Thursday, August 06, 2009

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡ ...

ಬೆಳಿಗ್ಗೆ ಎದ್ದ ಕೂಡಲೇ ವಿಕ ಓದದೇ, ಕಾಫಿ ಕುಡಿಯದೇ ದಿನ ಆರಂಭಿಸುವದಿಲ್ಲ. ಇವತ್ತು ಮುಖಪುಟದಲ್ಲಿ ಮತ್ತೊಂದು ಪ್ರಾಯೋಜಿತ ಲೇಖನ ಮತ್ತು ಬಾಕ್ಸ ಐ.ಟಂನಲ್ಲಿ ಬುದ್ದಿವಾದ ಬೇರೆ ಹೇಳಿದ್ದಾರೆ, ಇದನ್ನು ನೋಡಿ ನಗು ಬಂತು

* ಲೇಖನವನ್ನು ಹೊಗಳೀಯೇ ಬರೆಯಬೇಕು ಅಂತ ಹೊರ‍ಟಿದ್ದ ಹಾಗಿದ್ದ ಕಾರಣ, ಪೂರ್ವದಲ್ಲಿ ಇರುವ ಬೇವಿನ ಮರ, ಮೇಲೆ ಇರುವ ನೀಲಾಕಾಶ, ಉತ್ತರದಲ್ಲಿ ಇರುವ ಕನ್ನಡ ಶಾಲೆ, ಆಲ್ಲಿಂದ ಕೇಳಿ ಬರುವ ಕನ್ನಡ ಮಾತುಗಳು, ಅದಕ್ಕೆ ದನಿಗೂಡಿಸುವ ಹಕ್ಕಿಗಳ ಕಲರವ ಎಲ್ಲವೂ ಕಂಡಿದೆ. ಅಪರೂಪದ ಈ ತಾಣ ಪಡೆಯಲು ನಾವು ಪುಣ್ತ್ಯ ಮಾಡಿರಬೇಕು ಬಿಡಿ, ಪಾಪ ಯಾಕೋ ದಕ್ಷಿಣದಲ್ಲಿ ಸಮುದ್ರದ ಅಲೆ,ಉಕ್ಕಿ ಹರಿಯುವ ಭೋರ್ಗೆರತ ವಿಮರ್ಶಕರಿಗೆ ಬೀಳದೆ ಇದ್ದಿದ್ದು ಆಶ್ಚರ್ಯವೇ ಸರಿ.

ಅಬ್ಬಾ ಕನ್ನಡಿಗನಿಗೆ ಅದರಲ್ಲು ಸರ್ವಜ್ಞನಿಗೆ ಎನು ಬೇಕು ಕೇಳಿ. ಇದನ್ನು ಓದಿ ಅನೇಕ ಕನ್ನಡಿಗರಿಗೆ ಇದ್ದ ಆತಂಕ ಮರೆಯಾಯಿತು ಬಿಡಿ. ಇನ್ನು ಒಂದು ವಾರ ಪೋಲಿಸರ ಸರ್ಪಗಾವಲು ಇದಕ್ಕೆ ಬೇರೆ,

ಇದು ಎಲ್ಲೊ ದೇವಿಶೆಟ್ಟಿ ಮಹೇಶ್ ಬರೆಯುವ ಚಿತ್ರ ವಿಮರ್ಶೆ ಇದ್ದ ಹಾಗೆ ಇದೆ ಅನಿಸೊದು ಸಹಜವೇ, ಅದರಲ್ಲು ಇದೇ ರೀತಿ
ಶಿವಾಜಿ ಚಿತ್ರದ ಪ್ರಯೋಜಿತ ಲೇಖನ ನೆನಪಿಗೆ ನಿಮಗೆ ಬಂದರೆ ಅದು ನಿಮ್ಮ ಅತೀ ಜ್ಞಾಪಕದ ರೋಗ ಅಷ್ಟೆ.

ಇದನ್ನು ಮುಖಪುಟದಲ್ಲಿ ಹಾತೊರೆದು ಪ್ರತ್ಯಕ್ಷ ವರದಿ ಎಂದು ಪ್ರಕಟಿಸಿರುವ ಕನ್ನಡಿಗರ ಹೆಮ್ಮೆಯ ಪತ್ರಿಕೆಗೆ, ಮತ್ತೊಂದು ರಾಜ್ಯಗಳ ಭಾಂದವ್ಯ ಬೆಸೆಯುವ ,ರಚನಾತ್ಮಕ ಕಾರ್ಯ ಕಾಣಲಿಲ್ಲ ಅನಿಸೊತ್ತೆ. ಕೊನೆಗೆ ಪುಟದವರೆಗೂ ಹುಡುಕಿದೆ, ಆದರೆ ಎಲ್ಲೂ ಅದರ ಬಗ್ಗೆ ಚಕಾರ ಇಲ್ಲ...






* ನಮ್ಮ ಭಾಂದವ್ಯ ಬೆಸಯಲು ಹೊರಟ ತಮಿಳುನಾಡು ಸರಕಾರ ನಮ್ಮ ೩ ಜಲಾಶಯಗಳ ವಿರುದ್ಧ ತಕರಾರು ಅರ್ಜಿ ಸಲ್ಲಿಸಿತ್ತು, ಅದು ಹಿಯರಿಂಗ ಬಂದಿದೆ, ಯಾಕೆ ಅಂದರೆ ತಮಿಳರಿಗೆ ಅದಷ್ಟು ಬೇಗ ಇದನ್ನು ಪರಿಹರಿಸಬೇಕು , ತಮಿಳರಿಗೆ ಆದ ಅನ್ಯಾಯವನ್ನು
ಸರಿ ಮಾಡಬೇಕು ಅಂತ ಕಾಳಜಿ ಇದೆ. ಇದು ನಮ್ಮ ಕನ್ನಡದ ಒಂದು ಪತ್ರಿಕೆಯಲ್ಲಿ ಪ್ರಕಟಿಸದೇ ಕನ್ನಡಿಗರನ್ನು
ಕತ್ತಲೆಯಲ್ಲಿ ಇಟ್ಟು , ನಮ್ಮ ಕನ್ನಡ ಹೋರಾಟಗಾರರಿಗೆ ಬುದ್ಧಿ ಹೇಳಲು ಹೋರಟಿದ್ದಾರೆ.



* ೯೫% ಪ್ರತಿಶತ ಜನರ ಬೆಂಬಲ ಇದೆ, ಇದು ಜನಮನ್ನಣೆ ಅನ್ನೊ ಮಾತುಗಳನ್ನು ಓದುತ್ತ ಇದ್ದೇವೆ, ಹಾಗಿದ್ದಲ್ಲಿ ಯಾಕೆ ಬೇಕು ಈ ಪ್ರಾಯೋಜಿತ ಲೇಖನಗಳು ಮತ್ತು ಮಹನೀಯರ ಉಕ್ತಿಗಳು. ಅಷ್ಟಕ್ಕು ೫% ವಿರೋಧಿಸುತ್ತ ಇರುವರ ಬಗ್ಗೆ ಯಾಕೆ ಬುದ್ಧಿವಾದ ಹೇಳಬೇಕು ಇಲ್ಲ ಅವರ ಬಗ್ಗೆ ತಲೆ ಕೆಡಿಸಿಕೊಳ್ಲಬೇಕು ಅಂತ ಅರ್ಥ ಆಗುತ್ತಿಲ್ಲ.

ಇದಕ್ಕೆ ಹೇಳುವುದು ಪ್ರತ್ಯಕ್ಶವಾಗಿ ಕಂಡರೂ ಪ್ರಮಾಣಿಸಿ ನೊಡಬೇಕು ಅಂತ ..

ಅದನ್ನು ಅಯನಾವರಂನಲ್ಲಿ ಯಾಕೆ ಬೇಡ? ಅಂತ ಅವಿ ಬಹಳ ಚೆನ್ನಾಗಿ ಹೇಳಿದ್ದಾರೆ...

ಓದುವಾದಗಳೇಕೆ | ಗಾದೆಯ ಮಾತೇಕೆ

ವೇದ-ಪುರಾಣ ನಿನಗೇಕೆ - ಲಿಂಗದ

ಹಾದಿಯನರಿದವಗೆ ಸರ್ವಜ್ಞ

No comments: