Sunday, November 06, 2011

ವಲಸಿಗನ ೨ ಗುಣ ..

ಎರಡು ವಿಡಿಯೋ ನೋಡಿ , ವಲಸಿಗರ ಮನಸ್ಥಿತಿ ಎರಡರಲ್ಲಿ ವ್ಯಕ್ತವಾಗಿದೆ.

ಒಂದರಲ್ಲಿ ಮೆಟ್ರೋ ಕಾಯುವ ವಾಚ್ಮಾನ್ ತಾನು ಇಲ್ಲಿಗೆ ಬಂದಿರುವುದು ಸರಿ, ಇಲ್ಲಿನ ಬಾಷೆ ಕಲಿಯಬೇಕಾಗಿಲ್ಲ ಯಾಕೆಂದರೆ ಅದು ಚೆನ್ನಾಗಿಲ್ಲ ಎಂದು ಹೇಳುವ ಕೀಳು ಮನಸ್ಥಿತಿ ಕಾಣುತ್ತದೆ.


ಇನ್ನೊಂದರಲ್ಲಿ



ಇಲ್ಲಿಗೆ ಬಂದು ತನ್ನ ಬಾಳನ್ನು ಕಂಡುಕೊಂಡಿರುವ ವಲಸಿಗ ಹೇಳುವ ಮಾತಿದು.
The outsiders who come to Karnataka should have the sense of belonging to this state. They need to integrate with the state by sincerely making an attempt to learn Kannada.


ಇ ದೇಶ ಕಟ್ಟಿರುವುದೇ ಅನೇಕತೆಯಲ್ಲಿ ಏಕತೆ ಅನ್ನೋ ಮಂತ್ರ ಮೇಲೆ. ಜಗತ್ತಿನಲ್ಲಿ ಎಲ್ಲಿಗೆ ಹೋಗುತ್ತಿವಿ ಅಲ್ಲಿಯವರ ತರ ಬದುಕಬೇಕು ಎಂದು. ಆದರೆ ಇ global phenomena ಗೊತ್ತಿಲ್ಲದ ಬುದ್ದಿಹಿನರು, ಅವಿವೇಕಿಗಳು ಅನೇಕತೆಯನ್ನು ಒಡೆದು ಹಾಕಿ ಇ ದೇಶದ ಬುಡಕ್ಕೆ ಕೊಡಲಿ ಹಾಕುತ್ತ ಇರುವುದನ್ನು ನಾವು ಕಾಣುತ್ತ ಇದ್ದೇವೆ. ಅವರ ಕೆಟ್ಟ ಮನಸ್ಸುಗಳು ಬದಲಾಗಿ ೨ ನೆ ವಿಡಿಯೋದಲ್ಲಿ ತೋರಿಸಿರುವ ಹಾಗೆ ಬದಲಾದರೆ ನಮ್ಮ ದೇಶಕ್ಕೆ ನಿಜಕ್ಕೂ ಒಳಿತು.

Tuesday, November 01, 2011

ನಮ್ಮತನವನ್ನು ಬಿಟ್ಟುಕೊಡುವುದು ದೊಡ್ಡತನವಲ್ಲ ದಡ್ಡತನ



ಮೊನ್ನೆ ಉಡುಪಿ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ತಿಂಡಿ-ಊಟ ಮಾಡುವ ಆಸೆ ಆಯಿತು, ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ಪರಿಚಯವಾದ ವಿದೇಶದ ಮೊರೆನಾ-ಸರ್ಜಿಯೋ ದಂಪತಿಗಳ ಜೊತೆ ಕೂಡ ಊಟ, ಇಲ್ಲಿನ ಸಂಸ್ಕೃತಿ , ಇತಿಹಾಸದ ಬಗ್ಗೆ
ಮಾತುಕತೆಯಾಯಿತು. ಕರ್ನಾಟಕ ಮತ್ತು ಭಾರತದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡ ಆ ದಂಪತಿಗಳಿಗೆ
ನಮ್ಮ ದೇಶ ಯುರೋಪ್ ಮಾದರಿಯಲ್ಲಿ ಇದೆ ಎಂದು ತಿಳಿಸಿದಾಗ ಅವರು ಆಶ್ಚರ್ಯ ಪಟ್ಟಿದ್ದು ಉಂಟು. ದೇವರ ದರ್ಶನ
ಮುಗಿದ ನಂತರ ಒಟ್ಟಿಗೆ ನಾವು ಅಲ್ಲೇ ಹತ್ತಿರ ಇದ್ದ ವುಡಲ್ಯಾಡ್ಸ ಉಪಹಾರ ಗೃಹಕ್ಕೆ ಹೋದೆವು.

ನಾನು ದೋಸೆ ಹುಟ್ಟಿದ್ದು ಇಲ್ಲೇ, ಕರ್ನಾಟಕದ ಎಲ್ಲಾ ಕಡೆ ಉಡುಪಿ ಹೋಟೆಲ್ ಇರುವುದು, ಅದು ಇದು ಅಂತ ಹೇಳಿದ್ದೆ.
ಮ್ಯಾನೆಜರ್ ಬಂದು ಎನು ಬೇಕು ಎಂದಾಗ ಗೋಳಿ ಬಜ್ಜೆ, ಮಂಗಳೂರು ಬನ್ ಮತ್ತು ನೀರು ದೋಸೆ ಎಂದೆ. ಅದಕ್ಕೆ ಅವನು ಇಲ್ಲ ಸರ್ ನಮ್ಮಲ್ಲಿ ಇದು ಯಾವುದು ಸಿಗುವದಿಲ್ಲ, ದಯವಿಟ್ಟು ಮೆನು ನೋಡಿ ಎಂದ. ಅಲ್ಲಿ ನೋಡಿದರೆ ಬರೇ ಉತ್ತರ ಭಾರತದ ಖಾನವಳಿ ಮೆನು ಇದ್ದ ಹಾಗೆ ಇದೆ. ಆ ದಂಪತಿಗಳು ಇಲ್ಲಿ ಎನನ್ನು recommend ಮಾಡುತ್ತೀರಾ ಎಂದು ಕೇಳಿದರೆ ಮತ್ತೆ ಉತ್ತರ ಭಾರತದ ತಿಂಡಿ ತಿನಿಸುಗಳೇ ಕೇಳಿ ಬಂದವು. ನಿಜಕ್ಕೂ ಇದು ಬಹಳ ಆಶ್ಚರ್ಯವಾಯಿತು. ಇದೇ ಕಥೆ ಅದೇ ಊರಿನಲ್ಲಿ ಇರುವ ಡಯಾನದು ಕೂಡ.
ಇವೆರೆಡು ಉತ್ತಮ ಹೋಟೆಲುಗಳು, ಅಲ್ಲಿ ಕುಳಿತುಕೊಳ್ಳಲು ಮತ್ತು ಒಳವಾತವರಣ ಚೆನ್ನಾಗಿದೆ. ಆದರೆ ಉಡುಪಿಯ ಪ್ರಸಿದ್ಧ ಖಾದ್ಯಗಳನ್ನು ಅಲ್ಲಿ ಮಾರುವುದು ಅವರಿಗೆ ಕೀಳರಿಮೆ ಅನಿಸಿದೆ ಯಾಕೋ.

ಆ ಊರಿಗೆ ಬರುವುದು ಹೆಚ್ಚಾಗಿ ಪ್ರವಾಸಿಗರು, ಅವರಿಗೆ ಅವರ ಊರಿನಲ್ಲಿ ಸಿಗದ ನಮ್ಮ ಖಾದ್ಯಗಳನ್ನು ಉಣಬಡಿಸುವುದು ಬಿಟ್ಟು
ನಾನು, ಪಾನು ಎಂದು ಕೊಂಡು ಉತ್ತರ ಭಾರತದ ಖಾದ್ಯಗಳನ್ನೇ ನಮ್ಮ ಖಾದ್ಯಗಳು ಅನ್ನುವ ಹಾಗೆ ಉಣಬಡಿಸಿದರೆ ನಷ್ಟ ಅಲ್ಲಿನ ಜನಕ್ಕೆ. ಇದು ನನಗೆ ಕೀಳರಿಮೆಯ ಪ್ರತೀಕ ಅನಿಸಿತು, ಅಲ್ಲಿನ ಸ್ಪೆಷಲ್ ಖಾದ್ಯಗಳನ್ನು hype ಮಾಡಿ ಗ್ರಾಹಕರಿಗೆ ಕೊಡುವ ಬದಲು ಎಂಜಲನ್ನು ಮಾರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಖ್ಯವಾಗಿ ಅದನ್ನು ತಿನ್ನಬೇಕೆಂಬ ಬಯಕೆಯಲ್ಲಿ ಇದ್ದ ಸರ್ಜಿಯೋ-ಮೊರೆನಾ ದಂಪತಿಗಳಿಗೆ ಆಕಾಶದಷ್ಟು ಆಸೆ ತೋರಿಸಿ ನಿರಾಸೆ ಮೂಡಿಸಿದ್ದು ಪಿಚ್ಚೆನಿಸಿತು.

Monday, October 31, 2011

ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳು

ಒಂದು ವರುಷದ ಕೆಲ್ಸಗಳನ್ನು ಮೆಲುಕು ಹಾಕಿದರೆ ಮತ್ತು ಮುಂದಿನ ವರುಶಕ್ಕೆ ಮಾಡಬೇಕಾದ ಕೆಲ್ಸಗಳನ್ನು ನೆನಸಿಕೊಂಡರೆ ಕೆಳಗಂಡ ವಿಶಯಗಳು ಅನಿಸುತ್ತದೆ.

೧. ಗ್ರಾಹಕ ಸೇವೆಯಲ್ಲಿ ಎಲ್ಲೇ ಹೋದರು ಕನ್ನಡ ಕೇಳಬೇಕು. ಕೊಡದಿದ್ದರೆ ಜಾಗೃತ ಗ್ರಾಹಕರಿಗಗೆ ಒಂದು ಮಿಂಚೆ ಕಳಿಸಿ
ಪ್ರಕರಣ ಮತ್ತು ಯಾರಿಗೆ ಹಕ್ಕೊತ್ತಾಯ ಮಾಡಬೇಕೆಂದು ಕೇಳಬೇಕು.

ಇವತ್ತಿನ ರಾಜ್ಯೋತ್ಸವ ಸಂದೇಶದಲ್ಲಿ ಎಲ್ಲಾ ಕನ್ನಡ ಅನ್ನದ ಭಾಶೆ ಅಗಬೇಕು ಎಂದು ಹೇಳುವವರೇ,,, ಅದರೆ ಯಾರು ಗ್ರಾಹಕ ಸೇವೆಯ ಆಯಾಮ ಮತ್ತು ಅದರಿಂದ ಕನ್ನಡ ಅನ್ನದ ಭಾಷೆ ಆಗುವ ಒಂದು ಪರಿ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸ. ಕನ್ನಡದಲ್ಲಿ ಸೇವೆ ಕೇಳಿದಾಗ, ಕನ್ನಡ ಬರುವರನ್ನು ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೆ , ಉದ್ಯೋಗಕ್ಕೆ ಕನ್ನಡವೂ ಒಂದು ಮಾನದಂಡ ಆಗುತ್ತದೆ. ಬ್ರಿಟಿಷ್ ಎರವೇಸನಲ್ಲಿ ಕನ್ನಡದಲ್ಲಿ ಘೋಷಣೆ ಮಾಡುವ ಗಗನಸಖಿ ಹೇಳಿದ್ದು ನನಗೆ ಕನ್ನಡ ಬರುತ್ತದೆ ಎಂಬುವದಕ್ಕೆ ಈ ಕೆಲಸ ಸಿಕ್ಕಿದೆ ಎಂದು.

೨. ಕನ್ನಡ ವಿಶಯದ ಯಾವುದೇ ಹೊಸ ವಿಷಯಕ್ಕೆ ನಾವು ಮನವನ್ನು ಮುಕ್ತವಾಗಿ ತೆರೆದಿಟ್ಟುಕೊಳ್ಲಬೇಕು. ಹಿಂದಿನ ಕಾಲದ ಮಡಿವಂತಿಕೆ ಮತ್ತು ಹೀಗೆ ಇರಬೇಕೆಂಬ ಒಭಿರಾಯ ಕಾಲದ ನಿಯಮಗಳನ್ನು ಕಾಲಕ್ಕೆ ತಕ್ಕ ಹಾಗೆ ನವೀಕರಣಗೊಳಿಸಬೇಕು.

೩. ಕನ್ನಡಿಗರ ಮನರಂಜನೆ ಕನ್ನಡದಲ್ಲೇ ಆಗಬೇಕು, ಎಲ್ಲಾ ರೀತಿ ಅದು ಮಕ್ಕಳ ಡೋರಾ ಆಗಿರಬಹುದು , ಟಾಪ್ ಶಾಟ್ಸ ಇಲ್ಲಾ ಹೌ ಐ ಮೆಟ್ ಯುವರ್ ಮದರ್ ಸೀರಿಯಲ್ ಇರಬಹುದು, ೨೦೧೨, ಅವತಾರ್ ಚಿತ್ರಗಳು ಇರಬಹುದು. ಇವು ಕನ್ನಡಲ್ಲೇ ಸಿಗಬೇಕು.
ಇದು ಕನ್ನಡ ಗ್ರಾಹಕ ಹಕ್ಕೊತ್ತಾಯ.

೪. ಪರಭಾಷ ಹೇರಿಕೆಯನ್ನು ಹಿಮ್ಮೆಡಬೇಕು. ಅದನ್ನು ಪರಭಾಷ ದ್ವೇಷದಿಂದ ಅಲ್ಲ, ನಮ್ಮ ತನವನ್ನು ಉಳಿಸಿಕೊಳ್ಳುವ ಮನಸ್ಸಿನಿಂದ. ನಮ್ಮ ಭಾಷೆಯನ್ನು ಪ್ರೀತಿಸುತ್ತಿನಿ ಎಂದರೆ ಇತರ ಭಾಷೆಯನ್ನು ದ್ವೇಶಿಸುತ್ತಿನಿ ಎಂದು ಅಲ್ಲ ಅಲ್ವಾ ?.

೫. ಕನ್ನಡ ಎಂದರೆ ಕೇವಲ ಸಾಹಿತ್ಯವಲ್ಲ, ಅದು ಜೀವನಕ್ಕಿಂತ ದೊಡ್ಡದು, ಅನೇಕ ಆಯಮಗಳು ಇರುತ್ತದೆ. ಆದರೆ ಮೊದಲಿಂದ ನಾವು ಕನ್ನಡ ಅಂದರೆ ಸಾಹಿತ್ಯ, ಕನ್ನಡ ಗರಿಮೆ ಎನು ಎಂದರೆ ಇಷ್ಟು ಜ್ಞಾನಪೀಠ, ಇಷ್ತು ಪಂಪ ಪ್ರಶಸ್ತಿ, ಇಷ್ತು ಸರಸ್ವತಿ ಸಮ್ಮಾನ್ ಎಂದು ಒಂದಡೆ ಹೇಳಿಕೊಂಡು , ಕನ್ನಡಿಗರು ಎಂದರೆ ೧೦-೧೫ ಕವಿ ಹೆಸರನ್ನು ಹೇಳಿ ಮುಗಿಸುತ್ತೆವೆ. ಇದನ್ನು ಮೊದಲು ಬಿಡಬೇಕು.

೬. ಹೊಸ ಹೊಸ ಅವಿಶ್ಕಾರದಲ್ಲಿ ಹೊಸ ಹೊಸ ರೀತಿಯಲ್ಲಿ ಅಂತರ್ಜಾಲವನ್ನು ನೊಡುತ್ತ ಇದ್ದೆವೆ ಎಲ್ಲಾಡೆ ಕನ್ನಡ ಭಾಷೆಯಲ್ಲಿ ( ಕನ್ನಡ ಲಿಪಿಯೇ ಆಗಬೇಕಾಗಿಲ್ಲ) ವ್ಯವಹರಿಸುವ ಹಾಗೆ ಆಗಬೇಕು.

೭. ವಿಕ್ಷನರಿ ಇಂತಹ ಕಡೆ ಕನ್ನಡವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು. ಇದಕ್ಕೆ ಬೇಕಾದ ಬಾಟ್ ಮತ್ತು ಅಟೋಮೇಶನ್ ಕಡೆ ಹೆಚ್ಚು ಜನರನ್ನು ಸೆಳೆಯುವ ಹಾಗೆ ಮಾಡವುದು.

೮. ಹೆಚ್ಚು ಹೆಚ್ಚು ಕನ್ನಡ ಪರಿಸರವನ್ನು ಪಸರಿಸುವುದು, ನಮ್ಮ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವ ಮಾಡುವ ಹಾಗೆ, ತಿಂಗಳಲ್ಲಿ
ಒಮ್ಮೆ ಸೇರುವ ಹಾಗೆ ಚಿಕ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೯. ಕನ್ನಡಿಗರ ಓಟಬ್ಯಾಂಕ್ ಆಗಬೇಕು, ನಾವು ಜಾತಿ, ಧರ್ಮದಿಂದ ನೋಡದೇ ಕನ್ನಡದಲ್ಲಿ ರಾಜಕೀಯ ಮಾಡದ ಎಲ್ಲಾ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವ ಹಾಗೆ ಆಗಬೇಕು.

೧೦. ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ನಾವು ಮುಂದಾಗಬೇಕು.

ಇಲ್ಲಿವರೆಗೂ ನಾವು ಹೆಕ್ಕಿರುವುದು ಒಂದು ಮುತ್ತಾದರೆ ಮಿಕ್ಕಿದೆ ಸಾಗರ ಎಂಬುದನ್ನು ಮರೆಯುವುದು ಬೇಡ.

Saturday, June 18, 2011

ಜನತೆ ದುಡ್ಡು ಯಡ್ಡಿ ಜಾತ್ರೆ




ನಿಜಕ್ಕೂ ಇದನ್ನು ಯಾವ ಮಾಧ್ಯಮಗಳು ಪ್ರಶ್ನೆ ಮಾಡುವದಿಲ್ಲ, ಯಾಕೆ ಎಂದರೆ ಸುಖಾಸುಮ್ಮನೆ ಜಾಹಿರಾತು ರೂಪದಲ್ಲಿ ಹಣ ಬರುತ್ತ ಇರುವಾಗ ಬೇಡ ಎನ್ನಲೂ ಪತ್ರಿಕೆಗಳು ದಡ್ಡರೇ. ಇದೇ ದೊಡ್ಡ ಫ್ಲೆಕ್ಸ ಆಗಿ ಬಂದಿದ್ದರೆ ಇಲ್ಲ ಇನ್ನೊಂದು ಮಾದರಿಯಲ್ಲಿ ಬಂದಿದ್ದರೆ ಇದೇ ಪತ್ರಿಕೆಗಳೂ ಜನರ ದುಡ್ಡಿನ ದುಂದುವೆಚ್ಚ ಎಂದು ಬೊಬ್ಬೆ ಹೊಡೆಯುತ್ತ ಇದ್ದವು. ಅಲ್ಲಿಗೆ ನಮ್ಮ ಮಾಧ್ಯಮಗಳ ಇಬ್ಬಂದಿತನ ಮತ್ತೊಮ್ಮೆ ಬಯಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಮತ್ತು ದೇವೆಗೌಡ ಕುಟುಂಬದವರಿಗೂ ಅದ್ಯಾವ ಪರಿಯ ನಂಟೋ, ಸದಾ ಇಬ್ಬರೂ ಎಲ್ಲೆ ಇರಲಿ ಹೇಗೆ ಇರಲಿ ಒಬ್ಬರ ಬಗ್ಗೆ ಇನ್ನೊಬ್ಬರು ಯೋಚಿಸುತ್ತ ಇರುತ್ತಾರೆ. ಅವರು ಎನು ಮಾಡುತ್ತ ಇರಬಹುದು, ಅವರ ಮಾತಿನ ಒಳಾರ್ಥವೇನು, ಎಲ್ಲಿ ಪೂಜೆ ಮಾಡುತ್ತ ಇದ್ದಾರೆ ಇಂತಹ ಮಾಹಿತಿ ಸಂಗ್ರಹಣೆಯಲ್ಲೇ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತ
,ರಕ್ಷಣೆಗೆ ದೇವರಿಗೆ, ದೇವತೆಗಳಿಗೆ, ಮಠಗಳಿಗೆ ಮತ್ತು ಮಠಾಧಿಪತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಜನರ ದುಡ್ಡಿನಲ್ಲಿ ಕೊಡುತ್ತ ಇರುತ್ತಾರೆ. ಅದರೂ ಅವರ ಕಷ್ತಗಳು , ಸಂಕಷ್ತಗಳೂ ಬಗೆಹರಿದಿಲ್ಲ.

ಮತ್ತೊಂದು ಹೊಸ ಸೇರ್ಪಡೆ ಎಂದರೆ ಇವತ್ತಿನ ಪತ್ರಿಕೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೂ ಬಹಿರಂಗ ಪತ್ರ ಬರೆದಿರುವುದು, ಸಾಲದಕ್ಕೆ ಅದನ್ನು ಕರ್ನಾಟಕ ವಾರ್ತೆ ಎಂದು ಜನರ ದುಡ್ಡಿನಲ್ಲಿ ಪ್ರಕಟಣೆ ಮಾಡಿಸಿದ್ದು.

* ಮೊದಲಿಗೆ ಇದು ಕುಮಾರ ಸ್ವಾಮಿಗಳ ಮತ್ತು ಯೆಡ್ಡಿಯ ವೈಯಕ್ತಿಕ ವಿಷಯ, ಇದರಲ್ಲಿ ರಾಜ್ಯದ ಜನತೆಗೆ ಯಾವ ಲಾಭ ಇಲ್ಲ.

* ಇದನ್ನು ಕರ್ನಾಟಕ ವಾರ್ತೆ ಎಂದು , ಜನತೆಯ ಹಣವನ್ನು ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ?

* ಸ್ವಂತ ಡುಡ್ಡಿನಲ್ಲಿ ಹಣ ಕೊಡಲು ಯೆಡ್ಡಿಗೆ ಹಣದ ಬರವೇ, ಇಲ್ಲ ಪಕ್ಷಕ್ಕೆ ಹಣದ ಬರವೇ ?

* ಯೆಡ್ಯುರಪ್ಪ ಮುಖ್ಯಮಂತ್ರಿ ಹುದ್ದೆ ಮತ್ತು ತಾವು ಒಂದೇ ನಾಣ್ಯದ ಎರಡು ಮುಖ ಎಂದುಕೊಂಡ ಹಾಗೆ ಇದೆ. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಒಳ್ಳೆ ಉಧಾಹರಣೆ ಬೇಕೆ ?

*ಆ ಕಡೆ ಕುಮಾರ ಸ್ವಾಮಿಗೆ ಕೂಡ ಸದಾ ಯಡಿಯೂರಪ್ಪ ಅವರದೇ ಚಿಂತೆ, ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಬಡವಾಗುತ್ತ ಇರುವುದು ನಮ್ಮ ಕರ್ನಾಟಕ ಜನತೆ ಅಷ್ಟೆ.

Friday, June 03, 2011

ಸುರೇಶಣ್ಣ ... ಚರ್ಚೆ ಮಾಡಿ ಆದರೆ ಬ್ರಾಂಡ್ ಮಾಡಬೇಡಿ


ಡಬ್ಬಿಂಗ್ ಬಗ್ಗೆ ಅನೇಕ ಚರ್ಚೆ ನಡೆಯುತ್ತ ಇದೆ, ಸಂಪಾದಕೀಯದಲ್ಲಿ ಇದರ ಬಗ್ಗೆ ಬರೆದಾಗ ಶ್ರೀ ಸುರೇಶ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಅನೇಕ ಬಾರಿ ಇ ವಿಷಯದಲ್ಲಿ ನಮಗೂ ಅವರಿಗೂ ಚರ್ಚೆ ಆಗಿದೆ. ಅವರು ಹೇಳಿದ್ದ ಕೆಲವು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಅದೇ ತಾಣದಲ್ಲಿ ಹಾಕಿದ್ದೆ .. ಅದೇ ಇಲ್ಲಿದೆ ನಿಮ್ಮ ಮುಂದೆ....

ಸುರೇಶ್ ಅವರೇLink

ಮೊದಲಿಗೆ ನೀವು ಚರ್ಚೆ ಆಗಬೇಕು, ಸಿಟ್ಟಿಲ್ಲಿದ್ದ, ಸಾವಧಾನದ ಮಾತು ಆಗಬೇಕು ಆಮೇಲೆ ಒಳ್ಳೆಯ ಅಭಿಪ್ರಾಯವನ್ನು ಒಪ್ಪಿಕೊಳ್ಳೊಣ ಎಂದಿರುವ ಮಾತು ದಿಟವಾಗಿದೆ, ಆದರೆ ನಿಮ್ಮ ಬರಹದಲ್ಲಿ ಅದು ಕಾಣುತ್ತ ಇಲ್ಲ ಅನ್ನುವುದು ಕೂಡ ವಾಸ್ತವ.
ನೀವು ಚರ್ಚೆ ಎಲ್ಲ ಆಗುವ ಮುಂಚೆಯೇ ಡಬ್ಬಿಂಗ್ ಅನ್ನುವುದು ಭೂತ, ಪಿಶಾಚಿ, ಸಂಸ್ಕೄತಿ ಅಪೋಸನ ಮಾಡುತ್ತದೆ ಎಂದು ಮತ್ತು ಡಬ್ಬಿಂಗ್ ಪ್ರೊತ್ಸಾಹಿಸುವವರನ್ನು ಕನ್ನಡ ದ್ರೋಹಿಗಳು , ಸಂಸ್ಕೃತಿ ಕೊಲ್ಲುವವರು ಎಂದು ಬ್ರಾಂಡ್ ಮಾಡಿ ಆಮೇಲೆ ನಿಮ್ಮ ವಾದವನ್ನು ಕನ್ನಡ ದ್ರೋಹಿಗಳ ಮಾತು ಕೇಳಬೇಡಿ, ಭೂತ ನಿಮಗೆ ಬೇಕೆ ಎನ್ನುವ ರೀತಿಯಲ್ಲಿ ವಾದ ಇಟ್ಟಿದ್ದೀರಾ. ಆದರೆ ಅವು ಡಬ್ಬಿಂಗ್ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನಾಗಲಿ ಇಲ್ಲ ಹೇಗೆ ನಾವು ನಾಡದ್ರೋಹಿಗಳು ಆದೆವು ಎಂದಾಗಲಿ ತಿಳಿಸಿಕೊಡುವದಿಲ್ಲ . ನಾಳೆ ಈ ವಿಷಯದಲ್ಲಿ ಚರ್ಚೆ ಆದರೂ ನೀವು ಈ ವಿಷಯದಲ್ಲಿ ನೀವೇ ಕೊಟ್ಟಿರುವ ಪೂರ್ವಗ್ರಹಪೀಡಿತ ಹೊರತಾಗಿ ನೋಡುತ್ತೀರಾ ಎಂಬುದು ನನ್ನ ಸಂಶಯ.

ನೀವೆ ಒಂದು ಕಡೆ ಮತ ಚಲಾಯಿಸಿ ಎಂದು ಹೇಳಿ, ಅದು ನಿಮ್ಮ ವಿರುದ್ಧ ಬಂದಾಗ ಅದೊಂದೆ ಮಾನದಂಡವಲ್ಲ ಎನ್ನುವುದು ಎಷ್ತರ ಮಟ್ಟಿಗೆ ಸರಿ. ಇದು ಇಂಟರನೆಟ್ ಎಂಬ ವಿಶಾಲ ಪ್ರಪಂಚ, ಇಲ್ಲಿ ಜಗತ್ತಿನ ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬಹುದು ಮತ್ತು ಒಂದು ವರ್ಗದ ಹಿಡಿತದಲ್ಲಿ ಇರದ ಪ್ರಪಂಚ. ಇದು ೨ ಬಾರಿಗೆ ಡಬ್ಬಿಂಗ್ ವಿಷಯದಲ್ಲಿ ಕನ್ನಡ ಗ್ರಾಹಕನು ಒಕ್ಕೊರಿಲಿನಲ್ಲಿ ತನಗೆ ಡಬ್ಬಿಂಗ್ ಬೇಕು ಎಂದು ಹೇಳಿದ್ದಾನೆ. ಇದನ್ನು ನೀವು ಕನ್ನಡಿಗ ಸಮಾಜದ ಬೇಡಿಕೆ ಎಂದು ಪರಿಗಣಿಸೊಲ್ಲ ಎಂದರೆ ನಿಜಕ್ಕೂ ಅಂತರ್ಜಾಲದಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ಇದು ಅವಮಾನ ಮಾಡಿದ ಹಾಗೆ.

ರಾಷ್ಟ್ರಪ್ರಶಸ್ತಿ ಬಂದ ಪುಟ್ಟಕ್ಕನ ಹೈವೆ ಚಿತ್ರವೂ ಉತ್ತಮ ಸಮಾಜಿಕ ಸಂದೇಶ ಹೊಂದಿದೆ ಎಂದು ಬೇರೆ ಭಾಷೆಗೆ ಡಬ್ ಮಾಡಿ ಎಂದಾಗ ನೀವು ಇಲ್ಲ ನನ್ನ ಚಿತ್ರವನ್ನು ಆ ಭ್ಜಾಷೆಯಲ್ಲಿ ಡಬ್ ಮಾಡಿದರೆ ಇಲ್ಲ ಆ ಜನರು ನೋಡಿದರೆ ಸಂಸ್ಕ್ರುತಿ ವಿಭ್ರಮೆ ಅಗುತ್ತಾರೆ
ನೊಡುವದಾದರೆ ಕನ್ನಡವನ್ನು ಕಲಿತು ನೊಡಲಿ, ಇಲ್ಲ ಬಿಡಿ ಎಂದು ಹೇಳುತ್ತಿರಾ ?

