Saturday, June 26, 2010

ಕೃಷ್ಣನ ಲವ್ ಸ್ಟೋರಿ - krishanan Love story - Movie Review

ಒಂದು ಚಿತ್ರ ಗೆಲ್ಲುವದಕ್ಕೆ ಇಲ್ಲ ಸೋಲುವದಕ್ಕೆ ನಿರ್ದೇಶಕನೇ ಕಾರಣ, ಅವನಿಲ್ಲದೇ ಎನೂ ಇಲ್ಲ. ಅತಿರಥ ಮಹಾರಥರನ್ನು ಹಾಕಿಕೊಂಡರೂ ಸರಿಯಾದ ವೇಗ ಮತ್ತು ಕಥೆ ಇರದಿದ್ದಲ್ಲಿ ಪ್ರೇಕ್ಷಕ ಮಹಾಪ್ರಭುವಿಗೆ ತಾತ್ಸರವೇ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತಿಚಿಗೆ ತೆರೆಕಂಡ ರಾವಣ್ ಚಿತ್ರ, ಚಿತ್ರದ ಎಲ್ಲ ವಿಭಾಗದಲ್ಲೂ ಭಾರತದ ದಿ ಬೆಸ್ಟ ಅಂತವರನ್ನೇ ಹಾಕಿಕೊಂಡ್ವಿ ಎಂದು ಮಾಡಿದ ಚಿತ್ರ ಸರಿಯಾದ ನಿರ್ದೇಶನ ಇಲ್ಲದಿದ್ದರಿಂದ ಮಕಾಡೆ ಮಲಗಿತು. ಇದೇ ಮಾತುಗಳನ್ನು ಬೇರೆ ರೀತಿಯಲ್ಲಿ ಹೇಳಿದ ಶಶಾಂಕ್ ಮಾತು ಅನೇಕರಿಗೆ ಅಪಥ್ಯ ಅನಿಸಿದರೂ ಆಶ್ಚರ್ಯವಿಲ್ಲ. ಮೊಗ್ಗಿನ ಮನಸ್ಸು ಎಂಬ ನಾಯಕಿ ಪ್ರಧಾನ ಚಿತ್ರವನ್ನು ತೆಗೆದು
ಅನೇಕ ಕನ್ನಡ ಚಿತ್ರ ನೋಡದ ಹುಡುಗಿಯರನ್ನು ತಮ್ಮ ಹಿಂದಿನ ಜೀವನಕ್ಕೆ ಕರೆದುಕೊಂಡು ಹೋಗಿ ನಾಸ್ಟಲಜಿಕ್ ಮಾಡಿದ
ಶಶಾಂಕ್ ಅವರಿಂದ ಅದಕ್ಕಿಂತ ಹೆಚ್ಚಾಗಿ ಈ ಚಿತ್ರದಲ್ಲಿ ಅಪೇಕ್ಷೆ ಇತ್ತು ಜೊತೆಗೆ ಚಂದ್ರು ತರ ಪ್ರೇಮ್ ಕಹಾನಿ ಮಾಡಿ ಬಿಡುತ್ತಾರ ಅನ್ನೋ ಭಯ ಕೂಡ. ಇವುಗಳ ನಡುವೆ ಚಿತ್ರಕ್ಕೆ ಹೋದಾಗ ಭರವಸೆ ಸುಳ್ಳಾಗದೇ ಇದ್ದಿದ್ದು ಸಂತೋಷದ ವಿಷಯ.

ಕನ್ನಡ ಚಿತ್ರಗಳನ್ನು ಗಾಂಧಿನಗರದಲ್ಲೇ ನೋಡಬೇಕು ಅನ್ನೊ ಹಿಂದಿನ ಕಾಲದ ರಿವಾಜಿಗೆ ಬಿದ್ದ ನಾನು ಸಾಗರ ಚಿತ್ರ ಮಂದಿರದಲ್ಲಿ
ನೋಡಿದೆ. ಹಾಗೆ ನೋಡುವದಕ್ಕೆ ಮುಖ್ಯ ಕಾರಣ ಚಿತ್ರವನ್ನು ನಾವು ಮಾತ್ರ ಅನುಭವಿಸದೇ ನೂರಾರು ಜನರ ಭಾವನೆಗಳ ಜೊತೆ ಅನುಭವಿಸಬಹುದು.


ಫುಲ್ ಪೀಲಿಂಗ್ ಮಗಾ ಅನ್ನೊ ಟ್ಯಾಗ್ ಲೈನೊಂದಿದೆ ಕೃಷ್ಣನ ಪ್ರೀತಿ ಕಥೆ ತೆರೆದುಕೊಳ್ಳೊತ್ತ್ರೆ. ಗಲ್ಲಿ ಕ್ರಿಕೆಟನೊಂದಿಗೆ ಆರಂಭವಾಗೋ ಕಥೆ ನಾಯಕ ಕೃಷ್ಣನ ಮತ್ತು ಅವನ ಗಾಡಿ ಹೊಂಬೆಗೌಡ ಜೊತೆ ಪರಿಚಯಗೊಳ್ಳೊತ್ತೆ. ಗುದ್ದಾಟಕ್ಕೆ, ಹೊಡೆದಾಟಕ್ಕೆ ಅವನ ಮತ್ತು ಅವನ ಪಟಾಲಂ ಸದಾ ರೆಡಿ. ಅವನ ಗೆಳೆಯರಲ್ಲಿ ಅದೇ ಪಂಡಿತ, ಹೀಗೂ ಉಂಟೆ ಮೈನಸ್ , ಡಡಿಯಾ ಚಿತ್ರ ವಿಚಿತ್ರ ಗೆಳೆಯರು ಸದಾ ನಾಯಕನ ಬೆನ್ನಿಗೆ ಅಂಟಿಕೊಂಡು ಗಾರ್ಮೆಟ್ಸಗೆ ಬಟ್ಟೆ ಸರಬಾರಾಜು ಮಾಡುತ್ತ, ಸಮಯ ಸಿಕ್ಕಾಗ ಗಲ್ಲಿ ಕ್ರಿಕೆಟ್ ಆಡುತ್ತ, ಧಮ್,ಎಣ್ಣೆ ಹಾಕುತ್ತ ಕಾಲ ಕಳೆಯುತ್ತ ಇರುತ್ತಾರೆ.

ನಾಯಕನದು ಚಿಕ್ಕ ಸಂಸಾರ, ಕಿರಾಣಿ ಅಂಗಡಿ ನಡೆಸುತ್ತ ಇರುವ ಅಪ್ಪ ಕೆಂಪೇಗೌಡ , ಗೃಹಿಣಿ ಅಮ್ಮ ಮತ್ತು ಮುದ್ದಿನ ತಂಗಿಯ ಜೊತೆ ಒಲವೇ ಜೀವನ ಲೆಕ್ಕಾಚಾರ ಹಾಕಿಕೊಂಡು, ತಿಂಗಳ ಕೊನೆಯಲ್ಲಿ ಖರ್ಚಿಗೆ ಎನಪ್ಪಾ ಮಾಡುವುದು ಅಂತ ಯೋಚನೆಯೊಂದು ಬಿಟ್ಟರೆ ಬೇರೆ
ಯಾವುದೇ ರೀತಿ ಕಮ್ಮಿ ಇರುವದಿಲ್ಲ. ಅಪ್ಪನಿಗೋ ಮಗನ ಮೇಲೆ ಅತಿಯಾದ ಮಮಕಾರ ಮತ್ತು ನಂಬಿಕೆ. ಪಿಯುಸಿ ಫೇಲ್ ಆಗಿದ್ದರೂ ಕೂಡ ಮುಂದೊಂದು ದಿನ ಉದ್ದಾರ ಆಗುತ್ತಾನೆ ಅನ್ನೊ ದೃಡ ವಿಶ್ವಾಸ. ಇವರ ಸಂಸಾರದಲ್ಲಿ ಇನ್ನೊಂದು ಪಾತ್ರ ಅಂದರೆ ಹೊಂಬೆಗೌಡ ಅನ್ನೊ ಎಮಹಾ ಬೈಕ್. ಇದು ವಂಶ ಪರ್ಯಂಪರವಾಗಿ ಮಗನಿಗೆ ಬಳುವಾಳಿಯಾಗಿ ಕೊಟ್ಟು ತನ್ನ ಅಪ್ಪನ ಹೆಸರನ್ನೇ ಇಟ್ಟಿರುತ್ತಾನೆ.

