Saturday, October 24, 2009

ಲೋಕದಲ್ಲಿ ಯಾರು ಸಾಯುವದಿಲ್ಲ

ನೆನಪುಗಳು ಎಂದೂ ಸಾಯುವದಿಲ್ಲ, ನಮ್ಮ ಹಿರಿಯರ ನೆನಪು, ಕಂಡ ವ್ಯಕ್ತಿಗಳ ಮಾತು, ನಡುವಳಿಕೆ ಎಲ್ಲವೂ ಹೀಗೆ. ಅವು ಸಾಯುವದಿಲ್ಲ. ನೋಡಿ ಆ ಬಾವಲಿಯಂತೆ ನೇತಾಡಿಕೊಂಡಿರುತ್ತದೆ. ಸಂಧರ್ಬ ನೋಡಿ ನಮ್ಮ ಮನಸ್ಸಿಗೆ ಕೊಂಬೆಗೆ ಹಾರಿಕೊಳ್ಳುತ್ತವೆ. ಲೋಕದಲ್ಲಿ ಯಾವುದಕ್ಕೂ ಸಾವಿಲ್ಲ. ರಾಲೋ,ಎಂ ಹಿರಿಯಣ್ಣ, ಡಾ.ರಾಧಾಕೃಷ್ನನ್, ಗೌರಜ್ಜಿ ಎಲ್ಲಾ ಹೀಗೆ ನನಗೆ ಅಂಟಿಕೊಂಡಿರುತ್ತಾರೆ. ಅರಿಸ್ಟಾಟಲ್, ವೃದ್ಧ ಲಿಯರ್ ಮಹರಾಜ ಇಂತ ಹಳಬರು ಕೂಡ ಹೀಗೆ ನಿರ್ಧಯಿಗಳಾಗಿ ನಮಗೆ ಅಂಟಿಕೊಳ್ಳುತ್ತಾರೆ. ಅದ್ದರಿಂದ ನನಗೆ ಅನಿಸೊತ್ತೆ ಲೋಕದಲ್ಲಿ ಯಾರು ಸಾಯುವದಿಲ್ಲ, ಇಲ್ಲೆ ನೇತಾಡುತ್ತಿತ್ತು ಯಾರಿಗಾದರೂ ಅಂಟಿಕೊಳ್ಳುತ್ತಾರೆ.


ಇದು ಶತಮಾನದ ಕನ್ನಡಿಗ ಎ ಎನ್ ಮೂರ್ತಿರಾಪ್ ಆರ ಮಿತ್ರರಿಗೆ ಹೇಳಿದ ಮಾತುಗಳು ಇವತ್ತು ನೇತಾಡುತ್ತಿತ್ತ ಬಾವಲಿ ತರ ಜ್ಞಾಪಕ ಬಂತು. ಎಷ್ಟು ನಿಜವಾದ ಮಾತುಗಳು ಇವು ,ಲೋಕದಲ್ಲಿ ಯಾರಿಗೂ ಸಾವಿಲ್ಲ ಎಲ್ಲೋ ಒಂದು ವಸ್ತು, ಅಣುವಿನಲ್ಲಿ ಅವರ ಛಾಯೆ ಇದ್ದೆ ಇರುತ್ತದೆ. ಆ ವಸ್ತು ನೋಡಿದಾಗ ಅವರ ಜ್ಞಾಪಕ ಚಕ್ಕನೆ ಆವರಿಸುತ್ತದೆ.

ನಾನು ಎಷ್ಟೋ ಸಾರಿ ಇದನ್ನು ಅಂದುಕೊಂಡಿದ್ದೇನೆ, ಎಷ್ಟೊ ಬಾರಿ ಕೆಲವರನ್ನು ಮರೆತಿದ್ದೇನೆ ಅಂತ ಭಾವಿಸಿದ್ದೇನೆ, ಅವರನ್ನು ನನ್ನ ಜೀವನದಲ್ಲಿ ಬಂದಿದ್ದರ ಅಂತ ಯೋಚಿಸಿದ್ದೇನೆ. ಯಾವುದು ಒಂದು ದಿನ, ಆ ಕ್ಷಣ ಅವರು ಜ್ಞಾಪಕಕ್ಕೆ ಬಂದೂ ಅಣಿಕಿಸುತ್ತ ಇರುತ್ತಾರೆ.
ಇನ್ನು ನಮ್ಮ ಜೀವನದಲ್ಲಿ ಆಪ್ತರ ಬಗ್ಗೆ ಎನು ಹೇಳೋದು ??. ಮೂರ್ತಿ ರಾಯರ ಮಾತು ಸರಿ ಅನಿಸುತ್ತಲೆ ಇರುತ್ತದೆ.

