Wednesday, June 14, 2006

ಜಾತಕದಲ್ಲಿ ಏನಿದೆ ??

ನನಗೆ ಬಹಳಷ್ಟು ಬಾರಿ ಈ ಪ್ರಶ್ನೆ ಮೂಡಿ ಬಂದಿದೆ, ಆದರೆ ಉತ್ತರ ಮಾತ್ರ ದೊರಕಿಲ್ಲ. ನನ್ನ ಜಾತಕವನ್ನು ನಾನೇ ಬರೆಯಲು ಪ್ರಯತ್ನಿಸಿದೆ, ಆದರೆ ದಾರಿ ತಪ್ಪಿ ಕೈಬಿಟ್ಟೆ. ಯಾವುದೇ ಶುಭ ಸಮಾರಂಭಗಳನ್ನು ಮಾಡುವಾಗ ಜಾತಕ ದೂಳಿನಿಂದ ಎದ್ದು ಬರುತ್ತದೆ. ಅದರಲ್ಲಿ ನಮ್ಮ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಅಂತ ಹಿರಿಯರ ಅಂಬೋಣ.

ಮುಖ್ಯವಾಗಿ ಜಾತಕದ ಕಥೆ ಹೆಚ್ಚು ಕೇಳಿಬರುವುದು ಮದುವೆಯ ಪ್ರಸ್ತಾಪ ಬಂದಾಗ, ಹುಡುಗಿಯ ಮತ್ತು ಹುಡುಗನ ಜಾತಕವನ್ನು ತಾಳೆ ಮಾಡಿ, ಗುಣಾಕಾರ ಭಾಗಕಾರ ಮಾಡಿ ಒಂದು ಸಂಖ್ಯೆ ಕೊಡುತ್ತಾರೆ, ಒಂದು ಸಂಭಂದ ಆಗಬೇಕಾದರೆ ೩೨ ಗುಣಗಳಲ್ಲಿ ಕನಿಷ್ಠ ೧೮ ಗುಣಗಳು ಕೂಡಿಬರಬೇಕು ಎಂದು ಹೇಳುತ್ತಾರೆ. ಹೆಚ್ಚು ಗುಣಗಳು ಬಂದಷ್ಟೂ ಹೆಚ್ಚು ವರಸಾಮ್ಯವಿರುತ್ತದೆ.

ಒಂದು ಜಾತಕ ಆಗುವುದು ಅನೇಕ ವಿಷಯದ ಮೇಲೆ, ಅಂದರೆ ಹುಟ್ಟಿದ ದಿನ, ದಿನಾಂಕ, ಸಮಯ, ಅಕ್ಷಾಂಶ,ರೇಖಾಂಶ ಮತ್ತು ನಕ್ಷತ್ರದ ಮೇಲೆ ಅವಲಂಭಿತವಾಗಿರುತ್ತದೆ. ಕೆಲವರು ಹುಟ್ಟಿದ ತಪ್ಪೊ ಎನೊ ಅವರೊಂದಿಗೆ ಕೆಲ ಪಾಪಗಳನ್ನು ಹೊತ್ತುಕೊಳ್ಳುತ್ತಾರೆ, ಅಂದರೆ ಈ ನಕ್ಷತ್ರದಲ್ಲಿ ಹುಟ್ಟಿದರೆ ಹೀಗೆ ಅಂತ. ಅದಕ್ಕೆ ತಕ್ಕ ಹಾಗೆ ಮಾಡಬೇಕು, ಮಾಡದಿದ್ದರೆ ಅವಘಡ ತಪ್ಪಿದ್ದಲ್ಲ ಅಂತ. ನಮ್ಮ ಜನರು ಯಾಕೆ ಸುಮ್ಮನೆ RIsk ಅಂತ ಅದನ್ನು ಪಾಲಿಸುತ್ತ ಬಂದಿದ್ದಾರೆ.

ಹಾಗಿದ್ದರೆ ಒಂದು ಸಂಭಂದ ಜಾತಕದ ಮೇಲೆ ನಿಂತಿರುತ್ತದೆಯೇ??