೨ ಸ್ಟ್ರೋಕ್ ಗಾಡಿಯಾದ ಇದು ಅವಗಾವಗ ಮುನಿಸು ಮಾಡಿಕೊಂಡು ನಿಲ್ಲುವುದು, ಚೆನ್ನಾಗಿ ಹೊಗೆ ಕಕ್ಕುವುದು ಮಾಡುವದರಿಂದ ಗೆಳೆಯರು ನಾಯಕನನ್ನು ಹೊಗೆ ಎಂದು ನಾಮಕರಣ ಮಾಡಿರುತ್ತಾರೆ. ಒಂದು ದಿನ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ನಾಯಕಿಯನ್ನು ಪರಿಚಯಿಸುವ ಕೆಲಸವನ್ನು ಹೊಂಬೆಗೌಡ ಮಾಡುತ್ತದೆ. ದಾರಿಯಲ್ಲಿ ಕೆಟ್ಟು ನಿಂತಾಗ ಅಲ್ಲೇ ನಾಯಕಿ ಆಡುತ್ತಿದ್ದ ಗಿಲ್ಲಿ ದಾಂಡು ಬಂದು ಇವನಿಗೆ ತಗಲುತ್ತದೆ. ಅಲ್ಲಿಂದ ಅವರ ಪರಿಚಯ, ಮಾತುಕತೆ , ಕಾಫಿಡೇಗೆ ಬಂದು ನಿಲ್ಲುತ್ತದೆ.
ಆದರೆ ಓದು ಮುಗಿಯುವ ತನಕ ಪ್ರೀತಿ ಪ್ರೇಮ ಎಲ್ಲಾ ಬೇಡ ನಾಯಕಿ ಕೃಷ್ನನ ಪ್ರೀತಿಗೆ ಬ್ರೇಕ್ ಹಾಕುತ್ತಾನೆ. ಆದರೂ ನಾಯಕನಿಗೆ ಸಂತೋಷ ಯಾಕೆ ಅಂದರೆ ಅವನ ಗಲ್ಲಿ ಕ್ರಿಕೇಟ್ ಎನಿಮಿ ಕೂಡ ನಾಯಕಿಯನ್ನು ಪಟಾಯಿಸಲು ಹೊರಟು ಇವರಿಬ್ಬರ ಮಧ್ಯೆ
ಪಂದ್ಯ ಎರ್ಪಾಡು ಆಗಿರುತ್ತದೆ.

ಗ್ಲಾಮರ್ ಗೊಂಬೆ ನಾಯಕಿಯಾಗಿ ರಾಧಿಕ ಗೀತಾ ಪಾತ್ರದಲ್ಲಿ ಹುದುಗಿಹೋಗಿದ್ದಾರೆ, ಗಾರ್ಮೆಂಟಿನಲ್ಲಿ ಕೆಲ್ಸ ಮಾಡುವ ಅಮ್ಮ
ಕುರುಪ್ಪು ಹಾಕುತ್ತ ರೋಲ್ ಕಾಲ್ ಮಾಡುವ ಅಣ್ಣ, ಅವನ ಪಾಪದ ದುಡ್ಡಿನಲ್ಲಿ ಒಳ್ಲೆ ಬಟ್ಟೆ ಹಾಕುತ್ತ ಮಜ ಮಾಡುವ ನಾಯಕಿ ಇರುವುದು ಮಾತ್ರ ಒಂದು ಕೊಂಪೆಯಲ್ಲಿ. ನೂರಾರು ಕನಸುಗಳು, ಆದರೆ ಅದನ್ನು ಹುದುಗಿಡಬೇಕಾದ ಬಡತನ ನಾಯಕಿಯನ್ನು
ಕೇವಲ ಓದಿಗೆ ಮೀಸಲಾಗಿ ಇಟ್ಟಿರುತ್ತದೆ.


ಸನ್ನೀವೇಶಗಳು ಅಂದುಕೊಂಡ ಹಾಗೆ ಇರದೆ ನಾಯಕಿಯ ಅಮ್ಮನಿಗೆ ಉಬ್ಬಸ ಬಂದು ಅವಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ, ಆಗ ನೆರವಿಗೆ ಬಂದ ನಾಯಕ ಬೇಡವೆಂದರೂ ಅವಳ ಮನಸ್ಸನ್ನು ಗೆಲ್ಲುತ್ತಾನೆ. ಅದರೆ ಅವನ ಕಂಜೂಸ್ ಬುದ್ದಿ, ಅವನ ಕಷ್ತವನ್ನು ಅರಿತ ನಾಯಕಿ ಅವನ ಸಂಗಡ ಇರುವ ತನಕ ಅವನೇ ಬೇಕೆಂದು ಬಯಸುತ್ತ, ಅವನು ಮರೆಯಾದ ಮೇಲೆ ವಾಸ್ಲವಕ್ಕೆ ಬಂದು ಇದೇ ಜೀವನವನ್ನು ಆಯ್ಕೆ ಮಾಡಿಕೊಳ್ಲಬೇಕಾ. ಪ್ರೀತಿ ಪ್ರೇಮ ಕೇವಲ ಮನಸ್ಸಿಗೆ ಚೆಂದ, ವಾಸ್ಲವಕ್ಕೆ ಬೇಕಾಗಿರುವುದೇ ಬೇರೆ ಎಂಬ
ತಾತ್ವಿಕ ನಿರ್ಣಯಕ್ಕೆ ಬರುತ್ತಾಳೆ ಮತ್ತು ಅದೇ ಅವಳ ಅಚಲ ನಿರ್ಧಾರಕ್ಕೆ ಕಾರಣ ಆಗುತ್ತದೆ.

ಆ ನಿರ್ದಾರವೇ ನಾಯಕನನ್ನು ಬಿಟ್ಟು ನರೇಂದ್ರನ ಜೊತೆ ಹೋಗುವುದು, ಧರ್ಮಸ್ಥಳಕ್ಕೆ ಹೋಗುವಾಗ ದುರ್ವಿಧಿಯಿಂದ ಅಪಘಾತವಾಗಿ ನರೇಂದ್ರ ಸಾವನ್ನು ಅಪ್ಪಿ, ನಾಯಕಿ ಮತ್ತೆ ಮನೆಗೆ ಸೇರುತ್ತಾಳೆ. ಆದರೆ ಸಮಾಜ ಅವಳನ್ನು ನೋಡುವ ರೀತಿ
ಆದ ನೋವು ಮತ್ತು ಕೃಷ್ಣನಿಗೆ ಮೋಸ ಮಾಡಿದೆ ಅನ್ನೊ ಗಿಲ್ಟ ಅವಳನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತ ಇರುತ್ತದೆ. ಆ ಹತಾಷೆ, ನೋವು, ಯಾರಿಗೂ ಹೇಳಿಕೊಳ್ಳಲಾಗದ ಬೇಸರ ಅವಳನ್ನು ಪ್ರಪಂಚದ ದೃಷ್ಟಿಯಲ್ಲಿ ಮಾನಸಿಕ ರೋಗಿಯನ್ನಾಗಿ ಮಾಡಿರುತ್ತದೆ.
ಆದರೆ ಅವಳನ್ನೇ ಬಯಸುವ ಕೃಷ್ಣ ಮತ್ತೆ ಅವಳನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸುತ್ತಾನೆ. ಆದರೆ ಅವನು ಮಾಡುವ ಪ್ರತಿಯೊಂದು ಪ್ರೀತಿಯ ಕೆಲಸ ನಾಯಕಿಗೆ ಇನ್ನಷ್ಟೂ ಹಿಂಸೆ ಉಂಟುಮಾಡುತ್ತ ಇರುತ್ತದೆ, ಇದನ್ನು ಯಾರೂ ಅರ್ಥ ಮಾಡಿಕೊಳ್ಳುವದಿಲ್ಲ.

ಮೊದಲಾರ್ಧ ನಿಧಾನವಾಗಿ ಸಾಗಿ, ಎನಪ್ಪಾ ಎಲ್ಲ ಕಡೆ ನಾಯಕಿ ಪ್ರಧಾನ ಚಿತ್ರ ಎಂದುಕೊಂಡು ಬರೆದಿದ್ದಾರೆ ಆದ್ರೆ ಎನು ಇಲ್ಲವಲ್ಲ
ಅಂದುಕೊಂಡಗಾ ಮಿಂಚಿನ ರೀತಿ ಎರಡನೇ ಭಾಗ ಸಾಗುತ್ತದೆ.

ನಾಯಕಿಯ ಹತಾಷೆ ಕೋಪವಾಗಿ ಬದಲಾದಾಗ ಹೆಣ್ಣು ಆಡುವ ರೀತಿ, ಮಾತು , ಹತಾಷೆ ಎಲ್ಲವನ್ನು ಬಹಳ ಚೆನ್ನಾಗಿ ಅನುಭವಿಸಿ
ರಾಧಿಕ ಪಂಡಿತ್ ಮಾಡಿದ್ದಾರೆ. ನಿಜಕ್ಕೂ ಅದನ್ನು ಶಶಾಂಕ್ ತೆಗೆಸಿದ್ದಾರೆ.

ನಾಯಕಿಯನ್ನು ಬದಲಾಯಿಸಿ ಮತ್ತೆ ಮದುವೆಯಾಗುತ್ತಾನ ಇಲ್ಲ ನಾಯಕಿ ಇವನ ಪ್ರೀತಿಯಿಂದ ಮತ್ತೆ ದೂರ ಆಗುತ್ತಾಳ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ.






+ve ಅಂಶಗಳು

- ಉತ್ತಮ ನಿರ್ಧೇಶನ
- ಸುಮಧುರ ಸಂಗೀತ ಮತ್ತು ಸಾಹಿತ್ಯ
- ಕೈಲಾಶ್ ಕೈರ್ ದ್ವನಿಯ ಹಾಡು.
- ರಾಧಿಕ ಅತ್ಯುತ್ತಮ ಅಭಿನಯ ಮತ್ತು ಮುದ್ದು ಮುಖ
- ಬೈಕ್ ಪಾತ್ರ
- ಪೋಷಕ ಪಾತ್ರಗಳು.
- ಲಕ್ಷೀ ಹೆಗಡೆಯ ಪಾತ್ರ
-

ಇದರ ಜೊತೆಗೆ ನನಗೆ ಸರಿ ಕಾಣದೇ ಇದ್ದಿದ್ದು..

- ನಾಯಕಿ ಕಾರಿನ ಅಪಘಾತದಲ್ಲಿ ನೋವು ಅನುಭವಿಸಿರುತ್ತಾಳೆ, ಅದ್ದರಿಂದ ಮತ್ತೆ ಕಾರಿನಲ್ಲಿ ಕೂರುವ ಬಗ್ಗೆ ಅವಳಿಗೂ ಮತ್ತು ಅವಳ ಮನೆಯವರಿಗೂ ಒಂದು ರೀತಿಯ ಭಯ, ಹಿಂಜರಿಕೆ ಇರುತ್ತದೆ, ಆದರೆ ಅದು ಚಿತ್ರದಲ್ಲಿ ಎಲ್ಲೂ ವ್ಯಕ್ತವಾಗಿಲ್ಲ. once bitten twice shy ಅನ್ನುವುದು ಸಾಮಾನ್ಯ ಅಂಶ, ಆದರೆ ಚಿತ್ರದಲ್ಲಿ ಆ ಸಂವೇದನೆ ಸ್ವಲ್ಪವೂ ವ್ಯಕ್ತವಾಗಿಲ್ಲ.

- ನಾಯಕಿ ಬಡತನ ಅವಳ ಡಿಸೈನರ್ ವೇರ್ ಬಟ್ಟೆಗಳಿಗೆ ಮತ್ತು ಮೇಕಪಗೆ ಅಡ್ಡಿ ಬರದೇ ಇರುವುದು.
ಇದರಿಂದ ಮೊದಲರ್ದದಲ್ಲಿ ನಾಯಕಿಯು ಕೊಂಪೆಯಲ್ಲಿ ವಾಸ ಮಾಡುವ ಹುಡುಗಿಯರ ಪಾತ್ರಕ್ಕೆ ಹೊಲದೇ ಮೊಗ್ಗಿನ ಮನಸ್ಸು ಹುಡುಗಿಯ ಪಾತ್ರಕ್ಕೆ ಹೋಲುತ್ತದೆ.

[ ಅದೇ ಎರಡನೇ ಭಾಗ ಇದಕ್ಕೆ ಅಪವಾದ. ಮನೋರೋಗಿ ನಾಯಕಿಯನ್ನು ಪರಿಚಯಿಸುವಲ್ಲಿ ಶಶಾಂಕ್ ಗೆದ್ದಿದ್ದಾರೆ.
ಯಾವುದೋ ಬಟ್ತೆ, ತಲೆ ಕೆದರಿದ ಕೂದಲು, ಬಟ್ಟೆ ಮೇಲೆ ಇರದ ವ್ಯವಧಾನ ಇದು ಮೊದಲಿನ ಕನ್ನಡಿ ಮುಂದೆ ನಿಂತು ಪರೀಕ್ಷೇಗೆ ತಡವಾಗಿ ಹೋದ ನಾಯಕಿಯ ತದ್ವಿರುದ್ದ ರೂಪ ಕೊಡುತ್ತದೆ. ಅವಳ ನೋವು ಮತ್ತು ಜೀವನದ ಮೇಲೆ ಬೇಸರ ಯಾವ ರೀತಿಯಲ್ಲಿ ಕಾಡಿದೆ ಎಂದು ಚೆನ್ನಾಗಿ ತೋರಿಸಿದ್ದಾರೆ. ]

- ಶರಣ್ ಕಾಮಿಡಿಯನ್ನು ಸರಿಯಾಗಿ ಬಳಸಿಕೊಳ್ಳದೇ, ಅವನ ಮೂಲಕ ಹೆಣ್ಣು ಪಟಾಯಿಸುವುದೇ ಬೆಡ್ಡಿಗೆ ಅನ್ನುವುದನ್ನು ತಮಾಷೆಯಾಗಿ ತೋರಿಸಿರುವ ರೀತಿ.

- ಅಜಯ್ ರಾವ್ ಎಲ್ಲಾ ಸನ್ನೀವೇಶದಲ್ಲೂ ಒಂದೇ ರೀತಿ ಅಭಿನಯ. ತಾಜಮಹಲ್ ಗುಂಗಿನಿಂದ ಆಚೆ ಬಂದರೆ ಅವರು ಒಳ್ಳೆಯದು.

- ಎಲ್ಲ ಪಾತ್ರಗಳಲ್ಲೂ ಹಣದ ಮುಂಗಟ್ಟು ಇರುತ್ತದೆ, ಆದರೆ ಅವರು ಹಾಕುವ ಬಟ್ಟೆಗಳು ಮಾತ್ರ ಬ್ರಾಂಡೆಡ್.

- ಅನಗತ್ಯ ಮಳೆ

- ೭೫% ನಿಜವಾದ ಕಥೆ ಎಂಬ ಶೀರ್ಶಿಕೆ ಇದ್ದರೂ, ಹಲವು ಕಡೆ ಸಿನೀಮಿಯ ಅನಿಸುತ್ತ ಇತ್ತು.

- ಯಾಕೋ ಉಮಾಶ್ರೀ ಬಡ ತಾಯಿ ಪಾತ್ರಕ್ಕೆ ಬ್ರಾಂಡ್ ಅಗುತ್ತ ಇದ್ದಾರೆ ಅನಿಸುತ್ತದೆ. ಹೇಗೆ ಬಿರಾದರ್ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆದ ಹಾಗೆ.


ಒಟ್ಟಿನಲ್ಲಿ ಸಂಸಾರ ಸಮೇತ ನೋಡಬಹುದಾದ ಉತ್ತಮ ಚಿತ್ರ. Dont miss it.

ನನ್ನ ರೇಟಿಂಗ್ ೭/೧೦.

ಇದನ್ನು ಬರೆಯಲು ಸಹಾಯ ಮಾಡಿದ Alvear Pedro Ximénez (1927 Montilia-Moriles) ಅವರಿಗೆ ತುಂಬು ಕೃತಜ್ಞತೆಗಳು.

Wednesday, June 23, 2010

ಕ್ರೀಡಾ ವರದಿ - ಕನ್ನಡ ಮಾಧ್ಯಮಗಳ ತಾತ್ಸಾರ

ಯಾಕೊ ಕಾಣೆ ಕನ್ನಡ ಪತ್ರಿಕೆಗಳಲ್ಲಿ ಮಾಧ್ಯಮದಲ್ಲಿ ರಾಜಕೀಯ,ಸಿನಿಮಾ ವಿಶಯಗಳು ಬಂದ ಹಾಗೆ ಅರ್ಥಶಾಸ್ತ್ರ, ಕ್ರೀಡೆ ಸುದ್ದಿಗಳು ಬರುವದಿಲ್ಲ. ಸುದ್ದಿಗಳೆಲ್ಲಾ ಸಪ್ಪೆ ಅನಿಸುತ್ತದೆ, ಅದರಲ್ಲೂ ಹೆಚ್ಚಾಗಿ ಆಂಗ್ಲದ ಅನುವಾದ ಅನಿಸುತ್ತದೆ. ಸ್ವಲ್ಪವೂ ಅನುಭವಿಸಿ ಬರೆದ ಹಾಗೆ ಕಾಣುವದಿಲ್ಲ.

ಪುಟ್ಬಾಲ್ ಹಬ್ಬ ನಡಿತಾ ಇರೊದೆನೊ ಸರಿ, ಆದರೆ ಅದರ ಸುದ್ದಿಗಳನ್ನು ಕನ್ನಡ ಪತ್ರಿಕೆಗಳಲ್ಲಿ ಓದುವಾಗ ಎಲ್ಲಾ ಮರೆತು ಓದಬೇಕು.
ಬರೀ ಬೇಕು ಅಂತ ಬರೆಯುತ್ತಾರೆ ಅನಿಸುತ್ತದೆ, ಒಂದೇ ಒಂದು ಲೇಖನದಲ್ಲೂ ಆಟ ನೋಡಿ ಬರೆದ ಹಾಗೆ ಕಾಣುವದಿಲ್ಲ, ಎಲ್ಲಾ ಆಂಗ್ಲದ
ಕನ್ನಡ ಅನುವಾದ ಅನಿಸುತ್ತದೆ.ಅನುವಾದ ಮಾಡುವರಿಗೆ ಹೆಸರುಗಳು ಬಹಳ ತಿಕ್ಕಾಟ ಕೊಡುತ್ತವೆ, ಅನುವಾದ ಮಾಡುವಾಗ ಕೂಡ ಅನೇಕ ತಪ್ಪುಗಳು ಕಾಣುತ್ತದೆ.

ಇಂದಿನ ವಿಜಯಕರ್ನಾಟಕ ನೋಡಿ..

ಪುಟ ೧೪ ರಲ್ಲಿ ಗುಂಪು ಎ ನಲ್ಲಿ ಮೆಕ್ಸಿಕೋ ಅಗ್ರಸ್ಥಾನದಲ್ಲಿ ಇದೆ, ಆದರೆ ಅಲ್ಲಿ ಉರುಗ್ವೆ ಇರಬೇಕಿತ್ತು.


ಅದೇ ೧೬ ಪುಟಕ್ಕೆ ಬಂದರೆ ಪೌಲೊ ರೈಸಿಯ ಇಟಲಿ ನಿರ್ಣಾಯಕ ಪಂದ್ಯ ಅನ್ನುವ ಲೇಖನದ ತುಂಬಾ ಸ್ಲೊವೇನಿಯಾ ಅಂತ ಬರೆದಿದ್ದಾರೆ, ಅದು ಸ್ಲೊವಾಕಿಯಾ. ಇದನ್ನು ಓದಿದರೆ ಅನಿಸುವುದು, ಆ ಲೇಖನವನ್ನು ಅನುವಾದಿಸಿದವರಿಗೆ ಸ್ವಲ್ಪವೂ ಪುಟ್ಬಾಲ್ ಗಂಧ-ಗಾಳಿ ಇಲ್ಲ ಅಂತ. ಯಾಕೆಂದರೆ ನಿನ್ನೆ ಪಂದ್ಯ ನೋಡಿದ್ದರೆ ಖಂಡಿತಾ ಈ ಪ್ರಮಾದ ಆಗುತ್ತ ಇರಲಿಲ್ಲ.




ಅದಕ್ಕೂ ಮಜಾ ಅಂದರೆ ಪೌಲೊ ರೋಸಿಯನ್ನು ಬ್ರೆಜಿಲ್ ಆಟಾಗಾರ ಎಂದು ಹೆಸರಿಸಿದ್ದಾರೆ, ನನಗೆ ಗೊತ್ತಿರುವ ಪೌಲೊ ರೋಸಿ ೧೯೮೨ ಇಟಲಿಯ ನಾಯಕ ಆಗಿದ್ದ, ಆ ಪಂದ್ಯಾವಳಿಯಲ್ಲಿ ೬ ಗೋಲು ಬಾರಿಸಿ ಗೋಲ್ಡನ್ ಬೂಟ್ ಪಡೆದ.


ಇನ್ನು ಹೊಸದಿಗಂತಕ್ಕೂ ತಪ್ಪುಗಳಿಗೂ ಹಳೇ ನಂಟಿದೆ. ಅದರ ಪುಟ ೯ರಲ್ಲಿ ಇಂಗ್ಲೆಡ್ ೨ - ಸ್ಲೊವೇನಿಯಾ ೦ ಪೋಟೊ ಅಂತ ಹಾಕಿ ಅದೇ ವರದಿಯಲ್ಲಿ "ಇಂಗ್ಲೆಡ್ ತಂಡಕ್ಕೆ ಎರಡನೇ ಗೋಲು ಬಾರಿಸಲು ಅವಕಾಶ ಲಭ್ಯವಾಗಲಿಲ್ಲ" ಅಂತ ಕೊಸರಿದೆ.



ಹಾಗಿದ್ದರೆ ಇನ್ನೊಂದು ಗೋಲು ಬಾರಿಸಿದವರು ಯಾರು ?
ಇಂತಹ ವಿಸ್ಮಯಗಳು ಕಣ್ ಮುಂದೆ ಬಂದಾಗ ನಂಬದೇ ಇರುವದಕ್ಕೆ ಸಾಧ್ಯವೇ ಇಲ್ಲ, ಆದರೆ ಬುದ್ದಿ ಇದನ್ನು ಒಪ್ಪುವದಿಲ್ಲ. ಇಂತಹ ಮಾಧ್ಯಮ ವಿಸ್ಮಯಗಳ ನಡುವೆ ನಮ್ಮಲ್ಲಿ ಮೂಡುವ ಒಂದೆ ಒಂದು ಪ್ರಶ್ನೆ ..ಹೀಗೂ ಉಂಟೆ.

Thursday, June 17, 2010

ನಾವು ಸ್ನೇಹ ಜೀವಿ ,,,ಲೋಕದಲ್ಲಿ ತಮಿಳ್ ಚಿರಂಜೀವಿ.

ನಿನ್ನೆ ತಮಿಳುನಾಡು ಸರಕಾರ ಚಿನ್ನತಂಬಿಯ ಸೌಹರ್ದತೆಯ ಕೆಲ್ಸವನ್ನು ಮೆಚ್ಚಿ ಶಾಲು ಹೊದಿಸಿ ವಿಶ್ವ ತಮಿಳು ಸಮಾವೇಶಕ್ಕೆ
ಆಹ್ಬಾನಿಸಿದ ಸುದ್ದಿ ಬಂದಿದೆ. ನಿಜಕ್ಕೂ ಇದು ಬಹಳ ಶ್ಲಾಷನೀಯ, ಶತಮಾನಗಳಿಂದ ಇದ್ದ ವೈರುಧ್ಯವನ್ನು ಕೇವಲ ಮೂರ್ತಿ ಉದ್ಘಾಟನೆಯಿಂದ ಬಗೆಹರಿಸಿ ಎರಡೂ ರಾಜ್ಯದ ಮಧ್ಯೆ ಮಧುರ ಮೈತ್ರಿಯನ್ನು ಶುರು ಮಾಡಿದ ಕೀರ್ತಿ ನಮ್ಮ ಮುಮ ಗೆ ಸೇರುತ್ತದೆ.

ಇದೇ ನಿಟ್ಟಿನಲ್ಲಿ ನಮ್ಮ ಭಾಂಧವ್ಯ ಬೆಳೆಯಬೇಕು ಎಂದರೆ ನಮ್ಮ ಸರ್ಕಾರ ಇನ್ನು ಹೆಚ್ಚು ತಮಿಳು ಸ್ನೇಹಿ ಯೋಜನೆಗಳನ್ನು ಹಾಕಿಕೊಳ್ಲಬೇಕು. ಆ ನಿಟ್ಟಿನಲ್ಲಿ ೧೧ ಸಾಮಾನ್ಯ ಅಂಶದ ಈ ಯೋಜನೆಯನ್ನು ನಮ್ಮ ಕನ್ನಡ ಸರ್ಕಾರ ಮಾಡಿದರೆ ..ತಮಿಳ್ ಚಿರಂಜೀವಿ ಆಗುತ್ತದೆ.

೧) ನಮ್ಮ ಸರ್ಕಾರದಿಂದ ಮುಮ ನೇತೃತ್ವದಲ್ಲಿ ಅಧಿಕೃತ ನಿಯೋಗವನ್ನು ಕೊಂಡ್ಯೊಯ್ಯಬೇಕು. ಇದರಲ್ಲಿ ನಮ್ಮ ರಾಜ್ಯದಲ್ಲಿ ಇರುವ ಘಣ್ಮುಗಂ ಇತರೆ ತಮಿಳು ವಿದ್ವಾಂಸರು ಒಳಗೊಳ್ಳಬೇಕು.

೨) ನಮ್ಮ ರಾಜ್ಯದಿಂದ ತಮಿಳಿಗೆ ಕೊಡುಗೆ ಎನ್ನುವ ಸಾಕ್ಷಚಿತ್ರವನ್ನು ಮಾಡಬೇಕು, ಇದನ್ನು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ತಯಾರಿಸಿದರೆ ಒಳ್ಳೆಯದು ಮನು ಬಳಿಗಾರ ನೇತೃತ್ವದಲ್ಲಿ

೩) ನಮ್ಮ ಕನ್ನಡ ಮೇರು ಸಾಹಿತಿಗಳಾದ ಚಿಮೂ, ಜಿ ಎಸ್ ಎಸ್ ಅವರನ್ನು ಒಳಗೊಂಡ ಸಾಹಿತಿ ವೃಂದವನ್ನು ಅಲ್ಲಿಗೆ ಕೊಂಡೊಯ್ಯಬೇಕು. ಜೊತೆಗೆ ಆರ್ ಎಸ್ ಎಸ್ ನಾಯಕರು ಇದ್ದರೆ ಇನ್ನು ಮೆರಗು.

೪) ತಮಿಳು ಹೋರಾಟಗರ ಮೇಲೆ ಎಲ್ಲ ಕೇಸುಗಳನ್ನು ವಾಪಿಸ್ ಪಡೆಯಬೇಕು.

೫) ಪೆರಿಯಾರ್ ಹೆಸರಿನಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಒಂದು ನಾಡೋಜ ಪ್ರಶಸ್ತಿ ಹೊರಬರಬೇಕು,

೬) ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಡುವ ಸಹಕಾರ ಮೊತ್ದದ ೧/೩ ಭಾಗವನ್ನು ಇನ್ನು ಮುಂದೆ ತಮಿಳು ಸಮ್ಮೇಳನಕ್ಕೆ ಕೊಡಬೇಕು. ಹಾಗೇ ವೀರ ಸಾವರ್ಕರ್, ಗುರೂಜಿ, ಹೆಗಡೆವಾರ್ ದೇಶಭಕ್ತರ ಮೇಲೆ ಚಿಕ್ಕ ಚಿಕ್ಕ ಪುಸ್ತಕಗಳನ್ನು ಸರಕಾರ ಮುದ್ರಿಸಿ ಎಲ್ಲ ಶಾಲೆಗಳಲ್ಲೂ ಹಂಚಬೇಕು.

೭) ಬೆಂಗಳೂರಿನಲ್ಲಿ ಮುಂದಿನ ಸಮ್ಮೇಳನ ಮಾಡಲು ಸರ್ಕಾರ ಬಿಡ್ ಸಲ್ಲಿಸಬೇಕು. ಮುಂದಿನ ವಿಶ್ವ ತಮಿಳು ಸಮಾವೇಶ ನಡೆಸಲು ಇಗಲೇ ತಯಾರಿ ಆರಂಭಿಸಬೇಕು.

೮) ೨ ನೇ ಅಧಿಕೃತ ಭಾಷೆಯಾಗಿ ತಮಿಳನ್ನು ಬಿಬಿಎಂಪಿಯಲ್ಲಿ ಸ್ಥಾನ ಕೊಡಬೇಕು. ಮತ್ತು ಎಲ್ಲಾ ಬಿಬಿಎಂಪಿಯ ಕಾರ್ಯಕ್ರಮಗಳನ್ನು, ಸುತ್ತೊಲೆಗಳನ್ನು ತಮಿಳ್ ಮಕ್ಕಳಗೆ ಓದಲು ಅನಕೂಲ ಮಾಡಿಕೊಡಬೇಕು.

೯) ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಪಿಪಿಪಿ ಮಾದರಿಯಲ್ಲಿ ತಮಿಳುನಾಡು ಸರ್ಕಾರದ ಜೊತೆ ಸೇರಿ ಅದನ್ನು INTER NATIONAL TAMIL SCHOOL ಮಾಡಿ ನೆಲದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು.

೧೦) ಈ ಕಾರ್ಯಕ್ರಮವನ್ನು ಸನ್ ಅವರ ಉದಯದಲ್ಲಿ ಅಲ್ಲದೇ ನಮ್ಮ ಕನ್ನಡ ಕಸ್ತೂರಿ, ಚಂದನದಲ್ಲೂ ನೇರ ಪ್ರಸಾರ ಮಾಡಿಸಬೇಕು.

೧೧) ಶ್ರೀಲಂಕಾದಲ್ಲಿ ತಮಿಳ್ ಹೋರಾಟ ಗಮನಿಸಿ, ಪ್ರಭಾಕರನ್ ಪುತ್ಥಳಿಯನ್ನು ಬೆಂಗಳೂರಿನ ಮೆಜಸ್ತೀಕನ ರೈಲ್ವೇ ನಿಲ್ದಾಣದ ಎದುರು ಅನಾವರಣ ಗೊಳ್ಳಿಸಬೇಕು. ( ಈಗಿರುವ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಅನಾವರಣಗೊಳಿಸುತ್ತೆವೆ ಎಂದು ಹೇಳಿ....)

೧೨) ಕೇವಲ ಕನ್ನಡ ಚಿತ್ರಕ್ಕೆ ಇರುವ ಸಬ್ಸಿಡಿಯನ್ನು ತಮಿಳು ಚಿತ್ರಗಳಿಗೂ ವಿಸ್ತರಿಸಬೇಕು, ಹೆಚ್ಚಾಗಿ ತಮಿಳು ಚಿತ್ರ ನೋಡುವ ಸ್ಲಂ ಮತ್ತು ಬಡವರಿಗೆ ಹೆಚ್ಚಿನ ಅನಕೂಲ ಆಗುತ್ತದೆ.

ಇದಕ್ಕೆ ವಿರೋಧ ಪಡಿಸುವರನ್ನು ಶಿಕ್ಷೆಗೆ ಗುರಿಮಾಡಬೇಕು, ೩೦೭,೩೦೨ ಕೇಸ್ ಜಡಿಯಬೇಕು ಎಂದು ಹೇಳಬೇಕಾಗಿಲ್ಲ ಅಲ್ಲವೇ ??

Saturday, June 12, 2010

ಹಣದ ಚೀಲ ಕಳೆದುಹೋಗಿದೆ..ಸಹಾಯ ಮಾಡಿ.

ಕನ್ನಡ ಲೇಖಕಿ ಮಂಗಳಾ ಸತ್ಯನ್ ಅವರ ಮಿಂಚೆಯನ್ನು ಹ್ಯಾಕ್ ಮಾಡಿದ ಕದೀಮರು ಅವರನ್ನು ಹಣದ ಚೀಲ ಕಳೆದುಹೋಗಿದೆ ಹಗರಣದಲ್ಲಿ ಸಿಲುಕಿಸಿದ್ದಾರೆ ಎಂಬುದು ಸುದ್ದಿ. ಇದೇ ರೀತಿ ಮಣಿಶಂಕರ್ ಅಯ್ಯರಗೆ ಕೂಡ ಆಗಿತ್ತು ಎಂದು ಸ್ಮರಿಸಬಹುದು.

ಎನಿದು ಹಣದ ಚೀಲ ಕಳೆದುಹೋಗಿದೆ ಹಗರಣ ಅಂತ ಯೋಚನೆ ಮಾಡುತ್ತ ಇದ್ದೀರಾ ??

ಪ್ರಸಿದ್ದ ವ್ಯಕ್ತಿಗಳ ಅದರಲ್ಲೂ ಸ್ವಲ್ಪ ವಯಸ್ಸು ಆದವರ ( ೪೫+ ) ಮಿಂಚೆಗಳನ್ನು ಹ್ಯಾಕ್ ಮಾಡಿ ಅವರ ಹೆಸರಿಂದ ಅವರ ಎಲ್ಲಾ ಗೆಳೆಯರಿಗೂ ಮಿಂಚೆ ಮಾಡುತ್ತಾರೆ. ಇದಕ್ಕೆ ಅವರು ಆಯ್ಕ್ರೆ ಮಾಡುವ ವ್ಯಕ್ತಿಗಳು ಎಂದರೆ ಹೆಚ್ಚಾಗಿ ಓಡಾಡುವ ಜನ ಮತ್ತು ದೇಶ ವಿದೇಶಗಳನ್ನು ಸುತ್ತತ್ತ ಇರುತ್ತಾರಲ್ಲ, ಅಕೆಡಾಮಿಕನಲ್ಲಿ ಇರುವುರು. ಅದರಲ್ಲೂ ನಿವೃತ್ತಿ ಆದವರು ಸಿಕ್ಕಿದರೆ ಬಂಪರ್.

