Thursday, May 04, 2006

ಚಿನ್ನದ ಆಸೆಯೋ-ಅಕ್ಷಯ ತದಿಗೆಯೋ

ಕಳೆದ ೨ ವರ್ಷಗಳಲ್ಲಿ ನಮ್ಮ ಕನ್ನಡಿಗರಲ್ಲಿ ಹೊಸ ಹುಚ್ಚು ಶುರುವಾಗಿದೆ, ಅಕ್ಷಯ ತದಿಗೆಯ ದಿನ ಚಿನ್ನ ಕೊಂಡರೆ ಅದು ದ್ವಿಗುಣ ಆಗುವುದು ಅಂತ. ಚಿನ್ನದ ಮೊಟ್ಟೆ ಬಗ್ಗೆ ಕಥೆಗಳಲ್ಲಿ ಕೇಳಿದ್ದಿವೆ ಆದರೆ ಚಿನ್ನ ಕೂಡ ಮೊಟ್ಟೆ ಇಡುತ್ತದೆಯೇ ಅಂತ ನಮಗೆ ಹೊಸ ವಿಷಯ. ಇದರ ಹಿಂದಿನ ರಹಸ್ಯವನ್ನು ಭೇದಿಸಲು ಹೊರಟ ನಾವು ನಿಂತಿದ್ದು ಒಂದು ಆಭರಣಗಳ ಅಂಗಡಿ ಮುಂದೆ.

ಧನುರ್ಮಾಸ ಕಳೆದು ಮದುವೆಗಳು ಶುರು ಆದ ಹಾಗೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಹೋಯಿತು,ಅದು ಮಾರ್ಚ-ಎಪ್ರಿಲ್ ತಿಂಗಳಲ್ಲಿ ಅದು ಎಂದು ಕಂಡು ಕಾಣದ ಬೆಲೆಗೆ ಹೋಯಿತು. ಇದಕ್ಕೆ ಮುಖ್ಯ ಕಾರಣ. ಚಿನ್ನ ಆಭರಣಕರು ಹೆಚ್ಚು ಹೆಚ್ಚು ಚಿನ್ನವನ್ನು ಕೊಂಡ ಪರಿಣಾಮ. ನಿಮಗೆ ಗೊತ್ತೊ ಇಲ್ಲವೋ ಮಾರ್ಕೆಟ್ ಬೆಲೆಯಲ್ಲಿ ಯಾವ ಅಂಗಡಿಯವನು ಚಿನ್ನ ತೆಗೆದುಕೊಂಡಿರುವದಿಲ್ಲ, ಬೆಲೆ ತುಂಬಾ ಕಮ್ಮಿ ಇದ್ದಾಗ ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿರುತ್ತಾರೆ. ಅಂದರೆ ಮಾರ್ಕೆಟನಲ್ಲಿ ಚಿನ್ನಕ್ಕೆ ೯೦೦/ಗ್ರಾಂ ಗೆ ಇದ್ದರೆ ಅವರಿಗೆ ಒಂದು ಗ್ರಾಮ್ ಮೇಲೆ ೮೦೦ ಲಾಭ ಇರುತ್ತದೆ.

ಇನ್ನೂ ಈ ಅಕ್ಷಯ-ತದಿಗೆ ವಿಷಯಕ್ಕೆ ಬರೋಣ, ಇದು ಆಭರಣಕಾರರು ಕಂಡು ಕೊಂಡ ಹೊಸ ಉಪಾಯ. ಹಿಂದಿನಿಂದ ನಮ್ಮ ದೇಶದಲ್ಲಿ ಧರ್ಮಕ್ಕೆ ಅದನ್ನು ಗುರುತಿಸಿದರೆ ಅದಕ್ಕೆ ಸಿಕ್ಕುವ ಬೆಲೆಯೇ ಬೇರೆ ಮತ್ತು ಅದನ್ನು ಪ್ರಶ್ನಿಸುವ ಸಮಾಜ ನಮ್ಮಲ್ಲಿ ಹೆಚ್ಚು ಇಲ್ಲಾ. ಅದೇ ಕಾರಣಕ್ಕೆ ಚಿನ್ನದ ಆಭರಣಕಾರರು ಈ ಹೊಸದಿನವನ್ನು ಕಂಡು ಹಿಡಿದಿದ್ದು. ೨ ವರ್ಷಗಳಿಂದ ಸುಮ್ಮನೆ hype ಮಾಡಿ ನಮ್ಮ ಹೆಂಗಸರನ್ನು ನಂಬಿಸಿ, ಜನ ಮರಳೊ ಜಾತ್ರೆ ಮರಳೊ ಅನ್ನುವ ಹಾಗೆ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು.
ನಮ್ಮ ಜನರಿಗೆ ಅಮವಾಸ್ಯೆ ದಿನ ಕೊಂಡ ಚಿನ್ನದ ಬೆಲೆಗೂ ಮತ್ತು ಅಕ್ಷಯ ತದಿಗೆ ಕೊಂಡ ಚಿನ್ನಕ್ಕೆ ಬೆಲೆ ಬೇರೆ ಇರುವದಿಲ್ಲ ಅನ್ನುವ ಸಾಮನ್ಯಜ್ಞಾನ ಇಲ್ಲಾ.

ನೋಡಿ , ಎಪ್ರಿಲ್ ಕೊನೆಯ ವಾರದವರೆಗೂ ಚಿನ್ನದ ಬೆಲೆಯನ್ನು ಎರಿಸಿ, ಒಂದೆರೆಡು ದಿನಗಳ ಮುಂಚೆ ಬೆಲೆಯನ್ನು ಸ್ವಲ್ಪ ಕಮ್ಮಿ ಮಾಡಿ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು. ನಮ್ಮ ಜನ ಚಿನ್ನ ಒಳ್ಳೆ ಬಿಟ್ಟಿ ಕೊಡುತ್ತ ಇದ್ದಾರೆ ಅನ್ನುವ ಹಾಗೆ ಮುಗ್ಗಿಬಿದ್ದರು.
ಕನ್ನಡಿಗರಿಗೆ ಸ್ವಂತಿಕೆ ಅನ್ನುವುದು ಇಲ್ಲಾ ಅಂತ ಮತ್ತೊಮ್ಮೆ ಈ ಪ್ರಕರಣ ಸಾಬೀತು ಪಡಿಸಿತು.

ಕೊಸರು:- ಆ ದಿನ ಚಿನ್ನಕೊಂಡು ದ್ವಿಗುಣ ಮಾಡಿಕೊಂಡವರು ದಯವಿಟ್ಟು ನನಗೆ ಸ್ವಲ್ಪ ತಿಳಿಸಿ.

No comments: