Showing posts with label kannada. Show all posts
Showing posts with label kannada. Show all posts

Sunday, February 23, 2014

ನ್ಯಾನೋ ಕತೆ

ಜಾಗತೀಕರಣ, ಉದಾರೀಕರಣ,  ಕಾಸಗಿಕರಣ  ಇವು ತ್ರಿಶುಲ ಇದ್ದ ಹಾಗೆ, ಬಡವರ, ಶೋಷಿತರನ್ನು ಹಿಂಸಿಸುತ್ತ ಇವೆ.
ಕನ್ನಡಕ್ಕೆ ಡಬ್ಬಿಂಗ ಬರಬೇಕು ಎನ್ನುವ ಜನರು ಬೇರೆ ಯಾರು ಅಲ್ಲ,  ಆ ಮೂರನ್ನು  ತ್ರಿಶುಲದಂತೆ ಇಟ್ಟುಕೊಂಡಿರುವ ಫಾರಿನ್ ಏಜೆಂಟ್  ಎಂದು  ಭಾಷಣ ಮುಗಿಸಿ ಕರಡತನ ಪಡೆದ ಮಹನೀಯರು ಆಚೆ ಬಂದು ೫೫೫ ಹಚ್ಚಿ ಹೋಗೆ  ಉಗುಳುತ್ತ ತಮ್ಮ ಬೆಂಜ್ ಹತ್ತಿ ಇನ್ನೊಂದು ವಿರಾವೇಶ ಬಾಶನಕ್ಕೆ ಹೋದರು.

Thursday, December 25, 2008

೨೦೦೮ ರ ನನ್ನ ಮೆಚ್ಚಿನ ಹಾಡುಗಳು

೨೦೦೮ರಲ್ಲಿ ನಾನು ೧೦ ಸಲಕ್ಕೂ ಕೇಳಿದ ಹಾಡುಗಳ ಪಟ್ಟಿ ಇಲ್ಲಿದೆ, ಇದರಲ್ಲಿ ನಂಬರ್ ೧, ೨ ಇಲ್ಲಾ. ನನ್ನ ಮೆಚ್ಚುಗೆ ಆದ ಹಾಡುಗಳ ಪಟ್ಟಿ ಇಲ್ಲಿದೆ ಅಷ್ಟೇ..

ಜೊತೆ ಜೊತೆಯಲಿ - ವಂಶಿ
ಆಗಲಿ ಸಂಗಮ- ಸಂಗಮ
ಒಂದೊಂದೆ ಬಚ್ಚಿಟ್ಟ ಮಾತು- ಇಂತಿ ನಿನ್ನ ಪ್ರೀತಿಯ
ನನ್ನುಸಿರು ಇರುವ-ನನ್ನುಸಿರು  
ಹಿಂಗ್ಯಾಕೆ ಹಿಂಗ್ಯಾಕೆ -ಪಟ್ರೆ ಲವ್ಸ ಪದ್ಮ
ಹೇ ಹುಡುಗಿ -- -ಪಟ್ರೆ ಲವ್ಸ ಪದ್ಮ
ಸೆರೆಯಾದೆನು- ಸತ್ಯ ಇನ್ ಲವ್
ಬಾ ಮಳೆಯೇ - ಆಕ್ಸಿಡೆಂಟ್
ಅರೆರೆ ಎನೊ ಆಗುತಿದೆ- ವೆಂಕಿ
ಸುಮ್ ಸುಮ್ನೆ ಯಾಕೊ - ಗೂಳಿ
ಮುಂಗಾರು ಮಳೆ ಬಿದ್ದು ಬಿದ್ದು- ಕಾಮಣ್ಣನ ಮಕ್ಕಳು
ಹುಚ್ಚ ಅನ್ನು - ದಿಮಾಕು
ಕಣ್ ಕಣ್ಣ ಸಲಿಗೆ- ನವಗ್ರಹ
ಮಳೆಯೇ ಮಳೆಯೇ- ಆತ್ಮೀಯ
ಐ ಲವ್ ಯೂ - ಮೊಗ್ಗಿನ ಮನಸ್ಸು
ತರ ತರ ಒಂದ್ ತರ - ಬಿಂದಾಸ್
ನಿನ್ನ ನೋಡಲೆಂತೊ - ಮುಸ್ಸಂಜೆ ಮಾತು
ಗುಬ್ಬಚ್ಚಿ ಗೂಡಿನಲ್ಲಿ - ಬಿಂದಾಸ್
ಕದ್ದಳು ಮನಸ್ಸನ್ನ -  ಮುಸ್ಸಂಜೆ ಮಾತು
ಮೊಡದ ಒಳಗೆ-ಪಯಣ
ನಿನ್ನ ಪೂಜೆಗೆ ಬಂದೆ ಮಾದೇಶ್ವರ- ಸೈಕೊ
ಮೊದಲ ಸಲ- ಅಂತೂ ಇಂತೂ ಪ್ರೀತಿ ಬಂತು
ಖುಷಿಯಾಗಿದೆ - ತಾಜ್ ಮಹಲ್
ಸಂಗಾತಿ- ಸಂಗಾತಿ
ಮಾತಿನಲ್ಲಿ  ಹೇಳಲಾರೆನು - ಬೊಂಬಾಟ್
ನನಗೂ ನಿನಗೂ - ಅರಮನೆ
ಮನಸ್ಸು ರಂಗಾಗಿದೆ - ಸ್ಲಂಬಾಲ
ಚಿತ್ರಾನ್ನ - ಬುದ್ದಿವಂತ
ಜಿಂಕೆ ಮರೀನಾ - ನಂದ ಲವ್ಸ ನಂದಿತಾ
ಪ್ರೀತಿ ಬಂದೈತೆ -ನಂದ ಲವ್ಸ ನಂದಿತಾ
ನನ್ನ ಚೆಲುವೆ- ಚೈತ್ರದ  ಚಂದ್ರಮ್ಮ
ಐತಲಕಡಿ- ಗಜ
ಚೋರಿ ಚೋರಿ- ಮಸ್ತ್ ಮಜಾ ಮಾಡಿ
ಯಾರೋ ಕಟ್ಟಿದ್ದು - ಮಾದೇಶ
ನನಗೂ  ಗೆಳೆಯ ಬೇಕು- ಮೊಗ್ಗಿನ ಮನಸ್ಸು
ಮಾಯವಾಗಿದೆ ಮನಸು - ಹಾಗೆ ಸುಮ್ಮನೆ
ಭುವನಂ ಗಗನಂ- ವಂಶಿ
ಕಣ್ಣಲ್ಲೇ ಗುಂಡಿಕ್ಕೆ - ಗಂಗೆ ಬಾರೆ ತುಂಗೆ ಬಾರೆ

Thursday, February 21, 2008

URBAN LADS LYRICS( ಅರ್ಬನ್ ಲಾಡ್ಸ್)

ಅರ್ಬನ್ ಲಾಡ್ಸ್ ಗುಂಪು ಕನ್ನಡಕ್ಕೆ ತುಂಬಾ ಒಳ್ಳೆಯ ಕಾಣಿಕೆ ಕೊಟ್ಟಿದೆ ... ಅವರ ಸಿ.ಡಿಯನ್ನು ಕೊಂಡ ದಿನದಿಂದ ಆ ಹಾಡುಗಳ ಸಾಹಿತ್ಯವನ್ನು ಬರೆಯೋಣ ಅನಿಸಿತ್ತು, ಅದಕ್ಕೆ ನನ್ಗೆ ಸಾಥ್ ಕೊಟ್ಟಿದ್ದು ನಮ್ಮ ಅಪ್ಪಿ. ಹಾಗೂ ಹೀಗೂ ಹತ್ತು-ಹಲವಾರು ಸಾರಿ ಕೇಳಿ ಹಾಡುಗಳ ಸಾಹಿತ್ಯವನ್ನು ಕಲೆ ಹಾಕಿದ್ದೇವೆ. ಇಷ್ಟು ಕಷ್ಟ ಪಟ್ಟ ನಂತರವೂ ಕೆಲವು ಪದಗಳು ನಮ್ಮ ಕಲ್ಪನೆಗೆ ನಿಲುಕಿಲ್ಲ ಅವುಗಳನ್ನು *** ಹಾಕಿದ್ದೆವೆ. ನಿಮಗೆ ಗೊತ್ತಿದ್ದರೆ ಇಲ್ಲಾ ಸಾಹಿತ್ಯದಲ್ಲಿ ತಪ್ಪಿದ್ದರೆ ತಿಳಿಸಿ, ಸರಿ ಪಡಿಸೋಣ. ಸಾಹಿತ್ಯವನ್ನು ಇಟ್ಟುಕೊಂಡು ಕೇಳುತ್ತ ಇದ್ದರೆ ಬಾಯಿಪಾಠ ಆಗುವದರಲ್ಲಿ ಸಂಶಯವೇ ಇಲ್ಲಾ .... ನಮ್ಮ ಆಶಯವು ಅದೇ ಅಲ್ವಾ ?

Friday, January 11, 2008

KANNADA KALI VIDOES

Dr. SWATHI



REVATHY

Saturday, July 07, 2007

ಕನ್ನಡದಲ್ಲಿ ಚಿಕ್ಕೊಲೆಗಳು-೨

ಕನ್ನಡದಲ್ಲಿ ಚಿಕ್ಕೊಲೆ(SMS) ಕಳಿಸುವ ಬಗ್ಗೆ ಅನೇಕರು ನನಗೆ ಮೈಲ್ ಮಾಡಿದ್ದರು, ಇನ್ನೂ ಹಾಕಿ ಎಂದು ಕೇಳಿದ್ದರು. ಬರಿ ನಾನು ಹಾಕುವುದು ಅಲ್ಲ, ನೀವು ಕೂಡ ಹಾಕಿ ಎಂದು ಕೇಳಿಕೊಳ್ಳುತ್ತ, ನಮ್ಮ ಚಿಕ್ಕೊಲೆಗಳನ್ನು ಮುಂದುವರೆಸುತ್ತ ಇದ್ದೇವೆ.


೨೧) TEEN

figure illandre college danda,
Sugar illandre coffee danda,
Love illandre life danda,
Moon illandre Sky danda
neenu illandre Mysuru Zoo dodda danda

22) O MU( olle munjavu)

Moodadinda mumbaagilinda
moodi mugilannu kemperisi
banaadigalannu badidebbisi
bhoomige belaku chelluva aa
baanina bhanuvu ninage
OMU korali.

23) O MU( olle munjavu)
surayana udayavaayithu baaninalli
hosadondu dina udayisithu baalinalli
ee dina hosa harushavannu nimage
tarali.

24) O MU( olle munjavu)

mungarugala mele hogiranavana soosi,
ibbaniyondige chellatavadi mutthina hanigala madi
chilipiliyannu ebbisi
incharava haadihanu "NESARA".

೨೫) chamak

devarige neeru kelide
samudranne kotta
hoovu kelide thotavanne kotta
mane keLide
mahal kotta
duddu kelide, nimma kotta
heLi yavaga barali ....


26) O_Mu
uri dhagege surimaleya
marubhumige vanasiriya
kambanigala ravikantiya
birida manakke savi nudiya
kadu shapakke shuba varada
aseya asareya udayakke ee
OMU

27) Chamak

guru bRUMha.
guru VISHKY
guru voDka
Gin eshawara
guru sakshat PEG brahma
tasmayi sri BEER namaha

aa devaru nimmanna TIGHT aagi ittirali.

28) geLetana

sneha ondu kavana
noorondu bhavanegala milana
badhukina janjatadalli besatt
mugda manassige
tampereyuva "AMRUTHA SINCHANA"

Saturday, June 30, 2007

ಕನ್ನಡದಲ್ಲಿ ಚಿಕ್ಕೊಲೆಗಳು ..

ಕೆಲ ವರುಷಗಳ ಹಿಂದಿನ ಮಾತು, ನಮ್ಮ ಕೇಂದ್ರ ಸರ್ಕಾರದಲ್ಲಿ ಬಿಹಾರಿಬಾಬು ಒಬ್ಬರು ಮಂತ್ರಿ ಆಗಿದ್ದರು, ಆಗು ಅವರು ಮೊಬೈಲ್ ಕ್ರಾಂತಿ ಆಗುವದಿಲ್ಲ, ಅದಕ್ಕೆ ಎಲ್ಲಾ ಕಡೆ ಸ್ಥ್ರಿರ ದೂರವಾಣಿ ಹಾಕಲು ಯೋಜನೆ ಹಾಕುತ್ತೆವೆ, ಈ ನಿಟ್ಟಿನಲ್ಲಿ **** ಮಂಜೂರು ಮಾಡಿದ್ದೇವೆ ಎಂದು ಸಾರಿದ್ದರು. ಇದು ಅವರ visionary(vision-scary ಎಂದು ಓದುವುದು)ಗೆ ಒಂದು ಉದಾ.
ಹೋಗಲಿ ಬಿಡಿ.. ಅದು his story .
ಐಲು ಐಲು ಎಲ್ಲೆಲ್ಲೂ ಮೊಬೈಲು ಅನ್ನುವ ಈ ಕಾಲದಲ್ಲಿ ಸಂಚಾರಿ ದೂರವಾಣಿ ಎಲ್ಲರ ಹತ್ತಿರವೂ ಇದೆ. ಇದರಲ್ಲಿ ಕನ್ನಡದಲ್ಲಿ ಚಿಕ್ಕೋಲೆಗಳು(SMS) ಈ ನಡುವೆ ಬಹಳ ಹರಿದಾಡುತ್ತಿವೆ. ಅನೇಕ spoof ಸಂದೇಶಗಳೂ, ಹಬ್ಬ ಹರಿದಿನಗಳಿಗೆ ಶುಭಾಶಯಗಳು ಕನ್ನಡದಲ್ಲೇ ವಿನಿಮಯ ಆಗುತ್ತ ಇರುವುದು ಸಂತೋಷದ ವಿಷಯವೇ ಸರಿ. ಆದರೆ ಬೇಕು ಎಂದಾಗ ಸಿಗದೆ,ಎನು ಕಳಿಸುವುದು ಎಂದು ಪರಿದಾಡುತ್ತ ಇರಬೇಕಾದರೆ , ಗೂಗಲ್ ಮೊರೆ ಹೋಗುತ್ತೆವೆ. ಅದಕ್ಕೆ ಒಂದು ತಾಣದಲ್ಲಿ ನನಗೆ ಬಂದ, ನಾನು ನಿರ್ಮಿಸಿದ ಕೆಲವು ಚಿಕ್ಕೊಲೆಗಳನ್ನು ಇಲ್ಲಿ ಹಾಕುತ್ತ ಇದ್ದೆನೆ. ನಿಮಗೂ ಹೊಸತು ಬಂದರೆ ಇಲ್ಲಿ ಹಾಕಿ, ಇಲ್ಲಾ ಇಲ್ಲಿಂದ ತೆಗೆದುಕೊಳ್ಳಿ.
ಹರಿದಾಡೊ ಚಿಕ್ಕೊಲೆಗಳಿಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಡ ಅಲ್ಲವೇ??

ಸೂಚನೆ:- ಹೊಸ ಚಿಕ್ಕೊಲೆ ಹಾಕಬೇಕಾದರೆ ದಯವಿಟ್ಟು ೧೬೦ ಅಕ್ಷರಗಳಿಗೆ ಸೀಮಿತವಿರಲಿ

೧)
MISS YOU
hoovina suvaasane
kadiyalaaguvadilla,
suryana rashmiyannu
bachchidalaguvadilla,
nim anta geLeyarannu
yeshte doora hodaru mareyalaguvadilla


2)
MISS YOU
kaledu hoda ninnegala
nenapu kadive,
kela kshanagalu
matte mana thumbive,
aa sundara sanjegalu
mattomme baarade anisive.

3)
DOVE
nanna naguvu ninnalli
heluttide,
nanna daniyu ninna kareyuttide,
nanna kannugalu ninna aarasuttive
yekendare ni nanna atimyalendu.

4)
shubodaya
harisuvarannu preethisu
hamchikolluvarannu harisu
aptarondane hanchiko
ninna aptaryarendu gurutisu.

5)
Chamak

lei japper,
goobad,
dingri,
dabba,
totti,
guggu,
pekra,
gooslu,
kuyya,
waste nan magne
...... hige yarannu baibeda maga, avarige bejar agotte.

6)
Chamak

innamele msg madabeda
call anthu madlebeda,
sakaagide ninna sneha,
kshamisu, bejaar madidre
yelladru chennagiru



idu yav film dialogue antha helthiyya ??

7)
Friendship

snehavendare hegirabeku?
ada noDi jagave beragagabeku,
srushtisida shivane dhangaagi
namma bali bandu kelabeku
" naanu nimma snehitanaabeku".

8)
Hudgire kaaL

roopa viroopa
kuroopa yella
manavara vividha swaroopa
ninna roopakke saati ninnade
roopa, varnisalaguttilla ee kavigu paapa.

9)
Chamak

ningondu toristinni iru








nodaaytaa??
kusinaa?
naale "erdu" toristhinni.. OK

10)
beLigge

moDa kavidu
tunturu hani
biLutiralu
manakke muda niduva
tangaLiyalli nanna kiru sandeshaa
ninagaagi.


11)
Encouragement

musukirali
nasukirali
mogadondu naguvirali
sukhavirali
dukkavirali
manadondu
nambikeyirali
solirali
geluvirali
manadalli
chalavirali

12)
Sneha

apaswaragale tumbida badukalli
sumudara sangeetha sudheyannu
suridu, sotha manassu santhaisuva amruta
sinchanave ninna
"SNEHAA".

13)
Chamak

yaake ashokasthambadalli 4ne siMha
kaaNolla ..

heLu nodonaa ....
thumba sulubaa ... innomme prayatna maDu.

gottaglilvaa.... bahala simple
adakke publicity ishta agolla, nan taraa..

14)
Chamak

maathu beLLi
sms bangara
call danda
sms bramhanda
call madonu kuri
sms madonu jaaNamari

15)
KannaDa

dwani nooraagi
mardhani beretu
mugila mutti,
chaitnyavada swati muttu keLagiLidu,
jeevakke bhava seri
swaravaagali namma cheluva
kannada naadu.

16)
Sankranti wish

uttarakke mukha maadi surya
horaduva samaya sankranti.
suggi sambrahmadalli naliva
samaya nimge mattu nimma necchina
janakke sukha shanti tarali.
sankranti shubashayagalu

17) Preethi(DOVE)

ninnoluvu nannusiru
ninna nenapu nanage hasiru
snehada thotadalli
hasiremba usirirali
nanna ee preethi yendendu
ninagirali

18) shubadina

nitya vasanta
satya digantha
atishaya allavidu
shanta prashantha
ee belugu ee sobagu
prakrutiya hoo nagu
tarali shuba munjaavu.

19) Encouragement

kanasugalella nanasagabekagilla
nanasaguva kanase kana bekilla
nanasaguvudella kanasadare
kanasige arthavilla.
hagantha kanasa kansuvada bidabekilla.


20)
Ugaadi

hosa varusha
tarali hosa harusha
bevu bellagalu
sihi-kahigalu samavaagi
anubavisuva shakti
nimage barali
UGADI HABBADA SHUBASHAYAGALU.

21)
Ugadi
hosa dina
hosa chiguru
hosa kanasu
hosa jeevana
yella hosatanavannu matte
tarali ee UGADI.
UGADI HABBADA SHUBASHAYAGALU.

(ಮುಂದುವರೆಯುತ್ತದೆ)...

Saturday, June 09, 2007

ನೈತಿಕತೆಯನ್ನು ಮರೆತಿರುವ ನಮ್ಮ ಕಂಗ್ಲೀಷ್ ಶಾಲೆಗಳು.


ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೇ. ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ
ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ
ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು
ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ,
ದುಡ್ದು ಕೊಟ್ಟರೆ stayfreee ಕೂಡ ಹಾಕಿಕೊಳ್ಳುವದಕ್ಕೆ ಹಿಂಜರಿಯದ ಒಂದು ವರ್ಗ ಕೂಡ ಇದೆ, ಇವರನ್ನು stayfree ವರ್ಗ ಎಂದೇ ಕರೆಯೋಣ. ರಾಜಕರಣೀಗಳು,
ಸಾಹಿತಿಗಳು ಮತ್ತು ಪತ್ರಕರ್ತರ ಇರುವ ಈ ದಂಡು, ವ್ಯವಸ್ತಿತವಾಗಿ ವಿಷಯವನ್ನು ಮೇಲ್ವರ್ಗ-ಕೀಳ್ವರ್ಗ, ಐ.ಟಿ-ಬಿ.ಟಿಯ ಒಂದು ಟಚ್ ಕೊಟ್ತ್ತು
ಮುಖ್ಯ ವಂಚನೆಯನ್ನು ಮರೆಮಾಚುವ ಕೆಲ್ಸಕ್ಕೆ ಸಂಪೂರ್ಣ ಸಾಥ್ ಕೊಡುತ್ತವೆ.
ಮುಖ್ಯ ವಂಚನೆ ಎಂದರೇನು ??
ಈ ಶಾಲೆಗಳು ಸರಕಾರಕ್ಕೇ ಅನೇಕ ವರ್ಶಗಳಿಂದ ಕನ್ನಡ ಮಾಧ್ಯಮಗಳಲ್ಲಿ ಭೊಧನೆ ಮಾಡುತ್ತವೆ ಎಂದು ಮೋಸ ಮಾಡಿ,
ಇಲ್ಲಿ ಅಮಾಯಕ ಜನರಿಗೆ ನಮ್ಮ ಹತ್ತಿರ ಮಾನ್ಯತೆ ಇದೆ, ನಾವು ಪಾಠ ಮಾಡುವದೆಲ್ಲಾ ಸರಕಾರ ಪಠ್ಯಕ್ರಮ ಎಂದು ಬೂಸಿ ಬಿಟ್ಟು,
ಈ ಫೀಸು, ಆ ಫೀಸು, ಬಿಲ್ಡಂಗ್ ಡೊನೆಷನ್ ಎಂದು ಲೂಟಿ ಮಾಡುತ್ತ ಇರುವುದು ನಮ್ಮ stayfree ವರ್ಗಕ್ಕೆ ತಿಳಿದದೇ ಇರುವುದು ಮತ್ತು
ತಿಳಿದರೂ ಗೊತ್ತಿಲ್ಲದೇ ಇರುವುದು ಜಾಣಕುರುಡೇ ಸರಿ.
ತಮ್ಮ ಅಕ್ರಮಗಳು ಯಾವಾಗ ಬೆಳಕಿಗೆ ಬಂದವೋ ಆಗ ವಿಷಯವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತ ಬಂದಿದೆ, ಕಾಲಹರಣ ಮಾಡಲು
ಕೋರ್ಟಿಗೆ ಹೋಗಿ ಅವರ ಕೈನಲ್ಲೂ ಚಿಮಾರಿ ಹಾಕಿಸಿಕೊಂಡಿರುವ ಈ ಶಾಲೆಗಳು , ತಮ್ಮ ಕ್ರಮಕ್ಕೆ ಪೋಷಕರೇ ಕಾರಣ ಎಂದು ಗೂಬೆಯನ್ನು
ಅವರ ಮೇಲೆ ಕೂರಿಸುವ ಮತ್ತು ಅವರ ಕೈನಲ್ಲಿ ಪ್ರತಿಭಟನೆ ಮಾಡಿಸುವ ಚಿಲ್ಲರೆ ರಾಜಕರಣ ಮಾಡುತ್ತಿವೆ. ಇವರು ಕಳ್ಳ ಕೆಲಸವನ್ನು ಮಾಡಲು ಹೋರಟಾಗ
ಯಾವ ಪೋಷಕರು ಒತ್ತಾಯ ಮಾಡಿದ್ದರು ಎಂದು ಹೇಳಲಿ ನೋಡೊಣ. ಜನರನ್ನು ಲೂಟಿ ಮಾಡಿ ಡೊನೆಷನ್ ತೆಗೆದುಕೊಳ್ಳುವದನ್ನು ಯಾವ ಪೊಷಕರು
ಹೇಳಿಕೊಟ್ಟರೋ ನಾ ಕಾಣೆ. ಅದೇ ಪೋಷಕರು ನಾಳೇ ಡೊನೆಷನ್ ಇಲ್ಲದೇ ನಡೆಸುತ್ತಾರ ಎನ್ನುವುದು ಯಕ್ಷಪ್ರಶ್ನೆ.
ಒಂದು ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವುದು ಯಾಕೆ, ಮುಂದೆ ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆ ಆಗುತ್ತಾರೆ, ಒಂದು ಒಳ್ಳೆಯ
ಮಾನವೀಯ ಮೌಲ್ಯಗಳನ್ನು ಅಭ್ಯಸಿಸುತ್ತಾರೆ ಎನ್ನುವ ಒಂದು ನಂಬಿಕೆ ಮೇಲೆ. ಆದರೆ ಇಲ್ಲಿ ನೋಡಿ ವೈಚಿತ್ರ್ಯ, ಶಾಲೆಯ ಆಡಳಿತವನ್ನು ನೋಡಿ ಮಕ್ಕಳು
ಕಲಿಯುವುದೇ ಬೇರೆ
೧) ಸರಕಾರಕ್ಕೆ ಸುಲಭವಾಗಿ ವಂಚನೆ ಮಾಡಬಹುದು
೨) ದುಡ್ದಿದ್ದರೆ ಸಾಕು, stayfree ವರ್ಗ ನಮ್ಮ ತೆಕ್ಕೆಯಲ್ಲಿ ..
೩) ಯಾವುದಕ್ಕೋ ಪರವಾನಿಗೆ ಪಡೆದು , ಇನ್ಯಾವುದೋ ಕೆಲ್ಸ ಮಾಡುವುದು.
ಉಧಾ:- ನಾಳೆ ಶಿವಕಾಶಿಯಲ್ಲಿ ಪಟಾಕಿ ಮಾಡಲು ಪರವಾನಿಗೆ ಪಡೆದು, ಬಾಂಬ್ ಮಾಡಲು ಹೋರಟರೆ ಅದನ್ನು ನಾವು ಸಮರ್ಥನೆ ಮಾಡಬೇಕೆ ??
ಆವಗಲೂ ಕೂಡ ಈ ನಮ್ಮ stayfree ವರ್ಗ ಪಾಪ ತುಂಬಾ ಮಕ್ಕಳ ಭವಿಷ್ಯವಿದೆ ಎಂದು ಸಾಮಾಜಿಕ ಕಳಕಳಿ ತೋರುವುದೇ ??. ಇದು ಬಡವರ ಮೇಲೆ ಮಾಡುತ್ತಿರುವ
ಧಬ್ಬಾಳಿಕೆ ಎಂದು ಬೊಬ್ಬೆ ಹೊಡೆಯುವುದೇ? .
ಅಷ್ತು ಮಕ್ಕಳ ಬಗ್ಗೆ ಕಳಕಳಿ ಇರುವ stayfree ವರ್ಗ ಓದುವ ವಯಸ್ಸಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರ ಬಗ್ಗೆ ದನಿ ಎತ್ತಲ್ಲಿ. ಅವರನ್ನು ಪಾಪಕೂಪದಿಂದ ಬಿಡುಗಡೆಗೊಳಿಸಿ
ಶಾಲೆಗೆ ಸೇರಿಸಲಿ , ಅದನ್ನು ಬಿಟ್ಟು ದುಡ್ದಿಗೆ ಜೋತು ಬಿದ್ದು ನಂದೆಲ್ಲಿ ಇಡಲಿ ನಾರಾಯಣ ಮೂರ್ತಿ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವುದು. ಅಕ್ರಮವನ್ನು ಸಕ್ರಮ ಮಾಡಲು
ಹೋಗುವುದು ಅವರಿಗೆ ಸರಿ ಕಾಣುವದಿಲ್ಲ. ಸ್ವಲ್ಪ ಸಾಮಾಜಿಕ ಖಳ-ಖಳಿ ತೋರುವ ಬದಲು, ಸಾಮಾಜಿಕ ಬದ್ಧತೆ ತೋರಿಸಲಿ ಸಾಕು.

Sunday, June 03, 2007

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..


ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ ಗಮನಿಸ ಬೇಕಾದ
ಅಂಶಗಳು ಬಹಳ ಇವೆ. ಇದನ್ನು ನಿರ್ದೇಶಕ ನರೇಂದ್ರ ಬಾಬು ಚೆನ್ನಾಗಿ ಕೊಟ್ಟಿದ್ದಾರೆ ಅಂದರೆ ತಪ್ಪಾಗಲಾರದು.

ಇಂದು ನಾವು ಸರ್ವಸಾಮನ್ಯವಾಗಿ ಹೇಳುತ್ತಿರುವ ಪರಭಾಷಿಕರ ಆಕ್ರಮಣ ಮತ್ತು ಅವರು ಮಾಡುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ
ಬೇರೆ ಬೇರೆಯಾಗಿ ತೋರಿಸಿದ್ದಾರೆ.

೧) ೪೦ ವರುಷಗಳಿಂದಲೂ ಇಲ್ಲೇ ಇದ್ದು, ಕನ್ನಡ ಬಾರದ ತಮಿಳಿಗ, ತಮಿಳಿಗ ತಾನು ಮುಖ್ಯವಾಹಿನಿಗೆ ಸೇರದೇ ಇರಲು ಇಲ್ಲಿನ
ಜನಗಳೇ ಕಾರಣ, ನನ್ನ ಜೊತೆ ಕನ್ನಡದಲ್ಲಿ ವ್ಯವಹರಿಸದೇ , ಕನ್ನಡವಿಲ್ಲದೇ ವ್ಯಾಪರ ಮಾಡಲು ಆಗುವದಿಲ್ಲ ಎಂದು ತಿಳಿ ಹೇಳದೇ
ನನ್ನ ಭಾಷೆಯಲ್ಲೇ ವ್ಯವಹರಿಸಿ, ತನಗೆ ಕನ್ನಡದ ಅವಶ್ಯಕತೆ ಇದೆ ಅಂದರೂ ಜನ ಆಸ್ಪದ ಕೊಡದಿರುವ ವಿಷಯ ಇಂದಿನ ಸಮಾಜದಲ್ಲಿ
ಬಹಳ ಪ್ರಸ್ತುತವಾಗಿ ಕಾಣುತ್ತದೆ. ಹಾಗೇಯೆ ಮುಖ್ಯವಾಹಿನಿಗೆ ಸೇರುವ ಅವರ ಚಿಕ್ಕ ಪುಟ್ಟ ಪ್ರಯತ್ನಗಳಿಗೆ ನಾವು ಸಹಾಯ ಮಾಡದೇ
"ಅಣ್ಣಾ..ಕನ್ನಡ ಕೊಲ್ಲಬೇಡ" ನಾವೇ ನಿನ್ನ ಭಾಷೆಯಲ್ಲಿ ಮಾತನಾಡುತ್ತೆವೆ ಎಂದು ಹೇಳುವ ನಮ್ಮ ಕನ್ನಡಿಗರ ಉದಾರತೆಯ ಮುಖವನ್ನು ತೋರಿಸಿಕೊಡುತ್ತದೆ.
ಇದಕ್ಕೆ ಲಕ್ಷೀ(ಪ್ರೇಮ್) ಪಾತ್ರ ಸರಿಯಾಗಿ ಉತ್ತರ ಕೊಟ್ಟು ಅವರು ಇಲ್ಲಿಯವರೇ, ಇದೇ ಮನೋಭಾವ ಪ್ರತಿಯೊಬ್ಬ ವಲಸಿಗನ ಮನದಲ್ಲಿ ಮೂಡಬೇಕು ಎಂಬ
ಸಂದೇಶ ಕೊಡುತ್ತದೆ. ಹಾಗೇಯೆ ನಮ್ಮ ಉದಾರತೆಯ ದುಷ್ಪರಿಣಾಮದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

೨) ಕರ್ನಾಟಕದಲ್ಲಿ ಭೂ- ಮಾಫಿಯಾಕ್ಕೆ ಆಂದ್ರದಿಂದ ಬಂದು ಇಲ್ಲಿ ತಮ್ಮ ಧನ-ಬಾಹು ಬಲಗಳಿಂದ ನಮ್ಮ ಅಮಾಯಕರನ್ನು ಬೆದರಿಸಿ,
ತಮ್ಮ ದೌರ್ಜನ್ಯವನ್ನು ಮೆರೆಯುತ್ತಿರುವ ಜನಕ್ಕೆ ನಾವು ತಲೆ ಬಾಗಿದರೆ,ಅವರು ನಮ್ಮನ್ನು ಒಂದು ದಿನ ಬೀದಿಗೆ ನಿಲ್ಲುಸುತ್ತಾರೆ ಎಂದು
ಮಾರ್ಮಿಕವಾಗಿ ಹೇಳುತ್ತಾರೆ. ಆಂಧ್ರದ ಈ ಭೂ-ಮಾಫಿಯ ಜನ ತಾವು ಕೆಳಮಟ್ಟಕ್ಕೆ ಆದರೂ ಇಳಿಯಲು ಹಿಂಜರಿಯುವದಿಲ್ಲ,ಆದರೆ
ಗೌರವಕ್ಕೆ ಮಣೆ ಹಾಕುವ ನಾವು ಕನ್ನಡಿಗರ ಪಾತ್ರವನ್ನು ಮಂಗಳೂರಿನ ಲಕ್ಶ್ಮೀ ಗೆಳಯನ ಮೂಲಕ ಆವರಣ ಮಾಡಿದ್ದಾರೆ. ಇವರಿಗೆ ಒಳ್ಳೆಯ ಮಾತಿನಲ್ಲಿ
ಹೇಳಿದರೆ, ಕನ್ನಡ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಬಿಡು ಎಂಬ ಕೆಟ್ಟ ದೃಷ್ತಿಯಲ್ಲಿ ಹೇಳಲು ಹಿಂಜರಿದ ಆ ಜನಕ್ಕೆ ಒದ್ದ್ದೇ ಬುದ್ಧಿ ಹೇಳಬೇಕು ಎಂಬುದು
ನಿರ್ದೇಶಕರ ಅಂಬೋಣ. ಬಲವಂತವಾಗಿ ಮತ್ತು ಅವ್ಯವತವಾಗಿ ತೆಲುಗನ್ನು ನಮ್ಮ ಮೇಲೆ ಹೇರುವುದು ಕೂಡ ಇದೇ ಜನ ಎಂದು ಬಿಡಿಸಿ ಹೇಳಿದ್ದಾರೆ.

೩) ಕನ್ನಡ ಕೆಲಸ ಅಂದರೆ ಕೇವಲ ರಾಜ್ಯೋತವ ಆಚರಿಸಿ, ಅಮ್ಮ-ಕನ್ನಡಮ್ಮ ಎಂದು ಹಾಡುವುದು ಮಾತ್ರವಲ್ಲ ಕನ್ನಡಿಗರು ಉದ್ಯಮಶೀಲರಾಗಬೇಕು
ಎಂದು ಮಧ್ಯಂತರ ಭಾಗದಲ್ಲಿ ಸಂದೇಶ ಸಾರಿದ್ದಾರೆ. ಉದ್ಯಮಶೀಲರಾಗಿ ಪರರಾಜ್ಯದವರ ಕೈನಲ್ಲಿ ಇರುವ ವ್ಯವಹಾರವನ್ನು ಚತುರತೆ ಇಂದ ಪಡೆಯಬೇಕೆಂಬ
ವಿಷಯವು ನಿರ್ದೇಶಕರ ಬಗ್ಗೆ ಒಳ್ಳೆಯ ಮೆಚ್ಚುಗೆ ಮೂಡುತ್ತದೆ.

Sunday, May 13, 2007

ನಿರೀಕ್ಷೆ ..(ಕವಿತೆ)


ಪೀಠಿಕೆ:- ಕೆಲ ದಿನಗಳ ಹಿಂದೆ ನನ್ನ ಹಳೇ ಗೆಳೆಯರು,ನಾನು ೨೦೦೪ ಇಸವಿಯಲ್ಲಿ ಬರೆದ ಕವಿತೆವನ್ನು ಜ್ಞಾಪಿಸಿಕೊಂಡು,ಕಳುಹಿಸಿ ಕೊಡಿ ಎಂದು ಹೇಳಿದರು. ನನಗೆ ಕಿಂಚಿತ್ತೂ ಕ್ಲೂ ಇರಲಿಲ್ಲ, ಯಾವುದರ ಬಗ್ಗೆ ಹೇಳುತ್ತ ಇದ್ದಾರೆ ಅಂತ. ಕೊನೆಗೂ ಅದನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿ, ಆ ದಿನಗಳಲ್ಲಿ ನಾನು ಕವಿತೆ ಹಾಕುತ್ತಿದ್ದ ತಾಣದಿಂದ,ಹೆಕ್ಕಿ ಇಲ್ಲಿ ಹಾಕುತ್ತ ಇರುವೆ. ಇದು ಶಬರಿಯ ಹಾಗೇ ಕಾಯುತ್ತಿರುವ ನನ್ನ ಗೆಳತಿಗೆ ....



ಮರಳಿ ಬರುವೆನೆಂದು ಹೇಳಿ ಹೊದೆಯೆಲ್ಲ ನಲ್ಲ,

ಬಾರಿ ಬಾರಿ ಬೀಸಿ, ರೋಸಿ ಹೋಯಿತು ಗಾಳಿ,

ನೀನು ಇಲ್ಲ, ನಿನ್ನ ನೆರಳು ಇಲ್ಲ.


ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ,

ಬಾಗಿಲಿಗೆ ಬಂದು, ಗೋಡೆಗೆ ಒರಗಿ ನಿಂತು,

ಹಾದು ಹೋಗುತ್ತಿದ್ದ ಜನಗಳ ನಡುವೆ ಹುಡುಕುತ್ತಿದ್ದೆ,

ನಿನ್ನ ಮುಖ ಎಲ್ಲಿ.


ಅತ್ತು,ಅತ್ತು ಕಣ್ಣಾಳಿಗಳು ಕೆಂಪಾಗಿ,

ಬಿರುಸಾಗಿ ಹೊಯ್ದ ಮಳೆಗಳಲ್ಲಿ, ಅಡಗಿಸಿತ್ತೆ ನಾ ಕಂಬನಿಗಳ,
ಬರಲಿಲ್ಲ ಕೊನೆಗೂ ನೀನು ಕರಗಿ.


ನಿನ್ನ ಮುಖವನ್ನು ಒಮ್ಮೆ ನೋಡಲು,

ನಿನ್ನ ಧ್ವನಿಯ ಒಮ್ಮೆ ಆಲಿಸಲು,

ಕಾದು ಕುಳಿತಿರುವೆ ನಾ,

ನೋಡುತ್ತಾ ಮುಳುಗುತ್ತಿರುವ ಹಗಲು.

Sunday, May 06, 2007

ಅದು ಹೇಗೆ ಗಾಂಚಲಿ ಆಗುತ್ತದೆ..... !!!

ರೇಖಾ ಬಗ್ಗೆ ಬರೆದು ನಾನು ಅವಳು ಕನ್ನಡದಲ್ಲಿ ಮಾತನಾಡಲಿಲ್ಲ ಅಂತ ಅದನ್ನು ಗಾಂಚಲಿ ಅಂದು ಬರೆದಿದ್ದೇನೋ ಸರಿ, ಆದರೆ ಸ್ವಲ್ಪ ಯೋಚಿಸಿದಾಗ ಕನ್ನಡ ಮುಕುಟ ಮಣಿಗಳು ಎಂದು ನಾವು ಕರೆಯುವ ಅನೇಕ ಕನ್ನಡ ಕವಿಗಳ ಮಾತುಗಳಲ್ಲಿ ೫೦% ಆಂಗ್ಲ ಇರುತ್ತಿದ್ದವು. ಅದರಲ್ಲೂ ಆ ಕವಿವೃಂದ ಬೇಟಿ ಮಾಡಿದರೆ ಅವರ ಮಾತುಗಳೆಲ್ಲಾ ಹೆಚ್ಚಾಗಿ ಆಂಗ್ಲದಲ್ಲಿ ಇದ್ದವು. ಅಷ್ಟಕ್ಕೆ ಏಕೆ, ಅವರ ಮನೆಯಲ್ಲಿ ತಮ್ಮ ಮಕ್ಕಳ ಜೊತೆ, ಇಲ್ಲ್ಲಾ ಇನ್ನೊಬ್ಬ ಕವಿಗಳ ಜೊತೆ ವ್ಯವಹರಿಸೊಕ್ಕೆ ಬರೀ ಇಂಗ್ಲೀಷ್ ಬಳಸಿದ್ದು ಸುಳ್ಳು ಅಲ್ಲ. ಹಾಗೇ ಅಂತ ಅವರಿಗೂ ಗಾಂಚಲಿ ಅಂತ ಕರೆಯಬಹುದೇ ???.

ಎಲ್.ಎಸ್.ಶೇಷಗಿರಿರಾಯರು ಇದನ್ನು ಚೆನ್ನಾಗಿ ಹೇಳಿದ್ದಾರೆ, ಅವರಿಗೆ ಹೃದಾಯಘಾತವಾದಾಗ , ಹೇಗಿದ್ದಿರಿ ಅಂದಾಗ
ಚೆನ್ನಾಗಿದ್ದೇನೆ ಅಂತ ಕನ್ನಡದಲ್ಲಿ ಅನ್ನುವ ಬದಲು ಆಂಗ್ಲದಲ್ಲಿ ಉತ್ತರಿಸಿದರು. ಇದು ಯಾಕೆ ಅಂದರೂ ಅಂತ ಅವರಿಗೂ ಗೊತ್ತಿಲ್ಲ,ಅವರ ಸುಪ್ತ ಆಂಗ್ಲಕರಣವಾಗಿರಬಹುದು. ಇದನ್ನೇ ಮುಂದುವರೆಸುತ್ತ ರೇಖ ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ವಾದಿಸಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವಿದೆ.

೧) ಮನದಾಳವನ್ನು ಕನ್ನಡದಲ್ಲಿ ಹೇಳಲು ಆಗುವದಿಲ್ಲ ಎಂದು ನಮ್ಮ ಹಿರಿಯರು ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ತೋರಿಸಿಕೊಟ್ಟರೆ ಅದು ಸಮಾಜದ ಮೇಲೆ ಬಹಳ ದುಷ್ಪರೀಣಾಮ ಬೀರುತ್ತದೆ. ಅಷ್ಟು ಕನ್ನಡ ಸೇವೆ ಮಾಡಿ, ಅಷ್ಟು ತಿಳಿದುಕೊಂಡ ಜ್ಞಾನಿಗಳೇ ಇಂಗ್ಲೀಷ್ ಬಳಸಿರಬೇಕಾದರೆ ನಾವು ಮಾಡಿದರೆ ತಪ್ಪೇನು ಎಂದು ಉದಾಸೀನ ನಮ್ಮ ಸಮಾಜದಲ್ಲಿ ಮೂಡುತ್ತದೆ.

೨) ಪ್ರತಿ ಜನರಿಗೆ ತಾನು ಹೇಳುವ ವಿಚಾರ ಬೇರೆಯವರಿಗೆ ಅರ್ಥ ಆಗಬೇಕು ಎಂಬ ಚಟ ಇರುತ್ತದೆ, ಇದಕ್ಕೆ ಎನು ಬೇಕಾದರೂ ಮಾಡಬೇಕೆಂಬ ಛಲ ಮೂಡಿ, ತಾವು ಹೇಳುವ ವಿಷಯವನ್ನು ಆಂಗ್ಲದಲ್ಲಿ ಹೇಳಲು ಹೋಗುತ್ತಾರೆ. ಇದಕ್ಕೆ ನಮ್ಮ ಹಿಂದಿನ ಕವಿಗಳು ಕೊಡುವ ನೆವ ಅಂದರೆ, ಆಂಗ್ಲ ಭಾಷೆ "Langauge of Phrases", ಬಹಳ ಚೆನ್ನಾಗಿ ಹೇಳಬಹುದು, ಕನ್ನಡದಲ್ಲಿ ಅದು ಸಾಧ್ಯವಿಲ್ಲ ಎಂದು. ಅದ್ದರಿಂದ ಗಮನಿಸಿ ನೋಡಿ ಆ ಶತಮಾನದವರೂ ಇವತ್ತಿಗೂ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಹೇಳಿದ್ದರೂ ಕೂಡ ಅದನ್ನೇ flowery English ನಲ್ಲಿ ಹೇಳಿ ನಾನು ಹೇಳಿದ್ದರ ಅರ್ಥ ಇದು ಎಂದು ಮನವರಿಕೆ ಮಾಡಿಕೊಡುತ್ತಾರೆ.

೩) ಇನ್ನೂ ಕೆಲವರು ತಾನು ಬುದ್ಧಿವಂತ, ಓದಿದವನು ಎಂದು ಬೇರೆಯವರಿಗೆ ತಿಳಿಯಲು ಇಂಗ್ಲೀಷ್ ಬಳಸುತ್ತಾರೆ. ಕನ್ನಡದಲ್ಲಿ ಹೇಳಿದ್ದರೆ ತನ್ನನ್ನು ಹಳ್ಳಿಗುಗ್ಗು ಎಂದು ಎಲ್ಲಿ ಅಂದು ಕೊಳ್ಳುತ್ತಾರೆ ಎಂಬ ಭಯ ಮೂಡಿ ಕಷ್ಟ ಪಟ್ಟಿ ಆದರೂ ಬಳಸುತ್ತಾರೆ. ನಮ್ಮ ದೌರ್ಭಾಗ್ಯವೆಂದರೆ ಇವರೇ ಹೆಚ್ಚು ಇರುವುದು, ಇವರಿಗೆ ಮೇಲೆ ಹೇಳಿದವರು ದಾರಿ ತಪ್ಪಿಸಿದರೆ, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಗುತ್ತದೆ. ಇದನ್ನೇ ರೇಖಾ ಮಾಡಿದ್ದು, ಅವಳನ್ನು ಅನುಸರಿಸುವ ಯುವ ಪಡೆಗೆ ತಪ್ಪು ವಿಷಯ ರವಾನಿಸದ ಹಾಗೆ ಆಗುತ್ತದೆ.
ಅದಕ್ಕೆ ನಾನು ಅದನ್ನು ಗಾಂಚಲಿ ಅಂತ ಹೇಳಿದ್ದು,

ಕನ್ನಡವೆಂದರೆ ಕೇವಲ ಪದ್ಯ-ಗದ್ಯ ಬರೆದು ಜ್ಞಾನಪೀಠ ಪಡೆಯುವ ಭಾಷೆ ಅಲ್ಲ, ನಮ್ಮ ದೈನಿಂದಿನದ ಭಾಷೆ. ಇದರಲ್ಲಿ ಆಗದೇ ಇರುವುದು ಎನು ಇಲ್ಲಾ ಅಂತ ನಮ್ಮ ಸಮಾಜದ ಮಹನೀಯರು ತೋರಿಸಿಕೊಡಬೇಕು.

Friday, May 04, 2007

ಜಿಂಕೆ ಮರಿಗೆ ಬಲೇ ಗಾಂಚಲಿ ..




ಸರಿ ಸುಮಾರು ವರುಷಗಳ ಹಿಂದೆ ಹುಚ್ಚ ಬಂದಾಗ ಅದರಲ್ಲಿ ಮುಗ್ದ ಹೆಣ್ಣು ಮಗಳ ಪಾತ್ರ ಮಾಡಿ ಬೆಳಕಿಗೆ ಬಂದ ಹುಡುಗಿಯೇ
ರೇಖಾ ವೇದವ್ಯಾಸ. ಬರುವಾಗಲೇ ಮಾಡೆಲ್ ಎಂಬ ಹಣೆಪಟ್ಟಿಯನ್ನು ಹಂಚಿಕೊಂಡು ಬಂದ ಹುಡುಗಿ ಎಂಟ್ರಿ ಕೊಟ್ಟಿದ್ದು ಗೌರಮ್ಮ ಆಗಿ.
ಅಭಿನಯದಲ್ಲಿ ಆರಕ್ಕೆ ಎರದೆ ಇದ್ದುದರ ಪರಿಣಾಮವೇ ಮತ್ತೆ ಹೆಚ್ಚು ಅವಕಾಶಗಳು ಬರಲಿಲ್ಲ. ಆಗ ಲೋ ಬಜೆಟ್ ಚಿತ್ರಗಳನ್ನು ಮಾಡುತ್ತಿದ
ಉಷಾಕಿರಣ್ ಮೂವಿಸ್ ಚಿತ್ರ ಸಿಕ್ಕಿದ್ಧು ಇವಳ ಲಕ್ ಖುಲಾಯಿಸಿದ್ದು ನಮ್ಮ ದೌರ್ಭಾಗ್ಯವೇ ಸರಿ. ಮತ್ತೆ ಇವಳು ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಾಗ
ಅವಳ ಜೊತೆ ಬಹುಭಾಷ ಕಲಾವಿದೆ ಎಂಬ ಕೊಬ್ಬು ಬಂತು. ಇಂದ್ರಜಿತ್ ಇವಳನ್ನು ತನ್ನ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ತೋರಿಸಿದರು
ಇವಳು ಹೆಚ್ಚು ಪ್ರಚಾರ ಪಡೆಯಲಿಲ್ಲ. ಅಲ್ಲಿಗೆ ಅವಳ ತೆಲುಗು ಚಿತ್ರರಂಗದ ಕೆರಿಯರ್ ಕೂಡ ಮುಗಿದಿತ್ತು,ಆದರೂ ಇವರ ಕೊಬ್ಬು ಮಾತ್ರ ಇಳಿದಿರಲಿಲ್ಲ.
ಮತ್ತೆ ಇವಳಿಗೆ ಆಸರೆ ಆಗಿದ್ದು ಲೊ ಬಜೆಟ್ ನಿರ್ಮಾಪಕರು, ಕನ್ನಡದಲ್ಲಿ ಚೆಲ್ಲಾಟ ಚಿತ್ರದಲ್ಲಿ ಮತ್ತೆ ಇವಳ ಇನ್ನೋಂದು ಇನಿಂಗ್ಸ ಪ್ರಾರಂಭ ಆಯಿತು,
ಕನ್ನಡ ನಾಯಕ-ನಾಯಕಿಯರಿಗೆ ಬೇಡಿಕೆ ಇರುವ ಇಂದಿನ ದಿನಗಳಲ್ಲಿ ಇವಳಿಗೂ ಸ್ವಲ್ಪ ಅವಕಾಶ ಸಿಕ್ಕರೆ ಅವಳ ಭಾಗ್ಯವೆಂದು ತಿಳಿಯದೇ,
ಕನ್ನಡದಲ್ಲಿ ನನಗೆ ಮಾತನಾಡಲು ಆಗುವದಿಲ್ಲ,ಕಷ್ಟ. ಮನದಾಳದ ಮಾತುಗಳನ್ನು ಹೇಳಲು ಇಂಗ್ಲೀಷ್ ಬಳಸುತ್ತೇನೆ ಅಂತ ತೇಮ್ಸ್ ನೀರು ಕುಡಿದು ಬಂದ
ಹಾಗೆ ಆಡುವ ಈ ನಾರಿಮಣಿ ಕನ್ನಡ ಚಿತ್ರ ಮಾಡಲು ಮನಸ್ಸು ಮಾಡಿದ್ದು ನಮ್ಮ ಕನ್ನಡಿಗರ ಸೌಭಾಗ್ಯವೇ ಸರಿ ಅನ್ನಬೇಕು. ಇವಳು ಇತ್ತಿಚಿಗೆ
ಸಾಯಿ ಪ್ರಕಾಶ್ ಅವರ ಹುಟ್ಟಿದರೆ ... ಎಂಬ ಕರುಳಿನ ಕೈ ಹಾಕುವ ಚಿತ್ರದಲ್ಲಿ ಪಾತ್ರ ಕೊಟ್ಟರೆ, ಆ ಶೂಟಿಂಗನಲ್ಲಿ ಹಾಗೇ ಹೇಳಬೇಕೆ ??.
ಇವಳ ಇಂಗ್ಲೀಷ್ ಜ್ಞಾನ ನೋಡಿ ಆ ಪಾತ್ರ ಕೊಟ್ಟಿದ್ದು ಅಲ್ಲ, ಪಾಪ ರಾಧಿಕ ಐ.ಟಿ ಭಯಕ್ಕೆ ನಾಪತ್ತೆ ಆದ್ದುದರಿಂದ ಇವಳ ಬಗುಲಿಗೆ ಅವಕಾಶ ಬಂದಿದೆ ಅಷ್ಟೆಯಾ.
ಅಷ್ಟಕ್ಕೂ ಆವತ್ತಿನ ಶೂಟಿಂಗನಲ್ಲಿ ಎಸ್ಪಿ,ಲಕ್ಷ್ಮೀ ಇದ್ದರು, ಅವರೆಲ್ಲಾ ಬಿಸಿಲಿನಲ್ಲೂ ಕೂಡ ಕನ್ನಡ ಮಾತನಾಡಿದರೆ, ಈ ಪುಣ್ಯಾತ್ತಗಿತ್ತಿ ಬಾಯ್ ನ ಕರೆಸಿ ಕೊಡೆ ಹಿಡಿಸಿಕೊಂಡು
ಬಾಯಿಗೆ ಬಂದದ್ದು ಉಸರಿದಳು. ಮೊದಲೇ ಕಲಾವಿದರಿಗೆ ಭಾಷೆ ಇಲ್ಲಾ ಅನ್ನುವರ ಮಧ್ಯೆ ಇಂಥಾವರನ್ನು ಯಾವ ರೀತಿಯಲ್ಲಿ ಕನ್ನಡತಿ ಎನ್ನಬೇಕು ಎನ್ನುವುದು
ನಮ್ಮ ಮುಂದೆ ಇರುವ ಯಕ್ಷಪ್ರಶ್ನೆ.
ಈ ಎಮ್ಮಾ ಇಷ್ಟು ಆಂಗ್ಲ ಪ್ರೇಮ ತೋರಿಸಿದರ ಕರಾಮತ್ ನೋಡಿದರೆ ಹಾಲಿವುಡಗೆ ಸ್ಕೆಚ್ ಹಾಕಿದ ಹಾಗೆ ಅಂತ ನನಗೆ ಅನಿಸಿದ್ದು ಸರಿ ಅಂತ ಗೂಗಲ್ ದೇವತೆ
ಕೂಡ ಹೇಳಿದಳು. ಹಿಂದೆ ವ್ಯಾಲೆಂಟೆನ್ -ಡೇಗೆ ಒಂದು ಭಾರತೀಯ ಉಪಹಾರ ಕೇಂದ್ರಕ್ಕೆ ಬೇಟಿಕೊಟ್ಟಾಗ ಅಲ್ಲಿ ಅವಳು ತನ್ನ ಹಣೆಬರಹವನ್ನು ಪರೀಕ್ಷಿಸಲು ಹೋರಟಿದ್ದ್ಯು
ಸುಳ್ಳಲ್ಲ.ಅದರೆ ಅದೇನು ಹೆಗ್ಗಳಿಕೆ ಕೂಡ ಅಲ್ಲ, ಅಷ್ಟು ಮನದಾಳ ಹಂಚಿಕೊಳ್ಳಬೇಕೆಂದರೆ ಅಲ್ಲಿಗೆ ಹೋಗಲಿ, ನಮಗೆ ಒಂದು ಪೀಡೆ ತಪ್ಪುತ್ತದೆ ಅಂತ ಗಾಂಧಿನಗರದ ಜನ
ಪಿಸುಗುಟ್ಟಿದ್ಧು ರಟ್ಟಾಗಿದೆ. ಇವಳೂ ಇಲ್ಲಾ ಅಂದರೆ ಕನ್ನಡ ಮಾತನಾಡಲು ಪ್ರಯತ್ನ ಪಡುವ ಮಾನ್ಯ ಇಲ್ಲವೇ ಇವಳ ಜಾಗ ತುಂಬಲು ??

ಕೊಸರು:-ತಮಾಷೆಗಾಗಿ ಬಂದ ಜಿಂಕೆಮರಿ ತುಂಟಾಟ,ಹುಡುಗಾಟ ಮಾಡಿ ಮುಂದಿನ ಚಿತ್ರ ಪೇಚಾಟಕ್ಕೆ ರೆಡಿ ಆಗಿದ್ದಾಳೆ.

Tuesday, April 24, 2007

FM Radio in Bangalore: Case study.

VERY BEAUTIFUL THOUGHTS ON FM RADIO, I RECEIVED THIS AS AN EMAIL FWD. I DONNO THE AUTHOR TO THANK HIM FOR SHARING MY IDEAS.
(COURTESY:- MAIL FWD )

“Radio” concept has taken a rebirth during the present times and has yet again become a media for mass entertainment. This media has adopted itself as a part and parcel of Bangalore city life. In the beginning, even though numerous FM channels got some market in the city, Kannada, being the language of the city, was not on their priority list, which in turn created unhappiness among the citizens.
As an answer to the query on the Kannada priority issue, FM channels tried to convince that the market and in turn the requests for soothing Kannada songs were not there. During this process, all the FM channels started to relay more of Hindi and non-Kannada songs and market for Kannada songs was projected as non-existent
At the same time, a new Sun Network based FM channel “S FM” tasted a great success in gaining the mind share of the Bangalore masses with Kannada songs. Working along the same lines “Big FM” yet another FM channel got a good part of the market. As a result, Radiocity, A Bangalore based FM radio station, which was relaying Kannada songs on “one hour a day” basis, Radio-Mirchi which was sprinkling few Kannada songs in between Hindi songs, realized the existence of kannada market
The verdict passed for releasing Kaveri water to TamilNadu and kannadigas protesting against the verdict resulted in Tamlinadu based SFM to relay non-Kannada songs. Because of this reason, S FM crashed from the no 1 position.
Considering all these facts about the increasing demand for Kannada songs and on the competitive end, to get to the first position to utilize the market to its limits, Radio Mirchi has started to relay 90% of their songs and commercials in Kannada and has been very well accepted by the citizens. Thus, Radio Mirchi and Big-FM with prioritization of Kannada have both become competitive entities to reach the first position.
The realization of market potential by Radio Mirchi and utilizing the same is to be well appreciated.
It can be seen that along the need to listen old melodious Kannada songs, recent musical hits provided by the movies like “Jote Joteyali” , “Mungaru male”, “Arasu”, “Aishwarya” ,“Duniya ”,”Pallakki”, “JOGI”, “Nenapirali”, “AKASH” etc have boosted the demand for kannada songs to a very high limit.
In summary, catering to the market needs will result in the service provider getting a lionshare in the market.
Radio Mirchi’s turn around is a case to prove this.
As a bottom line it can be said that for a mass entertainment media, the CUSTOMER NEEDS runs the business, and not the ideas that aims to change the customer to the needs of the VESTED INTEREST.

Sunday, April 22, 2007

ಕನ್ನಡದಲ್ಲಿ ಕಾಮವಿಲ್ಲ(,) ಬರೀ ಫುಲ್‍ಸ್ಟಾಪ್(.)

ನಮ್ಮ ಕನ್ನಡ ಬಗ್ಗೆ ಗೊತ್ತೊ ಗೊತ್ತಿಲ್ಲದೇ ಒಂದು ಮಡಿವಂತಿಕೆಯನ್ನು ಮಾಡಿಕೊಂಡಿದ್ದೇವೆ, ಅಂದರೆ ಅದರ ಫಲವಾಗಿಯೇ
ನಮ್ಮ ಕನ್ನಡ ಕೇವಲ ಪ್ರಫುಲ್ಲ ಸಾಹಿತ್ಯಕ್ಕೆ ಸೀಮಿತ, ಪದ್ಯ-ಕಥೆ-ಕಾದಂಬರಿಗೆ ಬಿಟ್ಟರೆ ಬೇರೆ ಎನು ಬರೆಯಲು ಆಗುವದಿಲ್ಲ ಎಂಬ ಒಂದು ಬಂಧನದಲ್ಲಿ ಸಿಲುಕಿದ್ದೆವೆ. ಅದಕ್ಕೆ ನೋಡಿ ಕನ್ನಡ ಬಗ್ಗೆ ಹೇಳಿ ಅಂದರೆ ನಾವು ಮೊದಲು ಹೇಳುವುದು ನಮಗೆ ೭ ಜ್ಞಾನಪೀಠ ಬಂದಿವೆ, ಇಲ್ಲಾ ನಮ್ಮ ಕನ್ನಡ ರಾಜ್ಯೊತ್ಸವದ flex ಬ್ಯಾನರ್‍ಗಳಲ್ಲಿ ಆ ೭ ಜನರ ಭಾವಚಿತ್ರ ಹಾಕಿ ಸಂತೋಷ ಪಡುವುದೇ ನಮ್ಮ ಮಹತರ ಸಾಧನೆ ಎಂದು ಬೀಗುತ್ತೆವೆ.
ನನಗೆ ಪ್ರಶ್ನೆ ಬರುವುದು ನಮ್ಮ ಕಾಮಗಳನ್ನು ( ಕಾಮ ಅಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬಂಧವಲ್ಲ, ಮನುಷ್ಯನ ಪ್ರತಿಯೊಂದು ಆಸೆಯನ್ನು ನಾನು ಕಾಮವೆಂದು ಪರಿಗಣಿಸಿ, ಮುಂದೆ ಹಾಗೆ ಉಲ್ಲೇಖಿಸುತ್ತೆನೆ) ನಮ್ಮ ಕನ್ನಡದಲ್ಲಿ ತರಲು ನಾವು ಯಾಕೆ ಇಷ್ಟು ಮಡಿವಂತಿಕೆ ಮಾಡುತ್ತ ಇದ್ದೆವೆ ಅಂತ?.

ಈ ನಡುವೆ ಹೆಚ್ಚು ಪ್ರಚಲಿತ ವಿದ್ಯಮಾನವೆಂದರೆ ನಮ್ಮ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆ ಇಲ್ಲಾ ಬೇಡವೆ ಎನ್ನುವುದು. ಇದು ಇನ್ನೂ ನಮ್ಮಲ್ಲಿ ಪ್ರಶ್ನೆಯಾಗಿ ಉಳಿದಿರುವುದು ನಿಜಕ್ಕೂ ಶೋಚನೀಯ. ನಮ್ಮ ಸಂಸ್ಕೃತಿಗೆ ಇದು ಮಾರಕ ಎಂದು ವಾದಿಸುವ ಜನ ನಿಜಕ್ಕೂ ಆಷಾಡಭೂತಿ ತೋರುತ್ತಿದ್ದಾರೆ. ನಮ್ಮ ಹಳೆ ದೇವಸ್ಥಾನಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಗಳನ್ನು ನಾವು ಒಮ್ಮೆ ನೋಡಿದರೆ ನಮಗೆ ಆ ಕಾಲದಲ್ಲಿ ಇದ್ದ ಉದಾರತೆ ಮತ್ತು ಜನರ ತಿಳುವಳಿಕೆ ಬಗ್ಗೆ ತಿಳಿಯುತ್ತದೆ. ಒಬ್ಬ ಶಿಲ್ಪಿ ಒಂದು ಕಾಮಸೂತ್ರದ ಹತ್ತು ಹಲವು ಭಂಗಿಗಳನ್ನು ಮನನ ಮಾಡಿ ಕಲ್ಲಿಗೆ ಆ ರೂಪವನ್ನು ಕೋಡಬೇಕಿದ್ದರೆ ಅದು ಖಂಡಿತ ಅವನ ಒಬ್ಬನ ಜ್ಞಾನವಲ್ಲ, ಅದು ಅಂದಿನ ಸಮಾಜದ ವಿದ್ಯಮಾನ.

ತೆಲುಗುವಿನಲ್ಲಿ ಒಂದು ಗಾದೆ ಇದೆ, "ಬಚ್ಚಿಟ್ಟರೆ ಹಳಸಿ ಹೋಗುತ್ತದೆ" ಅಂತ, ಇದು ನಮ್ಮ ಇಂದಿನ ಸಮಾಜಕ್ಕೆ ನೈಜ ಕನ್ನಡಿ ಆಗಿದೆ. ನಾವು ನಮ್ಮ ಯುವ ಪೀಳಿಗೆ ಬಗ್ಗೆ ವಿಷಯವನ್ನು ಹಂಚಿಕೊಳ್ಳುದೇ ಇದ್ದರೆ ಅವರು ಆ ವಿಷಯಗಳನ್ನು ತಿಳಿದುಕೊಳ್ಳುವದಿಲ್ಲ ಅನ್ನುವ ಮೂಡನಂಬಿಕೆಗೆ ಎನು ಹೇಳಬೇಕು ?. ಇದರಿಂದ ನಮ್ಮ ಸಂಸ್ಕ್ರುತಿಯನ್ನು ರಕ್ಷಣೆ ಮಾಡುತ್ತ ಇದ್ದೇವೆ ಎಂದು ಪ್ರತಿಪಾದಿಸುವ ಜನ ಒಮ್ಮೆ ಇತರ ವಿಷಯಗಳ ಬಗ್ಗೆ ಗಮನ ಹರಿಸಬೇಕು.
ಅಂತರ್ಜಾಲದಲ್ಲಿ ದಿನಾ ದಿನಾ ಹೊಚ್ಚ ಹೊಸ update ಕೊಡುವ ಡೆಬೊನೆರ್ ಬ್ಲಾಗ/xboards.us ಒಂದು ಸಾಕು ನಮ್ಮ ಯುವಜನಾಂಗಕ್ಕೆ. ಇಂಥಾ ಬ್ಮಾಗ ಮತ್ತು websites ಇರುವ ತನಕ ನಮ್ಮ ಜನರಿಗೆ ಕಳಪೆ ಸರಕು ಸಿಗುವದರಲ್ಲಿ ಮೋಸವಿಲ್ಲ.
ಇದು ಬರೀ ಪಟ್ಟಕ್ಕೆ ಸೀಮಿತ ಎಂದು ನೀವು ಭಾವಿಸಿದ್ದರೆ, ಅದು ನಮ್ಮ ಜನರ ignorance ಪರಮಾವಧಿ. ಚಿಕ್ಕ ಚಿಕ್ಕ ಊರಿನಲ್ಲಿ
cyber cafe ನಲ್ಲಿ ಕುಳಿತ ಪ್ರೇಮಿಗಳು ONLINE TUTION ತೆಗೆದುಕೊಳ್ಳುವುದು ಇಂತಹ ಕಳಪೆ ವೆಬೆಸೈಟ್‍ಗಳಿಂದ.

ಅನೇಕ ಕನ್ನಡ ಪತ್ರಿಕೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಂದು ಕಾಲಂ ಇರುತ್ತದೆ, ಅದರಲ್ಲಿ ಒಬ್ಬರು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನನ್ನ ಗಮನಕ್ಕೆ ಬಂದ ಮತ್ತು ಹೆಚ್ಚು ಅವಾಂತರಗಳನ್ನು ಮಾಡಿಕೊಂಡು ಪ್ರಶ್ನೆ ಕೇಳುವುವರು ಹೆಚ್ಚು ಚಿಕ್ಕ ಊರಿನವರು. ಇವರಿಗೆ ಲೈಂಗಿಕ ಶಿಕ್ಷಣ ಕೋಡದಿರುವುದೇ ಹೆಚ್ಚು ಅವಘಡಗಳನ್ನು ಮಾಡಿಕೊಂಡು ತಮ್ಮ ಪ್ರಶ್ನೆಗಳನ್ನು ಯಾರ ಹತ್ತಿರ ಹಂಚಿಕೊಳ್ಳಲಾಗದೇ ಪತ್ರಿಕೆಗಳ ಮೊರೆ ಹೋಗುತ್ತಾರೆ. ಇಲ್ಲಿ ನನಗೆ ಅನಿಸುವುದು ನಮ್ಮ ಮನುಷ್ಯನ ಕಾಮಗಳನ್ನು ನಾವು ನಮ್ಮ ಭಾಷೆಯಲ್ಲಿ ಹೇಳದೇ ಇರುವುದೇ ನಮ್ಮ ಜನರಿಗೆ ಮಾಡುತ್ತಿರುವ ಒಂದು ಮೋಸ. ನಾನು ಸರಸಗಾಟಾಗಿ ನಮ್ಮ
ಭಾಷೆಯಲ್ಲಿ ಲೈಂಗಿಕ ವಿಷಯಗಳನ್ನು ಹೇಳುವ ಪುಸ್ತಕ ಇಲ್ಲಾ ಅಂತ ಅಲ್ಲ. ಆದರೆ ಅವುಗಳ ಗುಣಮಟ್ಟವಿಲ್ಲ ಎನ್ನುವುದು ಮತ್ತೆ ಹೆಚ್ಚು ವೈವಿಧ್ಯತೆ ಇಲ್ಲದೇ ಇರುವುದು ಕೊರಗು.

ಇದು ನಮ್ಮ ಮಡಿವಂತಿಕೆಯ ಫಲವಾದರೆ ಮುಂದೆ ನಮಗೆ ಕಾಣಸಿಗುವುದು ಇನ್ನೊಂದು ರೋಗ ಅದು, ನಮ್ಮ ಭಾಷೆಯಲ್ಲಿ ಕೆಲವು ವಿಷಯಗಳ ಹೇಳಲು ಸಾಧ್ಯವಿಲ್ಲ ಎಂದು ನಮ್ಮಲ್ಲಿ ನಾವೇ ಹಾಕಿಕೊಂಡ ಒಂದು ಬಂಧನ. ಮುಖ್ಯವಾಗಿ ಒಂದು ಜ್ಞಾನಹೀ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಆಂಗ್ಲಕ್ಕೆ ಮೊರೆ ಹೋಗಬೇಕು ಎಂದು ನಾವು ಸಮಾಜದಲ್ಲಿ ಬಿತ್ತಿ ನಮ್ಮ ಜನತೆಗೆ ಒಂದು ದೃಷ್ಟಿಯಲ್ಲಿ ಬೇರೆ ಭಾಷೆ ನಮಗಿಂತ ದೊಡ್ಡದು ಎಂಬ ತಪ್ಪು ಗ್ರಹಿಕೆಯನ್ನು ಹಂಚುತ್ತಿದ್ದೆವೆ.
ನಮ್ಮ ಕನ್ನಡ ಜನ ಬಯಸುವ ಎಲ್ಲಾ ಕಾಮಗಳು ಅಂದರೆ ಅವನು ಮೊಬೈಲ್ ತಂತ್ರಜ್ಞಾನ ಹಿಡಿದು ಲೈಂಗಿಕ ಎಲ್ಲಾ ವಿಷಯಗಳು ನಮ್ಮ ಭಾಷೆಯಲ್ಲೇ ಸಿಕ್ಕರೆ ನಮಗೆ ಇರುವ ಅನೇಕ ತಪ್ಪು ಗ್ರಹಿಕೆಗಳನ್ನು ದೂರ ಮಾಡುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು.ಎಲ್ಲಾ ಇಲ್ಲ ಅಂತ ಅಲ್ಲ, ಅವು ಇದ್ದರು ಜನರಿಗೆ ಮುಟ್ಟಿಲ್ಲ, ವನಸುಮಗಳಾಗಿ ಯಾರದೊ ಒಬ್ಬರ ಸ್ವತ್ತುಗಳಾಗಿವೆ. ನಾವು ಜುಟ್ಟಿಗೆ ಮಲ್ಲಿಗೆ ಹೂವಿನ ಸಾಹಿತ್ಯಕ್ಕೆ FULLSTOP ಹಾಕಿ, ಹೊಟ್ಟೆಗೆ ಹಿಟ್ಟು ತರುವ ಸಾಹಿತ್ಯಕ್ಕೆ ಕಾಮ(,) ಹಾಕಬೇಕು.