Thursday, July 13, 2006

ಹಿಂಸೈ ಅರಸನ್ ಪುಲಕೇಶಿ ೨೩ ...ಯಾಕೆ ವಿರೋಧಿಸಬೇಕು ??


ಗೆಳಯರೇ,
ಹಿಂಸೈ ಅರಸನ್ ಪುಲಕೇಶಿ ೨೩ ಈ ತಮಿಳ್ ಚಿತ್ರದ ಬಗ್ಗೆ
ನಿಮಗೆ ಕಲ್ಯಾಣ ರಾಮನ್ ಅವರ ಪತ್ರ ಬಂದಿರಬಹುದು, ಅದನ್ನು ನೋಡಿ ನಿಮಗೆ ಪಿಚ್ಚು ಅನಿಸಿ ಮತ್ತು ಅದನ್ನು ನಿಮ್ಮ ಇತರ ಗೆಳೆಯರಿಗೆ ಕಳಿಸರಬಹುದು. ಹಾಗಿದ್ದರೆ ನನ್ನ ಪ್ರೇಕ್ಷಕರು ನೀವು ಅಲ್ಲ.

ಮತ್ತೆ ಯಾರು ??
(ಅ) ಆ ಪತ್ರ ನೋಡಿ ನಿಮಗೆ ಏನು ಅನಿಸಲಿಲ್ಲವಾದರೆ..
(ಆ) ಚಿತ್ರವನ್ನು ಚಿತ್ರದ ಹಾಗೆ ನೋಡಬೇಕೆಂದು ವಾದ ಮಾಡುವಿರಾದರೆ,
(ಇ) ಯಾರೋ ಏನೊ ಮಾಡಿದರೆ ನಮಗೆ ಏನು ಅಂತ ನಿಮಗೆ ಅನಿಸಿದರೆ ...

ಮೇಲೆ ಹೇಳಿದ ಹಾಗೆ ನಿಮಗೆ ಓಂದು ರೀತಿ ಅನಿಸಿದರೆ, ನೀವೇ ನನ್ನ ಪ್ರೇಕ್ಷಕ ವೃಂದ...

ಮೊದಲು ಆ ಚಿತ್ರದ ಬಗ್ಗೆ ತಿಳಿದುಕೋಳ್ಳೊಣ,

ಹಾಸ್ಯಚಿತ್ರ ಎಂಬ ಹೆಸರಲ್ಲಿ ಈ ಚಿತ್ರವನ್ನು ತಯಾರಿಸಲಾಗಿದೆ, ಇದು ಕಾಲ್ಪನಿಕ ಕಥೆ ಅಂತ ಅವರು ಸಾರಿ ಸಾರಿ ಹೇಳಿದರೂ
ಚಿತ್ರದ ಉದ್ದಕ್ಕು ನಮ್ಮ ರಾಜರ ಮತ್ತು ನಮ್ಮ ನಾಯಕರನ್ನು ಅವಮಾನಿಸಲಾಗಿದೆ. ೧೭೭೧-೧೭೯೨ ಮಧ್ಯೆ ನಡೆಯುವ ಕಥೆಯಲ್ಲಿ ಪುಲಕೇಶಿ ಎಂಬ ರಾಜನನ್ನು ಸ್ವಂತ ಬುದ್ಧಿ ಇಲ್ಲದ, ಸ್ಥ್ರೀಲೋಲ , ಹೇಡಿ,ಕ್ರೂರಿ ಎಂದು ಚಿತ್ರಿಕರಿಸಲಾಗಿದೆ.

