Saturday, September 12, 2009

ಪ್ರೇಮಕಹಾನಿ - Prem Kahani Film Review



ಒಂದು ಚಿತ್ರ ತುಂಬಾ ಹೈಪ್ ಮಾಡಿಕೊಂಡರೆ ಒಂದು ರೀತಿ ಕಷ್ತ, ಜನರಲ್ಲಿ ದಿನಕಳೆದಂತೆ ಹೆಚ್ಚು
ನಿರೀಕ್ಷೆ ಬೆಳೆಯುತ್ತದೆ, ಇದಕ್ಕೆ ಪ್ರೇಮಕಹಾನಿ ಹೊರತಲ್ಲ. ೨ ತಿಂಗಳಿಂದ ಇವತ್ತು ನಾಳೆ ಅನ್ನೋ ರೀತಿಯಲ್ಲಿ
ಬಂದು ಹೊಗುತ್ತಲೆ ಇತ್ತು. ರಾಜ್ ಜೊತೆ ತೆರೆ ಕಾಣುತ್ತದೆ, clash of titans ಆಗೊತ್ತೆ ಅಂತ ನಿರೀಕ್ಷೆ ಇತ್ತು, ಆದ್ರೆ ರಾಜ್ ಕ್ಲಿಕ್ ಆಗಿ ಅದು ಇದಕ್ಕೆ ಹೊಡೆತ ಬೀಳಬಹುದು ಅಂತ ಭಯದಲ್ಲಿ ಮತ್ತೆ ಮುಂದೂಡಲಾಯಿತು.
ಯಾವಾಗ ರಾಜ್ ಸೋತು ಸುಣ್ಣ ಆಯಿತೂ , ಎಲ್ಲರ ಗಮನ ನೆಟ್ಟಿದ್ದು ಪ್ರೇಮಕಹಾನಿ ಮೇಲೆ, ಇದೇ
ಕನ್ನಡ ಚಿತ್ರರಂಗಕ್ಕೆ ಸಂಜೀವಿನಿ ಅನ್ನೊ ಮಾತುಗಳು, ನೋಡಿದವರೆಲ್ಲಾ ವಾಹ್ ವಾಹ್ ಅಂತ ಇದ್ದಾರೆ ,ಅದ್ದರಿಂದ ಇದು ಇನ್ನೊಂದು ತಾಜಮಹಲ್ ಆಗುತ್ತದೆ ಅನ್ನೊ ಮಾತುಗಳು ಕೇಳಿ ಬರತೊಡಗಿದವು.


ಇಂತಹ ಹೈಪ ಆದ ಚಿತ್ರಗಳನ್ನು ಮೊದಲ ದಿನವೇ ನೋಡಬೇಕು, ಇಲ್ಲವಾದರೆ ಪತ್ರಿಕೆಗಳ ರಿವ್ಯೂನಲ್ಲಿ ಅನೇಕ ಅಂಶಗಳು ಕಳೆದು ಹೋಗಿತ್ತವೆ.

ನಗೆ ಹನಿ + ಕಣ್ಣೀರ ಹನಿ = ಪ್ರೇಮ ಕಹಾನಿ, ಈ ಒಂದು ನಿಯಮದಲ್ಲೇ ಇಡಿ ಚಿತ್ರದ ಕಥೆ ಅಡಗಿದೆ ಅಂದರೆ ನಂಬಲೇ ಬೇಕು. ಇದರಲ್ಲಿ + ಅನ್ನೊಂದು ಮಧ್ಯಂತರ ಅಷ್ಟೆ. ಚಂದ್ರು ತಾವು ತಾಜಮಹಲ್ ನಲ್ಲಿ ಮಾಡಿದ ಜಾದೂವನ್ನು ಇದರಲ್ಲೂ ಮಾಡಲೇಬೇಕು ಅನ್ನೊ ಅವಸರದಲ್ಲಿ ಸ್ವಲ್ಪ ಕುರುಡು ನಂಬಿಕೆಗೆ ಮಾರು ಹೋಗಿದ್ದಾರೆ. ಅದರಲ್ಲಿ ಮಾಡಿದ ಹಂದರವನ್ನೇ ಇದರಲ್ಲಿ ಮಾಡಲು ಹೋಗಿದ್ದಾರೆ, ಒಂದು ಲೆಕ್ಕದಲ್ಲಿ ಗೆದ್ದೆತ್ತಿನ ಬಾಲಕ್ಕೆ ಜೋತು ಬಿದ್ದಿದ್ದಾರೆ.

ನೀವು ತಾಜಮಹಲ್ ಮತ್ತು ಪ್ರೇಮಕಹಾನಿ ನೋಡಿದರೆ ಕೆಲವು ಸಾಮನ್ಯ ಅಂಶ ಕಾಣುತ್ತದೆ

೧) ನಾಯಕ ಬಡವ, ನಾಯಕಿ ಶ್ರೀಮಂತೆ ಅವರಿಬ್ಬರ ಮಧ್ಯೆ ಪ್ರೇಮಾಂಕುರ.

೨) ನಾಯಕ ಮನೆಯಲ್ಲಿ ಕಿತ್ತು ತಿನ್ನೋ ಬಡತನ, ಆದ್ರೆ ನಾಯಕ ಮಾತ್ರ ಶೋಕಿ ಹುಡುಗ.

೩) ಸಿನೆಮಾ ಮುಗಿಯುವುದು ನಾಯಕನ ಸಾವಿನಲ್ಲಿ.

೪) ಅದೇ ನಟ ನಟಿಯರು

ನಾಯಕ ಮಂಜ , KR Market ನಲ್ಲಿ ಮೂಟೆ ಹೋರುತ್ತ, ಸಿಂಗಾಪುರ ಅನ್ನೋ ಸ್ಲಂನಲ್ಲಿ ವಾಸ ಮಾಡುತ್ತ ಇರುತ್ತಾನೆ. ದಿನ ಬೆಳಿಗ್ಗೆ ೫ ರಿಂದ ೧೧ ಗಂಟೆ ತನಕ ಕೆಲ್ಸ ಆಮೇಲೆ ಅವನ ಪೋಕರಿ ಗೆಳೆಯರ ಜೊತೆ ಊರುರು ಸುತ್ತವ ಕೆಲ್ಸ. ಇವನ ಗೆಳಯರಿಗೆ ಬ್ಲೇಡ್ ಅನ್ನುವ ನಾಯಕ, ಇವನ ಗಾಡಿಯಲ್ಲಿ ಅವನಿಗೆ ಡವ್ ಹುಡುಕುವ ಕಾಯಕಕ್ಕೆ ಇಡಿ ದಿನ ಮೀಸಲು ಇಟ್ಟಿರುತ್ತಾರೆ. ಎಲ್ಲಾ ಹೆಣ್ಣುಮಕ್ಕಳ ಕಾಲೇಜಿನ ಮುಂದೆ ಜೊಲ್ಲು ಸುರಿಸಿಕೊಂಡು, ನಗುವುದು ಚೀ ತೂ ಅನಿಸಿಕೊಳ್ಳುವುದು, ಇಲ್ಲ ಪೋಲಿಸರ ಕೈಗೆ ಸಿಕ್ಕಿ ಒದೆ ತಿನ್ನುವುದು ಕಾಯಕ ಆಗಿರುತ್ತದೆ. ಅವರ ನಾಯಕನಿಗೆ ಎಲ್ಲರೂ ಕಿವಿಗೆ ಹೂವಾ ಇಡುತ್ತ ಸಿಗರೇಟ್ ಮತ್ತು ಪಾನ್ ಪರಾಗ್
ತೆಗೆಸಿಕೊಳ್ಳುವುದು, ರಾತ್ರಿ ಎಣ್ಣೆ ಕುಡಿದು ಟೈಟ್ ಆಗುವುದು ಇದೆ ಇವರ ನಿತ್ಯ ಕಾಯಕ ಆಗಿರುತ್ತದೆ.

ಇತ್ತ ಒಂದು ತುಂಬು ಸಂಸಾರ, ಅದರ ಅದಿಪತ್ಯ ರಂಗಾಯಣ ರಘುವಿನದು. ಬ್ಯಾಂಕಿನಲ್ಲಿ ಉತ್ತಮ ಕೆಲ್ಸ, ಮನೆ ತುಂಬ ಮಕ್ಕಳು , ಆವರ ಜೊತೆ ಗೆಳೆಯನಾಗಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತ ಇರುತ್ತಾನೆ. ಆ ಮನೆಯಲ್ಲಿ ಅನ್ಯೋನತೆ ಮತ್ತು ಸಹಬಾಳ್ವೆ ಎದ್ದು ಕಾಣುವ ಹಾಗೆ ನಿಗಾ ವಹಿಸಿರುತ್ತಾನೆ.
ಆ ಮೂರು ಮಕ್ಕಳಲ್ಲಿ ಒಬ್ಬಳೆ ಶೀಲಾ ( ಇವಳು ತೆಲುಗು ಪಿಲ್ಲ, ಮುಖ ನೋಡಿದರೆ ಜಗ್ಘೇಶ್ ಜೋತೆಗೆ ನಟಿಸಿದ್ದ ಉಧಯಬಾನು ಜ್ಞಾಪಕಕ್ಕೆ ಬರುತ್ತಾಳೆ).

ಲಂಗದಾವಣಿಯಲ್ಲಿ ಕಾಲೇಜಿಗೆ ಹೋದಾಗ ಬ್ಲೇಡ ಕಣ್ಣಿಗೆ ಬೀಳುತ್ತಾಳೆ, ಅಲ್ಲೇ ಲವ್ ಆಗಿ ಇವಳೇ ನನ್ನ ಹೆಂಡ್ರು ಅಂತ ಅಂದುಕೊಳ್ಳುವದಕ್ಕೂ , ಅದಕ್ಕೆ ಹುಡುಗರು ಕಾಗೆ ಹಾರಿಸುವದಕ್ಕೂ ಸರಿ ಹೋಗುತ್ತದೆ. ಆ ಗುಂಪಿನಲ್ಲಿ
ಅವಳಿಗೆ ಮಂಜ ಕಣ್ಣಿಗೆ ಬಿದ್ದು ಅವನ ಪೊರ್ಕಿ ಸ್ಟೈಲ್ ಇಷ್ಟ ಆಗುತ್ತದೆ. ಮುಂದೆ ಒಂದು ದಿನ ಅವನು ಒಂದು ಮಗುವನ್ನು ಕಾಪಡಿದ್ದು ಕಂಡು,ಅವನಿಗೆ ಮನಸ್ಸು ಕೊಡುತ್ತಾಳೆ. ಇಲ್ಲಿ ಬ್ಲೇಡ ದಿನ ಮಂಜನ್ನ ಆ ಹುಡುಗಿ ನೋಡ್ತಾ ಇದ್ದರೆ ತನ್ನನ್ನೇ ನೋಡ್ತಾ ಇದ್ದಾಳೆ, ತನ್ನ ಬಗ್ಗೆ ಮಾತಾಡುತ್ತ ಇದ್ದಾಳೆ ಅಂತ ಮಂಡಿಗೆ ತಿನ್ನುತ್ತ ಇರುತ್ತಾನೆ, ಆದ್ರೆ ಒಂದು ದಿನ ಆ ಹುಡುಗಿ ಬಂದು ಮಂಜನಿಗೆ ILU ಹೇಳಿದಾಗ , ಬ್ಲೇಡನ ಆಶಾಗೋಪುರ ಬೀಳುತ್ತದೆ, ಅದಕ್ಕೆ ದೊಡ್ಡ ಗಲಾಟೆ ಆಗಿ ಮಂಜ ಅವರ ಗುಂಪಿನಿಂದ ಆಚೆ ಬರುತ್ತಾನೆ.

ಪ್ರೀತಿಯಲ್ಲಿ ಹೃದಯ ಶ್ರೀಮಂತಿಕೆ ಬೇಕು, ಪ್ರಾಣ ಕೊಡೊ ಗಂಡ ಬೇಕು ಅನ್ನುವ ಇವಳಿಗೆ ಮಂಜನೆ ಅನರೂಪ ವರ ಅನಿಸಿರುತ್ತಾನೆ. ದಿನ ಅವನು ೨ ಪ್ಯಾಕ್ ಸಿಗರೇಟ್, ೨೦ ಗುಟ್ಕಾ , ೨ ಬೀರು ಕುಡಿಯುವ ವಿಷಯ ಗೊತ್ತಿದ್ದರು, ಅವನ ದುಶ್ಚಟಗಳನ್ನು ಮುಂದು ಒಂದು ದಿನ ಬಿಡಿಸಬಹುದು ಅಂತ ನಂಬಿ ಅವನ ಜೊತೆ ಸುತ್ತತ್ತ ಇರುತ್ತಾಳೆ. ಪ್ರೀತಿಸಿದ ಮೇಲೆ ಚಳಿ ಎನು ಮಳೆ ಎನು, ಅವನ ಸಲುವಾಗಿ ನೂರಾರು ಸುಳ್ಳ್ಯ್ ಹೇಳುತ್ತ , ಸರ ಮಾರಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತ ಇರುತ್ತಾಳೆ. ಇಲ್ಲಿ ಮಂಜನ ಪಾಲಿಗೆ ಇದು ಕನಸೇ, ಅಷ್ಟು ಸುಂದರಿ ಹುಡುಗಿ ಎಲ್ಲಾ ಬಿಟ್ಟು ತನ್ನ ಹಿಂದೆ ಬಿದ್ದಿರುವಾಗ ಇದು ನನ್ನ ಪಾಲಿನ ಪುಣ್ಯ ಅಂತ
ಅವಳನ್ನೇ ಜೀವನ ಅಂತ ನಂಬಿರುತ್ತಾನೆ.

ಮುಂದೆ ಒಂದು ದಿನ ರಂಗಾಯಣ ರಘು ಇವಳ ಮಧುವೆಯನ್ನು ಬೇರೊಬ್ಬರ ಜೊತೆ ಬಲವಂತವಾಗಿ ನಡೆಸುತ್ತಾರೆ, ಆದ್ರೆ ಮೊದಲ ರಾತ್ರಿ ದಿನ ಅವಳು ಎಲ್ಲಾ ಕಥೆಯನ್ನು ಹೇಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಮರುದಿನ ಅವನು ಅವಳನ್ನು ಅವಳ ಪ್ರೇಮಿ ಜೊತೆ ಸೇರಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಇವರ ನಿಜವಾದ ಪ್ರೇಮಕಹಾನಿ. ಪ್ರೀತಿಸಿದವರಿಗೆ ೧೦೯ ಕಷ್ಟ ಅನ್ನೋ ಹಾಗೆ
ಇವರ ಬಳಿ ವಾಸಿಸೊಕ್ಕೆ ಮನೆ ಇರೊಲ್ಲ, ಕೆಲ್ಸ ಇರೊಲ್ಲ ಮತ್ತೆ ಸಂಸಾರ ನಡೆಸೊಕ್ಕೆ ವ್ಯವ್ಸಸ್ಥೆ ಇರುವದಿಲ್ಲ.
ಕೊನೆಗೆ ಯಾರೊಬ್ಬರ ಸಹಾಯದಿಂದ ಆಟೋ ಓಡಿಸುವ ಕೆಲ್ಸಕ್ಕೆ ಮುಂದಾಗುತ್ತಾನೆ ಮಂಜ. ದಿನಕ್ಕೆ ೧೫೦ ರೂಪಾಯಿ ಬಾಡಿಗೆ ಕೊಡಬೇಕು ಅನ್ನೊ ಕರಾರಲ್ಲಿ ಜೀವನ ಶುರು ಮಾಡುತ್ತಾರೆ.

ಇವರ ಜೀವನ ಒಂದು ಹಾಡಿನಲ್ಲಿ ೫ ವರುಷ ಓಡುತ್ತದೆ, ಒಂದು ಗಂಡು ಮಗು ಕೂಡ ಆಗುತ್ತದೆ , ಆದ್ರೆ ಅಲ್ಲಿಂದ ಚಿತ್ರದ ಓಟ ಕಮ್ಮಿ ಆಗುತ್ತದೆ.
ಪ್ರೀತಿಸುವುದು ಹೆಚ್ಚಲ್ಲ, ಸಂಸಾರ ಮಾಡುವುದು ಮತ್ತು ವಾಸ್ತವಕ್ಕೆ ಪ್ರೀತಿ ಉತ್ತರವಲ್ಲ, ಒಂದು ಹಂತದಲ್ಲಿ
ಯಾಕದ್ರು ಈ ಕ್ರಮ ಕೈಗೊಂಡೆವು ಅನ್ನೊ ಬೇಸರಿಕೆ ಕಾಡುವುದು ಸಹಜ, ಅದೇ ಇಬ್ಬರ ಬಾಳಲ್ಲಿ ಆಗುತ್ತ ಇರುತ್ತದೆ. ಎಷ್ಟು ಕಷ್ತ ಪಟ್ಟರೂ ಸಂಸಾರವನ್ನು ತೂಗಲಾರದೇ ಇರುವ ನಾಯಕ, ದುಡ್ಡಿಲ್ಲದೇ ಬಾಡಿಗೆ ಕಟ್ಟಲಾಗದೇ ಬೈಸಿಕೊಳ್ಖುವ ನಾಯಕಿ. ಎಲ್ಲಾ ಮಕ್ಕಳ ಹಾಗೆ ನನಗೂ ಎಲ್ಲ ಸವಲತ್ತು ಬೇಕು ಅನ್ನುವ
ಮಗು ಇವರ ಮಧ್ಯೆ ಕಥೆ ಗಿರಕಿ ಹೊಡೆಯುತ್ತ ಇರುತ್ತದೆ. ಇವರು ಪಡುವ ಪಾಡು, ಬಡವರನ್ನು ಸಮಾಜ ನೋಡುವ ರೀತಿ. ಅತಿಯಾದ ಸ್ಭಾಭಿಮಾನ ಇವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡುತ್ತದೆ. ಕೊನೆಗೆ
ಇವನ ಕೆಲ್ಸ ಹೋಗಿ, ಹೆಂಡತಿ ಕೆಲ್ಸಕ್ಕೆ ಸೇರಿಕೊಂಡು ದುಡಿಯುವ ಹಾಗೆ ಆಗುತ್ತದೆ. ಇವನಿಗೆ ಮನೆಯಲ್ಲಿ ಸಮಯ ಕಳೆಯುವುದೇ ಕಷ್ತ ಆಗಿ, ದಿನೇ ದಿನೇ ಕೊರಗುತ್ತ ಇರುತ್ತಾನೆ. ಆದ್ರೆ ಭವಿಷ್ಯತ್ ಬಗ್ಗೆ ಯೋಚನೆ ಮಾಡುತ್ತ ಕಷ್ತ ಪಡುತ್ತ ನಾಯಕಿ ಎಲ್ಲ ಕಷ್ಟವನ್ನು ನುಂಗಿ ಜೀವನ ಮಾಡುತ್ತ ಇರುತ್ತಾಳೆ.

ಹೀಗಿರುವಾಗ ಅವನ ಹಿಂದಿನ ಗೆಳೆಯ ಬ್ಲೇಡ್ ಸಿಕ್ಕಿ ಇವನಿಗೆ ಮಂಗಳಾರತಿ ಮಾಡುತ್ತಾನೆ
ಒವರ್ ಟೂ ಬ್ಲೇಡ್ ..

" ಲೇ ಮಂಜ ನೀನಾ ಇದು, ಸಿಗರೇಟ್ ಸೇದಿಕೊಂಡು ರಿಂಗ್ ಬಿಡುತ್ತಾ ಹೀರೋ ತರ ಇದ್ದೇಯಲ್ಲೊ ಇವತ್ತು ಮೋಟು ಬೀಡಿ ಸೇದೊ ಲೆವಲ್ಲಿಗೆ ಬಂದಿದ್ದೀಯಾ. ಅಲ್ಲ ಆ ದೇವತೆ ಅಂತ ಹುಡುಗಿ ನಿನಗೆ ಎಲ್ಲಾ ತ್ಯಾಗ ಮಾಡಿದಳು, ನೀನು ಎನು ಕೊಟ್ಟೆ. ಅವಳನ್ನು ಡಿಟಿಪಿ ಕೆಲ್ಸಕ್ಕೆ ಹಾಕಿ ಅವಳ ದುಡ್ಡಿನಲ್ಲಿ ಮಜಾ ಮಾಡ್ತಾ ಇದ್ದೀಯಾ. ಬೆನ್ನ ಹಿಂದೆ ಬಂದ ಹೆಣ್ಣನ್ನು ಕಣ್ಣಿಗೆ ಕಣ್ಣು ಹಾಗೆ ಕಾಪಾಡೊನೆ ಗಂಡಸು, ನೀನು ಅಲ್ಲ
ಬದಕಿದ್ದು ನೀನು ಅವಳನ್ನು ಮಗನನ್ನು ಬದುಕೊಕ್ಕೆ ಬಿಡೊಲ್ಲ, ಸಾಯಿ ಆಗ ಅವಳು ತನ್ನ ಅಪ್ಪನ ಮನೆಗೆ ಹೋಗುತ್ತಾಳೆ "

ಅಂತ ದಿವ್ಯ ಐಡಿಯಾ ಕೊಡುತ್ತಾನೆ. ಅದನ್ನೇ ನಾಯಕ ಅಕ್ಷರಷ ಮಾಡುತ್ತಾನೆ.

ಅಲ್ಲಿ ಇದು ಗೊತ್ತಿರದ ನಾಯಕಿ, ಮೊದಲ ಸಂಬಳದಲ್ಲಿ ನಾಯಕನಿಗೆ ಸಿಗರೇಟು,ಬೀರ್ ಎಲ್ಲಾ ತಂದು ಅವನಿಗೆ ಸರಪ್ರೈಸ್ ಕೊಡೊಣ ಅಂತ ಹೋದಾಗ ಕಾಣುವುದು ನಾಯಕ ಬಿದಿರು ಮೋಟರ್ ಹತ್ತಿರುವುದು. ಇದನ್ನು ಕಂಡು ಆವಳಿಗೆ ದು:ಖ ಬರೊಲ್ಲ, ಅಸಹ್ಯ ಆಗೊತ್ತೆ , ಆಗ ಅವಳ ಬಾಯಿಂದ ಬರುವುದೇ ಹೈಲಟ್ ಆಫ್ ದಿ ಫಿಲ್ಮ್ ..

"ಚೀ,,ನೀನು ಒಬ್ಬ ಗಂಡಸಾ, ನಿನ್ನ ನಂಬಿಕೊಂಡು ಎಲ್ಲಾ ಬಿಟ್ಟು ಬಂದನಲ್ಲೊ , ಆದ್ರೆ ನೀನು ಹೇಡಿ ತರ ಸತ್ತಿದ್ದೀಯಾ. ನಾಚಿಕೆ ಆಗೊತ್ತೆ ನನಗೆ, ನಿನಗೆ ಒಂದು ಕಣ್ಣಿರು ಹಾಕಿದರು ಅದೂ ವೇಸ್ಟೇ. ಪ್ರೇಮಿಗಳೆಲ್ಲಾ
ಸತ್ತು ಲೈಲಾ ಮಜನು,ಶಹಜಹಾನ ಆಗಬೇಕಾಗಿಲ್ಲ, ಬದುಕಿದ್ದು ಎನಾದರು ಸಾಧಿಸಬೇಕು. ನನ್ನ ಮಗನನ್ನು
ನಿನ್ನ ತರ ಮಾಡೊಲ್ಲ. ಅವನನ್ನು ಐನಸ್ಟೈನ್ ಮಾಡುತ್ತೆನೆ ಅಂತ ಶಪಥ ಮಾಡಿ ನಿನಗೆ ಒಂದು ಹಿಡಿ ಮಣ್ಣು ಹಾಕೊಲ್ಲ ಅಂತ ಹೋಗುತ್ತಾಳೆ.

ಹೀಗೆ ಒಂದು ಪಕ್ಕಾ ಲವ್ ಸ್ಟೋರಿ ಕೊನೆಯಾಗುತ್ತದೆ.




ಪ್ರಮುಖ ಅಂಶಗಳು.

೧) ಚಿತ್ರಿಕರಣ
೨) ಮೊದಲಾರ್ಧ
೩) ಶೀಲಾ ನಟನೆ
೪) ಹಾಡುಗಳು ಮತ್ತು ಹಿನ್ನಲೆ ಸಂಗೀತಾ
೫) ಚಿಕ್ಕ ಚಿಕ್ಕ ವಿಷಯಕ್ಕೂ ಚಂದ್ರು ಗಮನ ಕೊಟ್ಟಿರುವುದು.
೬) ಕ್ಲೈಮ್ಯಾಕ್ಸ
೭) ಸಮಾಜಿಕ ಸಂದೇಶ

-ve ಅಂಶಗಳು

೧) ದ್ವೀತಿಯಾರ್ಧ ಕಥೆ ಸಾಗುವ ವೇಗ
೨) ಸಾಕಪ್ಪ ಅನಿಸೋ ತೊಂದರೆಗಳು, ಪ್ರೇಕ್ಷಕ ಬರುವುದು ಚಿತ್ರಕ್ಕೆ ಮನರಂಜನೆಗೆ, ತನ್ನ ಎಲ್ಲ ದು:ಖವನ್ನು ಕ್ಷಣ ಮಾತ್ರಕ್ಕೆ ಆದರೂ ಮರೆಯೊಕ್ಕೆ. ಅದ್ರೆ ಕಣ್ಣಿರು ಬರೆಯುವ ಸೀನುಗಳು ನೋಡುವದಕ್ಕೆ ಹಿಂಸೆ ಅನಿಸುತ್ತದೆ ಮತ್ತು ಅಂತ ಚಿತ್ರಗಳು ಗೆಲ್ಲೊಲ್ಲ.
೩) ಪೊರಿಕಿ ಹುಡಗನನ್ನು ಒಂದೆರೆಡು ವಿಷಯಕ್ಕೆ ಲವ್ ಮಾಡುವ ಹುಡುಗಿ ನಿಜಕ್ಕೂ ನಿಜ ಅನಿಸುವದಿಲ್ಲ.
೪) ಕೆಲವು ಕಡೆ ಅಜಯ್ ಸಪ್ಪೆ ನಟನೆ
೫) ಆಟೋ ಚಾಲಕರ ಬಗ್ಗೆ ಒಳ್ಳೆ ಮಾತು ತುರುಕಿದ ಹಾಗೆ ಇದೆ.

ಒಟ್ಟಿನಲ್ಲಿ ಪ್ರೀತಿಯೇ ಬೇರೆ, ವಾಸ್ತವವೇ ಬೇರೆ, ಪ್ರೀತಿಸೊರು ತಾವು ಕಷ್ತ ಪಡೊದು ಸರಿ, ಆದ್ರೆ ತಮ್ಮ ಮಕ್ಕಳನ್ನು ಯಾಕೆ ಅದಕ್ಕೆ ಬಲಿಪಶು ಮಾಡಬೇಕು ಅನ್ನೊ ಸಂದೇಶದ ಜೊತೆ ಕೊನೆಗಾಣೋತೆ.

Saturday, August 22, 2009

ಮಂತ್ರಗಳಿಂದ ಅಭಿವೃದ್ದಿ ಸಾಧ್ಯ- ಸಂಸ್ಕೃತ ವಿವಿ ಬೇಕೇ ಬೇಕು!!!




ಗಣಕಯಂತ್ರದ OOAD ನಲ್ಲಿ IS A ಮತ್ತು HAS A ಅಂತ ಎರಡು ಪ್ರಭೇದಗಳು ಇವೆ, ಬಹಳ ಮಟ್ಟಿಗೆ ಒಂದು ವಿನ್ಯಾಸದಲ್ಲಿ ಇದೇ ತಳಹದಿ. software desgin ಮಾಡುವನು ಇವೆರಡರ ನಡುವಿನ ವ್ಯತ್ಯಾಸ ತಿಳಿದಿರಬೇಕು, ಇಲ್ಲವಾದರೆ ಅದು OOAD ಅಗೊಲ್ಲ, ಮೊನೊಲಿತಿಕ್ ಆಗುತ್ತದೆ. ನಮ್ಮ ಪುಣ್ಯ ಕನ್ನಡದ ಚಿಂತಕರು, ಸಂಸ್ಕೃತ ವಿವಿ ಸಮರ್ಥಕರು software design ಮಾಡುತ್ತ ಇಲ್ಲ, ಯಾಕೆಂದರೆ ಅವರಿಗೆ IS A ಮತ್ತು HAS A ವ್ಯತ್ಯಾಸ ತಿಳಿದ ಹಾಗೆ ಇಲ್ಲ.

ಕನ್ನಡ IS A ಸಂಸ್ಕೃತ ಅನ್ನೊ ವಾದ ಅಷ್ಟೆ ಅಲ್ಲ ಅದನ್ನು ಎಲ್ಲಾ ಭಾಷೆಗಳಿಗೂ ಹೋಲಿಸಿ ಎಲ್ಲದಕ್ಕೂ ಅಮ್ಮ ಇದೇ ಆಗಿದೆ, ಅಮ್ಮನನ್ನು ಕಡೆಗಣಿಸುವುದು ಪಾಪ ಅನ್ನೊ ಫರ್ಮಾನು ಹೊರಡಿಸುತ್ತಾರೆ. ಈ ವಾದವನ್ನೇ ಸರಿ ಒಪ್ಪಿಕೊಳ್ಳೊಣ,ಆದರೆ
ಬದುಕಿ ಬಾಳುತ್ತಿರುವ ಭಾಷೆಗಳಿಗೆ ನೀರೆರೆಯುವ ಬದಲು, ಮೃತಭಾಷೆಗೆ ನೀರೆರೆದು ದೇವರ ಕಾಲಕ್ಕೆ ಕರೆದುಕೊಂಡು ಹೋಗುತ್ತೆವೆ ಅನ್ನೊ ಕನವರಿಕೆ ಇದೇ ನೋಡಿ ಅದಕ್ಕೆ ಎನು ಹೇಳುವುದು ಗೊತ್ತಾಗುತ್ತಿಲ್ಲ.


ಸಂಸ್ಕೃತ ವಿವಿ ಬೇಕು ಅಂತ ಬಂದಿರುವ ಇಲ್ಲಿವರೆಗೂ ಲೇಖನಗಳು ವಸ್ತುಸ್ಥಿತಿಯನ್ನು ಸಂಪೂರ್ಣ ಅಲ್ಲಗಳೆದಿವೆ, ಹಿಂದಿನ ಪ್ರಯೋಗವನ್ನು ಕಡೆಗಣಿಸಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿವೆ. ಎಲ್ಲಕ್ಕಿಂತ ಮುಖ್ಯವಾಗಿ mission immpossible ಆಗುತ್ತದೆ ಅನ್ನೊ ಭ್ರಮೆಯನ್ನು ಡಂಗುರ ಮಾಡುತ್ತಿವೆ.

ಭಾಷೆಗಳು ಬೆಳೆಯುವುದು ಕೇವಲ ಒಂದು ಭಾಷೆಯಿಂದ ಅಲ್ಲ, ಕನ್ನಡ ಬೆಳವಣಿಗೆ ಆಗಿದ್ದು ಅನೇಕ ಭಾಷೆಗಳ ನೆರವಿನಿಂದ.
ಒಂದು ಹಂತದವರೆಗೂ ಅದು ಸಂಸ್ಕೃತದ ಜೀವಸತ್ವದಲ್ಲಿ ಬೆಳೆಯಿತು, ಅದು ಒಂದು ಕಾಲ ಆದಮೇಲೆ ಜಡವಾಯಿತು. ಆಗ ಕನ್ನಡ
ಬೇರೆ ಭಾಷೆಗಳ ಜೊತೆ ಕೊಟ್ಟು-ತೆಗೆದುಕೊಂಡು ಮುಂದುವರೆಯಿತು. ಅದು ಮಾಡಿರಲಿಲ್ಲ ಅಂದರೆ ಕನ್ನಡವೂ ಸಂಸೃತದ ಹಾಗೆ ಪೋಟೊಗೆ ಹಾರ ಹಾಕಿಸಿಕೊಳ್ಳುತ್ತ ಇತ್ತು.

ನನಗೂ ಬಹಳ ಹಿಂದೆ ಇದರ ಬಗ್ಗೆ ಜಿಜ್ಞಾಸೆಯಾಗಿ ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತದ ಮದ್ಯೆ ಇರುವ ಸಂಬಂಧ ಮತ್ತು ವ್ಯತ್ಯಾಸ ಬಗ್ಗೆ ಪಟ್ಟಿ ಮಾಡಿದ್ದೆ. ಒಂದು ಭಾಷೆ ಭವಿಷ್ಯತನಲ್ಲಿ ಉಳಿಯಬೇಕಾದರೆ ಅದು ಮುಂದಿನ ಕಾಲಕ್ಕೆ ಬೇಕಾದ ಅಣಿಯಾಗಿರಬೇಕು ಅನ್ನುವುದು ನನ್ನ ಭಾವನೆ.

ಶ್ರೀನಿವಾಸ ಮೂರ್ತಿ ವಿ.ಕ ನಲ್ಲಿ ಹೇಳಿರುವುದು ನೋಡಿ(ಮೇಲಿನ ಚಿತ್ರ ನೋಡಿ) , ಕನ್ನಡ,ತೆಲುಗು, ಮಲೆಯಾಳಂ ಬೆಳೆದಿರುವುದು ಸಂಸ್ಕೃತದಿಂದ , ಅದೇ ತಮಿಳು ಅದನ್ನು ದೂರ ಮಾಡಿ ಬರಡಾಯಿತು, ಬೇಕಿದ್ದರೆ ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪಟ್ಟಿ ನೋಡಿ ಅಂತಾರೆ. ಅಂದರೆ ಜ್ಞಾನಪೀಠ ಪಡೆಯಲು ಸಂಕ್ರುತದ ನೆರವು ಇಲ್ಲದೇ ಸಾಧ್ಯವಿಲ್ಲ, ಕನ್ನಡ ಆ ಮಟ್ಟಿಗೆ ಆಗಿದೆ ಅಂದರೆ ಅದು ಕವಿಗಳ ಪಾತ್ರ ಅಲ್ಲ ಎಲ್ಲ ಸಂಸ್ಕ್ರುತಮಯಂ

ಇ ಸಾಲು ಓದಿದ ಮೇಲೆ ಅವರ ಲೇಖನ ಮುಂದುವರೆಸಲು ನನಗೆ ಮನಸ್ಸಾಗಲಿಲ್ಲ. ಶ್ರೀಯುತರು ಜ್ಞಾನಪೀಠವನ್ನೇ ಎಲ್ಲ ಭಾಷೆಯ ಅಭಿವೃದ್ಧಿಗೆ ಅಳೆತೆಗೋಲು ಅಂತ ಮಾಡಿಕೊಂಡ ಹಾಗೆ ಇದೆ. ಅದಕ್ಕೆ ನಮ್ಮ ಕರುನಾಡಿನಲ್ಲಿ ಮಾತಿಗೆ ಮುಂಚೆ ೭ ಜ್ಞಾನಪೀಠಗಳ ಬಗ್ಗೆ ಪ್ರಸ್ತಾವ ಆಗುತ್ತದೆ, ಇನ್ನು ರಾಜ್ಯೋತ್ಸವ ಬಂದರೆ ಸಾಕು ಅವರ flex ಕಾಣಬಹುದು.

ಇದೇ ಕಾರೊಲಾರಿ ಇಟ್ಟುಕೊಂಡರೆ ನಮ್ಮ ಕನ್ನಡ ಭಾಷೆ ಇಂಗ್ಲೀಷಿಗಿಂತ ದೊಡ್ಡದು ಯಾಕೆ ಅಂದರೆ ನಮಗೆ ೭ ಜ್ಞಾನಪೀಠ ಬಂದಿದೆ, ಅದೇ ಇಂಗ್ಲೀಷಿಗೆ ಸೊನ್ನೆ ...lol

ಆ ಪ್ರಶಸ್ತಿ ಒಂದು ಖಾಸಗಿ ಕಂಪನಿ ಕೊಡುವ ಪ್ರಶಸ್ತಿ, ಅದು ಕೇವಲ ಸಾಹಿತ್ಯಕ್ಕೆ ಸಂಭಂದಿಸಿದ್ದು. ಭಾಷೆ ಅಂದರೆ ಕೇವಲ ಜುಟ್ಟಿನ ಮಲ್ಲಿಗೆ ಹೂವಿನ ಸಾಹಿತ್ಯ ಮಾತ್ರ ಅಲ್ಲ ಅಂತ ಶ್ರೀಯುತರು ಮನಗಾಣಬೇಕು. ಭವಿಷ್ಯತನಲ್ಲಿ ಅದರಲ್ಲೂ ಅಂತರ್ಜಾಲ ತಾಣದಲ್ಲಿ ತಮಿಳ್ ಯಾವ ರೀತಿ ಮುಂದುವರೆದಿದೆ ಅನ್ನೊ ಕಲ್ಪನೆ ಕೂಡ ಇಲ್ಲದೆ ಸಂಸ್ಕ್ರುತವನ್ನು ಸಮರ್ಥಿಸುವ ನೆಪದಲ್ಲಿ ಅದು ಬರಡಾಗಿದೆ ಅಂತ ಹೇಳಿದ್ದಾರೆ.

ಗಣಕೀಕರಣ ಮಾಡಬಹುದು ಅದಕ್ಕೆ ಸಂಸ್ಕ್ರುತವೇ ಸರಿಯಾದ (most scientific language) ಹೀಗೆ ಒಂದು ಸಾಲನ್ನು ನಮ್ಮ ವಿಚಾರವಂತರೂ ಗೊತ್ತಿಲ್ಲದೆ ,ಅರಿವಿಲ್ಲದೇ ಯಾಕೆ ಬರೆಯುತ್ತಾರೋ ನಾ ಕಾಣೆ. ಅಷ್ಟಕ್ಕೂ ಇದರ ಅರ್ಥ ಅವರಿಗಿದೇಯಾ , ಇದನ್ನು ಹೇಳುವಾಗ ಅವರು ಭಾಷೆ ಬಗ್ಗೆ ಹೇಳುತ್ತ ಇದ್ದರಾ ಇಲ್ಲ ಲಿಪಿ ಬಗ್ಗೆ ಹೇಳುತ್ತ ಇದ್ದಾರ ಗೊತ್ತಿಲ್ಲ. ಲಿಪಿ ಬಗ್ಗೆ ಇದ್ದರೆ, ನಮ್ಮದು ದೇವನಾಗಿರಿ ಲಿಪಿ ಅಲ್ಲ. ಇನ್ನು ಇದು ಕನ್ನಡಕ್ಕೆ ಯಾವ ರೀತಿ ಲಾಭವೋ ಅದನ್ನು ಯಾಕೆ ಉದಾಹರಿಸುತ್ತಾರೋ ನನಗೆ ಅರ್ಥ ಆಗುತ್ತಿಲ್ಲ.

ಸಾಮನ್ಯ ಜನ ನಾವು ಒಂದು ವಿಷ್ಯವನ್ನು ಅಂತರ್ಜಾಲ ತಾಣದಲ್ಲಿ ಅವರ ಭಾಷೆಯಲ್ಲಿ ತಿಳಿದುಕೊಳ್ಳಬೇಕು ಎಂದರೆ ಮೊದಲು ಮೊರೆ ಹೋಗುವುದು ವಿಕೀಪೀಡಿಯಾಗೆ. ಅದರಲ್ಲಿ ಕನ್ನಡ ೬೭೦೦ ಲೇಖನ ಇದ್ದರೆ, ತಮಿಳ್ ೧೯೧೦೦ ಲೇಖನ ಹೊಂದಿದೆ. ಅಂದರೆ ಸುಮಾರು ೩ ಪಟ್ಟು ನಮಗಿಂತ ಮುಂದೆ ಇದ್ದಾರೆ + ಆ ಭಾಷೆಯ ಜನರು ನಮಗಿಂತ ೧೩೦೦೦ ವಿಷ್ಯಗಳನ್ನು ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳಬಹುದು. ಇನ್ನು ಪದಬಂಡಾರ ಬಗ್ಗೆ ಬರುವದಾದರೆ ತಮಿಳನಲ್ಲಿ ೯೮,೦೦೦ ಪದಗಳು ಇವೆ, ಇನ್ನು ಕನ್ನಡದಲ್ಲಿ ೨೭೦೦ ಚಿಲ್ಲರೆ ಪದಗಳು ವಿಕ್ಷನರಿಯಲ್ಲಿ ಸಿಗುತ್ತವೆ. ಅದರಲ್ಲೂ ಕನ್ನಡ ಪದಗಳು ಅಸಂಖ್ಯ ಧಾತುಗಳಿಂದ ಹುಟ್ಟಿದವೂ ಅಲ್ಲ, ಸಂಪೂರ್ಣ ಕನ್ನಡ ಪದಗಳೇ, ಅಂದರೆ ಸಂಸ್ಕ್ರುತದ ಕೊಡುಗೆ ಯಾವ ಮಟ್ಟಕ್ಕೆ ಇದೆ ಅಂತ ತಿಳಿಯತ್ತಲ್ಲವೇ ?

ಕನ್ನಡ ಪದಗಳನ್ನು ಹುಟ್ಟಿಸುವುದು ಹೇಗೆ ಅದಕ್ಕೆ ಸಂಸ್ಕುತದ ಬಾಲಕ್ಕೆ ಜೋತು ಬೀಳಬೇಕೆ ಅನ್ನೊದರ ಬಗ್ಗೆ ಭಾಷವಿಜ್ಞಾನಿ ಡಾ.ಶಂಕರಭಟ್ಟರು ತಮ್ಮ ಪುಸ್ತಕದಲ್ಲಿ ತೋರಿಸಿದ್ದಾರೆ. ಆದ್ದರಿಂದ ಕನ್ನಡಕ್ಕೆ ಸಂಸ್ಕ್ರುತ ಬೇಕೆ ಬೇಕು ಅನ್ನೊ ಕಾನೂನು ಇಲ್ಲ, ಹಾಗೆ ಇಲ್ಲದೇ ಬೆಳೆದಿರುವ ತಮಿಳ್ ನಮ್ಮ ಮುಂದೆ ಇಲ್ಲವೇ ??

* unicode costorium ಗೆ ನಮ್ಮ ಸರ್ಕಾರ ಸದಸ್ಯರಾಗಿಲ್ಲ, ನನಗೆ ಅನಿಸೊ ಹಾಗೆ ಅದು ಎನು ಅಂತ ಕೂಡ ನಮ್ಮ ಚಿಂತಕರಿಗೆ ಗೊತ್ತಿಲ್ಲ. ಅದೇ ತಮಿಳುನಾಡು ಸರಕಾರ ಆಗಿದೆ.

* ೧೨ ವರುಷಗಳಿಂದ , ೨ ವರುಷಕ್ಕೆ ಒಮ್ಮೆ ಅಂತರ್ಜಾಲದಲ್ಲಿ ತಮಿಳ್ ಅನ್ನುವ ಬಗ್ಗೆ ವಿಶ್ವಮಟ್ತದ ಸಭೆ ನಡೆಯುತ್ತದೆ, ಅದರಲ್ಲಿ ಅಂತರ್ಜಾಲ ತಾಣದಲ್ಲಿ ಇರುವ ಸವಾಲು ಮತ್ತು ಅದನ್ನು ಎದುರಿಸುವ ಬಗೆ ಚರ್ಚೆ ಆಗುತ್ತದೆ. ಅಂದರೆ ಮೇಲೆ ನಾನು ಹೇಳಿದ ವಿಷ್ಯಗಳು ಯಾಕೆ ತಮಿಳ್ ಭಾಷೆ ನಮಗಿಂತ ಮುಂದೆ ಇದೆ ಅನ್ನುವದಕ್ಕೆ ಸಾಕ್ಷಿ.

ಇದರಲ್ಲಿ ತಂತ್ರಜ್ಞಾನ ಮಾಡುವರು, ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳಿಂದ ವಿಶ್ವಮಟ್ಟದ ಅವಿಷ್ಕಾರಗಳಿಗೆ ಪೇಪರ್ ಕರೆಯಲಾಗುತ್ತದೆ, ಆಯ್ಕೆಯಾದ ವಿಷ್ಯಗಳನ್ನು ಆ ಸಭೆಯಲ್ಲಿ ಮಂಡಿಸಲಾಗುತ್ತದೆ.

E-Government,Education Technology,Database driven applications,
Mobile and hand-held technologies,Tamil Optical Character Recognition,
Machine Translation, Spell Checking and Speech Recognition,
Tamil in Indic language cluster and multi-lingual environments,Tamil Character Encoding Standards,Multilingual Domain Names

ಹೀಗೆ ನಾವು ಮುನ್ನೆಡೆಯಲು ಮತ್ತು ನಮ್ಮ ದೈನಂದಿನದಲ್ಲಿ ಮತ್ತು ಹೊಸ ತಂತ್ರಜ್ಞಾನದಲ್ಲಿ ತಮಿಳ್ ತರುವುದು ಹೇಗೆ ಅಂತ ಮೇಲೆ ಹೇಳಿರುವ ಪ್ರಮುಖ ವಿಷಯಗಳ ಅಡಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಇದಕ್ಕೆ ವಿಶ್ವದಿಂದ ಎಲ್ಲಾ ಪಂಡಿತರು ಬರುತ್ತಾರೆ.
ಮೇಲೆ ಹೇಳಿರುವುದು ಬರಿ tip in iceberg ಅಷ್ತೆ, ಡಿಜಿಟಲ್, open source ಅಷ್ಟು ಯಾಕೆ ತಮಿಳ್ ವರ್ಚುಯಲ್ ವಿಶ್ವವಿದ್ಯಾಲಯ ಕೂಡ ಮಾಡಿಕೊಂಡು ನಮಗಿಂತ ಬಹಳ ಮುಂದೆ ಇದ್ದಾರೆ.

ಚಿಂತೆ ಬೇಡ, ಸಂಸ್ಕ್ರುತದ ಪುಸ್ತಕದಲ್ಲಿ ಇದಕ್ಕೆ ಒಂದು ಮಂತ್ರ ಇದೆ, ಅದನ್ನು ಓದಿದರೆ ಇವೆಲ್ಲ ೫ ನಿಮಿಷದ ಕೆಲ್ಸ ಅಂತ ನಂಬಿರುವ
ನಾವು ಇನ್ನು ಮಂತ್ರದಿಂದ ಅಭಿವೃದ್ದಿಯ ಮಾವಿನಕಾಯಿ ಉದುರಿಸುವದರಲ್ಲೇ ಇದ್ದೇವೆ.

ಆ ಮಂತ್ರ ತಿಳಿಯಲು, ಉತ್ತುಂಗಕ್ಕೆ ಹೋಗಲು ನಮಗೆ ಸಂಸ್ಕುತ ವಿಶ್ಯವಿದ್ಯಾಲಯ ಬೇಕೆ ಬೇಕು.

ಬ್ಲಾಗ್,ಕಾಮೆಂಟ್ ಮತ್ತು ಸುತ್ತಮುತ್ತ

ಕಳೆದ ಎರಡು ವಾರಗಳಿಂದ ಬ್ಲಾಗ್ ಬಗ್ಗೆ ಮತ್ತು ಅದಕ್ಕೆ ಅಂಟಿಕೊಂಡಿರುವ ವೈರಸ್ ಬಗ್ಗೆ ಪುಂಖಾನುಪುಂಖ ಲೇಖನಗಳನ್ನು ನೋಡುತ್ತ ಇದ್ದೇವೆ. ಹೆಚ್ಚಾಗಿ ಇದು ಎಲ್ಲೊ ಅನಾನಿಮಸ್ ಅನ್ನೊ ವೈರಸ್ ಇಂದ ಬಳಲಿದ ಹತಾಶ ಜನರ ಕಥೆ ಇದ್ದ ಹಾಗೆ ಇದೆ. ಬ್ಲಾಗಿಂಗನಲ್ಲಿ ಇದು ಸಾಮನ್ಯ ಅಂಶ, ಆದರೆ ಇದಕ್ಕೆ ಹೆದರಿ ಬ್ಲಾಗ್ ನಿಲ್ಲಿಸುತ್ತ ಇದ್ದೇವೆ ಅಂತ ಹೇಳುವ ವರಾತ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

ಬಹಳ ಆಶ್ಚರ್ಯವೆಂದರೆ ಇದನ್ನು ದೂರಿರೂವ ಅನೇಕರ ಬ್ಲಾಗಿನಲ್ಲಿ controversy ಲೇಖನಗಳು ನನಗೆ ಹೆಚ್ಚು ಕಂಡು ಬರಲಿಲ್ಲ, ಕಥೆ-ಕವಿತೆ-ಅಡಿಗೆ-ಊಟ ಇದರ ಬಗ್ಗೆ ಚರ್ಚೆ ಇರುವವು,ಅವುಗಳಿಗೆ ಈ ವೈರಸ್ ಕಾಡಿದೆ ಅಂದರೆ ನಿಜಕ್ಕು ಭಯ ಆಗುತ್ತದೆ.


ನನಗೂ ಅನೇಕರು ಇದನ್ನೇ ಹೇಳಿದ್ದಾರೆ, ಬ್ಲಾಗ್ ಮಾಡುವುದು ದೊಡ್ಡದಲ್ಲ, ಅದಕ್ಕೆ ಬರುವ ಕಾಮೆಂಟಗಳನ್ನು
ಉತ್ತರಿಸುವುದು ಕಷ್ತ. ಇದು ಒಂದು ಹಂತಕ್ಕೆ ನಿಜ, ಕಾಮೆಂಟುಗಳು ಚರ್ಚೆಗೆ ಮತ್ತು ಮಾಡಿದ ಪೋಸ್ತೀಗೆ ಪೂರಕ ಇದ್ದರೆ ಅದು ತಪ್ಪಲ್ಲ, ಆದರೆ ಅನವಶ್ಯವಾಗಿ ಬೇಡದ ವಿಷಯಗಳ ಬಗ್ಗೆ ಬರೆಯುವುದು, ಜಾತಿ ಎಳೆದು ತರುವುದು ಆದರೆ ನಿಜಕ್ಕೂ ಅಸಹ್ಯ.

ಹಾಗಾದರೆ ಕಾಮೆಂಟ್ ಬೇಡವೇ ??

ನನ್ನ ಅನುಭವದಲ್ಲಿ ಎರಡರ ರುಚಿ ಉಂಡಿರುವೆ, ಮುಖ್ಯವಾಗಿ ನಮ್ಮ ಬ್ಲಾಗಿನಲ್ಲಿ ನಮ್ಮ ಲೇಖ್ಝನ ಪ್ರಕಟಗೊಂಡರೆ ನಮ್ಮ ಕೈನಲ್ಲಿ ಸೂತ್ರ ಇರುತ್ತದೆ, ನಮಗೆ ಬೇಕಾದ ಹಾಗೆ ಕಾಮೆಂಟ ಹಾಕುವ ಜನರನ್ನು ನಾವು ನಿಭಾಯಿಸಬಹುದು, ಬೇಕಾದರೆ ಅನಾನಿಮಸ್ ಸಂಪೂರ್ಣ ನಿಲ್ಲಿಸಬಹುದು ಇಲ್ಲ ಖಡ್ಡಾಯವಾಗಿ ಗೂಗಲ್ ಐಡಿ ಕೊಡುವ ಹಾಗೆ ಮಾಡಬಹುದು. ಇದರ ಮೇಲೂ ಮಾಡರೇಶನಗೆ ಅವಕಾಶ ಇರುತ್ತದೆ.

ಅದೇ ಬೇರೆ ತಾಣದಲ್ಲಿ ಪ್ರಕಟಗೊಂಡು ಅಲ್ಲಿ ಬರುವ ಕಾಮೆಂಟುಗಳನ್ನು ನಿಭಾಯಿಸುವದಕ್ಕೆ ದಿನಗಟ್ತಲೇ ಬೇಕು. ಮುಖ್ಯವಾಗಿ ಮಾಡರೇಷನ್ ಇಲ್ಲದಿದ್ದಲ್ಲಿ ಚರ್ಚೆಯನ್ನು ಎಕಬದಿಗೆ ತರುವ ಕೆಲ್ಸ ಬರೆದವರು ಮಾಡುತ್ತ ಇರಬೇಕು. ವಿಷಾಯಂತರ ಮಾಡುವುದು ಅದರಲ್ಲೂ , ಕೊಳಕು ಮಾತುಗಳನ್ನು ತೆಗೆಯುವ ಕೆಲ್ಸ ಇದೆ ಅಲ್ವ, ಆ ಕೆಲ್ಸಕ್ಕೆ ಲೇಖನ ಬರೆದಕ್ಕಿಂತಲೂ ಹೆಚ್ಚು ಸಮಯ ವ್ಯಯ ಮಾಡಬೇಕು, ಒಮ್ಮೆ ಇದಕ್ಕೆ ಇಳಿದರೆ ಚಕ್ರವ್ಯೂಹ ಇದ್ದ ಹಾಗೆ. ಉತ್ತರ ಕೊಡದಿದ್ದರೆ ಅಯ್ಯೋ ಓಡಿಹೋದ ಅನ್ನೊ ಟೀಕೆಗಳು.
ರಾತ್ರಿ ಎಲ್ಲಾ ರಾಮಾಯಣ ಕೇಳಿ ಮತ್ತೆ ರಾಮ ಯಾರು ಅಂತ ಪ್ರಶ್ನೆ ಕೇಳಿ ನಿಮ್ಮ ತಾಳ್ಮೆ ಪರೀಕ್ಷಿಸುವ
ಜನರು ಬೆಂಗಳೂರಿನ ರಸ್ತೆಯಲ್ಲಿ ಸಡನ್ ಆಗಿ ವಾಹನದ ಹಾಗೆ ಬಂದು ಮರೆಯಾಗುತ್ತಾರೆ.


ಅನೇಕ ತಾಣಗಳು ಬೇಕಂತಲೇ ತಮ್ಮ ವೆಬಸೈಟಿಗೆ ಹಿಟ್ ಹೆಚ್ಚಿಸಲು ನಕಲಿ ಕಾಮೆಂಟ್ ಹಾಕುತ್ತವೆ, ಯಾವುದಾದರೂ ಪ್ರಚಲಿತ ಲೇಖನ ಪ್ರಕಟಗೊಂಡ ಹತ್ತು ನಿಮಿಷದಲ್ಲಿ ಅದರ ಪರ,ವಿರುದ್ಧ ಅನೇಕ ಕಾಮೆಂಟ್ ಪ್ರತ್ಯಕ್ಷ ಆಗಿ ಆ ವರ್ಗದ ಜನರನ್ನು ಬೇಡವೆಂದರೂ ಸೆಳೆಯುತ್ತದೆ. ಈ ಪರ-ವಿರುದ್ಧ ಯುದ್ದದಲ್ಲಿ ಲಾಭ ಆಗುವುದು ವೆಬಸೈಟಿಗೆ ಮಾತ್ರ. ಇದೊಂದು ರೀತಿ TRP ಹೆಚ್ಚಿಸುವ ಕ್ರಿಯೆ. ಇದನ್ನು ವಿಷ್ಲೇಶಿಸುವರು ಮುಂದೆ ಇಂತಹ ವಿಷಯಗಳನ್ನೇ ಸುದ್ದಿಯನ್ನಾಗಿ ಮಾಡಿಹಾಕುತ್ತಾರೆ. ಅದರಲ್ಲಿ ಚರ್ಚೆ
ಎಷ್ಟು ಮಟ್ಟಿಗೆ ನಡೆಯತ್ತೊ ಇಲ್ಲವೋ, ಅದರಲ್ಲಿ ಬರೆದಿರುವ ಕಾಮೆಂಟುಗಳು ನಗೆ ತರಿಸುತ್ತವೆ ಇಲ್ಲ ಜನರಲ್ಲಿ ವಿಕೃತ ಸಂತೋಷ ಉಂಟು ಮಾಡುತ್ತವೆ. ಇದನ್ನೆ ಓದುವ ದೊಡ್ಡ ವರ್ಗ ಬೇರೆ ಇರುವುದು ನಿಜಕ್ಕೂ ಬೇಸರದ ಸಂಗತಿ.

ಇದಕ್ಕೆ ಅಪವಾದವಾಗಿ ಚುರುಮುರಿಯಲ್ಲಿ, ಸಂಪದದಲ್ಲಿ ಬರುವ ಕಾಮೆಂಟುಗಳು ಒಳ್ಳೆ ಚರ್ಚೆಯನ್ನು ಹುಟ್ಟುಹಾಕುತ್ತವೆ ಮತ್ತು
ಅನೇಕ ವಿಷಯಗಳನ್ನು ತೆರೆದಿಡುತ್ತವೆ. ಸಂಪದನಲ್ಲಿ ಸದಸ್ಯರೂ ಮಾತ್ರ ಕಾಮೆಂಟ್ ಮಾಡಬಹುದು, ಈ ರೀತಿ ಒಂದು ಹತೋಟಿ ಇರುತ್ತದೆ.

ಬ್ಲಾಗ್ ಒಂದು ಗಾಜಿನ ಮನೆ ಮತ್ತು ಇದು ಮುಕ್ತ

ಇನ್ನು ಅನೇಕ ಲೇಖನಗಳಲ್ಲಿ ಈ ರೀತಿ ಅನಾನಿಮಸ್ ಸಮಸ್ಯೆ ಯಾಕೆ ಬರುತ್ತದೆ ಎಂದರೆ, ಅವರು ಬರೆದಿರುವ ಭಾಷೆ,ಪದ ಬಳಕೆ
ಮಾಡಿರುವ ಅಪವಾದ ಮತ್ತು ಒಂದು ಪಕ್ಷೀಯ ಧೋರಣೆ ಇದು ಅನೇಕ ಸಾರಸತ್ವ ವರ್ಗಕ್ಕೆ ಜಗಳ ತರುತ್ತದೆ. ತಮ್ಮದೇ ಸರಿಯಾದ ಚಿಂತನೆ ಅಂತ ಎಡ-ಬಲ ಮಾಡಿಕೊಂಡು ವಾದಿಸುವ ಅನೇಕ ಚಿಂತನೆಗಳು ಕೊನೆಗೆ ಕೊನೆ ಕಾಣುವುದು personal attack ನಲ್ಲಿ. ಬೇರೆಯವರ ಮೇಲೆ ಹಿಗ್ಗಾಮುಗ್ಗ ಬ್ಲಾಗಿನಲ್ಲಿ ಆರೋಪ ಮಾಡುವ ಜನರು ತಾವು ಗಾಜಿನ ಮನೆಯಲ್ಲಿ ಇದ್ದೀವಿ ಅಂತ
ಮರೆಯಬಾರದು. ಅದ್ದರಿಂದ ಆ ವಿಷಯದಲ್ಲಿ ಚರ್ಚೆ ಬಂದರೆ ನಿಂತು ಉತ್ತರ ಕೊಡಬೇಕು.

ಬ್ಲಾಗ್ ಮಾಡುವುದು ನಿಮ್ಮ ಸಲುವಾಗಿ ಆಗಿದ್ದರೆ ನಿಮ್ಮದೇ ಒಂದು ತಾಣ ಮಾಡಿಕೊಂಡು, ನಿಮ್ಮ ಅಭಿಮಾನಿ ವರ್ಗಕ್ಕೆ ಮಾತ್ರ ಅನುಮತಿ ಕೊಟ್ಟು ಓದಿಸಿ, ಮುಕ್ತ ಇಂಟರನೆಟ್ಟಿನಲ್ಲಿ ಹಾಕಿದರೆ ಅದನ್ನು ಓದುವ ಹಕ್ಕು ಎಲ್ಲರಿಗೂ ಇರುತ್ತದೆ, ಕೇವಲ ಒಂದು ಪೋಸ್ಟ ಹಾಕಿ ನನ್ನ ಕೆಲ್ಸ ಮುಗೀತು ಅಂತ ಕೂರುವದಕ್ಕೆ ಆಗುವದಿಲ್ಲ.


ಇದು ಹಿಂದಿನ ಕಾಲ ಅಲ್ಲ

ಪೇಪರ್ ಇಂದ ಅನೇಕ ಪತ್ರಕರ್ತರು ಬ್ಲಾಗಿಗೆ ಹಾರಿದ್ದಾರೆ, ಈ ಕಾಮೆಂಟಗಳ ತೊಂದರೆಯಲ್ಲಿ ಸಿಕ್ಕಿರುವುದು ಇವರೇ. ಇದಕ್ಕೆ ಉತ್ತರ ಬಹಳ ಸುಲಭ, ಮುಕ್ಕಾಲು ಜನ ಪೇಪರಿನಲ್ಲಿ ಪ್ರಕಟ ಆಗುವ ತಮ್ಮ ಅಂಕಣಗಳನ್ನು ಬ್ಲಾಗಿಗೆ ಹಾಕುತ್ತ ಇದ್ದಾರೆ ಜೊತೆಗೆ ಬೇರೆ ಲೇಖನಗಳನ್ನು ಸೇರಿಸುತ್ತಾರೆ. ಪೇಪರಿನಲ್ಲಿ ಬರೆದ ಲೇಖನಗಳಿಗೆ ಒಬ್ಬ ಸಾಮಾನ್ಯ ಓದುಗ ಉತ್ತರ ಬರೆಯಬೇಕು ಇಲ್ಲ ಅದು ಚರ್ಚೆಗೆ ಒಳಗಾಗಬೇಕು ಅಂತ ಮಾಡಬೇಕಿದ್ದರೆ ಪತ್ರ ಬರೆದು, ಅದನ್ನು ಪೋಸ್ತಿನಲ್ಲಿ ಹಾಕಿ ಮುಂದು ಒಂದು ದಿನ ಅದು ಕಬು ಗೆ ಹೋಗಿಲ್ಲವೆಂದರೆ ಉತ್ತರ ಸಿಗಬಹುದಿತ್ತು. ಆದರೆ ಇಗ ಅದು ೫ ನಿಮಿಷದ ಕೆಲ್ಸ, ಜನ ತಮ್ಮ ಅಭಿಪ್ರಾಯಗಳನ್ನು ಬಹಳ ಸುಲಭವಾಗಿ ವ್ಯಕ್ತ ಪಡಿಸಬಹುದು. ಅವುಗಳಿಗೆ ಉತ್ತರ ಕೊಡುವ ಸಮಯ ಹೊಂದಿಸುವುದೇ ಅನೇಕರ ಸಮಸ್ಯೆ ಅಂತ ನನ್ನ ಅಭಿಪ್ರಾಯ. ಮುಕ್ತ ಇಂಟರಿನೆಟ್ಟಿನಲ್ಲಿ ಜನ ಲೇಖಕರ ವಿಚಾರಧಾರೆಯನ್ನೆ ಪ್ರಶ್ನೆ ಮಾಡಬಹುದು, ಇದು ಅನೇಕರಿಗೆ ಅಪಥ್ಯ. ಅದಕ್ಕೆ
ಅಯ್ಯೊ ಇದರ ಸಹವಾಸವೇ ಬೇಡಪ್ಪ ಅಂತ ದೂರ ಸರಿಯುತ್ತಾರೆ.


ಉಘೇ ಉಘೇ ಕಮ್ಮಿ ಆಗಿ ಚರ್ಚೆಯ ಆಸ್ಪದ ಇರಬೇಕು

ಆದರೆ ಅನೇಕ ಬ್ಲಾಗಿನಲ್ಲಿ ಬರುವ ಲೇಖನಗಳು ತಾವು ಬರೆದಿರುವುದೇ ಸತ್ಯ ಅನ್ನೊ ದೋರಣೆಯಲ್ಲಿ, ಚರ್ಚೆಗೆ ಅವಕಾಶ ಕೊಡದ ರೀತಿಯಲ್ಲಿ ಬರುತ್ತದೆ. ಮುಕ್ಕಾಲು ಭಾಗ ಕಾಮೆಂಟುಗಳನ್ನು ನೋಡಿದರೆ ಅವರದೇ ಒಂದು ಸಿಂಡಿಕೇಟ್ ಉಘೇ ಉಘೇ ಮಾಡುತ್ತ ಇರುತ್ತದೆ, ಎಲ್ಲೊ ಒಂದು ಕಡೆ ನಿನಗೆ ನಾನು ಹೊಗಳುತ್ತೆನೆ ನನಗೆ ನೀನು ಹೊಗಳು ಅನ್ನೊ ಮಾದರಿಯಲ್ಲಿ. ಒಟ್ಟಿನಲ್ಲಿ ಎಕಪಕ್ಷೀಯವಾಗಿ ಅವರ ವಿಚಾರಧಾರೆಗಳನ್ನು ಹರಿಸುತ್ತವೆ. ಅಲ್ಲಿ ಕಾಮೆಂಟನ್ನು ಹೊಗಳಿ ಬರೆದರೆ ಮಾತ್ರ ಪ್ರಕಟಿಸುತ್ತಾರೆ, ಅದೇ ಚರ್ಚಾರೂಪದಲ್ಲಿ ಹಾಕಿದರೆ ತಲೆಯು ಕೆಡಿಸಿಕೊಳ್ಳುವದಿಲ್ಲ

ಉತ್ತಮ ಕಾಮೆಂಟುಗಳಿಂದ ಕಲಿಯಬಹುದು

ಅನೇಕ ನನಗೆ ಬಂದ ಕಾಮೆಂಟುಗಳು ನನ್ನ ವಿರೋಧಿ ಆಗೇ ಇದ್ದವೇ,ಅನೇಕ ಕಡೆ ನನಗೆ ನಾನು ಮಾಡಿದ ತಪ್ಪನ್ನು ಸರಿ ಪಡಿಸಿದ್ದಾರೆ ಅನಾನಿಮಸ್ ಓದುಗರು, ಇನ್ನ ಅನೇಕ ಬಾರಿ we agree to disagree ಅನ್ನೊ ಒಪ್ಪಂದಕ್ಕೆ ಬಂದಿದ್ದೇವೆ. ಇನ್ನು ನಾವು ಬರೆದ ಪೋಸ್ತಿಗೆ ಉತ್ತರವಾಗಿ ಅನೇಕರು ಬ್ಲಾಗ್ ಹಾಕಿ ತಮ್ಮ ಅಭಿಪ್ರಾಯ ಹಾಕಿರುವುದು ನಾವು ನೋಡಿರುತ್ತೆವೆ.ಅದ್ದರಿಂದ ಸರಸಗಾಟಾಗಿ ವ್ಯವಸ್ಥೆಯನ್ನು ತೆಗಳುವದನ್ನು ಬಿಟ್ಟು ಅದನ್ನು ಬಳಸುವ ಬಗ್ಗೆ ನಮ್ಮ ಬ್ಲಾಗಿಗರು ಗಮನ ಹರಿಸಬೇಕು.