Friday, August 21, 2009

ಕರ್ನಾಟಕದ ಮತ್ತೊಂದು ಮರುಚುನಾವಣೆ-ವಿಶ್ಲೇಷಣೆ

ಕರ್ನಾಟಕದ ಮರುಚುನಾವಣೆ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ತಂದಿದೆ, ಜೆಡಿಎಸ್ ಬಿಟ್ಟರೆ ಎಲ್ಲಾ ಮತ್ತೊಮ್ಮೆ ಆತ್ಮಾವಲೋಕನ ಮತ್ತು ಚಿಂತನಾ ಸಭೆ ನಡೆಸಿ ಎಲ್ಲಿ ಎಡೆವಿದೆವೂ ಅಂತ ಪರಮರ್ಶೆ ಮಾಡಬೇಕಾಗಿದೆ. ಫಲಿತಾಂಶವನ್ನು ರಾಜಕರಣಿ ನೋಡಿದರೆ ಯೋಗಿರಾಜ್ ಭಟ್ಟರ ಡೈಲಾಗ್ ಹೋಡಿಬಹುದು, ಕನ್ನಡ ಜನರನ್ನು ಅರ್ಥ ಮಾಡಿಕೊಳ್ಳುವುದು ಕಷ್ತ. ಲೋಕಸಭೆಯಲ್ಲಿ ಕೊಟ್ಟ ಟ್ರೆಂಡಿಗೂ ಈ ಚುನಾವಣೆಯಲ್ಲಿ ಕೊಟ್ಟ ಟ್ರೆಂಡಿಗೂ ಅಜಗಜಾಂತರ ವ್ಯತ್ಯಾಸ ತಂದಿದೆ.

ಕ್ರಿಕೆಟ್ಟಿನಲ್ಲಿ ಧೋನಿ,ಗಂಭೀರ್,ಯುವರಾಜ್ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ ಅಂತ ಹೋಗಿ ಅವರೆಲ್ಲಾ ಡಕ್ ಹೊಡೆದು,ಇಶಾಂತ್ ಶರ್ಮ ಸೆಂಚುರಿ ಬಾರಿಸಿದರೆ ಆಗುವ ಶಾಕ್ ರಾಷ್ಟ್ರೀಯ ಪಕ್ಷಗಳಿಗೆ ಆಗಿದೆ. ತಾವೂ ಗೆದ್ದೆ ಗೆಲ್ಲುತ್ತೆವೆ ಅಂತ ಬೀಗಿದ ಕಡೆ ಸೋತು, ಸೋತರೂ ಓಕೆ ಅನ್ನೊ ಕಡೆ ಗೆದ್ದಿರುವುದು ಎಲ್ಲೊ ಅವರಿಗೆ ಖುಷಿ ಪಡಬೇಕೊ ಇಲ್ಲ ಬೇಜಾರು ಮಾಡ್ಕೊಬೇಕೊ ಅಂತ ತಿಳಿಯದಾಗಿದೆ.

ಎಕೋ ಹೀಗಾಯ್ತೋ ನಾನು ಕಾಣೆನೂ ...

ಜಾತಿ ಲೆಕ್ಕಾಚಾರ, ಅಭಿವೃದ್ದಿ ಮಂತ್ರ, ಮಠಾಧೀಪತಿಗಳ ಆಶೀರ್ವಾದ, ಲೋಕಸಬಾ ಚುನಾವಣೆ ಫಲಿತಾಂಶ, ಪಕ್ಷ ಹೊಂದಾಣಿಕೆ ಹೀಗೆ ಹತ್ತು ಹಲವಾರು ಅಂಶಗಳನ್ನು ಇಟ್ಟುಕೊಂಡೆ ಎಲ್ಲಾ ಪಕ್ಷಗಳು ಕಸರತ್ತು ಮಾಡಿದ್ದು, ಆದರೆ ಎಲ್ಲೊ ಒಂದು ಕಡೆ ಲೋಕಸಭಾ ಚುನಾವಣೆಯ ಫಲಿತಾಂಶ, ಹಿಂದಿನ ಅಂಕಿ ಅಂಶ ಅತಿಯಾಗಿ ಆತ್ಮವಿಶ್ವಾಸ ಬೆಳಸಿದ್ದವು. ಅದನ್ನು ಮತದಾರ ಸಾರಸಗಟಾಗಿ ಮುರಿದಿದ್ದಾನೆ. ಇವತ್ತಿನ ವಿದ್ಯಮಾನದಲ್ಲಿ ಪಕ್ಷಹೊಂದಾಣಿಕೆ ಬಹಳ ದೊಡ್ಡ ಅಂಶ ಆಗಿ ನಿಂತಿದೆ, ಬರೀ ಒಳ್ಳೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಸಾಲದು, ನಿಮ್ಮ ಎದುರಾಳಿಯ ಮತಗಳನ್ನು ಕಸಿಯುವ ಇನ್ನೊಬ್ಬನನ್ನು ಬೇರೆ ಪಕ್ಷದಿಂದ ಗೆಲ್ಲಿಸಬೇಕು, ಎಕೆಂದರೆ ನಾವು ನೋಡಿದ ಹಾಗೆ ಎಲ್ಲೂ ತ್ರಿಕೋನ ಸ್ಪರ್ಧೆ ಆಗಿಲ್ಲ. ಈ ನಿಟ್ಟಿನಲ್ಲಿ ಅದರಲ್ಲೂ ಮೀಸಲು ಕ್ಷೇತ್ರದಲ್ಲಿ ಬಿ.ಎಸ್.ಪಿ ಬಹಳ ಚೆನ್ನಾಗಿ ಕೆಲ್ಸ ಮಾಡಿದೆ. ಮತಗಳನ್ನು ಒಡೆದು ಗೆಲುವಿನ ಅಂತರವನ್ನು ಎರುಪೇರು ಮಾಡುವ ಸಾಮರ್ಥ್ಯ ಬಹಳ ಚೆನ್ನಾಗಿ ಗಳಿಸಿದೆ. ಒಂದು ರೀತಿಯಲ್ಲಿ ನೇರ ಹಣಾಹಣಿಯಲ್ಲಿ ಕೊನೆಯ ನಿರ್ಣಾಯಕ ಅಂಶ ಬಿ.ಎಸ್.ಪಿಯದೇ ಅಂದರೆ ತಪ್ಪಾಗಲಾರದು.

ಚಿತ್ತಾಪುರದಲ್ಲಿ ನೋಡಿ, ಕಾಂಗ್ರೆಸ್+ ಜೆಡಿಎಸ್ ಮತ ಬಿಜೆಪಿಯನ್ನು ಸೋಲಿಸುತ್ತ ಇತ್ತು. ಆದರೇ ಅತಿವಿಶ್ವಾಸದಿಂದ ಕಾಂಗ್ರೆಸ್ ಸೋಲು ಅನುಭವಿಸಿದೆ. ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ನ ಸೋಲಿಸಿದ್ದು ಮತ್ತು ಗೆಲುವಿನ ಅಂತರ ಎರುಪೇರು ಮಾಡಿದ್ದು ಸುಭಾಷ್ ಭರಣಿ. ಆ ಮತಗಳು ಕಾಂಗ್ರೆಸಿನದ್ದೆ ಹೆಚ್ಚು.



ಇನ್ನ ಗೊವಿಂದರಾಜನಗರಕ್ಕೆ ಬಂದರೆ, ಸೋಮಣ್ಣಗೆ ಅನೇಕ ವಿಷಯಗಳಲ್ಲಿ ಹೊಡೆತ ಬಿತ್ತು. ತಿರುವಳ್ಳುವವರ್ ಪ್ರತಿಮೆ, ಕನ್ನಡಿಗರನ್ನು ಜೈಲಿಗೆ ಹಾಕಿದ್ದು, ಒಕ್ಕಲಿಗರ ಓಟು ಒಟ್ಟಾಗಿ ಕೆಲಸ ಮಾಡಿದ್ದು, ಕೊನೆ ಕ್ಷಣ ತನಕ ಶಿಷ್ಯಂದಿರ ಮನ ಓಲಿಕೆ, ಒಳಗೊಳಗೆ ನಡೆದ ಪಕ್ಷದ ಮಸಲತ್ತು, ಮುಜರಾಯಿ ಇಲಾಖೆಯ ಶಾಪ, ಮುಖ್ಯವಾಗಿ ಜೆಡಿಎಸ್ ಅದರಲ್ಲೂ ಗೌಡರ ತಂತ್ರ..

