Sunday, October 04, 2009

ಕರ್ನಾಟಕದಲ್ಲಿ ನೆರೆ -ಮುಂದೇನು ??


ಹಿಂದೆಂದೂ ಕಂಡಿರದ ನೆರೆ ಪ್ರವಾಹ ನಮ್ಮ ರಾಜ್ಯವನ್ನು ಕಾಡುತ್ತಿದೆ, ಇಲ್ಲಿಯವರೆಗೆ ೨೦೦ಕ್ಕೂ ಹೆಚ್ಚು ಪ್ರಾಣ ಹಾನಿ ಆಗಿದೆ, ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ.

ಉತ್ತರ ಕನ್ನಡ,ಧಾರವಾಡದಲ್ಲಿ,ಹಾವೇರಿ ಜಿಲ್ಲೆಯಲ್ಲೂ ನಾಳೆ ಅತಿಯಾದ ಮಳೆ( ೩೨ mm ಕ್ಕಿಂತ ಹೆಚ್ಚು), ನಾಳಿದ್ದು ೧೧+ ಕ್ಕಿಂತ ಹೆಚ್ಚು,ಆಚೆ ನಾಳಿದ್ದು ೯mm ಕ್ಕಿಂತ ಹೆಚ್ಚು ಹೀಗೆ ಸತತವಾಗಿ ೫ ದಿನ ಮಳೆ ಬೀಳುತ್ತಲೆ ಇರುತ್ತದೆ. ಅದ್ದರಿಂದ ಇದರ ತೀವ್ರತೆ ಇನ್ನು ಹೆಚ್ಚಬಹುದು. ಎಲ್ಲೊ ಕ್ಯಾಟರೀನ, ಸುನಾಮಿ ಆದರೆ ಇಲ್ಲಿ ಚಂದಾ ಎತ್ತುವ ನಮ್ಮ ರಾಜ್ಯದ ಸಂಸ್ಥೆಗಳು ಇದನ್ನು ಗಮನಿಸಿಲ್ಲ, ಇನ್ನು ಆಂಗ್ಲ ಮಾಧ್ಯಮಗಳು ಕೂಡ ಇದನ್ನು ದೊಡ್ಡ ಸುದ್ದಿ ಮಾಡದೇ ಇದ್ದಾರೆ.

ಇವತ್ತು ಆಗಬೇಕಾಗಿರುವುದು ಎನು ?



ಇದನ್ನು 3R ಅನ್ನಬಹುದು , ೧)Rescue 2) Relief 3) Rebuild.

Rescue ( ರಕ್ಷಣೆ)
ಮೊದಲು ಇದರಲ್ಲಿ ಸಿಕ್ಕಿ ಹಾಕಿಕೊಂಡವರ ಜೀವ ಉಳಿಸಬೇಕು, ಇದಕ್ಕೆ ಎಲ್ಲಾ ರೀತಿಯ ನೆರವನ್ನು ಪಡೆಯಬೇಕು. ಇದರಲ್ಲಿ ಹೆಚ್ಚ್ಜು ಸಹಾಯ ಆಗೋದು, ಮಿಲಿಟರಿ ಮತ್ತು ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು. ಮುಖ್ಯವಾಗಿ ಜಲಾವೃತ ಆಗಿರುವ ಹಳ್ಳಿಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಬೇಕು. ಇಲ್ಲದಿದ್ದಲ್ಲಿ ಗುಡಿಸಲು ಬಿದ್ದು ಹೆಚ್ಚು ಸಾವು ನೋವು ಆಗುತ್ತದೆ

