Saturday, June 18, 2011

ಜನತೆ ದುಡ್ಡು ಯಡ್ಡಿ ಜಾತ್ರೆ




ನಿಜಕ್ಕೂ ಇದನ್ನು ಯಾವ ಮಾಧ್ಯಮಗಳು ಪ್ರಶ್ನೆ ಮಾಡುವದಿಲ್ಲ, ಯಾಕೆ ಎಂದರೆ ಸುಖಾಸುಮ್ಮನೆ ಜಾಹಿರಾತು ರೂಪದಲ್ಲಿ ಹಣ ಬರುತ್ತ ಇರುವಾಗ ಬೇಡ ಎನ್ನಲೂ ಪತ್ರಿಕೆಗಳು ದಡ್ಡರೇ. ಇದೇ ದೊಡ್ಡ ಫ್ಲೆಕ್ಸ ಆಗಿ ಬಂದಿದ್ದರೆ ಇಲ್ಲ ಇನ್ನೊಂದು ಮಾದರಿಯಲ್ಲಿ ಬಂದಿದ್ದರೆ ಇದೇ ಪತ್ರಿಕೆಗಳೂ ಜನರ ದುಡ್ಡಿನ ದುಂದುವೆಚ್ಚ ಎಂದು ಬೊಬ್ಬೆ ಹೊಡೆಯುತ್ತ ಇದ್ದವು. ಅಲ್ಲಿಗೆ ನಮ್ಮ ಮಾಧ್ಯಮಗಳ ಇಬ್ಬಂದಿತನ ಮತ್ತೊಮ್ಮೆ ಬಯಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಮತ್ತು ದೇವೆಗೌಡ ಕುಟುಂಬದವರಿಗೂ ಅದ್ಯಾವ ಪರಿಯ ನಂಟೋ, ಸದಾ ಇಬ್ಬರೂ ಎಲ್ಲೆ ಇರಲಿ ಹೇಗೆ ಇರಲಿ ಒಬ್ಬರ ಬಗ್ಗೆ ಇನ್ನೊಬ್ಬರು ಯೋಚಿಸುತ್ತ ಇರುತ್ತಾರೆ. ಅವರು ಎನು ಮಾಡುತ್ತ ಇರಬಹುದು, ಅವರ ಮಾತಿನ ಒಳಾರ್ಥವೇನು, ಎಲ್ಲಿ ಪೂಜೆ ಮಾಡುತ್ತ ಇದ್ದಾರೆ ಇಂತಹ ಮಾಹಿತಿ ಸಂಗ್ರಹಣೆಯಲ್ಲೇ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತ
,ರಕ್ಷಣೆಗೆ ದೇವರಿಗೆ, ದೇವತೆಗಳಿಗೆ, ಮಠಗಳಿಗೆ ಮತ್ತು ಮಠಾಧಿಪತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಜನರ ದುಡ್ಡಿನಲ್ಲಿ ಕೊಡುತ್ತ ಇರುತ್ತಾರೆ. ಅದರೂ ಅವರ ಕಷ್ತಗಳು , ಸಂಕಷ್ತಗಳೂ ಬಗೆಹರಿದಿಲ್ಲ.

ಮತ್ತೊಂದು ಹೊಸ ಸೇರ್ಪಡೆ ಎಂದರೆ ಇವತ್ತಿನ ಪತ್ರಿಕೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೂ ಬಹಿರಂಗ ಪತ್ರ ಬರೆದಿರುವುದು, ಸಾಲದಕ್ಕೆ ಅದನ್ನು ಕರ್ನಾಟಕ ವಾರ್ತೆ ಎಂದು ಜನರ ದುಡ್ಡಿನಲ್ಲಿ ಪ್ರಕಟಣೆ ಮಾಡಿಸಿದ್ದು.

* ಮೊದಲಿಗೆ ಇದು ಕುಮಾರ ಸ್ವಾಮಿಗಳ ಮತ್ತು ಯೆಡ್ಡಿಯ ವೈಯಕ್ತಿಕ ವಿಷಯ, ಇದರಲ್ಲಿ ರಾಜ್ಯದ ಜನತೆಗೆ ಯಾವ ಲಾಭ ಇಲ್ಲ.

* ಇದನ್ನು ಕರ್ನಾಟಕ ವಾರ್ತೆ ಎಂದು , ಜನತೆಯ ಹಣವನ್ನು ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ?

* ಸ್ವಂತ ಡುಡ್ಡಿನಲ್ಲಿ ಹಣ ಕೊಡಲು ಯೆಡ್ಡಿಗೆ ಹಣದ ಬರವೇ, ಇಲ್ಲ ಪಕ್ಷಕ್ಕೆ ಹಣದ ಬರವೇ ?

* ಯೆಡ್ಯುರಪ್ಪ ಮುಖ್ಯಮಂತ್ರಿ ಹುದ್ದೆ ಮತ್ತು ತಾವು ಒಂದೇ ನಾಣ್ಯದ ಎರಡು ಮುಖ ಎಂದುಕೊಂಡ ಹಾಗೆ ಇದೆ. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಒಳ್ಳೆ ಉಧಾಹರಣೆ ಬೇಕೆ ?

*ಆ ಕಡೆ ಕುಮಾರ ಸ್ವಾಮಿಗೆ ಕೂಡ ಸದಾ ಯಡಿಯೂರಪ್ಪ ಅವರದೇ ಚಿಂತೆ, ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಬಡವಾಗುತ್ತ ಇರುವುದು ನಮ್ಮ ಕರ್ನಾಟಕ ಜನತೆ ಅಷ್ಟೆ.

1 comment:

ಅಜಯ said...

ಚುಂಬನವಾಸಿಯವರೇ, ಅದೇನು ಪತ್ರ? ಕನ್ನಡದಲ್ಲಿ ಇರುವುದನ್ನು ಹಾಕಿ, ಚೆನ್ನಾಗಿ ಅರ್ಥಾಗುತ್ತದೆ.