ಖಂಡಿತ ಇಲ್ಲಾ, ಮದುವೆಯ ಸಂಭಂದ ಹಾಗೆ ನಿಂತಿದ್ದರೆ, ಇಂದು ೩೨ ಗುಣಗಳು ಕೂಡಿದವರು ಡೈವರ್ಸ್‍ಗೆ ಅರ್ಜಿ ಹಾಕುತ್ತ ಇರಲಿಲ್ಲ, ಹಾಗೇಯೆ ೧೫ ಗುಣಗಳು ಕೂಡಿದವರು ನೆಮ್ಮದಿಯಿಂದ ಬಾಳುತ್ತ ಇರಲಿಲ್ಲ. ಒಂದು ತತ್ವ ಒಂದು ಸಮುದಾಯಕ್ಕೆ ಸೀಮಿತವಾದರೆ ಅದಕ್ಕೆ ಅರ್ಥವಿಲ್ಲ, ಜಗತ್ತಿನ್ನ ೯೫% ಜನರು ಇದನ್ನು ಪಾಲಿಸುವದಿಲ್ಲ, ಆ ಜನರು ಇಂದು ನೆಮ್ಮದಿಯಿಂದ ಸಂಸಾರ ಮಾಡುತ್ತ ಇಲ್ಲವೇ ??.

ಹಾಗೇಯೂ ಮದುವೆಯ ಸಂಭಂದ ಹಣೆಬರಹ ಜಾತಕದ ಮೇಲೆ ನಿಂತಿದ್ದರೆ, ನಿಜವಾಗಿಯೂ ಜಾತಕ ನೋಡಬೇಕಾಗಿರುವುದು
ಹುಡುಗಿ ಮತ್ತು ಹುಡುಗನ ಅಮ್ಮನ ಜಾತಕವನ್ನು. ಯಾಕೆಂದರೆ ಮುಕ್ಕಾಲು ಜಗಳ ಮತ್ತು ಮನಸ್ಥಾಪ ಬರುವುದು ಇವರ ಮಧ್ಯೆ ತಾನೇ ??.

ಹಾಗಿದ್ದರೆ ಮದುವೆ ಯಾವುದರ ಮೇಲೆ ನಿಂತಿದೆ, ಏನು ತೋರಿಸಬೇಕು.

ಹುಡುಗ ಮತ್ತು ಹುಡುಗಿ ತಮ್ಮ ಸಂಪೂರ್ಣ(Master Health Checkup) ಆರೋಗ್ಯ ತಪಾಸಣೆ ಮಾಡಿಸಿ ಅದರ ಒಂದು ವರದಿಯನ್ನು ಪಡೆಯಬೇಕು. ಹುಡುಗನ ಆರೋಗ್ಯದ ವರದಿಯನ್ನು ಹುಡುಗಿಯು ತನ್ನ family doctor ಹತ್ತಿರ ತೋರಿಸಲಿ, ಹಾಗೇಯೆ ಹುಡುಗ ಕೂಡ. ಆಗ ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇಯೆ ಎನು ತಪ್ಪು ಮಾಡಿರದ ಮುಂದಿನ ಪೀಳಿಗೆಗೆ ಅವರ ರೋಗಗಳನ್ನು ಅನುವಂಶಿಯತೆ ಮೂಲಕ ಕೊಡುವದನ್ನು ತಡೆಯಬಹುದು.
ಇದನ್ನು ನಮ್ಮ ಸರ್ಕಾರ ಖಡ್ಡಾಯಗೊಳಿಸಬೇಕು, ಅರ್ಥವಿಲ್ಲದ ಜಾತಕ ನೋಡುವದನ್ನು ಬಿಟ್ಟು ಕ್ರಿಯಾತ್ಮಕ ಕೆಲಸವನ್ನು ನಾವು ಮಾಡೋಣ. ಎನಂತಿರೀ ????

Thursday, May 25, 2006

Councelling(ಮಾರ್ಗದರ್ಶನ) ಅವಶ್ಯಕತೆ .....




ಪಿ.ಯು.ಸಿ ಫಲಿತಾಂಶದ ನಂತರ ಬೆಂಗಳೂರಿನಲ್ಲೇ ಸುಮಾರು ೧೦-೧೨ ಆತ್ಮಹತ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಜಕ್ಕೂ ಮನಸ್ಸಿಗೆ ಆ ಸುದ್ದಿಗಳನ್ನು ಕೇಳಿ ಪಿಚ್ಚು ಅನಿಸುತ್ತದೆ. ಯಾಕೆ ಬದುಕಿ ಬಾಳಬೇಕಾದ ಹೂವುಗಳು ಹೀಗೆ ಮಾಡಿಕೊಂಡವು ಅಂತ ಬೇಸರವಾಗುತ್ತದೆ. ಪಿ.ಯು.ಸಿ ಹೋಯಿತು ಅಂದರೆ ಜೀವನ ಮುಳುಗಿ ಹೋಗಿಲ್ಲ, ಇಂದು ಅನೇಕ ವೃತ್ತಿಗಳನ್ನು ತೆಗೆದುಕೊಳ್ಳಬಹುದು. ಅದರಲ್ಲಿ INTERIOR DESIGNING ಪ್ರಮುಖವಾದುದು.

ಇದಕ್ಕೆ ಪೂರಕವಾಗಿ ಪದವಿ ಮುಗಿಸಿ ಕೆಲಸವನ್ನು ಅರಿಸುವ ಜನರು, ಕೆಲಸ ಸಿಗಲಿಲ್ಲ ಅಂತ ಗೊತ್ತಾದರೆ ಬೇಗ ಮನೋವೈಫಲ್ಯಕ್ಕೆ ಈಡಾಗಿ ಆತ್ಮಹತ್ಯಗೆ ಶರಣಾಗುತ್ತಾರೆ. ಅನೇಕ ಕಡೆ ನಿಮಗೆ ಕೇಳಿರಬಹುದು ನಮ್ಮವರಿಗೆ ಕೆಲಸ ಸಿಗುತ್ತಿಲ್ಲ ಅಂತ, ಆದರೆ ಒಬ್ಬರು ಯಾಕೆ ಸಿಗುತ್ತ್ತಿಲ್ಲ, ಚಿಕ್ಕ ಊರುಗಳಿಂದ ಬಂದವರಿಗೆ ಎನು ತರಬೇತಿ ಕೋಡಬೇಕು ಎಂಬುದರ ಬಗ್ಗೆ
ಯೋಚಿಸದೆ ಇದ್ದಾಗ, ಎಲೆ ಮರೆಕಾಯಿಯಾಗಿ ಇದಕ್ಕ್ಕೆ ಕೆಲಸ ಮಾಡುತ್ತಿರುವ ಬನವಾಸಿ-ಬಳಗಕ್ಕೆ ಅಭಿನಂದನೆ ಸಲ್ಲಿಸಬೇಕು.

ಬೆಂಗಳೂರಿಗೆ ಬಂದು ಉದ್ಯೋಗವನ್ನು ಅರಸುವ ಕನ್ನಡಿಗರಿಗೆ ವೃತ್ತಿ ಮಾರ್ಗದರ್ಶನ ಮಾಡಿ, ನಮ್ಮ ಜನರಿಗೆ ಕೆಲಸ ಸಿಗಲು ಬನವಾಸಿ ಬಳಗ ದುಡಿಯುತ್ತಲೆ ಇದೆ. ಇಲ್ಲಿಯವರೆಗೆ 7 ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿ ಸುಮಾರು ೧೦೦+ ಜನರಿಗೆ ಕೊಡಿಸಲು ನೆರವಾಗಿದೆ. ಈ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ೫೦೦+ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಇದರಲಿ ಬಿ.ಇ, ಬಿ.ಕಾಂ, ಬಿ.ಎಸ್ಸಿ ಪದವಿಯನ್ನು ಪಡೆದ ಅನೇಕ ಪದವಿಧರರು ಇದ್ದಾರೆ. ಕರ್ನಾಟಕದ ಪ್ರತಿ ಜಿಲ್ಲೆಗೂ ಈ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗುವುದು ಅವರ ಆಸೆ, ಇದಕೆ ಪೂರಕವಾಗಿ ಒಂದು ಕಾರ್ಯಕ್ರಮ ಮೈಸೂರಿನಲ್ಲಿ ನಡೆದಿದೆ.

೮ನೇ ವೃತ್ತಿ ಮಾರ್ಗದರ್ಶನದ ಆಹ್ವಾನಪತ್ರವನ್ನು ನಾನು ಇಲ್ಲಿ ಲಗತ್ತಿಸಿದ್ದೇನೆ. ಇದರ ಜೊತೆಗೆ ಇಂದಿನ ಪಿ.ಯು.ಸಿಯಲ್ಲಿ ನೊಂದವರಿಗೆ councelling ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರೆ ಒಳ್ಳೆಯದು.

(ಚಿತ್ರಗಳು ಕೃಪೆ:- ಬನವಾಸಿ ಬಳಗ)