ಆ ಮಿಂಚೆಯು ಹೀಗೆ ಇರುತ್ತದೆ

ಒಂದು ಮಿಂಚೆ ಅಡ್ರೆಸ್ ಬುಕನಲ್ಲಿ ಇರುವ ಎಲ್ಲಾ ವಿಳಾಸಕ್ಕೂ ಹೋಗುತ್ತದೆ., ಇದನ್ನು ನೋಡಿದ ಗೆಳೆಯರು ತಡ ಮಾಡದೇ ಹಣ ಕಳಿಸುತ್ತಾರೆ. ಅದರಲ್ಲೂ ದೇಶದಲ್ಲಿ ಇದ್ದವರು
ಅವರ ಮನೆಗೆ ಪೋನಾಯಿಸೋ ವಿಚಾರಿಸಿದರೆ ವಿದೇಶದಲ್ಲಿ ಇರುವರು ಸುಮ್ಮನೆ ಸಹಾಯ ಮಾಡಿ ಬಿಡುತ್ತಾರೆ. ಮಿಂಚೆ ಹ್ಯಾಕ್ ಆಗಿದೆ ಎಂದು ತಿಳಿದು, ಪೋಲಿಸರಿಗೆ ಕಂಪ್ಲೇಟ್ ಕೊಟ್ಟು , ತಮ್ಮ ಮಿಂಚೆಯನ್ನು ಮತ್ತೆ ಪಡೆಯುವಷ್ಟರಲ್ಲಿ ಹಣ ತೆಗೆದುಕೊಂಡವರು ಪರಾರಿ.

ಆ ಮಿಂಚೆ ಹೀಗೆ ಇರುತ್ತದೆ.

Hello,

How are you doing?hope all is well with you, i am sorry that i didn’t inform you about my traveling to England for a Seminar.

I need a favor from you as soon as you recieve this e-mail because i misplaced my wallet on my way to the hotel where my money,and other valuable things were kept, i will like you to assist me with a loan urgently. I will be needing the sum of $2,500 to sort-out my hotel bills and get myself back home.

I will appreciate whatever you can afford to help me with, i’ll pay you back as soon as i return. Kindly let me know if you can be of help? so that i can send you the details to use when sending the money through western union.

Your reply will be greatly appreciated.


ಅದ್ದರಿಂದ ಹುಷಾರ್ ಆಗಿ ಇರಲು, ಕೆಲವು ನಿಯಮಗಳನ್ನು ಪಾಲಿಸಬೇಕು.

* ಗುಪ್ತಪದವನ್ನು ಜಟಿಲವಾಗಿಡಿ, ಅದರಲ್ಲಿ $^^*&( ಅಕ್ಷರ ಮತ್ತು ಸಂಖ್ಯೆ ಇರಬೇಕು.

* ಕಾಲಕ್ಕೆ ತಕ್ಕ ಹಾಗೆ ಬದಲಾಯಿಸುತ್ತ್ತ ಇರಿ.

* ನಿಮ್ಮ ವಿಳಾಸಪಟ್ಟಿಯನ್ನು export ಮಾಡಿಕೊಂಡು ಇಟ್ಟುಕೊಳ್ಳಿ.

* ಕಾಲಕ್ರಮದಲ್ಲಿ ನಿಮ್ಮ ಮಿಂಚೆಯನ್ನು PST ಆಗಿ ಉಳಿಸಿಕೊಳ್ಳಿ.

* ಎಲ್ಲಿ ಕೂಡ ನಿಮ್ಮ ಮಿಂಚೆ, ಗುಪ್ತಪದವನ್ನು ಕೊಡಬೇಡಿ.

* ನಿಮಗೆ ಹೀಗೆ ಆಗಿದ್ದಲ್ಲಿ, ಮೊದಲು ನಿಮ್ಮ ಇನ್ನೊಂದು ಮಿಂಚೆಯಿಂದ ವಿಳಾಸಪಟ್ಟಿಯಲ್ಲಿರುವ ಎಲ್ಲರಿಗೂ ಕಳಿಸಿ.

* ಹಾಗೆ ನಿಮ್ಮ ಪೋನ್ ಪಟ್ಟಿಯಲ್ಲಿ ಇರುವ ಎಲ್ಲರಿಗೂ ಚಿಕ್ಕೋಲೆ ಕಳಿಸಿ, ಆ ಮಿಂಚೆಯನ್ನು ಉದಾಸೀನ ಮಾಡೊಕ್ಕೆ ಹೇಳಿ.

ಒಟ್ಟಿನಲ್ಲಿ, ತಂತ್ರಜ್ಞಾನ ಮುಂದುವರೆದ ಹಾಗೆ ಹೊಸ ಹೊಸ ಬಗೆಯ ಮೋಸಗಳು ಬರುತ್ತ ಇರುತ್ತವೆ. ಹುಶಾರಾಗಿರಿ.

Wednesday, June 09, 2010

ಸಣ್ಣ ಕಥೆ - ವರ್ತುಲ

ನಿಮ್ಮ ವಯಸ್ಸಲ್ಲಿ ನಾವು ಹೇಗೆ ಇದ್ವಿ ಗೊತ್ತ ?, ಬೆಳಿಗ್ಗೆ ಮನೆ ಬಿಟ್ಟರೆ ಮನೆ ಸೇರುತ್ತ ಇದ್ದಿದ್ದು ಸಂಜೆ. ಅಮ್ಮ ಊಟಕ್ಕೆ ಬಾರೊ
ಅಂತ ಕರೆಯುತ್ತಲೆ ಇದ್ರು, ಅದ್ರೆ ಆಟ ಅಡೊವಾಗ ಊಟ, ಬಾಯಾರಿಕೆ ಯಾವುದು ಬೇಡ. ಅಪ್ಪ ಬರೊ ಹಾಗೆ ಮನೆ ಒಳಗೆ ಸೇರಿಕೊಂಡು, ಪುಸ್ತಕ ಹಿಡಿದುಕೊಳ್ಳುತ್ತ ಇದ್ದೆ. ಪುಸ್ತ್ಕಕ ಹಿಡಿದುಕೊಂಡರು, ಆಚೆ ಗೆಳೆಯರು ಈಗ ಎನು ಆಡುತ್ತ ಇರುತ್ತಾರೆ ಅಂತ
ಅಪ್ಪ ಪೂಜೆಗೆ ಕುಳಿತಿರುವುದೇ ಕುಳಿತರೆ ಮತ್ತೆ ಆಟಕ್ಕೆ ಹೋರಡುತ್ತ ಇದ್ದೆ ಅಂತ ಮಗಳ ಮುಂದೆ ಬಡಾಯಿ ಕೊಚ್ಚುಕೊಳ್ಳುತ್ತ ಇದ್ದೆ.

ಹೌದ ಅಪ್ಪ .. ಅಜ್ಜಿ ನಿಮಗೆ ಬೈತಾ ಇರಲಿಲ್ವಾ ? ಅಂತ ಮಗಳು ಬಾಯಿ ಬಿಟ್ಕೊಂಡು ಕೇಳುತ್ತ ಇದ್ದಳು.

ಅಯ್ಯೊ ನನ್ನ ಮಾತು ಎಲ್ಲಮ್ಮ ಕೇಳುತ್ತಾನೆ, ಚೆನ್ನಾಗಿ ಓದುತ್ತ ಇದ್ದ ಮತ್ತು ಚೆನ್ನಾಗಿ ಮಾರ್ಕ್ಸ ತೆಗಿತಾ ಇದ್ದ ಆದ್ದರಿಂದ ಅವನನ್ನು
ಅವನ ಪಾಡಿಗೆ ಬಿಟ್ಟಿದ್ದೆವು. ಬಿಸಿಲಲ್ಲಿ ಆಡಿ ಆಡಿ ಕಪ್ಪಾಗಿ ಬಿಟ್ಟ ಅಂತ ಅಮ್ಮ ತಗಾದೆ ತೆಗೆದರು.

ನಮ್ಮ ಬೀದಿಯಲ್ಲಿ ನಾವು ಒಡೆಯದ ಗಾಜು ಇಲ್ಲ, ಅನೇಕ ಮನೆಯ ಜನರು ನಮ್ಮನ್ನು ಅಟ್ಟುತ್ತ ಇದ್ದರು , ಎಷ್ಟೊ ಸಾರಿ
ನಮ್ಮ ಬ್ಯಾಟು,ಬಾಲನ್ನು ಕಿತ್ತುಕೊಂಡು ಬಿಡುತ್ತ ಇದ್ದರು, ಆದರೂ ನಾವು ಆಡುತ್ತ ಇದ್ವೀ ..

ಡಳ್.. ಅಂತ ಗಾಜು ಒಡೆದ ಶಬ್ದ .. ಒಳಗಡೆ ಟೆನಿಸ್ ಬಾಲ್ ಬಂದಿತು. ತಕ್ಷಣ ಆಚೆ ಹೋದ ನಾನು
ಬೀದಿಗೆ ಬಂದು ..." ಒಡಿಹೋಗುತ್ತ ಇದ್ದ ಹುಡುಗರನ್ನು ಉದ್ದೇಶಿಸಿ
" ಎಯ್ ಯಾವನೋ ಅವನು , ಕೈಗೆ ಸಿಕ್ಕಿದರೆ ಹುಟ್ಟಿಸಿಲ್ಲ ಅನಿಸಿಬಿಡ್ತಿನಿ. .. ಹಾ .." ಅಂತ ಒಂದೇ ಉಸಿರಿನಿಂದ ಹೇಳುತ್ತ ಇದ್ದೆ.
ಆ ಬಂದ ಮಗಳು ..
"ಎನಾಯ್ತು ಅಪ್ಪಾ , ನೀವು ಚಿಕ್ಕ ವಯಸ್ಸಲ್ಲಿ ಮಾಡಿದ ಕೆಲ್ಸವನ್ನೇ ಅವರು ಮಾಡಿದ್ದಾರೆ ಅಲ್ವಾ " ಅಂತ ಹೇಳಿದಳು.

