Friday, April 21, 2006

ಕನ್ನಡಿಗರ ಭ್ರಮೆಗಳು.

ನಮ್ಮ ಕನ್ನಡಿಗರು ಬೇರೆಯವರು ಹೇಳಿದನ್ನು ಕುರುಡಾಗಿ ನಂಬುತ್ತಾರೆ. ಇದು ನಮ್ಮ ಕೀಳೆರಿಮೆಯ ಪ್ರಭಾವವೊ ಇಲ್ಲ ಕನ್ನದ ಭಾಷೆ-ಚರಿತ್ರೆ ಬಗ್ಗೆ ಇರುವ ಅಜ್ಞಾನವೊ ಕಾಣೆ. ಇಂತ ಕೆಲವು ಭ್ರಮೆಗಳು ಇಲ್ಲಿವೆ.


ಕನ್ನಡ ಸಂಸ್ಕೃತ ಜನ್ಯ ಭಾಷೆ.

ಕನ್ನಡ ದ್ರಾವಿಡ ಜನ್ಯ ಭಾಷೆ, ಹಿಂದೆ ೨೪೮ ಭಾಷೆಗಳು ಇದ್ದವು, ಕಲಾಕ್ರಮೇಣ ಕರಗಿ ಈಗ ೨೨ ಇವೆ ಅಂತ ಭಾಷ ತಜ್ಞರ ಅಭಿಮತ.
ಸಂಸ್ಕೃತ ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಭಾಷೆ. ಉತ್ತರ ಭಾರತದ ಅನೇಕ ಭಾಷೆಗಳು ಸಂಸ್ಕೃತದಿಂದ ಹುಟ್ಟಿವೆ. ಕನ್ನಡ ಬೆಳೆಯೊಕ್ಕೆ ಸಂಸ್ಕೃತ ಜೀವಸತ್ವವಾಗಿದೆ ಅಂದರೆ ಕನ್ನಡ ಸಸಿಗೆ ಸಂಸ್ಕೃತ ಗೊಬ್ಬರ ಆಗಿದೆ. ಆದರೆ ಸಂಸ್ಕೃತ ಜನ್ಯವಲ್ಲ.

ಕನ್ನಡ ಲಿಪಿ ವಿಭಿನ್ನವಾಗಿದೆ ಮತ್ತು ಕಷ್ಟ//
ಕನ್ನಡದ ಲಿಪಿ ಬ್ರಾಹ್ಮಿ ಇಂದ ಹುಟ್ಟಿದರೂ, ದುಂಡು ದುಂಡಗೆ ನೊಡಲು ಸುಂದರ ಇರುವ ಲಿಪಿ ನಮ್ಮದು.ಅಷ್ಟೆ ಅಲ್ಲ ತೆಲುಗು ಲಿಪಿಗೂ ಕನ್ನಡವೇ ತಾಯಿ.
ಭಾರತದ ಭೂದಾನ ಚಲುವಳಿ ನೇತರಾ ಶ್ರೀ ವಿನೊಭ ಭಾವೆ ಹೇಳಿದ್ದು ಎನು ಗೊತ್ತ, ಕನ್ನಡ "ವಿಶ್ವ ಲಿಪಿಗಳ ರಾಣಿ", ಎನೊ ಅವರು ನಮ್ಮ ಪಕ್ಕ ರಾಜ್ಯದವರು,ಪ್ರೀತಿಯಿಂದ ಹೇಳಿರಬಹುದು ಅಂತ ಕಿಡಿಗೇಡಿಗಳು ಹೇಳಬಹುದು. ಆದರೆ ೧೫೨ ಲಿಪಿಗಳ ವಿಶ್ವ ಲಿಪಿಗಳ ಪ್ರದರ್ಶನ ನಡೆಯಿತು, ಎಲ್ಲಾ ಲಿಪಿತಜ್ಞರು,ಭಾಷ ತಜ್ಞರು
ಕನ್ನಡ ಅತ್ಯಂತ ಸುಂದರ ಲಿಪಿ, ಸಂದೇಹ ಇಲ್ಲದಿರುವ ಲಿಪಿ, ಬೇರೆ ಭಾಷೆಗಳಿಗೆ ಇದು ಮಾದರಿ(ಮಾಡೆಲ್) ಲಿಪಿ ಅಂತ ಒಮ್ಮತದಿಂದ ಹೇಳಿದ್ದಾರೆ.
ದ್ರುಶ್ಯಕ(ವಿಶುಯಲ್) ಇರುವ ಖಚಿತ ಮತ್ತು ನಿಖರಕತೆ.


ಕನ್ನಡ ಒಂದು ಪ್ರಾಂತೀಯ ಭಾಷೆ,ಹಿಂದಿ ನಮಗಿಂತ ದೊಡ್ಡದು//
ಇದು ಆತಿ ದೊಡ್ಡಾಆಆಆಆಆಆಆಆಆಅ ಭ್ರಮೆ. ಈ ಕಾರಣಕ್ಕೊ ಎನೊ ಅಥಾವ ನಮ್ಮ ಪಠ್ಯ ಪುಸ್ತಕಗಳ ತಪ್ಪು ತಿಳುವಳಿಕೆಯಿಂದ ನಮಗೆ ಒಂದು ಭ್ರಮೆ ಹುಟ್ಟಿದೆ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅದನ್ನು ಪ್ರತಿಯೊಬ್ಬ ಹಿಂದುಸ್ಥಾನಿ ಕಲಿಯಬೇಕು ಅಂತ. ಕಲಿಯುವುದು ಓಕೆ, ಆದರೆ ಅದರ ಹುಚ್ಚು ಹತ್ತಿಸಿಕೊಂಡು ನಮ್ಮ ಭಾಷೆಯನ್ನು ತಿರಸ್ಕರಿಸುವುದು ಸರಿ ಅಲ್ಲ.
ಕನ್ನಡವು ರಾಷ್ಟ್ರ ಭಾಷೆ ಅನ್ನುವ ಸಂಗತಿ ಅನೇಕರಿಗೆ ಗೊತ್ತಿಲ್ಲ, ಹಿಂದಿಗೆ ಹೊಲಿಸಿದರೆ ಕನ್ನಡ ಎಲ್ಲ ವಿಷಯದಲ್ಲು ಮುಂದೆ ಇದೆ. ಅನಗತ್ಯ ಭ್ರಮೆ ಇಟ್ಟುಕೊಂಡು ಹಿಂದಿಗೆ ಉಘೆ ಉಘೆ ಹೇಳುವುದು ಬೇಕಿಲ್ಲ.


ಕನ್ನಡ ಮತ್ತು ತೆಲುಗು ತುಂಬ ಹತ್ತಿರದ ಭಾಷೆಗಳು//
ಇದು ಇನ್ನೊಂದು ಭ್ರಮೆ, ಲಿಪಿ ವಿಷಯಕ್ಕೆ ಬಿಟ್ಟರೆ ನಮಗೂ ಆ ಭಾಷೆಗು ಸಾಮ್ಯ ಅಷ್ಟು ಇಲ್ಲ. ತೆಲುಗು ಭಾಷೆಯಲ್ಲಿ
ಸ್ತ್ರೀ ಲಿಂಗಕ್ಕೂ ಮತ್ತು ನಪುಂಸಕ ಲಿಂಗಕ್ಕೂ ಕ್ರಿಯಾಪದದಲ್ಲಿ ವ್ಯತ್ಯಾಸವಿಲ್ಲ. "ಪಿಲ್ಲಿ ವಚ್ಚಿಂದಿ" ಮತ್ತು "ಪಿಲ್ಲ ವಚ್ಚಿಂದಿ" ಅನ್ನುತ್ತಾರೆ.


ಕನ್ನಡಲ್ಲಿ ಎನಿದೆ ....??

ಇದಕ್ಕೆ ಒಳ್ಳೆ ಉತ್ತರ "ಎನಿಲ್ಲ" ಅಂಥ ಕೇಳುವುದು. ನಾವು ಕನ್ನಡಿಗರು ನಮ್ಮ ಕೊರತೆಯನ್ನು ಹೇಳಿ ಕೊಲ್ಲುತ್ತೆವೆ. ನಾವು ಸತ್ತೆ ಹೊಗಿದ್ದೆವೆ ಅಂತ ಬೊಬ್ಬೆ ಹೊಡೆಯುತ್ತೆವೆ.
ನಮ್ಮ ನಿಶಕ್ತಿಗಳನ್ನು ಹೇಳಿ ಕೊಂಡು ಕೊರಗುತ್ತೆವೆ. ನಮ್ಮ ಶಕ್ತಿ ಮತ್ತು ನಮ್ಮ ಭಾಷೆಯಲ್ಲಿ ಇರುವ +ve ಗುಣಗಳ ಬಗ್ಗೆ ಎನು ಹೇಳುವದಿಲ್ಲ.