ಕಾಂಗ್ರೆಸ್ ಕಥೆ

ಕಾಂಗ್ರೆಸ್ ಪ್ರತಿ ಬಾರಿ ಎಲ್ಲಾ ನಾಯಕರನ್ನು ಜೊತೆ ಮಾಡಿಕೊಂಡು ಚುನಾವಣೆ ಎದುರಿಸುತ್ತೆವೆ ಅಂತ ಹೇಳುವುದು, ಹೀನಾಯ ಸೋಲು ಅನುಭವಿಸುವುದು , ನಾವು ನೈತಿಕೆ ಹೊಣೆ ಹೋರುತ್ತೆವೆ ಅಂತ ಹೇಳುವ ಮಾತು ತುಂಬಾ ಸರ್ವಸಾಮನ್ಯ ಆಗಿದೆ. ಕಾಂಗ್ರೆಸ್ ಒಳ್ಳೆ READ MADRID ಪುಟಬಾಲ್ ತಂಡ ಇದ್ದ ಹಾಗೆ, ಅದರಲ್ಲಿ ಇರುವ ಫಟಾನುಘಟಿ ನಾಯಕರು ಬೇರೆ ಎಲ್ಲೂ ಸಿಗುವದಿಲ್ಲ, ಅವರಿಗೆ ಇರುವ ಅನುಭವ, ಶಿಷ್ಯವೃಂದದ ಅನಕೂಲದ ಲಾಭ ಪಡೆಯುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ.

ಅಪರೇಷನ್ ಕಮಲ


ಬಿಜೆಪಿಗೆ ಇದು ಮಿಶ್ರ ಫಲಿತಾಂಶ, ಅನೇಕ ಕಡೆ ಬಿಜೆಪಿ ಖ್ತಾತೆ ತೆರೆದಿದೆ, ಜನರಿಗೆ ಒಮ್ಮೆ ಇವರಿಗೂ ಕೊಟ್ಟು ನೋಡೊಣ ಅನ್ನೊ ಮನಸ್ಸು ಬಂದಿದೆ,ಅದರಲ್ಲೂ ಹಿಂದುಳಿದ ಮಿಸಲು ಕ್ಷೇತ್ರದಲ್ಲಿ ಗೆದ್ದಿರುವುದು ಸಂತೋಷದ ವಿಷಯ ಅವರಿಗೆ, ಮುಂದೆ ಇದಕ್ಕೆ ಹೆಚ್ಚು ಒತ್ತು ಕೊಟ್ಟರೆ ಕೇವಲ ಮುಂದುವರೆದ ವರ್ಗಗಳ ಪಕ್ಷ ಅನ್ನೋ ಹಣೆಪಟ್ಟಿ ಬದಲಾಯಿಸಬಹುದು.

ಹಾಗೆ ಬಿಜೆಪಿ ತನ್ನ ಆಪರ‍ೇಷನ್ ಕಮಲದ ಬಗ್ಗೆ ಮತ್ತೊಮ್ಮೆ ಗಮನ ಕೊಡಬೇಕು, ಪ್ರಭಾವಶಾಲಿ, ತನ್ನ ಕೆಲ್ಸ ಮತ್ತು ವರ್ಚಸ್ಸಿನಿಂದ ಗೆದ್ದವರನ್ನು ಕರೆ ತರಬೇಕು, ಪಕ್ಷದ ಗುರುತಿನಲ್ಲಿ ಗೆದ್ದವರನ್ನು ತಂದು ಮತ್ತೊಮ್ಮೆ ನಿಲ್ಲಿಸಿ ಸೋತಿರುವುದು ಇದು ಮೂರನೇ ಬಾರಿ, ಎಲ್ಲಾ ಕಡೆ ಲಾಭ ಆಗಿರುವುದು ಜೆಡಿಎಸಗೆ ಅಷ್ಟೆ.

THE WINNER IS ...



ಇವೆಲ್ಲಾ ಗಮನಿಸಿದರೆ ಈ ಮರುಚುನಾವಣೆ ಜೆಡಿಎಸ್ ಗೆ ನಿಚ್ಚಳ ಗೆಲುವು ಅನ್ನಬಹುದು, ಯಾಕೆ ಅಂತ ಕೇಳುತ್ತಿರಾ ?

೧) ರಾಮನಗರದಲ್ಲಿ ಮತ್ತೆ ಪ್ರಾಬಲ್ಯ ಮರೆದರೂ, ಸಾಮನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೆವೆ ಅಂತ ಸಾಬೀತು ಮಾಡಿದರು.

೨) ಚೆನ್ನಪಟ್ಟಣದಲ್ಲೂ ಕೂಡ ಗೆದ್ದ್ದಿದ್ದು .

೩) ಗೋವಿಂದರಾಜನಗರದಲ್ಲಿ ಜೆಡಿಎಸ್ ಸಹಾಯದಿಂದಲೇ ಕಾಂಗ್ರೆಸ್ ಗೆದ್ದಿದೆ.

೪) ಚಿತ್ತಾಪುರದಲ್ಲಿ ಜೆಡಿಎಸ್ ಇಂದಲೇ ಕಾಂಗ್ರೆಸ್ ಸೋತಿದೆ.

೫) ಕೊಳ್ಳೆಗಾಲದಲ್ಲಿ ಸಿದ್ದು ಬಣಕ್ಕೆ ಸೋಲು

೩-೪ ನಲ್ಲಿ ಹೇಳಿದ ಹಾಗೆ ಜೆಡಿಎಸ್ ತನ್ನ ಅವಶ್ಯಕತೆ ಬಗ್ಗೆ ಕಾಂಗ್ರೆಸ್ ಬಹಳ ಚೆನ್ನಾಗಿ ಮನವರಿಕೆ ಮಾಡಿದೆ.

Sunday, August 09, 2009

ತಪ್ಪನ್ನು ಮತ್ತೆ ಮಾಡುವುದು ದೊಡ್ಡ ತಪ್ಪು..


ಇವತ್ತಿನ ವಿಜಯ ಕರ್ನಾಟಕದಲ್ಲಿ ೨ ದಶಕಗಳ ಹಿಂದೆಯೇ ಆಗಿತ್ತು, ಅಂದರೆ ಗುಂಡುರಾವ್,ಜನತ ಪಕ್ಷ ಇದ್ದಾಗ ಆಗಿದ್ದು
ಇವತ್ತು ಭಾಜಪ ಇದ್ದಾಗ ಆಗಿದೆ ಅದರಲ್ಲಿ ತಪ್ಪೇನು ಅನ್ನೋ ರೀತಿಯಲ್ಲಿ ಇದೆ. ಇದು ಒಂದು ಕಡೆ ಆ ರೀತಿ ಅರ್ಥ ಕೊಟ್ಟರೆ ಇನ್ನೊಂದು ಕಡೆ ನಾವೇನು ಮೊದಲ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ, ಇರುವದನ್ನೇ ಮಾಡುತ್ತ ಇದ್ದೇವೆ, ಅಲ್ಲಿ ಇದ್ದರೆ ಸರಿ ಇಲ್ಲಿ ಮಾಡಿದರೆ ತಪ್ಪೇ ಅನ್ನೊ ದಾಟಿಯಲ್ಲಿ ಇದೆ.

ದಿನ ಪ್ರಮುಖ ಎಲ್ಲ ಸುದ್ದಿಗಳನ್ನು ಪಕ್ಕಕ್ಕೆ ಇಟ್ಟು ಕೇವಲ ಮೂರ್ತಿ ಪೂಜೆ ಮಾಡುತ್ತ ಇರುವ ನಮ್ಮ ಮಾಧ್ಯಮಗಳು ಸಾರಿ ಸಾರಿ ಹೇಳುತ್ತ ಇದ್ದೀದ್ದು , ಹೇಳಿಸುತ್ತ ಇದ್ದಿದ್ದು ಒಂದೆ ?

* ಹೊಸ ಸಾಮರಸ್ಯಕ್ಕೆ ಇದು ಬುನಾದಿ.

* ಪ್ರತಿಮೆಗಳಿಂದ ನಮ್ಮ ಅಂತರ್ ರಾಜ್ಯ ಸಮಸ್ಯೆ ಬಗೆಹರಿಯೊತ್ತೆ.

* ನಾವು ಇದನ್ನು ವಿರೋಧಿಸಿ ಸಣ್ಣವರಾಗಬಾರದು.

* ತಮಿಳು ಕವಿ, ಒಬ್ಬ ದಾರ್ಶನಿಕೆ, ಅವರು ರಾಷ್ತ್ರಕ್ಕೆ ಸೇರಿದವರು.

* ಒಳ್ಳೆ ಕೆಲ್ಸ ಇದು, ಇದರಲ್ಲಿ ಬೇರೆ ಸಮಸ್ಯೆಗಳನ್ನು ತಳುಕು ಹಾಕಬಾರದು.

* ರಾಜ್ಯಗಳ ಭಾಂದವ್ಯಕ್ಕೆ ಇದು ಮುನ್ನುಡಿ ಹಾಡುತ್ತದೆ.

* ಇದು ಜನಾಭಿಪ್ರಾಯ ಮತ್ತು ಜನ ಮನ್ನಣೆ.

* ಸರ್ವಜ್ಞನ ಪ್ರತಿಮೆ ಮಾಡುತ್ತ ಇಲ್ಲವೇ, ಮತ್ತ್ನೇನು ಸಮಸ್ಯೆ.

* ಸರ್ವಜ್ಞನ ಪ್ರತಿಮೆ ಅತಿ ಒಳ್ಳೆಯ ಸ್ಥಳದಲ್ಲಿ ನಡೆಯುತ್ತಿದೆ.

* ಇದನ್ನು ವಿರೋಧಿಸುವವರು ಭಯೋತ್ಪಾದಕರು.

ಹೀಗೆ ಇದನ್ನು ವಿರೋಧಿಸುವ ಜನರಿಗೆ ಪುಂಖಾನುಪುಂಖವಾಗಿ ಬುದ್ಧಿವಾದ ಹೇಳಲಾಯಿತು. ಪ್ರತಿ ಬಾರಿ ಸಮರ್ಥನೆ ಎಲ್ಲಿಂದ ಎಲ್ಲಿಗೋ ಸಾಗುತ್ತಿತ್ತು. ಸಮಾನ ಗೌರವ ಮತ್ತು ಈಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಇಡೊಣ, ಚರಿತ್ರೆ ಇಂದ ಪಾಠ ಕಲಿಯೋಣ ಅನ್ನೊ ಕನ್ನಡ ಸಂಘಟನೆಗಳ ಮಾತುಗಳು ಎಲ್ಲರ ಕಿವಿಗೆ ಬೀಳಲೆ ಇಲ್ಲ.

ಒಳ್ಳೆ ಗಿಳಿಪಾಠ ಹೇಳಿದ ಹಾಗೆ ಇದು ಅಂತರ್ ರಾಜ್ಯದ ಬ್ಭಾಂದವ್ಯಕ್ಕೆ ಸಾಕ್ಷಿ, ತಿರುವಳ್ಳುವರ್ ಪ್ರತಿಮೆ ಆದರೆ ಮಾತ್ರ್ ನಮ್ಮ ರಾಜ್ಯಗಳ ಮಧ್ಯೆ ಉತ್ತಮ ಸಾಮರಸ್ಯ ಬರುತ್ತದೆ ಎಂದು ಪ್ರಾಯೋಜಿತ ಲೇಖನಗಳನ್ನು ಎಲ್ಲ ಪತ್ರಿಕೆ-ಮಾಧ್ಯಮಗಳು ಮಾಡಿದವು.
ಇದು ಉತ್ತಮ ಹೆಜ್ಜೆ, ಅಟಲ್ ಸರಕಾರದಲ್ಲಿ ಪಾಕಿಸ್ತಾನಕ್ಕೆ ರೈಲು ಬಿಟ್ಟಿಲ್ವಾ ಅಂತ ಉಧಾಹರ್ಣೆ ಬೇರೆ ಕೊಟ್ಟಿದ್ದರು. ಇವತ್ತು ಅದೇ ಜನ ಹಿಂದೆ ದಶಕಗಳ ಹಿಂದೆ ಪ್ರತಿಮೆ ಆಗಿತ್ತು ಅಂತ ಹೇಳಿವೆ.

ಈ ಮಾಧ್ಯಮ ಗೆಳೆಯರಿಗೆ ಕೇಳುವುದು ಇಷ್ಟೆ.

೨ ದಶಕಗಳ ಕೆಳಗೆ ನಾವು ಶರತ್ತು ಇಲ್ಲದೇ, ಪ್ರತಿಮೆಗಳನ್ನು ಬಿಟ್ಟಿದ್ದೆವು. ಸಾಮರಸ್ಯ ತೋರಿಸಿದ್ದೆವು. ನೀವು ಹೇಳುವ ಹಾಗೆ ಸಣ್ಣತನವನ್ನು ಪಕ್ಕಕ್ಕೆ ಇರಿಸಿ ಮುನ್ನುಡಿ ಹಾಡಿದ್ದೆವು, ಆದರೆ ೨೦ ವರುಷಗಳಲ್ಲಿ ಎನಾಗಿದೆ ಸ್ವಾಮಿ ?

* ಕಾವೇರಿಗೆ ಗಲಾಟೆ.
* ನಮ್ಮ ನದಿ ನೀರ ಪಾಲನ್ನು ಬಲವಂತವಾಗಿ ಪಡೆದಿರುವುದು.
* ವಿದ್ಯುತ್ ಹಂಚಿಕೆ ಅನುಪಾತದಲ್ಲಿ ಮೋಸ.
* ರೈಲು ಮತ್ತು ರಸ್ತೆ ಸಂಚಾರದಲ್ಲಿ ನಮ್ಮ ಪಾಲಿನ್ನು ಕಸಿದಿರುವುದು.
* ಶಾಸ್ತ್ರೀಯ ಭಾಷೆಗೆ ಅಡ್ಡಿ.
* ನಮ್ಮ ಜಲಾಶಯಗಳ ವಿರುದ್ಧ್ಜ ದೂರು.
* ಅಕ್ರಮವಾಗಿ ಹೊಗೆನೆಕಲ ನಲ್ಲಿ ಜಲಾಶಯ ನಿರ್ಮಾಣ.
* ಡಾ.ರಾಜ್ ಅಪಹರಣ
* ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಒತ್ತಾಯ
* ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ.
* ಕನ್ನಡ ಚಿತ್ರಗಳನ್ನು ಮತ್ತು ಕನ್ನಡ ವಾಹಿನಿಗಳನ್ನು ಪ್ರಸಾರ ಮಾಡದಿರುವುದು

ಸಾಕೇ ಇನ್ನೂ ಬೇಕೆ ??.. The biggest mistake of all, attempting for new same old mistake.






Saturday, August 08, 2009

ಶೀರ್ಷಿಕೆ ಇಲ್ಲದ ಕವಿತೆ




ನಾನು ಯಾರು ?

ನಲ್ಲ ಕಾತುರದಲ್ಲಿ, ಆತುರಲ್ಲಿ ಬಾಗಿಲನ್ನು ತಟ್ಟಿದ
ಯಾರದು ಎಂದು ಒಳಗಿನಿಂದ ಮಧುರ ದನಿ
ನಾನು ಎಂದ ನಲ್ಲ.
ಹೋಗಾಚೆ, ಈ ಮನೆಯಲ್ಲಿ ನನಗೆ ನಿನಗೆ ಅಂತ ಇಲ್ಲ
ದು:ಖತಪ್ತನಾಗಿ ಊರುರು ಅಲೆದಾ,ಸುತ್ತಿದ, ಬಳಲಿದ
ಕೊನೆಗೆ ಮತ್ತೆ ಬಂದು ಬಾಗಿಲು ತಟ್ಟಿದ
ಯಾರದು ??
ನಿನ್ನ ಪ್ರೀತಿ ಎಂದ, ಬಾಗಿಲು ತೆರೆಯಿತು.



ಕ್ಷಮೆ

ಸದಾ ನನ್ನ ತಪ್ಪನ್ನೇ ಕೆದಕುತ್ತ ಇರುವೆಯಲ್ಲ,
ನೀನು ಕ್ಷಮಿಸಿದ್ದೀಯಾ, ಮರೆತಿದ್ದೀಯಾ ಅಂತ ಅಂದುಕೊಂಡಿರುವೆ
ಎಂದ ಗಂಡ

ಹೌದು, ಆದರೆ ನೀನು ಕ್ಷಮಿಸಿದ್ದೀನಿ, ಮರೆತಿದ್ದೀನಿ
ಎಂಬುದನ್ನು ಮರೆಯಬಾರದು
ಎಂದು ಹೇಳಿದಳು ಹೆಂಡತಿ.

ಶ್ರೀಮಂತಿಕೆ

ಹಗಲು ರಾತ್ರಿ ದುಡಿಯುವೆ, ಬೆವರು ಹರಿಸುವೆ
ಒಂದು ದಿನ ನಾವು ಶ್ರೀಮಂತರಾಗುತ್ತೆವೆ ಚಿನ್ನ ಎಂದ ಗಂಡ,

ನಾವು ಶ್ರೀಮಂತರೇ, ನಿನಗೆ ನಾನು, ನನಗೆ ನೀನು, ನಮಗೆ ಪ್ರೀತಿ ಇದೆ
ಮುಂದೊಂದು ದಿನ ಅದರ ಜೊತೆ ದುಡ್ಡು ಬರಬಹುದು ಅಷ್ತೆ ಎಂದಳು ಹೆಂಡತಿ