ಗೋ...........................ಲ್


"go ಜರ್ಮನಿ" ಇದು ಜಗತ್ತಿನ ಎಲ್ಲಾ ಫುಟ್ಬಾಲ್ ಪ್ರಿಯರ ವಾಕ್ಯ, ಭಾರತದಲ್ಲಿ ಫುಟ್ಬಾಲ್ ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ವಿಶ್ವ ಕಪ್ ಬಂದರೆ ಸಾಕು
ನಮ್ಮ ಮನ-ಮನೆಗಳಲ್ಲಿ ಫುಟ್ಬಾಲ್ ಹಾಸುಹೊಕುತ್ತದೆ. ಮನೆಯಲ್ಲಿ ಒಬ್ಬರು ಒಂದು ತಂಡವನ್ನು ಬೆಂಬಲಿಸಿದರೆ ಇನ್ನೊಬ್ಬರು ಇನ್ನೊಂದು ತಂಡವನ್ನು ಬೆಂಬಲಿಸಿ ಮನೆಯೇ ಒಂದು ಮೈದಾನ ಆಗುತ್ತದೆ.
ನನಗೆ ವಿಶ್ವಕಪ್ ಫುಟ್ಬಾಲ್ ಬಹಳ ಹಿಂದಿನ ಪರಿಚಯ, ನಾನು ನೋಡಲು ಶುರು ಮಾಡಿದ್ದು ೧೯೮೬ ವಿಶ್ವಕಪ್‍ನಿಂದ. ಆಗ ನಮ್ಮ ಮನೆಯಲ್ಲೇ ಎರಡು ಬಣ ಆಗಿತ್ತು,ಒಂದು ಬಣ ಅರ್ಜೇಂಟಿನಾಗೆ ಬೆಂಬಲ ನೀಡಿದರೆ ಇನ್ನೊಂದು ಪಶ್ಚೀಮ ಜರ್ಮನಿಗೆ ಬೆಂಬಲ ಕೊಟ್ಟರು.
ಆ ವಿಶ್ವಕಪ್ ನನಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸಿತು. ಮರಾಡೋನ ಆಟ ನೋಡಿ ನಾವು ಎಷ್ಟು ಪ್ರಭಾವಿತರಾಗಿದ್ದಿವಿ ಅಂದರೆ ಅಂದು ಕ್ರಿಕೆಟ್ ಆಟದ ಚೆಂಡಿನಲ್ಲಿ ನಾವು ಫುಟ್ಬಾಲ್ ಆಡಿದ್ದೆ ಆಡಿದ್ದು.
ಇನ್ನೂ ಫುಟ್ಬಾಲ್ ಇತಿಹಾಸದಲ್ಲಿ ಎಂದು ಮರೆಯಲಾಗದ ಪಂದ್ಯವೆಂದರೆ ಕ್ವಾಟರಫೈನಲ್ಸ್‍ನ ಅರ್ಜೇಂಟಿನಾ ಮತ್ತು ಇಂಗ್ಲೆಡ್ ಪಂದ್ಯ. ಆ ಪಂದ್ಯದಲ್ಲಿ ಮರಾಡೊನ ಗೋಲ್ ಯಾರು ತಾನೇ ಮರೆಯಲೂ ಸಾಧ್ಯ.
೨-೧ ಅಂತರದಲ್ಲಿ ಪಂದ್ಯವನ್ನು ಗೆದ್ದ ಅರ್ಜೇಂಟಿನಾ ತಾನೂ ವಿಶ್ವಚಾಂಪಿಯನ್ ಎಂದೂ ಸಾಬೀತು ಪಡಿಸಿತ್ತು.
ಅಲ್ಲಿಂದ ನನ್ನ ಬೆಂಬಲ ಅರ್ಜೇಂಟಿನಾಗೆ ಮೀಸಲಾಗಿತ್ತು.

೧೯೯೦ರ ಇಟಾಲಿಯಾ ಸಮಯದಲ್ಲಿ ಮೊದಲ ಪಂದ್ಯದಲ್ಲಿ ಕ್ಯಾಮರೂನ್ ಎದುರು ಸೋತು ಸುಣ್ಣವಾದಾಗ ಬೇಸರ ಹೊಂದಿದ ಅನೇಕರಲ್ಲಿ ನಾನು ಒಬ್ಬ.ಆ ಸಮಯದಲ್ಲಿ ಇಟಲಿ ಆಟ ನೋಡಿ ನನ್ನ ಬೆಂಬಲ ತಂಡಗಳಲ್ಲಿ ಇಟಲಿಯನ್ನು ಸೇರಿಸಿಕೊಂಡಿದ್ದೆ.
ಆದರೆ ವಿಶ್ವಕಪ್‍ನಲ್ಲಿ ಡಾರ್ಕಹಾರ್ಸ್ ತರ ಬಂದ ಕ್ಯಾಮರೂನ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ರೊಜರ್ ಮಿಲ್ಲಾ ಆಟವನ್ನು ಯಾರು ತಾನೇ ಮರೆಯಲು ಸಾದ್ಯ?,
ಕೊಲಂಬಿಯ ಗೋಲ್ಕೀಪರ್ ಮಾಡಿದ ನಗೆಪಾಟಿಲಿನಲ್ಲಿ ಗೆದ್ದ ರೊಜರ್ ಮಿಲ್ಲ ತಮ್ಮ ತಂಡವನ್ನು ಕೊನೆಯ ೮ರ ಸುತ್ತಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ೧೯೮೬ ಗೋಲ್ಡನ್ ಬುಟ್ ವಿಜೇತ ಗ್ಯಾರಿ ಲಿನ್ಕರ್ ಮತ್ತು ಗಜ್ಜಾ(gasgoni)ಸಹಾಯದಿಂದ ಕ್ಯಾಮರೂನ್ ಪಂದ್ಯ
ಸೋತರು ನಮ್ಮ ಮನದಲ್ಲಿ ಸದಾ ನೆಲಸಿದರು.

ಮುಂದಿನ ವಿಶ್ವಕಪ್‍ಗಳಲ್ಲಿ ನಾನು ಬೆಂಬಲಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಲಿಲ್ಲ,ಬ್ಯಾಟಿಸ್ಟುಟಾ,ಆರ್ಟೆಗೋ ಮುಂತಾದ ಆಟಗಾರರನ್ನು ಹೊಂದಿದ್ದು ಅರ್ಜೇಂಟಿನಾ ಅಂದುಕೊಂಡ ಹಾಗೆ ಆಡಲಿಲ್ಲ.
ಬ್ರೆಜಿಲ್ ಮೈಲುಗೆ ಪ್ರಭಲವಾಗಿ ಇತರರ ಆಟ ಕೇವಲ ನೀರಸವಾಗಿ ಕಂಡಿತು. ಈ ಬಾರಿ ನನ್ನ ಮೆಚ್ಚಿನ ತಂಡಗಳು ಉತ್ತಮ ಪ್ರದರ್ಶನ ನೀಡುತ್ತವೆ ಎಂದು ನಾನು ನಂಬಿದ್ದೇನೆ.
ಆದರೆ ಒಂದು ಆಟಗಾರನ ಮೇಲೆ ಅವಲಂಬಿತರಾಗಿರುವ ತಂಡಗಳು ಪೆಟ್ಟು ಅನುಭವಿಸುವುದು ಸರ್ವೆಸಾಮಾನ್ಯ. ಆದರೆ ಬ್ರೆಜಿಲ್ ತಂಡ ನೋಡಿದರೆ ಒಬ್ಬರನ್ನು ಇನ್ನೊಬ್ಬರು ಅಷ್ಟೆ ಪ್ರಭಾವಶಾಲಿಯವರು ಬದಲಾಯಿಸುತ್ತಾರೆ.
ಕ್ರೆಸ್ಪೊ,ಐಮಾರ್,ಡೆಲೆಸ್ಯಾನ್ಡ್ರೊ ಮುಂತಾದ ಅನುಭವಿ ಆಟಗಾರರು ಇದ್ದರೂ ಅರ್ಜೇಂಟಿನಾ ಬ್ರೆಜಿಲ್ ಎದುರೂ ಸಪ್ಪೆ ಆಗುತ್ತದೆ.

ಪ್ರತಿ ವಿಶ್ವಕಪ್‍ನಲ್ಲಿ ಹೆಚ್ಚು ಗೋಲ್ ಬಾರಿಸಿದವರಿಗೆ ಚಿನ್ನದ ಬೂಟ್ ಕೊಡುತ್ತಾರೆ, ೮೬ರಲ್ಲಿ ಗ್ಯಾರಿ ಲಿನ್ಕರ್ ಗೆದ್ದರೆ, ೯೦ ಶಿಲಾಚಿ,೯೪ ರಲ್ಲಿ ಸ್ಟೊಟಿಚಿಕೊವ್ ಮತ್ತು ಸಾಲೆನೆಕೊ , ೯೮ರಲ್ಲಿ ಡೆವಾನ್ ಸೂಕರ್,೦೨ರಲ್ಲಿ ರೊನಾಲ್ಡೊ ಗೆದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಆಟಗಾರರು ಒಬ್ಬರೇ ತಮ್ಮ ತಂಡದ ಯಶಸ್ಸಿಗೆ ಕಾರಣರಾದರು.

ಈ ಸಲದ ವಿಶ್ವಕಪ್‍ನಲ್ಲಿ ಯಾರು ಆ ಸ್ಥಾನವನ್ನು ಹೊಂದುತ್ತಾರೆ ಎಂದು ನಾನು ಕಾದು ಕುಳಿತಿರುವೆ. ಇನ್ನೂ ನೀವು ??