ಒಂದು ನಿಮಿಷ ನನ್ನ ಮೇಲೆ ನನಗೆ ಪಿಚ್ಚೆನಿಸಿತು, ೫ ನಿಮಿಷ ಮುಂಚೆ ಇದೇ ಕೆಲ್ಸವನ್ನು ಪ್ರತಾಪ ಎಂದು ಬೀಗುತ್ತ ಇದ್ದ ನಾನು, ಇವತ್ತು ಅವರನ್ನು ಬೈಯುತ್ತ ಇದ್ದೆನಲ್ಲ. ಮುಂದೆ ಆ ಮಕ್ಕಳು ಇದನ್ನೆ ಪ್ರತಾಪವಾಗಿ ಹೇಳಿಕೊಳ್ಳಲಿ ಎಂದು

" ಸುಮ್ನೆ ಆ ಮಕ್ಕಳಿಗೆ ಭಯ ಹುಟ್ಟಿಸಿದೆ ಅಷ್ಟೆ, ಬಾ ಒಳಗಡೆ ನಡಿ." ಎಂದು ನಗುತ್ತ ಮಗಳನ್ನು ಒಳಗಡೆ ಕರೆದುಕೊಂಡು ಹೋದೆ.

Tuesday, June 08, 2010

ಶುರುವಾಗಿದೆ ಫುಟ್ಬಾಲ್ ಹಬ್ಬ..

ಮತ್ತೆ ಶುರುವಾಗಿದೆ ಫುಟ್ಬಾಲ್ ಹಬ್ಬ.. ೪ ವರುಷಗಳ ಹಿಂದೆ ಇದರ ಬಗ್ಗೆ ಬರೆದಿದ್ದು ಇಷ್ಟು ಬೇಗನಾ ಅಂತ ಅನಿಸಿದೆ ...

ಇದು ೧೯ನೇ ಫಿಪಾ ವಿಶ್ವಕಪ್ ಪಂದ್ಯಾವಳಿ. ಇದು ಜೂನ್ ೧೧ ರಿಂದ ೧೧ ಜುಲೈ ತನಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾನಲ್ಲಿ ನಡೆಯಲಿದೆ. ಇದಕ್ಕೆ ಬಂದ ತಂಡಗಳೆಲ್ಲಾ ತಮ್ಮ ಖಂಡದಲ್ಲಿ ೨೦೦೭ ಆಗಸ್ಟನಿಂದ ಅರ್ಹತಾ ಸುತ್ತು ಆಡಿಕೊಂಡು ಬಂದಿದೆ.


* ಮೊದಲ ಬಾರಿಗೆ ಇದು ಆಫ್ರಿಕಾ ಖಂಡದಲ್ಲಿ ನಡೆಯಿತ್ತಿದೆ, ಅದ್ದರಿಂದ ದಕ್ಷಿಣ ಆಫ್ರಿಕಾ ಅರ್ಹತೆ ಗಳಿಸಿದೆ.

* ಎಲ್ಲಾ ಪಂದ್ಯಗಳು ಸಾಕರ್ ಸಿಟಿ - ಜೊಹೆನ್ಸಬರ್ಗ, ಕೇಪ ಟೌನ್, ಪ್ರಿಟೋರಿಯಾ, ಪೊಲೊವಾನೆ, ರುಸ್ತನಬರ್ಗ, ಬ್ಲೋಮಫೊಟೆನ್ ನಗರದಲ್ಲಿ ನಡೆಯಲಿವೆ.

* ಪ್ರಶಸ್ತಿ ಮೊತ್ತ ಸರಿ ಸುಮಾರು ೩೦.೨ ಮಿಲಿಯನ್, ಕೊನೆಯ ೧೬ ಸುತ್ತಿಗೆ ಬರುವರು ಕೂಡ ೯ ಮಿಲಿಯನ್ ದುಡ್ಡು ಗೆಲ್ಲುತ್ತಾರೆ.

* ಈ ಸಲದ ಸಯ್ಪುಗೆ( ಮಸ್ಕಟ್ ) ಹಸಿರು ಕೂದಲು ಇರುವ ಚಿರತೆ. ZAKUMI ಎಂದು ಹೆಸರು. ZA ಅಂದ್ರೆ South Africa, KUMI ಅಂದ್ರೆ ಹತ್ತು.


* ನಮ್ಮ ದೇಶದಲ್ಲಿ epsn-star ವಾಹಿನಿಯಲ್ಲಿ ಈ ಪಂದ್ಯಾವಳಿಗಳನ್ನು ನೋಡಬಹುದು.

* ೮ ಗುಂಪುಗಳಿವೆ, ಪ್ರತಿ ಗುಂಪಿನಲ್ಲಿ ೪ ತಂಡ ಇವೆ. ಇದರಲ್ಲಿ ೨ ತಂಡ ಅರ್ಹತೆ ಗಳಿಸುತ್ತವೆ ಮುಂದಿನ ಹಂತಕ್ಕೆ.

* ದಿಗ್ಗಜರ ಹೋರಾಟದ ಗುಂಪು ಎಂದು ಇದ್ದುದರಲ್ಲಿ "ಗುಂಪು ಜಿ" ಎಂದು ಹೇಳಬಹುದು.

* ಅತಿ ಸಪ್ಪೆ ಗುಂಪು ಎಂದರೆ ಗ್ರೂಪ್ ಸಿ ಅನ್ನಬಹುದು.

* ಯಾವುದರಿಂದ ಯಾರು ಆಯ್ಕೆ ಆಗುತ್ತಾರೆ ಎಂದು ನಾನು ಭ್ರಮಿಸಿದ್ದೇನೆ. ಅದನ್ನು ತದಾ ಬದಲಾಯಿಸುತ್ತ ಹೋಗುತ್ತೆನೆ.
ನನ್ನ ಆಯ್ಕೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೆನೆ.


Group A
Group B
Group C
Group D
Group E
Group F
Group G
Group H
FRA
ARG
ALG
AUS
CMR
ITA
BRA
CHI
MEX
GRE
ENG
GER
DEN
NZL
CIV

HON

RSA
KOR
SVN
GHA
JPN
PAR
PRK
ESP
URU
NGA
USA
SRB
NED
SVK
POR

SUI




ಮುಗಿಯುವ ತನಕ ಇದರ ಬಗ್ಗೆ ಮಾತನಾಡುತ್ತ ಇರೋಣ ..

Sunday, June 06, 2010

ಮುಖ್ಯಮಂತ್ರಿಗಳಿಗೆ ಒಂದು ಪತ್ರ...



ಮಾನ್ಯ ಮುಖ್ಯಮಂತ್ರಿಗಳೇ,


ವಿಶ್ವ ಹೂಡಿಕೆದಾರರ ಸಮಾವೇಶ ಅದ್ಭುತವಾಗಿ ನಡೆದಿದ್ದು, ಅದನ್ನು ಅತ್ಯುತ್ತಮವಾಗಿ ನಡೆಸಿದ ನಿಮ್ಮ ಸರ್ಕಾರಕ್ಕೆ ಅಭಿನಂದನೆಗಳು.
ಈ ಸಮಾವೇಶದಿಂದ ಲಕ್ಷಾಂತರ ಕೋಟಿ ಕರ್ನಾಟಕದಲ್ಲಿ ಹೂಡಿಕೆ ಆಗುತ್ತಿದೆ, ಲಕ್ಷಾಂತರ ಕೋಟಿ ಉದ್ಯೋಗ ಸೃಷ್ಟಿ ಆಗುತ್ತಿದೆ,
ಇದರಿಂದ ಅನೇಕ ಕನ್ನಡಿಗರಿಗೆ ಉದ್ಯೋಗ ದೊರೆತು ನಮ್ಮ ರಾಜ್ಯದ ನಿರುದ್ಯೋಗ ಸಮಸ್ಯೆ ಕಮ್ಮಿಯಾಗುವುದು ಎಂದು ಎಲ್ಲರ ಆಶಯವಾಗಿದೆ.

ಹಾಗೆ ಆಗಬೇಕಾದರೆ ಆ ಉದ್ಯೋಗಗಳು ನಮ್ಮವರಿಗೆ ಸಿಗಬೇಕು, ಸರೋಜಿನಿ ಮಹಿಷಿ ವರದಿಯನ್ನು ಮಾರ್ಪಡಿಸಿ, ಅನುಷ್ಠಾನ ಮಾಡಬೇಕು. ಅದಕ್ಕೂ ಮುಖ್ಯವಾಗಿ ಆ ಉದ್ಯೋಗ ಮಾಡಲು ನಮಲ್ಲಿ ಮಾನವ ಸಂಪನ್ಮೂಲ ಇದೆಯಾ ಎಂದು ನಾವು ಯೋಚಿಸಬೇಕು,
ಇಲ್ಲದಿದ್ದರೆ ಆ ನಿಟ್ಟಿನಲ್ಲಿ ನಾವು ಕೆಲ್ಸ ಮಾಡಬೇಕು, ಹೆಚ್ಚು ಹೆಚ್ಚು ನಿಪುಣತೆಯನ್ನು ಸೃಷ್ಟಿ ಮಾಡಬೇಕು.
ಇಲ್ಲವಾದಲ್ಲಿ ನಾವು ಹಸುವಿಗೆ ಹುಲ್ಲು ಹಾಕಿ, ಬೇರೆ ಯಾರೋ ಹಾಲು ಕರೆದು ಕೊಂಡ ಹಾಗೆ ಆಗುತ್ತದೆ. ಆ ನಿಪುಣತೆ ಇರುವ ಇಲ್ಲ ಕಲಿತು ಬರುವ ಪರರಾಜ್ಯದವರಿಗೆ ಕಮ್ಮಿ ಇಲ್ಲ. ಬಂಡವಾಳ ನೆಪದಲ್ಲಿ ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.


ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಸಿಗಲು ಮತ್ತು ಪ್ರಾದೇಶಿಕ ಅಸಮಾನತೆಯನ್ನು ತಡೆಯಲು ಕನ್ನಡಿಗರಿಗೆ ಎಲ್ಲ ಉದ್ಯೋಗ ಅವಕಾಶಗಳು ಸಿಗಬೇಕು. ಅದ್ದರಿಂದ ಉದ್ಯೋಗ ಮಾಹಿತಿ ಕೇಂದ್ರ ಮತ್ತು ಎಲ್ಲ ಸಚಿವಾಲಯಗಳು ಬೇಕಾಗುವ ನಿಪುಣತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಆಯಾ ಕ್ಷೇತ್ರಗಳ ದಿಗ್ಗಜರೊಂದಿಗೆ ಕೈ ಜೋಡಿಸಿ ನಮ್ಮ ಕನ್ನಡಿಗರ ನಿಪುಣತೆಯನ್ನು ಹೆಚ್ಚು ಮಾಡಬೇಕು.

ಬೇರೆ ರಾಜ್ಯದಿಂದ ಬರುವರಿಗೆ ADVANTAGE KARNATAKA ಆಗದೆ, ನಮ್ಮ ಜನರಿಗೆ ಕೆಲಸ ದೊರಕಲಿ ಎಂದು ಆಶೀಸೋಣ. ನಿಮ್ಮ ಎಲ್ಲ ಯೋಜನೆಗಳಿಗೆ ನಮ್ಮ ಬೆಂಬಲವಿದೆ.


ನಿಮ್ಮ ವಿಶ್ವಾಸಿ


ವಿ ಸೂ:- ಚಿತ್ರಗಳು ಅದನ್ನು ತೆಗೆದವರದ್ದೇ ಆಗಿರುತ್ತದೆ, ಆದ್ದರಿಂದ ಹಕ್ಕು-ಕಾಯಿದೆ ಎಲ್ಲ ಚಿತ್ರ ತೆಗೆದವರದ್ದು, ನಂದೇನು ಇಲ್ಲ.

Saturday, June 05, 2010

ಬಂಡವಾಳ ಬರಲಿ ಆದರೆ ಉದ್ಯೋಗವು ಕೈ ಬಿಡದಿರಲಿ

ವಿಶ್ವ ಹೂಡಿಕೆದಾರರ ಸಮಾವೇಶ ನಡೆದಿದ್ದೇನೊ ಸರಿ, ಅದರಿಂದ ಲಕ್ಷಾಂತರ ಕೋಟಿ ಕರ್ನಾಟಕದಲ್ಲಿ ಹೂಡಿಕೆ ಆಗುತ್ತಿದೆ, ಲಕ್ಷಾಂತರ ಕೋಟಿ ಉದ್ಯೋಗ ಸೃಷ್ಟಿ ಆಗುತ್ತಿದೆ, ಆದರೆ ಆ ಉದ್ಯೋಗ ಮಾಡಲು ನಮಲ್ಲಿ ಮಾನವ ಸಂಪನ್ಮೂಲ ಇದೆಯಾ ಎಂದು ಸರ್ಕಾರ ಯೋಚಿಸಬೇಕು, ಇಲ್ಲದಿದ್ದರೆ ಆ ನಿಟ್ಟಿನಲ್ಲಿ ಕೆಲ್ಸ ಮಾಡಬೇಕು, ಹೆಚ್ಚು ಹೆಚ್ಚು ನಿಪುಣತೆಯನ್ನು ಸೃಷ್ಟಿ ಮಾಡಬೇಕು. ಇಲ್ಲವಾದಲ್ಲಿ ಹಸುವಿಗೆ ಹುಲ್ಲು ಹಾಕಿ, ಬೇರೆ ಯಾರಿಗೋ ಹಾಲು ಕೊಟ್ಟ ಹಾಗೆ ಆಗುತ್ತದೆ. ಆ ನಿಪುಣತೆ ಇರುವ ಇಲ್ಲ ಕಲಿತು ಬರುವ ಪರರಾಜ್ಯದವರಿಗೆ ಕಮ್ಮಿ ಇಲ್ಲ. ಬಂಡವಾಳ ನೆಪದಲ್ಲಿ
ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.

ಯಾಕೆ ಎಂದರೆ ...
* ಭೂಮಿ ಕೊಟ್ಟವರು ನಿರ್ಗತಿಕರಾಗಿರುತ್ತಾರೆ.
* ಎಲ್ಲಿಂದಲೋ ಬಂದವರು ಕೆಲ್ಸ ಗಿಟ್ಟಿಸಿಕೊಂಡಿರುತ್ತಾರೆ.
* ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಇರುವದಿಲ್ಲ.
* ಇದು ಪ್ರಾದೇಶಿಕ ಅಸಮಾನತೆಯನ್ನು ಇನ್ನು ಹೆಚ್ನು ಮಾಡುತ್ತದೆ.
* ದಿನದ ಊಟಕ್ಕೆ ಆಸೆಪಟ್ಟು ಚಿಕ್ಕ ಪರಿಹಾರ ಇಸ್ಕೊಂಡು ಭೂಮಿ ರೈತ ಕೊಟ್ಟರೆ, ವರ್ಷದ ಕೂಳು ಕಳೆದುಕೊಳ್ಳುವುದು ಶತಸಿದ್ಧ.
* ಹೆಚ್ಚು ಜನಸಂಖ್ಯೆ ಆದ ಹಾಗೆ, ಅವರಿಗೆ ಮೂಲಭೂತ ಸೌಕರ್ಯಗಳ ಮೇಲೆ ಸರಕಾರ ಬಂಡವಾಳ ಹೂಡಬೇಕು.



ನಮಗೆ ಲಾಟರಿ ಬಂದಿದೆ ಎಂದು ಬೀಗಬಾರದು, ಇಲ್ಲಿನ ಭೂಮಿ, ನೆಲ, ಜಲ, ಖನಿಜ ಸಂಪತ್ತು , ವಿದ್ಯುತ್ ಇವುಗಳನ್ನು
ನಾವು ಪಣಕ್ಕಿಟ್ಟು ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸುತ್ತಿದ್ದೆವೆ. ಇಲ್ಲಿ ಬಂಡವಾಳ ಹೂಡಿರುವರಿಗೆ ದುಡ್ಡೆ ಮುಖ್ಯ , ಅದು ಸಿಗಲು ಆವರಿಗೆ ಕನ್ನಡಿಗರೂ ಒಂದೇ, ತಮಿಳರು ಒಂದೇ. ಅದ್ದರಿಂದ ಸರ್ಕಾರ‍ ಮತ್ತೊಮ್ಮೆ ನಿರ್ಲಕ್ಷ ಮಾಡಿದರೆ , ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ನಮ್ಮ ನೆಲದಲ್ಲೇ ನಾವು ಪರಕೀಯರು ಅನಿಸುತ್ತದೆ.

ಪರಕೀಯರಿಗೆ ADVANTAGE KARNATAKA ಆಗದೆ, ದೂಳು ಕಟ್ಟಿರುವ ಉದ್ಯೋಗ ಮಾಹಿತಿ ಕೇಂದ್ರ ಜಾಗೃತವಾಗಲಿ ಎಂದು ಆಶಿಸೋಣ.