Relief( ಸಹಾಯ)
ನೆರೆ ಬಂದಾಗ ಅದು ರೋಗಗಳ ಅಗರ ಆಗುತ್ತದೆ, ಮುಖ್ಯವಾಗಿ ಎಲ್ಲೆಲ್ಲೂ ನೀರಿದ್ದರು ಕುಡಿಯಲು ಆಗುವದಿಲ್ಲ. ಅದ್ದರಿಂದ ನೀರು ಮತ್ತು ಅಲ್ಲಿಯ ಜನ ತಿನ್ನಲು ಅನಕೂಲ ಮತ್ತು ಹೆಚ್ಚು ದಿನ ಉಳಿಯುವ ಆಹಾರ ಕೊಡಬೇಕು. ಇವತ್ತು ಅಲ್ಲಿ ಜನರಿಗೆ ಅಕ್ಕಿ,ಗೋದಿ ಕೊಟ್ಟರೆ ಅಲ್ಲಿ ಅಡಿಗೆ ಮಾಡಿಕೊಳ್ಳಲು ಪಾತ್ರೆಗಳಿಲ್ಲ. ಅದ್ದರಿಂದ ತಿಂಡಿ ಪೊಟ್ಟಣಗಳನ್ನು ಕಳಿಸುವಾಗ ಹುಶಾರಾಗಿ ಇರಬೇಕು.

Rebuild( ಮರುನಿರ್ಮಾಣ)
ಮನೆ ಜೀವನ ನೆಲೆಸಮ ಆದ ಹಳ್ಳಿಗಳನ್ನು ಕಾಲಕ್ರಮೇಣ ಮರು ಕಟ್ಟಬೇಕು. ಮುಂದೆ ಪ್ರವಾಹ ಜಾಗದಿಂದ ಸ್ವಲ್ಪ ದೂರ ಇದ್ದರೆ ಅನಕೂಲ. ಶಾಲೆಗಳು, ಶೌಚಾಲಯ ಇವುಗಳಿಗೆ ಹೆಚ್ಚು ಗಮನ ಕೊಡಬೇಕು.



ಆಯ್ಕೆಯಾದವರು ಎನು ಮಾಡಬೇಕು...

೧) ಕಾಂಗ್ರೆಸ್, ಜೆಡಿಎಸ್ ಪಕ್ಷಭೇದ ಮರೆತು ನೆರೆವಿನ ಕೆಲ್ಸದಲ್ಲಿ ಸರ್ಕಾರದ ಜೊತೆ ನಿಲ್ಲಬೇಕು. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಧನವನ್ನು ಹೆಚ್ಚು ತರಬೇಕು. ಹಿಂದೆ ಮ.ರಾ, ಆಂಧ್ರಗೆ ಕೊಟ್ಟ ಹಾಗೆ ..

೨) ಇವತ್ತು ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ತಲುಪುವ ಹಾಗೆ ಮಾಡಬೇಕು. ಇದು ಉತ್ತಮ ಅವಕಾಶ ಎಲ್ಲಾ ನಾಯಕರಿಗೂ ಗ್ರಾಮವಾಸ್ತವ್ಯ ಹೂಡಲು. ಎಲ್ಲರೂ ಅಲ್ಲಿ ತಂಗಿ , ನಿಂತು ಕೆಲ್ಸಗಳನ್ನು ನೋಡಿಕೊಳ್ಳಬೇಕು.

೩) ಇದೇ ಹಬ್ಬ ಅಂತ ಚೆನ್ನಾಗಿ ತಿನ್ನುಭಾಕರ ಕೈಗೆ ಈ ನೆರವಿನ ಕೆಲಸ ಸಿಗದೇ, ಪ್ರತಿ ಜಿಲ್ಲೆ,ತಾಲೂಕಿನಲ್ಲಿ ಸಂಸ್ಥೆಗಳು ಅದರಲ್ಲು ಕನ್ನಡ ಸಂಘಟನೆಗಳು ಹಿಂದೆ ಮಾಡಿದ ಹಾಗೆ ವ್ಯವಸ್ಥೆಯನ್ನು ಸರಿಯಾದವರಿಗೆ ಸಿಗುವ ರೀತಿ ನೋಡಿಕೊಳ್ಳಬೇಕು.


೪) ಪರರಾಜ್ಯದಿಂದ ನೆರವು ಬರಬಹುದು, ಅದಕ್ಕೆ ಮೊದಲೇ ತೆಗೆದುಕೊಳ್ಳುವ ಮತ್ತು ನಮಗೆ ಬೇಕಾದ ನೆರವನ್ನು ಅವರಿಗೆ ತಿಳಿಪಡಿಸಬೇಕು.

