Tuesday, November 01, 2011

ನಮ್ಮತನವನ್ನು ಬಿಟ್ಟುಕೊಡುವುದು ದೊಡ್ಡತನವಲ್ಲ ದಡ್ಡತನ



ಮೊನ್ನೆ ಉಡುಪಿ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ತಿಂಡಿ-ಊಟ ಮಾಡುವ ಆಸೆ ಆಯಿತು, ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ಪರಿಚಯವಾದ ವಿದೇಶದ ಮೊರೆನಾ-ಸರ್ಜಿಯೋ ದಂಪತಿಗಳ ಜೊತೆ ಕೂಡ ಊಟ, ಇಲ್ಲಿನ ಸಂಸ್ಕೃತಿ , ಇತಿಹಾಸದ ಬಗ್ಗೆ
ಮಾತುಕತೆಯಾಯಿತು. ಕರ್ನಾಟಕ ಮತ್ತು ಭಾರತದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡ ಆ ದಂಪತಿಗಳಿಗೆ
ನಮ್ಮ ದೇಶ ಯುರೋಪ್ ಮಾದರಿಯಲ್ಲಿ ಇದೆ ಎಂದು ತಿಳಿಸಿದಾಗ ಅವರು ಆಶ್ಚರ್ಯ ಪಟ್ಟಿದ್ದು ಉಂಟು. ದೇವರ ದರ್ಶನ
ಮುಗಿದ ನಂತರ ಒಟ್ಟಿಗೆ ನಾವು ಅಲ್ಲೇ ಹತ್ತಿರ ಇದ್ದ ವುಡಲ್ಯಾಡ್ಸ ಉಪಹಾರ ಗೃಹಕ್ಕೆ ಹೋದೆವು.

ನಾನು ದೋಸೆ ಹುಟ್ಟಿದ್ದು ಇಲ್ಲೇ, ಕರ್ನಾಟಕದ ಎಲ್ಲಾ ಕಡೆ ಉಡುಪಿ ಹೋಟೆಲ್ ಇರುವುದು, ಅದು ಇದು ಅಂತ ಹೇಳಿದ್ದೆ.
ಮ್ಯಾನೆಜರ್ ಬಂದು ಎನು ಬೇಕು ಎಂದಾಗ ಗೋಳಿ ಬಜ್ಜೆ, ಮಂಗಳೂರು ಬನ್ ಮತ್ತು ನೀರು ದೋಸೆ ಎಂದೆ. ಅದಕ್ಕೆ ಅವನು ಇಲ್ಲ ಸರ್ ನಮ್ಮಲ್ಲಿ ಇದು ಯಾವುದು ಸಿಗುವದಿಲ್ಲ, ದಯವಿಟ್ಟು ಮೆನು ನೋಡಿ ಎಂದ. ಅಲ್ಲಿ ನೋಡಿದರೆ ಬರೇ ಉತ್ತರ ಭಾರತದ ಖಾನವಳಿ ಮೆನು ಇದ್ದ ಹಾಗೆ ಇದೆ. ಆ ದಂಪತಿಗಳು ಇಲ್ಲಿ ಎನನ್ನು recommend ಮಾಡುತ್ತೀರಾ ಎಂದು ಕೇಳಿದರೆ ಮತ್ತೆ ಉತ್ತರ ಭಾರತದ ತಿಂಡಿ ತಿನಿಸುಗಳೇ ಕೇಳಿ ಬಂದವು. ನಿಜಕ್ಕೂ ಇದು ಬಹಳ ಆಶ್ಚರ್ಯವಾಯಿತು. ಇದೇ ಕಥೆ ಅದೇ ಊರಿನಲ್ಲಿ ಇರುವ ಡಯಾನದು ಕೂಡ.
ಇವೆರೆಡು ಉತ್ತಮ ಹೋಟೆಲುಗಳು, ಅಲ್ಲಿ ಕುಳಿತುಕೊಳ್ಳಲು ಮತ್ತು ಒಳವಾತವರಣ ಚೆನ್ನಾಗಿದೆ. ಆದರೆ ಉಡುಪಿಯ ಪ್ರಸಿದ್ಧ ಖಾದ್ಯಗಳನ್ನು ಅಲ್ಲಿ ಮಾರುವುದು ಅವರಿಗೆ ಕೀಳರಿಮೆ ಅನಿಸಿದೆ ಯಾಕೋ.

ಆ ಊರಿಗೆ ಬರುವುದು ಹೆಚ್ಚಾಗಿ ಪ್ರವಾಸಿಗರು, ಅವರಿಗೆ ಅವರ ಊರಿನಲ್ಲಿ ಸಿಗದ ನಮ್ಮ ಖಾದ್ಯಗಳನ್ನು ಉಣಬಡಿಸುವುದು ಬಿಟ್ಟು
ನಾನು, ಪಾನು ಎಂದು ಕೊಂಡು ಉತ್ತರ ಭಾರತದ ಖಾದ್ಯಗಳನ್ನೇ ನಮ್ಮ ಖಾದ್ಯಗಳು ಅನ್ನುವ ಹಾಗೆ ಉಣಬಡಿಸಿದರೆ ನಷ್ಟ ಅಲ್ಲಿನ ಜನಕ್ಕೆ. ಇದು ನನಗೆ ಕೀಳರಿಮೆಯ ಪ್ರತೀಕ ಅನಿಸಿತು, ಅಲ್ಲಿನ ಸ್ಪೆಷಲ್ ಖಾದ್ಯಗಳನ್ನು hype ಮಾಡಿ ಗ್ರಾಹಕರಿಗೆ ಕೊಡುವ ಬದಲು ಎಂಜಲನ್ನು ಮಾರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಖ್ಯವಾಗಿ ಅದನ್ನು ತಿನ್ನಬೇಕೆಂಬ ಬಯಕೆಯಲ್ಲಿ ಇದ್ದ ಸರ್ಜಿಯೋ-ಮೊರೆನಾ ದಂಪತಿಗಳಿಗೆ ಆಕಾಶದಷ್ಟು ಆಸೆ ತೋರಿಸಿ ನಿರಾಸೆ ಮೂಡಿಸಿದ್ದು ಪಿಚ್ಚೆನಿಸಿತು.

1 comment:

VENU VINOD said...

ಕೆಲವೊಂದು ಸಮಯದಲ್ಲಿ ಆ ಲೋಕಲ್ ತಿಂಡಿ ಇರುವುದಿಲ್ಲ. ಉದಾಹರಣೆಗೆ ನಾನಿರುವ ಮಂಗಳೂರಿನ ಹೊಟೆಲ್‌ನಲ್ಲಿ ಬೆಳಗ್ಗೆ ಮಾತ್ರವೇ ಬನ್ಸ್, ಗೋಳೀಬಜೆ ಸಿಗುತ್ತೆ, ಸಂಜೆ ಸಿಗಲ್ಲ..