Sunday, April 22, 2007

ರೇಡಿಯೊ ಮಿರ್ಚಿ ..ಹೆಚ್ಚು ಕನ್ನಡ ಹಾಡು.



ಕೆಲ ತಿಂಗಳ ಹಿಂದೆ ನನ್ನ ಗೆಳೆಯ ಕರೆ ಮಾಡಿದಾಗ ಮೊದಲು ಹೇಳಿದ್ದು, ಇವತ್ತು ರೇಡಿಯೋ ಮಿರ್ಚಿ ಕೇಳಿದೆಯಾ ? , ಸಂಪೂರ್ಣ ಕನ್ನಡ ಹಾಕುತ್ತ ಇದ್ದಾರೆ ಅಂತ. ಇದು ಅವರ ಕನ್ನಡ ಅಭಿಮಾನವಂತು ಅಲ್ಲ, ಇದಕ್ಕೆ ಕಾರಣ ಹುಡುಕುತ್ತ ಹೋದರೆ ಸಿಗುವುದು ಕ.ರ.ವೇ ಹೋರಾಟದ ಫಲವೆಂದು. ನನ್ನ ಪುಣ್ಯಕ್ಕೆ ಯೂಟೂಬ್ ನಲ್ಲಿ ಇದರ ಒಂದು ತುಣುಕು ಸಿಕ್ಕಿತು. ಕನ್ನಡ ಹಾಡುಗಳನ್ನು ಹೆಚ್ಚು ಹಾಕಿದರೆ ಹೆಚ್ಚು ಮಾರುಕಟ್ಟೆ ಪಡೆಯಬಹುದು ಮತ್ತು ನಿಮ್ಮ ವಾಹಿನಿ ಉಳಿದವುಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಮನದಟ್ಟು ಮಾಡಿದರ ಪರಿಣಾಮವೇ ಇ ಬದಲಾವಣೆ.
ನೋಡಿ ಇವರು ಈಗ ಕನ್ನಡ ಹಾಡುಗಳನ್ನು ಹಾಕುತ್ತ ಇದ್ದೇವೆ ಎಂದು ಜಾಹೀರಾತು ಕೋಡುತ್ತ ಇದ್ದಾರೆ,ಅದ್ದರಿಂದ ನಂಬರ್ ಒಂದು ಆಗಿದ್ದಾರೆ.

( ಕೃಪೆ :- ಉದಯ ಟಿ.ವಿ ಮತ್ತು ಯೂಟುಬ್)

ಕನ್ನಡದಲ್ಲಿ ಕಾಮವಿಲ್ಲ(,) ಬರೀ ಫುಲ್‍ಸ್ಟಾಪ್(.)

ನಮ್ಮ ಕನ್ನಡ ಬಗ್ಗೆ ಗೊತ್ತೊ ಗೊತ್ತಿಲ್ಲದೇ ಒಂದು ಮಡಿವಂತಿಕೆಯನ್ನು ಮಾಡಿಕೊಂಡಿದ್ದೇವೆ, ಅಂದರೆ ಅದರ ಫಲವಾಗಿಯೇ
ನಮ್ಮ ಕನ್ನಡ ಕೇವಲ ಪ್ರಫುಲ್ಲ ಸಾಹಿತ್ಯಕ್ಕೆ ಸೀಮಿತ, ಪದ್ಯ-ಕಥೆ-ಕಾದಂಬರಿಗೆ ಬಿಟ್ಟರೆ ಬೇರೆ ಎನು ಬರೆಯಲು ಆಗುವದಿಲ್ಲ ಎಂಬ ಒಂದು ಬಂಧನದಲ್ಲಿ ಸಿಲುಕಿದ್ದೆವೆ. ಅದಕ್ಕೆ ನೋಡಿ ಕನ್ನಡ ಬಗ್ಗೆ ಹೇಳಿ ಅಂದರೆ ನಾವು ಮೊದಲು ಹೇಳುವುದು ನಮಗೆ ೭ ಜ್ಞಾನಪೀಠ ಬಂದಿವೆ, ಇಲ್ಲಾ ನಮ್ಮ ಕನ್ನಡ ರಾಜ್ಯೊತ್ಸವದ flex ಬ್ಯಾನರ್‍ಗಳಲ್ಲಿ ಆ ೭ ಜನರ ಭಾವಚಿತ್ರ ಹಾಕಿ ಸಂತೋಷ ಪಡುವುದೇ ನಮ್ಮ ಮಹತರ ಸಾಧನೆ ಎಂದು ಬೀಗುತ್ತೆವೆ.
ನನಗೆ ಪ್ರಶ್ನೆ ಬರುವುದು ನಮ್ಮ ಕಾಮಗಳನ್ನು ( ಕಾಮ ಅಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧವಲ್ಲ, ಮನುಷ್ಯನ ಪ್ರತಿಯೊಂದು ಆಸೆಯನ್ನು ನಾನು ಕಾಮವೆಂದು ಪರಿಗಣಿಸಿ, ಮುಂದೆ ಹಾಗೆ ಉಲ್ಲೇಖಿಸುತ್ತೆನೆ) ನಮ್ಮ ಕನ್ನಡದಲ್ಲಿ ತರಲು ನಾವು ಯಾಕೆ ಇಷ್ಟು ಮಡಿವಂತಿಕೆ ಮಾಡುತ್ತ ಇದ್ದೆವೆ ಅಂತ?.

ಈ ನಡುವೆ ಹೆಚ್ಚು ಪ್ರಚಲಿತ ವಿದ್ಯಮಾನವೆಂದರೆ ನಮ್ಮ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆ ಇಲ್ಲಾ ಬೇಡವೆ ಎನ್ನುವುದು. ಇದು ಇನ್ನೂ ನಮ್ಮಲ್ಲಿ ಪ್ರಶ್ನೆಯಾಗಿ ಉಳಿದಿರುವುದು ನಿಜಕ್ಕೂ ಶೋಚನೀಯ. ನಮ್ಮ ಸಂಸ್ಕೃತಿಗೆ ಇದು ಮಾರಕ ಎಂದು ವಾದಿಸುವ ಜನ ನಿಜಕ್ಕೂ ಆಷಾಡಭೂತಿ ತೋರುತ್ತಿದ್ದಾರೆ. ನಮ್ಮ ಹಳೆ ದೇವಸ್ಥಾನಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಗಳನ್ನು ನಾವು ಒಮ್ಮೆ ನೋಡಿದರೆ ನಮಗೆ ಆ ಕಾಲದಲ್ಲಿ ಇದ್ದ ಉದಾರತೆ ಮತ್ತು ಜನರ ತಿಳುವಳಿಕೆ ಬಗ್ಗೆ ತಿಳಿಯುತ್ತದೆ. ಒಬ್ಬ ಶಿಲ್ಪಿ ಒಂದು ಕಾಮಸೂತ್ರದ ಹತ್ತು ಹಲವು ಭಂಗಿಗಳನ್ನು ಮನನ ಮಾಡಿ ಕಲ್ಲಿಗೆ ಆ ರೂಪವನ್ನು ಕೋಡಬೇಕಿದ್ದರೆ ಅದು ಖಂಡಿತ ಅವನ ಒಬ್ಬನ ಜ್ಞಾನವಲ್ಲ, ಅದು ಅಂದಿನ ಸಮಾಜದ ವಿದ್ಯಮಾನ.

ತೆಲುಗುವಿನಲ್ಲಿ ಒಂದು ಗಾದೆ ಇದೆ, "ಬಚ್ಚಿಟ್ಟರೆ ಹಳಸಿ ಹೋಗುತ್ತದೆ" ಅಂತ, ಇದು ನಮ್ಮ ಇಂದಿನ ಸಮಾಜಕ್ಕೆ ನೈಜ ಕನ್ನಡಿ ಆಗಿದೆ. ನಾವು ನಮ್ಮ ಯುವ ಪೀಳಿಗೆ ಬಗ್ಗೆ ವಿಷಯವನ್ನು ಹಂಚಿಕೊಳ್ಳುದೇ ಇದ್ದರೆ ಅವರು ಆ ವಿಷಯಗಳನ್ನು ತಿಳಿದುಕೊಳ್ಳುವದಿಲ್ಲ ಅನ್ನುವ ಮೂಡನಂಬಿಕೆಗೆ ಎನು ಹೇಳಬೇಕು ?. ಇದರಿಂದ ನಮ್ಮ ಸಂಸ್ಕ್ರುತಿಯನ್ನು ರಕ್ಷಣೆ ಮಾಡುತ್ತ ಇದ್ದೇವೆ ಎಂದು ಪ್ರತಿಪಾದಿಸುವ ಜನ ಒಮ್ಮೆ ಇತರ ವಿಷಯಗಳ ಬಗ್ಗೆ ಗಮನ ಹರಿಸಬೇಕು.
ಅಂತರ್ಜಾಲದಲ್ಲಿ ದಿನಾ ದಿನಾ ಹೊಚ್ಚ ಹೊಸ update ಕೊಡುವ ಡೆಬೊನೆರ್ ಬ್ಲಾಗ/xboards.us ಒಂದು ಸಾಕು ನಮ್ಮ ಯುವಜನಾಂಗಕ್ಕೆ. ಇಂಥಾ ಬ್ಮಾಗ ಮತ್ತು websites ಇರುವ ತನಕ ನಮ್ಮ ಜನರಿಗೆ ಕಳಪೆ ಸರಕು ಸಿಗುವದರಲ್ಲಿ ಮೋಸವಿಲ್ಲ.
ಇದು ಬರೀ ಪಟ್ಟಕ್ಕೆ ಸೀಮಿತ ಎಂದು ನೀವು ಭಾವಿಸಿದ್ದರೆ, ಅದು ನಮ್ಮ ಜನರ ignorance ಪರಮಾವಧಿ. ಚಿಕ್ಕ ಚಿಕ್ಕ ಊರಿನಲ್ಲಿ
cyber cafe ನಲ್ಲಿ ಕುಳಿತ ಪ್ರೇಮಿಗಳು ONLINE TUTION ತೆಗೆದುಕೊಳ್ಳುವುದು ಇಂತಹ ಕಳಪೆ ವೆಬೆಸೈಟ್‍ಗಳಿಂದ.

ಅನೇಕ ಕನ್ನಡ ಪತ್ರಿಕೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಂದು ಕಾಲಂ ಇರುತ್ತದೆ, ಅದರಲ್ಲಿ ಒಬ್ಬರು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನನ್ನ ಗಮನಕ್ಕೆ ಬಂದ ಮತ್ತು ಹೆಚ್ಚು ಅವಾಂತರಗಳನ್ನು ಮಾಡಿಕೊಂಡು ಪ್ರಶ್ನೆ ಕೇಳುವುವರು ಹೆಚ್ಚು ಚಿಕ್ಕ ಊರಿನವರು. ಇವರಿಗೆ ಲೈಂಗಿಕ ಶಿಕ್ಷಣ ಕೋಡದಿರುವುದೇ ಹೆಚ್ಚು ಅವಘಡಗಳನ್ನು ಮಾಡಿಕೊಂಡು ತಮ್ಮ ಪ್ರಶ್ನೆಗಳನ್ನು ಯಾರ ಹತ್ತಿರ ಹಂಚಿಕೊಳ್ಳಲಾಗದೇ ಪತ್ರಿಕೆಗಳ ಮೊರೆ ಹೋಗುತ್ತಾರೆ. ಇಲ್ಲಿ ನನಗೆ ಅನಿಸುವುದು ನಮ್ಮ ಮನುಷ್ಯನ ಕಾಮಗಳನ್ನು ನಾವು ನಮ್ಮ ಭಾಷೆಯಲ್ಲಿ ಹೇಳದೇ ಇರುವುದೇ ನಮ್ಮ ಜನರಿಗೆ ಮಾಡುತ್ತಿರುವ ಒಂದು ಮೋಸ. ನಾನು ಸರಸಗಾಟಾಗಿ ನಮ್ಮ
ಭಾಷೆಯಲ್ಲಿ ಲೈಂಗಿಕ ವಿಷಯಗಳನ್ನು ಹೇಳುವ ಪುಸ್ತಕ ಇಲ್ಲಾ ಅಂತ ಅಲ್ಲ. ಆದರೆ ಅವುಗಳ ಗುಣಮಟ್ಟವಿಲ್ಲ ಎನ್ನುವುದು ಮತ್ತೆ ಹೆಚ್ಚು ವೈವಿಧ್ಯತೆ ಇಲ್ಲದೇ ಇರುವುದು ಕೊರಗು.

ಇದು ನಮ್ಮ ಮಡಿವಂತಿಕೆಯ ಫಲವಾದರೆ ಮುಂದೆ ನಮಗೆ ಕಾಣಸಿಗುವುದು ಇನ್ನೊಂದು ರೋಗ ಅದು, ನಮ್ಮ ಭಾಷೆಯಲ್ಲಿ ಕೆಲವು ವಿಷಯಗಳ ಹೇಳಲು ಸಾಧ್ಯವಿಲ್ಲ ಎಂದು ನಮ್ಮಲ್ಲಿ ನಾವೇ ಹಾಕಿಕೊಂಡ ಒಂದು ಬಂಧನ. ಮುಖ್ಯವಾಗಿ ಒಂದು ಜ್ಞಾನಹೀ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಆಂಗ್ಲಕ್ಕೆ ಮೊರೆ ಹೋಗಬೇಕು ಎಂದು ನಾವು ಸಮಾಜದಲ್ಲಿ ಬಿತ್ತಿ ನಮ್ಮ ಜನತೆಗೆ ಒಂದು ದೃಷ್ಟಿಯಲ್ಲಿ ಬೇರೆ ಭಾಷೆ ನಮಗಿಂತ ದೊಡ್ಡದು ಎಂಬ ತಪ್ಪು ಗ್ರಹಿಕೆಯನ್ನು ಹಂಚುತ್ತಿದ್ದೆವೆ.
ನಮ್ಮ ಕನ್ನಡ ಜನ ಬಯಸುವ ಎಲ್ಲಾ ಕಾಮಗಳು ಅಂದರೆ ಅವನು ಮೊಬೈಲ್ ತಂತ್ರಜ್ಞಾನ ಹಿಡಿದು ಲೈಂಗಿಕ ಎಲ್ಲಾ ವಿಷಯಗಳು ನಮ್ಮ ಭಾಷೆಯಲ್ಲೇ ಸಿಕ್ಕರೆ ನಮಗೆ ಇರುವ ಅನೇಕ ತಪ್ಪು ಗ್ರಹಿಕೆಗಳನ್ನು ದೂರ ಮಾಡುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು.ಎಲ್ಲಾ ಇಲ್ಲ ಅಂತ ಅಲ್ಲ, ಅವು ಇದ್ದರು ಜನರಿಗೆ ಮುಟ್ಟಿಲ್ಲ, ವನಸುಮಗಳಾಗಿ ಯಾರದೊ ಒಬ್ಬರ ಸ್ವತ್ತುಗಳಾಗಿವೆ. ನಾವು ಜುಟ್ಟಿಗೆ ಮಲ್ಲಿಗೆ ಹೂವಿನ ಸಾಹಿತ್ಯಕ್ಕೆ FULLSTOP ಹಾಕಿ, ಹೊಟ್ಟೆಗೆ ಹಿಟ್ಟು ತರುವ ಸಾಹಿತ್ಯಕ್ಕೆ ಕಾಮ(,) ಹಾಕಬೇಕು.