೫) ಸರ್ಕಾರ ಸಾರ್ವಜನಿಕರಲ್ಲಿ ವಿನಂತಿ ಮಾಡಿ, ಜನರು ಇದಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ಪ್ರಕಟಣೆ ಮಾಡಬೇಕು.
ಒಂದು ವ್ಯವಸ್ಥೆ ಇಲ್ಲದಿದ್ದರೆ ಬಹಳ ಕಷ್ಟ ಆಗುತ್ತದೆ, ಆದ್ದರಿಂದ ಸರಕಾರದ ಒಂದು ವಾಹಿನಿ ಮಾಡಿ ಅದರ ಮೂಲಕ ನಿಗ್ರಹಣೆ ಮಾಡಬೇಕು.

೬) ಸರ್ಕಾರ ಇ ಕೆಲ್ಸಗಳಿಗೆ ಯಾವ ಸಂಸ್ಥೆಗಳ ಸಹಾಯಬೇಕೆಂದೆ ಬಾಯಿಬಿಟ್ಟು ಕೇಳಿ, ಅವರಿಗೆ ಒಂದೊಂದು ಜವಾಬ್ದಾರಿ ಕೊಡಬೇಕು.

೬) ದುಂದುವೆಚ್ಚದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿ, ಆ ದುಡ್ಡು ಇದಕ್ಕೆ ಹರಿಯಬೇಕು.

೭) ಮಠಗಳು ಜನರಿಗೆ ಆಶ್ರಯ ಕೊಡಬೇಕು ಮತ್ತು ಆಹಾರ,ನೆಲೆ ಜವಾದ್ಬಾರಿ ತೆಗೆದುಕೊಳ್ಲಬೇಕು.

೮) ಸರಕಾರಿ ಅಧಿಕಾರಿಗಳ ರಜೆ ವಜಾ ಮಾಡಿ,ಎಲ್ಲರೂ ಕಾರ್ಯಚರಣೆಗೆ ತಯಾರು ಇರುವ ಹಾಗೆ ಇರಬೇಕು.

೭) ಮುಖ್ಯವಾಗಿ ಮುಂದೆ ಈ ಮಟ್ಟದ ಹಾನಿಯನ್ನು ತಡೆಯುವ ಕ್ರಮಕ್ಕೆ ಮುಂದಾಗಬೇಕು. ಇದು ಯಾವಾಗಲೂ ನೆರೆ ಸಂತ್ರಸ್ಥರ ಪರಿಹಾರ ಆಗದೇ, ನೆರೆ ಸಮಸ್ಯೆಯ ಪರಿಹಾರ ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬರುವ ಮುಂಚೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಧ್ಯಾನ,ಶವಾಸನ ಅಂತ ಸಮಯ ಹಾಳು ಮಾಡದೆ

3 comments:

Me, Myself & I said...
This comment has been removed by the author.
ಪವ್ವಿ said...

ಲೋದ್ಯಾಶಿ,
ಮೂರ್ತಿ ವಿಷಯಕ್ಕೆ ಬಂದಾಗ ಎಲ್ಲ ಪತ್ರಿಕೆಗಳು,ಮಾಧ್ಯಮಗಳು ಇದಕ್ಕೆ ಮುಂದಾಗಿದ್ದವು, ಆಗ ಸರಕಾರ ತೋರಿದ ಕಳಕಳಿ ಮತ್ತು ಮುನ್ಸೂಚನೆ ಇಂದ ಮಾಡಿದ ಬಂಧನ ಇದೇ ಹವಾಮಾನ ಮುನ್ಸೂಚನೆ ಪಡೆದು ಮಾಡಿದ್ದರೆ ಸ್ವಲ್ಪ ಮಟ್ಟಿಗೆ ಹಾನಿ ತಪ್ಪುತ್ತ ಇತ್ತು. ಅದರ ಬದಲು ಯೋಗಾಸನ ಮಾಡಿಕೊಂಡು, ಊರು ಕೊಳ್ಳೆ ಹೋಡೆಸಿಕೊಂಡ ಮೇಲೆ ಬಾಗಿಲು ಹಾಕುವ ಕ್ರಮ, ಬೇಟಿ ಇದು ಆಡಳಿತದ ಪರಿಯನ್ನು ತೋರಿಸುತ್ತದೆ.

