Saturday, March 19, 2011

ಹೋಳಿ ಹುಣ್ಣಿಮೆ ..ನಮ್ಮ ಸಂಸ್ಕೃತಿಯಲ್ಲಿ ಇರಲಿಲ್ಲವೇ ?

೧೪ ವರುಷಗಳ ಹಿಂದಿನ ಮಾತು, ಇವತ್ತಿನ ಹಾಗೆ ಹೋಳಿ ಹುಣ್ಣಿಮೆ, ಸೂಪರ್ ಮೂನ್ ಆಗಿರಲಿಲ್ಲ, ಆದರೆ ನಾವುಗಳು ಸೂಪರ್ ಮೂಡಿನಲ್ಲಿ ಇದ್ದೆವು. ಹೋಳಿ ಆಚರಣೆಗೆ ಇಳಿದೆವು, ಅದು ನಡೆದಿದ್ದು ಗೆಳೆಯನ ಹಾಸ್ಟೆಲಿನಲ್ಲಿ . ಹೇಳಿ ಕೇಳಿ ಅದು ಒಂದು ವರ್ಗದ
ಹಾಸ್ಟೆಲ್ , ಅನೇಕ ರೀತಿ-ರಿವಾಜುಗಳು ಇದ್ದವು. ಆದರೆ ಅವತ್ತು ನಾವು ಪ್ರತಿಯೊಬ್ಬರನ್ನು ರೂಮುಗಳಿಂದ ಆಚೆ ಎಳೆದು ಆಡಿದೆವು,
ಕೆಲವರು ಮೊದಲು ಆ ಓ ಎನ್ನುತ್ತ ಇದ್ದರು, ಯಾವಾಗ ನೀರಿಗೆ ಇಳಿದ ಮೇಲೆ ಚಳಿ ಎನು, ಮಳೆ ಎನು ಅನ್ನುವ ಹಾಗೆ ಮುಂದುವರೆಯುತ್ತ ತುಂಬಾ ಜೋಶಿನಲ್ಲಿ ಅವರು ಬಣ್ಣ ಬಳಿಸಿಕೊಂಡ ಹಾಗೆ ಬೇರೆಯವರಿಗೆ ಬಳಿಯುತ್ತ ಇದ್ದರು, ಒಬ್ಬರನ್ನು ಇನ್ನೊಬ್ಬರು ಅಟ್ಟಿಸಿಕೊಂಡು ಹೋಗುವುದು, ತೊಟ್ಟಿಯನ್ನು ವಿವಿಧ ಬಣ್ಣಗಳನ್ನು ಹಾಕಿ ಸಾಕ್ಜಾತ್ ಕೊಚ್ಚೆ ಮಾಡಿದ್ದು, ಅದರಲ್ಲಿ ಹೊಸಬರನ್ನು ಎತ್ತಿ ಅದ್ದುವ ಕಾರ್ಯ ಪಾಂಗಿತವಾಗಿ ಸಾಗಿತ್ತು.

ಆಟದ ರಂಗು ಎರುವುದೇ ಹೊಸ ಹೊಸ ರೀತಿಯಲ್ಲಿ ಬಣ್ನ ಬಳಿಯುವದರಿಂದ, ಮೊಟ್ಟೆ, ಟೊಮ್ಯಾಟೊ ಸಿಲ್ವರ್ ಪೆಂಟ್ ಎಲ್ಲಾ ಆಚೆ ಬಂದು, ಯಾರು ಯಾರು ಎಂದು ಅವರಿಗೆ ಮಾತ್ರ ಗೊತ್ತಿತ್ತು. ಕನ್ನಡಿಯ ಮುಖ ನೋಡಿಕೊಂಡರೆ ಯಾರಪ್ಪ ಇದು ಎಂದು ನಮಗೆ
ಸಂಶಯ ಮೂಡುವ ಹಾಗೆ ನಮ್ಮ ಮುಖ ವಿಕಾರ ಆಗಿತ್ತು.

ನಮ್ಮ ಕೇಕೆ ಆಟಗಳನ್ನು ಯಾರೋ ಆ ಹಾಸ್ತೆಲ್ ನಡೆಸುವ ಒಂದು ಟ್ರಸ್ಟಗೆ ಹೇಳಿದ್ದರು , ತಕ್ಷಣ ನಮಗೆ ಕೂಡಲೆ ನಿಲ್ಲಿಸಿ ಎಲ್ಲಾ ಕಡೆ ತೊಳೆಯಬೇಕು ಎಂದು ಆದೇಶ ಕೊಟ್ಟರು. ಆದರೆ ಅದನ್ನು ಕೇಳುವ ವ್ಯವಧಾನ ನಮಗೂ ಇರಲಿಲ್ಲ. ಸ್ವಲ್ಪ ಹೊತ್ತು ಆಡಿ, ಆಮೇಲೆ ಎಲ್ಲಾ ತೊಳೆಯುತ್ತೆವೆ ಎಂದು ಹುಡುಗರಲ್ಲಿ ಒಬ್ಬನು ಹೇಳಿದ, ಅದಕ್ಕೆ ಎಲ್ಲರೂ ಹೂ..ಎಂದು ಚೀರಿದರು. ಆದರೆ ಅದು ಯಾವ ರೀತಿ
ಟ್ರಸ್ಟ ಜನರಿಗೆ ಹೋಯಿತೋ ನಾ ಕಾಣೆ. ನಮ್ಮ ಮೇಲೆ ಪ್ರತಿಕಾರ ತೆಗೆದುಕೊಳ್ಳಲು, ಎಲ್ಲಾ ನಳ( ನಲ್ಲಿ) ನೀರು ಬರದ ಹಾಗೆ ಮಾಡಿ ಬಿಟ್ಟರು.

ನಮ್ಮ ಸಂಸ್ಕೃತಿ ಅಲ್ಲದ ಹುಚ್ಚಾಟಗಳನ್ನು ಆಡುತ್ತಾರ, ನೀರಿಲ್ಲದೆ ನನ್ನ ಮಕ್ಕಳು ಒದ್ದಾಡಬೇಕು, ಬುದ್ದಿ ಬರೋ ಹಾಗೆ ಮಾಡುತ್ತೆನೆ ಎಂದು ಪೋನಿನಲ್ಲಿ ಆ ಕಡೆಯಿಂದ ಕೇಳಿದ್ದು, ಅದನ್ನು ಆ ಕಡೆಯಿಂದ ಕೇಳಿಸಿಕೊಂಡ ಹುಡುಗನು ಬಂದು ನಮಗೆ ಹೇಳಿದ್ದು, ಒಂದು ನಿಮಿಷ ಎಲ್ಲರಲ್ಲಿ ಸಂತೋಷಕ್ಕೆ ತಣ್ಣಿರು ಎರಚಿದ ಹಾಗೆ ಆಯಿತು. ಆಮೇಲೆ ಗೆಳೆಯರ ಮನೆಗಳಲ್ಲಿ ಸ್ನಾನ ಮಾಡಿದ್ದು ಆಯಿತು.
ಆದರೆ ಮರುದಿನ ಆ ಹಾಸ್ಟೆಲಿನ ನೋಟಿಸ್ ಬೋರ್ಡಿನಲ್ಲಿ ಇದರ ಬಗ್ಗೆ ಉಲ್ಲೇಖ ಆಗಿದ್ದ ಸಾಲುಗಳು ಇವತ್ತು ನನಗೆ ಜ್ಞಾಪಕ ಇವೆ ..

"ಹೋಲಿ ಆಚರಣೆ ನಮ್ಮದಲ್ಲ, ಇದು ಬೇರೆಯವರ ಸಂಸ್ಖೃತಿ. ಬೇರೆಯವರ ಆಚರಣೆಗಳನ್ನು ಮಾಡುತ್ತ, ಚೀರುತ್ತ ಹಾರಾಡುವುದು
ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುತ್ತ ಇದೆ ..ಬ್ಲಾ ಬ್ಲಾ ..

ಈ ಮಾತುಗಳನ್ನು ಅನೇಕ ಬಾರಿ ನಮ್ಮ ಅಜ್ಜ-ಅಜ್ಜಿಯದಿಂರು ಹೇಳಿದ್ದರು, ಹೊಸ ಪದ್ದತಿಗಳನ್ನು ತರುತ್ತ ಇದ್ದೀರಾ, ಅದೇನು ಮಧ್ಯಾಹ್ನ ತನಕ ಆಡೋದು, ಹೀಗೆ ಹತ್ತು ಹಲವಾರು ಮಾದರಿಯಲ್ಲಿ ಕೇಳಿದ್ದೆವು, ಒಟ್ಟಾಗಿ ಇದರ ತಾತ್ಪರ್ಯ ಇದೆ.
ಇದು ಕನ್ನಡಿಗರ ಹಬ್ಬ ಅಲ್ಲ, ಇದು ಇತ್ತಿಚಿಗೆ ಬಂದ ಹಬ್ಬ, ಅದರಲ್ಲೂ ನಾರ್ತಿಗಳ ಪ್ರಭಾವದಿಂದ ಬಂದಿದೆ. ಆದರೆ ಚಿಕ್ಕ ವಯಸ್ಸಿನಿಂದ ನಾನು ಉತ್ತರ ಕರ್ನಾಟಕದಲ್ಲಿ ಹಾಗೆ ಆಚರಿಸಿಕೊಳ್ಳುತ್ತ ಇದ್ದೆವಲ್ಲಾ ಎಂದರೆ, ಆ ಜಾಗವು ಮರಾಠಿ ಮತ್ತು ಉತ್ತರ ಭಾರತೀಯರ ಪ್ರಭಾವದಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತ ಇದ್ದರು. ಕಾಲಕ್ರಮೇಣ ಇದು
ನಾರ್ತಿಗಳ ಹಬ್ಬ, ನಾವು ಹಬ್ಬ ಆಚರಿಸುವುದು ನಾರ್ತಿಗಳ ಸಂಸ್ಕ್ರುತಿಯನ್ನು ಅಪ್ಪಿಕೊಂಡ ಹಾಗೆ, ಅವರ ದಾಸ್ಯಕ್ಕೆ ಹೋದ ಹಾಗೆ ಅನ್ನುವ ಹೊಸ ವಾದ ಕೇಳಿಬರತೊಡಗಿತು. ಅದಕ್ಕೆ ಪುಷ್ಟಿ ಕೂಡುವ ಹಾಗೆ ಕಚೇರಿಗಳಲ್ಲಿ ನಾರ್ತಿಗಳು ನಮ್ಮ ಹಬ್ಬ ಎಂದು ಬಿಂಬಿಸುತ್ತ ಇದ್ದಾಗ ಒಂದು ಚೂರು ಬಣ್ಣ ಬಳಿಸಿಕೊಂಡರೆ ಹಿಂಸೆ ಆಗುತ್ತ ಇತ್ತು. ಒಂದು ರೀತಿಯಲ್ಲಿ ೧೫ ವರುಷಗಳ ಹಿಂದೆ ಹೇಳಿದ್ದ ಮಾತುಗಳನ್ನು ನಾನು ಗೊತ್ತೊ ಗೊತ್ತಿಲ್ಲದೇ ಒಪ್ಪಿಕೊಂಡು ಬಿಟ್ಟಿದ್ದೆ.

ಆವತ್ತು ಒಂದು ದಿನ ರಾಜಕುಮಾರ್ ಅವರ ಕಾಮಣ್ನನ ಮಕ್ಕಳು ಹಾಡು ನೋಡುತ್ತ ಇದ್ದಾಗ , ಇದು ನಮ್ಮ ಪೀಳಿಗೆಯ ಅನುಕರಣೆ ಇಂದ ಬಂದಿದ್ದಲ್ಲ, ಹಿಂದೆಯೂ ಇತ್ತು ಅನಿಸಿತು. ಹಾಗಿದ್ದರೆ ಇದು ನಮ್ಮ ಹಬ್ಬ ಅಲ್ಲವೇ, ನಾವು ಅನುಕರಣೀಯ ದಾಸ್ಯದಲ್ಲಿ ಇದ್ದೇವೆ
ಎಂದು ಅನಿಸುತ್ತ ಇತ್ತು.

ಗಮನಿಸಿ ನೋಡಿದರೆ ಜಗತ್ತಿನ ನಾನಾ ಭಾಗಗಳಲ್ಲಿ ಬಣ್ಣ, ನೀರಿನ ಎರಚುವಿಕೆ ಬೇರೆ ಬೇರೆ ಹೆಸರಿನಲ್ಲಿ ಇದೆ. ಅದನ್ನು ಕೇವಲ ಒಬ್ಬರ ಸಂಸ್ಕೃತಿ ಎಂದು ಬ್ರಾಂಡ್ ಮಾಡುವುದು ನಿಜಕ್ಕೂ ತಪ್ಪು. ಭಾರತದಲ್ಲಿ ಹೋಲಿ ಆಚರಣೆ ನೋಡಿದರೆ ಉತ್ತರದಲ್ಲಿ ಹೆಚ್ಚು, ಬಾಂಗ್ ಬಳಕೆ ಇಂದ ಅದರ ಕಿಕ್ ಬೇರೆ ಇರಬಹುದು , ಆದರೆ ಅದು ದಕ್ಷಿಣದಲ್ಲಿ ಇರಲೇ ಇಲ್ಲ, ಸ್ವಾತಂತ್ರ ಬಂದ ಮೇಲೆ ಚಿತ್ರಗಳ ಪ್ರಭಾವದಿಂದ ನಾವು ಕಲಿತೆವು ಎಂಬ ವಾದವನ್ನು ಯಾಕೋ ಮನಸ್ಸು ಯಾವತ್ತು ಒಪ್ಪುತ್ತ ಇರಲಿಲ್ಲ.


ಚರಿತ್ರಯ ಪುಟಗಳನ್ನು ಅರಿಸುತ್ತ.



ಒಮ್ಮೆ ಹಂಪೆ ಬೇಟಿ ಕೊಟ್ಟಾಗ ಅಲ್ಲಿಯ ಜನ ಹೋಲಿ ಹಬ್ಬವನ್ನು ಅರಿಶಿಣ ನೀರಿನಲ್ಲಿ ಆಡುತ್ತ ಇದ್ದರು ಎಂದು ASI ಸಿಬ್ಬಂದಿ ಹೇಳಿದರು. ನಾನು ಅದಕ್ಕೆ ದಾಖಲೆ ಇದೆಯಾ ಎಂದು ಕೇಳಿದಾಗ, ಹಜಾರ ರಾಮನ ದೇವಾಲಯದಲ್ಲಿ ಕೆತ್ತನೆಗೆಳು ಇವೆ, ನೋಡಿಕೊಂಡು ಬನ್ನಿ ಎಂದರು. ಆ ದೇವಸ್ಥಾನಕ್ಕೆ ಬೇಟಿಕೊಟ್ಟಾಗ ಕಂಡಿದ್ದು ಒಂದು ೨ ಸಾಲುಗಳು ಬಣ್ಣದ ಎರಚುವಿಕೆಯನ್ನು ಸಾರುವ ಚಿತ್ರಗಳು. ಒಂದು ಸಾಲಿನಲ್ಲಿ ಪಿಚಕಾರಿ ಮಾದರಿಯಲ್ಲಿ, ಇನ್ನೊಂದರಲ್ಲಿ ಒಂದು ಬಕೆಟ್ ಇಂದ ಬಣ್ಣ ತೆಗೆದುಕೊಳ್ಳುತ್ತ ಇರುವುದು. ಒಬ್ಬರಿಗೆ ಒಬ್ಬರು ಹಚ್ಚುತ್ತ ಇರುವುದು ..ಹೀಗೆ ಅಂದಿನ ದಿನಗಳ ಆಚರಣೆ ನಮಗೆ ಕಾಣುತ್ತದೆ.


ಅಲ್ಲಿಗೆ ಈ ಹಬ್ಬ ಕನ್ನಡ ರಾಜ್ಯದ ವಿಜಯನಗರ ಸಮಯದಲ್ಲೂ ಇತ್ತು ಎನ್ನಬಹುದು. ಕಾಲಕ್ಕೆ ತಕ್ಕಂತೆ ಆಚರಣೆ ಬೇರೆಯಾಗಿದೆ , ಆದರೆ ಹಬ್ಬದಲ್ಲಿ ಬರುವ ಮಜ ಮತ್ತು ಆನಂದ ವಿಜಯನಗರ ಸಮಯದಲ್ಲೂ ಒಂದೆ, ಇವತ್ತಿಗೂ ಒಂದೆ. ಇದಕ್ಕೆ ಸಂಸ್ಕೃತಿ-ಗಡಿ ಬಂಧನದಲ್ಲಿ ಹಾಕಿ ನಮ್ಮ ಮಕ್ಕಳಿಗೆ ಆಚರಿಸ ಬೇಡಿ ಎಂದು ಹೇಳಿದಾಗ ಅದರಿಂದ ಆಗುವ ನಷ್ಟ ತುಂಬಾ. ಮಕ್ಕಳಿಗೆ ಸಂತೋಷ ಕೊಡುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಇಲ್ಲ, ಬೇರೆಯವರ ಸಂಸ್ಕ್ರುತಿ ಚೆನ್ನಾಗಿದೆ ಎಂದೆನಿಸಿ, ಕೀಳರಿಮೆ ಬಂದರೆ ಅದಕ್ಕೆ ನಾವೇ ಹೊಣೆಯಾಗುತ್ತೆವೆ.


ಹೋಲಿ ಬಹಳ ಹಿಂದಿನ ಸಂಪ್ರದಾಯ ಎಂದು ಎಲ್ಲರೂ ಒಪ್ಪುವ ವಾದ, ಅದಕ್ಕೆ ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಇನ್ನು ಚಾಲ್ತಿಯಲ್ಲಿ ಇದೆ, ಅದೇ ಮೈಸೂರಿನ ಕಡೆ ಮರೆಯಾಗಿದೆ. ಮೈಸೂರಿನಲ್ಲಿ ಮುಖ್ಯವಾಗಿ ಸ್ವಲ್ಪ ತಮಿಳುನಾಡಿನ ವೈದಿಕ ಸಂಸ್ಕೃತಿ ಸೇರಿರುವುದು ಇದಕ್ಕೆ ಕಾರಣವಿರಬಹುದು ಎಂದೆನಿಸುತ್ತದೆ.

ಇಂದಿನ ಪೀಳಿಗೆಗೆ ...
ಹೋಲಿ ಹಬ್ಬ ಯಾವ ನಾರ್ತಿಗಳ ಪೇಟೆಂಟ್ ಹಬ್ಬ ಅಲ್ಲ, ನಿಮ್ಮ ಅಜ್ಜ ಅಜ್ಜಿ ಹೇಳುವ ಸಂಸ್ಕೃತಿ ಕಥೆಯನ್ನು ಕೇಳದೆ ಅವರಿಗೆ ತಿಳಿ ಹೇಳಿ ಮತ್ತು ಹಬ್ಬ ಆಚರಿಸಿ. ಜಲಕ್ರೀಡೆ, ಬಣ್ನ ಎರಚುವ ಹಬ್ಬ ನಮ್ಮ ಸಂಸ್ಕೃತಿ ಎಂದು ನಂಬಿ ಖುಷಿಯಿಂದ ಆಟವಾಡಿ. ನನ್ನ ಗೆಳೆಯ ಮಹೇಶ್ ಹೇಳುತ್ತ ಇದ್ದ, ಬಾಗಲಕೋಟೆಯಲ್ಲಿ ಇದನ್ನು ೧ ವಾರ ಆಚರಣೆ ಮಾಡುತ್ತಾರೆ. ನೀವು ಒಂದು ದಿನ ಅದರೂ ಮಾಡಬೇಕು ಅಲ್ವಾ ?

2 comments:

makara said...

ರಾಜಕುಮಾರ್ ಅವರ ಕಾಮಣ್ಣನ ಮಕ್ಕಳು ಏಕೆ? ಅವರ ೧೯೭೨ರಲ್ಲಿ ಬಂದ ದೂರದ ಬೆಟ್ಟ ಸಿನಿಮಾದಲ್ಲೂ ಕೂಡ ಕಾಮನ ಹಬ್ಬದ ಆಚರಣೆಯ ಹಾಡಿದೆ. ನಿಮ್ಮ ಈ ಲೇಖನ ನನ್ನನ್ನು ೨೫ವರ್ಷಗಳ ಹಿಂದಿನ ಧಾರವಾಡದ ನಮ್ಮ ಕಾಲೇಜಿನ ದಿನಗಳಿಗೆ ಕರೆದೊಯ್ದಿತು.
ಲೇಖನಕ್ಕೆ ಧನ್ಯವಾದಗಳ್ಯ್.

Anonymous said...

ಉತ್ತಮವಾದ ಲೇಖನ. ಹೀಗೆ ಬರೆಯುತ್ತೀರಿ.
- ಷಡಕ್ಷರಿ.