Sunday, October 11, 2009

ಬ್ಲಾಗ್ ಪದಗಳು ..

ಕನ್ನಡದಲ್ಲಿ ಅದೇನು,ಇದೇನು ಅಂತ ಅನೇಕ ಜನರ ಪ್ರಶ್ನೆಗಳು ಬರುತ್ತವೆ, ಬ್ಲಾಗ ಅನ್ನೊ ಪದವನ್ನು ಕನ್ನಡೀಕರಣ ಮಾಡಿದರೆ ಅದಕ್ಕೆ ಒಂದು ಸಂಸ್ಕ್ರುತ ಭಯಂಕರ ಪದಗಳನ್ನು ಸೃಷ್ಟಿ ಮಾಡಿ ಅದೇ ಕನ್ನಡ ಪದ ಎಂದು ವಾದಿಸುವ ಪರಿಷತ್ತು ಸಿಗುತ್ತದೆ. ಅವುಗಳ ಗೋಜಿಲ್ಲದೆ, ಯಾರ ಮುಲಾಜಿಲ್ಲದೆ ನನಗೆ ತೋಚಿದ ಪದಗಳನ್ನು ಇಲ್ಲಿ ಹಾಕಿದ್ದೇನೆ, ಸುಲಭ ಅನಿಸಿದರೆ ಬಳಸಿ ಇಲ್ಲ ನೀವು ಹೊಸ ಶಬ್ಧಗಳನ್ನು ಹುಟ್ಟು ಹಾಕಿ ..

Blog – ಬ್ಲಾಗ್

Blog Post – ಬ್ಲಾಗ್ ಸುದ್ದಿ

Blogroll – ಬ್ಲಾಗ್ ಸುಳಿ

Blogsite – ಬ್ಲಾಗ್ತಣ

Category: - ಬಗೆ

Hits – ನೊಡ್ಬಂದವರ ಸಂಖ್ಯೆ

Permalink – ಬ್ಲಾಗಚ್ಚೆ

Template – ಮಾದರಿ

Feeds – ಬ್ಲಾಗಮೇವು

Subscribe – ನೊಂದಾಯ್ಸು

Sunday, October 04, 2009

ಕರ್ನಾಟಕದಲ್ಲಿ ನೆರೆ -ಮುಂದೇನು ??


ಹಿಂದೆಂದೂ ಕಂಡಿರದ ನೆರೆ ಪ್ರವಾಹ ನಮ್ಮ ರಾಜ್ಯವನ್ನು ಕಾಡುತ್ತಿದೆ, ಇಲ್ಲಿಯವರೆಗೆ ೨೦೦ಕ್ಕೂ ಹೆಚ್ಚು ಪ್ರಾಣ ಹಾನಿ ಆಗಿದೆ, ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ.

ಉತ್ತರ ಕನ್ನಡ,ಧಾರವಾಡದಲ್ಲಿ,ಹಾವೇರಿ ಜಿಲ್ಲೆಯಲ್ಲೂ ನಾಳೆ ಅತಿಯಾದ ಮಳೆ( ೩೨ mm ಕ್ಕಿಂತ ಹೆಚ್ಚು), ನಾಳಿದ್ದು ೧೧+ ಕ್ಕಿಂತ ಹೆಚ್ಚು,ಆಚೆ ನಾಳಿದ್ದು ೯mm ಕ್ಕಿಂತ ಹೆಚ್ಚು ಹೀಗೆ ಸತತವಾಗಿ ೫ ದಿನ ಮಳೆ ಬೀಳುತ್ತಲೆ ಇರುತ್ತದೆ. ಅದ್ದರಿಂದ ಇದರ ತೀವ್ರತೆ ಇನ್ನು ಹೆಚ್ಚಬಹುದು. ಎಲ್ಲೊ ಕ್ಯಾಟರೀನ, ಸುನಾಮಿ ಆದರೆ ಇಲ್ಲಿ ಚಂದಾ ಎತ್ತುವ ನಮ್ಮ ರಾಜ್ಯದ ಸಂಸ್ಥೆಗಳು ಇದನ್ನು ಗಮನಿಸಿಲ್ಲ, ಇನ್ನು ಆಂಗ್ಲ ಮಾಧ್ಯಮಗಳು ಕೂಡ ಇದನ್ನು ದೊಡ್ಡ ಸುದ್ದಿ ಮಾಡದೇ ಇದ್ದಾರೆ.