ಕನ್ನಡ ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡುವ ಜನರಿಗೆ ಕನ್ನಡ ಬರಲೇಬೇಕು ಎಂಬ ನಿಯಮವನ್ನು ಮಾಡಿದಾಗ
ಎಷ್ಟು ರಾಷ್ತ್ರಪ್ರಶಸ್ತಿ ಬರಬಹುದು ಎಂಬುದು ನಿಮ್ಮ ಅನಿಸಿಕೆ ?. ರಾಷ್ಟ್ರಪ್ರಶಸ್ತಿ ಅಯ್ಕಾ ಸಮಿತಿಯವರು ಅನೇಕ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ, subtitle ಇಲ್ಲಾ ಡಬ್ಬಿಂಗ್ ಮೂಲಕ ತಮಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲವೇ ?. ಅವರಿಗೆ ಅರ್ಥವಾಗಿ ಮೆಚ್ಚಿದರೆ ಮಾತ್ರ ಪ್ರಶಸ್ತಿ ಪುರಸ್ಕರಿಸುತ್ತಾರೆ .

ಇವತ್ತು ರಾಷ್ತ್ರಪ್ರಶಸ್ತಿಗೆ ಪಡೆಯುತ್ತಿರುವ ಅನೇಕ ಕನ್ನಡ ಚಿತ್ರಗಳಲ್ಲಿ ಸಾಮನ್ಯ ಅಂಶವನ್ನು ಕಾಣಬಹುದು, ಹೆಚ್ಚು ಕಡಿಮೆ ಅದೇ ನಿರ್ಧೇಶಕರು, ಅದೇ ನಿರ್ಮಾಪಕರು , ಅದೇ ನಟ ನಟಿಯರು .. ಡಬ್ಬಿಂಗ್ ಬಂದರೆ ಇದು ರಾತ್ರೋರಾತ್ರಿ ಬದಲಾಗಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ಬರದೇ ಹೋಗುತ್ತದೆಯಾ ?. ಅಷ್ಟೊಂದು ದುರ್ಬಲವಾಗಿದೇಯೆ ನಮ್ಮ ಚಿತ್ರರಂಗ. ಬೇರೆಯವರು ಬೇಡ
ರಾಷ್ಟ್ರಪ್ರಶಸ್ತಿ ವಿಜೇತರಾದ ನೀವು,ಶೇಷಾದ್ರಿ,ಕಾಸವರಳ್ಳಿಯವರು ನಾಳೆ ಡಬ್ಬಿಂಗ್ ಬಂದ ಕೂಡಲೆ ನಿಮ್ಮ ಚಿತ್ರ ನಿರ್ಮಾಣ ನಿಲ್ಲಿಸಿ
ಡಬ್ಬಿಂಗ್ ಚಿತ್ರ ಮಾಡುತ್ತೀರಾ ?


"ಆದರೆ ಅಂತಹ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನೇ ನಮ್ಮ ಜನ ಕಳಕೊಂಡಿದ್ದಾರೆ ಎಂಬುದನ್ನು ತಾವು ಗಮನಿಸಬೇಕು."


ಮೊದಲಿಗೆ ಇತ್ತಿಚಿನ ದಿನಗಳಲ್ಲಿ ರಾಷ್ತ್ರಪ್ರಶಸ್ತಿ ಚಿತ್ರಗಳು ತೆರೆ ಕಾಣುತ್ತ ಇವೆ, ಇಲ್ಲವಾದಲ್ಲಿ ಖಾಸಗಿ ಪ್ರದರ್ಶನ ಇಲ್ಲಾ ಸಂವಾದ ಮಾಡಿ ಜನರಿಗೆ ತೋರಿಸುವ ಪ್ರಯತ್ನ ನಡೆಯುತ್ತ ಇದೆ. ಮುಖ್ಯವಾಗಿ ಜನರಿಗೆ ಸುಲಭ ರೀತಿಯಲ್ಲಿ ನೋಡಲು ಸಿಗುತ್ತಿಲ್ಲ ಎಂಬುದು ಸತ್ಯ. ಅದ್ದರಿಂದ ಜನರ ಮೇಲೆ ಗೂಬೆ ಕೂರಿಸುವುದನ್ನು ನಮ್ಮ ಚಿತ್ರರಂಗ ಬಿಡಬೇಕು. ಚಲನಚಿತ್ರ ಮಂದಿರಕ್ಕೆ ಬಂದ ಪ್ರತಿಯೊಬ್ಬ
ಪ್ರೇಕ್ಷಕನದು ಚಿತ್ರ ನೋಡಲು ಬಂದ ಕಾರಣ ಬೇರೆ ಇರುತ್ತದೆ. ಇಂತಹ ರಾಷ್ತ್ರಪ್ರಶಸ್ತಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ತಿರಸ್ಕರಿಸಿದ ಮಾತ್ರಕ್ಕೆ ಅವನು ಸಂಸ್ಕ್ರುತಿಹೀನ ಆಗುವದಿಲ್ಲ ಎಂಬುದನ್ನು ನಾವು ಮರೆಯಬಾರದು.

.‘ಹೇರಿಕೆ’ಯೊಂದನ್ನು ಅಮಾಯಕ ಪ್ರೇಕ್ಷಕರ ಮೇಲೆ ಅವರಿಗರಿವಿಲ್ಲದೆಯೇ ಇರುವ ಕಾಲಘಟ್ಟದಲ್ಲಿ ‘ಬನವಾಸಿ ಬಳಗ’ದವರೇ ಆಗಲಿ ಮತ್ಯಾರೇ ಆಗಲಿ ತರುವುದಕ್ಕೆ ಮತ ಚಲಾವಣೆ ಎಂಬುದು ಮಾರ್ಗವಲ್ಲ.

ಯಾವುದು ಹೇರಿಕೆ ?

* ಬಹುಭಾಷಾ ವಲ್ಲಬರಲ್ಲದ ಬಹುಸಂಖ್ಯಾತ ಕನ್ನಡಿಗರು ಕನ್ನಡವಲ್ಲದ ಚಿತ್ರಗಳನ್ನು ನೋಡಬಾರದು ಎನ್ನುವುದಾ ?
* ಭಾರತಕ್ಕೆ ಇರದ ಪದ್ಧತಿಯನ್ನು ಕೇವಲ ಕನ್ನಡಿಗರ ಮೇಲೆ ಮಾತ್ರ ತಂದಿರುವುದಾ ?
* ಪ್ರೇಕ್ಶಕನನ್ನು ಅಮಾಯಕ ಎಂದು ಕರೆದು, ನಿನಗೆ ತಿಳಿಯುವದಿಲ್ಲ ನಾವೇ ಬೇರೆ ಭಾಷೆ ಚಿತ್ರಗಳನ್ನು ನೋಡಿ ನಿನಗೆ ಎನು ಬೇಕು ಬೇಡ ಎಂಬುದನ್ನು ನಿಯಂತ್ರಿಸುವ ಕಪಿಮುಷ್ಟಿ ವ್ಯವಸ್ಥೆಯಾ ?.
* ಒಂದು ಕಟ್ಟುಪಾಡು ಹಾಕಿ ಅದರ ಪರಿಧಿಯಲ್ಲಿ ಬಂಧಿಸಿ, ಕಾಲಘಟ್ಟದಲ್ಲಿ ಅದು ಅನ್ವಯಿಸುತ್ತದೆಯಾ ಇಲ್ವಾ ಎಂಬುದಕ್ಕೆ
ಆಸ್ಪದ ಕೊಡದ ಹಿಡಿತವೇ ?

ಪ್ರೇಕ್ಷಕನು ಅಮಾಯಕನಲ್ಲ, ಬುದ್ದಿವಂತ, ಅವನಿಗೆ ಎನು ಬೇಕು ಬೇಡ ಎನ್ನುವುದು ಗೊತ್ತ್ರು ಎಂದು ಹೇಳುವ ದನಿ ಕನ್ನಡ ಗ್ರಾಹಕನ ದನಿಯಾಗಿದೆ. ಇದೆ ಮತ ಚಲಾವಣೆಯಲ್ಲಿ ಸಾಬೀತಾಗಿದೆ.

"ಭಾರತದ ಸಂವಿಧಾನದಲ್ಲಿಯೇ ಪ್ರಾದೇಶಿಕ ಭಾಷೆಗಳ ರಕ್ಷಣೆ ಆಯಾ ರಾಜ್ಯಗಳ ಹೊಣೆ ಎಂಬ ಸಾಲಿದೆ. ಆ ಸಾಲನ್ನು ಹಿಡಿದರೆ ಭಾಷೆಯ ಮೇಲೆ ಆಗುವ ಯಾವ ಆಕ್ರಮಣವನ್ನಾದರೂ ಹೊಡೆದಟ್ಟಬಹುದು. ಮುಂದುವರೆದು ಹೇಳುವುದಾದರೆ, ‘ಡಬ್ಬಿಂಗ್ ತಡೆ’ ಎನ್ನುವುದು ಸಾಮಾಜಿಕ ಕಟ್ಟುಪಾಡು."

ಇದೇ ವಾದವನ್ನು ೭ ವಾರ ಚಲನಚಿತ್ರ ತಡೆಗೆ ತಂದಾಗ ನಮ್ಮ ಸರ್ವೋಚ್ಚ ನ್ಯಾಯಾಲಯ ಸರಸಗಾಟಾಗಿ ತಿರಸ್ಕರಿಸಿತ್ತು. ನಮಗೆ ಅರ್ಥವಾಗುವ ನಮ್ಮ ಪರಿಸರಕ್ಕೆ ಹತ್ತಿರ ಆಗುವ ಸಂವಹನ ಕ್ರಿಯೆಯೇ ನಮ್ಮ ಕನ್ನಡ ಭಾಷೆ. ಭಾರತೀಯ ಪ್ರಜೆಯಾಗಿ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಸಿಗಬೇಕು ಎಂಬುದು ನಮ್ಮ ಸಂವಿಧಾನದ ಹಕ್ಕಾಗಿದೆ. ಸಾಲದಕ್ಕೆ ಡಬ್ಬಿಂಗ್ ಕೇಳುತ್ತ ಇರುವುದು ಕನ್ನಡಿಗರು, ಕನ್ನಡಿಗರಿಗಾಗಿ ಮತ್ತು ಕನ್ನಡಗೋಸ್ಕರ ಎಂಬುದು ಗಮನದಲ್ಲಿ ಇಟ್ಟಾಗ ಅದನ್ನು ಕೊಡುವ ಹೊಣೆ ರಾಜ್ಯ ಸರಕಾರಕ್ಕೆ ಇದೆ.

ಕನ್ನಡ ಸಮಾಜ ಇಂದು ಡಬ್ಬಿಂಗ್ ಬೇಕು, ನಮ್ಮ ಭಾಷೆಯಲ್ಲಿ ನಮಗೆ ಮನರಂಜನೆ ಬೇಕು ಎಂದು ಕೇಳುತ್ತ ಇರುವಾಗ
ಇಲ್ಲ ಕೋಡುವದಿಲ್ಲ ಎನ್ನುವುದು ಸಂವಿಧಾನಿಕ DENY OF FUNDAMENTAL RIGHTS ಅಗೊಲ್ವಾ ?. ಖಂಡಿತ ಚರ್ಚೆ ಆಗಲಿ, ಆದರೆ ಅದು ಆಗುವ ಮುಂಚಯೇ ಅವುಗಳನ್ನು ಬ್ರಾಂಡ್ ಮಾಡುವುದು ಬೇಡ ಅಲ್ಲವೇ ?

೧೯೬೫ ರಲ್ಲಿ ಇದ್ದ ರಾಜತಾಂತ್ರಿಕ ಸಂಬಂಧಗಳು ಇವತ್ತು ಬದಲಾಗಿಲ್ವಾ , ಅವತ್ತು ನಮ್ಮ ಅಜ್ಜ ಹಾಗೆ ಮಾಡಿದ್ರು, ಹೀಗೆ ಹೇಳಿದ್ರೂ
ನಮ್ಮ ಚಾಚ ನೆಹರೂ ಅವತ್ತು ಆ ನಿರ್ಣಯ ತೆಗೆದುಕೊಂಡಿದ್ದರೂ ಅದ್ದರಿಂದ ಇವತ್ತು ಅದನ್ನೇ ಮುಂದುವರೆಸೋಣ ಎನ್ನುವ ಮಾತನ್ನು ನಾವು ಒಪ್ಪುತ್ತೆವೆಯೇ ?

ಹಿಂದೆ ಈ ಕಟ್ಟುಪಾಡು ಆದಾಗ ಎಷ್ಟರ ಮಟ್ಟಿಗೆ ಕನ್ನಡ ಗ್ರಾಹಕನ್ನು ಮತ್ತು ಕನ್ನಡ ಸಮಾಜದ ಮಿಡಿತವನ್ನು ಮತ್ತು ಅಭಿಪ್ರಾಯವನ್ನು ಪರಿಗಣಿಸಿತ್ತು ಎಂಬುದು ಪ್ರಶ್ನಾರ್ಹ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ವರ್ಗದವರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು, ಹಂಚಿಕೊಳ್ಳಲು ಸಾಧ್ಯವಾಗಿದೆ. ಅದ್ದರಿಂದ ಮುಕ್ತವಾಗಿ ಚರ್ಚೆ ಮಾಡೊಣ.

ಕೊನೆಯದಾಗಿ, ಅಣ್ಣವರು ಹೇಳಿದ ಹಾಗೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಲ್ಲವೇ ...

Friday, April 08, 2011

ಜನ್ ಲೋಕಪಾಲ್ ಹೋರಾಟ ..ಅವಲೋಕನ


ಜನಸಾಮನ್ಯರ ಹೋರಾಟಗಳು ಹೊಸದಲ್ಲ, ಅನೇಕ ಬಾರಿ ಅನೇಕ ಸಂಘ ಸಂಘಟನೆಗಳು ಮಾಡಿಕೊಂಡು ಬಂದಿವೆ. ಆದರೆ ಜನರು ಅದನ್ನು ಕೇವಲ ಬೂಟಾಟಿಕೆ, ಮಾಧ್ಯಮಗಳ ಮುಂದೆ ಬರಲು, ಪ್ರಚಾರಕ್ಕೆ ಎಂದು, ಇಲ್ಲ ರಾಜಕೀಯವಾಗಿ ತೆಗೆದುಕೊಂಡು
ನಮಗಲ್ಲ ಎಂದು ಅಂದುಕೊಂಡಿರುವುದೇ ಹೆಚ್ಚಿವೆ. ಇದರಿಂದ ಅನೇಕ ಹೋರಾಟಗಳು ನೇಪಥ್ಯಕ್ಕೆ ಸೇರಿವೆ. ಹೋರಾಟ ಮಾಡುವ ಜನರು ಮುಂದೊಂದು ದಿನ ಜನಸಾಮಾನ್ಯರು ನಮ್ಮೊಂದಿಗೆ ಬರುತ್ತಾರೆ ಎನ್ನುವ ವಿಶ್ವಾಸ, ಸರ್ಕಾರಕ್ಕೆ ಜಾಗೃತಿಯಾಗಬಹುದು ಎನ್ನುವ ಉದ್ದೇಶಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಹಾಗಿದ್ದಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.


