Sunday, February 23, 2014

ಒಡೆದು ಆಳು ..

ಆಫ್ರಿಕಾದ ಕೆಲಭಾಗದಲ್ಲಿ ಒಂದು ದೇಶ ಇತ್ತು,  ಅಲ್ಲಿ ಒಂದೆ ಸಮುದಾಯದ ಜನ ನೆಮ್ಮದಿ ಇಂದ ಇದ್ದರು.
ಆ ಜನರ ಸಂಸ್ಕೃತಿ, ನುಡಿ, ಆಹಾರ ಎಲ್ಲಾ ಒಂದೆ ಆಗಿತ್ತು. ಒಂದೆ ನಂಬುಗೆಯ , ಒಂದೆ ಆಚಾರದ ಜನ
ತಮ್ಮಲ್ಲೇ  ಕೇಂದ್ರಿಕೃತ  ಸರಕಾರವನ್ನು ಮಾಡಿಕೊಂಡು, ಒಂದು ರೀತಿ ಮಂದಿ ಆಳ್ವಿಕೆಯನ್ನು ಮಾಡಿಕೊಂಡು ಹೋಗುತ್ತಾ ಇದ್ದರು. ಇದು ೧೮ನೇ ಶತಮಾನದ ಕತೆ ...

ಆ ದಿನಗಳಲ್ಲಿ  ಅಮೇರಿಕಾದಲ್ಲಿ ಇನ್ನು ಗುಲಾಮಿತನ ಇತ್ತು,  ನಮ್ಮಲ್ಲೂ ಸ್ವಾತಂತ್ರದ ಕೂಗು ಎದ್ದಿತ್ತು , ಹಾಗೆ ಅದು ಮಲಗಿತ್ತು.
ಆಫ್ರಿಕಾ ಯುರೋಪ್ ಜನರ ಕೆಲಸಕ್ಕೆ ಒಂದು ಫ್ಯಾಕ್ಟರಿ ಆಗಿತ್ತು.  ಜನರನ್ನು ನಡೆಸಿಕೊಳ್ಳುತ್ತ  ರೀತಿ ಹೇಳುವುದಕಿಂತ ಹೇಳದಿರುವುದುದೆ ಲೇಸು.

ಮೊದಲಿಗೆ ಆ ದೇಶಕ್ಕೆ ಬಂದವರು ಜರ್ಮನ್ ಜನರು,   ಆಗಿನ  ಜರ್ಮನ್ ಜನರಲ್ಲಿ ತಾವು ಮಾನವರಲ್ಲಿ ಅತಿ ಶ್ರೇಷ್ಟ ಎನ್ನುವ ಭಾವನೆ ಇತ್ತು.   ನಮ್ಮನ್ನು  ಬಿಟ್ಟು ಉಳಿದವರು ಬದುಕಿರುವುದೇ ವ್ಯರ್ಥ ಅನ್ನುವ ಭಾವನೆ ಇತ್ತು. ಆದರೆ ತಮ್ಮ  ಕೆಲಸ ಆಗಬೇಕು ಎಂದರೆ , ತಮ್ಮ ಸೇವೆಗೆ ಜನರು ಬೇಕು ಅವರು ಆರ್ಯನ್ ಸಮುದಾಯದಲ್ಲದವರು ಎನ್ನುವ
ಭಾವನೆ ಅಡಗಿತ್ತು. ಇನ್ನು ಹಿಟ್ಲರ್ ಜರ್ಮನ್ ರಾಜಕೀಯದಲ್ಲಿ ಮಿಂಚಿರಲಿಲ್ಲ , ಆದರು ಅಫ್ರಿಕಾದ ಆ ದೇಶ  ನೋವಿನಲ್ಲೂ  ಒಂದಾಗಿತ್ತು.  ೧೯೦೦-೧೯೪೫  ಇಂದಿನ ಜಗತ್ತಿನಲ್ಲಿ ಅನೇಕ ಗಟನೆಗಳು ನಡೆದವು, ಜರ್ಮನರು  ವಿ.ವಿ-೨ ರಲ್ಲಿ ಹೀನಾಯ ಸೋಲು ಅನುಬವಿಸಿ , ಗಂಡಸರ ಕೊರತೆಯನ್ನು ಎದರಿಸುವ ಸ್ಥಿತಿಗೆ ಹೋಗಿತ್ತು. ಇನ್ನು  ಯುರೋಪನ ಅನೇಕ ನಗರಗಳು ಸ್ಮಶಾನ ಆಗಿದ್ದವು. ಇ ಗಟನೆಗಳು  ದೂರದ ಆಫಿಕ್ರಾದ ದೇಶದ ಮೇಲು ಪ್ರಬಾವ ಬಿರಿದವು. ಜರ್ಮನ್ ಹಿಡಿತ ತಪ್ಪಿ  ಬೆಲ್ಜಿಯಂ ಕೈಗೆ ಬಂತು.

 ಮೊದಲಿಗೆ  ಹಿಡಿತ ತೆಗೆದುಕೊಳ್ಳಲು ಕಷ್ಟ ಪಟ್ಟ ಬೆಲ್ಜಿಯಂ ಜನ  ಕಂಡು ಕೊಂಡ ಅತ್ಯಂತ ಸರಳ ಮತ್ತು ಪ್ರಚಲಿತ ವಿದಾನವೆಂದರೆ..    ಒಡೆದು  ಆಳು ( "DIVIDE n RULE").

ಒಂದಾಗಿದ್ದ ಜನರನ್ನು ೩  ಗುಂಪಾಗಿ  ವಿoಗಡಿಸಿದರು..
ವಿoಗಡನೆಗೆ ಬಳಸಿದ ಮಾಪನಗಳು  ಮೂಗಿನ ಉದ್ದ,  ಕಣ್ಣಿನ  ಬಣ್ಣ , ಕಿವಿ ಉದ್ದ,  ಚರ್ಮದ ಬಣ್ಣ ,  ಶರೀರದ ಉದ್ದ
ಹೀಗೆ ಅನೇಕ ಮಾಪನ ಬಳಸಿ ಒಂದಾಗಿದ್ದ ಜನರನ್ನು ಬೇರ್ಪಡಿಸಿದರು.   ಇ ಗುಂಪಿನಲ್ಲಿ  ಬಿಳಿ ಇರುವ ಜನರೆ ಇಲ್ಲಿನ ನಿಜವಾದ ಹಕ್ಕುದಾರರು , ಇತರರು ಇವರ ಕಲುಷಿತ ಜನರು ಎಂದು ನಂಬುಗೆ ಬರಸಿದರು. ಆ ಜನರಿಗೆ ಮಾತ್ರ ಅಧಿಕಾರವನ್ನು ಕೊಟ್ಟರು.
 ಇವತ್ತಿಗೂ ಬಿಳಿ ಚರ್ಮದವರು ಹೇಳಿದರೆ ಅದು ವೇದ ವಾಕ್ಯ ಎನ್ನುವ ನಂಬುಗೆ ನಮ್ಮಲ್ಲೂ ಇದೆ. ಇನ್ನು ಆಗಿನ ಕಾಲದಲ್ಲಿ ಅದರ ತೀವ್ರತೆ ಇನ್ನು ಹೆಚ್ಚು ಇತ್ತು.   ಇ ವಿಂಗಡನೆಯನ್ನು ಬೇಡ ಎನ್ನುವ , ನಾವೆಲ್ಲರೂ ಒಂದೆ ಎನ್ನುವ ಭಾವನೆ ಮಾಯವಾಗಿ, ನಾವು ಬೇರೆ ಎನ್ನುವ ಯೋಚನೆ  ಆ ಜನರ ಮನಸ್ಸಿನಲ್ಲಿ ಬೇರುರಿತು.

ಅಧಿಕಾರ ಸಿಕ್ಕ ಗುಂಪು, ಇತರ ಗುಂಪನ್ನು ಕೀಳಾಗಿ ಕಾಣುವುದು, ಆ ಗುಂಪುಗಳಿಗೆ  ಹಿಂಸೆ ಮಾಡುವುದು ಶುರು ಮಾಡಿತು. ಇದಕ್ಕೆ ಬೆಲ್ಜಿಯಂ ಜನರ ಪ್ರಚೋದನೆ ಇದ್ದ ಕಾರಣ ಅದರ ಸ್ವರೂಪ ಹೆಚ್ಚಾಗಿತ್ತು.  ೧೦% ಇದ್ದ ಜನರು  ೮೫% ಜನರನ್ನು ಆಳುವ ಸ್ಥಿತಿಗೆ ಬಂದರು.  ಬಹುಮತ ಇದ್ದ ಜನರಿಗೆ  ಯಾವ ಸುಕರ್ಯ ಸಿಗದ ಹಾಗೆ ಮಾಡಿದ್ದರು. ಇದರಿಂದ ಅಲ್ಲಿ  ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ  ಆಗದ ಹಾಗೆ ಮಾಡಿ ಅಲ್ಲಿಂದ ಜಾಗ ಕಿತ್ತರು ಬೆಲ್ಜಿಯಂ ಜನರು.

ಆದರೆ ಮುಂದೆ ಆಗಿದ್ದೆ ಬೇರೆ,  ಜಗತ್ತಿನಲ್ಲಿ  ಅತಿ ದೊಡ್ಡ  ಜನಾಂಗೀಯ ದಂಗೆ ಆಗಿ , ಒಬ್ಬರನ್ನು ಒಬ್ಬರು ಕೊಂದು, ಹೆಣಗಳ ರಾಶಿಯೇ ಬಿದ್ದಿತ್ತು.  ಒಮ್ಮೆ ಒಂದಾಗಿ ಬಾಳಿದ್ದ ಜನರು ಇವತ್ತಿಗೂ ಒಂದಾಗಿಲ್ಲ. ..  ಆ ನಾಡಿನಲ್ಲಿ ನೀರಿಗಿಂತ ಹೆಚ್ಚು ನೆತ್ತರು ಹರಿದಿದೆ.
 ಮೊನ್ನೆ ನಡೆದ  ಆಂದ್ರಪ್ರದೇಶ ಒಡೆದ ರೀತಿಯನ್ನು ನೋಡಿದರೆ ಆಫ್ರಿಕಾ ಗಟನೆ ಜ್ಞಾಪಕ ಬಂತು.

ಚರಿತ್ರೆಯಲ್ಲಿ ಇಂತಹ ಗಟನೆಗಳು  ನಡೆಯುತ್ತಾ ಇವೆ, ದುರಂತವೆಂದರೆ ಹಿಂದೆ ಇ ಒಡೆದು ಆಳುವ ನೀತಿಯನ್ನು ಪರಕೀಯರು ಮಾಡುತ್ತಾ ಇದ್ದರು, ಇಂದು ನಮ್ಮ ದೇಶದವರೇ ಮಾಡುತ್ತಾ ಇದ್ದಾರೆ.

4 comments:

Govardhan said...

Very nice. There is a hollywood movie on this genocide.
Its unforunate to see a divide, which mocks the effort and sacrifice
pottiraaju.

Madhura B said...

chennagide sir.

Anonymous said...

Goodone.

Anonymous said...

Good article.😀