ಈಗ ಆಗಬೇಕಾಗಿರುವುದು ಮತ್ತು ಮಾಡಬೇಕಾಗಿರುವುದು ಬರಿ ಆಡಳಿತ ಯಂತ್ರ ಅಷ್ಟೆ. ಜನ ಚಂದಾ ಎತ್ತಿ ಒಂದಿಬ್ಬರಿಗೆ ಕೊಟ್ಟು ತಾವು ಎನಾದರೂ ಮಾಡಿದೆವು ಅಂತ ಬೀಗಬಹುದೆ ವಿನಹ ಅದು ನಿಜವಾದ ಪರಿಹಾರವಲ್ಲ.
ಕೇಂದ್ರ ಇಲ್ಲ ವಿದೇಶದಿಂದ ಹಣವನ್ನು ತಂದು ಅದನ್ನು ಸಮರ್ಪಕವಾಗಿ ಬಳಸಿ , ಹಣ ಪೋಲಾದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲೆ ಇದೆ. ೨ ಜಿಲ್ಲೆಗೆ ಹಾನಿಯಾದ ಆಂದ್ರಕ್ಕೆ ಆ ಮಟ್ಟಿಗೆ ದುಡ್ಡು ಕೊಟ್ಟಿದ್ದನ್ನು ಪ್ರಶ್ನಿಸಿ ಇದನ್ನು ವಿರೋಧಿಸುವ ಕೆಲಸಕ್ಕೆ ನಮ್ಮ ಎಂ.ಪಿಗಳು ಮುಂದಾಗಬೇಕು, ಆಯ್ಕೆ ಆಗಿರುವ ಜನ ತಮ್ಮ ಕೆಲ್ಸ ನಿಬಾಯಿಸಿದರೆ ಸಾಕು.

ಸರಕಾರ ಖಾಸಗಿಯವರನ್ನು ಆಗತ್ಯ ಬಿದ್ದರೆ ಬಳಸಿಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಗಲ್ಲಿ,ಗಲ್ಲಿಯಲ್ಲಿ ಚಂದಾ ಎತ್ತಿ ಇಲ್ಲಿಂದ ಚಿತ್ರಾನ್ನವನ್ನು ಕಟ್ಟಿಸಿಕೊಂಡು ಹೋಗಿ ಅಲ್ಲಿ ಹಂಚೋ ಒಳಗೆ ಅದು ಹಳಸಿಹೋಗಿರುತ್ತದೆ.

ಸರಕಾರವೇ ಕೆಲ ಸಂಘಟನೆಗಳು ಆಗಿರುವಾಗ,ಚಂದಾ ಎತ್ತದೆ ಬರುವ ಹಣವನ್ನು ಯಾವ ರೀತಿ ಬಳಕೆ ಮಾಡಬೇಕು ಎಂದು ಕರಡು ಪ್ರತಿ ಮಾಡಿಕೊಟ್ಟರೆ ಸಾಕು ಆ ಸಂಘಟನೆಗಳು "ಸಾರ್ವಜನಿಕ ಜೀವನದಲ್ಲಿ ನಾಯಕರು ಎನು ಮಾಡಬೇಕೆಂದು ಭೋದಿನೆ ಮಾಡಿದಕ್ಕೆ ಸಾರ್ಥಕ ಆಗುತ್ತದೆ.
ಈ ಭೋಧನೆ ಪಡೆದಿರುವ ನಾಯಕರಿಗೆ ಇದು ಸತ್ವ ಪರೀಕ್ಷೇ. ಬೆಳ್ಳಿ ಕಿರಟ ಹಾಕಿಸುಕೊಳ್ಳುವ ಸಮಯವಲ್ಲ ಅಲ್ವೇ ?

Me, Myself & I said...
This comment has been removed by the author.