ಜನಸಾಮನ್ಯರ ಜನಪ್ರಿಯ ಭಾವನೆ

ಭ್ರಷ್ಟಚಾರ ಎನ್ನುವುದು ಇವತ್ತು ಪ್ರತಿಯೊಬ್ಬರನ್ನು ಕಾಡುತ್ತ ಇದೆ, ಕೆಳವರ್ಗದಿಂದ ಹಿಡಿದು ಹಣವಂತರನ್ನು ಕಾಡುತ್ತ ಇದೆ. ಒಂದಲ್ಲ ಒಂದು ರೀತಿಯಲ್ಲಿ ನಾವುಗಳು ಲಂಚ ಕೊಟ್ಟಿರುತ್ತೆವೆ, ಕೊಡುವಾಗ ಬೈದುಕೊಂಡು, ಶಾಪ ಹಾಕಿಕೊಂಡೇ ಕೊಟ್ಟಿರುತ್ತೆವೆ. ಆ ಸಿಟ್ಟು, ಹತಾಷೆ ಎಲ್ಲೊ ಒಂದು ಕಡೆ ನಮ್ಮ ಸಮಾಜವೇ ಹೀಗೆ, ಸುಮ್ಮನೆ ನಾವು ಬೇಜಾರು ಮಾಡಿಕೊಳ್ಳುವುದು ಗಾಳಿಗೆ ಗುದ್ದಿದ ಹಾಗೆ ಎಂದು ನಾವು ಅಂದುಕೊಳ್ಳುತ್ತೆವೆ. ಆದರೆ ಮುಂದೊಂದು ದಿನ ಇದು ಕೊನೆಯಾಗಬೇಕು, ಭ್ರಷ್ಟಚಾರವಿಲ್ಲದ ದೇಶ ನಮ್ಮದು ಆಗಬೇಕು ಎನ್ನುವ ಕನಸು ಕಾಣುವದನ್ನು ನಾವು ಮರೆಯುವದಿಲ್ಲ.

ಇತ್ತಿಚಿನ ಬೆಳವಣಿಗೆಗಳು.

ಇವತ್ತು ನಮ್ಮ ದೇಶದ ಸ್ಥಿತಿ ಹೇಗಿದೆ ಎಂದರೆ ಹಗರಣ ಎಂದರೆ ಕನಿಷ್ಠ ೫೦೦ ಕೋಟಿಗಿಂತ ಮೇಲೆ ಇರಬೇಕು, ಅದಕ್ಕಿಂತ ಕಮ್ಮಿ ಇದ್ದರೆ ಮಾಧ್ಯಮಗಳಿಗೂ ಒಂದು ರೀತಿ ಅಸಡ್ಡೆ. ಇದು ಒಂದು ರೀತಿಯಲ್ಲಿ ಅಧಿಕಾರ ಇರುವರಿಗೂ ಇಂಬು ಕೊಟ್ಟಿದೆ. ಅವರು ಕೊಟಿ ತಿನ್ನೋವಾಗ ನಾನು ಸಾವಿರ ತಿಂದರೆ ತಪ್ಪೇನು ಎಂಬ ಧೈರ್ಯ ಮೂಡಿ ಕೊನೆಗೆ ಅವನು ರಾಜರೋಷವಾಗಿ ಲಂಚ ತೆಗೆದುಕೊಳ್ಲಲು ಶುರು ಮಾಡುತ್ತಾನೆ. ೨G, ಕಾಮನ್ ವೆಲ್ತ, ಆದರ್ಶ ಬಿಲ್ಡರ್ಸ, ಯಡ್ಡಿ ಮತ್ತು ಕುಟುಂಬದವರ ಭೂಹಗರಣ, ಕೋಟ್ಯಾಂತರ ರೂಫಾಯಿ ತೆರಿಗೆ ವಂಚನೆ ಹೀಗೆ ಹತ್ತು ಹಲವಾರು ನಮ್ಮ ಮುಂದೆ ಇದೆ. ದಿನ ಬೆಳಗಾದರೆ ನಮ್ಮ ಮುಖ್ಯಮಂತ್ರಿಯ ಹೊಸ ಹಗರಣ ಆಚೆ ಬಂದರೆ, ಅಲ್ಲಿ ಕೇಂದ್ರದಲ್ಲಿ ಅಧಿಕಾರ ಪಕ್ಷಗಳ ಇನ್ನೊಂದು ಹಗರಣ ಆಚೆ ಬರುತ್ತಲೇ ಇದೆ.
ಭ್ರಷ್ಟರು CVC ಅಧ್ಯಕ್ಷರಾಗಿದ್ದ ಈ ಕಾಲದಲ್ಲಿ ಅದರಿಂದ ಎನು ಮಹತ್ತರ ಬೆಳವಣಿಗೆ ಎಣಿಸಬಹುದು ? . ಇಂತಹ ಸುದ್ದೀಗಳೇ ನಮ್ಮ ಮಾಧ್ಯಮಗಳಲ್ಲಿ ಕಾಣುತ್ತ ಜನಸಾಮನ್ಯರ ಸಹನೆಯು ಕಟ್ಟೆ ಒಡೆದಿದೆ.

ಜೊತೆಗೆ ಈಜಿಪ್ಟ, ಲಿಬಿಯಾ, ಅಭುದಾಬಿ ಮುಂತಾದ ದೇಶದಲ್ಲಿ ಆಗುತ್ತಿರುವ ಜನಾಂದೊಲನಗಳು ಜನರಲ್ಲಿ ಹೆಚ್ಚಿನ ಸ್ಥೈರ್ಯವನ್ನು ಕೊಟ್ಟಿವೆ ಮತ್ತು ಇದರಿಂದ ಗೆಲವು ಪಡಿಯಬಹುದು ಎಂಬ ಸಂದೇಶವನ್ನು ಸಾರಿದೆ.

ಕಾಂಗ್ರೆಸ್ ಪಕ್ಷದ ನಿರ್ಲಕ್ಷತನ

ಮೊದಲು ದೇಶವೇ ವಿಶ್ವಕಫ್ ಗೆದ್ದ ಗುಂಗಿನಲ್ಲಿ ಇದ್ದಾಗ , ಅಣ್ಣಾ ಹಜಾರೆಯ ಹೋರಾಟವನ್ನು ಕಾಂಗ್ರೆಸ್ ಗಂಭಿರವಾಗಿ ಪರಿಗಣಿಸಲಿಲ್ಲ. ಇದಕ್ಕೆ ಅನೇಕ ಕಾರಣಗಳು ಇದ್ದವು ಹಿಂದೆ ನಡೆಸಿದ್ದ ಅಣ್ಣಾ ಹಜಾರೆ ಹೋರಾಟಗಳು, ಕೇವಲ ಒಂದು ವರ್ಗದ ಜನರ ಬೆಂಬಲ ಇವುಗಳು ಮೊದಲಿಗೆ ಕಾಂಗ್ರೆಸ್ ಪಾಳಯದ ಲಘು ಹೇಳಿಕೆಗಳು ಬರಲು ಶುರುವಾದವು. ಇದರ ಜೊತೆಗೆ
ಜೊತೆಗೆ ಕೆಲ ಮಾಧ್ಯಮಗಳಲ್ಲೂ ಇದು ಅವಸರದ ಕ್ರಮ , ಇದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸಿನ್ನ ವಿಚಾರಧಾರೆಯನ್ನು ಬಿಂಬಿಸಲಾಯಿತು.

ಇ ತರಹದ ವಿಷಯಗಳು ಕೇಂದ್ರ ವಲಯದಲ್ಲಿ ಇದ್ದಾಗ ಅದರ ಲಾಭ ಪಡೆಯಲು ಅನೇಕ ಪಕ್ಷಗಳು ಕಾಯುತ್ತ ಇರುತ್ತದೆ, ಅದರಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ, ಆದರೆ ತನ್ನ ತಟ್ಟೆಯಲ್ಲೇ ಹೆಗ್ಗಣ್ಣ ಬಿದ್ದಿರುವುದನ್ನು ಬಿಟ್ಟು ಇನ್ನೊಂದು ತಟ್ಟೆಯಲ್ಲಿ ನೋಣ ಬಿದ್ದಿರುವದನ್ನು
ತೋರಿಸುವ ಕ್ರಮ ನಿಜಕ್ಕೂ ನಗೆಪಾಟಲಿಗೆ ಗುರಿಯಾಗಿ ಅನೇಕ ಪಕ್ಷಗಳು ಬೆಂಬಲ ಕೋರಿ ಸುಮ್ಮನೆ ಆದವು. ಅಲ್ಲಿಗೆ ಇದರಲ್ಲಿ ರಾಜಕೀಯ ಪಕ್ಷಗಳ ಹೈಜಾಕ್ ಇಲ್ಲ ಕೇಂದ್ರ ರಾಜಿನಾಮೆ ಇಂತಹ ರಾಜಕೀಯ ಪ್ರೇರಿತ ಬೇಡಿಕೆಗಳು ಬರದೇ ಜನ್ ಲೋಕಪಾಲ್ ಮಸೂದೆ ಜಾರಿಯಾಗಬೇಕು ಎನ್ನುವ ಒಂದಂಶದ ಕಾರ್ಯಕ್ರಮಕ್ಕೆ ನಿಂತಿತು.

ಕೆಲ ಆಂಗ್ಲ ಮಾಧ್ಯಮಗಳು ಇದು ದೊಡ್ಡ ಹೋರಾಟ ಆಗುತ್ತದೆ, ಈಜ್ಜಿಪ್ಟ ಮಾದರಿ ಎಂದು ಬಿಂಬಿಸುತ್ತ ಇದಕ್ಕೆ ಪ್ರಚಾರ ಕೊಟ್ಟು ಜನ ಸಾಮನ್ಯರಲ್ಲಿ ಸಂಚಲನ ತಂದವು. ದಿನ ಬೆಳಗಾದರೆ ಇದರದೇ ಚರ್ಚೆ, ಅದೇ ಮುಖಪುಟ ಮತ್ತು ದಿನೇ ದಿನೇ ಜನಸಾಮಾನ್ಯರಲ್ಲಿ
ಇದನ್ನು ಬೆಂಬಲಿಸಿ ಬರೆಯುವ ವಾಲ್, ಮಿಂಚೋಲೆ, ಮಿಂಚೆ ಹರಿದಾಡ ತೊಡಗಿತು. ೨ ದಿನಗಳಲ್ಲಿ ಈ ಜ್ವರ ಹೆಚ್ಚುತ್ತ ಹೋಯಿತು.
ಯಾವಗ ಕೇಂದ್ರ ತನ್ನ ವರಸೆ ಬದಲಾಯಿಸುತ್ತ ಬಂತು ಜನರಲ್ಲೂ ಇದು ನಿಲ್ಲುವ ಹೊರಾಟ ಅಲ್ಲ, ಗೆಲ್ಲುವ ಹೋರಾಟ ಮತ್ತು ಇದರಲ್ಲಿ ಇರುವರು ರಾಜಕೀಯ ಪ್ರೇರಿತರು ಅಲ್ಲ ಎಂದೆಣಿಸಿ ಅವರ ಊರಿನಲ್ಲಿ ನಡೆಯುತ್ತ ಇದ್ದ ಉಪವಾಸಕ್ಕೆ ನಿಂತರೂ.

ಅನೇಕರಿಗೆ ಇದು ಸ್ವಾತಂತ್ರ ಹೋರಾಟ ಅನಿಸಿ, ಅಣ್ಣ ಹಜಾರೆಯಲ್ಲಿ ಬಾಪುವನ್ನು ನೋಡಿ ಅವರ ಬೆಂಬಲಕ್ಕೆ ನಿಂತರು. ಬೆಂಗಳೂರಿನ ಸ್ವಾತಂತ್ರ ಮೈದಾನದಲ್ಲಿ ಕಳೆದ ೩ ದಿನಗಳಲ್ಲಿ ಜನರು ಬರುತ್ತ ಇರುವುದು ಗಣನೀಯವಾಗಿ ಎರುತ್ತಲೇ ಇದೆ, ಇದಕ್ಕೆ ಯಾರು ಯಾರನ್ನು ಬನ್ನಿ ಎಂದು ಕೇಳಿಲ್ಲ, ಹೇಳಿಲ್ಲ. ಎಲ್ಲರ ಬಾಯಲ್ಲೂ ಅದೇ ಜೈಕಾರಗಳು. ವಯಸ್ಸು, ವರ್ಣ,ಜಾತಿ, ಧರ್ಮ, ಭಾಷೆ ಎಲ್ಲ ಮರೆತೂ ಒಂದೆಡೆ ನಿಂತು ತಮ್ಮ ಬೆಂಬಲವನ್ನು ತೋರಿಸುತ್ತ ಇದ್ದಾರೆ.

ಬೀಸುವ ದೊಣ್ಣೆ ತಪ್ಪಿದರೆ ಸಾಕು ..

ಅಲ್ಲಿಗೆ ಕಾಂಗ್ರೆಸ್ ಒಂದು ದಿಕ್ಕಿನಲ್ಲಿ ಕಡಿಮೆ ಅಂದಾಜು ಮಾಡಿದ್ದು ಬೂಮರಾಂಗ್ ಆಯಿತು. ಕಾಂಗ್ರೆಸ್ಸಿನ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಬಹಳ ಟೀಕೆಗೆ ಗುರಿಯಾದವು. ದಿನೇ ದಿನೇ ಇದು ಬೆಳೆಯುತ್ತ ಹೋದ ಈ ಹೋರಾಟವನ್ನು ತಕ್ಷಣ ಚಿವುಟದೇ ಇದ್ದರೆ ಇದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸಿಗೆ ದೊಡ್ಡ ತಲೆನೋವು ಆಗಬಹುದು ಎಂದೆಣಿಸಿ, ಬೀಸಿದ ದೊಣ್ಣೆಯನ್ನು ತಪ್ಪಿಸಿಕೊಳ್ಳುವ ಕ್ರಮಕ್ಕೆ ಮುಂದಾಯಿತು. ಬೇಡಿಕೆಗಳನ್ನು ಒಪ್ಪಿತು, ಅದಕ್ಕೂ ಗೊತ್ತು ಸಂಸದಿನಲ್ಲಿ ಇದನ್ನು ಆಟವಾಡಿಸಬಹುದು ಎಂದು, ಸಾಲದಕ್ಕೆ ಎಲ್ಲಾ ಗಾಜಿನ ಮನೆಯಲ್ಲಿ ಇರುವ ಪಕ್ಷಗಳೇ, ಯಾರು ಕಲ್ಲು ಎಸೆಯಲು ಹೋಗುವದಿಲ್ಲ ಎಂದು.
ಜನರ ಗೆಲುವು ಎಂದು ಸಾರಿ, ಜನಾಂದೋಲನಕ್ಕೆ ಸೇರಿದ್ದ ಜನರನ್ನು ಮೊದಲು ಚದರಿದರೆ ಆ ಜನರಿಗೆ ತಾವು ಗೆದ್ದೆವು ಎಂದು ಬೀಗಿ, ಕೆಲವರು ಎಣ್ಣೆ ಹೋಡೆದು ಸಂಭ್ರಮ ಆಚರಿಸಿಕೊಂಡು ಐಪಿಲ್ ಮುಂತಾದ ದಿನದ ಚಟುವಟಿಕೆಯಲ್ಲಿ ಬಾಗಿಯಾಗುತ್ತಾರೆ ಎಂಬ ದೊಡ್ಡ ಆಟಕ್ಕೆ ಕೈ ಹಾಕಿದೆ.