Thursday, April 19, 2007

ಕನ್ನಡ ಗ್ರಾಹಕ ಬಿಟ್ಟಿ ಅಲ್ಲ .....

ಗೆಳೆಯರೆ,

ಅನೇಕ ಬಾರಿ ನಿಮ್ಮ ಬಳಸುವ ಕ್ರೆಡಿಟ್ ಕಾರ್ಡ್ ಇಲ್ಲಾ ಸಂಚಾರಿ ದೂರವಾಣಿ ತೊಂದರೆ ಆದರೆ ಮೊಡಲು ನೀವು ಸಂಪರ್ಕಿಸುವುದು ಅದರ ಗ್ರಾಹಕ ಸೇವೆಗೆ. ಗಮನಿಸಿ ನೋಡಿದರೆ ಎಲ್ಲಾ ಗ್ರಾಹಕ ಸೇವೆಗಳು ಸ್ವಾಭಾವಿಕವಾಗಿ ಹಿಂದಿ/ಇಂಗ್ಲೀಷ್ ನಲ್ಲಿ ಇರುತ್ತದೆ. ನಮ್ಮ ಅನೇಕ ಕನ್ನಡಿಗರು ಇಲ್ಲಿ ಕನ್ನಡ ಬಳಸುವುದೇ ಇಲ್ಲ, ಯಾಕೆ ಅಂತ ಕೇಳಿದರೆ ಅವರು ಇಂಗ್ಲೀಷ್ ನಲ್ಲಿ ಶುರು ಹಚ್ಚಿಕೊಂಡರು ಅಂತ ನೆವ ಕೊಡುತ್ತಾರೆ, ಇಲ್ಲಾ ನಾನು ಓದಿರುವ ನಾಗರಿಕ ಸುಮ್ಮನೆ ಯಾಕೆ ಅವರ ದೃಷ್ಟಿಯಲ್ಲಿ ಕೆಳಕ್ಕೆ ಹೋಗುವುದು ಎಂದು ಭಾವಿಸುತ್ತ್ತಾರೆ . ಇದಕ್ಕೆ ನೋಡಿ ನಮ್ಮ ಅನೇಕ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ.

ನಮ್ಮ ಅಂತರ್ಜಾಲದ ಅನೇಕ ಗೆಳೆಯರು ಇದರ ವಿರುದ್ಧ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದಾರೆ,ಆದರೆ ಇಂದು ಗ್ರಾಹಕ ಸೇವೆಗಳು ತುಂಬಾ ಇವೆ. ಸರಿ ಮಾಡಿದ್ದು ಒಂದಾದರೆ ಮಾಡಬೇಕಾಗಿರುವುದು ಸಾವಿರ. ಇತ್ತಿಚಿಗೆ ದೊಡ್ಡ ಮಟ್ಟದಲ್ಲಿ
ಸುದ್ದಿಗೆ ಬಂದ ವಿಷಯವೆಂದರೆ ಬ್ಯಾಂಕಿನ ಗ್ರಾಹಕ ಸೇವೆಯಲ್ಲಿ ಕನ್ನಡ ನಿರ್ಲಕ್ಷತನ. ಯಾವುದೇ ಬ್ಯಾಂಕಿಗೆ ಕರೆ ಮಾಡಿ ನೋಡಿ
ನಿಮಗೆ ಕನ್ನಡದಲ್ಲಿ ಮಾತನಾಡುವ ಬ್ಯಾಂಕಿಗ್ ಆಫಿಸರ್ ಸಿಗುವುದೇ ಇಲ್ಲ, ಸಿಕ್ಕ ಮೇಲೆ ನಾವೇ ಕರೆ ಮಾಡುತ್ತೆವೆ ಅಂತ ಬೊಗಳೆ ಬಿಡುವ ಈ ಬ್ಯಾಂಕ್‍ಗಳು ನಿಮಗೆ ಕರೆ ಮಾಡಿದರೆ ಕೇಳಿ ನೋಡಿ.
ಇದು ಒಂದು ಬ್ಯಾಂಕಿನ ಸಮಸ್ಯೆ ಅಲ್ಲ, ಎಲ್ಲಾ ಬ್ಯಾಂಕುಗಳ ಕಾಲಸೆಂಟರ್ ಇರುವುದು ಚನ್ನೈನಲ್ಲಿ, ಅಲ್ಲಿಯ ಜನರನ್ನು ಕೆಲಸಕ್ಕೆ
ತೆಗೆದುಕೊಂಡಿರುವ ಆ ಬ್ಯಾಂಕಿನವರು, ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಾದರು ಮಾತನಾಡಿ ಸಹಾಯ ಮಾಡುತ್ತೆವೆ ಅನ್ನುತ್ತಾರೆ. ಇದನ್ನು ಪ್ರತಿಭಟಿಸಿ ಅನೇಕ ಮಿತ್ರರು ಅವರ ಮುಖ್ಯಸ್ಥರಿಗೆ ಪತ್ರ ಬರೆದರೆ ಅವರಿಂದು ಬರುವ ಉತ್ತರ ಸುಮ್ಮನೆ ಕಣ್ಣು ಒರೆಸುವ ತಂತ್ರ, ನಾವು ಈ ವಿಷಯವನ್ನು ತತ್ಸಂಬದ ಅಧಿಕಾರಿಗಳಿಗೆ ರವಾನಿಸಿದ್ದೆವೆ,ಇಲ್ಲಾ ನಿಮ್ಮ ಸಂಖ್ಯೆ ಕೊಡಿ ಕರೆ ಮಾಡುತ್ತೆವೆ ಎನ್ನುತಾರೆ. ಅವರ ಕಛೇರಿಯಿಂದ ನೂರಾರು ಕರೆ ಬರುತ್ತದೆ,ಪ್ರತಿಯೊಬ್ಬರಿಗು ಕಥೆ ಹೇಳಬೇಕು, ಎನು ಕ್ರಮ ಕೈಗೊಳ್ಳುವಿರಿ, ಎನು ಗಡವು ಎಂದು ಕೇಳಿದರೆ ಉತ್ತರವಿಲ್ಲ. ನನಗೂ ಸಹ ಇಂತಹ ಮುಜುಗರ ಆಯಿತು, ಆದರೆ ಅವರ ಅಧಿಕಾರಿಗಳನ್ನು ಚೆನ್ನಾಗಿ ತರಾಟೆ ತೆಗೆದುಕೊಂಡು,ಸುಮ್ಮನೆ ಆಶ್ವಾಸನೆಗಳಿಗೆ ನಾನು ಬಗ್ಗುವದಿಲ್ಲ. ಎನು ಕ್ರಮ ಕೈಗೊಳ್ಳುವಿರಿ ಎಂದು ಮೈಲ್ ಕಳಿಸಿ, ಇಲ್ಲವಾದರೆ ಇದನ್ನು ನಿಮ್ಮ ಮುಖ್ಯ ಅಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ಹೇಳಿದಾಗ ಸ್ವಲ್ಪ ತಣ್ಣಗಾಗಿ ಹೇಳಿದ್ದು ಕೇಳುತ್ತಾರೆ. ಸ್ವಲ್ಪ ದಿನಗಳ ಹಿಂದೆ ಇದೇ ಅಧಿಕಾರಿಗಳು ಕನ್ನಡ ಸೇವೆ ನಾವೇನು ಕೊಡಬೇಕಾಗಿಲ್ಲ ಅಂತ ಹೇಳುತ್ತ ಇದ್ದರು. ಪುಣ್ಯಕ್ಕೆ ಯಾರೋ ಮಿತ್ರರು ಇದನ್ನು ಆರ್.ಬಿ.ಐ ಗಮನಕ್ಕೆ ತಂದು, ಅವರು ಇವರಿಗೆ ನಿರ್ದೇಶಿಸಿದ ಮೇಲೆ ಇವರಿಗೆ ತಮ್ಮ ಹೊಣೆ ಗೊತ್ತಾಗಿದೆ. ನನ್ನ ಸಹಾಯಕ್ಕೆ ಬಂದಿದ್ದು ಕೂಡ ಇದೇ ...

ನಮ್ಮ ಭಾಷೆಯಲ್ಲಿ ನಾವು ಮಾತನಾಡಲು ಅವರು ಸೌಕರ್ಯ ಕೊಡಬೇಕು,ಇದು ನಮ್ಮ ಹಕ್ಕು ಮತ್ತು ಅವರ ಹೊಣೆ.
ಅವರ ಕಾಲ್ ಸೆಂಟರ್ ಇಲ್ಲಿರಲಿ ಇಲ್ಲಾ ಜಪಾನ್ ನಲ್ಲಿ ಇರಲಿ, ಅದು ನಮಗೆ ಅನವಶ್ಯ. ಕರ್ನಾಟಕದಲ್ಲಿ ಅವರು ಕಾರ್ಯ ನಿರ್ವಹಿಸುತ್ತ ಇದ್ದರೆ ಅವರು ಕನ್ನಡ ಗ್ರಾಹಕ ಸೇವೆ ಕೋಡಲೆ ಬೇಕು.ಕೊಡದೆ ಇದ್ದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಇಲ್ಲಾ "DENIAL OF SERVICE" ಅಂತ ಜನರ ಗಮನಕ್ಕೆ ತನ್ನಿ.

ನನಗೆ ಸಹಾಯ ಮಾಡಿದ ಪತ್ರದ ಸಾರಂಶ ಇಲ್ಲಿದೆ.

~ICh.1 Mlen41~ cnT ChI(,U~q OFFICE OF THE BANKING OMBUDSMAN
( en ..•iGen) (KARNATAKA)
~~~Cf) ~ Reserve Bank of India Building~m'T1i~, 10/3/8, ~TT ~ 2nd Floor, 10/3/8, Nrupathunga Road,~ -560 001. -Bangalcre-· 560-001.---
tcffi : } 080-22244047
Fax :
22275020 ~ : } 22275629 .
Telephone: Extn. 441, 442, 443, 445 & 446 E-Mail:
bobangalore@rbLorg.in
OBO(BG)No -~ 41 ~ 01/04/001/2006-07 January 16, 2007
The Manager-Customer CareCitibankCardme ers Services
P.O x 4830 A a Salai P.Ohennai-600002
Dear Sir,
Transaction in Reaional Lanauaaes bv Private Sector/Foreian Banks ___ elease_Fefeeto~vourJettecl'io_00_3~9Q5-8_63LGDI\L8_0.6L2006 ,_
dated_~9yerTlbe.r:....a(jd r_es_s~_dto Shri C. K Raman, Bangalore on the captioned subject. In this connection, we invite a reference to Reserve Bank of India instructions vide Circulars DBOD.No.
Leg.BC.10/466(IV)-87 dated March 23,1987 and DBOD.No.Leg.BC.52/09.07.005/200506 to Private Sector/Foreign Banks. We advise you to implement the recommendations
made therein for the convenience of the customers and avoid restrictive practices. This is issued with the approval of the Hon'ble Banking Ombudsman.
Yours faithfully,
(Reeny Ajith)Secretary
EndtOBO(BG)No 3 L, U 01/04/001/2006-07 of dateCopy forwarded for information to Shri Vishwanath H.S, Philips Electronics India Ltd., #1, Murphy Road, Halasuru, Bangalore,-560008 with reference to his e-mail datedNovember 28,2006.
(~Secretary)