Saturday, January 22, 2011

ಆ ಸುಂದರ ದೊಡ್ಡ ಕನಸೇ ತಾಯಿ ಭುವನೇಶ್ವರಿ








ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??


ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.


ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.