ಭ್ರಷ್ಟಚಾರ ಎನ್ನುವುದು ದೊಡ್ಡ ಶತ್ರು.

ದೇಶದ ವ್ಯವಸ್ಥೆ ಮತ್ತು ಪ್ರಗತಿ ಒಂದು ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರಿನ ಹಾಗೆ. ಇದನ್ನು ದುಷ್ಟ ಶಕ್ತಿಗಳಿಂದ ಕಾಪಾಡಬೇಕು. ಇದಕ್ಕೆ ಕಲ್ಲು ಹೊಡೆಯುವ ಜನರನ್ನು ಹತ್ತಿಕ್ಕಬೇಕು ಎನ್ನುವುದು ಎಷ್ಟು ಸರಿಯೋ ಹಾಗೆ ಮಡಿಕೆ ತೂತಾಗಿದ್ದರೆ ಅದನ್ನು ಸರಿ ಪಡಿಸದೇ ಕೇವಲ ಮಡಿಕೆಯನ್ನು ಕಾಯುತ್ತ ಕೂತರೆ ನಷ್ಟೆವೇ ಆಗುವುದು. ಇವತ್ತು ನಮ್ಮ ದೇಶದ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಿಲ್ಲ. ಭ್ರಷ್ಟಚಾರ ಅನ್ನುವುದು ಮಡಿಕೆಯ ತೂತಿನ ಹಾಗೆ , ಇದು ಎಲ್ಲಕ್ಕಿಂತ ದೊಡ್ಡ ಶತ್ರು. ಇದನ್ನು ನಾವು ದಮನ ಮಾಡದೇ ಕೇವಲ ಪಾಕಿಸ್ತಾನ ಜಪ ಮಾಡಿಕೊಂಡರೆ ದೇಶ ಸೊರಿ ಹೋಗುವದರಲ್ಲಿ ಸಂದೇಹವಿಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟುವರು ಯಾರು ?

ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ತೋರುವ ಕಳ್ಳ ಕಾಳಜಿ ಹೇಗಿರುತ್ತದೆ ಎಂದರೆ, ಸುಮ್ಮನೆ ಕಾಟಾಚಾರಕ್ಕೆ ಮಾಡಿದ ಹಾಗೆ ಇರುತ್ತದೆ, ಇಲ್ಲ ಒಬ್ಬರನ್ನು ಬಲಿಪಶು ಮಾಡಿ, ೧೦೦ ಜನ ಬದುಕುವ ಹಾಗೆ ಇರುತ್ತದೆ. ೧೦೦ ಲೋಕಾಯುಕ್ತ ದಾಳಿ ಆದವು, ಕೋಟ್ಯಾಂತರ ರೂಪಾಯಿ ಸಿಕ್ಕಿ ಬಿದ್ದವು, ಆ ಅಧಿಕಾರಿಗಳಿಗೆ ಒಮ್ಮೆಯೂ ಶಿಕ್ಷೆ ಆಗಿಲ್ಲ. ಮತ್ತೆ ವಿಚಾರಣೆ ಅದು ಇದು ಎಂದು ಅವರ ಬಳಿ ಕಿತ್ತು ಅಧಿಕಾರದಲ್ಲಿ ಕೂರಿಸುವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ನಂಬಿಕೆ ಇಡುವುದು ಆದರೂ ಹೇಗೆ.


ಭ್ರಷ್ಟ ಅಧಿಕಾರಿಗೆ ಮಾತ್ರ ಶಿಕ್ಷೆಯಾ ??
ನಾನು ನೋಡಿದ ಹಾಗೆ ಎಲ್ಲೆಡೆ ಅಧಿಕಾರಿಗಳು, ರಾಜಕೀಯ ನಾಯಕರು ಮಾತ್ರ ಭ್ರಷ್ಟರು ನಮ್ಮ ಮಂದಿ ಸಾಚ ಎಂದೆ ನೋಡುತ್ತ ಇದ್ದೇವೆ. ಲಂಚ ತೆಗೆದುಕೊಳ್ಳುವ, ದುಡ್ಡು ಹೋಡೆಯುವ ಜನರಿಗೆ ಶಿಕ್ಷೆಯಾಗಬೇಕು ಎನ್ನುವುದು ಎಷ್ಟು ಸರಿಯೋ, ಒಂದು ಭ್ರಷ್ಟ ಅಧಿಕಾರಿಯ ಹಿಂದೆ ಒಬ್ಬ ಜನಸಾಮನ್ಯ ಇದ್ದೆ ಇರುತ್ತಾನೆ, ಅವನೇ ಅಧಿಕಾರಿಯನ್ನು ಭ್ರಷ್ಟನ್ನಾಗಿ ಮಾಡಿರುತ್ತಾನೆ. ಇನ್ನು ಅನೇಕ ಕಡೆ ಈ ಕಾರ್ಪೊರೆಟ್ ಪ್ರಪಂಚ ಎಲ್ಲವನ್ನು ದುಡ್ಡಿನಿಂದ ಅಳೆಯುತ್ತದೆ, ಬೇಗ ಆಗಬೇಕಾದರೆ ಎಷ್ಟು ಹೆಚ್ಚು ಕೊಡಬೇಕು ಎಂಬ ಹೊಸ ಬೇಡಿಕೆಯನ್ನು ಇಡುತ್ತದೆ. ಅವರಿಗೆ ಸಮಯವೇ ದುಡ್ಡು, ಕಾಯುವ ವ್ಯವಧಾನವಿಲ್ಲ. ಇದರಿಂದ ಅನೇಕ ಅಧಿಕಾರಿಗಳು ಭ್ರಷ್ಟರಾಗುತ್ತಾರೆ. ಮುಂದೊಂದು ದಿನ ಸಿಕ್ಕಿ ಬಿದ್ದರೆ ಆ ಅಧಿಕಾರಿಗೆ ಶಿಕ್ಷೆ ಆಗುತ್ತದೆ ವಿನಹ ಯಾರು ಆ ಕಾರ್ಪೊರೆಟ್ ಅವರನ್ನು ಕೇಳುವದಿಲ್ಲ. ಜನ್ ಲೋಕಪಾಲ್ ನಲ್ಲಿ ಲಂಚ್ ಕೋಡುವ ಮತ್ತು ತೆಗೆದುಕೊಳ್ಳುವ ಇಬ್ಬರಿಗೂ ಶಿಕ್ಷೆ ಎಂದರೆ ಮಾತ್ರ ಅದು ಯಶಸ್ವಿಯಾಗಿ ಮಾಡಲು ಆಗುತ್ತದೆ. ಇಲ್ಲವಾದಲ್ಲಿ ದುಡ್ಡು ಕೊಡುವ ಜನರು ಇದ್ದೆ ಇರುತ್ತಾರೆ, ಅವರಿಗೆ ಎಂದು ಶಿಕ್ಷೆಯ ಭಯ ಇರುವದಿಲ್ಲ.

ಈ ಹೋರಾಟ ನಿಲ್ಲಬಾರದು ಮತ್ತು ಇದು ಸಂಘಟನೆಗಳ ಪ್ರಚಾರಕ್ಕೆ ಬಲಿಯಾಗದರಿಲಿ

ನಿನ್ನೆ ಅನೇಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ ಮೈದಾನಕ್ಕೆ ಬಂದಿದ್ದು ಒಳ್ಲೆಯ ಬೆಳವಣಿಗೆ, ಆದರೆ ತಾವು ಬಂದಿದ್ದೇವೆ ಎನ್ನುವುದೇ ದೊಡ್ಡ ಪ್ರಮಾಣದಲ್ಲಿ ತೋರಿಸುವ ಮಟ್ಟಿಗೆ ಬ್ಯಾನರ್, ಭಿತ್ತಿಪತ್ರ ಹಿಡಿದುಕೊಂಡು, ತಮ್ಮದೇ ಗುಂಪು ಮಾಡಿಕೊಂಡು ಹೋಗುತ್ತ ಇದ್ದಿದ್ದು. ದೇಶ ಭಕ್ತರೂ ಎಂದರೆ ನಾವೇ, ಇದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಎಂದೇ
ಮಾಧ್ಯಮಗಳ ಮುಂದೆ ಅದನ್ನು ಎದ್ದು ಕಾಣುವ ಹಾಗೆ ಪ್ರದರ್ಶನ ಮಾಡುತ್ತ ಇದ್ದೀದ್ದು ಸ್ವಲ್ಪ ಅತಿಯಾಯಿತು ಅನಿಸಿತು. ಇದರಲ್ಲಿ ಜನರು ತಮ್ಮ ಸಂಘಟನೆ,ಸಂಘ, ಪಕ್ಷವನ್ನು ಬಿಟ್ಟು ಪಾಲ್ಗೋಳ್ಳಬೇಕು. ಆಗಲೇ ಹೋರಾಟಕ್ಕೆ ಒಂದು ಅರ್ಥ.

ಜನಸಾಮಾನ್ಯರು ಇಲ್ಲಿಗೆ ಬಿಡಬಾರದು, ಇದು ನಮಗೆ ಗೆಲುವು ಮತ್ತು ಒಗ್ಗಟ್ಟಿಗೆ ಸಂದ ಜಯ. ಎಲ್ಲಾ ಜನಸಾಮಾನ್ಯರ ಸಮಸ್ಯೆಗಳಿಗೆ ಇದೇ ರೀತಿ ನಾವು ನಿಂತರೆ ಅಧಿಕಾರದಲ್ಲಿ ಇರುವರು ೨ ಬಾರಿ ಯೋಚನೆ ಮಾಡುತ್ತಾರೆ, ಇಲ್ಲವಾದಲ್ಲಿ ಅವರಿಗೂ ನೀವು ಹೊಡೆದ ಹಾಗೆ ಮಾಡಿ, ನಾವು ಕಿರುಚಿದ ಹಾಗೆ ಮಾಡ್ತಿವಿ ಎನ್ನುವುದು ಆಗುತ್ತದೆ.

ಕೊನೆಯ ಗುಟುಕು
ನಮ್ಮ ರಾಜ್ಯದ ಮುಖ್ಯಮಂತ್ರಿ ಅಣ್ಣಾ ಹಜಾರೆ ಹೋರಾಟಕ್ಕೆಬೆಂಬಲ ಕೊಟ್ಟಿರುವುದು ಮತ್ತು ಆವರು ದಿನ ತಿನ್ನುವ ೪ ಹೊತ್ತಿನ ಊಟದಲ್ಲಿ ಒಂದನ್ನು ಉಪವಾಸ ಮಾಡಿ ಬೆಂಬಲ ಸೂಚಿಸಿರುವುದು ನಿಜಕ್ಕೂ ಹೋರಾಟಕ್ಕೆ ಆನೆ ಬಲ ಬಂದಿದೆ. ಇದು ಬಿಜೆಪಿಯ ಗೆಲುವು ಎಂದು ತಮ್ಮ ೨ ಬೆರಳನ್ನು V ಆಕಾರದಲ್ಲಿ ಅಲ್ಲಾಡಿಸುತ್ತ ಹೇಳಿದರೂ ಆಶ್ಚರ್ಯವಿಲ್ಲ.

Saturday, March 19, 2011

ಹೋಳಿ ಹುಣ್ಣಿಮೆ ..ನಮ್ಮ ಸಂಸ್ಕೃತಿಯಲ್ಲಿ ಇರಲಿಲ್ಲವೇ ?

೧೪ ವರುಷಗಳ ಹಿಂದಿನ ಮಾತು, ಇವತ್ತಿನ ಹಾಗೆ ಹೋಳಿ ಹುಣ್ಣಿಮೆ, ಸೂಪರ್ ಮೂನ್ ಆಗಿರಲಿಲ್ಲ, ಆದರೆ ನಾವುಗಳು ಸೂಪರ್ ಮೂಡಿನಲ್ಲಿ ಇದ್ದೆವು. ಹೋಳಿ ಆಚರಣೆಗೆ ಇಳಿದೆವು, ಅದು ನಡೆದಿದ್ದು ಗೆಳೆಯನ ಹಾಸ್ಟೆಲಿನಲ್ಲಿ . ಹೇಳಿ ಕೇಳಿ ಅದು ಒಂದು ವರ್ಗದ
ಹಾಸ್ಟೆಲ್ , ಅನೇಕ ರೀತಿ-ರಿವಾಜುಗಳು ಇದ್ದವು. ಆದರೆ ಅವತ್ತು ನಾವು ಪ್ರತಿಯೊಬ್ಬರನ್ನು ರೂಮುಗಳಿಂದ ಆಚೆ ಎಳೆದು ಆಡಿದೆವು,
ಕೆಲವರು ಮೊದಲು ಆ ಓ ಎನ್ನುತ್ತ ಇದ್ದರು, ಯಾವಾಗ ನೀರಿಗೆ ಇಳಿದ ಮೇಲೆ ಚಳಿ ಎನು, ಮಳೆ ಎನು ಅನ್ನುವ ಹಾಗೆ ಮುಂದುವರೆಯುತ್ತ ತುಂಬಾ ಜೋಶಿನಲ್ಲಿ ಅವರು ಬಣ್ಣ ಬಳಿಸಿಕೊಂಡ ಹಾಗೆ ಬೇರೆಯವರಿಗೆ ಬಳಿಯುತ್ತ ಇದ್ದರು, ಒಬ್ಬರನ್ನು ಇನ್ನೊಬ್ಬರು ಅಟ್ಟಿಸಿಕೊಂಡು ಹೋಗುವುದು, ತೊಟ್ಟಿಯನ್ನು ವಿವಿಧ ಬಣ್ಣಗಳನ್ನು ಹಾಕಿ ಸಾಕ್ಜಾತ್ ಕೊಚ್ಚೆ ಮಾಡಿದ್ದು, ಅದರಲ್ಲಿ ಹೊಸಬರನ್ನು ಎತ್ತಿ ಅದ್ದುವ ಕಾರ್ಯ ಪಾಂಗಿತವಾಗಿ ಸಾಗಿತ್ತು.

ಆಟದ ರಂಗು ಎರುವುದೇ ಹೊಸ ಹೊಸ ರೀತಿಯಲ್ಲಿ ಬಣ್ನ ಬಳಿಯುವದರಿಂದ, ಮೊಟ್ಟೆ, ಟೊಮ್ಯಾಟೊ ಸಿಲ್ವರ್ ಪೆಂಟ್ ಎಲ್ಲಾ ಆಚೆ ಬಂದು, ಯಾರು ಯಾರು ಎಂದು ಅವರಿಗೆ ಮಾತ್ರ ಗೊತ್ತಿತ್ತು. ಕನ್ನಡಿಯ ಮುಖ ನೋಡಿಕೊಂಡರೆ ಯಾರಪ್ಪ ಇದು ಎಂದು ನಮಗೆ
ಸಂಶಯ ಮೂಡುವ ಹಾಗೆ ನಮ್ಮ ಮುಖ ವಿಕಾರ ಆಗಿತ್ತು.

ನಮ್ಮ ಕೇಕೆ ಆಟಗಳನ್ನು ಯಾರೋ ಆ ಹಾಸ್ತೆಲ್ ನಡೆಸುವ ಒಂದು ಟ್ರಸ್ಟಗೆ ಹೇಳಿದ್ದರು , ತಕ್ಷಣ ನಮಗೆ ಕೂಡಲೆ ನಿಲ್ಲಿಸಿ ಎಲ್ಲಾ ಕಡೆ ತೊಳೆಯಬೇಕು ಎಂದು ಆದೇಶ ಕೊಟ್ಟರು. ಆದರೆ ಅದನ್ನು ಕೇಳುವ ವ್ಯವಧಾನ ನಮಗೂ ಇರಲಿಲ್ಲ. ಸ್ವಲ್ಪ ಹೊತ್ತು ಆಡಿ, ಆಮೇಲೆ ಎಲ್ಲಾ ತೊಳೆಯುತ್ತೆವೆ ಎಂದು ಹುಡುಗರಲ್ಲಿ ಒಬ್ಬನು ಹೇಳಿದ, ಅದಕ್ಕೆ ಎಲ್ಲರೂ ಹೂ..ಎಂದು ಚೀರಿದರು. ಆದರೆ ಅದು ಯಾವ ರೀತಿ
ಟ್ರಸ್ಟ ಜನರಿಗೆ ಹೋಯಿತೋ ನಾ ಕಾಣೆ. ನಮ್ಮ ಮೇಲೆ ಪ್ರತಿಕಾರ ತೆಗೆದುಕೊಳ್ಳಲು, ಎಲ್ಲಾ ನಳ( ನಲ್ಲಿ) ನೀರು ಬರದ ಹಾಗೆ ಮಾಡಿ ಬಿಟ್ಟರು.

ನಮ್ಮ ಸಂಸ್ಕೃತಿ ಅಲ್ಲದ ಹುಚ್ಚಾಟಗಳನ್ನು ಆಡುತ್ತಾರ, ನೀರಿಲ್ಲದೆ ನನ್ನ ಮಕ್ಕಳು ಒದ್ದಾಡಬೇಕು, ಬುದ್ದಿ ಬರೋ ಹಾಗೆ ಮಾಡುತ್ತೆನೆ ಎಂದು ಪೋನಿನಲ್ಲಿ ಆ ಕಡೆಯಿಂದ ಕೇಳಿದ್ದು, ಅದನ್ನು ಆ ಕಡೆಯಿಂದ ಕೇಳಿಸಿಕೊಂಡ ಹುಡುಗನು ಬಂದು ನಮಗೆ ಹೇಳಿದ್ದು, ಒಂದು ನಿಮಿಷ ಎಲ್ಲರಲ್ಲಿ ಸಂತೋಷಕ್ಕೆ ತಣ್ಣಿರು ಎರಚಿದ ಹಾಗೆ ಆಯಿತು. ಆಮೇಲೆ ಗೆಳೆಯರ ಮನೆಗಳಲ್ಲಿ ಸ್ನಾನ ಮಾಡಿದ್ದು ಆಯಿತು.
ಆದರೆ ಮರುದಿನ ಆ ಹಾಸ್ಟೆಲಿನ ನೋಟಿಸ್ ಬೋರ್ಡಿನಲ್ಲಿ ಇದರ ಬಗ್ಗೆ ಉಲ್ಲೇಖ ಆಗಿದ್ದ ಸಾಲುಗಳು ಇವತ್ತು ನನಗೆ ಜ್ಞಾಪಕ ಇವೆ ..

"ಹೋಲಿ ಆಚರಣೆ ನಮ್ಮದಲ್ಲ, ಇದು ಬೇರೆಯವರ ಸಂಸ್ಖೃತಿ. ಬೇರೆಯವರ ಆಚರಣೆಗಳನ್ನು ಮಾಡುತ್ತ, ಚೀರುತ್ತ ಹಾರಾಡುವುದು
ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುತ್ತ ಇದೆ ..ಬ್ಲಾ ಬ್ಲಾ ..

ಈ ಮಾತುಗಳನ್ನು ಅನೇಕ ಬಾರಿ ನಮ್ಮ ಅಜ್ಜ-ಅಜ್ಜಿಯದಿಂರು ಹೇಳಿದ್ದರು, ಹೊಸ ಪದ್ದತಿಗಳನ್ನು ತರುತ್ತ ಇದ್ದೀರಾ, ಅದೇನು ಮಧ್ಯಾಹ್ನ ತನಕ ಆಡೋದು, ಹೀಗೆ ಹತ್ತು ಹಲವಾರು ಮಾದರಿಯಲ್ಲಿ ಕೇಳಿದ್ದೆವು, ಒಟ್ಟಾಗಿ ಇದರ ತಾತ್ಪರ್ಯ ಇದೆ.
ಇದು ಕನ್ನಡಿಗರ ಹಬ್ಬ ಅಲ್ಲ, ಇದು ಇತ್ತಿಚಿಗೆ ಬಂದ ಹಬ್ಬ, ಅದರಲ್ಲೂ ನಾರ್ತಿಗಳ ಪ್ರಭಾವದಿಂದ ಬಂದಿದೆ. ಆದರೆ ಚಿಕ್ಕ ವಯಸ್ಸಿನಿಂದ ನಾನು ಉತ್ತರ ಕರ್ನಾಟಕದಲ್ಲಿ ಹಾಗೆ ಆಚರಿಸಿಕೊಳ್ಳುತ್ತ ಇದ್ದೆವಲ್ಲಾ ಎಂದರೆ, ಆ ಜಾಗವು ಮರಾಠಿ ಮತ್ತು ಉತ್ತರ ಭಾರತೀಯರ ಪ್ರಭಾವದಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತ ಇದ್ದರು. ಕಾಲಕ್ರಮೇಣ ಇದು
ನಾರ್ತಿಗಳ ಹಬ್ಬ, ನಾವು ಹಬ್ಬ ಆಚರಿಸುವುದು ನಾರ್ತಿಗಳ ಸಂಸ್ಕ್ರುತಿಯನ್ನು ಅಪ್ಪಿಕೊಂಡ ಹಾಗೆ, ಅವರ ದಾಸ್ಯಕ್ಕೆ ಹೋದ ಹಾಗೆ ಅನ್ನುವ ಹೊಸ ವಾದ ಕೇಳಿಬರತೊಡಗಿತು. ಅದಕ್ಕೆ ಪುಷ್ಟಿ ಕೂಡುವ ಹಾಗೆ ಕಚೇರಿಗಳಲ್ಲಿ ನಾರ್ತಿಗಳು ನಮ್ಮ ಹಬ್ಬ ಎಂದು ಬಿಂಬಿಸುತ್ತ ಇದ್ದಾಗ ಒಂದು ಚೂರು ಬಣ್ಣ ಬಳಿಸಿಕೊಂಡರೆ ಹಿಂಸೆ ಆಗುತ್ತ ಇತ್ತು. ಒಂದು ರೀತಿಯಲ್ಲಿ ೧೫ ವರುಷಗಳ ಹಿಂದೆ ಹೇಳಿದ್ದ ಮಾತುಗಳನ್ನು ನಾನು ಗೊತ್ತೊ ಗೊತ್ತಿಲ್ಲದೇ ಒಪ್ಪಿಕೊಂಡು ಬಿಟ್ಟಿದ್ದೆ.

ಆವತ್ತು ಒಂದು ದಿನ ರಾಜಕುಮಾರ್ ಅವರ ಕಾಮಣ್ನನ ಮಕ್ಕಳು ಹಾಡು ನೋಡುತ್ತ ಇದ್ದಾಗ , ಇದು ನಮ್ಮ ಪೀಳಿಗೆಯ ಅನುಕರಣೆ ಇಂದ ಬಂದಿದ್ದಲ್ಲ, ಹಿಂದೆಯೂ ಇತ್ತು ಅನಿಸಿತು. ಹಾಗಿದ್ದರೆ ಇದು ನಮ್ಮ ಹಬ್ಬ ಅಲ್ಲವೇ, ನಾವು ಅನುಕರಣೀಯ ದಾಸ್ಯದಲ್ಲಿ ಇದ್ದೇವೆ
ಎಂದು ಅನಿಸುತ್ತ ಇತ್ತು.

ಗಮನಿಸಿ ನೋಡಿದರೆ ಜಗತ್ತಿನ ನಾನಾ ಭಾಗಗಳಲ್ಲಿ ಬಣ್ಣ, ನೀರಿನ ಎರಚುವಿಕೆ ಬೇರೆ ಬೇರೆ ಹೆಸರಿನಲ್ಲಿ ಇದೆ. ಅದನ್ನು ಕೇವಲ ಒಬ್ಬರ ಸಂಸ್ಕೃತಿ ಎಂದು ಬ್ರಾಂಡ್ ಮಾಡುವುದು ನಿಜಕ್ಕೂ ತಪ್ಪು. ಭಾರತದಲ್ಲಿ ಹೋಲಿ ಆಚರಣೆ ನೋಡಿದರೆ ಉತ್ತರದಲ್ಲಿ ಹೆಚ್ಚು, ಬಾಂಗ್ ಬಳಕೆ ಇಂದ ಅದರ ಕಿಕ್ ಬೇರೆ ಇರಬಹುದು , ಆದರೆ ಅದು ದಕ್ಷಿಣದಲ್ಲಿ ಇರಲೇ ಇಲ್ಲ, ಸ್ವಾತಂತ್ರ ಬಂದ ಮೇಲೆ ಚಿತ್ರಗಳ ಪ್ರಭಾವದಿಂದ ನಾವು ಕಲಿತೆವು ಎಂಬ ವಾದವನ್ನು ಯಾಕೋ ಮನಸ್ಸು ಯಾವತ್ತು ಒಪ್ಪುತ್ತ ಇರಲಿಲ್ಲ.


ಚರಿತ್ರಯ ಪುಟಗಳನ್ನು ಅರಿಸುತ್ತ.



ಒಮ್ಮೆ ಹಂಪೆ ಬೇಟಿ ಕೊಟ್ಟಾಗ ಅಲ್ಲಿಯ ಜನ ಹೋಲಿ ಹಬ್ಬವನ್ನು ಅರಿಶಿಣ ನೀರಿನಲ್ಲಿ ಆಡುತ್ತ ಇದ್ದರು ಎಂದು ASI ಸಿಬ್ಬಂದಿ ಹೇಳಿದರು. ನಾನು ಅದಕ್ಕೆ ದಾಖಲೆ ಇದೆಯಾ ಎಂದು ಕೇಳಿದಾಗ, ಹಜಾರ ರಾಮನ ದೇವಾಲಯದಲ್ಲಿ ಕೆತ್ತನೆಗೆಳು ಇವೆ, ನೋಡಿಕೊಂಡು ಬನ್ನಿ ಎಂದರು. ಆ ದೇವಸ್ಥಾನಕ್ಕೆ ಬೇಟಿಕೊಟ್ಟಾಗ ಕಂಡಿದ್ದು ಒಂದು ೨ ಸಾಲುಗಳು ಬಣ್ಣದ ಎರಚುವಿಕೆಯನ್ನು ಸಾರುವ ಚಿತ್ರಗಳು. ಒಂದು ಸಾಲಿನಲ್ಲಿ ಪಿಚಕಾರಿ ಮಾದರಿಯಲ್ಲಿ, ಇನ್ನೊಂದರಲ್ಲಿ ಒಂದು ಬಕೆಟ್ ಇಂದ ಬಣ್ಣ ತೆಗೆದುಕೊಳ್ಳುತ್ತ ಇರುವುದು. ಒಬ್ಬರಿಗೆ ಒಬ್ಬರು ಹಚ್ಚುತ್ತ ಇರುವುದು ..ಹೀಗೆ ಅಂದಿನ ದಿನಗಳ ಆಚರಣೆ ನಮಗೆ ಕಾಣುತ್ತದೆ.


ಅಲ್ಲಿಗೆ ಈ ಹಬ್ಬ ಕನ್ನಡ ರಾಜ್ಯದ ವಿಜಯನಗರ ಸಮಯದಲ್ಲೂ ಇತ್ತು ಎನ್ನಬಹುದು. ಕಾಲಕ್ಕೆ ತಕ್ಕಂತೆ ಆಚರಣೆ ಬೇರೆಯಾಗಿದೆ , ಆದರೆ ಹಬ್ಬದಲ್ಲಿ ಬರುವ ಮಜ ಮತ್ತು ಆನಂದ ವಿಜಯನಗರ ಸಮಯದಲ್ಲೂ ಒಂದೆ, ಇವತ್ತಿಗೂ ಒಂದೆ. ಇದಕ್ಕೆ ಸಂಸ್ಕೃತಿ-ಗಡಿ ಬಂಧನದಲ್ಲಿ ಹಾಕಿ ನಮ್ಮ ಮಕ್ಕಳಿಗೆ ಆಚರಿಸ ಬೇಡಿ ಎಂದು ಹೇಳಿದಾಗ ಅದರಿಂದ ಆಗುವ ನಷ್ಟ ತುಂಬಾ. ಮಕ್ಕಳಿಗೆ ಸಂತೋಷ ಕೊಡುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಇಲ್ಲ, ಬೇರೆಯವರ ಸಂಸ್ಕ್ರುತಿ ಚೆನ್ನಾಗಿದೆ ಎಂದೆನಿಸಿ, ಕೀಳರಿಮೆ ಬಂದರೆ ಅದಕ್ಕೆ ನಾವೇ ಹೊಣೆಯಾಗುತ್ತೆವೆ.


ಹೋಲಿ ಬಹಳ ಹಿಂದಿನ ಸಂಪ್ರದಾಯ ಎಂದು ಎಲ್ಲರೂ ಒಪ್ಪುವ ವಾದ, ಅದಕ್ಕೆ ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಇನ್ನು ಚಾಲ್ತಿಯಲ್ಲಿ ಇದೆ, ಅದೇ ಮೈಸೂರಿನ ಕಡೆ ಮರೆಯಾಗಿದೆ. ಮೈಸೂರಿನಲ್ಲಿ ಮುಖ್ಯವಾಗಿ ಸ್ವಲ್ಪ ತಮಿಳುನಾಡಿನ ವೈದಿಕ ಸಂಸ್ಕೃತಿ ಸೇರಿರುವುದು ಇದಕ್ಕೆ ಕಾರಣವಿರಬಹುದು ಎಂದೆನಿಸುತ್ತದೆ.

ಇಂದಿನ ಪೀಳಿಗೆಗೆ ...
ಹೋಲಿ ಹಬ್ಬ ಯಾವ ನಾರ್ತಿಗಳ ಪೇಟೆಂಟ್ ಹಬ್ಬ ಅಲ್ಲ, ನಿಮ್ಮ ಅಜ್ಜ ಅಜ್ಜಿ ಹೇಳುವ ಸಂಸ್ಕೃತಿ ಕಥೆಯನ್ನು ಕೇಳದೆ ಅವರಿಗೆ ತಿಳಿ ಹೇಳಿ ಮತ್ತು ಹಬ್ಬ ಆಚರಿಸಿ. ಜಲಕ್ರೀಡೆ, ಬಣ್ನ ಎರಚುವ ಹಬ್ಬ ನಮ್ಮ ಸಂಸ್ಕೃತಿ ಎಂದು ನಂಬಿ ಖುಷಿಯಿಂದ ಆಟವಾಡಿ. ನನ್ನ ಗೆಳೆಯ ಮಹೇಶ್ ಹೇಳುತ್ತ ಇದ್ದ, ಬಾಗಲಕೋಟೆಯಲ್ಲಿ ಇದನ್ನು ೧ ವಾರ ಆಚರಣೆ ಮಾಡುತ್ತಾರೆ. ನೀವು ಒಂದು ದಿನ ಅದರೂ ಮಾಡಬೇಕು ಅಲ್ವಾ ?

Wednesday, March 16, 2011

ಊಟಕ್ಕೆ ಇಲ್ಲದ ಉಪ್ಪಿನಕಾಯಿ ಸಂಸ್ಕೃತವಾಗದಿರಲಿ.

ತಿಂಗಳಿಗೆ ಒಮ್ಮೆ ನನಗೆ ಭಾರತೀಯನಾಗಲು ಹೆಮ್ಮೆ ಪಡು, ಇದನ್ನು ೧೦೦ ಜನರಿಗೆ ಕಳಿಸಿ ನಿನ್ನ ದೇಶಪ್ರೇಮವನ್ನು ಮೆರೆ ಎಂದು ಒಂದು ಮಿಂಚೆ ಬರುತ್ತಲೆ ಇರುತ್ತದೆ. ಅನೇಕ ವರುಷಗಳ ಹಿಂದೆ ಅದನ್ನು ಕಳಿಸಿದವರಿಗೆ ಬೈದು ಉತ್ತರ ಬರೆಯುತ್ತ ಇದ್ದೆ. ಆದರೆ ಇದು ಸಮಯ ಹರಣ ಎಂದೆನಿಸಿ, ದೇಶಪ್ರೇಮವನ್ನು ಮರೆಯುತ್ತ ಮಿಂಚೆಯನ್ನು ಸ್ಪಾಮ್ ಮಾಡುತ್ತ ಬಂದಿರುವೆ. ಆ ಮಿಂಚೆಯಲ್ಲಿ ಒಂದು ಸಾಲು ಇವತ್ತು ನನಗೆ ಮತ್ತೆ ಜ್ಞಾಪಕ ಬಂತು. ಅದೆನೆಂದರೆ ಮೊದಲ ನ್ಯೂಕ್ಲಿಯರ್ ಕಂಡು ಹಿಡಿದಿದ್ದು ಭಾರತೀಯರು, ಅದನ್ನು ಬಳಸಿದವರಲ್ಲಿ ರಾಮನು ಒಬ್ಬನು ..ಇತ್ಯಾದಿ. ಪೊಕ್ರಾನ್ ಆಗಿ ಕಲಾಂ ಗೆ ಹೆಸರು ಬರುತ್ತ ಇದ್ದ ಸಮಯದಲ್ಲಿ ಇ ಮಿಂಚೆ ಹೆಚ್ಚು ಹರಿದಾಡುತ್ತ ಇತ್ತು. ಅದರ ಸಾರಂಶವೆಂದರೆ ನಾವು ಆಗಲೇ ಕಂಡು ಹಿಡಿದಿದ್ದೆವು, ನಮ್ಮ ದೇವಾನು ದೇವತೆಗಳಿಗೆ ಮತ್ತು ಮಾನವರಿಗೆ ಅದು ಆಟದ ವಸ್ತು ಆಗಿತ್ತು.

ಜ್ಞಾನ ನಮ್ಮಲ್ಲಿ ಎಲ್ಲೊ ಇರಬೇಕು ಅಲ್ಲವೇ, ಅದು ಎಲ್ಲಿದೆ ಎಂದು ತಿಳಿಯುವದಕ್ಕೆ ನಮಗೆ ಸಂಸ್ಕೃತ ಜ್ಞಾನ ಬೇಕು. ಅದಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬೇಕು, ಪ್ರತಿ ರಾಜ್ಯದಲ್ಲಿ ೧೦೮ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾಲಯ ಬೇಕು.
ನಾವುಗಳು ಗಣತಿಯಲ್ಲಿ ಒಂದು ಪದ ಅರ್ಥ ತಿಳಿಯದಿದ್ದರೂ ಸಂಸ್ಕುತ ನನಗೆ ಗೊತ್ತಿರುವ ಭಾಷೆ ಎಂದು ಬರೆಸಬೇಕು.



ಇಷ್ಟೆಲ್ಲಾ ಮಾಡಿ ಸಂಸ್ಕೃತ ಪಂಡಿತರಿಂದ ನೀವು ನ್ಯೂಕ್ಲಿಯರ್ ಬಗ್ಗೆ ಕೇಳಿದರೆ ತಪ್ಪು ಆಗುತ್ತದೆ, ಅಷ್ಟೆಲ್ಲಾ ಓದಿದ ಜನರಿಂದ ಕೊನೆಗೆ ಆಚೆ ಬರುವುದು ಕೇವಲ ಕಾಳಿದಾಸ ಮತ್ತು ಬಾಣ ಅಷ್ಟೇ.


ತಮಾಷೆ ಸಾಕು.. ಇವತ್ತು ದೊಡ್ಡ ಸುನಾಮಿ ಬಡೆದು ಜಪಾನ್ ತತ್ತರ ಆಗಿದೆ, ಅಣು ವಿಕಿರಣ ಎಲ್ಲಡೆ ಹಬ್ಬುತ್ತಿದೆ. ಅಯ್ಯೋ ನಮಗೇನು ಚಿಂತೆ ಇಲ್ಲ ಟಿವಿ೯ ನಲ್ಲಿ ನೋಡಿದೆ ಎಂದು ಸುಮ್ಮನೆ ಆಗದೇ ನಾವು ಇವತ್ತು ಮನುಕುಲದ ಬಗ್ಗೆ ಚಿಂತೆ ಮಾಡಬೇಕಾಗಿದೆ. ಅಣುವಿಕಿರಣವನ್ನು ತಡೆಯುವ ಬಗ್ಗೆ ನಮ್ಮ ಸಂಸ್ಕೃತ ಗ್ರಂಧಗಳಲ್ಲಿ ಇಲ್ಲದೆಯೆ ಇರುತ್ತದೆಯೇ ?, ಅದನ್ನು ಹೆಕ್ಕಿ ಆಚೆ ಹಾಕಿ ಅನೇಕ ಮನುಕುಲವನ್ನು ರಕ್ಷಿಸಿದರೆ, ಜಗತ್ತಿಗೆ ಸಂಸ್ಕ್ರುತ ಬಗ್ಗೆ ಗೌರವ ಬರುತ್ತದೆ ಮತ್ತು ಅನುದಾನ ಸಿಗಲು ಸರ್ಕಸ್ ಮಾಡಬೇಕಾಗಿಲ್ಲ ಇಲ್ಲ ಮನೆ ಮುಂದೆ ಸ್ಟಿಕರ್ ಹಚ್ಚಿಕೊಳ್ಳಬೇಕಾಗಿಲ್ಲ.

ಮೊದಲು ವಾಸ್ತು, ಜ್ಯೋತಿಷ್ಯ, ಬಾಣ-ಕಾಳಿದಾಸ, ಇವರು ಬರೆದ ಪುಸ್ತಕಗಳನ್ನು ಬಂದು ಮಾಡಿ, ವಿಕಿರಣ ಬಗ್ಗೆ ಉಲ್ಲೇಖವಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕೆಂದು ಸರ್ಕಾರ ಅದೇಶಿಸಬೇಕು. ಮನುಕುಲದ ಅಳಿವು ಉಳಿವು ಇಂದು ಸಂಸ್ಕೃತದ ಮೇಲೆ ನಿಂತಿದೆ, ನಾವಿದ್ದರೆ ಅಲ್ಲವೇ ನಾಳೆ ಸಂಸ್ಕೃತ ಇರುವುದು ?.

Friday, March 11, 2011

ನಾರಾಯಣ ಮೂರ್ತಿಯವರು ಕಂಡಿದ್ದೇನು, ಕಾಣದಿದ್ದು ಎನು ?

ಮೊದಲಿಗೆ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯಿತು, ಬೆಳಗಾವಿ ಮಾಡಿದ್ದೇ ಒಂದು ದೊಡ್ಡ ಸಾಧನೆ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ ನಾರಾಯಣ ಮೂರ್ತಿ ಅವರ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದವು. ಮುಖ್ಯವಾಗಿ ಗೌರಿ ಲಂಕೇಶ್ ಮತ್ತು ಇತರರ ವರ್ಗ ಅದನ್ನು ಸರಿಯಿಲ್ಲ ಅನ್ನು ಭರದಲ್ಲಿ ಮೂರ್ತಿಗಳು ಸರಿಯಿಲ್ಲ ಎಂದು ವೈಯಕ್ತಿಕ ಟೀಕೆ ಮಾಡಿದರು. ಕೊನೆಗೆ ಇದು ಅಂದುಕೊಂಡ ಹಾಗೆ ಅವರ ಜಾತಿಗೂ ಹೋಗಿದ್ದು ವಿಷಾದಕರ. ಅಲ್ಲಿಗೆ ಆ ವರ್ಗ ಕಾಮಲೆ ಕಣ್ಣಿನಿಂದ ಇಷ್ಟೆ ನನಗೆ ನೋಡಲು ಸಾಧ್ಯ ಎಂದು ತೋರಿಸಿಕೊಟ್ಟಿತು.


ಇನ್ನು ಆ ಕಡೆ ಮೂರ್ತಿಗಳು ಮೊದಲ ಬಾರಿಗೆ ಎಲ್ಲಾ ಕನ್ನಡ ದಿನಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಗಳಿಗೂ ( ವಿಶೇಷ) ಸಂದರ್ಶನ ಕೊಟ್ಟರು. ಅದರಲ್ಲಿ ಆ ಟೀಕೆಗಳಿಗೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವದಕ್ಕೆ ಸೀಮಿತ ಇಟ್ಟಿದ್ದರು. ದೊಡ್ಡವರು ಅನಿಸಿಕೊಂಡವರು ಕೂಡ ಈ ಸಮರ್ಥನೆಗೆ ಇಳಿದಾಗ ಇಲ್ಲ ತಾವೂ ಕನ್ನಡಿಗರು ಎಂದು ತೋರಿಸಲು ಹೋದಾಗ ಆಗುವ ಆವಾಂತರಕ್ಕೆ ಇವರೇನು ಹೊಸತಲ್ಲ ಬಿಡಿ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಒಂದು ತಿಂಗಳು ಆಗಿಲ್ಲ , ಮುಖ್ಯವಾಗಿ ವಿಶ್ವಕನ್ನಡ ಸಮ್ಮೇಳನ ಯಾಕೆ ಮಾಡುತ್ತ ಇದ್ದೀರಿ, ಇದು ಹೇಗೆ ನಾಡು ಕಟ್ಟಲು ಸಹಾಯ ಮಾಡುತ್ತದೆ ಎಂದು ಮೊದಲು ನನಗೆ ಸರಿಯಾಗಿ ತಿಳಿಸಿಕೊಡಿ ಆಮೇಲೆ ನಾನು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತೆನೆ ಎಂದು ಹೇಳಿದ್ದರೆ ಚೆನ್ನ ಇರುತ್ತಿತ್ತು. ಅದನ್ನು ಅವರು ತಿಳಿದುಕೊಂಡ ಹಾಗೆ ಇಲ್ಲಿ ತನಕ
ನನಗೆ ಅನಿಸಿಲ್ಲ. ಇದು ವಿಶ್ವದ ಎಲ್ಲಾ ಕನ್ನಡಿಗರ get together ಅನ್ನುವುದೇ ಆಗಿದ್ದಲ್ಲಿ ಮೂರು ದಿನ ಅದೇ ಕಮ್ಮಟಗಳು ಬೇಕಿತ್ತ ಎಂದು ಎಲ್ಲರಿಗೂ ಸಹಜವಾಗಿ ಮೂಡುವ ಪ್ರಶ್ನೆ ಐ.ಟಿ ದಿಗ್ಗಜರಿಗೆ ಬರದಿರುವುದು ಆಶ್ಚರ್ಯವೇ ಸರಿ.


ಮೊದಲಿಗೆ ಮೂರ್ತಿಗಳು ನಾನು ಕನ್ನಡಿಗ ಎಂದು ಪದೇ ಪದೇ ಸಾರಲು ಹೋಗಿದ್ದು. ಆ ಪ್ರಶ್ನೆ ಅವರಲ್ಲೇ ಮೂಡಿದ್ದು ಆದರೂ ಯಾಕೆ ?. ಅಷ್ಟಕ್ಕು ಕನ್ನಡಿಗ ಎಂದರೆ ಅದರ ಪರಿಧಿ ಮತ್ತು ಆಳ ಅವರಿಗೆ ಗೊತ್ತಿದೆ ಅನಿಸುತ್ತೆದೆಯಾ ?. ಕರ್ನಾಟಕದಲ್ಲಿ ಹುಟ್ಟಿದರೆಲ್ಲರೂ ಕನ್ನಡಿಗರೇ, ಇದು ನಮ್ಮ ಸಂವಿಧಾನದಿಂದ ಎತ್ತಿಕೊಂಡು ಹೇಳಿದರೆ ಅದು ಸ್ವಾಭಾವಿಕವಾಗಿ ಬಂದ ಹಕ್ಕು ಅದನ್ನು ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಅವರು ನಾನು ನನ್ನ ಹೆಂಡತಿ ಜೊತೆ ಕನ್ನಡಲ್ಲಿ ಮಾತನಾಡುತ್ತೆನೆ, ನಮ್ಮ ಮನೆಯ ಆಳುಗಳ ಜೊತೆ ಕನ್ನಡದಲ್ಲಿ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡ ಪುಸ್ತಕ ಪ್ರಕಟಿಸುತ್ತಾರೆ ಹೀಗೆ ಹೇಳುತ್ತ ನಾನು ಕನ್ನಡಿಗ ಎಂದು ಹೇಳಲು ಹೊರಟಿದ್ದು ನಿಜಕ್ಕೂ ಬಾಲಿಶ ಅನಿಸಿದ್ದು ನಿಜ.

ಮುಂದೆ ಅವರು ತಮ್ಮ ಹಿಂದಿನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಕೆಲವು ಉತ್ತಮ ವಿಚಾರಗಳನ್ನು ಹೇಳುತ್ತಾರೆ.
೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ. ೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು. ೩. ಬೆಂಗಳೂರಿನಲ್ಲಿ ಕನ್ನಡಿಗರೂ ಯಾವಾಗಲೂ ಬಹುಸಂಖ್ಯಾತರೇ

ಇವು ಬಹಳ ಉತ್ತಮವಾದ ಮತ್ತು ನನ್ನ ಮನಸ್ಸಿನ ಭಾವನೆಗಳು. ಆದರೆ ಸಂದರ್ಶನ ಮುಂದೆ ಓದುತ್ತ ಹೋದ ಹಾಗೆ ಅವರೆ ಅದನ್ನು ಒಡೆಯುತ್ತಾರೆ. ಹೇಗೆ ಎಂದು ನೋಡೊಣ.

೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ.

ಪ್ರಭಲತೆ ಒಂದು ಭಾಷೆಗೆ ಬರುವುದು ಅದಕ್ಕೆ ಇರುವ ಹೊಟ್ಟೆಗೆ ಹಿಟ್ಟು ಕೊಡುವ ಶಕ್ತಿ ಇಂದ. ಕೇವಲ ೧೦೮ ಸಾಹಿತ್ಯ ಪ್ರಕಾರ, ೭ ಜ್ಞಾನಪೀಠಗಳಿಂದ ಅದು ಬರುವದಿಲ್ಲ. ಭಾಷೆಗೆ ಉದ್ಯೋಗ ಕೊಡುವ ಶಕ್ತಿ ಇದ್ದರೆ ಮಾತ್ರ ಸಮಾಜದಲ್ಲಿ ಒಂದು ಬೆಲೆ ಮತ್ತು ನೆಲೆ ಇರುತ್ತದೆ. ಇಲ್ಲದಿದ್ದರೇ ಕೇವಲ ಶ್ರೀಮಂತರ ಮನೆಯ ಶಾಡಿಲ್ಯಗಳ ಹಾಗೆ ಕಾಣುತ್ತದೆ ಅಷ್ತೆ.
ಮೂರ್ತಿಗಳು ಉದ್ಯೋಗ ಸೃಷ್ಟಿ ಮಾಡುದವರಿಂದ ಮಾತ್ರ ಪ್ರಭಲತೆ ಸಾಧ್ಯ ಎಂದು ಹೇಳಿರುವ ಮಾತು ಸರಿ ಇದೆ, ಆದರೆ ಅದರಲ್ಲಿ
ಭಾಷ ಆಯಾಮ ಇಲ್ಲದಿದ್ದರೆ ಅವರೇ ಹೇಳಿರುವ ಹಾಗೆ ಕ-ಕ-ಕ ಯಾವುದು ಪ್ರಭಲ ಆಗುವದಿಲ್ಲ. ಇನ್ನು ಅವರ ಜಗತ್ತೇ ಆಗಿರುವ ಇನ್ಫೊಸಿಸ್ ಆ ಕೆಲಸ ಮಾಡಿದ್ದರೆ ಅವರನ್ನು ಯಾರು ಪ್ರಶ್ನೆ ಮಾಡುತ್ತ ಇರಲಿಲ್ಲ ಮತ್ತು ಅವರು ತಮ್ಮ ಸಮರ್ಥನೆ ಕೋಡುವ ಕೆಲಸಕ್ಕೂ ಕೈ ಹಾಕಬೇಕಾಗಿರಲಿಲ್ಲ. ಅವರೇ ಅನೇಕ ಕಡೆ ಹೇಳಿರುವ ಹಾಗೆ ಮಾತಿಗಿಂತ ಕೃತಿಗಳು ಮಾತಾಡಲಿ ಎಂದು, ಅದೇ ಆಗಿದ್ದರೆ ಮಾತಿಗೆ ಮುಂದೆ ನಮ್ಮ ಇನ್ಫೊಸಿಸ್ ಇದು ಮಾಡಿದೆ, ಅದು ಮಾಡಿದೆ ಎಂದು ಸ್ವಪ್ರಚಾರ ಮಾಡುವ ಗೋಜಿಗೆ ಅವರೇ ಇಳಿಯುತ್ತ ಇರಲಿಲ್ಲ. ಅವರಿಗೂ ಗೊತ್ತು ಕ-ಕ-ಕ ಪ್ರಭಲ ಆಗದೇ ಇರುವದಕ್ಕೆ ನಾವು ೧೦೮ ಸಮ್ಮೇಳನಗಳು, ೧೦೮ ಹೋರಾಟಗಳನ್ನು ಮಾಡುತ್ತ ಇರುತ್ತೆವೆ ಎಂದು. ಆ ಕೆಲ್ಸ ಇನ್ಫೊಸಿಸ್ ಇಂದ ಅವರೇ ಹೇಳಿದ ಹಾಗೆ ಆಗಿದ್ದರೆ ಇಂದು ಇಸ್ರೇಲ್ ಮಾದರಿಯಲ್ಲಿ ಇರುತ್ತಿದ್ದೆವೂ ಎಂದು. ಇನ್ನು ಅವರಿಗೆ ಇನ್ಫೊಸಿಸ್ ಕಟ್ಟಿರುವದಕ್ಕೆ ಹೆಮ್ಮೆ ಇರಬೇಕೆ ವಿನಹ ಕ-ಕ-ಕ ಪ್ರಭಲತೆ
ಇನ್ಫೊಸಿಸ್ ಮಾಡಿದೆ ಅನ್ನು ತಪ್ಪು ಕಲ್ಪನೆ ಬಗ್ಗೆ ಹೆಮ್ಮೆ ಬೇಡ.

೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು.

ನಾವು ಹೇಳುತ್ತ ಇರುವುದು ಕೇವಲ ಇಂಜಿನೇರಿಂಗ್ ಮಾಡಿ ಇನ್ಫೋಸಿಸ್ ಸೇರುವರ ಬಗ್ಗೆ ಅಲ್ಲ. ಕೇವಲ ವಿಜ್ಞಾನ ಮತ್ತು ಗಣಿತ ಅಲ್ಲದೇ ಜಗತ್ತಿನ ಆಗುಹೋಗುಗಳು ಮತ್ತು ಹೊಟ್ಟೆಯ ಹಿಟ್ಟಿನ ವಿಷಯಗಳು ಎಲ್ಲಾ ಕನ್ನಡದಲ್ಲಿ ಸಿಗುವ ಹಾಗೆ ಆಗಬೇಕು. ಆಗ ಮಾತ್ರ ಅದು ಪ್ರಭಲಗೊಳ್ಳಲು ಸಾಧ್ಯ. ಆದರೆ ಅವರೇ ಹುಟ್ಟುಹಾಕಿದ ಗುಳ್ಳೆಯನ್ನು ಅವರು ಹೀಗೆ ಒಡೆಯುತ್ತಾರೆ

"ಬೈರಪ್ಪ, ಅನಂತಮೂರ್ತಿ ಕೃತಿಗಳನ್ನು ಓದಿದಾಗ ನನಗೆ ಸಂತಸ ಆಗುತ್ತದೆ, ಅದೇ ವಿಜ್ಞಾನ ಮತ್ತು ಗಣಿತದ ವಿಷಯಕ್ಕೆ ಇಂಗ್ಲೀಶ್ ಸೂಕ್ತ ಮತ್ತು ಆಪ್ತ. ಯಾವ ವಿಷಯವನ್ನು ಯಾವ ಭಾಷೆಯಲ್ಲಿ ವ್ಯವಹರಿಸಿದರೆ ಸೂಕ್ತವೋ ಅದೇ ಮುಖ್ಯ."

ಇದನ್ನು ನೊಡಿದರೆ ಇವರ ಮನಸ್ಸಿನಲ್ಲಿ ಕನ್ನಡ ಯಾವಗಲೂ ಕೇವಲ ಕಥೆ ಕಾದಂಬರಿಗಳಿಗೆ ಮಾತ್ರ ಸರಿ ಮತ್ತು ಸೂಕ್ತ. ಹೊಟ್ಟೆ
ಹಿಟ್ಟಿನ ಎಲ್ಲಾ ವಿಷಯಗಳಿಗೆ ಇಂಗ್ಲೀಶ್ ಆಪ್ತ ಎಂದು ಹೇಳುವ ಪರಿ ನಿಜಕ್ಕೂ ಬೇಸರ ತರಿಸುತ್ತದೆ. ಬಹುಪಾಲು ಜನರು ಅಂದುಕೊಂಡ ಹಾಗೆ ಕನ್ನಡ ಎಂದರೆ ಕಥೆ,ಕವಿತೆಗಳಿಗೆ ಮಾತ್ರ ಸೀಮಿತ. ಇವರ‍ೆ ಹೇಳುವ ಹಾಗೆ ಕಥೆ-ಕಾದಂಬರಿಗಳಿಂದ ಇಲ್ಲಾ
ಅದನ್ನು ಓದಿ ಆಗುವ ಸಂತಸದಿಂದ ನಮಗೆ ಪ್ರಭಲತೆ ಬರುತ್ತೆದೆಯಾ. ಒಂದು ಕಡೆ ಅದು ಬರಬೇಕು, ಇದು ಬರಬೇಕು ನಮ್ಮ ಭಾಷೆಯಲ್ಲಿ ಹೇಳಿ ಇನ್ನೊಂದು ಕಡೆ ಕನ್ನಡ ಅದಕ್ಕೆಲ್ಲಾ ಸೂಕ್ತ ಅಲ್ಲ, ಅದಕ್ಕೆಲ್ಲಾ ಇಂಗ್ಲೀಶ್ ಸರಿ ಮತ್ತು ಆಪ್ತ ಎಂದು ಹೇಳುವುದು
ಅವರ ಎಡಬಿಂಡಗಿತನ ಎತ್ತಿ ತೋರಿಸುತ್ತದೆ. ಮುಂದೆ ಅವರ ಈ ನಿಲುವೇ ಕನ್ನಡ ಮಾಧ್ಯಮ ತೆಗೆದು ಇಂಗ್ಲೀಷ್ ಮಾಧ್ವಮ ಬೇಕು ಎನ್ನುವದಕ್ಕೆ ಹೊಗುತ್ತದೆ.

ಈಗಲೂ ಕಾಲ ಮಿಂಚಿಲ್ಲ, ಯಾರು ಅವರಿಂದ ಹೊಸತಾಗಿ ಶೌಚಾಲಯವನ್ನೊ ಇಲ್ಲ ಕನ್ನಡ ಸಾಫ್ಟವೇರನ್ನು ಬಯಸುತ್ತ ಇಲ್ಲ.
ಅವರು ಅನೇಕ ಕನ್ನಡ ಮನಸ್ಸುಗಳಲ್ಲಿ ಇಂದಿಗೂ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರ ಕನಸು
ಮತ್ತು ಅನೇಕರ ಕನ್ನಡಿಗರ ಕನಸು ಒಂದೆ. ಆ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮಾಡಿ, ಅದನ್ನು ಸರಕಾರಕ್ಕೆ
ತಿಳಿಸಿ ಇಲ್ಲ ಅವರೇ ಹೇಳುವ ಅವರ ಹೆಮ್ಮೆಯ ಇನ್ಫೊಸಿಸ್ ಟ್ರಸ್ಟನಿಂದ ಅಲ್ಲೇ ಇರುವ ಅನೇಕ ಕನ್ನಡ ಮನಸ್ಸುಗಳನ್ನು ಇದಕ್ಕೆ ತೊಡಗಿಸಬಹುದು ಮತ್ತು ೧೦ ವರುಷದಲ್ಲಿ ಹೊಟ್ಟೆಗೆ ಹಿಟ್ಟು ಕೊಡುವ ಅತ್ಯುತ್ತಮ ಪುಸ್ತಕಗಳನ್ನು ಕನ್ನಡದಲ್ಲ್ಲಿ ತರಬಹುದು.

ಅವರಲ್ಲಿ ಇರುವ ಹಣದ ಬಳಕೆಯಿಂದ ಅನೇಕ ಕನ್ನಡ ಪ್ರಭಲತೆ ತರುವ ಕೆಲ್ಸಗಳಿಗೆ ಸಹಾಯ ಮಾಡಬಹುದು. ಎನೂ ಇಲ್ಲ ಅಂದರೂ ಒಂದು ಪ್ಲಾಟಫಾರ್ಮ್ ಹಾಕಿಕೊಟ್ಟು ಅಲ್ಲಿ ಕನ್ನಡ ಮನಸ್ಸುಗಳನ್ನು ಸೇರಿಸಿದರೆ, ಇವತ್ತು ಬ್ಲಾಗಿನಲ್ಲಿ ಕವಿತೆ-ಕಥೆಗಳನ್ನು ಬರೆದುಕೊಂಡು ಅದನ್ನೇ ಕನ್ನಡ ಸೇವೆ ಎಂದು ನಂಬಿರುವ ಕನ್ನಡ ಮನಸ್ಸುಗಳು ನಾಳಿನ ದಿನಗಳಿಗೆ ತಮ್ಮ ಸೇವೆ ಕೊಡುತ್ತಾರೆ. ಆದರೆ ದಯವಿಟ್ಟು ಇದನ್ನು ಸಮಾಜ ಸೇವೆ ಎಂದು ಟ್ಯಾಗ್ ಮಾಡದೇ ನಾಳಿನ ಭವಿಷ್ಯತ್ತಿಗೆ ನಮ್ಮ ಕಾಣಿಕೆ ಎಂದು ಮನಗಂಡು ಮಾಡಿದರೆ ಅನಕೂಲ.



ಕೊಸರು;-
1.
ನಾನು ಉತ್ತರ ಕರ್ನಾಟಕ ಅಳಿಯ, ನನ್ನ ಹೆಂಡತಿ ಜೊತೆ ಕನ್ನಡ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡದಲ್ಲಿ ಬರೆಯುತ್ತಾರೆ, ಕನ್ನಡ ಧಾರವಾಹಿಯಲ್ಲಿ ನಟಿಸಿದ್ದಾರೆ ..etc ಅದಕ್ಕೆ ನಾನು ಕನ್ನಡಿಗ ಮತ್ತು ಉದ್ಘಾಟನೆಗೆ ಅರ್ಹ.
ಇದೆಲ್ಲಾ ಒಮ್ಮೆ ಓದಿದಾಗ ನಮ್ಮ ಅಜ್ಜಿಗೆ ಹೇಳಿದ್ದು ಎನು ಗೊತ್ತೆ.. ಅಲ್ಲ ಆ ಅಯ್ಯಮ್ಮನೇ ಉದ್ಘಾಟನೆ ಮಾಡಿದ್ದರೆ ಚೆನ್ನಾ ಇರ್ತಿತ್ತು ಅಲ್ವಾ, ಆಕಿ ಅಲ್ಲಿನ ನೆಲದಲ್ಲಿ ಹುಟ್ಟಿದವಳೂ ಬೇರೆ.
ಇದು ನಿಜಕ್ಕೂ ನಿಜ ಅನಿಸಿತು, ವಿಶ್ವ ಮಹಿಳಾದಿನದ ೧೦೦ ನೇ ವರ್ಶಕ್ಕೆ ಅವರನ್ನು ಆಯ್ಕೆ ಮಾಡಿದ್ದರೆ ನಿಜಕ್ಕೂ ಅರ್ಥಪೂರ್ಣ ಆಗಿರುತ್ತ ಇತ್ತು. ಅಷ್ಟಕ್ಕೂ ಕನ್ನಡಿಗ ಕನಸುಗಳಿಗೆ ಚಾಲನೆ ಕೊಡಲು, ಸಂವೇದನೆ ಇರುವ ಆ ತಾಯಿಯೇ ಸೂಕ್ತ ವ್ಯಕ್ತಿ ಎಂದು ನಮ್ಮ
ಅಜ್ಜಿಗೆ ಅನಿಸಿದ್ದೇ ನನಗೂ ಅನಿಸಿತು.

Saturday, January 22, 2011

ಆ ಸುಂದರ ದೊಡ್ಡ ಕನಸೇ ತಾಯಿ ಭುವನೇಶ್ವರಿ








ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??


ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.


ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.