೆ ವಿಶೇಷ ಸ್ಥಾನಮಾನ ಕೊಟ್ಟು ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಲು ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಹಿಂದಿ ಕಡ್ಡಾಯ ಮಾಡಿತು ಜೊತೆಗೆ ಹಿಂದಿ ಪ್ರಚಾರ ಸಭಾ ನಡೆಸಿ, ಜನರನ್ನು ತನ್ನತ್ತ ಅಕರ್ಷಿಸಿತು.

ಕನ್ನಡಿಗರೂ ಮತ್ತು ಹಿಂದಿ.
ಕನ್ನದಿಗರೂ ಹಿಂದಿಯ ಬಗ್ಗೆ ವಿಶೇಷ ಅಭಿಮಾನ ಕೊಟ್ಟಿದ್ದಾರೆ, ಇದಕ್ಕೆ ನನಗೆ ಅನಿಸುವ ಕಾರಣಗಳು ೨.

೧) ತಮಿಳರ ಮೇಲಿನ ದ್ವೇಷ :- ಶತಮಾನಗಳಿಂದಲೂ ನಮಗೂ ಮತ್ತು ತಮಿಳರಿಗೆ ದಕ್ಷಿಣ ಭಾರತ ಮೇಲೆ ಪ್ರಾಭಲ್ಯ ಸಾಧಿಸಲು ಅನೇಕ ಯುದ್ದ ನಡೆದವು. ಪಲ್ಲವರ ವಿರುದ್ದ ದಂಗೆ ಎದ್ದು ಕದಂಬ ವಂಶ ಕಟ್ಟಿದ ವಿಪ್ರ ಮಯೂರ ವರ್ಮ ನಮ್ಮ ಅಚ್ಚು ಮೆಚ್ಚಿನ ರಾಜ ಅಲ್ಲವೇ?. ಹೀಗೆ ನಮ್ಮಲ್ಲಿ ನಮ್ಮ ಜೀನ್‍ಗಳಲ್ಲಿ ತಮಿಳರ ಬಗ್ಗೆ ಒಂದು ರೀತಿಯ ಜಿದ್ದು ಬಂದು ಬಿಟ್ಟಿತ್ತು. ಸ್ವಾತಂತ್ರ್ಯದ ನಂತರ ಬೆಂಗಳೂರು ತಮಿಳರ ಆಳ್ವಿಕೆಯಲ್ಲಿ ಇತ್ತು. ಕನ್ನಡಿಗ ಮತ್ತು ತಮಿಳರ ನಡುವೆ ವರ್ಗ ಸಂಘರ್ಷ ನಡೆಯುತ್ತಲೆ ಇತ್ತು. ಆಗಲೇ ಹಿಂದಿ ಕಾವು ಶುರುವಾಗಿದ್ದು, ಹಿಂದಿ ಹೇರಿಕೆಯನ್ನು ತಮಿಳರು ವಿರೋಧಿಸಿದರು, ನಾವು ಅವರು ಮಾಡಿದ್ದನು ವಿರೋಧಿಸುವ ಬರದಲ್ಲಿ ಹಿಂದಿಯನ್ನು ತಲೆ ಮೇಲೆ ಸವಾರಿ ಮಾಡಿದೆವು. ಅವರು ಯಾಕೆ ವಿರೋಧಿಸಿದರು ಅಂತ ಆರ್ಥ ಮಾಡಿಕೊಳ್ಳದೇ ಒಂದು ದೊಡ್ಡ ತಪ್ಪು ಎಸೆಗಿದೆವು.
ಒಂದು ರೀತಿಯಲ್ಲಿ ತಮಿಳರನ್ನು ಸೋಲಿಸುವ ಬರದಲ್ಲಿ ಇನ್ನೊಂದು ಮಾರಿಯನ್ನು ಮೈ ಮೇಲೆ ಹಾಕಿಕೊಂಡೆವು.


೨) ಗಾಂಧಿ ಪ್ರಭಾವ :- ಹಿಂದೂಸ್ಥಾನಿಯ ಭಾಷೆ ಹಿಂದಿಯಾಗಿರಬೇಕು, ಅದನ್ನು ಎಲ್ಲಾ ಭಾರತೀಯರು ಕಲಿಯಬೇಕು ಅಂತ ಫರ್ಮಾನು ಕೊಟ್ಟಾಗ, ಅದನ್ನೆ ಆಶೀರ್ವಚನ ಎಂದು ಭಾವಿಸಿ ಹಿಂದಿ ಕಲಿಯುವ ಹುಚ್ಚಿಗೆ ಕೈ ಹಾಕಿದೆವು. ಹಿಂದಿ ಕಲಿಯದವನೂ ದೇಶಪ್ರೇಮಿಯಲ್ಲ ಅಂತ ತಮಿಳರ ಮೇಲೆ ಆಕ್ರಮಣ ಮಾಡಿ, ನಮ್ಮ ಘೋರಿಗೆ ನಾವೇ ಅಡಿಪಾಯ ಹಾಕಿಕೊಂಡೆವು. ನಮ್ಮ ಭಾಷೆಗಿಂತ ಹಿಂದಿ ಉತ್ತಮ ಅನ್ನುವ ಮರೀಚಿಕೆಗೆ ಬಂದು, ಹಿಂದಿಯ ಎಲ್ಲಾ ವಿಷಯಗಳು ಅಪ್ಯ ಅನಿಸಿ, ನಮ್ಮ ಭಾಷೆಯ ಎಲ್ಲಾ ವಿಷಯಗಳು ನಮಗೆ ಗೌಣವೆನಿಸಿ ನಮ್ಮ ಕೀಳೆರಿಮೆಯ ಗಿಡಕ್ಕೆ ದಿನೇ ದಿನೇ ನೀರು ಹಾಕುತ್ತ ಬಂದಿದ್ದೇವೆ. ಇಂದು ಅದು ಹೆಮ್ಮರವಾಗಿ ನಮ್ಮ ಭಾಷೆಯ ಮೇಲೆ ಸವಾರಿ ಮಾಡುತ್ತ ಇದ್ದರೂ ನಾವು ಮೂಕಪ್ರೇಕ್ಷಕರಾಗಿ ನೋಡುತ್ತ ಇದ್ದೆವೆ.









Monday, April 24, 2006

ಡಾ||ರಾಜ್‍ಗೆ ನಮನ

ನಮ್ಮಲ್ಲಿ ಕನ್ನಡದ ಕಿಚ್ಚನ್ನು ತಂದ ನಮ್ಮ ಅಣ್ಣ ಇವತ್ತು ಬದುಕಿದ್ದರೆ ೭೮ ವರ್ಷ ವಯಸ್ಸಾಗುತ್ತ ಇತ್ತು, ಅದರೆ ಅವರು ನಮ್ಮನ್ನು ಬಿಟ್ಟಿ ಅಗಲಿರುವ ಸಂಗತಿಯನ್ನು ಮನವು ಒಪ್ಪಿಕೊಳ್ಳುವದಿಲ್ಲ, ನಮ್ಮ ಮನದಲ್ಲಿ ಖಾಯಂ ಆಗಿ ಇರುವ ಮಹಾನ್ ಚೇತನಕ್ಕೆ ಇಂದು ಪ್ರತಿಯೊಬ್ಬ ಕನ್ನಡಿಗನು ಕನ್ನಡ ಸೇವೆ ಮಾಡುವ ಮೂಲಕ ನಿಜವಾದ ಶ್ರದ್ಧಾಂಜಲಿ ಕೊಡಬೇಕಾಗಿದೆ.

ನಾನು ಕನ್ನಡಿಗ, ನನ್ನ ಭಾಷೆಗೆ ಹೋರಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿ ಅದನ್ನು ನಮ್ಮ ವೀರ ಅರಸುಗಳ ಚಿತ್ರಗಳ ಮೂಲಕ ನಮಗೆ ತೊರಿಸಿ ನಮ್ಮಲ್ಲಿ ಸತ್ತಂತೆ ಇದ್ದ ಆತ್ಮಸ್ಥೈರ್ಯವನ್ನು ತುಂಬಿದ್ದು . ಭಾಷೆಯ ವಿಷಯಕ್ಕೆ ಬಂದಾಗ ಯಾವ ನಟನು ಮಾಡಿರದ ಕೆಲಸವನ್ನು ನಮ್ಮ ಅಣ್ಣ ಮಾಡಿದ್ದಾರೆ. ಸುಮ್ಮನೆ ಚಿತ್ರದಲ್ಲಿ ಕನ್ನಡ ಭಾವುಟ ಹಾರಿಸಿ, ಕನ್ನಡವೇ ನಮ್ಮ ಅಮ್ಮ" ಅಂತ ಬುರುಡೆ ಬಿಡುವ ನಾಯಕರಿಂದ ಹೆಚ್ಚು ಅಪೇಕ್ಷೆ ಮಾಡಲಾಗದ ಈ ಕಾಲದಲ್ಲಿ ಸ್ಪಂದಿಸಿ ಅದಕ್ಕೆ ಜೀವ ಕೊಟ್ಟಿದ್ದು ಕೇವಲ ಡಾರಾಜ್.

ಗೋಕಾಕ್ ಚಳುವಳಿಯ ಸಮಯದಲ್ಲಿ ಲಕ್ಷಾಂತರ ಕನ್ನಡಿಗರನ್ನು ಉದ್ದೇಶಿಸಿ ಅವರು ಆಡಿದ ಮಾತುಗಳು ಮತ್ತು ಹರಿಸಿದ ಕಣ್ಣೀರಿಗೆ ಅಂದಿನ ಗುಂಡುರಾವ್ ಸರಕಾರ ಕೊಚ್ಚಿ ಹೊಗಿದ್ಧು ಇತಿಹಾಸ.

ಕೇವಲ ಒಂದು ಗಂಟೆ ಕನ್ನಡ ಕಾರ್ಯಕ್ರಮಗಳು ಮೀಸಲು ಇರುವಾಗ, ಉರ್ದು ವಾರ್ತೆಗೆ ೧೦ ನಿಮಿಷ ಕೊಟ್ಟು ಕನ್ನಡಕ್ಕೆ ಧಕ್ಕೆ ತಂದ ನಿರ್ದೆಶಕ ಹಕ್ ಕ್ರಮವನ್ನು ಖಂಡಿಸಿ ಚಳುವಳಿ ಆರಂಭವಾದಗ, ಡಾರಾಜ್ ಅವರು ಹೇಳಿದ ಒಂದು ಮಾತಿಗೆ ಮೊಯ್ಲಿ ಸರಕಾರ ನಡುಗಿ ತಾಂತ್ರಿಕ ದೊಷಗಳಿಂದ ನಿಲ್ಲಿಸಿ , ಕನ್ನಡ ವಿರೊಧಿ ಹಕ್ ವರ್ಗವಣೆ ಮಾಡಿದ್ದು ಅವರ ಶಕ್ತಿಯನ್ನು ತೋರಿಸುತ್ತದೆ.

Sword of Tippu Sultan ಕನ್ನಡಕ್ಕೆ ಡಬ್ ಮಾಡಲು ಸಂಜಯ್ ಖಾನ್ ಹೋದಾಗ ಅದನ್ನು ನಿಲ್ಲಿಸಿ ಅನೇಕ ಕಿರುತೆರೆಯನ್ನು ನಂಬಿದ್ದ ಜೀವಗಳನ್ನು ಉಳಿಸಿದ್ದು ನಮ್ಮ ರಾಜ್.

ಹೀಗೆ ಡಾರಾಜ್ ಕನ್ನಡ ಸಮಸ್ಯೆ ಎಷ್ಟೆ ಚಿಕ್ಕದಾದರೂ ಅದಕ್ಕೆ ಸ್ಪಂದಿಸಿ ಅದಕ್ಕೆ ಜಯ ತಂದು ಕೊಟ್ಟಿದ್ದಾರೆ, ಇವರ ನಿಷ್ಠೆ ಮತ್ತು ಆದರ್ಶ ನಮ್ಮ ಇಂದಿನ ಪೀಳಿಗೆಗೆ ಮಾದರಿ.

ಇಂದು ಕರ್ನಾಟಕದಲ್ಲಿ ಯಾವ ಹುಡುನನ್ನು ಕರೆದು ಮಿಮಿಕ್ರಿ ಮಾಡು ಅಂದರೆ ಮೊದಲು ಮಾಡುವುದು ನಮ್ಮ ಅಣ್ಣ ಅವರ ಅಣಿಮುತ್ತುಗಳನ್ನು, ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮಿಮಿಕ್ರಿ ಮಾಡುವಾಗ ನಾವು ಅವರ ಭಾವನೆಗಳನ್ನು ನಮ್ಮಲ್ಲಿ ಬರಸಿಕೊಂಡು ಮಾಡಬೇಕು. ನೋಡಿ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಡಾರಾಜ್ ಹಾಸುಹೊಕ್ಕಿದ್ದಾರೆ.

ಅವರ ಹಾಗೆ ಶುದ್ಧ ಕನ್ನಡವನ್ನು ನಮ್ಮ ದೈನಂದಿನ ಕೆಲಸಗಳಲ್ಲಿ ಬಳಸುತ್ತ, ಕನ್ನಡದ ಸಮಸ್ಯೆ ನಮ್ಮ ಸಮಸ್ಯೆ,ಅದಕ್ಕೆ ಪರಿಹಾರ ನಾವೇ ಕಂಡು ಹಿಡಿಯಬೇಕು ಎಂಬ ಸಂಕಲ್ಪದೊಂದಿಗೆ ಮಾಡುವ ಕನ್ನಡ ಕೆಲಸವೇ ಅವರಿಗೆ ನಾವು ತೋರಿಸುವ ನಿಜವಾದ
ಶ್ರದ್ಧಾಂಜಲಿ.

Friday, April 21, 2006

ಗೋತ್ರ ನೋಡುವುದು ಸರಿಯೇ??

ಗೋತ್ರ ನೋಡುವುದು ಸರಿಯೇ??
ಹುಡುಗ/ಹುಡುಗಿ ಮದುವೆಯ ವಯಸ್ಸಿಗೆ ಬಂದರೆ ಇಲ್ಲಾ ಮನೆಯಲ್ಲಿ ವದು-ವರ ಬೇಟೆ ಶುರುವಾದರೆ ಸಾಕು, ದೂಳು ಹಿಡಿದಿರುವ ಜಾತಕ ಅಟ್ಟದಿಂದ ಆಚೆ ಬರುತ್ತದೆ,
ಎತ್ತದ,ಓದು, ಕೆಲಸ,ಗೊತ್ರ ಮತ್ತು ನಕ್ಷತ್ರಗಳು ತಂದೆ ತಾಯಿಗಳಿಗೆ ಕಂಠಪಾಠವಾಗುತ್ತದೆ.

ಇನ್ನೂ ಸಂಬಂಧಗಳು ಬರಲು ಶುರುವಾದರೆ ಮೊದಲು ಕೇಳುವ ಪ್ರಶ್ನೆ ನಿಮ್ಮ ಗೋತ್ರ ಯಾವುದು ??
ಆ ಉತ್ತರದ ಮೇಲೆಯೇ ಮುಂದಿನ ಸಂಭಾಷಣೆ ನಡೆಯುತ್ತದೆ. ಹಾಗಿದ್ದರೆ ಈ ಗೋತ್ರ ಅಷ್ಟು ಮುಖ್ಯವೇ ??

ಮೊದಲಿಗೆ ಗೋತ್ರ ಯಾಕೆ ನೊಡುತ್ತಾರೆ ಎಂದು ತಿಳಿಯೊಣ.
ಈ ಪ್ರಶ್ನೆಯನ್ನು ತಂದೆ-ತಾಯಿ ಇಲ್ಲಾ ಹಿರಿಯರಿಗೆ ಕೇಳಿದರೆ ಸಾಕು, ಉತ್ತರ ರೆಡಿ ಇರೊತ್ತೆ. ಅವುಗಳಲ್ಲಿ ಕೆಲವು ಸಾಮನ್ಯ ಉತ್ತರಗಳು.
" ಅದು ನಮ್ಮ ಸಂಪ್ರದಾಯ" - ಅವರಿಗೆ ಉತ್ತರ ಗೊತ್ತಿರುವದಿಲ್ಲ, ಅಜ್ಜ ಹಾಕಿದ ಆಲದ ಮರಕ್ಕೆ ಜೊತು ಬೀಳಿ ಅಂತ indirect ಆಗಿ ಹೇಳುತ್ತಾರೆ.

" ನೊಡಪ್ಪಾ ನಮ್ಮ ಹಿರಿಯರು ಅಷ್ಟು ಮೂರ್ಖರಲ್ಲ, ಪ್ರತಿಯೊಂದಕ್ಕು ಒಂದು ರೀತಿ -ರಿವಾಜು ಅಂತ ಮಾಡಿರುತ್ತಾರೆ. ಗೋತ್ರ ನೊಡುವ ಉದ್ದೇಶ ಏನು ಅಂದರೆ
ಸ-ಗೋತ್ರದವರು ರಕ್ತ ಸಂಬಂಧಿ ಆಗುತ್ತಾರೆ, ಅಣ್ಣ-ತಂಗಿ ಸಂಬಂಧವನ್ನು ತಪ್ಪಿಸಲು ಇದು ಅವಶ್ಯ ಅಂತ" ಒಳ್ಳೆ discovery of India ಮಾಡಿದ ಹಾಗೆ
ಹೇಳಿ ಬಾಯಿ ಮುಚ್ಚಿಸುತ್ತಾರೆ.

ಆಯಿತು ನಮ್ಮ ಹಿರಿಯರು ತುಂಬಾ ಬುದ್ಧಿವಂತರು, ಮುಂದೆ ಹುಟ್ಟುವ ಮಕ್ಕಳು ಅಂಗವಿಕಲ ಮತ್ತು ಇತರ ಕಾಯಿಲೆ ಬರಬಾರದು ಅಂತ ಈ ಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳಬಹುದು ಆದರೆ ನಾವು ಇದರ ಸಾರ್ಥಕತೆಯನ್ನು ಸರಿಯಾಗಿ ಪಾಲಿಸಿಕೊಂಡು ಬಂದಿರುತ್ತೆವೆಯಾ ??

ಉತ್ತರ ಇಲ್ಲ. ಯಾಕೆ ?? ಎಲ್ಲಿ ನಾವು ಎಡೆವಿದ್ದೆವೆ.


ಹುಡುಗ/ಹುಡುಗಿಗೆ ಅವರ ಅಪ್ಪನ ಗೋತ್ರ ಮಾತ್ರ ತೆಗೆದುಕೊಂಡು, ಅಮ್ಮನ ಗೋತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವುದು ಅತೀ ದೊಡ್ಡ ತಪ್ಪು.

ಹುಡುಗ/ಹುಡುಗಿಗೆ ಅಪ್ಪನ ಕಡೆಯಿಂದಲೂ ಅಣ್ಣ/ತಂಗಿ ಸಿಗುತ್ತಾರೆ, ಹಾಗೇಯೆ ಅಮ್ಮನ ಕಡೆಯೂ ಅಣ್ಣ/ತಂಗಿ ಸಿಗುತ್ತಾರೆ. ಈ ಅಪ್ಪನ ಗೋತ್ರ ನೊಡುವದರಿಂದ ನಾವು ಅಮ್ಮನ ಕಡೆಯಿಂದ ಆಗುವ ಅಣ್ಣ/ತಂಗಿ ಸಂಬಂಧಗಳನ್ನು ಮರೆತಿರುತ್ತೆವೆ. ಈ rule ಇಂದ ಹುಡುಗ ತನ್ನ ತಾಯಿ ತಂಗಿಯ ಮಗಳನ್ನು ಮದುವೆಯಾಗಬಹುದು, ಅದು ಸಮ್ಮತ ಆದೇ ತನ್ನ ತಂದೆಯ ತಮ್ಮನ ಮಗಳನ್ನು ಆಗಬಾರದು. ಎಂಥಾ ವಿಪರ್ಯಾಸ.

ಒಂದು ಉದಾಹರಣೆ ತೆಗೆದು ಕೊಳ್ಳೊಣ.
Say
ಹುಡುಗ :- A
ಹುಡುಗ ಅಪ್ಪ :- AF, ಗೋತ್ರ - GF
ಹುಡುಗ ಅಮ್ಮ:- AM, ಗೋತ್ರ - GM
ಹುಡುಗ ಗೋತ್ರ :- GF

so, ಹುಡುಗನಿಗೆ non GF ಇರುವ ಹೆಣ್ಣು ಬೇಕು. ಆದ್ದರಿಂದ ಹುಡುಗನ ಅಪ್ಪನ ತಮ್ಮನ ಮಗಳನ್ನು ತಂದುಕೊಳ್ಳಲು ಆಗುವದಿಲ್ಲ.
ಹಾಗಿದ್ದರೆ ಹುಡುಗನ ಅಮ್ಮನ ತಂಗಿ ಮಗಳನ್ನು ತಂದು ಕೊಳ್ಳಬಹುದಾ ?? ನೊಡೊಣ.

Say ಹುಡುಗಿಯ (ಹುಡುಗನ ಅಮ್ಮನ ತಂಗಿ ಮಗಳು)
ಹುಡುಗಿ :- B
ಹುಡುಗಿ ಅಪ್ಪ :- BF, ಗೋತ್ರ - GBF
ಹುಡುಗಿ ಅಮ್ಮ:- BM, ಗೋತ್ರ - GM
ಹುಡುಗಿ ಗೋತ್ರ :- GBF
So, GF ಮತ್ತು GBF ಬೇರೆ ಬೇರೆ ಇರುವ ಕಾರಣ ತಂಗಿಯಾದರೂ ಹುಡುಗಿಯನ್ನು ತಂದುಕೊಳ್ಳ ಬಹುದು.
ಹಾಗಿದ್ದರೆ ನಮ್ಮ ಹಿರಿಯರ ಪುಸ್ತಕದ ಬದನೆಕಾಯಿ ಕಥೆ ಏನಾಯಿತು ??

ಈ ಪ್ರಶ್ನೆಯನ್ನು ಯಾರು ನಮ್ಮ ಹಿರಿಯರಿಗೆ ಕೇಳಿರುವದಿಲ್ಲ, ಮತ್ತು ಹೇಳಿದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ವ್ಯವಧಾನ ನಮ್ಮ ಹಿರಿಯರಿಗೆ ಇಲ್ಲ. ಶತಮಾನಗಳಿಂದ ಕುರುಡಾಗಿ ತಪ್ಪಾಗಿ ಆಚರಿಸಿಕೊಂಡು ಬಂದಿದ್ದೆವೆ. ಇದಕ್ಕೆ ಸರಿಯಾದ ಮಾರ್ಗವಿಲ್ಲವೇ ??

ಖಂಡಿತಾ ಇದೆ.

ಸಂಬಂಧ ನೋಡುವಾಗ ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ && ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ ಜೊತೆ ನೋಡಬೇಕು. ಎರಡೂ caseನಲ್ಲಿ ಬೇರೆಯಾದರೆ ಮಾತ್ರ ಮುಂದುವರಿಯಬೇಕು. ಇಲ್ಲವಾದರೆ ಹುಡುಗ-ಹುಡುಗಿ ಅಣ್ಣ-ತಂಗಿ ಆಗುತ್ತಾರೆ.

ಹಾಗಿದ್ದಲ್ಲಿ ಇದು ನಾವು ಮೇಲೆ ತೆಗೆದುಕೊಂಡ ಉದಾಹರಣೆಯ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ ಎಂದು ನೊಡೊಣ.

೧) ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ :- GF != GBF - TRUE
೨) ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ :- GM != GM - FALSE
so (TRUE && FALSE ) == FALSE.
ಆದ್ದರಿಂದ ಸಂಬಂಧ ನೋಡಲು ಆಗುವದಿಲ್ಲ.

ಇತ್ತಿಚಿಗೆ ನಮ್ಮ ಅನಕೂಲಸಿಂಧು ವ್ಯವಸ್ಥೆಯಲ್ಲಿ ಸ-ಗೋತ್ರ ಮದುವೆಗಳು ನಡೆಯುತ್ತ ಇವೆ. ಇದು ಒಳ್ಳೆ ಬೆಳವಣಿಗೆ, 1st Relations ಇಲ್ಲದಿದ್ದರೆ ಸ-ಗೋತ್ರ ಮದುವೆಯನ್ನು ಮಾಡಬಹುದು. ಇದಕ್ಕೆ ಪುರೋಹಿತರ ಕುಮ್ಮಕ್ಕು ಇದೆ, ಅನಕೂಲಕ್ಕೆ ತಕ್ಕ ಹಾಗೆ ಮದುವೆ ಸಮಯದಲ್ಲಿ ಅಪ್ಪ-ಅಮ್ಮನ ಬದಲು ಬೇರೆಯವರು ಧಾರೆ ಎರೆದುಕೊಟ್ಟರೆ ಆಯಿತು. ಎಷ್ಟು ಸುಲಭ ಅಲ್ಲವೇ ??

ಈ ಗೋತ್ರ ಪುರಾಣ ಕೇಳಿದವರಿಗೂ ಮತ್ತು ಇದನ್ನು ಇತರರಿಗೆ ಹೇಳುವವರಿಗೂ ಜೈ ಬ್ಯಾಡರಬೊಮ್ಮ ಆಶೀರ್ವಾದವಿರುತ್ತದೆ.

ಕನ್ನಡಿಗರ ಭ್ರಮೆಗಳು.

ನಮ್ಮ ಕನ್ನಡಿಗರು ಬೇರೆಯವರು ಹೇಳಿದನ್ನು ಕುರುಡಾಗಿ ನಂಬುತ್ತಾರೆ. ಇದು ನಮ್ಮ ಕೀಳೆರಿಮೆಯ ಪ್ರಭಾವವೊ ಇಲ್ಲ ಕನ್ನದ ಭಾಷೆ-ಚರಿತ್ರೆ ಬಗ್ಗೆ ಇರುವ ಅಜ್ಞಾನವೊ ಕಾಣೆ. ಇಂತ ಕೆಲವು ಭ್ರಮೆಗಳು ಇಲ್ಲಿವೆ.


ಕನ್ನಡ ಸಂಸ್ಕೃತ ಜನ್ಯ ಭಾಷೆ.

ಕನ್ನಡ ದ್ರಾವಿಡ ಜನ್ಯ ಭಾಷೆ, ಹಿಂದೆ ೨೪೮ ಭಾಷೆಗಳು ಇದ್ದವು, ಕಲಾಕ್ರಮೇಣ ಕರಗಿ ಈಗ ೨೨ ಇವೆ ಅಂತ ಭಾಷ ತಜ್ಞರ ಅಭಿಮತ.
ಸಂಸ್ಕೃತ ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಭಾಷೆ. ಉತ್ತರ ಭಾರತದ ಅನೇಕ ಭಾಷೆಗಳು ಸಂಸ್ಕೃತದಿಂದ ಹುಟ್ಟಿವೆ. ಕನ್ನಡ ಬೆಳೆಯೊಕ್ಕೆ ಸಂಸ್ಕೃತ ಜೀವಸತ್ವವಾಗಿದೆ ಅಂದರೆ ಕನ್ನಡ ಸಸಿಗೆ ಸಂಸ್ಕೃತ ಗೊಬ್ಬರ ಆಗಿದೆ. ಆದರೆ ಸಂಸ್ಕೃತ ಜನ್ಯವಲ್ಲ.

ಕನ್ನಡ ಲಿಪಿ ವಿಭಿನ್ನವಾಗಿದೆ ಮತ್ತು ಕಷ್ಟ//
ಕನ್ನಡದ ಲಿಪಿ ಬ್ರಾಹ್ಮಿ ಇಂದ ಹುಟ್ಟಿದರೂ, ದುಂಡು ದುಂಡಗೆ ನೊಡಲು ಸುಂದರ ಇರುವ ಲಿಪಿ ನಮ್ಮದು.ಅಷ್ಟೆ ಅಲ್ಲ ತೆಲುಗು ಲಿಪಿಗೂ ಕನ್ನಡವೇ ತಾಯಿ.
ಭಾರತದ ಭೂದಾನ ಚಲುವಳಿ ನೇತರಾ ಶ್ರೀ ವಿನೊಭ ಭಾವೆ ಹೇಳಿದ್ದು ಎನು ಗೊತ್ತ, ಕನ್ನಡ "ವಿಶ್ವ ಲಿಪಿಗಳ ರಾಣಿ", ಎನೊ ಅವರು ನಮ್ಮ ಪಕ್ಕ ರಾಜ್ಯದವರು,ಪ್ರೀತಿಯಿಂದ ಹೇಳಿರಬಹುದು ಅಂತ ಕಿಡಿಗೇಡಿಗಳು ಹೇಳಬಹುದು. ಆದರೆ ೧೫೨ ಲಿಪಿಗಳ ವಿಶ್ವ ಲಿಪಿಗಳ ಪ್ರದರ್ಶನ ನಡೆಯಿತು, ಎಲ್ಲಾ ಲಿಪಿತಜ್ಞರು,ಭಾಷ ತಜ್ಞರು
ಕನ್ನಡ ಅತ್ಯಂತ ಸುಂದರ ಲಿಪಿ, ಸಂದೇಹ ಇಲ್ಲದಿರುವ ಲಿಪಿ, ಬೇರೆ ಭಾಷೆಗಳಿಗೆ ಇದು ಮಾದರಿ(ಮಾಡೆಲ್) ಲಿಪಿ ಅಂತ ಒಮ್ಮತದಿಂದ ಹೇಳಿದ್ದಾರೆ.
ದ್ರುಶ್ಯಕ(ವಿಶುಯಲ್) ಇರುವ ಖಚಿತ ಮತ್ತು ನಿಖರಕತೆ.


ಕನ್ನಡ ಒಂದು ಪ್ರಾಂತೀಯ ಭಾಷೆ,ಹಿಂದಿ ನಮಗಿಂತ ದೊಡ್ಡದು//
ಇದು ಆತಿ ದೊಡ್ಡಾಆಆಆಆಆಆಆಆಆಅ ಭ್ರಮೆ. ಈ ಕಾರಣಕ್ಕೊ ಎನೊ ಅಥಾವ ನಮ್ಮ ಪಠ್ಯ ಪುಸ್ತಕಗಳ ತಪ್ಪು ತಿಳುವಳಿಕೆಯಿಂದ ನಮಗೆ ಒಂದು ಭ್ರಮೆ ಹುಟ್ಟಿದೆ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅದನ್ನು ಪ್ರತಿಯೊಬ್ಬ ಹಿಂದುಸ್ಥಾನಿ ಕಲಿಯಬೇಕು ಅಂತ. ಕಲಿಯುವುದು ಓಕೆ, ಆದರೆ ಅದರ ಹುಚ್ಚು ಹತ್ತಿಸಿಕೊಂಡು ನಮ್ಮ ಭಾಷೆಯನ್ನು ತಿರಸ್ಕರಿಸುವುದು ಸರಿ ಅಲ್ಲ.
ಕನ್ನಡವು ರಾಷ್ಟ್ರ ಭಾಷೆ ಅನ್ನುವ ಸಂಗತಿ ಅನೇಕರಿಗೆ ಗೊತ್ತಿಲ್ಲ, ಹಿಂದಿಗೆ ಹೊಲಿಸಿದರೆ ಕನ್ನಡ ಎಲ್ಲ ವಿಷಯದಲ್ಲು ಮುಂದೆ ಇದೆ. ಅನಗತ್ಯ ಭ್ರಮೆ ಇಟ್ಟುಕೊಂಡು ಹಿಂದಿಗೆ ಉಘೆ ಉಘೆ ಹೇಳುವುದು ಬೇಕಿಲ್ಲ.


ಕನ್ನಡ ಮತ್ತು ತೆಲುಗು ತುಂಬ ಹತ್ತಿರದ ಭಾಷೆಗಳು//
ಇದು ಇನ್ನೊಂದು ಭ್ರಮೆ, ಲಿಪಿ ವಿಷಯಕ್ಕೆ ಬಿಟ್ಟರೆ ನಮಗೂ ಆ ಭಾಷೆಗು ಸಾಮ್ಯ ಅಷ್ಟು ಇಲ್ಲ. ತೆಲುಗು ಭಾಷೆಯಲ್ಲಿ
ಸ್ತ್ರೀ ಲಿಂಗಕ್ಕೂ ಮತ್ತು ನಪುಂಸಕ ಲಿಂಗಕ್ಕೂ ಕ್ರಿಯಾಪದದಲ್ಲಿ ವ್ಯತ್ಯಾಸವಿಲ್ಲ. "ಪಿಲ್ಲಿ ವಚ್ಚಿಂದಿ" ಮತ್ತು "ಪಿಲ್ಲ ವಚ್ಚಿಂದಿ" ಅನ್ನುತ್ತಾರೆ.


ಕನ್ನಡಲ್ಲಿ ಎನಿದೆ ....??

ಇದಕ್ಕೆ ಒಳ್ಳೆ ಉತ್ತರ "ಎನಿಲ್ಲ" ಅಂಥ ಕೇಳುವುದು. ನಾವು ಕನ್ನಡಿಗರು ನಮ್ಮ ಕೊರತೆಯನ್ನು ಹೇಳಿ ಕೊಲ್ಲುತ್ತೆವೆ. ನಾವು ಸತ್ತೆ ಹೊಗಿದ್ದೆವೆ ಅಂತ ಬೊಬ್ಬೆ ಹೊಡೆಯುತ್ತೆವೆ.
ನಮ್ಮ ನಿಶಕ್ತಿಗಳನ್ನು ಹೇಳಿ ಕೊಂಡು ಕೊರಗುತ್ತೆವೆ. ನಮ್ಮ ಶಕ್ತಿ ಮತ್ತು ನಮ್ಮ ಭಾಷೆಯಲ್ಲಿ ಇರುವ +ve ಗುಣಗಳ ಬಗ್ಗೆ ಎನು ಹೇಳುವದಿಲ್ಲ.

ಆಕಸ್ಮಾತ್ ನವೆಂಬರ್ ೧ನೇ ತಾರೀಖು ಕೇಳಿದರೂ ಕೂಡ ನಾವು ಹೇಳುವುದು ಒಂದೆ ಒಂದು ವಿಷಯ,ಅದು ನಮಗೆ ೭ ಬಾರಿ ಜ್ಞಾನಪೀಠ ಬಂದಿದೆ ಅಂತ ಅಷ್ಟೆ .ಒಂದು ವರುಷಕ್ಕೆ ಒಮ್ಮೆ ಕೊಡುವ ಒಂದು
ಖಾಸಗಿ ಪ್ರಶಸ್ತಿ ಒಂದೇನ ನಮ್ಮ ಮಾನದಂಡ. ಅಲ್ಲ, ಕನ್ನಡ ಸಾಹಿತ್ಯಕ್ಕೆ ೪೯ ಸಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಇದಲ್ಲದೆ ನೆರೆ ರಾಜ್ಯಗಳ "ಕಬಿರ್ ಸಮ್ಮಾನ್" ಮತ್ತು ಕುಮಾರನ
ಪ್ರಶಸ್ತಿ ಕೂಡ ಬಂದಿವೆ.

ನಮ್ಮ ನವ ಸಾಹಿತ್ಯ ಶ್ರೀಮಂತ ಆಗಿದೆ, ನಿಜ. ಆದರೆ ಹಿಂದೆ ಇರಲಿಲ್ಲವೆ?
೧೦೦೦ ವರುಷಗಳ ಹಿಂದೆ ಪಂಪ ಮಹಾಕಾವ್ಯ ಬರೆದ, "ಮನುಷ್ಯ ಜಾತೀ ತಾನೊಂದೆ ಬಲಮ್" ಅನ್ನುವ ಮಹಾನ್ ವಿಚಾರವನ್ನು ಬೊದಿಸಿದ. ಇದನ್ನೇ ವಿಶ್ವ ಮಾನವ ಸಂದೇಶವನ್ನು ನಮ್ಮ ಕುವೆಂಪು ಪುನರ್ ಉಚ್ಚರಿಸಿದರು.
ಹೀಗೆ ಸಾಮಜಿಕ ಕಳಕಳಿಯನ್ನು ಬೊಧಿಸಿದ ಕವಿಗಳು ಕನ್ನಡದಲ್ಲಿ ಮಾತ್ರ ಸಿಗುತ್ತಾರೆ.

"ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರ ಅಗುವುದು" ಅಂತ ಹೇಳಿದ್ದಾರೆ, ಅವನ ಬಗ್ಗೆ ಹೇಳೊಕ್ಕೆ ೨ ಮಾತುಗಳು ಸಾಲದು. ಅವನು ಅಷ್ಟು ಚೆನ್ನಾಗಿ ಕಾವ್ಯಗಳನ್ನು ಬರೆಯುತ್ತಿದ್ದ.
ಅವನಿಗೆ ಅವನ ಕಾವ್ಯದ ಮೇಲೆ ಅಪಾರ ನಂಬಿಕೆ, ಅದಕ್ಕೆ ಎನೊ ಅವನು ಒಮ್ಮೆ ಬರೆದಿದ್ದು ಇನ್ನೊದು ಸರಿ ಅಳಿಸದೆ ಬರೆದಿದ್ದು. ಈ ತರ ಯಾವ ಭಾಷೆಯ ಕವಿಯು ಮಾಡಿರಲಾರ.

ರನ್ನ ಬರೆದ ಗಾದಯುದ್ದಕ್ಕೆ ಬೇರೆ ಯಾವ ಕೃತಿಗೆ ಸಾಟಿ ಉಂಟು ??

ಕಾಲಾನುಕ್ರಮದಲ್ಲಿ ಕನ್ನಡ ಹಳೆ-ನುಡಿ-ನವ ಹಿಗೆ ವಿಕಾಸ ಹೊಂದಿರುವ ಕನ್ನಡ ಅನೇಕ ಪ್ರಬೇಧ ಪಡೆದಿದೆ,
ಯಾವ ಭಾಷೆಗೆ ಭೌಗೊಳಿಕ ಪ್ರಬೇಧ ಇರುತ್ತದೆಯೊ ಅದು ಶ್ರೀಮಂತ ಅಂತ ಭಾಷತಜ್ಞ್ನರ ಅಭಿಮತ.


ಸಾಹಿತ್ಯ==ಬದುಕು ಅಲ್ಲ. ಬದುಕು ಅಂದರೆ ಆಡಲಿತ,ಶಿಕ್ಷಣ,ವೈದ್ಯಕಿಯ,ವಿಜ್ಞಾನ ನಮ್ಮ ಭಾಷೆಯಲ್ಲಿ ಇರಬೇಕು. ಆಡಳಿತ ಕ್ಶೇತ್ರದಲ್ಲಿ ಕನ್ನಡಷ್ಟು ಪದಕೊಶ ಇನ್ನೊದು ಭಾಷೆಯಲ್ಲಿ ಇಲ್ಲ. ಕಾನೂನಿನ ಪದಕೊಶದಲ್ಲಿ ೪೫ ಸಾವಿರ ಶಬ್ದಗಳು ಇವೆ. ಹಿಂದಿಗಿಂತ ಹೆಚ್ಚು ಮತ್ತು ಮುಂದೆ ಇದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ನಿಗಂಟು ಇದೆ.
ವೈದ್ಯ ಪದಕೊಶ, ಅನೇಕರಿಗೆ ಎಟುಕದ ಪದಕೊಶ, ಜಗತ್ತಿನ ಕೆಲವೇ ಭಾಷೆಗಳಲ್ಲಿ ಅಂದರೆ ಆಂಗ್ಲ,ಜಪಾನ್ ಜೊತೆಗೆ ಕನ್ನಡಲ್ಲಿ ಇದೆ.
ಟೆಕ್ನಿಕಲ್ ಗ್ಲಾಸರಿಯನ್ನು NGEF ತಂದಿತು. ೭೦೦೦ ಪದಗಳು ಇದರಲ್ಲಿ ಇದೆ.

ಆಕ್ಷರ ಸ್ಟೆನ್ಸಿಲ್ ಮೊದಲು ಬಂದಿದ್ದು ಕನ್ನಡದಲ್ಲಿ, ಮೊದಲ ಬಾರಿಗೆ ಭಾರತದಲ್ಲಿ NGEF ಅವರು ಮಾಡಿದರು. ಇದು ಯಾವ ಭಾಷೆಯಲ್ಲೂ ಕೂಡ ಇರಲಿಲ್ಲ.
ಅಂತರಾಷ್ತ್ರೀಯ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ಕೃಷ್ಣೆ ಗೌಡ ಅವರ ನೇತ್ರತ್ವದಲಿ ಹಿಂದೆ ಬಂದಿತು.

ಕನ್ನಡದಲ್ಲಿ ಬರೆದರೆ ಬೇರೆ ಭಾಷೆಯ ಲಿಪಿಯಲ್ಲಿ ಬರೆಯುವ ಮೊದಲ ಲಿಪ್ಯಂತರ ಕನ್ನಡದಲ್ಲಿ ಇದೆ.

ಇಡಿ ದೇಶದಲ್ಲಿ ಯಾವ ರಾಜ್ಯದಲ್ಲು ಕೂಡ ಅದರ ಭಾಷೆಯ
GAZETTE ತಂದಿಲ್ಲ, ಕರ್ನಾಟಕವನ್ನು ಹೊರತು ಪಡಿಸಿ.

ಕೇಂದ್ರದ ಅದಿನಿಯಮವನ್ನು ರಾಷ್ತ್ರಪತಿ ಅನುಮತಿ ಪಡೆದು ಕನ್ನಡದಲ್ಲಿ ತಂದ ಕೀರ್ತಿ ಕನ್ನಡಕ್ಕೆ ಇದೆ, ಬೇರೆ ಭಾಷೆಯಲ್ಲಿ ೧೦ ಇದ್ದರೆ, ಕನ್ನಡದಲ್ಲಿ ೨೦೦+ ಇದೆ.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ೫% ಒಳ ಮಿಸಲು ಇದೆ.ಬೇರೆ ಯಾವ ರಾಜ್ಯವು ಇದಕ್ಕು ಕೈ ಹಾಕಿಲ್ಲ.

ಕನ್ನಡದ ಜಾನಪದವನ್ನು ಒಂದು ತಕ್ಕಡಿಗೆ ಹಾಕಿ ,ಬಾಕಿ ೨೭ ರಾಜ್ಯಗಳ ಜನಪದವನ್ನು ಇನ್ನೊದು ತಕ್ಕಡಿಗೆ ಹಾಕಿದರೆ ಹೆಚ್ಚು ತೂಗುವುದು ಕನ್ನಡ.
ಇದು ನಾವು ಹೇಳಿದ ಮಾತಲ್ಲ, ಉತ್ತರ ರಾಜ್ಯಗಳ ಜಾನಪದ ಪಂಡಿತರು ಹೇಳಿದ ಮಾತಿದು.


ಹೀಗೆ ಹೇಳುತ್ತ ಹೊದರೆ ಸಾಲು ಸಾಲು ಸಿಗುತ್ತದೆ, ಕನ್ನಡವು ಭೂತ-ಭವಿಷ್ಯ ಮತ್ತು ವರ್ತಮಾನ ಇರುವ ಎಕೈಕ ಭಾಷೆ. ಇದು ಅಲಿಸಿ ಮತ್ತು ನಶಿಸಿ ಹೊಗುವಂತ ಭಾಷೆ ಅಲ್ಲ.
ಸುಮ್ಮನೆ ನೆಗೆಟಿವ್ ಪ್ರಚಾರ ಮಾಡುವ ಬದಲು, ನಮ್ಮ ಭಾಷೆ ಪಾಸಿಟಿವ್ ವಿಷಯಗಳನ್ನು ತಿಳಿದುಕೊಂಡು ಅದನ್ನು ನಮ್ಮ ಜನರಿಗೆ ತಿಳಿಸಿ ಜಾಗೃತಿ ಮಾಡುವುದು ಸೂಕ್ತ.
ಹಿಂದೆ ಪುಲಕೇಶಿಯ ಕಾಲದಲ್ಲಿ "ಕರ್ನಾಟಕ ಸೇನಮ್ ಅಜೇಯಮ್", ಅನ್ನುವ ಮಾತಿತ್ತು. ಅದಕ್ಕೆ ಕಾರಣ ನಮ್ಮ ಕಿಚ್ಚು,ಸ್ವಾಭಿಮಾನ ಮತ್ತು ಶೌರ್ಯ.
ಇವುಗಳನ್ನು ಮತ್ತೆ ಮೈಗೂಡಿಸಿಕೊಳ್ಳಬೇಕಾಗಿದೆ.

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು
ಮಾನವ ವಿಕಸನ ಹೊಂದಿದ ಹಾಗೆ ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು.
ಆ ಸಮಯಕ್ಕೆ ತಕ್ಕ ಹಾಗೆ ಅದನ್ನು ರೂಪಿಸಿರಬಹುದು ಅದು ಪ್ರಶ್ನೆ ಅಲ್ಲ. ಆದರೆ ಅದನ್ನು ಶತಮಾನ ಕಳೆದ ಮೇಲು ಸುಮ್ಮನೆ ಅನುಸರಿಸಿಕೊಂಡು ಬಂದರೆ ಅದು ಪ್ರಶ್ನಾರ್ಹ.

ಹಾಗಿದ್ದರೆ ಯಾವುದು ಮೂಡನಂಬಿಕೆಯ ಪಟ್ಟಿಗೆ ಸೇರುತ್ತದೆ ??

ಯಾವ ನಂಬಿಕೆಗೆ ಒಂದು ಆಧಾರವಿಲ್ಲವೊ ,
ಯಾವ ನಂಬಿಕೆಯ ಹಿನ್ನಲೆ ಗೊತ್ತಿಲ್ಲವೊ,
ಯಾವ ನಂಬಿಕೆ ನವೀಕರಿಸಿಲ್ಲವೊ,
ಯಾವ ನಂಬಿಕೆಯ ಆಚರಣೆಯ ಮಹತ್ವ ತಿಳಿದಿಲ್ಲವೊ ಅದನ್ನು ಮೂಡನಂಬಿಕೆ ಅಂತ ಕರೆಯಬಹುದು.

ಆದರೆ ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನಲೆ ಮತ್ತು ಉಪಯೋಗ ತಿಳಿದಿರಬೇಕು, ಸುಮ್ಮನೆ ನಮ್ಮ ಹಿರಿಯರು ಆಚರಿಸಿದರು ಅಂತ ನಾವು ಅದನ್ನು ಪಾಲನೆ
ಮಾಡಲು ಆಗುವದಿಲ್ಲ. "ದೊಡ್ಡವರೆಲ್ಲಾ ಜಾಣರಲ್ಲ" , ಇಲ್ಲಿ ದೊಡ್ದವರು ಅಂದರೆ ನಮಗೆ ಅದರ ಹಿನ್ನಲೆ ಮತ್ತು ಉಪಯೋಗ ತಿಳಿಸದೆ,ಸಂಪ್ರದಾಯಗಳನ್ನು ಭೊದಿಸಿದವರು.
ನಾವು ಅದನ್ನು ಪ್ರಶ್ನೆ ಮಾಡಿದರೆ ತಮಗೆ ಗೊತ್ತಿರುವ ಉತ್ತದವನ್ನು ಹೇಳಿ ಇಲ್ಲಾ ಸುಮ್ಮನೆ ನಮ್ಮ ಬಾಯಿ ಮುಚ್ಚಿಸುವ ಹೊಸ ಸಂಪ್ರದಾಯವನ್ನು ಆರಂಭಿಸಿದರು.

ಸಂಪ್ರದಾಯಗಳು ಕಾಲನುಕ್ರಮೇಣ ನಶಿಸುತ್ತದೆ ಅಂತ ನಮ್ಮ ಕಲ್ಪನೆಯಲ್ಲಿ ಇಲ್ಲ, ಹಿಂದಿನವರು ಮಾಡಿದ್ದು ಶತಮಾನಗಳಿಗೂ ಅನ್ವಯವಾಗುತ್ತದೆ ಅನ್ನುವ ಪೊಳ್ಳು ನಂಬಿಕೆಯಿಂದ ನಾವು
ಈ ಕೂಪದಲ್ಲಿ ಸೇರಿದ್ದಿವೆ. ಪ್ರಶ್ನೆ ಮಾಡಿದರೆ ನಮ್ಮ ಹಿರಿಯರಿಗೆ ತೊರಿಸುವ ಅವಮಾನ ಅಂತ ಭಾವಿಸಿ ಸುಮ್ಮನೆ ಅದನ್ನು ಕಾಟಚಾರವಾಗಿ ಆಚರಿಸುತ್ತಿದ್ದೆವೆ, ಅದಕ್ಕೆ ಸಂಸ್ಕ್ರುತಿ ಅಂತ ಬೇರೆ ಹೆಸರು ಕೊಟ್ಟಿದ್ದಿವೆ.

ನಮ್ಮ ಹಿರಿಯರು ಪ್ರಶ್ನೆ ಮಾಡುವ ಯೊಗ್ಯತೆ ಇಲ್ಲದಿದ್ದರೂ ಸಹ, ಮುಂದಿನ ಪೀಳಿಗೆ ಅದನ್ನು ಆಚರಿಸಬೇಕೆಂದು ಪ್ರತಿಯೊಂದು ನಂಬಿಕೆಯ ಜೊತೆ ಒಂದು ಕತೆಯನ್ನು ಸೇರಿಸಿದರು, ಅದೇ ಅದನ್ನು ಆಚರಿಸಿದರೆ ಆಗುವ ಲಾಭ ಮತ್ತು ಅದನ್ನು ದಿಕ್ಕರಿಸಿದರೆ ಆಗುವ ನಷ್ಟ. ಮಾನವ ಎಷ್ಟೆ ಓದಿದರೂ ಸಹ ಇಂತಹ ಪೊಳ್ಳು ಕತೆಗಳಿಗೆ ಒಗೊಟ್ಟು ಅದನ್ನು ಪಾಲಿಸುತ್ತಾನೆ, ನೋಡಿರಬಹುದು
ವಾರಕ್ಕೆ ಬರುವ ವಿ-ಅಂಚೆಯಲ್ಲಿ ಈ ಪತ್ರವನ್ನು ೧೦ ಜನರಿಗೆ ಕಳುಹಿಸಿ, ನಿಮಗೆ ಒಳ್ಳೆಯಾದಗುತ್ತದೆ. ತಿರುಪತಿ ಸ್ವಾಮಿಯ ಆಶೀರ್ವಾದವಿರಬಹುದು ಇಲ್ಲಾ ಸಾಯಿಬಾಬ ಮಾಂತ್ರಿಕ ಇರಬಹುದು, ನಮ್ಮ ಜನ ದಿಕ್ಕರಿಸಿದರೆ ಆಗುವ ನಷ್ಟಕ್ಕೆ ಹೆದರಿ, " ಅಯ್ಯೊ ನಾನು ಕಳುಹಿಸಿದರೆ ನನಗೆ ಆಗುವ ನಷ್ಟ ಏನು?, ಸುಮ್ಮನೆ ನೋಡೆ ಬಿಡುವ ಅನ್ನುವ ತೀರ್ಮಾನಕ್ಕೆ ಬರುವುದು ನಿಜಕ್ಕೂ ಘೊರವೇ ಸರಿ.

ಇದನ್ನು ಲಾಭ ಪಡೆಯುವವರೂ ಶತಮಾನಗಳಿಂದಲೂ ಇದ್ದೆ ಇರುತ್ತಾರೆ, ಜನರ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಾರೆ, ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ
ಕೆಲವು ವರ್ಷಗಳಿಂದ ಹುಟ್ಟಿರುವ ದೇವರುಗಳು ಮತ್ತು ಅದರ ಉಪಕಥೆಗಳು. ಹೆಚ್ಚಾಗಿ ಇದಕ್ಕೆ ಬಲಿಯಾಗುವರು ಹೆಂಗಸರು ಅದಕ್ಕೆ ಈ "ವೈಭವ ಲಕ್ಶ್ಮಿ" ಮತ್ತು "ಕಲ್ಕಿ" ದೇವರುಗಳು ಪ್ರತಿ ಮನೆಯನ್ನು ಹೊಕ್ಕಿವೆ, ನಮ್ಮ ಲಲನಾಮಣಿಗಳು ಆಸೆಗೆ ಬಿದ್ದು ಪೂಜೆ ಮಾಡಿದ್ದು ಮಾಡಿದ್ದೆ. ಯಾರಿಗೆ ವೈಭವ ಬಂತೊ ಇಲ್ಲವೋ ಆದರೆ ಈ ದೇವರ ಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ
ಮುದ್ರಾಲಯದವನಿಗೆ ವೈಭವದ ದರ್ಶನವಾಯಿತು.
ಇದನ್ನು ಹುಟ್ಟು ಹಾಕಿದ ಭೂಪನಿಗೆ ನಿಜಕ್ಕೂ ಅಭಿನಂದಿಸಬೇಕು,ಇಷ್ಟು ಚೆನ್ನಾಗಿ ಜನರನ್ನು ವಂಚಿಸುವ ವಿಧಾನ ಬೇರೊಂದಿಲ್ಲ.

ಪ್ರತಿವಾರ ಮುತೈದೆಯರು ಇತರ ೫ ಮುತೈದೆಯರಿಗೆ ಈ ವೈಭವ ಲಕ್ಶ್ಮಿಯ ಬಾಗಿನ ಕೊಡಬೇಕು, ಕೊಡುವಾಗ ಒಂದು ಪುಸ್ತಕದ ಜೊತೆ ಕೊಡಬೇಕು, ಆ ತರ ಅವರು ಇಷ್ಟು ವಾರಗಳ ಕಾಲ ಮಾಡಿದರೆ ಇಷ್ಟು ಪುಣ್ಯಕ್ಕೆ ಒಳಗಾಗುತ್ತಾರೆ ಅಂತ ಇದೆ. ಆದರೆ ಮೆಚ್ಚುಗೆಯ ಅಂಶವೆನೆಂದರೆ ಬಾಗಿನ ತೆಗೆದುಕೊಳ್ಳುವ ಹೆಂಗಸರು ಕೂಡ ಇದನ್ನು ಆಚರಿಸಬೇಕು. ಹೀಗೆ ಇದು chain reaction ಆಗಿ ಆ ಪ್ರಕಾಶಕನಿಗೆ ದುಡ್ಡೊ ದುಡ್ಡು.

ಕಳೆದ ಶತಮಾನದಿಂದ ಹುಟ್ಟಿರುವ ಮತ್ತು "powerful" ದ್ಯಾವ್ರು ಅಂದರೆ ಶ್ರೀ ಶ್ರೀ ಸತ್ಯನಾರಯಣ. ತುಂಬಾ "flexible" ಪೂಜೆ ಇದು, ಯಾವಾಗ ಬೇಕಾದರೂ ಮಾಡಬಹುದು, ವರ್ಷಕ್ಕೆ ಒಮ್ಮೆ ಅಂತ ಕಾಯುವ ಗೊಜಿಲ್ಲ. ಈ ದೇವರಿಗೆ ಅಬ್ಬಬ್ಬಾ ಅಂದರೆ ೧೨೦-೧೩೦ ವರ್ಷಗಳ ಇತಿಹಾಸವಿದೆ ಅಷ್ಟೆ. ಈ ದ್ಯಾವ್ರು ಬಗ್ಗೆ ಇನ್ನೊಮ್ಮೆ ಹೇಳುವೆನು.

ದುರಂತವೆಂದರೆ ಅನೇಕ ಮಹಾನ್ ಪುರುಷರು ಬಂದು ಹೊದರು ನಾವು ಬದಲಾಗಿಲ್ಲ, ನಾಯಿ ಬಾಲ ಡೊಂಕು ಅನ್ನುವ ಹಾಗೆ ಆ ಮಹಾತ್ಮರ ಅನುನಾಯಿ ಅಂತ ಹೇಳಿಕೊಂಡರು, ಅವರ ಮಾತುಗಳನ್ನು ಅನುಸರಿಸದೆ, ದೇವರ ಗುಡಿಯಲ್ಲಿ ಅವರ ಭಾವಚಿತ್ರ ಹಾಕಿ ನಮಗೆ ಬಂದ ಹಾಗೆ ಇದ್ದೆವೆ. ಇದು ಹಣ್ಣಿನ ಸಿಪ್ಪೆ ತಿಂದು ತಿರುಳನ್ನು ಎಸೆದ ಹಾಗೆ.
ದುಃಖದ ಸಂಗತಿ ಎಂದರೆ ಮಹಾತ್ಮರು ಎಲ್ಲರೂ ಈ ಮುಡನಂಬಿಕೆಗಳ ವಿರುದ್ಧ ದ್ವನಿ ಎತ್ತಿದವರೇ !!!

ಸಂಪ್ರದಾಯ ಸರಿ, ಆ ಕಾಲಕ್ಕೆ ಅನುಗುಣಕ್ಕೆ ಹುಟ್ಟು ಹಾಕಿರಬಹುದು. ಉದಾ:- ೧೦೦ ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ತುಂಬಾ ಹಿಮ ಬೀಳುತ್ತ ಇದ್ದರೆ, ಸಂಕ್ರಾತಿಯ ಸಮಯದಲ್ಲಿ ಎಲ್ಲರೂ ಬೆಚ್ಚನೆಯ ಉಣ್ಣೆ ಬಟ್ಟೆ ಕೊಂಡುಕೊಳ್ಳುವುದು ಮತ್ತು ಹಾಕಿಕೊಳ್ಳುವುದು ಸಂಪ್ರದಾಯವಾಗುತ್ತದೆ. ಅದೇ ಕಾಲಕ್ರಮೇಣ ಜನರಲ್ಲಿ ಅಭ್ಯಾಸವಾಗುತ್ತದೆ, ೧೦೦ ವರ್ಷಗಳ ನಂತರ ಪ್ರಕೃತಿಯ ವೈಪರಿತ್ಯದಿಂದ ಜನವರಿ ತಿಂಗಳಲ್ಲಿ ಸುಡು ಬಿಸಿಲು ಬಂದರೂ ಸಹಾ, ನಮ್ಮ ಹಿರಿಯರು ಹಾಕಿದ ಸಂಪ್ರದಾಯ ಅಂತ ಜೋತು ಬಿದ್ದು ಸಂಕ್ರಾತಿಗೆ ಉಣ್ಣೆ ಬಟ್ಟೆ ಹಾಕಿಕೊಂಡರೆ ನಗೆಪಾಟಲಿಗೆ ಒಳಗಾಗುತ್ತೆವೆ.

ಪ್ರಶ್ನೆ ಮಾಡಿಕೊಂಡು ಇಂದಿಗೆ ಎಷ್ಟು ಅದು ಸರಿ ಅಂತ ಯೋಚಿಸಿ ಆಚರಿಸಿದರೆ ಸಂಪ್ರದಾಯಗಳಿಗೆ ಒಂದು ಅರ್ಥವಿರುತ್ತದೆ.

- ಪ್ರ