Saturday, November 01, 2008

ಲೇಖಕರ ಕನ್ನಡ ಕೀಳರಿಮೆಯನ್ನು ಕಿತ್ತು ಹಾಕಲು ಅನಕೃ ಬೇಕಾಗಿಲ್ಲ ...

ಕನ್ನಡ ರಾಜ್ಯೋತ್ಸವ ಬಂದಾಗೆಲ್ಲಾ ಒಂದು ರೀತಿಯ ಲೇಖನ ನಮಗೆ ಕಾಣಸಿಗುತ್ತದೆ, ಅದು ಎಷ್ಟೆ ವರುಷದ ಹಿಂದೆ ಬರೆದಿದ್ದರೂ ಅದನ್ನೇ ಪುನರಾವರ್ತನೆ ಮಾಡಿದರೂ
ಇಂದಿನ ಪರಿಸ್ಥಿತಿಗೆ ಅನ್ವಯ ಅನ್ನುವ ಹಾಗೆ ಬರೆದಿರುತ್ತಾರೆ. ಅದಕ್ಕೆ ಹೊರತಾಗಿಲ್ಲ ಇವತ್ತು (nov 1) ಪ್ರಜಾವಾಣಿಯಲ್ಲಿ ಬಂದಿರುವ ಸುಧಾ ಹೆಗಡೆ ಅವರ ಲೇಖನ.
ಅವರಿಗೂ ಪಾಪ ಸಮಸ್ಯೆಗಳೇ ಕಾಣುತ್ತಿದೆ, ಒಟ್ಟಿನಲ್ಲಿ ನಮ್ಮನ್ನು ತುಳಿಯುತ್ತ ಇದ್ದಾರೆ, ನಮಗೆ ಎನು ಮಾಡುವದಕ್ಕೆ ಆಗುವದಿಲ್ಲ, ನಾವು ಹೀಗೆ ಅನ್ನುವ ಒಂದು ರೀತಿಯ ಪಲಾಯನ ವಾದವನ್ನು ಅವರು ಮಾರಾಟ ಮಾಡಿದ್ದಾರೆ. ಅವರೂ ಸಮಸ್ಯೆಗಳಿಗೆ ಮಾಡಬೇಕಾದ ಪರಿಹಾರ ಬಗ್ಗೆ ಮೌನ ವಹಿಸಿದ್ದಾರೆ ಮತ್ತು ಅವರಿಗೆ ಒಂದು ದಶಕಗಳಿಂದ ಕನ್ನಡ ಸಂಘಟನೆಗಳು ಮಾಡಿರುವ ಹೋರಾಟ ಕಣ್ಣಿಗೆ ಬೀಳದೆ ಇರುವುದು ಜಾಣಕುರುಡೇ ಸರಿ. ನಯಾ ಪೈಸೆ ಕೆಲಸ ಆಗಿಲ್ಲ, ಎಲ್ಲರೂ ಸುಮ್ಮನೆ ಇದ್ದಾರೆ ಅನ್ನುವ ಅವರ ವಾದವನ್ನು ಕೊಂಡುಕೊಳ್ಳಲು ಆಗುವದಿಲ್ಲ.

ಇದಕ್ಕೆ ಇವರು ಕೊಡುವ ಒಂದು ಉದಾಹರಣೆ ನಿಜಕ್ಕೂ ಹಾಸ್ಯಸ್ಪದವಾಗಿದೆ, ಒಂದು ಕಿರಾಣಿ ಅಂಗಡಿಗೆ ಹೋಗಿ ಗೋದಿಹಿಟ್ಟು ಕೇಳಿದಕ್ಕೆ ಆ ಹುಡುಗ ಕಕ್ಕಾಬಿಕ್ಕೆ ಆಗಿ ನೋಡಿದನಂತೆ, ಕನ್ನಡ ಮಾತನಾಡಿದಕ್ಕೆ ಇವರನ್ನು ಪೆದ್ದು ತರ ನೋಡಿದನಂತೆ, ಇದರಿಂದ ಕನ್ನಡಿಗರಿಗೆ ಅವಮಾನ ಆಗಿ
ಮುಂದೆ ಅವನು ಅಟ್ಟಾ ಅನ್ನುತ್ತಾನಂತೆ. ಇದು ಇವರ ಕೀಳರಿಮೆಯನ್ನು ತೋರಿಸುತ್ತದೆ. ಅದರಲ್ಲೂ ಗ್ರಾಹಕ ಸೇವೆಯಲ್ಲಿ ಕನ್ನಡ ಸರಿಯಾಗಿ ಅನುಷ್ಥಾನ ಆಗಬೇಕಾಗಿರುವು ಜನ ಸಾಮನ್ಯರಲ್ಲಿ ಆಗುವ ಜಾಗೃತಿಯಿಂದ. ಕನ್ನಡದಲ್ಲಿ ಕೇಳಿದೆ ಅಂತ ಪೆದ್ದು ಆಗಿ ನೋಡಿದ ಅನ್ನುವ ಕೀಳರಿಮೆಯಿಂದ ಅಲ್ಲ. ಇದಕ್ಕೆ ಮ.ರಾಮಮೂರ್ತಿ ಇಲ್ಲಾ ಅನಕೃ ಅವರ ಹೋರಾಟ ಬೇಕಿಲ್ಲ, ಕೀಳರಿಮೆಯನ್ನು
ತೆಗೆಯಲು ಲೇಖಕರು ಪ್ರಯತ್ನ ಪಟ್ಟರೆ ಸಾಕು.

Friday, October 31, 2008

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....


ಸಮಸ್ತ ಕನ್ನಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....

ನಮ್ಮ ಕನ್ನಡ ಪ್ರೇಮ ಸಿರಿಗನ್ನಡಂ ಗೆಲ್ಗೆ ಅನ್ನುವದಕ್ಕೆ, ಇಲ್ಲ ನವೆಂಬರ್ ನಲ್ಲಿ ಒಂದು ಕನ್ನಡ ಚಿತ್ರ ನೋಡುವದಕ್ಕೆ ಮಾತ್ರ ಸೀಮಿತ ಆಗುವುದು ಬೇಡ. ಇದು ನಿತ್ಯೋತ್ಸವ ಆಗಲಿ.

Tuesday, October 28, 2008

ಒಂದು ಸಾವಿನ ಸುತ್ತ ..( ನಮ್ಮ ಊರಿನಲ್ಲಿ ಒಂದು ದಿನ)

ನಮ್ಮ ಊರಿನಲ್ಲಿ ಒಂದು ಎರಿಯಾ ಇದೆ, ಅದರ ಹೆಸರು ಬಿಮಾಲ ಅಂತ. ನೈಸರ್ಗಿಕವಾಗಿ,ಭೌಗಳಿಕವಾಗಿ ಬಹಳ ಚೆನ್ನಾಗಿರುವ ಪ್ರದೇಶ.
ಆದರೆ ಅಲ್ಲಿ ಅರಾಜಕತೆ ತಾಂಡವ ಆಡುತ್ತಿದೆ, ಅಲ್ಲಿನ ಜನರಿಗೆ ಸಂಸ್ಕ್ಟುತಿ ಇಲ್ಲ, ಬೈಗಳ, ಹೊಡೆದಾಟ ಅವರ ಜೀವನದ ಒಂದು ಭಾಗ
ಆಗಿದೆ. ಮಾಡಲು ಕೆಲಸವಿಲ್ಲ, ಆದ್ದರಿಂದ ಸದಾ ಮನೆಯ ಮುಂದೆ ಕುಳಿತುಕೊಂಡು ಹೋಗಿ ಬರುವರಿಗೆ ಕಾಟ ಕೊಡುತ್ತಾ ಇರುತ್ತಾರೆ. ಊಟ ಮಾಡಬೇಕು ಎಂದರೆ
ಹೊಡೆದಾಟ ಮಾಡಿ, ಎಳೆದಾಡಿಯೇ ಮಾಡಬೇಕು, ಹಾಗೆ ಮಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗೊಲ್ಲ. ಆದರೂ ಮಕ್ಕಳನ್ನು ಹುಟ್ಟಿಸುವುದನ್ನು ಮನೆಯ ಯಜಮಾನ ಬಿಟ್ಟಿಲ್ಲ ಇಲ್ಲ ಅವನ ವಂಶದವರೂ ಬಿಟ್ಟಿಲ್ಲ. ಹುಟ್ಟಿಸಿದ ದ್ಯಾವ್ರು ಹುಲ್ಲು ಮೇಯಿಸುತ್ತಾನ ಅಂತ ಹೇಳಿಕೊಂಡು ಕಾರ್ಯಕ್ರಮ ನಿರಂತರವಾಗಿ ಸಾಗಿದೆ.
ಹೀಗಿದ್ದರೆ ಸಂಸಾರ ಹೇಗೆ ನಡೆಯೊತ್ತೆ ಅಂತ ನಿಮ್ಮ ಪ್ರಶ್ನೆ ಆಗಿದ್ದರೆ, ಅದಕ್ಕೂ ಒಂದು ದಾರಿ ಮಾಡಿಕೊಂಡಿದ್ದಾರೆ. ಅದೇ ಊರಿನಲ್ಲಿ ಇನ್ನ ೨೦ ಎರಿಯಾಗಳಿವೆ, ಅಲ್ಲಿ ಚೆನ್ನಾಗಿ ಮನೆ ನಡೆಸುತ್ತ ಇರುವರು ಇದ್ದಾರೆ, ಆ ಮನೆಗಳ ಪ್ರತಿಶತ ೪೦% ಆದಾಯ ಇವರಿಗೆ ಕೊಡಬೇಕು. ಸದಾ ನಾವು ಹಿಂದೆ ಇದ್ದೇವೆ ಅಂತ ಹೇಳಿ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡಿದ್ದಾರೆ. ಪ್ರತಿ ಮನೆಗೂ ಕಂಪ್ಯೂಟರ್ ಕೊಡುತ್ತಿವಿ ಅಂದಾಗ ಇವರು ಹಟ ಮಾಡಿ, ಅರ್ಧ ಬಾಚಿಕೊಂಡರು. ಆಮೇಲೆ ಅದನ್ನು ಹೇಗೆ ಉಪಯೋಗಿಸೋದು ಅಂತ ತಿಳಿಯದೆ ಅವುಗಳನ್ನು ಮಾರಿ ಗನ್,ಲಾಟಿ ಕೊಂಡುಕೊಂಡರು. ಕೊಂಡುಕೊಂಡ ಮೇಲೆ ಬಳಸಿದಿದ್ದರೆ ಹೇಗೆ ಬೇರೆ ಮನೆಗಳ ಜನರನ್ನು ಅಪಹರಿಸೋದು, ಸುಲಿಗೆ ಕಾರ್ಯಗಳಿಗೆ ಶುರು ಹಂಚಿಕೊಂಡರು.. ಅಪ್ಪಿತಪ್ಪಿ ಜನ ಇವರ ಎರಿಯಾ ಕಡೆ ಹೋದರು ಸಾಕು ಆವ್ರು ಅಪಹರಣ ಆಗುತ್ತಾರೆ. ಇದನ್ನು ಪ್ರಶ್ನಿಸುವ ಹಾಗೆ ಇಲ್ಲ ನೋಡಿ.. ಇಡಿ ಊರಿಗೆ ಒಂದು ಕಾನೂನು ಆದರೆ ಇವರಿಗೆ ಅದು ಅನ್ವಯಿಸುವದಿಲ್ಲ.


ಆ ಎರಿಯಾದಲ್ಲಿ ಜನ ಹೆಚ್ಚಾದ ಹಾಗೆ ಅವರು ಒಂದು ಕಾನೂನು ತಂದರು, ಪ್ರತಿ ೩ನೇ ಮತ್ತು ತದನಂತರ ಮಗು ಬೇರೆ ಎರಿಯಾಗೆ ಹೋಗಬೇಕು ಅಂತ. ಬೇರೆ ಎರಿಯಾಗೆ ಹೋದ ಜನರ ಸುಮ್ಮನೆ ಇದ್ರಾ,ಅಲ್ಲೂ ನಮ್ಮ ಎರಿಯಾದೆ ಕಾನೂನು ಅಂತ ದುಂಡಾವರ್ತನೆ ಶುರು ಮಾಡಿದರು. ಬೇರೆಯವರ ಮನೆಗೆ ಹೋಗಿ, ಅಲ್ಲಿಯ ನೀತಿ ನಿಯಮವನ್ನು ಗಾಳಿಗೆ ತೂರಿ ಅಲ್ಲಿ ಜನರಿಗೆ ಮಾಡಿದ್ದ ಅಡಿಗೆಯನ್ನು ತಿನ್ನುವದಕ್ಕೆ ಶುರು ಮಾಡಿದರು. ಕೇಳಿದರೆ ಪಕ್ಕದ , ನಮ್ಮ ಮನೆ ಅಂತ ಎನು ಇಲ್ಲ, ನಾವೆಲ್ಲಾ ಇರುವುದು ಒಂದೇ ಊರಿನಲ್ಲಿ ಆದ್ದರಿಂದ ಹಂಚಿಕೊಂಡು ತಿನ್ನಬೇಕು ಅಂತ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು.

ಇವರ ಬಾಯಿಗೆ ಹೆದರಿ ಜನ ಹಾಳಾಗಿ ಹೋಗಲಿ ಅಂತ ಬಿಟ್ಟುಬಿಟ್ಟರು. ಆದರೆ ಯಾವಾಗ ಈ ಜನ ತಮ್ಮ ಕಾಮವಾಂಛೆಗೆ ಹುಡುಗಿ-ಅಜ್ಜಿ ಅಂತ ನೋಡದೆ ಮೈ ಮೇಲೆ ಬಿದ್ರೊ ಆಗ ಅಲ್ಲಿನ ಜನರಲ್ಲಿ ತಾಳ್ಮೆ ಮಿತಿಮೀರಿತು. ಒದ್ದು ಬುದ್ಧಿ ಹೇಳಿದರು. ಆದರೆ ಎಮ್ಮೆ ಚರ್ಮದ ಜನರಿಗೆ ಇದು ಅರ್ಥ ಆಗಲೇ ಇಲ್ಲ. ಕಾಲಕ್ರಮೇಣ ಊಟದ ಬರವಾಗಿ ಒದ್ದಡುತ್ತ ಇರುವಾಗ , ಇವರು ಕಿತ್ತು ತಿನ್ನುವುದು ನಡ್ದೇ ಇತ್ತು. ದೊಡ್ಡದೇಶ ಎರಿಯಾದಲ್ಲಿ ಸ್ಥಳೀಯರಿಗೆ ಊಟ ಇಲ್ಲ, ಅದರಲ್ಲಿ ಇವರ ಕಿತ್ತುತನ ಸಹಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಉಂಟಾಗಿ ಒಂದು ದಿನ ಕಿತ್ತು ತಿನ್ನುವದನ್ನು ನಿಲ್ಲಿಸಿ ಒದ್ದು ಓಡಿಸಿದರು.

ಅದೇ ದೊಡ್ಡ ತಪ್ಪು ಅನ್ನುವ ಹಾಗೆ ಜನ ಗಲಾಟೆ ಮಾಡಿದರು , ತಮ್ಮ ಎರಿಯಾದಲ್ಲೇ ಬೆಂಕಿ ಇಡುವುದು, ಗಲಾಟೆ ಮಾಡುವುದು ಶುರು ಮಾಡಿದರು. ತಾವು ಮಾಡುತ್ತ ಇರುವುಉದ್ ತಮನೇ ನಷ್ಟ ಅನ್ನುವ ಪರಿಜ್ಞಾನ ಇರಲಿಲ್ಲ. ಅಷ್ಟಕ್ಕೂ ಅವರು ಸಂಪಾದಿಸಿದ್ದ ಆಸ್ತಿಯೇ ?. ಮೊದಲೆ ಗನ್-ಲಾಂಗು ಸಂಸ್ಕೃತಿಯಲ್ಲಿ ಬೆಳೆದ ಯುವಕರು ಸುಮ್ಮನೇ ಇರುತ್ತಾರ, ಅದರಲ್ಲಿ ಒಬ್ಬ ಎದ್ದುನಿಂತೇ ಬಿಟ್ಟ. ೨೫ ವರುಷದ ಬಿಸಿರಕ್ತದ ಯುವಕ.
ಕಿತ್ತು ತಿನ್ನುವುದು ನಮ್ಮ ಹಕ್ಕು,ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ನಿರ್ಣಯ ಮಾಡಿ
ಒಂದು ಮುಂಜಾನೆ ರಿವೆಂಜ್ ತೆಗೆದುಕೊಳ್ಳಲು ಅಣಿಯಾದ.

ಆ ದೊಡ್ಡದೇಶ ಎರಿಯಾದಲ್ಲಿ ಆವತ್ತು ಶಾಂತಿ ಇತ್ತು, ಆಗ ಈ ಯುವಕ ಒಂದು ಹತ್ತು ಜನರನ್ನು ಒತ್ತೆ ಮಾಡಿಕೊಂಡು ಜನರನ್ನು ಹೆದರಿಸುವದಕ್ಕೆ ಶುರು ಮಾಡಿದ, ಜನರಿಗೆ ಗಾಬರಿ.
ಆ ಗಾಬರಿಯನ್ನು ತಿಳಿದ ಯುವಕ ಅಲ್ಲಿಯ ಜನರನ್ನು ನಿಂದಿಸಲು ಶುರು ಮಾಡಿದ. ಆಗ ಎಚ್ಚೆತ್ತುಕೊಂಡ ರಕ್ಷಣಾ ಪಡೆ ಇವನನ್ನು ಹೊಡೆದು ಉರುಳಿಸಿತು. ಜನರನ್ನು ಅವನ ಹಿಡಿತದಿಂದ ಪಾರು ಮಾಡಿತು. ಅದೇ ದೊಡ್ಡ ವಿವಾದ ಅಯಿತು.

ಬಿಮಾಲ ಎರಿಯಾದ ಜನರು ಆ ಹುಡುಗನ ಸಾವನ್ನು ನೆಪ ಮಾಡಿಕೊಂಡು ಮತ್ತೆ ಗಲಾಟೆ ಶುರು ಮಾಡಿದರು. ಆ ಹುಡುಗ ಬದುಕಿದ್ದರೆ ನೋಬೆಲ್ ಪಡೆಯುತ್ತಿದ್ದ,
ಅವನ ಸಾವು ಊರಿಗೆ ನಷ್ಟ ಅನ್ನುವ ರೀತಿಯಲ್ಲಿ ಬೊಬ್ಬೆ ಹೊಡೆದರು. ನಮ್ಮಲ್ಲಿ ಬಂದೂಕು ಸಾಮನ್ಯ್ ಆದ್ದರಿಂದ ಅವನು ತೆಗೆದುಕೊಂಡು ಬಂದಿದ್ದಾನೆ, ಅಬ್ಬಾಬ್ಬ ಎನು ಮಾಡುತ್ತಿದ್ದ ಒಂದಿಬ್ಬರನ್ನು ಸಾಯಿಸುತ್ತಿದ್ದ , ಕಮ್ಮಿ ಆದ ಜನರನ್ನು ನಾವು ತುಂಬಿಕೊಂಡುತ್ತಿದ್ದೆವು ನೀವು ಅವನನ್ನು ಸಾಯಿಸಿ ತಪ್ಪು ಮಾಡಿದಿರಿ ಎಂದು ಅಪಾದನೆಗಳ ಸರಮಾಲೆ ಮಾಡಿದರು. ಒಟ್ಟಿನಲ್ಲಿ ಈ ಪುಂಡು ಪೋಕರಿಯನ್ನು ಸಾಯಿಸಿದ್ದು ತಪ್ಪು ಎನ್ನುವ ರೀತಿಯಲ್ಲಿ ಆಪಾದನೆ ಬಂದಾಗ ದೊಡ್ಡದೇಶ ಎರಿಯಾ ಜನ ಸುಮ್ಮನೆ ಇರುತ್ತಾರೆಯೇ ಅವರು ತಿರುಗಿಸಿ ಕೊಟ್ಟರು. ಅವನೇನು ಹುತಾತ್ಮನಲ್ಲ, ಭಯೋತ್ಪಾದಕ ಅಂತ ಜರಿದರು...

ಮುಂದೇನಾಯಿತು ಕಾದು ನೋಡಿ.....