ಆಕಸ್ಮಾತ್ ನವೆಂಬರ್ ೧ನೇ ತಾರೀಖು ಕೇಳಿದರೂ ಕೂಡ ನಾವು ಹೇಳುವುದು ಒಂದೆ ಒಂದು ವಿಷಯ,ಅದು ನಮಗೆ ೭ ಬಾರಿ ಜ್ಞಾನಪೀಠ ಬಂದಿದೆ ಅಂತ ಅಷ್ಟೆ .ಒಂದು ವರುಷಕ್ಕೆ ಒಮ್ಮೆ ಕೊಡುವ ಒಂದು
ಖಾಸಗಿ ಪ್ರಶಸ್ತಿ ಒಂದೇನ ನಮ್ಮ ಮಾನದಂಡ. ಅಲ್ಲ, ಕನ್ನಡ ಸಾಹಿತ್ಯಕ್ಕೆ ೪೯ ಸಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಇದಲ್ಲದೆ ನೆರೆ ರಾಜ್ಯಗಳ "ಕಬಿರ್ ಸಮ್ಮಾನ್" ಮತ್ತು ಕುಮಾರನ
ಪ್ರಶಸ್ತಿ ಕೂಡ ಬಂದಿವೆ.

ನಮ್ಮ ನವ ಸಾಹಿತ್ಯ ಶ್ರೀಮಂತ ಆಗಿದೆ, ನಿಜ. ಆದರೆ ಹಿಂದೆ ಇರಲಿಲ್ಲವೆ?
೧೦೦೦ ವರುಷಗಳ ಹಿಂದೆ ಪಂಪ ಮಹಾಕಾವ್ಯ ಬರೆದ, "ಮನುಷ್ಯ ಜಾತೀ ತಾನೊಂದೆ ಬಲಮ್" ಅನ್ನುವ ಮಹಾನ್ ವಿಚಾರವನ್ನು ಬೊದಿಸಿದ. ಇದನ್ನೇ ವಿಶ್ವ ಮಾನವ ಸಂದೇಶವನ್ನು ನಮ್ಮ ಕುವೆಂಪು ಪುನರ್ ಉಚ್ಚರಿಸಿದರು.
ಹೀಗೆ ಸಾಮಜಿಕ ಕಳಕಳಿಯನ್ನು ಬೊಧಿಸಿದ ಕವಿಗಳು ಕನ್ನಡದಲ್ಲಿ ಮಾತ್ರ ಸಿಗುತ್ತಾರೆ.

"ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರ ಅಗುವುದು" ಅಂತ ಹೇಳಿದ್ದಾರೆ, ಅವನ ಬಗ್ಗೆ ಹೇಳೊಕ್ಕೆ ೨ ಮಾತುಗಳು ಸಾಲದು. ಅವನು ಅಷ್ಟು ಚೆನ್ನಾಗಿ ಕಾವ್ಯಗಳನ್ನು ಬರೆಯುತ್ತಿದ್ದ.
ಅವನಿಗೆ ಅವನ ಕಾವ್ಯದ ಮೇಲೆ ಅಪಾರ ನಂಬಿಕೆ, ಅದಕ್ಕೆ ಎನೊ ಅವನು ಒಮ್ಮೆ ಬರೆದಿದ್ದು ಇನ್ನೊದು ಸರಿ ಅಳಿಸದೆ ಬರೆದಿದ್ದು. ಈ ತರ ಯಾವ ಭಾಷೆಯ ಕವಿಯು ಮಾಡಿರಲಾರ.

ರನ್ನ ಬರೆದ ಗಾದಯುದ್ದಕ್ಕೆ ಬೇರೆ ಯಾವ ಕೃತಿಗೆ ಸಾಟಿ ಉಂಟು ??

ಕಾಲಾನುಕ್ರಮದಲ್ಲಿ ಕನ್ನಡ ಹಳೆ-ನುಡಿ-ನವ ಹಿಗೆ ವಿಕಾಸ ಹೊಂದಿರುವ ಕನ್ನಡ ಅನೇಕ ಪ್ರಬೇಧ ಪಡೆದಿದೆ,
ಯಾವ ಭಾಷೆಗೆ ಭೌಗೊಳಿಕ ಪ್ರಬೇಧ ಇರುತ್ತದೆಯೊ ಅದು ಶ್ರೀಮಂತ ಅಂತ ಭಾಷತಜ್ಞ್ನರ ಅಭಿಮತ.


ಸಾಹಿತ್ಯ==ಬದುಕು ಅಲ್ಲ. ಬದುಕು ಅಂದರೆ ಆಡಲಿತ,ಶಿಕ್ಷಣ,ವೈದ್ಯಕಿಯ,ವಿಜ್ಞಾನ ನಮ್ಮ ಭಾಷೆಯಲ್ಲಿ ಇರಬೇಕು. ಆಡಳಿತ ಕ್ಶೇತ್ರದಲ್ಲಿ ಕನ್ನಡಷ್ಟು ಪದಕೊಶ ಇನ್ನೊದು ಭಾಷೆಯಲ್ಲಿ ಇಲ್ಲ. ಕಾನೂನಿನ ಪದಕೊಶದಲ್ಲಿ ೪೫ ಸಾವಿರ ಶಬ್ದಗಳು ಇವೆ. ಹಿಂದಿಗಿಂತ ಹೆಚ್ಚು ಮತ್ತು ಮುಂದೆ ಇದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ನಿಗಂಟು ಇದೆ.
ವೈದ್ಯ ಪದಕೊಶ, ಅನೇಕರಿಗೆ ಎಟುಕದ ಪದಕೊಶ, ಜಗತ್ತಿನ ಕೆಲವೇ ಭಾಷೆಗಳಲ್ಲಿ ಅಂದರೆ ಆಂಗ್ಲ,ಜಪಾನ್ ಜೊತೆಗೆ ಕನ್ನಡಲ್ಲಿ ಇದೆ.
ಟೆಕ್ನಿಕಲ್ ಗ್ಲಾಸರಿಯನ್ನು NGEF ತಂದಿತು. ೭೦೦೦ ಪದಗಳು ಇದರಲ್ಲಿ ಇದೆ.

ಆಕ್ಷರ ಸ್ಟೆನ್ಸಿಲ್ ಮೊದಲು ಬಂದಿದ್ದು ಕನ್ನಡದಲ್ಲಿ, ಮೊದಲ ಬಾರಿಗೆ ಭಾರತದಲ್ಲಿ NGEF ಅವರು ಮಾಡಿದರು. ಇದು ಯಾವ ಭಾಷೆಯಲ್ಲೂ ಕೂಡ ಇರಲಿಲ್ಲ.
ಅಂತರಾಷ್ತ್ರೀಯ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ಕೃಷ್ಣೆ ಗೌಡ ಅವರ ನೇತ್ರತ್ವದಲಿ ಹಿಂದೆ ಬಂದಿತು.

ಕನ್ನಡದಲ್ಲಿ ಬರೆದರೆ ಬೇರೆ ಭಾಷೆಯ ಲಿಪಿಯಲ್ಲಿ ಬರೆಯುವ ಮೊದಲ ಲಿಪ್ಯಂತರ ಕನ್ನಡದಲ್ಲಿ ಇದೆ.

ಇಡಿ ದೇಶದಲ್ಲಿ ಯಾವ ರಾಜ್ಯದಲ್ಲು ಕೂಡ ಅದರ ಭಾಷೆಯ
GAZETTE ತಂದಿಲ್ಲ, ಕರ್ನಾಟಕವನ್ನು ಹೊರತು ಪಡಿಸಿ.

ಕೇಂದ್ರದ ಅದಿನಿಯಮವನ್ನು ರಾಷ್ತ್ರಪತಿ ಅನುಮತಿ ಪಡೆದು ಕನ್ನಡದಲ್ಲಿ ತಂದ ಕೀರ್ತಿ ಕನ್ನಡಕ್ಕೆ ಇದೆ, ಬೇರೆ ಭಾಷೆಯಲ್ಲಿ ೧೦ ಇದ್ದರೆ, ಕನ್ನಡದಲ್ಲಿ ೨೦೦+ ಇದೆ.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ೫% ಒಳ ಮಿಸಲು ಇದೆ.ಬೇರೆ ಯಾವ ರಾಜ್ಯವು ಇದಕ್ಕು ಕೈ ಹಾಕಿಲ್ಲ.

ಕನ್ನಡದ ಜಾನಪದವನ್ನು ಒಂದು ತಕ್ಕಡಿಗೆ ಹಾಕಿ ,ಬಾಕಿ ೨೭ ರಾಜ್ಯಗಳ ಜನಪದವನ್ನು ಇನ್ನೊದು ತಕ್ಕಡಿಗೆ ಹಾಕಿದರೆ ಹೆಚ್ಚು ತೂಗುವುದು ಕನ್ನಡ.
ಇದು ನಾವು ಹೇಳಿದ ಮಾತಲ್ಲ, ಉತ್ತರ ರಾಜ್ಯಗಳ ಜಾನಪದ ಪಂಡಿತರು ಹೇಳಿದ ಮಾತಿದು.


ಹೀಗೆ ಹೇಳುತ್ತ ಹೊದರೆ ಸಾಲು ಸಾಲು ಸಿಗುತ್ತದೆ, ಕನ್ನಡವು ಭೂತ-ಭವಿಷ್ಯ ಮತ್ತು ವರ್ತಮಾನ ಇರುವ ಎಕೈಕ ಭಾಷೆ. ಇದು ಅಲಿಸಿ ಮತ್ತು ನಶಿಸಿ ಹೊಗುವಂತ ಭಾಷೆ ಅಲ್ಲ.
ಸುಮ್ಮನೆ ನೆಗೆಟಿವ್ ಪ್ರಚಾರ ಮಾಡುವ ಬದಲು, ನಮ್ಮ ಭಾಷೆ ಪಾಸಿಟಿವ್ ವಿಷಯಗಳನ್ನು ತಿಳಿದುಕೊಂಡು ಅದನ್ನು ನಮ್ಮ ಜನರಿಗೆ ತಿಳಿಸಿ ಜಾಗೃತಿ ಮಾಡುವುದು ಸೂಕ್ತ.
ಹಿಂದೆ ಪುಲಕೇಶಿಯ ಕಾಲದಲ್ಲಿ "ಕರ್ನಾಟಕ ಸೇನಮ್ ಅಜೇಯಮ್", ಅನ್ನುವ ಮಾತಿತ್ತು. ಅದಕ್ಕೆ ಕಾರಣ ನಮ್ಮ ಕಿಚ್ಚು,ಸ್ವಾಭಿಮಾನ ಮತ್ತು ಶೌರ್ಯ.
ಇವುಗಳನ್ನು ಮತ್ತೆ ಮೈಗೂಡಿಸಿಕೊಳ್ಳಬೇಕಾಗಿದೆ.

1 comment:

ದೀಪಕ್ ಸಿದ್ದನಂಜ (Deepak Siddananja) said...

ಅಮೋಘ, ಚಿಂದಿ, ಸೂಪರ್. ತ್ಂಬ ಒಳ್ಳೆಯ ಲೇಖನ. ಇಂತಹ ಲೇಖನಗಳು ಮತ್ತು ನಮ್ಮ ಕನ್ನಡದ ಬಗ್ಗೆ ಒಲ್ಲೆ ಮಾತುಗಳು, ನಮ್ಮ ಜನರಿಗೆ ಸಾರಬೇಕು, ಮತ್ತೆ ಆ ಕಿಚ್ಚು ನಮ್ಮೆಲ್ಲರಲ್ಲಿ ಹುಕ್ಕಬೇಕು ಅಂತ ಆಶಿಸುತ್ತ, ನಿಮಗೆ ನನ್ನ ನಮಸ್ಕಾರಗಳನ್ನ ಅರ್ಪಿಸುತಿದ್ದೇನೆ.