* ಪುಲಕೇಶಿ ಅಪ್ಪನ ಪಾತ್ರನನ್ನು ತಾಯ್ ನಾಗೇಶ ಮಾಡಿದ್ದಾರೆ, ಅವನಿಗೆ ಬಹಳ ದಿನಗಳ ಮೇಲೆ ೨ ಅವಳಿ ಮಕ್ಕಳು ಹುಟ್ಟುತ್ತವೆ, ಅದರಲ್ಲಿ ಸ್ವಂತ ಬುದ್ಧಿ ಇಲ್ಲದ ಮತ್ತು ಇರುವ ಮಕ್ಕಳು. ಸ್ವಂತ ಬುದ್ಧಿ ಇಲ್ಲದ ಪಾತ್ರವು ಕನ್ನಡಿಗರನ್ನು ಪ್ರತಿನಿಧಿಸಿದರೆ ಇನ್ನೊಂದು ಕಟ್ಟಬೊಮ್ಮನ್ ಮಾದರಿಯಲ್ಲಿ ತಮಿಳರ ತರ ಚಿತ್ರಿಕರಿಸಲಾಗಿದೆ.

*" ಸಂಗೋಳ್ಳಿ ರಾಯಣ್ಣ" ಎಂಬುವನು ಬ್ರಿಟಿಷರ ಗುಪ್ತಚರ ಅವನನ್ನು ಪುಲಕೇಶಿ ಅಣ್ಣ ಕಪಾಳಕ್ಕೆ ಹೊಡೆಯುತ್ತಾನೆ.

* Robert Claive ಮುಂತಾದ ಬ್ರಿಟಿಷ ಅಧಿಕಾರಿಗಳ ಜೊತೆ ಕನ್ನಡಿಗರನ್ನು ಗುರುತಿಸುತ್ತಾರೆ.

*ತುಘಲಕ್ ಮಾಡಿದ ಕ್ರಮಗಳನ್ನು ಪುಲಕೇಶಿಯ ಕೈಲಿ ಮಾಡಿಸುತ್ತಾರೆ
.

* ಪಲ್ಲವರ ಸೈನ್ಯ ದಂಡು ಎತ್ತಿ ಬಂದಾಗ ಅವರ ಮುಂದೆ ಟಪಾಲ್-ಗೋಚಿ ಡಾನ್ಸ ಮಾಡಿ ಪ್ರಾಣಭಿಕ್ಷೆ ಕೇಳುತ್ತಾನೆ. ಹೀಗೆ ಹಿಂದೆ ಒಂದು "ಕಂಚಿ ತಲೈಚಿತ್ತವಾನ್ "ಚಿತ್ರದಲ್ಲಿ ನಮ್ಮ ಪುಲಕೇಶಿಯನ್ನು ಭಫೂನ್ ತರ ಚಿತ್ರಿಸಲಾಗಿತ್ತು.

ಹಾಗಿದ್ದರೆ ನಮ್ಮ ಪುಲಕೇಶಿ ಹೇಗಿದ್ದ ??

೧) ಅವನ ಸೈನ್ಯ ಕಂಡರೆ ಸಾಕು ಹೆದರಿಕೊಳ್ಳುತಿದ್ದರು, ೩೦೦೦೦ ಆನೆಗಳು ಅವನ ಸೈನ್ಯದಲ್ಲಿ ಇದ್ದ ಕಾರಣವೇ ಉತ್ತರದ ಕನೋಜಿನ ಚಕ್ರವರ್ತಿ ಹರ್ಷವರ್ಧನ ಇವನಿಗೆ ಶರಣಾಗಿದ್ದು.
೨) ಇವನ ಪರಾಕ್ರಮ ೬-೭ನೇ ಶತಮಾನದಲ್ಲಿ ಭಾರತದ ಉದ್ದ ಅಗಲಕ್ಕೂ ಹಬ್ಬಿತ್ತು. ಇವನ ಪರಾಕ್ರಮ ನೋಡಿ ಸಿಲೋನಿನ ರಾಜ ಇವನ ಸಾಮಂತನಾಗಿದ್ದ. ಉತ್ತರ ಭಾರತದ ಗುಜರಾತಿನಲ್ಲಿ ಇವರ ರಾಜ್ಯದ ಒಂದು ಶಾಖೆ ಇತ್ತು.
೩) ಇವನ ನೌಕ ಸೈನ್ಯ ಆಗಿನ ಕಾಲದಲ್ಲಿ ಬಹಳ ಪ್ರಸಿದ್ದಿ ಪಡೆದಿತ್ತು, ಅದ್ದರಿಂದ ಆಗಿನ ಪರ್ಶಿಯಾ ದೇಶದ ರಾಜ ಇವನ ರಾಜ್ಯಕ್ಕೆ ರಾಯಭಾರಿ ಕಳಿಸಿದ್ದ.
೪) ಸ್ತ್ರೀ ಸಮಾನತೆಯನ್ನು ಮೊದಲು ಭೋದಿಸಿ ಅದನ್ನು ಆಚರಿಸಿದ ಪುಣ್ಯವಂತ ಇವನು, ಇವನ ಸೊಸೆ ಇವರಿಂದ ರಾಜಕೀಯ-ಆಡಳಿತ ಬಗ್ಗೆ ಶಿಕ್ಶಣ ಪಡೆದು ಒಂದು ಶಾಖೆಯನ್ನು ನೋಡಿಕೊಳ್ಳುತ್ತಿದ್ದಳು.


ಇಂತಹ ಮಹಾನ್ ಚಕ್ರವರ್ತಿ ಬಗ್ಗೆ ಹೀಗೆ ಕೀಳಾಗಿ ತೆಗೆಯಲು ಅವರಿಗೆ ಎಷ್ಟು ಕೊಬ್ಬು ಇರಬೇಕು ಹೇಳಿ ...ಅದರ ನಿರ್ಮಾಪಕರಿಗೆ ನಾವು ಕೇಳುವುದು ..

೧) ನಿಮಗೆ ಧೈರ್ಯ ಇದ್ದರೆ ಶಿವಾಜಿ ಇಲ್ಲ ಪಾಂಡ್ಯ ಅಂತ ಹೆಸರಿಡಬೇಕಿತ್ತು.
೨) ನಮಗೆ ಚರಿತ್ರೆ ಬಗ್ಗೆ ಗೊತ್ತಿಲ್ಲ, ಪುಲಕೇಶಿ ಇದ್ದ ಅನ್ನೊಂದು ಗೊತ್ತಿಲ್ಲ ಅನ್ನುವ ಅದರ ನಿರ್ಮಾಪಕನಿಗೆ ನಾಚಿಕೆ ಆಗಬೇಕು. ಹಾಗಿದ್ದರೆ ಪಲ್ಲವ,ಹೈದರಾಲಿ,ಟಿಪ್ಪು ಎಲ್ಲಿಂದ ಬಂದರೂ ??. ಪಲ್ಲವರ ಮುಂದೆ ಹಾಗೆ ಕಾಲಿಗೆ ಬೀಳುವುದು ಇವರಿಗೆ ಹಾಸ್ಯವಿರಬಹುದು ನಮಗೆ ಅಲ್ಲ.


ಇಷ್ಟು ಆಗಿ ನಿಮ್ಮ ಉತ್ತರಕ್ಕ್ಕೆ ನೀವು ಭದ್ದರಾಗಿದ್ದರೆ ..

(ಅ) ನಿಮಗೆ ಖಂಡಿತ ಹೇಡಿತನ ನಿಮ್ಮ ಮೈ-ಮನದಲ್ಲಿ ಆವರಿಸಿದೆ. ಇಲ್ಲವಾದರೆ ನಿಮಗೆ ಕನ್ನಡ ಚರಿತ್ರೆ ಬಗ್ಗೆ ಜ್ಞಾನ ಕಡಿಮೆ ಎಂದು ತೋರಿಸುತ್ತದೆ.

(ಆ) ಸ್ವಾಮಿ, ಅಭಿವ್ಯಕ್ತಿ ಸ್ವಾತಂತ್ರ ನಾವು ಸ್ವಾಗತಿಸುತ್ತೆವೆ, ಆದರೆ ಹಾಗೇ ಅಂತ ಬೇರೆಯವರ sentiments ಜೊತೆ ಆಟವಾಡುವುದು ತಪ್ಪು. ಪ್ರತಿಯೊಂದು ರಾಜ್ಯದ ಅಭಿವೃದ್ದಿ ಮತ್ತು ಸಂಸ್ಕೃತಿಗೆ ಹಿಂದಿನ ಚರಿತ್ರೆಯವರ ಕೊಡುಗೆ ಇದೆ. ನಮ್ಮ ಕೆಲಸಗಳಿಗೆ ನಾವು ಸ್ಪೂರ್ತಿ ತೆಗೆದುಕೊಳ್ಳುವುದು ನಮ್ಮ ಹಿಂದಿನ ರಾಜರಿಂದ. ಅದರಲ್ಲೂ ಶೌರ್ಯ,ಪರಾಕ್ರಮಗಳಿಂದ ೧೦೦೦ ವರುಷ ನಮ್ಮ ನಾಡನ್ನು ಆಳಿ, ತಮ್ಮ ಪರಾಕ್ರಮವನ್ನು ಭಾರತದ ಉದ್ದ-ಅಗಲಕ್ಕೂ ಹಬ್ಬಿಸಿದ ನಮ್ಮ ರಾಜರು ಗೋವಿಂದ-೩, ನೃಪತುಂಗ,ಪುಲಕೇಶಿ,ಮಯೂರ ಮತ್ತು ಕೃಷ್ಣದೇವರಾಯ ನಮಗೆ ಸ್ಪೂರ್ತಿ ಆಗದೆ ಬೇರಯವರಿಗೆ ಆಗುತ್ತಾರೆಯೇ ??
ಇವರನ್ನು ಅವಮಾನಿಸಿದರೆ ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ ಹಾಗೇ ಅಲ್ಲವೇ ??. ನಿಮಗೆ ಏನು ಅನಿಸದಿದ್ದರೆ ಅದು ನಿಮ್ಮ ಷಂಡತನದ ಪರಮಾವಧಿ.

ಇದನ್ನು ಸಮರ್ಥಿಸುವರಿಗೆ ನಾನು ಕೇಳುವ ಪ್ರಶ್ನೆ, ನಿಮ್ಮ ಕುಟುಂಬ ಬಗ್ಗೆ ಇಲ್ಲ ನಿಮ್ಮ ತಾಯಿ ಬಗ್ಗೆ ಕೀಳಾಗಿ ಇಲ್ಲದ-ಸಲ್ಲದ ವಿಚಾರಗಳನ್ನು ಹಾಸ್ಯ ಎಂದು ಹೇಳಿದರೆ ಒಪ್ಪಿಕೊಳ್ಳುತ್ತಿರಾ ?

(ಇ) ನಾಳೆ ನಾವು ಹಾಗೇ ಮಾಡಿದರೆ ಅವರು ಸುಮ್ಮನೆ ಇರುತ್ತಾರೆಯೇ??, ಅವರಿಗೆ ಇರುವ ಕಳಕಳಿ ನಮಗೆ ಯಾಕೆ ಇಲ್ಲಾ ?
ನಮ್ಮ ಮೌನವನ್ನು ಅವರು weakness ಅಂದುಕೊಂಡು ನಮ್ಮ ಮೇಲೆ ಸವಾರಿ ಮಾಡಲು ಹೊರಡುವದನ್ನು ತಪ್ಪಿಸಲು ನಾವು ಹೋರಾಡದಿದ್ದರೆ ಹೇಗೆ !!!

ನಮ್ಮ ಸ್ವಾಭಿಮಾನವನ್ನು ಕೆಣಕುವ, ಕನ್ನಡಿಗರು ಗಾಂಡುಗಳು ಅಂತ ಬಿಂಭಿಸುವ ಇಂತ ಚಿತ್ರವನ್ನು ವಿರೋಧಿಸದೇ ಪೂಜಿಸಬೇಕೆ ??

ಕೊಸರು:- ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ಮಂಡಳಿ ಕರ್ನಾಟಕದ್ಯಾಂತ ನಿಷೇಧಿಸಿದೆ. ಇದು ಒಳ್ಳೆಯ ಸುದ್ದಿ

Tuesday, July 04, 2006

ಕನ್ನಡದ ಬಗ್ಗೆ ಕೀಳರಿಮೆ ಇರುವವರಿಗೆ SHAME SHAME ....

ಮೊನ್ನೆ ಗೆಳೆಯರ ಜೊತೆ ಕಾಫಿ-ಡೇಯಲ್ಲಿ ಕುಳಿತಿದ್ದೆ, ಹಿಂದಿ ಮತ್ತು ಆಂಗ್ಲ ಹಾಡುಗಳಿಗೆ ತಲೆ ಕುಣಿಸುತ್ತ ಹುಡುಗ-ಹುಡುಗಿ ಭೇದವಿಲ್ಲದೆ ಹುಕ್ಕಾ ಮತ್ತು ದಂ ಎಳೆಯುತ್ತಿದ್ದ ಯುವ ಜನಾಂಗವೇ ಅಲ್ಲಿ ನೆಲಸಿತ್ತು. ನಮಗೆ ಬೇಕಾದ ಹಾಡುಗಳನ್ನು ಜ್ಯೂಕ್ ಬಾಕ್ಸ ಇರುವದರಿಂದ ಆ ಹುಡುಗರು ಪಕ್ಕದಲ್ಲಿ ಇರುವ ಹುಡುಗಿಗೆ, ಹಳದಿ ಬಣ್ಣ ಹಾಕಿದ ಆಂಟಿಗೆ ತಮ್ಮ ಹಾಡುಗಳನ್ನು Dedicate ಮಾಡುತ್ತ ಇದ್ದರು, ಆದರೆ ಒಂದೇ ಒಂದು ಕನ್ನಡ ಹಾಡು ಹಾಕಿ ಅಲ್ಲಿನ hep ಜನಾಂಗದ ಮುಂದೆ ಹಳ್ಳಿ ಗಮಾರನಾಗುವ ಗೋಜಿಗೆ ಯಾರು ಹೋಗಲಿಲ್ಲ. ನಮಗೆ ಅನಿಸಿತು ಅಲ್ಲಿ ಮೂಲೆ ಮೂಲೆಯಲ್ಲಿ ಕೆಲ ಕನ್ನಡ ಮಾತನಾಡುವ ಯುವಕ-ಯುವತಿಯರಿಗೆ ಕನ್ನಡ ಹಾಕಲು ಹಿಂಜರಿಕೆ ಇರಬಹುದು, ಹಾಕಿದರೆ ಸ್ವಲ್ಪ ಧೈರ್ಯ ಬರುತ್ತದೆ ಅಂತ ನಾವೇ ೪-೫ ಹಾಡುಗಳನ್ನು ೧೦ ನಿಮಿಷಗಳ ಅಂತರದಲ್ಲಿ ಹಾಕುತ್ತ ಬಂದೆವು. ನಮ್ಮ ಊಹೆಯ ಪ್ರಕಾರ ಆಂಗ್ಲ ಮಾತನಾಡುವ ಹುಡುಗರು
ಮುನಿಸಿಕೊಳ್ಳಬಹುದು ಹಾಗೇ ನಮ್ಮ ಕನ್ನಡ ಹುಡುಗರು ಹಾಡುಗಳನ್ನು enjoi ಮಾಡಬಹುದು ಅಂತ ನಮ್ಮ ಅನಿಸಿಕೆ ಪೊಳ್ಳಾಯಿತು.
ಅದಕ್ಕಿಂತ ನಮಗೆ ಆಶ್ಛರ್ಯವೆನಿಸಿದ್ದು, U2 ಕನ್ನಡ ವಾಹಿನಿಯಲ್ಲಿ VJ ಆಗಿರುವ ಒಂದು ಹುಡುಗಿ ಕನ್ನಡ ಹಾಡು ಬಂದಾಗ ಮುಖ ಸಿಂಡರಿಸಿದ್ದು ನೋಡಿ ನನಗೆ ಬಹಳ ಆಶ್ಚರ್ಯವೆನಿಸಿತು, ಕಾರ್ಯಕ್ರಮದಲ್ಲಿ ಇದು ಮಾಡಿ,ಅದು ಮಾಡಿ ಎಂದು ಬೋಧಿಸುವ ಹುಡುಗಿಯ ಬಣ್ಣ ಬಯಲಾಯಿತು.

ಯಾಕೆ ಇಷ್ಟು ಕೀಳರಿಮೆ ?? ನಮ್ಮ ಮಾತೃಭಾಷೆಯ ಬಗ್ಗೆ ಯಾಕೆ ಹೀಗೆ ತಿರಸ್ಕಾರ ತೊರುತ್ತ ಇದ್ದೆವೆ ? ಪ್ರಶ್ನೆಗಳು ನನ್ನನ್ನು ಕಾಡುತ್ತ ಇತ್ತು. ಆ ನಿಟ್ಟಿನಲ್ಲಿ ಒಂದು ಪುಸ್ತಕ ಒದುವಾಗ ಒಂದು ಸುಂದರ ಶ್ಲೋಕ ನೆನಪಿಗೆ ಬಂತು.

"ಮಾತೃಭಾಷಂ ಪರಿತ್ಯಜ್ಯ
ಯೋsನ್ಯಭಾಷಮುಪಾಸತೇ
ತತ್ರ ಯಾನ್ತಿ ಹಿ ತೇ ದೇಶಾ:
ಯತ್ರ ಸೂರ್ಯೋ ನಾ ಭಾಸತೇ

ಇದು ಸಂಸೃತ ಶ್ಲೋಕ, ಇದರ ಅರ್ಥವಿಷ್ಟೆ
" ಯಾರು ತನ್ನ ತಾಯಿ ಭಾಷೆಯನ್ನು ಮರೆತು ಬೇರೆ ಭಾಷೆಯ ಗುಲಾಮನಾಗುತ್ತಾನೊ ಅವನು ಸೂರ್ಯನಿಲ್ಲದ ಅಂಧಕಾರ ಲೋಕಕ್ಕೆ ಹೋಗುತ್ತಾನೆ".

ನಮ್ಮ ಯುವಜನಾಂಗ ಭಾಷೆ ಕೇವಲ ಒಂದು ವ್ಯವಹಾರಿಕ ಸಂಪರ್ಕ ಅಂತ ಕೇವಲ ಮಾತನಾಡುವದರ ಬದಲು ಅದರ ಮೇಲೆ ಒಂದು ಸಮುದಾಯ ನಿಂತಿದೆ ಎಂಬುದನ್ನು ಮನಗಾಣಬೇಕು.

ಸುಮ್ಮನೆ ನಮ್ಮ ಸಂಸ್ಕೃತಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣ ಎಂದು ದೂರುವದನ್ನು ಬಿಟ್ಟು ಅವರ ಭಾಷಭಿಮಾನದ ಒಂದು ಅಂಶ ನಮ್ಮ ಯುವ ಜನತೆ ಕಲಿತರೆ ನಮ್ಮ ಭಾಷೆ ಇನ್ನೂ ಶ್ರೀಮಂತವಾಗುತ್ತದೆ. ಸುಮ್ಮನೆ prada,armani ಹಾಕಿಕೊಂಡ ಮಾತ್ರಕ್ಕೆ ನಾವು ಅವರು ಆಗುವದಿಲ್ಲ,

ಮೊದಲ ಮಹಾಯುದ್ದದಲ್ಲಿ ಜರ್ಮನಿ ಫ್ರಾನ್ಸ್ ವಶಪಡಿಸಿಕೊಂಡಾಗ ಜರ್ಮನ್ ಭಾಷೆಯನ್ನು ಆಗಿನ ಕೈಸರ್ ಎಲ್ಲಾ ಕಡೆ ಜರ್ಮನ್ ಭಾಷೆಯನ್ನು ತುರುಕಿದರು, ಕಲಾ ಪ್ರೇಮಿಯಾಗಿದ್ದ ಕೈಸರನ ಹೆಂಡತಿ Auguste Viktoria ಒಮ್ಮೆ ಒಂದು ಕಲಾಶಾಲೆಗೆ ಬೇಟಿಕೊಟ್ಟಳು ಅಲ್ಲಿ ಒಂದು ಹುಡುಗ ಸುಂದರವಾಗಿ ಒಂದು ಚಿತ್ರ ಬಿಡಿಸಿದ್ದ, ಅದನ್ನು ನೋಡಿ ಸಂತೋಷಗೊಂಡು ನಿನಗೆ ಎನು ಬೇಕು ಅಂದರೆ ಆ ಹುಡುಗ ತನ್ನ ಭಾಷೆಯನ್ನು ಮರಳಿ ಪಡೆದ. ಇಂತಹ ಸ್ಪೂರ್ತಿ ಕಥೆಗಳನ್ನು ನಮ್ಮ ಯುವಜನಾಂಗ ಎಕೆ ಮಾದರಿಯಾಗಿ ತೆಗೆದುಕೊಳ್ಳುವದಿಲ್ಲ?

ನಾಚಿಕೆ ಆಗಬೇಕು ಕನ್ನಡ ಬಂದಾಗ ಕೀಳರಿಮೆಯಿಂದ ತಲೆ ತಗ್ಗಿಸುವರಿಗೆ, ಸ್ವಂತ ಮಾತೃಭಾಷೆಯನ್ನು ಪ್ರೇಮಿಸದ ಯಾರು
ಎನೂ ಆಗಲು ಸಾಧ್ಯವಿಲ್ಲ. ಅಂತ ಮಾನಗೇಡಿಗಳಿಗೆ shame shame ...

Monday, June 26, 2006

ರತ್ನನ್ ಪದಗೊಳ್ .....

ರತ್ನನ್ ಪದ ಓದಿದವರಿಗೆ ಗೊತ್ತಿರೊತ್ತೆ ಅದರ್ ಗಮತ್ತು, ೧೯೩೪ರಲ್ಲಿ ಜೆ.ಪಿ.ಆರ್ ತಮ್ಮ ಪದಗಳನ್ನು ಪುಸ್ತಕದಲ್ಲಿ ಆಕಿ ಆಚೆ ತಂದಿದ್ದು ಅಷ್ಟೇಯಾ ಆಮೇಲೆ ಆ ಪದ್ಯಗಳು ಜನರ ನಾಲಿಗೆ ಮೇಲೆ ಹೆಚ್ಚು ವಾಸಸಿದ್ದು, ಆ ಪುಸ್ತಕ ಬಿಚ್ಚುವ ಮುನ್ನ ನಿಮಗೆ ಮೊದಲ್ ಸಾಲು ಕಾಣುವುದು "ಯಾರು ಇದನ್ನು ಮೆಲ್ಲಗೆ ಮನಸ್ಸಿನಲ್ಲಿ ಓದಿಕೊಬಾರದು, ಜೋರಾಗಿ ಗಟ್ಟಿಯಾಗಿ ಕಿವಿ ಮೇಲೆ ಬೀಳುವ ಹಾಗೆ ಓದಬೇಕು,
ಆಗೆ ಮಾಡಿದರೆ ಮಾತ್ರ ಆರ್ಥ ಆಗುತ್ತದೆ ಅಂತ.
ಏನು sudden ಆಗಿ ರತ್ನನ್ ಪದ್ಯ ಗ್ನಾಪಕ ಬಂತು ಅಂದ್ರೆ, ಇತ್ತಿಚಿಗೆ ಲಾಂಗ್ ಲಾಜ ದರ್ಶನ್ ನಟಿಸಿರುವ ಸುಂಟರ ಗಾಳಿ ಚಿತ್ರದಲ್ಲಿ
ಒಂದು ಪದ್ಯ ಇದೆ,ಕೇಳುತ್ತ ಕೇಳುತ್ತ ಹಿಂದೆ ನಾನು ಓದಿದ ರತ್ನನ ಪದ್ಯ ಗ್ನಾಪಕ ಬಂತು.

ಹಾಡು:- ನಂಜಿಗೆ
ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು,
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಕುಗ್ತು
ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು,
ನಂಗೂ ನಿಂಗೂ ಯೆಂಗ್ ಆಗಲೋಯ್ತು ನಂಜು.
(
ನೀನು ನನ್ನ ಹಟ್ಟಿ(ಗುಡಿಸಲು) ಬೆಳಕಿದ್ದ ಹಾಗಿದ್ದೆ ನಂಜು
ಮಾಗಿಯಲ್ಲಿ ಹುಲ್ಲಿನ ಮೇಲೆ ಮಲಗಿದ್ದ ಹಾಗೆ ಮಂಜು,
ಮಾಗಿ ಕುಗ್ಗಿತು
ಬೇಸಿಗೆ ನುಗ್ಗಿತು
ನನಗೂ ನಿನಗೂ ಹೇಗೆ ಅಗಲಿಹೋಯಿತು ನಂಜು.
)
ಸೀಗಂಗ್ಪಟ್ಟದ್ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ಣದ್ ಸುತ್ತ ನಡದಿ
ಸಂಗಂದಲ್ಲಿ
ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

(ಶ್ರೀರಂಗ ಪಟ್ತದ ಹತ್ತಿರ ಕಾವೇರಿ ಒಡೆದು
ಎರಡು ಹೋಳಾಗಿ ಪಟ್ಟಣದ ಸುತ್ತ ನಡೆದು,
ಸಂಗಮದಲ್ಲಿ ಸೇರಿಕೊಂಡು,
ಮರಳಿ ಮುಂದಕ್ಕೆ ಹೋದದು ನಮಗೆ ಜ್ಞಾನದ ಪಂಜು
ಈಗ ಅಗಲಿದರೇನು ? ಮುಂದೆ ಸೇರುತ್ತಿವಿ ನಂಜು.)

ಆಗಲೋಡೋಗ್ತೆ ರಾತ್ರಿ ಬಂತತ್ ಅಂಜಿ,
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರ್ರಾತ್ರಿ ಬಂತು
ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕೆ ಅಲ್ವ ನಂಜಿ
ಆ ನಮ್ಕೆ ಜೀವಾನ್ ಉಳಸೋ ಗಂಜಿ

(
ಹಗಲು ಓಡಿಹೋಗುತ್ತದೆ ರಾತ್ರಿ ಬಂತೆಂದು ಅಂಜಿ
ರಾತ್ರಿ ಮುಗಿದುಹೋದರೆ ಹಗಲೇ ಅಲ್ಲವೆ ನಂಜಿ
ರಾತ್ರಿ ಬಿದ್ದಿತು,ಹಗಲೇ ಬಂದಿತು
ಹೋಗುವುದು ಮರಳಿ ಬರುವದಕ್ಕೆ ಅಲ್ಲವೇ ನಂಜಿ
ಆ ನಂಬಿಕೆ ನನ್ನ ಜೀವವನ್ನು ಉಳಿಸುವ ಗಂಜಿ.
)
ಇಂತಹ ಮಹಾನ್ ಪದ್ಯಗಳನ್ನು ಬರೆದ ಮಹಾನ್ ಕವಿಗೆ ಸಿನೆಮಾದರು ಹಾಡನ್ನು ಕದ್ದಾಗ, ಗೌರವ ಧನ ಕೋಡಬೇಕು. ಹಾಗೆ ಆದರೂ ಅವರ ಪುಸ್ತಕ ಹೆಚ್ಚು ಪ್ರಕಟಣೆಗೊಂಡು ಕನ್ನಡಿಗರ ಮನೆ ಸೇರಲಿ.
ಕೊನೆಯದಾಗಿ ರತ್ಗ್ನ ನನ್ನಹಾಗ ಕನ್ನಡ ಅಭಿಮಾನಿ ..ನನ್ನ ಮೆಚ್ಚಿನ ಸಾಲುಗಳು ಇವು
... " ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲಿಸ್ ಬಿಡುಬೇಕ್ ರತ್ನ
ಅಂತ ಅವನ್ ಅಂದ್ರೆ - ದೇವ್ರ ಆದ್ರ ಎನ್
ಮಾಡ್ತಿನಿ ಅವ್ನ್ಗೆ ಖತ್ನ."