Sunday, January 03, 2016

ಕಾಣದಂತೆ ಮಾಯವಾದನೋ ನಮ್ಮ ಕನ್ನಡಿಗ

ಅದೊಂದು  ರಾಜ್ಯೋತ್ಸವ ಕನ್ನಡ  ಸ್ಪರ್ಧೆಗಳ ಕಾರ್ಯಕ್ರಮ,  ಅದರಲ್ಲಿ ಕೆಲವು ಆಯೋಜಕರು ಕೆಲವು ಹೊಸ ನಿಯಮಗಳನ್ನು ಪ್ರಸ್ತಾಪಿಸಿದರು
1) ಸ್ಪರ್ಧೆಯಲ್ಲಿ ಕನ್ನಡ ಅಥವಾ ಇಂಗ್ಲಿಷಲ್ಲಿ ಬರೆಯಬಹುದು
2) ಆಶುಭಾಷಣದಲ್ಲಿ ಕೂಡ ಕನ್ನಡ ಅಥವಾ ಇಂಗ್ಲಿಷಲ್ಲಿ ಮಾತನಾಡಬಹುದು.
3) ಕನ್ನಡದಲ್ಲಿ ಬರೆಯುವರಿಗೆ ಕಾಗುಣಿತ ತಪ್ಪು ಹುಡುಕಬಾರದು.
ಏನಪ್ಪಾ ಈ ಸ್ಪರ್ಧೆ ಬೇರೇ ದೇಶದ ಕನ್ನಡ ಕೂಟದಲ್ಲಿ ನಡೆದಿದ್ದಾರೆ ಬೇರೆ ಮಾತು , ನಮ್ಮ ನೆಲದಲ್ಲೇ ಆದ ಗಟನೆ ಆದ್ದರಿಂದ , ಯಾಕೆ ಈ ನಿಯಮ ಬಂದಿವೆ ಇವರ ಮಕ್ಕಳಿಗೆ ಅನಕೂಲ ಮಾಡಿಕೊಡಲು ಹೀಗೆ ಮಾಡೀದ್ದಾರ ಅಂತ ಜಿಜ್ಞಾಸೆ ಮೂಡಿದ್ದು ನಿಜ. ಆದರೆ ವಿಷ್ಯಕ್ಕೆ ಬಂದರೆ ಅನೇಕ ಆಯೋಜಕ , ತೀರ್ಪುಗಾರರಿಗೆ ಕನ್ನಡ ಓದಲು , ಬರೆಯಲು ಬರದೇ ಇರುವುದು ನಿಜ ವಿಷಯವಾಗಿತ್ತು . ಆದ್ದರಿಂದ ತಾವು ಪಾಲ್ಗೊಳ್ಳ ಬೇಕು ಎಂಬ ತುಡಿತದಿಂದ ಇಂಗ್ಲಿಶನ್ನು ಸೇರಿಸಿದ್ದರು, ಇನ್ನೂ ಇವರ ಮಕ್ಕಳಿಗೆ ಸ್ಪೆಷಲ್ ಅಂತ ಹೇಳಬೇಕಾಗಿಲ್ಲ.
ಇದು ಒಂದು ಗಟನೆ ಆದರೂ ಇದಕ್ಕೆ ಮೂಲ ಹೂಡಕುತ್ತಾ ಹೊರಟಾಗ  ಕಂಡು ಬಂದ ಅಂಶವೆಂದರೆ 2000 ಇಸವಿ  ನಂತರ ಕರ್ನಾಟಕದಲ್ಲಿ ಆದ ಮಹತ್ತರ ಬದಲಾವಣೆ. ಅದು  ಎನೆಂದರೆ ಕನ್ನಡ ಓದಲು ಬಾರದಿರುವ, ಕನ್ನಡ ಕಷ್ಟ ಪಟ್ಟು ಓದುವ ಒಂದು ಪೀಳಿಗೆ ಇಂದು ಪೋಷಕರಾಗಿದ್ದಾರೆ.   ಈ ಪೋಷಕರಿಗೆ ಕನ್ನಡ ಎಂದರೆ ಒಂದು ರೀತಿ ಕಬ್ಬಿಣದ ಕಡಲೆ , ಆದ್ದರಿಂದ ಇವರು ಹೆಚ್ಚು ಬಳಸುವ ಬಾಷೆ ಇಂಗ್ಲಿಶ್ ಆಗಿರುತ್ತದೆ. ಮನೆಯ ವಾತವಾರಣ ಕೂಡ ಇದರಿಂದ ಹೊರತಾಗಿರುವದಿಲ್ಲ. ಇವರ ಮನೆಯ ಪುಸ್ತಕ ಬಂಡಾರದಲ್ಲಿ ಒಂದೆ ಒಂದು ಕನ್ನಡ ಪುಸ್ತಕವಿದೆ ಎಂದರೆ ಅದು ಇಂಗ್ಲಿಶ್ ಟು ಕನ್ನಡ  ಪದನೆರಿಕೆ ಆಗಿರುತ್ತದೆ.

ಇದು ಅವರ ವೈಯಕ್ತಿಕ ಜೀವನ ಶೈಲಿ ಆದರೂ ಅದು ಸಾಮಾಜಿಕವಾಗಿ ಪರಿಣಾಮ ಬೀರುತ್ತ ಇದೆ. ಆ ಮನೆಯಲ್ಲಿ ಕನ್ನಡ ಮುಂದಿನ ತಲೆಮಾರಿಗೆ ಕಂಡಿತ ಪಸರಿಸುವದಿಲ್ಲ. ಹೆಸರಿಗೆ, ಸೀಟ್ ಪಡೆಯಲು , ಉದ್ಯೋಗದ ಅನಕೂಲಕ್ಕೆ , ಇಲ್ಲ ಸೈಟ್ ಪಡೆಯಲು ಕನ್ನಡಿಗರೂ ಎಂದು ಗುರುತಿಸಿ ಕೊಳ್ಳುವ ಈ ವರ್ಗದ ಸಂಕ್ಯೆ ಹೆಚ್ಚಾಗುತ್ತ ಇರುವುದು ನಗರ ಪ್ರದೇಶದ ದೊಡ್ಡ ಸಮಸ್ಯೆಯೇ ಸರಿ.  ಇದರಿಂದ ಕನ್ನಡಿಗರ ಸಂಕ್ಯೆ ಕಮ್ಮಿ ಆಗುತ್ತದೆ. ಕಾಲಕ್ರಮೇಣ ಅಲ್ಪಸಂಕ್ಯತ ಬಿರುದು ಪಡೆದರು ಆಶ್ಚರ್ಯವಿಲ್ಲ.

ಒಂದು ಬಾರಿ ಈ ಪರಿಸರದಲ್ಲಿ ಬೆಳೆದ ಮಕ್ಕಳನ್ನು , ವಿದೇಶದಲ್ಲಿ  ಇರುವ ಕನ್ನಡಿಗರ ಮಕ್ಕಳ ಜೊತೆ ತುಲನೆ ಮಾಡಿದರೆ ಅನೇಕ ಸಾಮ್ಯತೆ ಕಾಣುತ್ತದೆ,  ಇನ್ನೂ ವಿದೇಶದಲ್ಲಿ ಬೆಳೆದ ಮಕ್ಕಳು ಹೆಚ್ಚು ಕನ್ನಡಿಗರಾಗಿದ್ದಾರೆ  ಎನ್ನುವ ಅಂಶ ಕಂಡು ಬರುತ್ತದೆ.

ಗುರುತಿಸಿ ಕೊಳ್ಳುವಿಕೆ :-  ಒಂದು ಸಮುದಾಯಕ್ಕೆ ಎದುರಾಗುವ ದೊಡ್ಡ ಸಮಸ್ಯೆ ಏನೆಂದರೆ ಗುರುತಿಸಿಕೊಳ್ಳುವಿಕೆ , ಕನ್ನಡಿಗರಾಗಿ ಗುರುತಿಸಿಕೊಳ್ಳಲು ಭಾಷೆ , ಕೀಳರಿಮೆ ಅಡ್ಡ ಬರುತ್ತದೆ.  ದೊಡ್ಡದಾಗಿ ವಿಶ್ವ ಮಾನವ ಪೊಸು ಕೊಟ್ಟು ನಾವು ಭಾರತೀಯರು , ನೀರು ಇದ್ದ ಹಾಗೆ. ಯಾವ ಭಾಷೆಯ ಜನ ಹೆಚ್ಚು ಇರುತ್ತಾರೋ ಅವರೊಡನೆ ನಾವು ಬೆರೆಯುತ್ತಾರೆ.  ಒಂದು ವೇಳೆ ಕನ್ನಡಿಗರೂ ಹೆಚ್ಚು ಇದ್ದಲ್ಲಿ  ಇವರದು ವಿರೋಧಿ ಬಣ.  ಕನ್ನಡತನ ಅನ್ನುವುದು parochial fringe chauvinism , ಇದು ದೇಶಕ್ಕೆ ದೊಡ್ಡ ಮಾರಕ ಎನ್ನುವ ಬಿಟ್ಟಿ ಉಪದೇಶ ಬೇರೆ.

ಕಾಲಗಟ್ಟದಲ್ಲಿ ಇದನ್ನು ಕನ್ನಡಿಗ ಮತ್ತು ಕರ್ನಾಟಕ ಹೇಗೆ ಎದುರಿಸಬೇಕಾಗುವುದೊ ನೋಡಬೇಕು. 

No comments: