Showing posts with label ಹಂಪಿ. Show all posts
Showing posts with label ಹಂಪಿ. Show all posts

Saturday, January 22, 2011

ಆ ಸುಂದರ ದೊಡ್ಡ ಕನಸೇ ತಾಯಿ ಭುವನೇಶ್ವರಿ








ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??


ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.


ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.

Tuesday, December 28, 2010

ಹಂಪಿ ಪ್ರವಾಸ - ೧

ಮುನ್ನುಡಿ

ಅದೇನೋ ಗೊತ್ತಿಲ್ಲ ಹಂಪಿ ಎಂದರೆ ಒಂದು ಬಗೆಯ ಆಕರ್ಷಣೆ, ಇನ್ನೂ ಹೋಗಿಲ್ಲವಲ್ಲ ಅನ್ನೋ ಬೇಸರ. ಅಲ್ಲಿಗೆ ಹೋಗೋ ಪ್ರವಾಸದ ಅವಕಾಶ ಸಿಕ್ಕಾಗೆಲ್ಲಾ ಎನೋ ಅಡ್ಡ ಬಂದು ತಪ್ಪಿಹೋದ ಹಿಂದಿನ ಅನೇಕ ಅನುಭವಗಳು. ಒಟ್ಟಿನಲ್ಲಿ ಹಂಪಿ ನನಗೆ ಹತ್ತಿರವಿದ್ದು ದೂರವಿದ್ದ ಸುಂದರಿಯೇ. ಈ ಸುಂದರಿ ಬಗ್ಗೆ ಆಲೂರು ವೆಂಕಟರಾಯರ ಪುಸ್ತಕ ಓದಿದಾಗ ಅವರಿಗೆ ಆದ ರೋಮಾಂಚನ, ಅವರು ಅನುಭವಿಸಿದ ಆ ಭೂಮಿಯ ಪ್ರೇರಪಣಾ ಶಕ್ತಿ ಇವೆಲ್ಲವೂ ಅಲ್ಲಿಗೆ ಸೆಳೆಯುತ್ತಲೇ ಇದ್ದವೂ. ಆದರೆ ನನಗೆ ಅಲ್ಲಿ ಹೋಗಿ ಸುಮ್ಮನೆ ಗೋಡೆ ಮುಟ್ಟಿಬರುವ ಆಸೆಗಿಂತ, ಆಗಿನ ಕಾಲ ಹೇಗೆ ಇತ್ತು, ನಮ್ಮ ಕನ್ನಡ ಸಾಮ್ರಾಜ್ಯ ಹೇಗೆ ಬಾಳಿತ್ತು, ಇಂದು ಹಾಳು ಹಂಪೆ ಎಂದು ಕರೆಯುತ್ತರಲ್ಲ ಅದು ಕಟ್ಟಡಗಳ ಸ್ಥಿತಿಯೋ ಇಲ್ಲ ನಮ್ಮ ಕನ್ನಡಿಗರ ಮನಸ್ಸಿನ ಸ್ಥಿತಿಯೋ ಎಂದು ತಿಳಿಯುವ ಭಾವನೆ. ಅಲ್ಲಿ ಹೋಗಿ ಒಬ್ಬ ಸಾಮನ್ಯ ಇತಿಹಾಸ ವಿಧ್ಯಾರ್ಥಿಯ ಹಾಗೆ ಅಲ್ಲಿ ಅಲೆಯಬೇಕು, ಬಂಡೆ, ಗುಡ್ಡ ಹತ್ತಬೇಕು, ಅವರು ಓಡಾಡಿದ ಜಾಗದಲ್ಲಿ ಓಡಾಡಿ ನಾವು ಪುಳಕಿತರಾಗಬೇಕು ಎಂದು ನಿಶ್ಚಯಿಸಿ ಕೇವಲ ೩ ದಿನದಲ್ಲಿ ಇದೇ ಕೆಲ್ಸ ಮಾಡಲು ಹೊರಟಿದ್ದ ತಂಡವನ್ನು ಸೇರಿಕೊಂಡೆ.


ಹಂಪಿ ಹಿನ್ನಲೆ

ತುಂಗಾ-ಭ್ರದ್ರ ತೀರದಲ್ಲಿ ಇರುವ ಪಂಪಾದೇವಿಯ ಕ್ಷೇತ್ರಕ್ಕೆ ಹಂಪಿ,ಹಂಪೆ ಎಂದು ಹೆಸರು ಬಂದಿದೆ. ಹೆಸರನ್ನು ಗಮನಿಸಿದರೆ ನಮಗೆ ಇಲ್ಲಿ ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಹಾಗೇಯೆ ಪಂಪೆ, ಪಂಪಿ ಹೋಗಿ ಹಂಪೆ, ಹಂಪಿ ಆಗಿರಬಹುದು ಎಂದು ನನ್ನ ಅನಿಸಿಕೆ.




ಬೆಂಗಳೂರಿನಿಂದ -ಹಂಪಿಗೆ

ಇದು ಬೆಂಗಳೂರಿನಿಂದ ೩೪೩ ಕಿ.ಮೀ ದೂರದಲ್ಲಿದೆ, ಬೆಂಗಳೂರಿನಿಂದ ದಿನವೂ ರಾಜಹಂ(ಹಿಂ)ಸಾ ಬಸ್ ಸೇವೆ ಇದೆ. ಇದು ಕ.ರಾ.ರ.ಸಾ.ಸಂ ಅವರ ಸೇವೆ, ರಾತ್ರಿ ೧೧.೦೦-೧೧.೩೦ ಒಳಗೆ ಹೋರಟು ಅಲ್ಲಿ ಬೆಳಿಗ್ಗೆ ಸೇರುತ್ತದೆ. ಮೇಲೆ ಹೇಳಿದ ಹಾಗೆ ಆ ದಿನಗಳಲ್ಲಿ ಇದ್ದ ರಸ್ತೆಯ ಅನುಭವ ಮಾಡಿಸಿದ್ದು ಚಿತ್ರದುರ್ಗ ಮತ್ತು ಹೊಸಪೇಟೆ ಮಾರ್ಗ. ಈ ದಾರಿಯಲ್ಲಿ ರಸ್ತೆ ಅನ್ನುವುದೇ ಇಲ್ಲ. ಬಸ್ ನಿಮ್ಮನ್ನು ಎತ್ತಿ, ಕುಲುಕಿ, ಲಾಲಿ ಹಾಡೊತ್ತೆ. ಆ ರಸ್ತೆಯಲ್ಲೂ ಕೂಡ ಅಭಿವೃದ್ಧಿಯೇ ನಮ್ಮ ಮಂತ್ರ ಅನ್ನುವ ರಾಜ್ಯ ಸರ್ಕಾರದ ಬೋರ್ಡುಗಳು ಅಣಕಿಸಿದರೆ ಅದು ನಿಮ್ಮ ವಕ್ರದೃಷ್ಟಿ ಅಷ್ಟೆ.

ಆ ದುರ್ಗಮ ದಾರಿಯಲ್ಲಿ ಸಂಚರಿಸುವಾಗ. ಬಸ್ಸಿನಲ್ಲಿ ನನ್ನ ಜೊತೆ ಇದ್ದವರಿಗೆ ನನ್ನ ತರಹ ಎನ್ ಕಚಡಾ ರಸ್ತೆಯಪ್ಪ ಎಂದು ಬೈದುಕೊಳ್ಳುವುದೇ ಆಗಿತ್ತು. ನಮ್ಮದು ಈ ಕಥೆ ಆದರೆ ಹಿಂದಿನ ಕಾಲದಲ್ಲಿ ಇದಕ್ಕಿಂತ ದುರ್ಗಮ ದಾದಿಯಲ್ಲಿ ಬಂದು ಯುದ್ದ ಮಾಡುತ್ತ ಇದ್ದ ಬೇರೆ ರಾಜ್ಯದ ಜನರ ಕಿಚ್ಚನ್ನು ಮೆಚ್ಚ್ದಬೇಕಲ್ಲವೇ ?? . ನಮಗೆ ೨ ತಾಸು ಪ್ರಯಾಣ ಸಾಕಪ್ಪ ಅನಿಸಿದರೆ ಅವರಿಗೆ ವರ್ಷಗಟ್ಟಲೇ ಪ್ರಯಾಣ ಯಾವ ಮಟ್ಟಿಗೆ ತ್ರಾಸು ಕೊಟ್ಟಿರಬಹುದು ಅಲ್ಲವೇ ?. ಆ ದಿನಗಳಿಗೆ ಕರೆದುಕೊಂಡು ಹೋದ ಆ ರಸ್ತೆಗೆ ಧನ್ಯವಾದ ಸಲ್ಲಿಸುತ್ತ.. ಮುಂದುವರೆಯೋಣ.

ಹಂಪಿಗೆ ಬಸ್ ಬೇಡ ಎಂದರೂ ೨ -೨.೩೦ ಗಂಟೆ ತಡವಾಗಿ ತಲಪುತ್ತಾನೆ. ಅದಕ್ಕಿಂತ ಉತ್ತಮ ಆಯ್ಕೆ ಎಂದರೆ ರೈಲಿನಲ್ಲಿ ಹೋಗುವುದು. ಅದೇ ಹಂಪಿ ಎಕ್ಸಪ್ರೆಸ್ ನಲ್ಲಿ ಹೊಸಪೇಟೆ ತನಕ ಬಂದು ಅಲ್ಲಿಂದ ಆಟೋ-ಬಸ್ ನಲ್ಲಿ ಹಂಪಿಯನ್ನು ತಲುಪಬಹುದು. ಇದು ಎಲ್ಲಾ ರೀತಿಯಲ್ಲಿ ಉತ್ತಮವಾದ ಆಯ್ಕೆ. ಹಾಯಾಗಿ ನಿದ್ದೆ ಮಾಡಿಕೊಂಡು, ಕೈಕಾಲಿಗೆ ಶ್ರಮ ಕೊಡದೇ ಸಾಗಬಹುದು. ಹೊಸಪೇಟೆಯಿಂದ ಹಂಪಿ ಸರಿ ಸುಮಾರು ೧೫-೧೬ ಕಿ.ಮಿ ಪ್ರಯಾಣ. ದಾರಿ ಮಧ್ಯ ಹಳೆ ಕಟ್ಟಡಗಳು ಕಂಡರೆ ಅದಕ್ಕಿಂತ ಹೆಚ್ಚು ಅಲ್ಲಿನ MLA ಆನಂದ್ ಸಿಂಗನ ಹೆಸರು ಕೃಷ್ಣದೇವರಾಯಕ್ಕಿಂತ ಹೆಚ್ಚು ಕಾಣಿಸುತ್ತದೆ ಮತ್ತು ಬೇಡವೆಂದರೂ ನೋಡ ಸಿಗುತ್ತದೆ.

ವಾಸ



ಹಂಪಿಯು ಮೊದಲಿಂದ ಅನೇಕ ದೇಶದವರನ್ನು ಆಕರ್ಷಣೆ ಮಾಡುತ್ತಲೆ ಇತ್ತು, ಇವತ್ತು ಹೇಗೆ ಮುಂಬಾಯಿ ವಾಣಿಜ್ಯ ನಗರ ಆಗಿದೆಯೋ ಹಾಗೆ ಅಂದಿನ ದಿನಗಳಲ್ಲಿ ಹಂಪಿ ದೊಡ್ಡ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿತ್ತು. ಆಮದು -ರಫ್ತು ಎರಡೂ ಎಗ್ಗಿಲ್ಲದೇ ಸಾಗಿತ್ತು, ಅಲ್ಲಿನ ಜನರಿಗೆ ಬೇರೆ ದೇಶದವರು ಹೊಸರಲ್ಲ ಮತ್ತು ಅವತ್ತು ಹೇಗೆ ಮರ್ಯಾದೆ ಕೊಡುತ್ತಾರೋ ಇವತ್ತಿಗೂ ಕೊಡುತ್ತಾರೆ, ಕಾರಣಗಳು ಬೇರೆ ಇರಬಹುದು ಆದರೆ ಆ ಜನರ ಬಗ್ಗೆ ಇರುವ ಮೋಹ ಮತ್ತು ಆಕರ್ಷಣೆ ಕಮ್ಮಿ ಆಗಿಲ್ಲ. ಇವತ್ತು ಹಂಪಿ ಗಲ್ಲಿ ಗಲ್ಲಿಯಲ್ಲಿ ಮನೆಗಳೂ LODGING ರೂಮುಗಳಾಗಿ ಪರಿವರ್ತನೆ ಆಗಿದೆ. ಸರಿ ಸುಮಾರು ೩೦೦೦ ರೂಮುಗಳು ಇದೆ. ಪ್ರತಿ ರೂಮಿನಲ್ಲಿ ಎಸಿ, attached bathroom, double cot ಹೀಗೆ ಅನೇಕ ವ್ಯವಸ್ಥೆಗಳು ವಿದೇಶಿಯರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಸೀಸನ್ ನಲ್ಲಿ ಪ್ರತಿ ರೂಮಿನ ಬೆಲೆ
೧೦೦೦-೨೦೦೦ ತನಕ ಹೋಗುತ್ತದೆ. ಸೀಜನ್ ಅಂದರೆ ಅಕ್ಟೋಬರ್ ಇಂದ ಫೆಬ್ರವರಿ ತನಕ , ಆಮೇಲೆ ಬಿಸಿಲು ಕಾಲದಲ್ಲಿ ಸೂರ್ಯನ ಶಾಖಕ್ಕೆ ಕಲ್ಲುಗಳು tan ಆಗಿ ಊರು ಬಿಕೋ ಅನ್ನುತ್ತ ಇರುತ್ತದೆ, ಹಾಗೇಯೆ ಮಳೆಗಾಲದಲ್ಲಿ ಕೂಡ ಹೆಚ್ಚು ಜನರು ಕಾಣ ಬರುವದಿಲ್ಲ.

ಊಟ-ಊಪಚಾರ



ವಿರುಪಾಕ್ಷ ಸ್ವಾಮಿ ದೇವಸ್ಥಾನದ ಹತ್ತಿರ ಅನೇಕ ಹೋಟೆಲ್ ತಲೆ ಎತ್ತಿವೆ, ಮುಖ್ಯವಾಗಿ ತುಂಗಾ ಸಂಗಮದಲ್ಲಿ ತಿಥಿ ಇತರೆ ಪಿತೃಕಾರ್ಯಗಳು ನಡೆಯುವ ಕಾರಣ ಅನೇಕ ಪೂಜಾರಿ ಮನೆಗಳಲ್ಲಿ ಊಟ ಸಿಗುತ್ತದೆ. ಇನ್ನು ವಿದೇಶಿಯರನ್ನೇ ಗಮನದಲ್ಲಿ ಇಟ್ಟುಕೊಂಡು ಅನೇಕ
ರೆಸ್ತೋರೆಂಟ್ ತಲೆ ಎತ್ತಿವೆ. ಅಲ್ಲಿನ ಮಂಡಕ್ಕಿ, ಮಿರ್ಚಿ, ಪಡ್, ಇಡ್ಲಿ-ವಡೆ ತಿಂಡಿಗೆ ಆದರೆ, ಒಳ್ಳೆ ಸಾರು,ಸಾಂಬಾರು,ಮಜ್ಜಿಗೆ ಹುಳಿ, ಚಟ್ನಿ ಊಟ ಮಧ್ಯಾಹ್ನ ಮತ್ತು ರಾತ್ರಿಗೆ ಸಿಗುತ್ತದೆ.ಅದನ್ನು ಬಿಟ್ಟರೆ ದಾರಿ ಮಧ್ಯೆ ಎಳೆನೀರು ಸಿಗುತ್ತದೆ, ಆದರೆ ಆ ಭೂಮಿಯ ಗುಣವೋ ಎನೋ
ನೀರು ತುಂಬಾ ಉಪ್ಪಾಗಿ ಇರುತ್ತದೆ. ಸಾಲದಕ್ಕೆ ಬಿಸಿಲಿನ ಝಳಪು ತುಂಬ ಇರುವದರಿಂದ ಎಲ್ಲಿಗೆ ಹೋದರು ಕುಡಿಯಲು ಚೆನ್ನಾಗಿ ನೀರು ತೆಗೆದುಕೊಂಡು ಹೋಗುವುದು ಉತ್ತಮ.