ಇವತ್ತು ಆಗಬೇಕಾಗಿರುವುದು ಎನು ?



ಇದನ್ನು 3R ಅನ್ನಬಹುದು , ೧)Rescue 2) Relief 3) Rebuild.

Rescue ( ರಕ್ಷಣೆ)
ಮೊದಲು ಇದರಲ್ಲಿ ಸಿಕ್ಕಿ ಹಾಕಿಕೊಂಡವರ ಜೀವ ಉಳಿಸಬೇಕು, ಇದಕ್ಕೆ ಎಲ್ಲಾ ರೀತಿಯ ನೆರವನ್ನು ಪಡೆಯಬೇಕು. ಇದರಲ್ಲಿ ಹೆಚ್ಚ್ಜು ಸಹಾಯ ಆಗೋದು, ಮಿಲಿಟರಿ ಮತ್ತು ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು. ಮುಖ್ಯವಾಗಿ ಜಲಾವೃತ ಆಗಿರುವ ಹಳ್ಳಿಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಬೇಕು. ಇಲ್ಲದಿದ್ದಲ್ಲಿ ಗುಡಿಸಲು ಬಿದ್ದು ಹೆಚ್ಚು ಸಾವು ನೋವು ಆಗುತ್ತದೆ

Relief( ಸಹಾಯ)
ನೆರೆ ಬಂದಾಗ ಅದು ರೋಗಗಳ ಅಗರ ಆಗುತ್ತದೆ, ಮುಖ್ಯವಾಗಿ ಎಲ್ಲೆಲ್ಲೂ ನೀರಿದ್ದರು ಕುಡಿಯಲು ಆಗುವದಿಲ್ಲ. ಅದ್ದರಿಂದ ನೀರು ಮತ್ತು ಅಲ್ಲಿಯ ಜನ ತಿನ್ನಲು ಅನಕೂಲ ಮತ್ತು ಹೆಚ್ಚು ದಿನ ಉಳಿಯುವ ಆಹಾರ ಕೊಡಬೇಕು. ಇವತ್ತು ಅಲ್ಲಿ ಜನರಿಗೆ ಅಕ್ಕಿ,ಗೋದಿ ಕೊಟ್ಟರೆ ಅಲ್ಲಿ ಅಡಿಗೆ ಮಾಡಿಕೊಳ್ಳಲು ಪಾತ್ರೆಗಳಿಲ್ಲ. ಅದ್ದರಿಂದ ತಿಂಡಿ ಪೊಟ್ಟಣಗಳನ್ನು ಕಳಿಸುವಾಗ ಹುಶಾರಾಗಿ ಇರಬೇಕು.

Rebuild( ಮರುನಿರ್ಮಾಣ)
ಮನೆ ಜೀವನ ನೆಲೆಸಮ ಆದ ಹಳ್ಳಿಗಳನ್ನು ಕಾಲಕ್ರಮೇಣ ಮರು ಕಟ್ಟಬೇಕು. ಮುಂದೆ ಪ್ರವಾಹ ಜಾಗದಿಂದ ಸ್ವಲ್ಪ ದೂರ ಇದ್ದರೆ ಅನಕೂಲ. ಶಾಲೆಗಳು, ಶೌಚಾಲಯ ಇವುಗಳಿಗೆ ಹೆಚ್ಚು ಗಮನ ಕೊಡಬೇಕು.



ಆಯ್ಕೆಯಾದವರು ಎನು ಮಾಡಬೇಕು...

೧) ಕಾಂಗ್ರೆಸ್, ಜೆಡಿಎಸ್ ಪಕ್ಷಭೇದ ಮರೆತು ನೆರೆವಿನ ಕೆಲ್ಸದಲ್ಲಿ ಸರ್ಕಾರದ ಜೊತೆ ನಿಲ್ಲಬೇಕು. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಧನವನ್ನು ಹೆಚ್ಚು ತರಬೇಕು. ಹಿಂದೆ ಮ.ರಾ, ಆಂಧ್ರಗೆ ಕೊಟ್ಟ ಹಾಗೆ ..

೨) ಇವತ್ತು ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ತಲುಪುವ ಹಾಗೆ ಮಾಡಬೇಕು. ಇದು ಉತ್ತಮ ಅವಕಾಶ ಎಲ್ಲಾ ನಾಯಕರಿಗೂ ಗ್ರಾಮವಾಸ್ತವ್ಯ ಹೂಡಲು. ಎಲ್ಲರೂ ಅಲ್ಲಿ ತಂಗಿ , ನಿಂತು ಕೆಲ್ಸಗಳನ್ನು ನೋಡಿಕೊಳ್ಳಬೇಕು.

೩) ಇದೇ ಹಬ್ಬ ಅಂತ ಚೆನ್ನಾಗಿ ತಿನ್ನುಭಾಕರ ಕೈಗೆ ಈ ನೆರವಿನ ಕೆಲಸ ಸಿಗದೇ, ಪ್ರತಿ ಜಿಲ್ಲೆ,ತಾಲೂಕಿನಲ್ಲಿ ಸಂಸ್ಥೆಗಳು ಅದರಲ್ಲು ಕನ್ನಡ ಸಂಘಟನೆಗಳು ಹಿಂದೆ ಮಾಡಿದ ಹಾಗೆ ವ್ಯವಸ್ಥೆಯನ್ನು ಸರಿಯಾದವರಿಗೆ ಸಿಗುವ ರೀತಿ ನೋಡಿಕೊಳ್ಳಬೇಕು.


೪) ಪರರಾಜ್ಯದಿಂದ ನೆರವು ಬರಬಹುದು, ಅದಕ್ಕೆ ಮೊದಲೇ ತೆಗೆದುಕೊಳ್ಳುವ ಮತ್ತು ನಮಗೆ ಬೇಕಾದ ನೆರವನ್ನು ಅವರಿಗೆ ತಿಳಿಪಡಿಸಬೇಕು.

೫) ಸರ್ಕಾರ ಸಾರ್ವಜನಿಕರಲ್ಲಿ ವಿನಂತಿ ಮಾಡಿ, ಜನರು ಇದಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ಪ್ರಕಟಣೆ ಮಾಡಬೇಕು.
ಒಂದು ವ್ಯವಸ್ಥೆ ಇಲ್ಲದಿದ್ದರೆ ಬಹಳ ಕಷ್ಟ ಆಗುತ್ತದೆ, ಆದ್ದರಿಂದ ಸರಕಾರದ ಒಂದು ವಾಹಿನಿ ಮಾಡಿ ಅದರ ಮೂಲಕ ನಿಗ್ರಹಣೆ ಮಾಡಬೇಕು.

೬) ಸರ್ಕಾರ ಇ ಕೆಲ್ಸಗಳಿಗೆ ಯಾವ ಸಂಸ್ಥೆಗಳ ಸಹಾಯಬೇಕೆಂದೆ ಬಾಯಿಬಿಟ್ಟು ಕೇಳಿ, ಅವರಿಗೆ ಒಂದೊಂದು ಜವಾಬ್ದಾರಿ ಕೊಡಬೇಕು.

೬) ದುಂದುವೆಚ್ಚದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿ, ಆ ದುಡ್ಡು ಇದಕ್ಕೆ ಹರಿಯಬೇಕು.

೭) ಮಠಗಳು ಜನರಿಗೆ ಆಶ್ರಯ ಕೊಡಬೇಕು ಮತ್ತು ಆಹಾರ,ನೆಲೆ ಜವಾದ್ಬಾರಿ ತೆಗೆದುಕೊಳ್ಲಬೇಕು.

೮) ಸರಕಾರಿ ಅಧಿಕಾರಿಗಳ ರಜೆ ವಜಾ ಮಾಡಿ,ಎಲ್ಲರೂ ಕಾರ್ಯಚರಣೆಗೆ ತಯಾರು ಇರುವ ಹಾಗೆ ಇರಬೇಕು.

೭) ಮುಖ್ಯವಾಗಿ ಮುಂದೆ ಈ ಮಟ್ಟದ ಹಾನಿಯನ್ನು ತಡೆಯುವ ಕ್ರಮಕ್ಕೆ ಮುಂದಾಗಬೇಕು. ಇದು ಯಾವಾಗಲೂ ನೆರೆ ಸಂತ್ರಸ್ಥರ ಪರಿಹಾರ ಆಗದೇ, ನೆರೆ ಸಮಸ್ಯೆಯ ಪರಿಹಾರ ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬರುವ ಮುಂಚೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಧ್ಯಾನ,ಶವಾಸನ ಅಂತ ಸಮಯ ಹಾಳು ಮಾಡದೆ